Homeಕರ್ನಾಟಕಕಾರು ಬೈಕ್ ಢಿಕ್ಕಿ: ಭವಾನಿ ರೇವಣ್ಣ ಅವರ ದರ್ಪಕ್ಕೆ ಸಾರ್ವಜನಿಕರ ಆಕ್ರೋಶ

ಕಾರು ಬೈಕ್ ಢಿಕ್ಕಿ: ಭವಾನಿ ರೇವಣ್ಣ ಅವರ ದರ್ಪಕ್ಕೆ ಸಾರ್ವಜನಿಕರ ಆಕ್ರೋಶ

- Advertisement -
- Advertisement -

ಶಾಸಕ ಹೆಚ್‌ಡಿ ರೇವಣ್ಣ ಅವರ ಪತ್ನಿ, ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರಿಗೆ ಸಾಲಿಗ್ರಾಮದ ಬಳಿ ಬೈಕೊಂದು ಢಿಕ್ಕಿ ಹೊಡೆದಿದೆ. ಘಟನೆ ಸ್ಥಳದಲ್ಲಿ ಭವಾನಿ ರೇವಣ್ಣ ದರ್ಪ ಮೆರೆದಿದ್ದು, ಅವರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ KA-03-NK-5 ನಂಬರಿನ ಕಾರಿಗೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಬಳಿ ಶಿವಣ್ಣ ಎಂಬಾತನ ಬೈಕ್‌ ಢಿಕ್ಕಿ ಹೊಡೆದಿದೆ. ಘಟನೆ ಆಕಸ್ಮಿಕವಾಗಿದೆ ಆದರೆ ಬೈಕ್ ಸವಾರನ ವಿರುದ್ಧ ಭವಾನಿ ರೇವಣ್ಣ ಅವಾಚ್ಯವಾಗಿ ನಿಂದಿಸಿದ್ದಾರೆ.

ಬೋರ್ಡ್‌ ಎಲ್ಲಾ ಸಖತ್ ಡ್ಯಾಮೇಜ್‌ ಆಗಿದೆ, ಎಲ್ಲಿಗೆ ನುಗ್ಗಿಸ್ತೀಯಾ ಸುಟ್ಟ ಹಾಕ್ರೋ…. ಈ ಗಾಡಿ ಎಷ್ಟು ಡ್ಯಾಮೇಜ್‌ ಆಗಿದೆ, ಹೆಂಗೆ ರೆಡಿ ಮಾಡ್ಸೋದು? ಎಲ್ಲಾ ಹೋಗಿದೆ, ನೀನ್ ಫೋನ್ ತಗೋಬೇಡ, ನಡಿ ಆಚೆಗೆ ಯಾವನು ಸೀಝ್ ಮಾಡಿ ಗಾಡಿ. ಅವನಿಗೆ ಬೈಕ್ ಮುಟ್ಟಬೇಡ ಅಂತ ಹೇಳು. ಸಾಲಿಗ್ರಾಮ ಎಸ್‌ಐ ಬರಲು ಹೇಳು. ಒಂದುವರೆ ಕೋಟಿ ರೂಪಾಯಿ ಗಾಡಿ ಅದು, ಅದನ್ನು ಡ್ಯಾಮೇಜ್ ಮಾಡಿ ಬಿಟ್ಟಿದ್ದಾನೆ. ಏನ್ ಅರ್ಜೆಂಟ್ ಇತ್ತು? ಏನ್ ದೇಶ ಮುಳುಗಿ ಹೋಗಿತ್ತಾ ಎಂದೆಲ್ಲಾ ಹಿಗ್ಗಾ ಮುಗ್ಗ ನಿಂದಿಸಿದ್ದಾರೆ.

ಈ ವೇಳೆ ಅಕ್ಕ ಗಾಡಿ ತೆಗೀರಿ, ಹೋಗೋಣ ಎಂದು ಸ್ಥಳದಲ್ಲಿ ಇದ್ದವರು ಹೇಳಿದ್ದು, ಅದಕ್ಕೆ ಗಾಡಿ ತಗಂಡು ಏನ್ ಮಾಡೋಣ? ಕೊಡ್ತಿಯಾ 50 ಲಕ್ಷ ರಿಪೇರಿ ಮಾಡ್ಲಿಕೆ ಎಂದು ಅವರನ್ನೇ ಪ್ರಶ್ನಿಸಿದ್ದಾರೆ. ನಿಂತಿದ್ದವರು ದುಡ್ಡು ಕೊಡುವ ಹಾಗಿದ್ದರೆ ನ್ಯಾಯ ಮಾತನಾಡಲು ಬನ್ನಿ ಎಂದು ಬೈದಾಡಿದ್ದಾರೆ.

ಒಂದುವರೆ ಕೋಟಿ ರೂಪಾಯಿ ಗಾಡಿ, ಬೋರ್ಡ್ ಎಲ್ಲಾ ಏನು ಇಲ್ಲ. ಸಾಯಂಗಿದ್ರೆ ನೀನು ಸಾಯಬೇಕಿತ್ತು ಬಸ್‌ಗೆ ಸಿಗಾಕಂಡು, ನನ್ನ ಕಾರು ಡ್ಯಾಮೇಜ್ ಮಾಡಕೆ ನೀನ್ ಯಾವನು? ಒಂದುವರೆ ಕೋಟಿ ರೂಪಾಯಿ ಡ್ಯಾಮೇಜ್ ಯಾವನ್ ಕಟ್ಟೋನು? ಎಂದು ರಸ್ತೆಗಿಳಿದು ಬೈಕ್ ಸವಾರನನ್ನು ಭವಾನಿ ರೇವಣ್ಣ ನಿಂದಿಸಿದ್ದಾರೆ.

ಬೈಕ್ ಸವಾರನ ವಿರುದ್ಧ ದೂರು

ಭವಾನಿ ರೇವಣ್ಣ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ವಿರುದ್ಧ ದೂರು ದಾಖಲಾಗಿದೆ. ಬೈಕ್ ಸವಾರ ಶಿವಣ್ಣ ಎಂಬಾತನ ಮೇಲೆ ಭವಾನಿ ಕಾರು ಚಾಲಕ ಮಂಜುನಾಥ್ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಬೈಕ್ ಸವಾರನ ಮೇಲೆ ಸಿಆರ್‌ಪಿಸಿ ಸೆಕ್ಷನ್ 157 ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

ಭವಾನಿ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

ಭವಾನಿ ರೇವಣ್ಣ ಬೈಕ್‌ ಚಾಲಕನಿಗೆ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಬಳಕೆದಾರರು ಭವಾನಿ ರೇವಣ್ಣ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಪಘಾತದ ಬಳಿಕ ಬೈಕ್‌ ಸವಾರನ ಆರೋಗ್ಯ ವಿಚಾರಿಸದೆ ಭವಾನಿ ತಮ್ಮ ಕಾರಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಇದು ದುರಹಂಕಾರ ಎಂದು  ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ ಮಾಡಿದ್ದು, ಆಕಸ್ಮಿಕವಾಗಿ ನಡೆಯುವ ಘಟನೆಗೆ ಈ ರೀತಿಯ ವರ್ತನೆ ಸರಿಯಲ್ಲ. ನಿಮ್ಮ ವಾಹನಕ್ಕೆ ವಿಮೆ ಕ್ಲೈಮ್‌ ಮಾಡಬಹುದು. ಬೈಕ್‌ ಸವಾರನ ಪ್ರಾಣಕ್ಕೆ ಏನಾದರೂ ಆದರೆ ಯಾರು ಹೊಣೆ? ಅಹಂಕಾರದ ಮಾತುಗಳನ್ನು ಸ್ವಲ್ಲ ಕಡಿಮೆ ಮಾಡಿ ಎಂದು ಬರೆದುಕೊಂಡಿದ್ದಾರೆ.

ಅವ್ಯಾಚ ಪದಗಳನ್ನು ಬಳಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಬಡವ ಸತ್ರೂ ಇವರಿಗೆ ಚಿಂತೆ ಇಲ್ಲ. ಆದರೆ ಇವರ ಒಂದೂವರೆ ಕೋಟಿ ಕಾರಿಗೆ ಏನು ಆಗಬಾರದು, ದೊಡ್ಡ ಗೌಡರ ಮನೆಗೆ ದೊಡ್ಡತನ ನೋಡಿ,  ಅಕ್ಕೋ ಸಮಾಧಾನ ಮಾಡ್ಕೊಳಿ ಎಂದೆಲ್ಲಾ ನೆಟ್ಟಿಗರು ಬರೆದುಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ರಾ.ಚಿಂತನ್‌, ಸಾಲಿಗ್ರಾಮದ ಬಳಿ ಬಡ ಬೈಕ್ ಸವಾರ ತಮ್ಮ ಕಾರಿಗೆ ಆಕಸ್ಮಿಕವಾಗಿ ಗುದ್ದಿದ್ದಕ್ಕೆ ಭವಾನಿ ರೇವಣ್ಣ ಅವರ ಪ್ರತಿಕ್ರಿಯೆ ಇದು. ಬಡವ ನೀನು ಬೇಕಾದ್ರೆ ಸಾಯಿ, ನನ್ನ ಕಾರು ಡ್ಯಾಮೇಜ್ ಆಗಿದ್ದು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಿದ ಇವರು ರೈತ ನಾಯಕ, ಮಣ್ಣಿನ ಮಗ ದೇವೇಗೌಡರ ಸೊಸೆ. ಶಾಸಕ ರೇವಣ್ಣ ಅವರ ಪತ್ನಿ, ಸಂಸದ ಪ್ರಜ್ವಲ್ ಅವರ ತಾಯಿ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅತ್ತಿಗೆ!

ಅಂದಹಾಗೆ, ಈ ದುಬಾರಿ ಕಾರಿನ ಸ್ಕ್ರಾಚ್ ರಿಪೇರಿಗೆ ಒಂದೆರಡು ಲಕ್ಷ ಖರ್ಚುಗಬಹುದೇನೋ… ಆ ಹಣ ಗೌಡರ ಕುಟುಂಬಕ್ಕೆ ಒಂದು ದಿನದ ಟೀ ಖರ್ಚಿಗಿಂತ ಕಡಿಮೆ. ಆದರೆ ಆ ಬಡ ರೈತ ತನ್ನ ಬೈಕ್ ರಿಪೇರಿ ಮಾಡಿಸಲು ಸಾಲ ಮಾಡಬೇಕು. ಅವನು ಸತ್ತಿದ್ದರೆ ಕುಟುಂಬ ಬೀದಿಗೆ ಬೀಳಬೇಕಿತ್ತು!

“ಬಡವ ನೀನು ಸತ್ತರೆ ಸಾಯಿ, ನನ್ನ ಕಾರು ನನಗೆ ಮುಖ್ಯ…” ಎಂಬ ಅಮೂಲ್ಯವಾದ ಸಂದೇಶ ಸಾರಿದ… ಭವಾನಿ ರೇವಣ್ಣ ಅವ್ರೇ.. So beautiful, so elegant, just looking like a wow’

ಅದೆಲ್ಲಾ ಇರ್ಲಿ… ನಿಮ್ಮ ಕಾರಿಗೆ ನಂಬರ್ ಪ್ಲೇಟ್ ಯಾಕಿಲ್ಲ ಮೇಡಂ? tinted glass ಬೇರೆ Heavy Dark ಇದೆ! ಅಲ್ಲಿಗೆ ಬಂದ ಪೊಲೀಸರು ಕೇಸ್ ಏನಾದ್ರೂ ಹಾಕಿದ್ರಾ? ಇಲ್ವಾ? ಎಂದು ಪೋಸ್ಟ್‌ ಮಾಡಿದ್ದಾರೆ.

ಇನ್ನೋರ್ವ ಫೇಸ್ಬುಕ್‌ ಬಳಕೆದಾರರಾದ ಮಂಜುನಾಥ ಗೌಡ ಎಂಬವರು ಈ ಕುರಿತು ಪೋಸ್ಟ್‌ ಮಾಡಿದ್ದು, ಬಡವ ಬೇಕಿದ್ದರೆ ಸತ್ತರೆ ಸಾಯಬಹುದು ಆದರೆ ಭವಾನಿ ರೇವಣ್ಣ ಅವರ ಒಂದೂವರೆ ಕೋಟಿಯ ಕಾರಿಗೆ ಮಾತ್ರ ಯಾವುದೇ ಡ್ಯಾಮೇಜ್ ಆಗಬಾರದು ಅಷ್ಟೇ….

ಬಡವರ ಬಗ್ಗೆ ಉದ್ದುದ್ದ ಬೊಗಳೆ ಬಿಡುವ H D Kumaraswamy ಅವರು ತಮ್ಮ ಅತ್ತಿಗೆಯವರ ಈ ಮುತ್ತಿನಂಥ ಮಾತುಗಳ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ದಿನೇಶ್‌ ದೊಡ್ಡಮನೆ ಎಂಬವರು ಈ ಕುರಿತು ಪೋಸ್ಟ್‌ ಮಾಡಿದ್ದು, ಒಂದೂವರೆ ಕೋಟಿ ಕಾರು, ಮೈ ತುಂಬಾ ಬಂಗಾರ, ಹತ್ತು ತಲೆ ಮಾರು ಕೂತು ತಿಂದರೂ ಕರಗದ ಆಸ್ತಿ, ಮಾವ ಮಾಜಿ ಪ್ರಧಾನಿ, ಮೈದುನ ಮಾಜಿ ಸಿಎಂ, ಗಂಡ ಮಾಜಿ ಸಚಿವ, ನಾದಿನಿ ಮಾಜಿ ಶಾಸಕಿ, ಒಬ್ಬ ಮಗ ಎಂಪಿ, ಇನ್ನೊಬ್ಬ ಮಗ ಎಂಎಲ್ಸಿ, ಇನ್ನೂ ನೀವು ಜಿಪಂ ಮಾಜಿ ಅಧ್ಯಕ್ಷರು ಇಷ್ಟೆಲ್ಲಾ ಇರುವ ನಿಮಗೆ ಅಹಂಕಾರ, ದುರಹಂಕಾರ ಸರ್ವೇ ಸಾಮಾನ್ಯ ಬಿಡಿ…
ಒಬ್ಬ ವ್ಯಕ್ತಿಯ ಜೀವಕ್ಕಿಂತ ನಿನ್ನ ಒಂದೂವರೆ ಕೋಟಿ ಕಾರಿನ 150 ರೂಪಾಯಿ ನಂಬರ್ ಪ್ಲೇಟ್ ಹೆಚ್ಚಾಯಿತಲ್ಲ ತಾಯಿ. ಸಾಯಂಗಿದ್ರೆ ನೀನು ಸಾಯಬೇಕಿತ್ತು ಬಸ್ಸಿಗೆ ಏನಾದ್ರೂ ಸಿಕ್ಕಾಕೊಂಡು, ನನ್ನ ಕಾರ್ ಬೇಕಿತ್ತಾ, ನನ್ನ 1.5 ಕೋಟಿ ರೂಪಾಯಿ ಕಾರಿನ ನಂಬರ್ ಪ್ಲೇಟ್ ಹಾಳು ಮಾಡಿ ಬಿಟ್ಟಲ್ಲ,  ಇದು ದರ್ಪದ, ದುರಹಂಕಾರದ ಮಾತು ಮಾತ್ರವಲ್ಲ ಶ್ರೀಮಂತಿಕೆಯ ಮದ ಕೂಡ ತಲೆಗೆ ಹತ್ತಿದೆ ಎಂದರೆ ತಪ್ಪಾಗಲಾರದು, ಬಡವರನ್ನು ಜನ ಸಾಮಾನ್ಯರನ್ನು ನೀವುಗಳು ಕಾಣುವ ಪರಿ ಇದು. ನಿಮ್ಮಂತವರನ್ನು ನೋಡ್ತಾ ಇದ್ರೆ ಫ್ರಾನ್ಸಿನ ಲೂಯಿ ದೊರೆಗಳು ನೆನಪಾಗಗಾದೇ ಇರರು. ಬಹುಶಃ ಅಪಘಾತದಲ್ಲಿ ಭಾಗಿಯಾದ ವ್ಯಕ್ತಿ ಕೂಡ ಆಕೆಯ ಹಿಂಬಾಲಕ ಆಗಿದ್ದರು ಆಗಿರಬಹುದು ಮತ್ತೆ ಚುನಾವಣೆ ಬಂದಾಗ ಅದೇ ವ್ಯಕ್ತಿಗೆ ಇಂದಿನ ಅವಮಾನ ಮರೆತು ವೋಟ್ ಹಾಕುವುದರಲ್ಲಿ ಅನುಮಾನ ಕೂಡ ಇಲ್ಲ ಅಥವಾ ನಾಳೆ ಮಾದ್ಯಮದ ಮುಂದೆ ಅಮ್ಮವರು ಹಾಗೆ ಹೇಳಿಲ್ಲ ನನ್ನದೇ ತಪ್ಪು ಎನ್ನುವ ಹೇಳಿಕೆ ನೀಡಲೂಬಹುದು. ಆದ್ರೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ..?
ಜನ ಸಾಮಾನ್ಯರಾದ ನಾವುಗಳು ವಿಚಾರ ಮಾಡುವುದು ಬಹಳಷ್ಟಿದೆ ನನ್ನದು ಆ ಪಕ್ಷ ನನ್ನದು ಈ ಪಕ್ಷ ಅಂತ ಕಿತ್ತಾಡ್ತಾ ಇರುತ್ತೇವೆ ಹೊರತು ಇಂಥ ವಿಚಾರಗಳನ್ನು ಧೈರ್ಯವಾಗಿ ಖಂಡಿಸುವುದು ಇಲ್ಲ, ಇಂಥವರ ವಿರುದ್ಧ ಯೋಗ್ಯರನ್ನು ಆಯ್ಕೆ ಮಾಡುವುದು ಇಲ್ಲ ಎಂದು ಬರೆದುಕೊಂಡಿದ್ದಾರೆ.

https://m.facebook.com/story.php?story_fbid=pfbid02rriCzFnZ2TUQAuPfb2SFTJTDp5eRCP1rWV5UkDqhT5ZGtdcAuFLjAgUKZUVuDq8vl&id=100011214451587&mibextid=RtaFA8

 

https://m.facebook.com/story.php?story_fbid=pfbid021eiv9wJDwgYiK5PwRB9p6J3UPsC5DNpE23wf3dW2Xmsh58yPgMVbU2nKpCL2vUF9l&id=100002096847608&mibextid=RtaFA8

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...