Homeಮುಖಪುಟಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಕೊನೆಯ ಭಾಗ

ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಕೊನೆಯ ಭಾಗ

- Advertisement -
- Advertisement -

ತಾಯಿಯೊಂದಿಗೆ ಮಗನ ಯೌನ ಸಂಬಂಧ

ಮಗನಾದವನು ತನ್ನ ತಾಯಿಯೊಂದಿಗೆ ಯೌನ ಸಂಬಂಧಗಳನ್ನು ಹೊಂದಿದ್ದ ಉದಾಹರಣೆಗಳೂ ಹಿಂದೂ ಗ್ರಂಥಗಳಲ್ಲಿ ದೊರಕುತ್ತವೆ. ಋಗ್ವೇದದಲ್ಲಿಯೂ ಇಂತಹ ಸಂಬಂಧಗಳ ಪ್ರಸ್ತಾಪವಿದೆ. ಋಗ್ವೇದವನ್ನು ಕನ್ನಡಕ್ಕೆ ಅನುವಾದ ಮಾಡಿ ದೀರ್ಘವಾದ ಭಾಷ್ಯ ಬರೆದಿರುವ ಎಚ್.ಪಿ. ವೆಂಕಟರಾಯರು ಋಗ್ವೇದದ 4ನೆಯ ಮಂಡಲದ 16ನೆಯ ಸೂಕ್ತದ 10ನೆಯ ಋಕ್ಕುಗಳನ್ನು (14) ಹೀಗೆ ಅನುವಾದಿಸಿದ್ದಾರೆ: ’ಎಲೈ ಇಂದ್ರನೇ, ದಸ್ಯುವನ್ನು ಕೊಲ್ಲತಕ್ಕ ಮನಸ್ಸ್ಸಿನಿಂದ ಕೂಡಿದ ನೀನು ಕುತ್ಸನ ಮನೆಗೆ ದಯಮಾಡು. ಕುತ್ಸನೂ ಕೂಡ ನಿನ್ನ ಸಖಿತ್ವವನ್ನು ಸಂಪಾದಿಸುವುದರಲ್ಲಿ ಆಸೆಯುಳ್ಳವನಾಗಿದ್ದಾನೆ. ಅನಂತರ ನೀವಿಬ್ಬರೂ ನಿನ್ನ ಗೃಹಕ್ಕೆ ತೆರಳಿ ಒಟ್ಟಿಗೆ ಕುಳಿತುಕೊಳ್ಳಿ, ಸತ್ಯವನ್ನು ನೋಡಲು ಸಮರ್ಥಳಾದ ಇಂದ್ರಭಾರ್ಯೆಯು ಸಮಾನವಾದ ರೂಪವುಳ್ಳ ನಿಮ್ಮಿಬ್ಬರನ್ನೂ ನೋಡಿ ಸಂಶಯಗೊಂಡಳು’.

ಋಗ್ವೇದ ಸೂಕ್ಷ್ಮವಾಗಿ ಸೂಚಿಸಿದ್ದನ್ನು ಜೈಮಿನೀಯ ಬ್ರಾಹ್ಮಣ (1.199-200) ವಿವರವಾಗಿ ಹೇಳುತ್ತದೆ. ಆ ಎರಡು ಬ್ರಾಹ್ಮಣಗಳು ಬಹಳ ವಿಸ್ತೃತವಾಗಿ ಇರುವುದರಿಂದ ಅವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ. “ಇಂದ್ರ ಒಮ್ಮೆ ತನ್ನ ಮಗ ಕುತ್ಸ ಔರವನನ್ನು ತನ್ನ ಹೆಂಡತಿ ಪುಲೋಮನ ಮಗಳಾದ ಶಚಿಯೊಡನೆ ಸುಖಿಸುತ್ತಿದ್ದುದನ್ನು ನೋಡಿದ. ’ನೀನು ಹೀಗೆ ಮಾಡಲು ಹೇಗೆ ಸಾಧ್ಯ’ ಎಂದು ಆತ ಅವಳನ್ನು ಕೇಳಿದಾಗ ಅವಳು ನಿಮ್ಮಿಬ್ಬರಲ್ಲಿ ನನಗೆ ವ್ಯತ್ಯಾಸ ಗೊತ್ತಾಗಲಿಲ್ಲ ಎಂದಳು. ಆಗ ಇಂದ್ರ ಹಾಗಾದರೆ ನಾನು ಅವನ ತಲೆಯನ್ನು ಬೋಳು ಮಾಡುತ್ತೇನೆ, ಆಗ ನೀನು ನಮ್ಮಿಬ್ಬರಲ್ಲಿ ವ್ಯತ್ಯಾಸವನ್ನು ಗುರುತಿಸಬಹುದು ಎಂದು ಹೇಳಿ ಕುತ್ಸನ ತಲೆ ಬೋಳಿಸಿದ. ಆದರೆ ಕುತ್ಸ ತನ್ನ ತಲೆಗೆ ಒಂದು ರುಮಾಲು ಸುತ್ತಿಕೊಂಡು ಮತ್ತೆ ಅವಳನ್ನು ಸೇರಿದ. ಇಂತಹ ರುಮಾಲನ್ನೇ ರಥದ ಸಾರಥಿಗಳು ಸುತ್ತಿಕೊಳ್ಳುತ್ತಾರೆ.”

ಕೃಷ್ಣನ ಮಗ ಸಾಂಬ ಕೂಡ ತನ್ನ ತಾಯಿಯೊಂದಿಗೆ ಯೌನ ಸಂಬಂಧ ಹೊಂದಿದ್ದ ಎಂಬುದನ್ನು ಮತ್ಸ್ಯ ಪುರಾಣ ಹೇಳುತ್ತದೆ. ಇದನ್ನು ಗಮನಿಸಿದ ಕೃಷ್ಣ ಸಾಂಬನ ಮೇಲೆ ಕೋಪಗೊಂಡು ಅವನನ್ನು ಹಾಗೂ ತನ್ನ ಆ ಹೆಂಡರನ್ನು ಶಪಿಸಿದ. ಹರಿವಂಶದ ವಿಷ್ಣು ಪರ್ವದ 109ನೆಯ ಅಧ್ಯಾಯ ಕೃಷ್ಣನ ಇನ್ನೊಬ್ಬ ಮಗ ಪ್ರದ್ಯುಮ್ನ ತನಗೆ ಮೊಲೆಹಾಲು ಉಣಿಸಿದ ತಾಯಿ ಮಾಯಾವತಿಯನ್ನು ಮದುವೆಯಾದದ್ದನ್ನು ಪ್ರಸ್ತಾಪ ಮಾಡುತ್ತದೆ. ಈ ಘಟನೆಗಳನ್ನು ಮಹಾಭಾರತದ ವನ ಪರ್ವದ ಅಧ್ಯಾಯ 233ರಲ್ಲಿ ಪ್ರಸ್ತಾಪಿಸಲಾಗಿರುವ ಸತ್ಯಭಾಮಾ-ದ್ರೌಪದಿ ಸಂವಾದ ಪುಷ್ಟೀಕರಿಸುತ್ತದೆ. ತನ್ನ ಗಂಡಂದಿರ ಮೇಲೆ ತಾನು ಹೇಗೆ ಅಧಿಕಾರ ಹೊಂದಿರುವೆ ಎನ್ನುವುದನ್ನು ಸತ್ಯಭಾಮಾಗೆ ವಿವರಿಸುವಾಗ ದ್ರೌಪದಿ, “ಪುರುಷರ ಸಮ್ಮುಖದಲ್ಲಿ ಎಲ್ಲಾ ಉತ್ಸಾಹ ಮತ್ತು ಅಜಾಗರೂಕತೆಯನ್ನು ತ್ಯಜಿಸಿ ಮೌನವನ್ನು ಆಚರಿಸುವ ಮೂಲಕ ನಿಮ್ಮ ಒಲವುಗಳನ್ನು ಮರೆಮಾಚಬೇಕು ಮತ್ತು ನೀವು ನಿಮ್ಮ ಮಕ್ಕಳಾದ ಪ್ರದ್ಯುಮ್ನ ಮತ್ತು ಸಾಂಬರೊಂದಿಗೆ ಏಕಾಂತದಲ್ಲಿ ವಾಸ ಮಾಡಬಾರದು ಹಾಗೂ ಮಾತನಾಡಲೂಬಾರದು” ಎಂದು ಹೇಳುತ್ತಾಳೆ. ಇದು ಸಾಂಬ ಹಾಗೂ ಪ್ರದ್ಯುಮ್ನರು ನಿಷಿದ್ಧ ಯೌನ ಸಂಬಂಧವನ್ನು ಹೊಂದಿರುವುದನ್ನು ಪುಷ್ಟೀಕರಿಸುತ್ತದೆ.

ಸಹೋದರ ಸಹೋದರಿಯರ ನಡುವಣ ನಿಷಿದ್ಧ ಯೌನ ಸಂಬಂಧ

ಮಹಾಭಾರತ ನಿಷಿದ್ಧ ಯೌನ ಸಂಬಂಧಗಳ ಹಲವಾರು ಉದಾಹರಣೆಗಳನ್ನು ದಾಖಲಿಸುತ್ತದೆ. ಉದಾಹರಣೆಗೆ, ವಾಸುದೇವ ಮತ್ತು ಕುಂತಿ ಅಣ್ಣ ತಂಗಿಯರಾಗಿದ್ದರು. ಅಂದ ಮೇಲೆ ವಾಸುದೇವನ ಮಗಳು ಸುಭದ್ರೆ ಮತ್ತು ಅವಳನ್ನು ವರಿಸಿದ ಕುಂತಿಯ ಮಗ ಅರ್ಜುನ ಸೋದರ ಸಂಬಂಧಿಗಳಾಗಲಿಲ್ಲವೇ?

ಸಹೋದರ ಸಹೋದರಿಯರ ನಡುವಣ ನಿಷಿದ್ಧ ಯೌನ ಸಂಬಂಧಗಳ ಬಗ್ಗೆ ಋಗ್ವೇದದಲ್ಲಿ ಹಲವಾರು ಪ್ರಸ್ತಾಪಗಳಿವೆ. ಇಂತಹ ನಿಷಿದ್ಧ ಯೌನ ಸಂಬಂಧದ ಮೊದಲ ಪ್ರಸ್ತಾಪ ಬರುವುದು ಋಗ್ವೇದದ 6ನೆಯ ಮಂಡಲದ 55ನೆಯ ಸೂಕ್ತದ 4ರಿಂದ 6ನೆಯ ಋಕ್ಕುಗಳಲ್ಲಿ. ಇವುಗಳಲ್ಲಿ ಪೂಷಾಣ ತನ್ನ ಸಹೋದರಿ ಹಾಗೂ ತಾಯಿಯ ಜೊತೆಗೆ ನಿಷಿದ್ಧ ಯೌನ ಸಂಬಂಧ ಹೊಂದಿದ ಬಗ್ಗೆ ಹೇಳಲಾಗಿದೆ. (15) ಋಗ್ವೇದದ ಮೇಲೆ 16ನೆಯ ಶತಮಾನದಲ್ಲಿ ಭಾಷ್ಯ ಬರೆದ ಸಾಯಣರು ಈ ಋಕ್ಕಿನ ಬಗ್ಗೆ ಬರೆಯುತ್ತ ನಿಷಿದ್ಧ ಯೌನ ಸಂಬಂಧವನ್ನು ಪ್ರಸ್ತಾಪ ಮಾಡುತ್ತಾರೆ: “ತನ್ನ ಸಹೋದರಿ ಉಷಸ್ಸಿನ ಪ್ರೇಮಿ ಎಂದೇ ಪ್ರಸಿದ್ಧಿ ಪಡೆದಿರುವ ಪೂಷಣನನ್ನು ಆರಾಧಿಸೋಣ”. ಪ್ರೊ. ಟಿ.ಎಚ್.ಗ್ರಿಪ್ಫಿತ್ ಅವರು ಈ ಋಕ್ಕನ್ನು ಹೀಗೆ ಅನುವಾದಿಸುತ್ತಾರೆ: “ತನ್ನ ಸಹೋದರಿಯ ಪ್ರಿಯಕರ ಎಂದೇ ಕರೆಯಲ್ಪಡುವ, ಕುರಿಗಳನ್ನು, ಕುದುರೆಗಳನ್ನು ಪಾಲಿಸುವ ಆ ಶಕ್ತಿಯುತ ಪೂಷಣನನ್ನು ಹೊಗಳೋಣ. ತನ್ನ ತಾಯಿಯ ಪ್ರಿಯಕರನನ್ನು ನಾನು ಸಂಬೋಧಿಸುತ್ತೇನೆ. ತನ್ನ ಸಹೋದರಿಯನ್ನು ಪ್ರೀತಿಸುವವನೇ, ಇಂದ್ರನ ಸಹೋದರನೇ, ನನ್ನ ಮಿತ್ರನೇ ಕೇಳು”. ಮೈಸೂರು ಮಹಾರಾಜರ ಆಶಯದ ಮೇರೆಗೆ ಋಗ್ವೇದವನ್ನು ಕನ್ನಡಕ್ಕೆ ಅನುವಾದ ಮಾಡಿ ಭಾಷ್ಯ ಬರೆದಿರುವ ಎಚ್.ಪಿ.ವೆಂಕಟರಾಯರು ಈ ಋಕ್ಕನ್ನು ಹೀಗೆ ಅನುವಾದಿಸುತ್ತಾರೆ: “ಯಾವ ಪೂಷದೇವನು ತನ್ನ ಸಹೋದರಿಯಾದ ಉಷಸ್ಸಿಗೆ ಉಪಪತಿ ಎಂದು ಪ್ರಸಿದ್ಧನಾಗಿದ್ದಾನೆಯೋ ಅಂತಹ ಅಜರೂಪವಾದ ವಾಹನವುಳ್ಳವನೂ, ಶಕ್ತಿಯುತನೂ, ಪೋಷಕನೂ ಆದ ಪೂಷದೇವನನ್ನು ಈಗ ಸ್ತುತಿಸಿ ಪೂಜಿಸೋಣ”.

ಋಗ್ವೇದದ 10ನೆಯ ಮಂಡಲದ 3ನೆಯ ಸೂಕ್ತದ 3ನೆಯ ಋಕ್ಕು ಅಗ್ನಿಯನ್ನು ತನ್ನ ಸಹೋದರಿಯ ಪ್ರಿಯಕರ ಎಂದು ಹೇಳುತ್ತದೆ. (16) ಇದನ್ನು ವೆಂಕಟರಾಯರು ಹೀಗೆ ಅನುವಾದಿಸುತ್ತಾರೆ: “ಕಲ್ಯಾಣಾತ್ಮಕನಾದ ಅಗ್ನಿಯು ಮಂಗಳಕರವಾದ ತೇಜಸ್ಸಿನಿಂದ ಸೇವಿಸಲ್ಪಟ್ಟವನಾಗಿ ಬಂದಿದ್ದಾನೆ. ಅನಂತರ ಶತ್ರುನಾಶಕನಾದ ಅಗ್ನಿಯು ತನ್ನ ಭಗಿನಿಯಾದ ಉಷಸ್ಸನ್ನು ಸಮೀಪಿಸುತ್ತಾನೆ. ಉತ್ತಮವಾದ ಪ್ರಜ್ಞಾಪಕಗಳಾದ ಕಾಂತಿಗಳಿಂದ ಸರ್ವತ್ರ ವ್ಯಾಪಿಸಿರುವ ಅಗ್ನಿಯು ಶ್ವೇತವರ್ಣಗಳುಳ್ಳ ತೇಜಸ್ಸುಗಳಿಂದ ರಾತ್ರಿಯ ಕತ್ತಲೆಯನ್ನು ಆಕ್ರಮಿಸಿ ನಿಂತಿದ್ದಾನೆ”. ಗ್ರಿಪ್ಫಿಥ್ ಹೀಗೆ ಅನುವಾದಿಸುತ್ತಾರೆ: “ಮಂಗಳಾತ್ಮಕ ವನಿತೆಯ ಸೇವಕನಾಗಿ ಮಂಗಳಾತ್ಮಕನಾದವನು ಬಂದಿದ್ದಾನೆ. ತನ್ನ ಸಹೋದರಿಯನ್ನು ಪ್ರಿಯಕರ ಹಿಂಬಾಲಿಸುತ್ತಾನೆ. ಅಗ್ನಿ, ಹೊಳೆಯುವ ಬೆಳಕನ್ನು ದೂರದವರೆಗೆ ಹರಡುತ್ತ ರಾತ್ರಿಯನ್ನು ಶುಭ್ರವಾದ ಬಟ್ಟೆಗಳಿಂದ ಆಚ್ಛಾದಿಸಿದ್ದಾನೆ”.

ಇಂತಹ ನಿಷಿದ್ಧ ಯೌನ ಸಂಬಂಧಗಳು ಹಿಂದೂಗಳ ವಿಶೇಷತೆಯೇನಾಗಿರಲಿಲ್ಲ. ಬೈಬಲ್ ಕೂಡ ಇಂತಹ ಸಂಬಂಧಗಳನ್ನು ಉಲ್ಲೇಖಿಸುತ್ತದೆ. ಆಡಮ್‌ನ ಮಗ ಕೇನ್ ಕೂಡ ತನ್ನ ಸಹೋದರಿಯನ್ನೇ ಮದುವೆಯಾಗಬೇಕಾಯಿತು, ಯಾಕೆಂದರೆ ಆತನ ತಾಯಿ ಈವಳನ್ನು ಹೊರತುಪಡಿಸಿ ಬೇರಾವ ಹೆಂಗಸೂ ಇರಲಿಲ್ಲ, ಎಂದು ಜೆನೆಸಿಸ್ 19.31-32 ಹೇಳುತ್ತದೆ: “ಒಂದು ದಿನ ಅಕ್ಕ ತನ್ನ ತಂಗಿಗೆ ಹೇಳಿದಳು: ’ನಮ್ಮ ತಂದೆಗೆ ವಯಸ್ಸಾಗುತ್ತ ಬಂದಿದೆ, ಅವನನ್ನು ಬಿಟ್ಟು ನಮ್ಮನ್ನು ಬಸುರಿ ಮಾಡಲು ಬೇರಾವ ಗಂಡಸೂ ದೇಶದಲ್ಲಿ ಉಳಿದಿಲ್ಲ, ನಮ್ಮ ತಂದೆಗೆ ಹೆಂಡಕುಡಿಸಿ ಅವನೊಂದಿಗೆ ಮಲಗಿಕೊಳ್ಳೋಣ. ನಾವು ನಮ್ಮ ತಂದೆಯ ಮೂಲಕ ಮಕ್ಕಳನ್ನು ಪಡೆಯೋಣ ನಮ್ಮ ಪರಿವಾರವನ್ನು ಬದುಕುಳಿಸಲು ಇದೊಂದೇ ನಮಗಿರುವ ಅವಕಾಶ’”. ಎಕ್ಸೋಡಸ್ 6.20 ಕೂಡ ಮೋಸಸ್ ಇಂತಹುದೇ ಒಂದು ನಿಷಿದ್ಧ ಯೌನ ಸಂಬಂಧದ ಮೂಲಕ ಹುಟ್ಟಿದ್ದ ಎಂದು ಹೇಳುತ್ತದೆ.

ಬೈಬಲ್ ಉಲ್ಲೇಖ ಮಾಡುವ ಇಬ್ರಾಹಿಮ್ ಕೂಡ ತನ್ನ ಅರ್ಧ-ಸಹೋದರಿಯಾದ ಸಾರಾಳನ್ನು ಮದುವೆ ಆಗಿದ್ದುದಾಗಿ ಹೇಳುತ್ತದೆ. ಆದರೆ ಅತ್ಯಂತ ಪ್ರಚಲಿತ ಉದಾಹರಣೆ ಎಂದರೆ ಇಡಿಪಸ್‌ನದು. ಇವನ ನಿಷಿದ್ಧ ಯೌನ ಸಂಬಂಧವನ್ನು ನಿಷ್ಕಳಂಕ ನಿಷಿದ್ಧ ಯೌನ ಸಂಬಂಧ ಎಂದು ಹೇಳಬಹುದು. ಯಾಕೆಂದರೆ ಈತ ತನಗೆ ಗೊತ್ತಿಲ್ಲದೇ ಅಂಥ ಸಂಬಂಧವನ್ನು ಹೊಂದಿದ್ದ. ಆದರೆ ಇತಿಹಾಸದಲ್ಲಿ ದಾಖಲಾಗಿರುವ ಹೆಚ್ಚಿನ ನಿಷಿದ್ಧ ಯೌನ ಸಂಬಂಧಗಳು ಗೊತ್ತಿದ್ದೂ ಮಾಡಿದ ಸಂಬಂಧಗಳೇ ಆಗಿವೆ. ಉದಾಹರಣೆಗೆ ಇಜಿಪ್ಟಿನ ರಾಜ ಮನೆತನಗಳಲ್ಲಿ ನಡೆಯುತ್ತಿದ್ದ ಸಹೋದರ-ಸಹೋದರಿ ಮದುವೆಗಳು.

ಇದನ್ನೂ ಓದಿ: ಅಂದಿನಿಂದ ಇಂದಿನವರೆಗೆ ಮುಂದುವರಿಯುತ್ತಿರುವ ನರಬಲಿ; ಸನಾತನ ಧರ್ಮದ ಕುರುಹುಗಳು

ಹಿಂದೂಗಳಲ್ಲೂ ಇಂತಹ ನಿಷಿದ್ಧ ಯೌನ ಸಂಬಂಧಗಳು ಇದ್ದುದೇನೂ ವಿಶೇಷವಲ್ಲವಾದರೂ ಇಂತಹ ಸಂಬಂಧಗಳ ಬಗ್ಗೆ ಹಿಂದೂ ಮತಾಂಧರು ಬಹಳ ಮುಜುಗರ ಪಡುತ್ತಾರೆ. ಮನುಸ್ಮೃತಿ ಮಹಿಳೆಯರು ಮತ್ತು ಶೂದ್ರರ ಬಗ್ಗೆ ಬಹಳ ಕೀಳಾಗಿ ಹೇಳುತ್ತವೆ ಎನ್ನುವ ಮುಜುಗರದಿಂದ ಮತ್ತು ಪ್ರಾಚೀನ ಭಾರತದಲ್ಲಿ ಆರ್ಯರು ಮಾಂಸಾಹಾರಿಗಳಾಗಿದ್ದರು ಎನ್ನುವ ಮುಜುಗರದಿಂದ ತಪ್ಪಿಸಿಕೊಳ್ಳಲು ಈ ಮತಾಂಧರು ಮನುಸ್ಮೃತಿಯಲ್ಲಿರುವ ಅಂತಹ ಶ್ಲೋಕಗಳನ್ನೇ ಕಲಬೆರಕೆಯಾದ ಶ್ಲೋಕಗಳು ಎಂದು ನೆಪಮಾಡಿ ತೆಗೆದುಹಾಕಿ, ಬೇರೆ ಶ್ಲೋಕಗಳನ್ನು ಮಾತ್ರ ಉಳಿಸಿಕೊಂಡು, ಅದನ್ನು ’ವಿಶುದ್ಧ ಮನುಸ್ಮೃತಿ’ ಎಂದು ಪ್ರಕಟಿಸುತ್ತಾರೆ. ಆದರೆ ಒಂದು ಮನುಸ್ಮೃತಿಯನ್ನು ಹಾಗೆ ಮಾಡುವ ಮೂಲಕ ಇಂತಹ ಆಪಾದನೆಗಳಿಂದ ಹಿಂದೂ ಗ್ರಂಥಗಳನ್ನು ಉಳಿಸಿಕೊಳ್ಳಲಾಗದು.

(ಮೂಲ ಪಠ್ಯಗಳು)

(14) ಆ ದಸ್ಯುಘ್ನಾ ಮನಸಾ ಯಾಹ್ಯಸ್ತಂ ಭುವತ್ತೇ ಕುತ್ಸಃ ಸಖ್ಯೇ ನಿಕಾಮಃ, ಸ್ವೇ ಯೋನೌ ನಿ ಷದತಂ ಸರೂಪಾ ವಿ ವಾಂ ಚಿಕಿತ್ಸದೃತಚಿದ್ಧ ನಾರೀ.

(15) ಪೂಷಣಂ ನ್ವಜಾಶ್ವಮುಪ ಸ್ತೋಷಾಮ ವಾಜಿನಮ್, ಸ್ವಸುರ್ಯೋ ಜಾರ ಉಚ್ಯತೆ. ಮಾತುರ್ದಿಧಿಷುಮಬ್ರವವಂ ಸ್ವಸುಜರಿಃ ಶೃಣೋತು ನಃ, ಭ್ರಾತೇನ್ದ್ರಸ್ಯ ಸಖಾ ಮಮಂ.

(16) “ಭದ್ರೋ ಭದ್ರಯಾ ಸಚಮಾನ ಆಗತ್ವ್ಸಸಾರಂ ಜಾರೋ ಅಭ್ಯೇತಿ ಪಶ್ಚಾತ್, ಸುಪ್ರಕೇತೈರ್ದ್ಯುಭಿರಗ್ನಿರ್ವಿತಿಷ್ಠನ್ರುಶದ್ಭಿರ್ವರ್ಣೈರಭಿ ರಾಮಮಸ್ಥಾತ್”.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....