Homeಕರ್ನಾಟಕಮನುವಾದಿ ಮೀಸಲಾತಿ ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ: ಬರಗೂರು ರಾಮಚಂದ್ರಪ್ಪ

ಮನುವಾದಿ ಮೀಸಲಾತಿ ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ: ಬರಗೂರು ರಾಮಚಂದ್ರಪ್ಪ

- Advertisement -
- Advertisement -

ಶತಮಾನಗಳಿಂದ ನಮ್ಮ ಮೇಲೆ ಹೇರಲ್ಪಟ್ಟ ಮನುವಾದಿ ಮೀಸಲಾತಿಯನ್ನು ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ. ಸ್ವತಂತ್ರ ಭಾರತದಲ್ಲಿ ಮೀಸಲಾತಿಗೆ ಶಾಸನಬದ್ಧತೆಯನ್ನು ತಂದು ಕೊಟ್ಟವರು ಅಂಬೇಡ್ಕರ್‌ರವರು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ, ’ಮೀಸಲಾತಿ ನೂರು ವರ್ಷ’ ಕುರಿತ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವರು ಸಂವಿಧಾನ ಎಂದರೆ ಮೀಸಲಾತಿ, ಮೀಸಲಾತಿ ಎಂದರೆ ಸಂವಿಧಾನ ಎಂದು ತಪ್ಪಾಗಿ ಭಾವಿಸಿದ್ದಾರೆ. ಮೀಸಲಾತಿ ಸಂವಿಧಾನದ ಒಂದು ಅಂಶವೇ ಹೊರತು ಮೀಸಲಾತಿಯೇ ಸಂವಿಧಾನವಲ್ಲ. ಸಂವಿಧಾನ ಆಡಳಿತಕ್ಕೆ ಬೇಕಾದಂತ ಎಲ್ಲಾ ತಾಂತ್ರಿಕ ಮತ್ತು ತಾತ್ವಿಕ ಚೌಕಟ್ಟನ್ನು ಒದಗಿಸಿದೆ. ಸಂವಿಧಾನ ಶಾಸ್ತ್ರಕ್ಕೆ ಸಿಗದ ಸಂವೇದನೆ. ಇಲ್ಲಿ ಸಂವೇದನೆ ಎಂದರೆ ಸಾಮಾಜಿಕ ನ್ಯಾಯದ ಆಶಯ, ಸಮಾನತೆಯ ಆಶಯವಾಗಿದೆ ಎಂದರು.

ಮೀಸಲಾತಿಯಿಂದ ಪ.ಜಾತಿ/ಪ.ಪಂಗಡದವರಿಗೆ ಮಾತ್ರ ಉದ್ಯೋಗ ಸಿಕ್ಕಿದೆ ಎಂದು ಬಹಳಷ್ಟು ಜನರಿಗೆ ಅಸಮಾಧಾನವಿದೆ. ಮೀಸಲಾತಿಯಿಂದ ಅನೇಕ ಸುಧಾರಣೆಗಳು ನಡೆದಿವೆ ನಿಜ, ಆದರೆ ಮೀಸಲಾತಿಯ ಕುರಿತು ಅಸಹನೆ ವ್ಯಕ್ತಪಡಿಸುವಷ್ಟು ಉನ್ನತ ಉದ್ಯೋಗಗಳು ದಲಿತರಿಗೆ ಸಿಕ್ಕಿವೆ ಎನ್ನುವುದು ಸತ್ಯವಲ್ಲ. ಯೋಗೇಂದ್ರಯಾದವ್ ಅವರ ಸಮೀಕ್ಷೆಯ ವರದಿ ಮತ್ತು ಕೇಂದ್ರ ಸರ್ಕಾರದ ಅಂಕಿ ಅಂಶಗಳನ್ನು ನೋಡಿದರೆ ದೊಡ್ಡ ದೊಡ್ಡ ಸಂಸ್ಥೆಗಳಾದ ಐಐಎಂ, ಐಐಟಿಗಳಲ್ಲಿ ಎಷ್ಟು ಎಸ್ಸಿ ಎಸ್ಟಿಯ ಪ್ರಾಧ್ಯಾಪಕರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದರು.

ಆದರೆ ಮೀಸಲಾತಿ ಮೆರಿಟ್‌ಗೆ ವಿರುದ್ಧ ಎನ್ನುವವರಿದ್ದಾರೆ. ದೇಶದ ಎಲ್ಲಾ ಉನ್ನತ ವಿವಿಗಳಲ್ಲಿ ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗದ ಪ್ರಾಧ್ಯಾಪಕರೆ ಇದ್ದಾರೆ. ಆದರೂ ಜಗತ್ತಿನ ಉತ್ತಮ ವಿವಿಗಳ ಪಟ್ಟಿಯಲ್ಲಿ ಭಾರತದ ಒಂದು ವಿವಿ ಇಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು, ಮೆರಿಟ್ ಎಂಬ ಮಿಥ್ಯೆ ಇಟ್ಟುಕೊಂಡು ಮೀಸಲಾತಿ ವಿರೋಧ ಮಾಡುವ ಪ್ರವೃತ್ತಿ ಅಪ್ಪಟ ಹುಸಿತನದ್ದು ಎಂದರು.

ಇನ್ನು ಮೀಸಲಾತಿ ವಿಚಾರಕ್ಕೆ ಬಂದರೆ, ಜಾತಿವಾದ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಮೀಸಲಾತಿಯನ್ನು ಅಸಹನೀಯವಾಗಿ ಬಿಂಬಿಸುವ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ. ಆದರೆ ಅವರಿಗೆ ತಿಳಿದಿರಲಿ, ಹತ್ತಾರು ಶತಮಾನಗಳಿಂದ ಮೀಸಲಾತಿ ಜಾರಿಯಲ್ಲಿದೆ. ಶಿಕ್ಷಣ, ದೇವಾಲಯ ಪ್ರವೇಶ, ಮನೆ, ಬಾವಿ ನೀರು, ಕೆರೆ, ಬೀದಿಗಳು ಕೆಲವರಿಗೆ ಮೀಸಲಾಗಿತ್ತು. ಅಷ್ಟೇ ಅಲ್ಲದೆ, ಸ್ಪರ್ಶ ಸಹ ಮೀಸಲಾಗಿತ್ತು. ಆದರೆ, ಇದನ್ನು ನಾವು ಧಿಕ್ಕರಿಸಿದ ಕಾರಣ, ಕೆಲವರು ಇಂದಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾದ ಮೀಸಲಾತಿಯನ್ನು ಟೀಕಿಸುತ್ತಾರೆ ಎಂದರು.

ಗೋಡ್ಸೆ ಕೊಲೆಗಾರ ಎನ್ನಲು ಹಿಂದೇಟು ಏಕೆ?:

ಕರ್ನಾಟಕ ಶಿಕ್ಷಣ ಇಲಾಖೆಯ ಕೈಪಿಡಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ, ಸಂವಿಧಾನ ಬರೆದಿಲ್ಲ ಎಂದಿರುವುದು ಅವರ ವಿಕೃತ ಮನಸ್ಥಿತಿಯನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ, ಒರಿಸ್ಸಾದ ಪಠ್ಯವೊಂದರಲ್ಲಿ ಮಹಾತ್ಮ ಗಾಂಧಿ ಅವರು ಅವಘಡದಿಂದಾಗಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಗಾಂಧಿಯನ್ನು ಹತ್ಯೆಗೈದವನು ಗೋಡ್ಸೆ ಎಂದು ಹೇಳಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು. 2018ರ ಆಗಸ್ಟ್‌ನಲ್ಲಿ ದೆಹಲಿಯ ಜಂತರ್ ಮಂತರ್ ಅಲ್ಲಿ ಭಾರತೀಯ ಸಂವಿಧಾನವನು ಸುಟ್ಟು ಅಂಬೇಡ್ಕರ್ ವಿರುದ್ಧ ದಿಕ್ಕಾರ ಕೂಗುವ ಘಟನೆ ನಡೆಯುತ್ತದೆ. 2019 ಜನವರಿಯಲ್ಲಿ ಗಾಂಧೀಜಿಯವರ ಭಾವಚಿತ್ರದಲ್ಲಿ ಅವರ ಎದೆಗೆ ಅಣಕು ಗುಂಡನ್ನು ಹಾರಿಸಿ ವಿಕಾರ ಸಂಭ್ರಮ ಪಡುವ ಘಟನೆ ನಡೆಯುತ್ತದೆ. ಇವೆಲ್ಲವೂ ದೇಶದ ಸಂವಿಧಾನವನ್ನು ಮರೆಮಾಚುವ ಹುನ್ನಾರ ಎಂದರು.

ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ನಡುವೆ ತಾರ್ಕಿಕ ಭಿನ್ನಾಭಿಪ್ರಾಯಗಳು ಮಾತ್ರ ಇದ್ದವು. ಅದನ್ನೇ ನೆಪವಾಗಿಟ್ಟುಕೊಂಡು ಅವರ ಅನುಯಾಯಿಗಳ ನಡುವೆ ಅಸಹನೆ ಹೆಚ್ಚಾಗಿದೆ ಎಂದ ಅವರು, ಗಾಂಧಿ ಮತ್ತು ಅಂಬೇಡ್ಕರ್ ನಮಗೆ ಮುಖ್ಯವಾಗಬೇಕು. ಇದೀಗ ಮೂಲಭೂತವಾದಿಗಳು ಗಾಂಧಿಯನ್ನು ತಳ್ಳುತ್ತಾ, ಅಂಬೇಡ್ಕರ್ ಅವರನ್ನು ವಶಪಡೆಸಿಕೊಳ್ಳುತ್ತಿರುವ ಪ್ರಕ್ರಿಯಲ್ಲಿ ನಿರತರಾಗಿರುವಾಗ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಡಾ.ಕಿರಣ್ ಗಾಜನೂರು, ಡಾ.ರಾಜಪ್ಪ ದಳವಾಯಿ ಸಂಘಟನೆ ಸಂಚಾಲಕರಾದ ಡಾ.ರಾಜು ಗುಂಡಾಪುರ, ಬಿ.ರಾಜಶೇಖರ ಮೂರ್ತಿ ಸೇರಿದಂತೆ ಪ್ರಮುಖರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

7 COMMENTS

  1. ಇವತ್ತಿನ ಸ್ವಸ್ಥ ಸಮಸಮಾಜ ನಿರ್ಮಾಣ ದಲ್ಲಿ ಗೌರಿ ಮೇಡಮ್ ರವರ ಪತ್ರಿಕೆ ತುಂಬಾ ಆವಶ್ಯಕವಾದುದು.

  2. ಪಂಗಡ,ಪಂಗಡಗಳೊಳಗೆ ಹಣಕಾಸು ಮಾನದಂಡದಡಿಯಲ್ಲಿ ಶೇ.ನೂರು ಮೀಸಲಾತಿ ಒದಗಿಸುವುದೊಂದೇ ಮೀಸಲಾತಿ ಕಗ್ಗಂಟಿಗಿರುವ ಪರಿಹಾರ.
    ಶೆ.ಅಯ್ವತ್ತರ ಮಿತಿಯನ್ನು ತಕ್ಕ ತಿದ್ದುಪಡಿ ಮಾಡಿ ಸಡಿಲಮಾಡಬೇಕಾಗಿದೆ

  3. ಮೀಸಲಾತಿ ನೆರವಿನಿಂದ ಮೇಲೆ ಬಂದ ಪ.ಪ/ಪ.ಬುಡಕಟ್ಟು ಮಂದಿ ತನ್ನದೇ ಪಂಗಡದ ವಂಚಿತ ಮಂದಿಗೆ ತಕ್ಕ ಪಾಲು ಸಿಗುವಂತೆ ಹೆಜ್ಜೆ ಇಡಬೇಕು. ಇಲ್ಲವಾದರೆ, ಮೀಸಲಾತಿ ಒಪ್ಪದವರ ಎದುರು ದಾಳಿಗೆ ಪದೇಪದೇ ತುತ್ತಾಗಬೇಕಾಗುತ್ತೆ. ಇದು ಮತ್ತೆ ಕೆಲವರ ಎಲೆಕ್ಶನ್ ಇಶ್ಯೂ ಆಗಿ ಒಡಕಿಗೆ ಎಡಮಾಡಲಿದೆ.
    ಮೀಸಲಾತಿಯಿಂದ ಒಂದು ಬಗೆಯ ಹತೋಟಿ ಕೂಟ ಮೂಡಿರುವುದನ್ನೂ ಕೂಡ ಕಡೆಗಣಿಸಬಾರದು.

  4. ಈಗ ಹೆಚ್ಚುಮಂದಿಗೆ ಅನುಕೂಲವಾಗುತ್ತಿರುವ ಮೀಸಲಾತಿ ಏರ್ಪಾಡಿಗಿಂತ ಹತೋಟಿಕೂಟ ಬಡ್ತಿಯಲ್ಲಿ ತನಗೆ ಸಿಗಬೇಕಾದ ಹೆಚ್ಚಿನಪಾಲಿಗೆ ಹಾತೊರೆಯುತ್ತಿರುವ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಬಗೆಹರಿಸಿಕೊಳ್ಳಬೇಕುಉ.
    ಒಳಮೀಸಲಾತಿಯನ್ನು ಪಡೆಯಲು ಮೂಡುತ್ತಿರುವ ದಿಟವಾಗಿಯೂ ತುಳಿತಕ್ಕೊಳಗಾದವರ ಹೋರಾಟವನ್ನು ಮೀಸಲಾತಿ ಒಪ್ಪುವವರು ಬೆಂಬಲಿಸಲು ಯಾವುದೇ ನೆಪ ಹೇಳಬಾರದು.

  5. ಸದಾಶಿವ ರಿಪೋರ್ಟ್, ಸೋಸಿಯೋ ಎಕಾನಮಿಕ್ ಸರ್ವೆ ರಿಪೋರ್ಟ್ ಅನ್ನು ಬಯಲುಗೊಳಿಸಲು ಒತ್ತಾಯಿಸಬೇಕು.

  6. ಈ ಬಗ್ಗೆ ಹೆಚ್ಚಿನ ಒರೆತಮಾಡಿ ತಕ್ಕ ತಿದ್ದುಪಡಿಗೆ ಎಡೆಮಾಡಿಕೊಡಬೇಕು.

  7. ಮೀಸಲಾತಿ ಬಗೆಗೆ ಗಣಿತದಂತೆ ಪಕ್ಕಾ ಪಾರ್ಮುಲ ತಂದರೆ, ಏಳಿಗೆಗೆ ಇರುವ ದಾರಿಯತ್ತ ದಾಪುಗಾಲಿಡಬಹುದು.

LEAVE A REPLY

Please enter your comment!
Please enter your name here

- Advertisment -

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...