Homeಮುಖಪುಟಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಕೊನೆಯ ಭಾಗ

ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಕೊನೆಯ ಭಾಗ

- Advertisement -
- Advertisement -

ತಾಯಿಯೊಂದಿಗೆ ಮಗನ ಯೌನ ಸಂಬಂಧ

ಮಗನಾದವನು ತನ್ನ ತಾಯಿಯೊಂದಿಗೆ ಯೌನ ಸಂಬಂಧಗಳನ್ನು ಹೊಂದಿದ್ದ ಉದಾಹರಣೆಗಳೂ ಹಿಂದೂ ಗ್ರಂಥಗಳಲ್ಲಿ ದೊರಕುತ್ತವೆ. ಋಗ್ವೇದದಲ್ಲಿಯೂ ಇಂತಹ ಸಂಬಂಧಗಳ ಪ್ರಸ್ತಾಪವಿದೆ. ಋಗ್ವೇದವನ್ನು ಕನ್ನಡಕ್ಕೆ ಅನುವಾದ ಮಾಡಿ ದೀರ್ಘವಾದ ಭಾಷ್ಯ ಬರೆದಿರುವ ಎಚ್.ಪಿ. ವೆಂಕಟರಾಯರು ಋಗ್ವೇದದ 4ನೆಯ ಮಂಡಲದ 16ನೆಯ ಸೂಕ್ತದ 10ನೆಯ ಋಕ್ಕುಗಳನ್ನು (14) ಹೀಗೆ ಅನುವಾದಿಸಿದ್ದಾರೆ: ’ಎಲೈ ಇಂದ್ರನೇ, ದಸ್ಯುವನ್ನು ಕೊಲ್ಲತಕ್ಕ ಮನಸ್ಸ್ಸಿನಿಂದ ಕೂಡಿದ ನೀನು ಕುತ್ಸನ ಮನೆಗೆ ದಯಮಾಡು. ಕುತ್ಸನೂ ಕೂಡ ನಿನ್ನ ಸಖಿತ್ವವನ್ನು ಸಂಪಾದಿಸುವುದರಲ್ಲಿ ಆಸೆಯುಳ್ಳವನಾಗಿದ್ದಾನೆ. ಅನಂತರ ನೀವಿಬ್ಬರೂ ನಿನ್ನ ಗೃಹಕ್ಕೆ ತೆರಳಿ ಒಟ್ಟಿಗೆ ಕುಳಿತುಕೊಳ್ಳಿ, ಸತ್ಯವನ್ನು ನೋಡಲು ಸಮರ್ಥಳಾದ ಇಂದ್ರಭಾರ್ಯೆಯು ಸಮಾನವಾದ ರೂಪವುಳ್ಳ ನಿಮ್ಮಿಬ್ಬರನ್ನೂ ನೋಡಿ ಸಂಶಯಗೊಂಡಳು’.

ಋಗ್ವೇದ ಸೂಕ್ಷ್ಮವಾಗಿ ಸೂಚಿಸಿದ್ದನ್ನು ಜೈಮಿನೀಯ ಬ್ರಾಹ್ಮಣ (1.199-200) ವಿವರವಾಗಿ ಹೇಳುತ್ತದೆ. ಆ ಎರಡು ಬ್ರಾಹ್ಮಣಗಳು ಬಹಳ ವಿಸ್ತೃತವಾಗಿ ಇರುವುದರಿಂದ ಅವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ. “ಇಂದ್ರ ಒಮ್ಮೆ ತನ್ನ ಮಗ ಕುತ್ಸ ಔರವನನ್ನು ತನ್ನ ಹೆಂಡತಿ ಪುಲೋಮನ ಮಗಳಾದ ಶಚಿಯೊಡನೆ ಸುಖಿಸುತ್ತಿದ್ದುದನ್ನು ನೋಡಿದ. ’ನೀನು ಹೀಗೆ ಮಾಡಲು ಹೇಗೆ ಸಾಧ್ಯ’ ಎಂದು ಆತ ಅವಳನ್ನು ಕೇಳಿದಾಗ ಅವಳು ನಿಮ್ಮಿಬ್ಬರಲ್ಲಿ ನನಗೆ ವ್ಯತ್ಯಾಸ ಗೊತ್ತಾಗಲಿಲ್ಲ ಎಂದಳು. ಆಗ ಇಂದ್ರ ಹಾಗಾದರೆ ನಾನು ಅವನ ತಲೆಯನ್ನು ಬೋಳು ಮಾಡುತ್ತೇನೆ, ಆಗ ನೀನು ನಮ್ಮಿಬ್ಬರಲ್ಲಿ ವ್ಯತ್ಯಾಸವನ್ನು ಗುರುತಿಸಬಹುದು ಎಂದು ಹೇಳಿ ಕುತ್ಸನ ತಲೆ ಬೋಳಿಸಿದ. ಆದರೆ ಕುತ್ಸ ತನ್ನ ತಲೆಗೆ ಒಂದು ರುಮಾಲು ಸುತ್ತಿಕೊಂಡು ಮತ್ತೆ ಅವಳನ್ನು ಸೇರಿದ. ಇಂತಹ ರುಮಾಲನ್ನೇ ರಥದ ಸಾರಥಿಗಳು ಸುತ್ತಿಕೊಳ್ಳುತ್ತಾರೆ.”

ಕೃಷ್ಣನ ಮಗ ಸಾಂಬ ಕೂಡ ತನ್ನ ತಾಯಿಯೊಂದಿಗೆ ಯೌನ ಸಂಬಂಧ ಹೊಂದಿದ್ದ ಎಂಬುದನ್ನು ಮತ್ಸ್ಯ ಪುರಾಣ ಹೇಳುತ್ತದೆ. ಇದನ್ನು ಗಮನಿಸಿದ ಕೃಷ್ಣ ಸಾಂಬನ ಮೇಲೆ ಕೋಪಗೊಂಡು ಅವನನ್ನು ಹಾಗೂ ತನ್ನ ಆ ಹೆಂಡರನ್ನು ಶಪಿಸಿದ. ಹರಿವಂಶದ ವಿಷ್ಣು ಪರ್ವದ 109ನೆಯ ಅಧ್ಯಾಯ ಕೃಷ್ಣನ ಇನ್ನೊಬ್ಬ ಮಗ ಪ್ರದ್ಯುಮ್ನ ತನಗೆ ಮೊಲೆಹಾಲು ಉಣಿಸಿದ ತಾಯಿ ಮಾಯಾವತಿಯನ್ನು ಮದುವೆಯಾದದ್ದನ್ನು ಪ್ರಸ್ತಾಪ ಮಾಡುತ್ತದೆ. ಈ ಘಟನೆಗಳನ್ನು ಮಹಾಭಾರತದ ವನ ಪರ್ವದ ಅಧ್ಯಾಯ 233ರಲ್ಲಿ ಪ್ರಸ್ತಾಪಿಸಲಾಗಿರುವ ಸತ್ಯಭಾಮಾ-ದ್ರೌಪದಿ ಸಂವಾದ ಪುಷ್ಟೀಕರಿಸುತ್ತದೆ. ತನ್ನ ಗಂಡಂದಿರ ಮೇಲೆ ತಾನು ಹೇಗೆ ಅಧಿಕಾರ ಹೊಂದಿರುವೆ ಎನ್ನುವುದನ್ನು ಸತ್ಯಭಾಮಾಗೆ ವಿವರಿಸುವಾಗ ದ್ರೌಪದಿ, “ಪುರುಷರ ಸಮ್ಮುಖದಲ್ಲಿ ಎಲ್ಲಾ ಉತ್ಸಾಹ ಮತ್ತು ಅಜಾಗರೂಕತೆಯನ್ನು ತ್ಯಜಿಸಿ ಮೌನವನ್ನು ಆಚರಿಸುವ ಮೂಲಕ ನಿಮ್ಮ ಒಲವುಗಳನ್ನು ಮರೆಮಾಚಬೇಕು ಮತ್ತು ನೀವು ನಿಮ್ಮ ಮಕ್ಕಳಾದ ಪ್ರದ್ಯುಮ್ನ ಮತ್ತು ಸಾಂಬರೊಂದಿಗೆ ಏಕಾಂತದಲ್ಲಿ ವಾಸ ಮಾಡಬಾರದು ಹಾಗೂ ಮಾತನಾಡಲೂಬಾರದು” ಎಂದು ಹೇಳುತ್ತಾಳೆ. ಇದು ಸಾಂಬ ಹಾಗೂ ಪ್ರದ್ಯುಮ್ನರು ನಿಷಿದ್ಧ ಯೌನ ಸಂಬಂಧವನ್ನು ಹೊಂದಿರುವುದನ್ನು ಪುಷ್ಟೀಕರಿಸುತ್ತದೆ.

ಸಹೋದರ ಸಹೋದರಿಯರ ನಡುವಣ ನಿಷಿದ್ಧ ಯೌನ ಸಂಬಂಧ

ಮಹಾಭಾರತ ನಿಷಿದ್ಧ ಯೌನ ಸಂಬಂಧಗಳ ಹಲವಾರು ಉದಾಹರಣೆಗಳನ್ನು ದಾಖಲಿಸುತ್ತದೆ. ಉದಾಹರಣೆಗೆ, ವಾಸುದೇವ ಮತ್ತು ಕುಂತಿ ಅಣ್ಣ ತಂಗಿಯರಾಗಿದ್ದರು. ಅಂದ ಮೇಲೆ ವಾಸುದೇವನ ಮಗಳು ಸುಭದ್ರೆ ಮತ್ತು ಅವಳನ್ನು ವರಿಸಿದ ಕುಂತಿಯ ಮಗ ಅರ್ಜುನ ಸೋದರ ಸಂಬಂಧಿಗಳಾಗಲಿಲ್ಲವೇ?

ಸಹೋದರ ಸಹೋದರಿಯರ ನಡುವಣ ನಿಷಿದ್ಧ ಯೌನ ಸಂಬಂಧಗಳ ಬಗ್ಗೆ ಋಗ್ವೇದದಲ್ಲಿ ಹಲವಾರು ಪ್ರಸ್ತಾಪಗಳಿವೆ. ಇಂತಹ ನಿಷಿದ್ಧ ಯೌನ ಸಂಬಂಧದ ಮೊದಲ ಪ್ರಸ್ತಾಪ ಬರುವುದು ಋಗ್ವೇದದ 6ನೆಯ ಮಂಡಲದ 55ನೆಯ ಸೂಕ್ತದ 4ರಿಂದ 6ನೆಯ ಋಕ್ಕುಗಳಲ್ಲಿ. ಇವುಗಳಲ್ಲಿ ಪೂಷಾಣ ತನ್ನ ಸಹೋದರಿ ಹಾಗೂ ತಾಯಿಯ ಜೊತೆಗೆ ನಿಷಿದ್ಧ ಯೌನ ಸಂಬಂಧ ಹೊಂದಿದ ಬಗ್ಗೆ ಹೇಳಲಾಗಿದೆ. (15) ಋಗ್ವೇದದ ಮೇಲೆ 16ನೆಯ ಶತಮಾನದಲ್ಲಿ ಭಾಷ್ಯ ಬರೆದ ಸಾಯಣರು ಈ ಋಕ್ಕಿನ ಬಗ್ಗೆ ಬರೆಯುತ್ತ ನಿಷಿದ್ಧ ಯೌನ ಸಂಬಂಧವನ್ನು ಪ್ರಸ್ತಾಪ ಮಾಡುತ್ತಾರೆ: “ತನ್ನ ಸಹೋದರಿ ಉಷಸ್ಸಿನ ಪ್ರೇಮಿ ಎಂದೇ ಪ್ರಸಿದ್ಧಿ ಪಡೆದಿರುವ ಪೂಷಣನನ್ನು ಆರಾಧಿಸೋಣ”. ಪ್ರೊ. ಟಿ.ಎಚ್.ಗ್ರಿಪ್ಫಿತ್ ಅವರು ಈ ಋಕ್ಕನ್ನು ಹೀಗೆ ಅನುವಾದಿಸುತ್ತಾರೆ: “ತನ್ನ ಸಹೋದರಿಯ ಪ್ರಿಯಕರ ಎಂದೇ ಕರೆಯಲ್ಪಡುವ, ಕುರಿಗಳನ್ನು, ಕುದುರೆಗಳನ್ನು ಪಾಲಿಸುವ ಆ ಶಕ್ತಿಯುತ ಪೂಷಣನನ್ನು ಹೊಗಳೋಣ. ತನ್ನ ತಾಯಿಯ ಪ್ರಿಯಕರನನ್ನು ನಾನು ಸಂಬೋಧಿಸುತ್ತೇನೆ. ತನ್ನ ಸಹೋದರಿಯನ್ನು ಪ್ರೀತಿಸುವವನೇ, ಇಂದ್ರನ ಸಹೋದರನೇ, ನನ್ನ ಮಿತ್ರನೇ ಕೇಳು”. ಮೈಸೂರು ಮಹಾರಾಜರ ಆಶಯದ ಮೇರೆಗೆ ಋಗ್ವೇದವನ್ನು ಕನ್ನಡಕ್ಕೆ ಅನುವಾದ ಮಾಡಿ ಭಾಷ್ಯ ಬರೆದಿರುವ ಎಚ್.ಪಿ.ವೆಂಕಟರಾಯರು ಈ ಋಕ್ಕನ್ನು ಹೀಗೆ ಅನುವಾದಿಸುತ್ತಾರೆ: “ಯಾವ ಪೂಷದೇವನು ತನ್ನ ಸಹೋದರಿಯಾದ ಉಷಸ್ಸಿಗೆ ಉಪಪತಿ ಎಂದು ಪ್ರಸಿದ್ಧನಾಗಿದ್ದಾನೆಯೋ ಅಂತಹ ಅಜರೂಪವಾದ ವಾಹನವುಳ್ಳವನೂ, ಶಕ್ತಿಯುತನೂ, ಪೋಷಕನೂ ಆದ ಪೂಷದೇವನನ್ನು ಈಗ ಸ್ತುತಿಸಿ ಪೂಜಿಸೋಣ”.

ಋಗ್ವೇದದ 10ನೆಯ ಮಂಡಲದ 3ನೆಯ ಸೂಕ್ತದ 3ನೆಯ ಋಕ್ಕು ಅಗ್ನಿಯನ್ನು ತನ್ನ ಸಹೋದರಿಯ ಪ್ರಿಯಕರ ಎಂದು ಹೇಳುತ್ತದೆ. (16) ಇದನ್ನು ವೆಂಕಟರಾಯರು ಹೀಗೆ ಅನುವಾದಿಸುತ್ತಾರೆ: “ಕಲ್ಯಾಣಾತ್ಮಕನಾದ ಅಗ್ನಿಯು ಮಂಗಳಕರವಾದ ತೇಜಸ್ಸಿನಿಂದ ಸೇವಿಸಲ್ಪಟ್ಟವನಾಗಿ ಬಂದಿದ್ದಾನೆ. ಅನಂತರ ಶತ್ರುನಾಶಕನಾದ ಅಗ್ನಿಯು ತನ್ನ ಭಗಿನಿಯಾದ ಉಷಸ್ಸನ್ನು ಸಮೀಪಿಸುತ್ತಾನೆ. ಉತ್ತಮವಾದ ಪ್ರಜ್ಞಾಪಕಗಳಾದ ಕಾಂತಿಗಳಿಂದ ಸರ್ವತ್ರ ವ್ಯಾಪಿಸಿರುವ ಅಗ್ನಿಯು ಶ್ವೇತವರ್ಣಗಳುಳ್ಳ ತೇಜಸ್ಸುಗಳಿಂದ ರಾತ್ರಿಯ ಕತ್ತಲೆಯನ್ನು ಆಕ್ರಮಿಸಿ ನಿಂತಿದ್ದಾನೆ”. ಗ್ರಿಪ್ಫಿಥ್ ಹೀಗೆ ಅನುವಾದಿಸುತ್ತಾರೆ: “ಮಂಗಳಾತ್ಮಕ ವನಿತೆಯ ಸೇವಕನಾಗಿ ಮಂಗಳಾತ್ಮಕನಾದವನು ಬಂದಿದ್ದಾನೆ. ತನ್ನ ಸಹೋದರಿಯನ್ನು ಪ್ರಿಯಕರ ಹಿಂಬಾಲಿಸುತ್ತಾನೆ. ಅಗ್ನಿ, ಹೊಳೆಯುವ ಬೆಳಕನ್ನು ದೂರದವರೆಗೆ ಹರಡುತ್ತ ರಾತ್ರಿಯನ್ನು ಶುಭ್ರವಾದ ಬಟ್ಟೆಗಳಿಂದ ಆಚ್ಛಾದಿಸಿದ್ದಾನೆ”.

ಇಂತಹ ನಿಷಿದ್ಧ ಯೌನ ಸಂಬಂಧಗಳು ಹಿಂದೂಗಳ ವಿಶೇಷತೆಯೇನಾಗಿರಲಿಲ್ಲ. ಬೈಬಲ್ ಕೂಡ ಇಂತಹ ಸಂಬಂಧಗಳನ್ನು ಉಲ್ಲೇಖಿಸುತ್ತದೆ. ಆಡಮ್‌ನ ಮಗ ಕೇನ್ ಕೂಡ ತನ್ನ ಸಹೋದರಿಯನ್ನೇ ಮದುವೆಯಾಗಬೇಕಾಯಿತು, ಯಾಕೆಂದರೆ ಆತನ ತಾಯಿ ಈವಳನ್ನು ಹೊರತುಪಡಿಸಿ ಬೇರಾವ ಹೆಂಗಸೂ ಇರಲಿಲ್ಲ, ಎಂದು ಜೆನೆಸಿಸ್ 19.31-32 ಹೇಳುತ್ತದೆ: “ಒಂದು ದಿನ ಅಕ್ಕ ತನ್ನ ತಂಗಿಗೆ ಹೇಳಿದಳು: ’ನಮ್ಮ ತಂದೆಗೆ ವಯಸ್ಸಾಗುತ್ತ ಬಂದಿದೆ, ಅವನನ್ನು ಬಿಟ್ಟು ನಮ್ಮನ್ನು ಬಸುರಿ ಮಾಡಲು ಬೇರಾವ ಗಂಡಸೂ ದೇಶದಲ್ಲಿ ಉಳಿದಿಲ್ಲ, ನಮ್ಮ ತಂದೆಗೆ ಹೆಂಡಕುಡಿಸಿ ಅವನೊಂದಿಗೆ ಮಲಗಿಕೊಳ್ಳೋಣ. ನಾವು ನಮ್ಮ ತಂದೆಯ ಮೂಲಕ ಮಕ್ಕಳನ್ನು ಪಡೆಯೋಣ ನಮ್ಮ ಪರಿವಾರವನ್ನು ಬದುಕುಳಿಸಲು ಇದೊಂದೇ ನಮಗಿರುವ ಅವಕಾಶ’”. ಎಕ್ಸೋಡಸ್ 6.20 ಕೂಡ ಮೋಸಸ್ ಇಂತಹುದೇ ಒಂದು ನಿಷಿದ್ಧ ಯೌನ ಸಂಬಂಧದ ಮೂಲಕ ಹುಟ್ಟಿದ್ದ ಎಂದು ಹೇಳುತ್ತದೆ.

ಬೈಬಲ್ ಉಲ್ಲೇಖ ಮಾಡುವ ಇಬ್ರಾಹಿಮ್ ಕೂಡ ತನ್ನ ಅರ್ಧ-ಸಹೋದರಿಯಾದ ಸಾರಾಳನ್ನು ಮದುವೆ ಆಗಿದ್ದುದಾಗಿ ಹೇಳುತ್ತದೆ. ಆದರೆ ಅತ್ಯಂತ ಪ್ರಚಲಿತ ಉದಾಹರಣೆ ಎಂದರೆ ಇಡಿಪಸ್‌ನದು. ಇವನ ನಿಷಿದ್ಧ ಯೌನ ಸಂಬಂಧವನ್ನು ನಿಷ್ಕಳಂಕ ನಿಷಿದ್ಧ ಯೌನ ಸಂಬಂಧ ಎಂದು ಹೇಳಬಹುದು. ಯಾಕೆಂದರೆ ಈತ ತನಗೆ ಗೊತ್ತಿಲ್ಲದೇ ಅಂಥ ಸಂಬಂಧವನ್ನು ಹೊಂದಿದ್ದ. ಆದರೆ ಇತಿಹಾಸದಲ್ಲಿ ದಾಖಲಾಗಿರುವ ಹೆಚ್ಚಿನ ನಿಷಿದ್ಧ ಯೌನ ಸಂಬಂಧಗಳು ಗೊತ್ತಿದ್ದೂ ಮಾಡಿದ ಸಂಬಂಧಗಳೇ ಆಗಿವೆ. ಉದಾಹರಣೆಗೆ ಇಜಿಪ್ಟಿನ ರಾಜ ಮನೆತನಗಳಲ್ಲಿ ನಡೆಯುತ್ತಿದ್ದ ಸಹೋದರ-ಸಹೋದರಿ ಮದುವೆಗಳು.

ಇದನ್ನೂ ಓದಿ: ಅಂದಿನಿಂದ ಇಂದಿನವರೆಗೆ ಮುಂದುವರಿಯುತ್ತಿರುವ ನರಬಲಿ; ಸನಾತನ ಧರ್ಮದ ಕುರುಹುಗಳು

ಹಿಂದೂಗಳಲ್ಲೂ ಇಂತಹ ನಿಷಿದ್ಧ ಯೌನ ಸಂಬಂಧಗಳು ಇದ್ದುದೇನೂ ವಿಶೇಷವಲ್ಲವಾದರೂ ಇಂತಹ ಸಂಬಂಧಗಳ ಬಗ್ಗೆ ಹಿಂದೂ ಮತಾಂಧರು ಬಹಳ ಮುಜುಗರ ಪಡುತ್ತಾರೆ. ಮನುಸ್ಮೃತಿ ಮಹಿಳೆಯರು ಮತ್ತು ಶೂದ್ರರ ಬಗ್ಗೆ ಬಹಳ ಕೀಳಾಗಿ ಹೇಳುತ್ತವೆ ಎನ್ನುವ ಮುಜುಗರದಿಂದ ಮತ್ತು ಪ್ರಾಚೀನ ಭಾರತದಲ್ಲಿ ಆರ್ಯರು ಮಾಂಸಾಹಾರಿಗಳಾಗಿದ್ದರು ಎನ್ನುವ ಮುಜುಗರದಿಂದ ತಪ್ಪಿಸಿಕೊಳ್ಳಲು ಈ ಮತಾಂಧರು ಮನುಸ್ಮೃತಿಯಲ್ಲಿರುವ ಅಂತಹ ಶ್ಲೋಕಗಳನ್ನೇ ಕಲಬೆರಕೆಯಾದ ಶ್ಲೋಕಗಳು ಎಂದು ನೆಪಮಾಡಿ ತೆಗೆದುಹಾಕಿ, ಬೇರೆ ಶ್ಲೋಕಗಳನ್ನು ಮಾತ್ರ ಉಳಿಸಿಕೊಂಡು, ಅದನ್ನು ’ವಿಶುದ್ಧ ಮನುಸ್ಮೃತಿ’ ಎಂದು ಪ್ರಕಟಿಸುತ್ತಾರೆ. ಆದರೆ ಒಂದು ಮನುಸ್ಮೃತಿಯನ್ನು ಹಾಗೆ ಮಾಡುವ ಮೂಲಕ ಇಂತಹ ಆಪಾದನೆಗಳಿಂದ ಹಿಂದೂ ಗ್ರಂಥಗಳನ್ನು ಉಳಿಸಿಕೊಳ್ಳಲಾಗದು.

(ಮೂಲ ಪಠ್ಯಗಳು)

(14) ಆ ದಸ್ಯುಘ್ನಾ ಮನಸಾ ಯಾಹ್ಯಸ್ತಂ ಭುವತ್ತೇ ಕುತ್ಸಃ ಸಖ್ಯೇ ನಿಕಾಮಃ, ಸ್ವೇ ಯೋನೌ ನಿ ಷದತಂ ಸರೂಪಾ ವಿ ವಾಂ ಚಿಕಿತ್ಸದೃತಚಿದ್ಧ ನಾರೀ.

(15) ಪೂಷಣಂ ನ್ವಜಾಶ್ವಮುಪ ಸ್ತೋಷಾಮ ವಾಜಿನಮ್, ಸ್ವಸುರ್ಯೋ ಜಾರ ಉಚ್ಯತೆ. ಮಾತುರ್ದಿಧಿಷುಮಬ್ರವವಂ ಸ್ವಸುಜರಿಃ ಶೃಣೋತು ನಃ, ಭ್ರಾತೇನ್ದ್ರಸ್ಯ ಸಖಾ ಮಮಂ.

(16) “ಭದ್ರೋ ಭದ್ರಯಾ ಸಚಮಾನ ಆಗತ್ವ್ಸಸಾರಂ ಜಾರೋ ಅಭ್ಯೇತಿ ಪಶ್ಚಾತ್, ಸುಪ್ರಕೇತೈರ್ದ್ಯುಭಿರಗ್ನಿರ್ವಿತಿಷ್ಠನ್ರುಶದ್ಭಿರ್ವರ್ಣೈರಭಿ ರಾಮಮಸ್ಥಾತ್”.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...