Homeಮುಖಪುಟಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ...

ಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ ಸೇತುವೆ

- Advertisement -
- Advertisement -

ಮರಾಠಿ ಮಾತೃಭಾಷೆಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಮತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ-ಮರಾಠಿ ಸಾಹಿತ್ಯದ ನಡುವೆ ಪ್ರಮುಖ ಕೊಂಡಿಗಳಲ್ಲಿ ಒಬ್ಬರು. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬೇಂದ್ರೆಯವರಿಗೆ ಪುನೇರಿ ಎನ್ನಬೇಕೋ? ಕಾನಡಿ ಎನ್ನಬೇಕೋ? ಯಾಕೆಂದರೆ ಕನ್ನಡದ ವರಕವಿ ಅವರು. ಈ ಹಿನ್ನೆಲೆಯಲ್ಲಿ, ಇವತ್ತಿನ ಕನ್ನಡ-ಮರಾಠಿ ಅಥವಾ ಕರ್ನಾಟಕ-ಮಹಾರಾಷ್ಟ್ರ ಅಥವಾ ಬೆಳಗಾವಿ ಗಡಿ ವಿವಾದವನ್ನು ಯಾವ ರೀತಿ ಗ್ರಹಿಸಬೇಕು ಅನ್ನುವ ಪ್ರಶ್ನೆ ಎದ್ದೇಳುತ್ತದೆ. ಭಾಷೆ ಹಾಗೂ ಮನಸ್ಸಿಗೆ ಯಾವುದೇ ಗಡಿ ಇಲ್ಲವೆಂಬುವುದಕ್ಕೆ ಬೇಂದ್ರ್ರೆಯವರಿಗಿಂತ ಉತ್ತಮ ಉದಾಹರಣೆ ಬೇಕೇ? ಪೂನಾದ ಕಾಮರ್ಸ ಕಾಲೇಜಿನಲ್ಲಿ 1942-1943ರ ನಡುವೆ ಮತ್ತು 1994ರಲ್ಲಿ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ವೃತ್ತಿ ಮಾಡಿದರು. ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಾಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು. ಹೀಗೆ ಕನ್ನಡ-ಮರಾಠಿ ದ್ವಿಭಾಷಾ ಪರಿಸರದಲ್ಲಿ ಬೆಳೆದ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರ ಮೇಲೆ ದ್ವಿಸಂಸ್ಕೃತಿಗಳ ಪ್ರಭಾವ ವಿಫುಲವಾಗಿದೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ.

1929ರಲ್ಲಿ ಬೆಳಗಾವಿಯಲ್ಲಿ ಮಾಸ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ’ಹಕ್ಕಿ ಹಾರುತಿದೆ ನೋಡಿದಿರಾ’ ಕವನವನ್ನು ವಾಚಿಸಿದಾಗ, ಸಭಿಕರೆಲ್ಲಾ ಮಂತ್ರಮುಗ್ಧರಾಗಿದ್ದು ಈಗ ದಂತಕಥೆ. ಆಗ ಬೇಂದ್ರೆಯವರಿಗೆ ಕೇವಲ ಮೂವತ್ಮೂರು ವರ್ಷ.

1930ರಲ್ಲಿ ಮೊದಲ ಬಾರಿಗೆ ಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ’ನರಬಲಿ’ ಕವನ ಪ್ರಕಟವಾಯಿತು. ತದನಂತರದಲ್ಲಿ 1932ರಲ್ಲಿ ಪ್ರಕಟವಾದ ’ಗರಿ’ ಕವನ ಸಂಕಲನದಲ್ಲಿ ’ನರಬಲಿ’ ಕವನ ಮರುಪ್ರಕಟವಾಯಿತು. ’ನರಬಲಿ’ ಕವನ ಪುಸ್ತಕ ರೂಪದಲ್ಲಿ ಬಂದಂತಹ ಸಂದರ್ಭದಲ್ಲಿ, ಅಂದಿನ ಸರಕಾರ ಬೇಂದ್ರೆ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಿ, (ಬಂಗಾಳದಲ್ಲಿ ನಡೆದ ಮಾರಣಹೋಮವನ್ನು ಕುರಿತು ಬರೆದದ್ದು ’ನರಬಲಿ’ ಕವಿತೆ) ಅಂದಿನ ಸರಕಾರ ಅವರನ್ನು 3 ತಿಂಗಳ ಕಾಲ ಬೆಳಗಾವಿಯ ಹಿಂಡಲಗಿ ಸೆರೆಮನೆಗೆ ಕಳುಹಿಸಿತ್ತು ಹಾಗೂ ಬಿಡುಗಡೆಯ ನಂತರವೂ ಬೇಂದ್ರೆಯವರಿಗೆ ಯಾರೂ ನೌಕರಿ ಕೊಡಬಾರದೆನ್ನುವ ಆದೇಶ ಹೊರಡಿಸಿತ್ತು. 1932ರ ಈ ಐತಿಹಾಸಿಕ ಘಟನೆಯ ಕುರಿತು ಹೆಳವನಿದ್ದಲ್ಲಿ ಹೊಳೆ ಬಂದಿತು (ಸಖೀಗೀತ) ಎಂದು ನೆನಪಿಸಿಕೊಂಡಿದ್ದಾರೆ.

ಬೇಂದ್ರೆಯವರ ಕೃತಿಗಳು ಕನ್ನಡದಲ್ಲಿ ನಾಟಕಗಳನ್ನು, ವಿಮರ್ಶಾ ಗ್ರಂಥಗಳನ್ನು, ಕವನ ಸಂಕಲನಗಳನ್ನು ಒಳಗೊಂಡಿವೆ; ಕೆ. ವಿ. ಅಯ್ಯರ್ ಅವರ ’ಶಾಂತಲಾ’ ಕಾದಂಬರಿಯನ್ನು ಮರಾಠಿಗೆ ಅನುವಾದಿಸಿದ್ದಾರೆ. ಗೀತಾ ಜಾಗರಣ(ವ್ಯಾಖ್ಯಾನ), ವಿಠ್ಠಲ ಪಾಂಡುರಂಗ (ಕವನ ಸಂಕಲನ), ವಿಠ್ಠಲ ಸಂಪ್ರದಾಯ (ವ್ಯಾಖ್ಯಾನ), ಸಂತ ಮಹತಾಂಚಾ ಪೂರ್ಣ ಶಂಭು ವಿಠ್ಠಲ (ವ್ಯಾಖ್ಯಾನ), ಸಂವಾದ ಕವಿತಾ ಸಂಗ್ರಹಗಳು ಮರಾಠಿಯಲ್ಲಿರುವ ಬೇಂದ್ರೆ ಅವರ ಇತರ ಕೃತಿಗಳು. ಮಹಾರಾಷ್ಟ್ರದಿಂದ ಹೊರಡುವ ’ಸನ್ಮತಿ’ ಎನ್ನುವ ಮರಾಠಿ ಭಾಷೆಯ ಪತ್ರಿಕೆಯಲ್ಲಿಯೂ ಬೇಂದ್ರೆಯವರು ಲೇಖನಗಳನ್ನು ಬರೆದಿದ್ದುಂಟು. 1965ರಲ್ಲಿ ಮರಾಠಿಯಲ್ಲಿ ರಚಿಸಿದ ’ಸಂವಾದ’ ಕೃತಿಗೆ ಕೇಳ್ಕರ್ ಬಹುಮಾನ ಪಡೆದಿದ್ದಾರೆ.

ಮಹಾಜನ ಆಯೋಗ ವರದಿಯ ಸಮಯ ಹಾಗೂ 1970ರಲ್ಲಿ ಬೆಳಗಾವಿಯಲ್ಲಿ ಗಡಿ ತಗಾದೆ ತಾರಕಕ್ಕೇರಿದಾಗ, ಕೆಲ ಪುಂಡರು ಧಾರವಾಡದಲ್ಲಿರುವ (ಇವಾಗಲೂ ಬೆಳಗಾವಿ ರಸ್ತೆಯಲ್ಲಿದೆ) ’ಮರಾಠಿ ಮಂಡಳ’ ಎಂಬ ಕಟ್ಟಡಕ್ಕೆ ಬೆಂಕಿ ಹಚ್ಚಿದಾಗ ಬೇಂದ್ರೆಯವರು ಅದನ್ನು ಖಂಡಿಸಿದ್ದಲ್ಲದೇ, ’ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸೀಮಾಭೂಮಿ ರುದ್ರ ಭೂಮಿಯಾಗದೇ ಶಿವಭೂಮಿಯಾಗಬೇಕು’ ಅನ್ನುವ ಮಾತನ್ನು ಅವರು ಆಡಿದ್ದು, ಅಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ರುದ್ರ ಅಂದರೆ ಭಯಂಕರ ಹಾಗೂ ಶಿವ ಅಂದರೆ ಸೌಮ್ಯ, ಒಳ್ಳೆಯದು ಎಂಬ ಹಿನ್ನೆಲೆಯಲ್ಲಿ ಅವರ ಮಾತನ್ನು ಇವತ್ತು ಮರಾಠಿ ಹಾಗೂ ಕನ್ನಡ ಬಂಧುಗಳು ಗ್ರಹಿಸಬಹುದಾಗಿದೆ.

1971 ಸಪ್ಟೆಂಬರ್ 12ರಲ್ಲಿ ಬೆಳಗಾವಿಯ ಆಝಾದ ಟಾಕೀಸ್‌ನಲ್ಲಿ (ಇವಾಗ ಈ ಟಾಕೀಸ್ ಬಂದ್ ಆಗಿದೆ) ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಂದಿನ ನಗರಸಭಾಧ್ಯಕ್ಷ ಶಿವಾಜಿರಾವ್ ಕಾಕತಕರ್ ಅವರು ಪ್ರೋತ್ಸಾಹ ನೀಡಿದ್ದನ್ನು ಬೆಳಗಾವಿ ಜನತೆ ನೆನಪಿಸಿಕೊಳ್ಳುತ್ತಿರುತ್ತದೆ. ಆ ಕಾರ್ಯಕ್ರಮದ ಸಮಾರೋಪದ ಅತಿಥಿ ಬೇಂದ್ರೆಯವರಾಗಿದ್ದರು.

ಇವತ್ತಿನ ಸಂದರ್ಭದಲ್ಲಿ ಬೆಳಗಾವಿಯನ್ನು ಕೇಂದ್ರವಾಗಿಸಿಕೊಂಡು ಗಡಿ ವಿವಾದಕ್ಕೆ ಮತ್ತೆ ಕಿಡಿ ಹಚ್ಚುವ ಕೆಲಸ ಆಗಾಗ್ಗೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಬೇಂದ್ರೆಯಂತಹ ಕವಿಗೆ ಮರಾಠಿ ಹಾಗೂ ಕನ್ನಡ ಪರಿಸರಗಳು ವೈರತ್ವವಾಗಿ ಕಾಣಲಿಲ್ಲ. ಅದೇ ರೀತಿ ಓದುಗ ರಸಿಕರಿಗೂ ಬೇಂದ್ರೆಯಾಗಲಿ ಅಥವಾ ಕನ್ನಡ-ಮರಾಠಿ ಸಾಹಿತ್ಯದಲ್ಲಾಗಲಿ, ವಾತಾವರಣದಲ್ಲಾಗಲಿ ವೈರ ಭಾವ ಕಾಣಲಿಲ್ಲ.

ಹಾಗೆಯೇ ಪೂನಾದ ಚಿತಳೆಯ ಬಾಕರವಡಿ ಹಾಗೂ ಧಾರವಾಡದ ಬಾಬುಸಿಂಗ ಪೇಡಾದ ಕಥೆ ಭಿನ್ನವಾಗಿಲ್ಲ. ವಂಶ ಪಾರಂಪರ್‍ಯವಾಗಿ ಮೂರ್‍ನಾಲ್ಕು ಪೀಳಿಗೆಗಳು ನಡೆಸಿಕೊಂಡು ಬರುತ್ತಿರುವ ಈ ತಿಂಡಿ ತಿನಿಸುಗಳಿಗೆ ಯಾವ ಗಡಿ ಇಲ್ಲ. ಬಾಕರವಡಿ ಹಾಗೂ ಪೇಡಾದ ನಡುವೆ ಬೆಳೆದ ಬೇಂದ್ರೆ ಕನ್ನಡಿಗರಿಗೆಷ್ಟೋ ಅಷ್ಟೇ ಮರಾಠಿಗರಿಗೂ ಪ್ರಿಯವಾದ ಕವಿ.

2021ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿಗೆ ಭಾಜನರಾದ ಪ್ರೊ ಎಚ್.ಎಸ್. ಶಿವಪ್ರಕಾಶ್ ಅವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಂತೆ: “ನನ್ನ ವ್ಯಾವಸ್ಥೆಯಲ್ಲಿ ಕಾವ್ಯ ಕಸುಬಿನ ಹಲವು ಗುಟ್ಟುಗಳನ್ನು ನಾನು ಕಲಿತದ್ದು ಬೇಂದ್ರೆ ಕಾವ್ಯದ ಮುಖೇಣ.” ಹೀಗೆ ಕನ್ನಡದ ಹಲವು ಹಿರಿಯ ಹಾಗೂ ಕಿರಿಯ ಕವಿಗಳಿಗೆ ಕನ್ನಡದ ವರಕವಿಯ ಪ್ರಭಾವವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ಅವರೊಬ್ಬ ’ಮರಾಠಿ ಮಾನುಸ್ ಅಂದು ಕನ್ನಡದ ಯಾವ ಮನಸ್ಸುಗಳೂ ಅವರನ್ನು ದೂರ ಇಟ್ಟಿಲ್ಲ. ಇದು ಇವತ್ತಿನ ಸೀಮಾಭೂಮಿ ಬೆಳಗಾವಿ ಜನರ (ಕನ್ನಡ ಹಾಗೂ ಮರಾಠಿ) ಸ್ಥಿತಿ ಹಾಗೂ ಮನಸ್ಥಿತಿಯೂ ಹೌದು. ಶತಮಾನ ಕಳೆದ ಮರಾಠಿ ಮಾತೃಭಾಷಿಕ ಕನ್ನಡದ ವರಕವಿ ಬೇಂದ್ರೆಯನ್ನು ಒಪ್ಪಿ ಅಪ್ಪಿಕೊಂಡವರ ಹಾಗೂ ಅರ್ಧ ಶತಮಾನ ಕಳೆದರೂ ಮಹಾಜನ ವರದಿಯನ್ನು ಒಪ್ಪದವರ ನಡುವೆ ಸಿಲುಕಿ ಬೇಯುತ್ತಿರುವುದು ಕನ್ನಡ-ಮರಾಠಿ ಎನ್ನುವ ಭೇದಭಾವವಿಲ್ಲದ ಬದುಕುತ್ತಿರುವ ಮುಗ್ಧ ಮನಸ್ಸುಗಳೇ ಹೊರತು ರಾಜಕಾರಣಿಗಳಲ್ಲ.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ೬ ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...