Homeಮುಖಪುಟಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ...

ಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ ಸೇತುವೆ

- Advertisement -
- Advertisement -

ಮರಾಠಿ ಮಾತೃಭಾಷೆಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಮತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ-ಮರಾಠಿ ಸಾಹಿತ್ಯದ ನಡುವೆ ಪ್ರಮುಖ ಕೊಂಡಿಗಳಲ್ಲಿ ಒಬ್ಬರು. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬೇಂದ್ರೆಯವರಿಗೆ ಪುನೇರಿ ಎನ್ನಬೇಕೋ? ಕಾನಡಿ ಎನ್ನಬೇಕೋ? ಯಾಕೆಂದರೆ ಕನ್ನಡದ ವರಕವಿ ಅವರು. ಈ ಹಿನ್ನೆಲೆಯಲ್ಲಿ, ಇವತ್ತಿನ ಕನ್ನಡ-ಮರಾಠಿ ಅಥವಾ ಕರ್ನಾಟಕ-ಮಹಾರಾಷ್ಟ್ರ ಅಥವಾ ಬೆಳಗಾವಿ ಗಡಿ ವಿವಾದವನ್ನು ಯಾವ ರೀತಿ ಗ್ರಹಿಸಬೇಕು ಅನ್ನುವ ಪ್ರಶ್ನೆ ಎದ್ದೇಳುತ್ತದೆ. ಭಾಷೆ ಹಾಗೂ ಮನಸ್ಸಿಗೆ ಯಾವುದೇ ಗಡಿ ಇಲ್ಲವೆಂಬುವುದಕ್ಕೆ ಬೇಂದ್ರ್ರೆಯವರಿಗಿಂತ ಉತ್ತಮ ಉದಾಹರಣೆ ಬೇಕೇ? ಪೂನಾದ ಕಾಮರ್ಸ ಕಾಲೇಜಿನಲ್ಲಿ 1942-1943ರ ನಡುವೆ ಮತ್ತು 1994ರಲ್ಲಿ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ವೃತ್ತಿ ಮಾಡಿದರು. ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಾಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು. ಹೀಗೆ ಕನ್ನಡ-ಮರಾಠಿ ದ್ವಿಭಾಷಾ ಪರಿಸರದಲ್ಲಿ ಬೆಳೆದ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರ ಮೇಲೆ ದ್ವಿಸಂಸ್ಕೃತಿಗಳ ಪ್ರಭಾವ ವಿಫುಲವಾಗಿದೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ.

1929ರಲ್ಲಿ ಬೆಳಗಾವಿಯಲ್ಲಿ ಮಾಸ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ’ಹಕ್ಕಿ ಹಾರುತಿದೆ ನೋಡಿದಿರಾ’ ಕವನವನ್ನು ವಾಚಿಸಿದಾಗ, ಸಭಿಕರೆಲ್ಲಾ ಮಂತ್ರಮುಗ್ಧರಾಗಿದ್ದು ಈಗ ದಂತಕಥೆ. ಆಗ ಬೇಂದ್ರೆಯವರಿಗೆ ಕೇವಲ ಮೂವತ್ಮೂರು ವರ್ಷ.

1930ರಲ್ಲಿ ಮೊದಲ ಬಾರಿಗೆ ಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ’ನರಬಲಿ’ ಕವನ ಪ್ರಕಟವಾಯಿತು. ತದನಂತರದಲ್ಲಿ 1932ರಲ್ಲಿ ಪ್ರಕಟವಾದ ’ಗರಿ’ ಕವನ ಸಂಕಲನದಲ್ಲಿ ’ನರಬಲಿ’ ಕವನ ಮರುಪ್ರಕಟವಾಯಿತು. ’ನರಬಲಿ’ ಕವನ ಪುಸ್ತಕ ರೂಪದಲ್ಲಿ ಬಂದಂತಹ ಸಂದರ್ಭದಲ್ಲಿ, ಅಂದಿನ ಸರಕಾರ ಬೇಂದ್ರೆ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಿ, (ಬಂಗಾಳದಲ್ಲಿ ನಡೆದ ಮಾರಣಹೋಮವನ್ನು ಕುರಿತು ಬರೆದದ್ದು ’ನರಬಲಿ’ ಕವಿತೆ) ಅಂದಿನ ಸರಕಾರ ಅವರನ್ನು 3 ತಿಂಗಳ ಕಾಲ ಬೆಳಗಾವಿಯ ಹಿಂಡಲಗಿ ಸೆರೆಮನೆಗೆ ಕಳುಹಿಸಿತ್ತು ಹಾಗೂ ಬಿಡುಗಡೆಯ ನಂತರವೂ ಬೇಂದ್ರೆಯವರಿಗೆ ಯಾರೂ ನೌಕರಿ ಕೊಡಬಾರದೆನ್ನುವ ಆದೇಶ ಹೊರಡಿಸಿತ್ತು. 1932ರ ಈ ಐತಿಹಾಸಿಕ ಘಟನೆಯ ಕುರಿತು ಹೆಳವನಿದ್ದಲ್ಲಿ ಹೊಳೆ ಬಂದಿತು (ಸಖೀಗೀತ) ಎಂದು ನೆನಪಿಸಿಕೊಂಡಿದ್ದಾರೆ.

ಬೇಂದ್ರೆಯವರ ಕೃತಿಗಳು ಕನ್ನಡದಲ್ಲಿ ನಾಟಕಗಳನ್ನು, ವಿಮರ್ಶಾ ಗ್ರಂಥಗಳನ್ನು, ಕವನ ಸಂಕಲನಗಳನ್ನು ಒಳಗೊಂಡಿವೆ; ಕೆ. ವಿ. ಅಯ್ಯರ್ ಅವರ ’ಶಾಂತಲಾ’ ಕಾದಂಬರಿಯನ್ನು ಮರಾಠಿಗೆ ಅನುವಾದಿಸಿದ್ದಾರೆ. ಗೀತಾ ಜಾಗರಣ(ವ್ಯಾಖ್ಯಾನ), ವಿಠ್ಠಲ ಪಾಂಡುರಂಗ (ಕವನ ಸಂಕಲನ), ವಿಠ್ಠಲ ಸಂಪ್ರದಾಯ (ವ್ಯಾಖ್ಯಾನ), ಸಂತ ಮಹತಾಂಚಾ ಪೂರ್ಣ ಶಂಭು ವಿಠ್ಠಲ (ವ್ಯಾಖ್ಯಾನ), ಸಂವಾದ ಕವಿತಾ ಸಂಗ್ರಹಗಳು ಮರಾಠಿಯಲ್ಲಿರುವ ಬೇಂದ್ರೆ ಅವರ ಇತರ ಕೃತಿಗಳು. ಮಹಾರಾಷ್ಟ್ರದಿಂದ ಹೊರಡುವ ’ಸನ್ಮತಿ’ ಎನ್ನುವ ಮರಾಠಿ ಭಾಷೆಯ ಪತ್ರಿಕೆಯಲ್ಲಿಯೂ ಬೇಂದ್ರೆಯವರು ಲೇಖನಗಳನ್ನು ಬರೆದಿದ್ದುಂಟು. 1965ರಲ್ಲಿ ಮರಾಠಿಯಲ್ಲಿ ರಚಿಸಿದ ’ಸಂವಾದ’ ಕೃತಿಗೆ ಕೇಳ್ಕರ್ ಬಹುಮಾನ ಪಡೆದಿದ್ದಾರೆ.

ಮಹಾಜನ ಆಯೋಗ ವರದಿಯ ಸಮಯ ಹಾಗೂ 1970ರಲ್ಲಿ ಬೆಳಗಾವಿಯಲ್ಲಿ ಗಡಿ ತಗಾದೆ ತಾರಕಕ್ಕೇರಿದಾಗ, ಕೆಲ ಪುಂಡರು ಧಾರವಾಡದಲ್ಲಿರುವ (ಇವಾಗಲೂ ಬೆಳಗಾವಿ ರಸ್ತೆಯಲ್ಲಿದೆ) ’ಮರಾಠಿ ಮಂಡಳ’ ಎಂಬ ಕಟ್ಟಡಕ್ಕೆ ಬೆಂಕಿ ಹಚ್ಚಿದಾಗ ಬೇಂದ್ರೆಯವರು ಅದನ್ನು ಖಂಡಿಸಿದ್ದಲ್ಲದೇ, ’ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸೀಮಾಭೂಮಿ ರುದ್ರ ಭೂಮಿಯಾಗದೇ ಶಿವಭೂಮಿಯಾಗಬೇಕು’ ಅನ್ನುವ ಮಾತನ್ನು ಅವರು ಆಡಿದ್ದು, ಅಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ರುದ್ರ ಅಂದರೆ ಭಯಂಕರ ಹಾಗೂ ಶಿವ ಅಂದರೆ ಸೌಮ್ಯ, ಒಳ್ಳೆಯದು ಎಂಬ ಹಿನ್ನೆಲೆಯಲ್ಲಿ ಅವರ ಮಾತನ್ನು ಇವತ್ತು ಮರಾಠಿ ಹಾಗೂ ಕನ್ನಡ ಬಂಧುಗಳು ಗ್ರಹಿಸಬಹುದಾಗಿದೆ.

1971 ಸಪ್ಟೆಂಬರ್ 12ರಲ್ಲಿ ಬೆಳಗಾವಿಯ ಆಝಾದ ಟಾಕೀಸ್‌ನಲ್ಲಿ (ಇವಾಗ ಈ ಟಾಕೀಸ್ ಬಂದ್ ಆಗಿದೆ) ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಂದಿನ ನಗರಸಭಾಧ್ಯಕ್ಷ ಶಿವಾಜಿರಾವ್ ಕಾಕತಕರ್ ಅವರು ಪ್ರೋತ್ಸಾಹ ನೀಡಿದ್ದನ್ನು ಬೆಳಗಾವಿ ಜನತೆ ನೆನಪಿಸಿಕೊಳ್ಳುತ್ತಿರುತ್ತದೆ. ಆ ಕಾರ್ಯಕ್ರಮದ ಸಮಾರೋಪದ ಅತಿಥಿ ಬೇಂದ್ರೆಯವರಾಗಿದ್ದರು.

ಇವತ್ತಿನ ಸಂದರ್ಭದಲ್ಲಿ ಬೆಳಗಾವಿಯನ್ನು ಕೇಂದ್ರವಾಗಿಸಿಕೊಂಡು ಗಡಿ ವಿವಾದಕ್ಕೆ ಮತ್ತೆ ಕಿಡಿ ಹಚ್ಚುವ ಕೆಲಸ ಆಗಾಗ್ಗೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಬೇಂದ್ರೆಯಂತಹ ಕವಿಗೆ ಮರಾಠಿ ಹಾಗೂ ಕನ್ನಡ ಪರಿಸರಗಳು ವೈರತ್ವವಾಗಿ ಕಾಣಲಿಲ್ಲ. ಅದೇ ರೀತಿ ಓದುಗ ರಸಿಕರಿಗೂ ಬೇಂದ್ರೆಯಾಗಲಿ ಅಥವಾ ಕನ್ನಡ-ಮರಾಠಿ ಸಾಹಿತ್ಯದಲ್ಲಾಗಲಿ, ವಾತಾವರಣದಲ್ಲಾಗಲಿ ವೈರ ಭಾವ ಕಾಣಲಿಲ್ಲ.

ಹಾಗೆಯೇ ಪೂನಾದ ಚಿತಳೆಯ ಬಾಕರವಡಿ ಹಾಗೂ ಧಾರವಾಡದ ಬಾಬುಸಿಂಗ ಪೇಡಾದ ಕಥೆ ಭಿನ್ನವಾಗಿಲ್ಲ. ವಂಶ ಪಾರಂಪರ್‍ಯವಾಗಿ ಮೂರ್‍ನಾಲ್ಕು ಪೀಳಿಗೆಗಳು ನಡೆಸಿಕೊಂಡು ಬರುತ್ತಿರುವ ಈ ತಿಂಡಿ ತಿನಿಸುಗಳಿಗೆ ಯಾವ ಗಡಿ ಇಲ್ಲ. ಬಾಕರವಡಿ ಹಾಗೂ ಪೇಡಾದ ನಡುವೆ ಬೆಳೆದ ಬೇಂದ್ರೆ ಕನ್ನಡಿಗರಿಗೆಷ್ಟೋ ಅಷ್ಟೇ ಮರಾಠಿಗರಿಗೂ ಪ್ರಿಯವಾದ ಕವಿ.

2021ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿಗೆ ಭಾಜನರಾದ ಪ್ರೊ ಎಚ್.ಎಸ್. ಶಿವಪ್ರಕಾಶ್ ಅವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಂತೆ: “ನನ್ನ ವ್ಯಾವಸ್ಥೆಯಲ್ಲಿ ಕಾವ್ಯ ಕಸುಬಿನ ಹಲವು ಗುಟ್ಟುಗಳನ್ನು ನಾನು ಕಲಿತದ್ದು ಬೇಂದ್ರೆ ಕಾವ್ಯದ ಮುಖೇಣ.” ಹೀಗೆ ಕನ್ನಡದ ಹಲವು ಹಿರಿಯ ಹಾಗೂ ಕಿರಿಯ ಕವಿಗಳಿಗೆ ಕನ್ನಡದ ವರಕವಿಯ ಪ್ರಭಾವವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ಅವರೊಬ್ಬ ’ಮರಾಠಿ ಮಾನುಸ್ ಅಂದು ಕನ್ನಡದ ಯಾವ ಮನಸ್ಸುಗಳೂ ಅವರನ್ನು ದೂರ ಇಟ್ಟಿಲ್ಲ. ಇದು ಇವತ್ತಿನ ಸೀಮಾಭೂಮಿ ಬೆಳಗಾವಿ ಜನರ (ಕನ್ನಡ ಹಾಗೂ ಮರಾಠಿ) ಸ್ಥಿತಿ ಹಾಗೂ ಮನಸ್ಥಿತಿಯೂ ಹೌದು. ಶತಮಾನ ಕಳೆದ ಮರಾಠಿ ಮಾತೃಭಾಷಿಕ ಕನ್ನಡದ ವರಕವಿ ಬೇಂದ್ರೆಯನ್ನು ಒಪ್ಪಿ ಅಪ್ಪಿಕೊಂಡವರ ಹಾಗೂ ಅರ್ಧ ಶತಮಾನ ಕಳೆದರೂ ಮಹಾಜನ ವರದಿಯನ್ನು ಒಪ್ಪದವರ ನಡುವೆ ಸಿಲುಕಿ ಬೇಯುತ್ತಿರುವುದು ಕನ್ನಡ-ಮರಾಠಿ ಎನ್ನುವ ಭೇದಭಾವವಿಲ್ಲದ ಬದುಕುತ್ತಿರುವ ಮುಗ್ಧ ಮನಸ್ಸುಗಳೇ ಹೊರತು ರಾಜಕಾರಣಿಗಳಲ್ಲ.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ೬ ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...