Homeಮುಖಪುಟಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ...

ಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ ಸೇತುವೆ

- Advertisement -
- Advertisement -

ಮರಾಠಿ ಮಾತೃಭಾಷೆಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಮತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ-ಮರಾಠಿ ಸಾಹಿತ್ಯದ ನಡುವೆ ಪ್ರಮುಖ ಕೊಂಡಿಗಳಲ್ಲಿ ಒಬ್ಬರು. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬೇಂದ್ರೆಯವರಿಗೆ ಪುನೇರಿ ಎನ್ನಬೇಕೋ? ಕಾನಡಿ ಎನ್ನಬೇಕೋ? ಯಾಕೆಂದರೆ ಕನ್ನಡದ ವರಕವಿ ಅವರು. ಈ ಹಿನ್ನೆಲೆಯಲ್ಲಿ, ಇವತ್ತಿನ ಕನ್ನಡ-ಮರಾಠಿ ಅಥವಾ ಕರ್ನಾಟಕ-ಮಹಾರಾಷ್ಟ್ರ ಅಥವಾ ಬೆಳಗಾವಿ ಗಡಿ ವಿವಾದವನ್ನು ಯಾವ ರೀತಿ ಗ್ರಹಿಸಬೇಕು ಅನ್ನುವ ಪ್ರಶ್ನೆ ಎದ್ದೇಳುತ್ತದೆ. ಭಾಷೆ ಹಾಗೂ ಮನಸ್ಸಿಗೆ ಯಾವುದೇ ಗಡಿ ಇಲ್ಲವೆಂಬುವುದಕ್ಕೆ ಬೇಂದ್ರ್ರೆಯವರಿಗಿಂತ ಉತ್ತಮ ಉದಾಹರಣೆ ಬೇಕೇ? ಪೂನಾದ ಕಾಮರ್ಸ ಕಾಲೇಜಿನಲ್ಲಿ 1942-1943ರ ನಡುವೆ ಮತ್ತು 1994ರಲ್ಲಿ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ವೃತ್ತಿ ಮಾಡಿದರು. ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಾಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು. ಹೀಗೆ ಕನ್ನಡ-ಮರಾಠಿ ದ್ವಿಭಾಷಾ ಪರಿಸರದಲ್ಲಿ ಬೆಳೆದ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರ ಮೇಲೆ ದ್ವಿಸಂಸ್ಕೃತಿಗಳ ಪ್ರಭಾವ ವಿಫುಲವಾಗಿದೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ.

1929ರಲ್ಲಿ ಬೆಳಗಾವಿಯಲ್ಲಿ ಮಾಸ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ’ಹಕ್ಕಿ ಹಾರುತಿದೆ ನೋಡಿದಿರಾ’ ಕವನವನ್ನು ವಾಚಿಸಿದಾಗ, ಸಭಿಕರೆಲ್ಲಾ ಮಂತ್ರಮುಗ್ಧರಾಗಿದ್ದು ಈಗ ದಂತಕಥೆ. ಆಗ ಬೇಂದ್ರೆಯವರಿಗೆ ಕೇವಲ ಮೂವತ್ಮೂರು ವರ್ಷ.

1930ರಲ್ಲಿ ಮೊದಲ ಬಾರಿಗೆ ಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ’ನರಬಲಿ’ ಕವನ ಪ್ರಕಟವಾಯಿತು. ತದನಂತರದಲ್ಲಿ 1932ರಲ್ಲಿ ಪ್ರಕಟವಾದ ’ಗರಿ’ ಕವನ ಸಂಕಲನದಲ್ಲಿ ’ನರಬಲಿ’ ಕವನ ಮರುಪ್ರಕಟವಾಯಿತು. ’ನರಬಲಿ’ ಕವನ ಪುಸ್ತಕ ರೂಪದಲ್ಲಿ ಬಂದಂತಹ ಸಂದರ್ಭದಲ್ಲಿ, ಅಂದಿನ ಸರಕಾರ ಬೇಂದ್ರೆ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಿ, (ಬಂಗಾಳದಲ್ಲಿ ನಡೆದ ಮಾರಣಹೋಮವನ್ನು ಕುರಿತು ಬರೆದದ್ದು ’ನರಬಲಿ’ ಕವಿತೆ) ಅಂದಿನ ಸರಕಾರ ಅವರನ್ನು 3 ತಿಂಗಳ ಕಾಲ ಬೆಳಗಾವಿಯ ಹಿಂಡಲಗಿ ಸೆರೆಮನೆಗೆ ಕಳುಹಿಸಿತ್ತು ಹಾಗೂ ಬಿಡುಗಡೆಯ ನಂತರವೂ ಬೇಂದ್ರೆಯವರಿಗೆ ಯಾರೂ ನೌಕರಿ ಕೊಡಬಾರದೆನ್ನುವ ಆದೇಶ ಹೊರಡಿಸಿತ್ತು. 1932ರ ಈ ಐತಿಹಾಸಿಕ ಘಟನೆಯ ಕುರಿತು ಹೆಳವನಿದ್ದಲ್ಲಿ ಹೊಳೆ ಬಂದಿತು (ಸಖೀಗೀತ) ಎಂದು ನೆನಪಿಸಿಕೊಂಡಿದ್ದಾರೆ.

ಬೇಂದ್ರೆಯವರ ಕೃತಿಗಳು ಕನ್ನಡದಲ್ಲಿ ನಾಟಕಗಳನ್ನು, ವಿಮರ್ಶಾ ಗ್ರಂಥಗಳನ್ನು, ಕವನ ಸಂಕಲನಗಳನ್ನು ಒಳಗೊಂಡಿವೆ; ಕೆ. ವಿ. ಅಯ್ಯರ್ ಅವರ ’ಶಾಂತಲಾ’ ಕಾದಂಬರಿಯನ್ನು ಮರಾಠಿಗೆ ಅನುವಾದಿಸಿದ್ದಾರೆ. ಗೀತಾ ಜಾಗರಣ(ವ್ಯಾಖ್ಯಾನ), ವಿಠ್ಠಲ ಪಾಂಡುರಂಗ (ಕವನ ಸಂಕಲನ), ವಿಠ್ಠಲ ಸಂಪ್ರದಾಯ (ವ್ಯಾಖ್ಯಾನ), ಸಂತ ಮಹತಾಂಚಾ ಪೂರ್ಣ ಶಂಭು ವಿಠ್ಠಲ (ವ್ಯಾಖ್ಯಾನ), ಸಂವಾದ ಕವಿತಾ ಸಂಗ್ರಹಗಳು ಮರಾಠಿಯಲ್ಲಿರುವ ಬೇಂದ್ರೆ ಅವರ ಇತರ ಕೃತಿಗಳು. ಮಹಾರಾಷ್ಟ್ರದಿಂದ ಹೊರಡುವ ’ಸನ್ಮತಿ’ ಎನ್ನುವ ಮರಾಠಿ ಭಾಷೆಯ ಪತ್ರಿಕೆಯಲ್ಲಿಯೂ ಬೇಂದ್ರೆಯವರು ಲೇಖನಗಳನ್ನು ಬರೆದಿದ್ದುಂಟು. 1965ರಲ್ಲಿ ಮರಾಠಿಯಲ್ಲಿ ರಚಿಸಿದ ’ಸಂವಾದ’ ಕೃತಿಗೆ ಕೇಳ್ಕರ್ ಬಹುಮಾನ ಪಡೆದಿದ್ದಾರೆ.

ಮಹಾಜನ ಆಯೋಗ ವರದಿಯ ಸಮಯ ಹಾಗೂ 1970ರಲ್ಲಿ ಬೆಳಗಾವಿಯಲ್ಲಿ ಗಡಿ ತಗಾದೆ ತಾರಕಕ್ಕೇರಿದಾಗ, ಕೆಲ ಪುಂಡರು ಧಾರವಾಡದಲ್ಲಿರುವ (ಇವಾಗಲೂ ಬೆಳಗಾವಿ ರಸ್ತೆಯಲ್ಲಿದೆ) ’ಮರಾಠಿ ಮಂಡಳ’ ಎಂಬ ಕಟ್ಟಡಕ್ಕೆ ಬೆಂಕಿ ಹಚ್ಚಿದಾಗ ಬೇಂದ್ರೆಯವರು ಅದನ್ನು ಖಂಡಿಸಿದ್ದಲ್ಲದೇ, ’ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸೀಮಾಭೂಮಿ ರುದ್ರ ಭೂಮಿಯಾಗದೇ ಶಿವಭೂಮಿಯಾಗಬೇಕು’ ಅನ್ನುವ ಮಾತನ್ನು ಅವರು ಆಡಿದ್ದು, ಅಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ರುದ್ರ ಅಂದರೆ ಭಯಂಕರ ಹಾಗೂ ಶಿವ ಅಂದರೆ ಸೌಮ್ಯ, ಒಳ್ಳೆಯದು ಎಂಬ ಹಿನ್ನೆಲೆಯಲ್ಲಿ ಅವರ ಮಾತನ್ನು ಇವತ್ತು ಮರಾಠಿ ಹಾಗೂ ಕನ್ನಡ ಬಂಧುಗಳು ಗ್ರಹಿಸಬಹುದಾಗಿದೆ.

1971 ಸಪ್ಟೆಂಬರ್ 12ರಲ್ಲಿ ಬೆಳಗಾವಿಯ ಆಝಾದ ಟಾಕೀಸ್‌ನಲ್ಲಿ (ಇವಾಗ ಈ ಟಾಕೀಸ್ ಬಂದ್ ಆಗಿದೆ) ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಂದಿನ ನಗರಸಭಾಧ್ಯಕ್ಷ ಶಿವಾಜಿರಾವ್ ಕಾಕತಕರ್ ಅವರು ಪ್ರೋತ್ಸಾಹ ನೀಡಿದ್ದನ್ನು ಬೆಳಗಾವಿ ಜನತೆ ನೆನಪಿಸಿಕೊಳ್ಳುತ್ತಿರುತ್ತದೆ. ಆ ಕಾರ್ಯಕ್ರಮದ ಸಮಾರೋಪದ ಅತಿಥಿ ಬೇಂದ್ರೆಯವರಾಗಿದ್ದರು.

ಇವತ್ತಿನ ಸಂದರ್ಭದಲ್ಲಿ ಬೆಳಗಾವಿಯನ್ನು ಕೇಂದ್ರವಾಗಿಸಿಕೊಂಡು ಗಡಿ ವಿವಾದಕ್ಕೆ ಮತ್ತೆ ಕಿಡಿ ಹಚ್ಚುವ ಕೆಲಸ ಆಗಾಗ್ಗೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಬೇಂದ್ರೆಯಂತಹ ಕವಿಗೆ ಮರಾಠಿ ಹಾಗೂ ಕನ್ನಡ ಪರಿಸರಗಳು ವೈರತ್ವವಾಗಿ ಕಾಣಲಿಲ್ಲ. ಅದೇ ರೀತಿ ಓದುಗ ರಸಿಕರಿಗೂ ಬೇಂದ್ರೆಯಾಗಲಿ ಅಥವಾ ಕನ್ನಡ-ಮರಾಠಿ ಸಾಹಿತ್ಯದಲ್ಲಾಗಲಿ, ವಾತಾವರಣದಲ್ಲಾಗಲಿ ವೈರ ಭಾವ ಕಾಣಲಿಲ್ಲ.

ಹಾಗೆಯೇ ಪೂನಾದ ಚಿತಳೆಯ ಬಾಕರವಡಿ ಹಾಗೂ ಧಾರವಾಡದ ಬಾಬುಸಿಂಗ ಪೇಡಾದ ಕಥೆ ಭಿನ್ನವಾಗಿಲ್ಲ. ವಂಶ ಪಾರಂಪರ್‍ಯವಾಗಿ ಮೂರ್‍ನಾಲ್ಕು ಪೀಳಿಗೆಗಳು ನಡೆಸಿಕೊಂಡು ಬರುತ್ತಿರುವ ಈ ತಿಂಡಿ ತಿನಿಸುಗಳಿಗೆ ಯಾವ ಗಡಿ ಇಲ್ಲ. ಬಾಕರವಡಿ ಹಾಗೂ ಪೇಡಾದ ನಡುವೆ ಬೆಳೆದ ಬೇಂದ್ರೆ ಕನ್ನಡಿಗರಿಗೆಷ್ಟೋ ಅಷ್ಟೇ ಮರಾಠಿಗರಿಗೂ ಪ್ರಿಯವಾದ ಕವಿ.

2021ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿಗೆ ಭಾಜನರಾದ ಪ್ರೊ ಎಚ್.ಎಸ್. ಶಿವಪ್ರಕಾಶ್ ಅವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಂತೆ: “ನನ್ನ ವ್ಯಾವಸ್ಥೆಯಲ್ಲಿ ಕಾವ್ಯ ಕಸುಬಿನ ಹಲವು ಗುಟ್ಟುಗಳನ್ನು ನಾನು ಕಲಿತದ್ದು ಬೇಂದ್ರೆ ಕಾವ್ಯದ ಮುಖೇಣ.” ಹೀಗೆ ಕನ್ನಡದ ಹಲವು ಹಿರಿಯ ಹಾಗೂ ಕಿರಿಯ ಕವಿಗಳಿಗೆ ಕನ್ನಡದ ವರಕವಿಯ ಪ್ರಭಾವವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ಅವರೊಬ್ಬ ’ಮರಾಠಿ ಮಾನುಸ್ ಅಂದು ಕನ್ನಡದ ಯಾವ ಮನಸ್ಸುಗಳೂ ಅವರನ್ನು ದೂರ ಇಟ್ಟಿಲ್ಲ. ಇದು ಇವತ್ತಿನ ಸೀಮಾಭೂಮಿ ಬೆಳಗಾವಿ ಜನರ (ಕನ್ನಡ ಹಾಗೂ ಮರಾಠಿ) ಸ್ಥಿತಿ ಹಾಗೂ ಮನಸ್ಥಿತಿಯೂ ಹೌದು. ಶತಮಾನ ಕಳೆದ ಮರಾಠಿ ಮಾತೃಭಾಷಿಕ ಕನ್ನಡದ ವರಕವಿ ಬೇಂದ್ರೆಯನ್ನು ಒಪ್ಪಿ ಅಪ್ಪಿಕೊಂಡವರ ಹಾಗೂ ಅರ್ಧ ಶತಮಾನ ಕಳೆದರೂ ಮಹಾಜನ ವರದಿಯನ್ನು ಒಪ್ಪದವರ ನಡುವೆ ಸಿಲುಕಿ ಬೇಯುತ್ತಿರುವುದು ಕನ್ನಡ-ಮರಾಠಿ ಎನ್ನುವ ಭೇದಭಾವವಿಲ್ಲದ ಬದುಕುತ್ತಿರುವ ಮುಗ್ಧ ಮನಸ್ಸುಗಳೇ ಹೊರತು ರಾಜಕಾರಣಿಗಳಲ್ಲ.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ೬ ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...