Homeಮುಖಪುಟಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಕೊನೆಯ ಭಾಗ

ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಕೊನೆಯ ಭಾಗ

- Advertisement -
- Advertisement -

ತಾಯಿಯೊಂದಿಗೆ ಮಗನ ಯೌನ ಸಂಬಂಧ

ಮಗನಾದವನು ತನ್ನ ತಾಯಿಯೊಂದಿಗೆ ಯೌನ ಸಂಬಂಧಗಳನ್ನು ಹೊಂದಿದ್ದ ಉದಾಹರಣೆಗಳೂ ಹಿಂದೂ ಗ್ರಂಥಗಳಲ್ಲಿ ದೊರಕುತ್ತವೆ. ಋಗ್ವೇದದಲ್ಲಿಯೂ ಇಂತಹ ಸಂಬಂಧಗಳ ಪ್ರಸ್ತಾಪವಿದೆ. ಋಗ್ವೇದವನ್ನು ಕನ್ನಡಕ್ಕೆ ಅನುವಾದ ಮಾಡಿ ದೀರ್ಘವಾದ ಭಾಷ್ಯ ಬರೆದಿರುವ ಎಚ್.ಪಿ. ವೆಂಕಟರಾಯರು ಋಗ್ವೇದದ 4ನೆಯ ಮಂಡಲದ 16ನೆಯ ಸೂಕ್ತದ 10ನೆಯ ಋಕ್ಕುಗಳನ್ನು (14) ಹೀಗೆ ಅನುವಾದಿಸಿದ್ದಾರೆ: ’ಎಲೈ ಇಂದ್ರನೇ, ದಸ್ಯುವನ್ನು ಕೊಲ್ಲತಕ್ಕ ಮನಸ್ಸ್ಸಿನಿಂದ ಕೂಡಿದ ನೀನು ಕುತ್ಸನ ಮನೆಗೆ ದಯಮಾಡು. ಕುತ್ಸನೂ ಕೂಡ ನಿನ್ನ ಸಖಿತ್ವವನ್ನು ಸಂಪಾದಿಸುವುದರಲ್ಲಿ ಆಸೆಯುಳ್ಳವನಾಗಿದ್ದಾನೆ. ಅನಂತರ ನೀವಿಬ್ಬರೂ ನಿನ್ನ ಗೃಹಕ್ಕೆ ತೆರಳಿ ಒಟ್ಟಿಗೆ ಕುಳಿತುಕೊಳ್ಳಿ, ಸತ್ಯವನ್ನು ನೋಡಲು ಸಮರ್ಥಳಾದ ಇಂದ್ರಭಾರ್ಯೆಯು ಸಮಾನವಾದ ರೂಪವುಳ್ಳ ನಿಮ್ಮಿಬ್ಬರನ್ನೂ ನೋಡಿ ಸಂಶಯಗೊಂಡಳು’.

ಋಗ್ವೇದ ಸೂಕ್ಷ್ಮವಾಗಿ ಸೂಚಿಸಿದ್ದನ್ನು ಜೈಮಿನೀಯ ಬ್ರಾಹ್ಮಣ (1.199-200) ವಿವರವಾಗಿ ಹೇಳುತ್ತದೆ. ಆ ಎರಡು ಬ್ರಾಹ್ಮಣಗಳು ಬಹಳ ವಿಸ್ತೃತವಾಗಿ ಇರುವುದರಿಂದ ಅವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ. “ಇಂದ್ರ ಒಮ್ಮೆ ತನ್ನ ಮಗ ಕುತ್ಸ ಔರವನನ್ನು ತನ್ನ ಹೆಂಡತಿ ಪುಲೋಮನ ಮಗಳಾದ ಶಚಿಯೊಡನೆ ಸುಖಿಸುತ್ತಿದ್ದುದನ್ನು ನೋಡಿದ. ’ನೀನು ಹೀಗೆ ಮಾಡಲು ಹೇಗೆ ಸಾಧ್ಯ’ ಎಂದು ಆತ ಅವಳನ್ನು ಕೇಳಿದಾಗ ಅವಳು ನಿಮ್ಮಿಬ್ಬರಲ್ಲಿ ನನಗೆ ವ್ಯತ್ಯಾಸ ಗೊತ್ತಾಗಲಿಲ್ಲ ಎಂದಳು. ಆಗ ಇಂದ್ರ ಹಾಗಾದರೆ ನಾನು ಅವನ ತಲೆಯನ್ನು ಬೋಳು ಮಾಡುತ್ತೇನೆ, ಆಗ ನೀನು ನಮ್ಮಿಬ್ಬರಲ್ಲಿ ವ್ಯತ್ಯಾಸವನ್ನು ಗುರುತಿಸಬಹುದು ಎಂದು ಹೇಳಿ ಕುತ್ಸನ ತಲೆ ಬೋಳಿಸಿದ. ಆದರೆ ಕುತ್ಸ ತನ್ನ ತಲೆಗೆ ಒಂದು ರುಮಾಲು ಸುತ್ತಿಕೊಂಡು ಮತ್ತೆ ಅವಳನ್ನು ಸೇರಿದ. ಇಂತಹ ರುಮಾಲನ್ನೇ ರಥದ ಸಾರಥಿಗಳು ಸುತ್ತಿಕೊಳ್ಳುತ್ತಾರೆ.”

ಕೃಷ್ಣನ ಮಗ ಸಾಂಬ ಕೂಡ ತನ್ನ ತಾಯಿಯೊಂದಿಗೆ ಯೌನ ಸಂಬಂಧ ಹೊಂದಿದ್ದ ಎಂಬುದನ್ನು ಮತ್ಸ್ಯ ಪುರಾಣ ಹೇಳುತ್ತದೆ. ಇದನ್ನು ಗಮನಿಸಿದ ಕೃಷ್ಣ ಸಾಂಬನ ಮೇಲೆ ಕೋಪಗೊಂಡು ಅವನನ್ನು ಹಾಗೂ ತನ್ನ ಆ ಹೆಂಡರನ್ನು ಶಪಿಸಿದ. ಹರಿವಂಶದ ವಿಷ್ಣು ಪರ್ವದ 109ನೆಯ ಅಧ್ಯಾಯ ಕೃಷ್ಣನ ಇನ್ನೊಬ್ಬ ಮಗ ಪ್ರದ್ಯುಮ್ನ ತನಗೆ ಮೊಲೆಹಾಲು ಉಣಿಸಿದ ತಾಯಿ ಮಾಯಾವತಿಯನ್ನು ಮದುವೆಯಾದದ್ದನ್ನು ಪ್ರಸ್ತಾಪ ಮಾಡುತ್ತದೆ. ಈ ಘಟನೆಗಳನ್ನು ಮಹಾಭಾರತದ ವನ ಪರ್ವದ ಅಧ್ಯಾಯ 233ರಲ್ಲಿ ಪ್ರಸ್ತಾಪಿಸಲಾಗಿರುವ ಸತ್ಯಭಾಮಾ-ದ್ರೌಪದಿ ಸಂವಾದ ಪುಷ್ಟೀಕರಿಸುತ್ತದೆ. ತನ್ನ ಗಂಡಂದಿರ ಮೇಲೆ ತಾನು ಹೇಗೆ ಅಧಿಕಾರ ಹೊಂದಿರುವೆ ಎನ್ನುವುದನ್ನು ಸತ್ಯಭಾಮಾಗೆ ವಿವರಿಸುವಾಗ ದ್ರೌಪದಿ, “ಪುರುಷರ ಸಮ್ಮುಖದಲ್ಲಿ ಎಲ್ಲಾ ಉತ್ಸಾಹ ಮತ್ತು ಅಜಾಗರೂಕತೆಯನ್ನು ತ್ಯಜಿಸಿ ಮೌನವನ್ನು ಆಚರಿಸುವ ಮೂಲಕ ನಿಮ್ಮ ಒಲವುಗಳನ್ನು ಮರೆಮಾಚಬೇಕು ಮತ್ತು ನೀವು ನಿಮ್ಮ ಮಕ್ಕಳಾದ ಪ್ರದ್ಯುಮ್ನ ಮತ್ತು ಸಾಂಬರೊಂದಿಗೆ ಏಕಾಂತದಲ್ಲಿ ವಾಸ ಮಾಡಬಾರದು ಹಾಗೂ ಮಾತನಾಡಲೂಬಾರದು” ಎಂದು ಹೇಳುತ್ತಾಳೆ. ಇದು ಸಾಂಬ ಹಾಗೂ ಪ್ರದ್ಯುಮ್ನರು ನಿಷಿದ್ಧ ಯೌನ ಸಂಬಂಧವನ್ನು ಹೊಂದಿರುವುದನ್ನು ಪುಷ್ಟೀಕರಿಸುತ್ತದೆ.

ಸಹೋದರ ಸಹೋದರಿಯರ ನಡುವಣ ನಿಷಿದ್ಧ ಯೌನ ಸಂಬಂಧ

ಮಹಾಭಾರತ ನಿಷಿದ್ಧ ಯೌನ ಸಂಬಂಧಗಳ ಹಲವಾರು ಉದಾಹರಣೆಗಳನ್ನು ದಾಖಲಿಸುತ್ತದೆ. ಉದಾಹರಣೆಗೆ, ವಾಸುದೇವ ಮತ್ತು ಕುಂತಿ ಅಣ್ಣ ತಂಗಿಯರಾಗಿದ್ದರು. ಅಂದ ಮೇಲೆ ವಾಸುದೇವನ ಮಗಳು ಸುಭದ್ರೆ ಮತ್ತು ಅವಳನ್ನು ವರಿಸಿದ ಕುಂತಿಯ ಮಗ ಅರ್ಜುನ ಸೋದರ ಸಂಬಂಧಿಗಳಾಗಲಿಲ್ಲವೇ?

ಸಹೋದರ ಸಹೋದರಿಯರ ನಡುವಣ ನಿಷಿದ್ಧ ಯೌನ ಸಂಬಂಧಗಳ ಬಗ್ಗೆ ಋಗ್ವೇದದಲ್ಲಿ ಹಲವಾರು ಪ್ರಸ್ತಾಪಗಳಿವೆ. ಇಂತಹ ನಿಷಿದ್ಧ ಯೌನ ಸಂಬಂಧದ ಮೊದಲ ಪ್ರಸ್ತಾಪ ಬರುವುದು ಋಗ್ವೇದದ 6ನೆಯ ಮಂಡಲದ 55ನೆಯ ಸೂಕ್ತದ 4ರಿಂದ 6ನೆಯ ಋಕ್ಕುಗಳಲ್ಲಿ. ಇವುಗಳಲ್ಲಿ ಪೂಷಾಣ ತನ್ನ ಸಹೋದರಿ ಹಾಗೂ ತಾಯಿಯ ಜೊತೆಗೆ ನಿಷಿದ್ಧ ಯೌನ ಸಂಬಂಧ ಹೊಂದಿದ ಬಗ್ಗೆ ಹೇಳಲಾಗಿದೆ. (15) ಋಗ್ವೇದದ ಮೇಲೆ 16ನೆಯ ಶತಮಾನದಲ್ಲಿ ಭಾಷ್ಯ ಬರೆದ ಸಾಯಣರು ಈ ಋಕ್ಕಿನ ಬಗ್ಗೆ ಬರೆಯುತ್ತ ನಿಷಿದ್ಧ ಯೌನ ಸಂಬಂಧವನ್ನು ಪ್ರಸ್ತಾಪ ಮಾಡುತ್ತಾರೆ: “ತನ್ನ ಸಹೋದರಿ ಉಷಸ್ಸಿನ ಪ್ರೇಮಿ ಎಂದೇ ಪ್ರಸಿದ್ಧಿ ಪಡೆದಿರುವ ಪೂಷಣನನ್ನು ಆರಾಧಿಸೋಣ”. ಪ್ರೊ. ಟಿ.ಎಚ್.ಗ್ರಿಪ್ಫಿತ್ ಅವರು ಈ ಋಕ್ಕನ್ನು ಹೀಗೆ ಅನುವಾದಿಸುತ್ತಾರೆ: “ತನ್ನ ಸಹೋದರಿಯ ಪ್ರಿಯಕರ ಎಂದೇ ಕರೆಯಲ್ಪಡುವ, ಕುರಿಗಳನ್ನು, ಕುದುರೆಗಳನ್ನು ಪಾಲಿಸುವ ಆ ಶಕ್ತಿಯುತ ಪೂಷಣನನ್ನು ಹೊಗಳೋಣ. ತನ್ನ ತಾಯಿಯ ಪ್ರಿಯಕರನನ್ನು ನಾನು ಸಂಬೋಧಿಸುತ್ತೇನೆ. ತನ್ನ ಸಹೋದರಿಯನ್ನು ಪ್ರೀತಿಸುವವನೇ, ಇಂದ್ರನ ಸಹೋದರನೇ, ನನ್ನ ಮಿತ್ರನೇ ಕೇಳು”. ಮೈಸೂರು ಮಹಾರಾಜರ ಆಶಯದ ಮೇರೆಗೆ ಋಗ್ವೇದವನ್ನು ಕನ್ನಡಕ್ಕೆ ಅನುವಾದ ಮಾಡಿ ಭಾಷ್ಯ ಬರೆದಿರುವ ಎಚ್.ಪಿ.ವೆಂಕಟರಾಯರು ಈ ಋಕ್ಕನ್ನು ಹೀಗೆ ಅನುವಾದಿಸುತ್ತಾರೆ: “ಯಾವ ಪೂಷದೇವನು ತನ್ನ ಸಹೋದರಿಯಾದ ಉಷಸ್ಸಿಗೆ ಉಪಪತಿ ಎಂದು ಪ್ರಸಿದ್ಧನಾಗಿದ್ದಾನೆಯೋ ಅಂತಹ ಅಜರೂಪವಾದ ವಾಹನವುಳ್ಳವನೂ, ಶಕ್ತಿಯುತನೂ, ಪೋಷಕನೂ ಆದ ಪೂಷದೇವನನ್ನು ಈಗ ಸ್ತುತಿಸಿ ಪೂಜಿಸೋಣ”.

ಋಗ್ವೇದದ 10ನೆಯ ಮಂಡಲದ 3ನೆಯ ಸೂಕ್ತದ 3ನೆಯ ಋಕ್ಕು ಅಗ್ನಿಯನ್ನು ತನ್ನ ಸಹೋದರಿಯ ಪ್ರಿಯಕರ ಎಂದು ಹೇಳುತ್ತದೆ. (16) ಇದನ್ನು ವೆಂಕಟರಾಯರು ಹೀಗೆ ಅನುವಾದಿಸುತ್ತಾರೆ: “ಕಲ್ಯಾಣಾತ್ಮಕನಾದ ಅಗ್ನಿಯು ಮಂಗಳಕರವಾದ ತೇಜಸ್ಸಿನಿಂದ ಸೇವಿಸಲ್ಪಟ್ಟವನಾಗಿ ಬಂದಿದ್ದಾನೆ. ಅನಂತರ ಶತ್ರುನಾಶಕನಾದ ಅಗ್ನಿಯು ತನ್ನ ಭಗಿನಿಯಾದ ಉಷಸ್ಸನ್ನು ಸಮೀಪಿಸುತ್ತಾನೆ. ಉತ್ತಮವಾದ ಪ್ರಜ್ಞಾಪಕಗಳಾದ ಕಾಂತಿಗಳಿಂದ ಸರ್ವತ್ರ ವ್ಯಾಪಿಸಿರುವ ಅಗ್ನಿಯು ಶ್ವೇತವರ್ಣಗಳುಳ್ಳ ತೇಜಸ್ಸುಗಳಿಂದ ರಾತ್ರಿಯ ಕತ್ತಲೆಯನ್ನು ಆಕ್ರಮಿಸಿ ನಿಂತಿದ್ದಾನೆ”. ಗ್ರಿಪ್ಫಿಥ್ ಹೀಗೆ ಅನುವಾದಿಸುತ್ತಾರೆ: “ಮಂಗಳಾತ್ಮಕ ವನಿತೆಯ ಸೇವಕನಾಗಿ ಮಂಗಳಾತ್ಮಕನಾದವನು ಬಂದಿದ್ದಾನೆ. ತನ್ನ ಸಹೋದರಿಯನ್ನು ಪ್ರಿಯಕರ ಹಿಂಬಾಲಿಸುತ್ತಾನೆ. ಅಗ್ನಿ, ಹೊಳೆಯುವ ಬೆಳಕನ್ನು ದೂರದವರೆಗೆ ಹರಡುತ್ತ ರಾತ್ರಿಯನ್ನು ಶುಭ್ರವಾದ ಬಟ್ಟೆಗಳಿಂದ ಆಚ್ಛಾದಿಸಿದ್ದಾನೆ”.

ಇಂತಹ ನಿಷಿದ್ಧ ಯೌನ ಸಂಬಂಧಗಳು ಹಿಂದೂಗಳ ವಿಶೇಷತೆಯೇನಾಗಿರಲಿಲ್ಲ. ಬೈಬಲ್ ಕೂಡ ಇಂತಹ ಸಂಬಂಧಗಳನ್ನು ಉಲ್ಲೇಖಿಸುತ್ತದೆ. ಆಡಮ್‌ನ ಮಗ ಕೇನ್ ಕೂಡ ತನ್ನ ಸಹೋದರಿಯನ್ನೇ ಮದುವೆಯಾಗಬೇಕಾಯಿತು, ಯಾಕೆಂದರೆ ಆತನ ತಾಯಿ ಈವಳನ್ನು ಹೊರತುಪಡಿಸಿ ಬೇರಾವ ಹೆಂಗಸೂ ಇರಲಿಲ್ಲ, ಎಂದು ಜೆನೆಸಿಸ್ 19.31-32 ಹೇಳುತ್ತದೆ: “ಒಂದು ದಿನ ಅಕ್ಕ ತನ್ನ ತಂಗಿಗೆ ಹೇಳಿದಳು: ’ನಮ್ಮ ತಂದೆಗೆ ವಯಸ್ಸಾಗುತ್ತ ಬಂದಿದೆ, ಅವನನ್ನು ಬಿಟ್ಟು ನಮ್ಮನ್ನು ಬಸುರಿ ಮಾಡಲು ಬೇರಾವ ಗಂಡಸೂ ದೇಶದಲ್ಲಿ ಉಳಿದಿಲ್ಲ, ನಮ್ಮ ತಂದೆಗೆ ಹೆಂಡಕುಡಿಸಿ ಅವನೊಂದಿಗೆ ಮಲಗಿಕೊಳ್ಳೋಣ. ನಾವು ನಮ್ಮ ತಂದೆಯ ಮೂಲಕ ಮಕ್ಕಳನ್ನು ಪಡೆಯೋಣ ನಮ್ಮ ಪರಿವಾರವನ್ನು ಬದುಕುಳಿಸಲು ಇದೊಂದೇ ನಮಗಿರುವ ಅವಕಾಶ’”. ಎಕ್ಸೋಡಸ್ 6.20 ಕೂಡ ಮೋಸಸ್ ಇಂತಹುದೇ ಒಂದು ನಿಷಿದ್ಧ ಯೌನ ಸಂಬಂಧದ ಮೂಲಕ ಹುಟ್ಟಿದ್ದ ಎಂದು ಹೇಳುತ್ತದೆ.

ಬೈಬಲ್ ಉಲ್ಲೇಖ ಮಾಡುವ ಇಬ್ರಾಹಿಮ್ ಕೂಡ ತನ್ನ ಅರ್ಧ-ಸಹೋದರಿಯಾದ ಸಾರಾಳನ್ನು ಮದುವೆ ಆಗಿದ್ದುದಾಗಿ ಹೇಳುತ್ತದೆ. ಆದರೆ ಅತ್ಯಂತ ಪ್ರಚಲಿತ ಉದಾಹರಣೆ ಎಂದರೆ ಇಡಿಪಸ್‌ನದು. ಇವನ ನಿಷಿದ್ಧ ಯೌನ ಸಂಬಂಧವನ್ನು ನಿಷ್ಕಳಂಕ ನಿಷಿದ್ಧ ಯೌನ ಸಂಬಂಧ ಎಂದು ಹೇಳಬಹುದು. ಯಾಕೆಂದರೆ ಈತ ತನಗೆ ಗೊತ್ತಿಲ್ಲದೇ ಅಂಥ ಸಂಬಂಧವನ್ನು ಹೊಂದಿದ್ದ. ಆದರೆ ಇತಿಹಾಸದಲ್ಲಿ ದಾಖಲಾಗಿರುವ ಹೆಚ್ಚಿನ ನಿಷಿದ್ಧ ಯೌನ ಸಂಬಂಧಗಳು ಗೊತ್ತಿದ್ದೂ ಮಾಡಿದ ಸಂಬಂಧಗಳೇ ಆಗಿವೆ. ಉದಾಹರಣೆಗೆ ಇಜಿಪ್ಟಿನ ರಾಜ ಮನೆತನಗಳಲ್ಲಿ ನಡೆಯುತ್ತಿದ್ದ ಸಹೋದರ-ಸಹೋದರಿ ಮದುವೆಗಳು.

ಇದನ್ನೂ ಓದಿ: ಅಂದಿನಿಂದ ಇಂದಿನವರೆಗೆ ಮುಂದುವರಿಯುತ್ತಿರುವ ನರಬಲಿ; ಸನಾತನ ಧರ್ಮದ ಕುರುಹುಗಳು

ಹಿಂದೂಗಳಲ್ಲೂ ಇಂತಹ ನಿಷಿದ್ಧ ಯೌನ ಸಂಬಂಧಗಳು ಇದ್ದುದೇನೂ ವಿಶೇಷವಲ್ಲವಾದರೂ ಇಂತಹ ಸಂಬಂಧಗಳ ಬಗ್ಗೆ ಹಿಂದೂ ಮತಾಂಧರು ಬಹಳ ಮುಜುಗರ ಪಡುತ್ತಾರೆ. ಮನುಸ್ಮೃತಿ ಮಹಿಳೆಯರು ಮತ್ತು ಶೂದ್ರರ ಬಗ್ಗೆ ಬಹಳ ಕೀಳಾಗಿ ಹೇಳುತ್ತವೆ ಎನ್ನುವ ಮುಜುಗರದಿಂದ ಮತ್ತು ಪ್ರಾಚೀನ ಭಾರತದಲ್ಲಿ ಆರ್ಯರು ಮಾಂಸಾಹಾರಿಗಳಾಗಿದ್ದರು ಎನ್ನುವ ಮುಜುಗರದಿಂದ ತಪ್ಪಿಸಿಕೊಳ್ಳಲು ಈ ಮತಾಂಧರು ಮನುಸ್ಮೃತಿಯಲ್ಲಿರುವ ಅಂತಹ ಶ್ಲೋಕಗಳನ್ನೇ ಕಲಬೆರಕೆಯಾದ ಶ್ಲೋಕಗಳು ಎಂದು ನೆಪಮಾಡಿ ತೆಗೆದುಹಾಕಿ, ಬೇರೆ ಶ್ಲೋಕಗಳನ್ನು ಮಾತ್ರ ಉಳಿಸಿಕೊಂಡು, ಅದನ್ನು ’ವಿಶುದ್ಧ ಮನುಸ್ಮೃತಿ’ ಎಂದು ಪ್ರಕಟಿಸುತ್ತಾರೆ. ಆದರೆ ಒಂದು ಮನುಸ್ಮೃತಿಯನ್ನು ಹಾಗೆ ಮಾಡುವ ಮೂಲಕ ಇಂತಹ ಆಪಾದನೆಗಳಿಂದ ಹಿಂದೂ ಗ್ರಂಥಗಳನ್ನು ಉಳಿಸಿಕೊಳ್ಳಲಾಗದು.

(ಮೂಲ ಪಠ್ಯಗಳು)

(14) ಆ ದಸ್ಯುಘ್ನಾ ಮನಸಾ ಯಾಹ್ಯಸ್ತಂ ಭುವತ್ತೇ ಕುತ್ಸಃ ಸಖ್ಯೇ ನಿಕಾಮಃ, ಸ್ವೇ ಯೋನೌ ನಿ ಷದತಂ ಸರೂಪಾ ವಿ ವಾಂ ಚಿಕಿತ್ಸದೃತಚಿದ್ಧ ನಾರೀ.

(15) ಪೂಷಣಂ ನ್ವಜಾಶ್ವಮುಪ ಸ್ತೋಷಾಮ ವಾಜಿನಮ್, ಸ್ವಸುರ್ಯೋ ಜಾರ ಉಚ್ಯತೆ. ಮಾತುರ್ದಿಧಿಷುಮಬ್ರವವಂ ಸ್ವಸುಜರಿಃ ಶೃಣೋತು ನಃ, ಭ್ರಾತೇನ್ದ್ರಸ್ಯ ಸಖಾ ಮಮಂ.

(16) “ಭದ್ರೋ ಭದ್ರಯಾ ಸಚಮಾನ ಆಗತ್ವ್ಸಸಾರಂ ಜಾರೋ ಅಭ್ಯೇತಿ ಪಶ್ಚಾತ್, ಸುಪ್ರಕೇತೈರ್ದ್ಯುಭಿರಗ್ನಿರ್ವಿತಿಷ್ಠನ್ರುಶದ್ಭಿರ್ವರ್ಣೈರಭಿ ರಾಮಮಸ್ಥಾತ್”.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...