Homeಅಂಕಣಗಳುಬೆಂಗಳೂರು ಭೇಲ್1: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್ 

ಬೆಂಗಳೂರು ಭೇಲ್1: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್ 

ಸಿಲಿಕಾನ್ ಸಿಟಿಯ ಶ್ರೀಮಂತರಿಗೆ ಅವರ ಧ್ವನಿ ಏರಿಸಲು ಟ್ವಿಟರ್ ಇದೆ, ಅವರ ಪರ ವಾದ ಮಾಡಲು ದೊಡ್ಡ ವಕೀಲರಿದ್ದಾರೆ, ಅರಚುವ ಮಾಧ್ಯಮಗಳು ಇವೆ. ತಂತ್ರಜ್ಞಾನದಿಂದ ಸಮಸ್ಯೆಗೆ ಸಿಲುಕಿರುವ ದುಡಿಯುವ ವರ್ಗದ ಧ್ವನಿ ಕೇಳುವವರಾರು?

- Advertisement -
- Advertisement -

ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ #righttolearn ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಅದನ್ನು ಟ್ರೆಂಡ್ ಮಾಡಿದವರು ಶಿಕ್ಷಣದ ಹಕ್ಕಿನ ವಿಷಯಕ್ಕೆ ಬಂದಾಗ ಅವರು ಎಲ್ಲರ ಶಿಕ್ಷಣದ ಬಗ್ಗೆ ಮಾತುನಾಡುತ್ತಿದ್ದಾರೆ ಅಂದುಕೊಂಡಿರಾ, ಹುಷಾರ್.

ಈ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಹಿಂದೆ ಕತೆ ಹೀಗಿದೆ. ಕೋವಿಡ್ ಸೋಂಕಿನಿಂದಾಗಿ ಯಾವ ಶಾಲೆಯು ತೆಗೆದಿಲ್ಲ. ಹಾಗಂದ ಮಾತ್ರಕ್ಕೆ ಪಾಠ ಮಾಡುತ್ತಿಲ್ಲ ಅಂತಲ್ಲ, ಶುಲ್ಕ ಪಾವತಿಸಿಕೊಂಡಿಲ್ಲ ಅಂತಲ್ಲ! ಶಾಲೆಗಳನ್ನು ವರ್ಚುವಲ್ ಮೋಡ್ ನಲ್ಲಿ ಪ್ರಾರಂಭ ಮಾಡಿ, ಶುಲ್ಕ ಪಾವತಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದರು. ಎಲ್.ಕೆ.ಜಿ, ಯು.ಕೆ.ಜಿಗು ಸಹ ಆನ್ ಲೈನ್ ಪಾಠ ಮಾಡುತಿದ್ದರು. ಈ ಆನ್ ಲೈನ್ ಪಾಠಗಳಿಂದ ಮಕ್ಕಳ  ಆರೋಗ್ಯಕ್ಕೆ ತೊಂದರೆ ಆಗುತ್ತಿದೆ ಎಂದು ಕೆಲವು ಪೋಷಕರು ಸರ್ಕಾರಕ್ಕೆ ದೂರು ನೀಡಿದ್ದರು ಹಾಗು ಆನ್ ಲೈನ್ ಪಾಠದ ಹೆಸರಿನಲ್ಲಿ ಹೆಚ್ಚು ಶುಲ್ಕವನ್ನು ಪಾವತಿಸಿಕೊಳ್ಳುತಿದ್ದಾರೆ ಎಂದು ಸಹ ದೂರಿದ್ದರು. ಈ ದೂರುಗಳನ್ನು ಪರಿಶೀಲಿಸಿದ ಸರ್ಕಾರ ಕೆಲ ಪೋಷಕರೊಂದಿಗೆ, ಶಿಕ್ಷಣದ ತಜ್ಞರೊಂದಿಗೆ ಹಾಗು ಖಾಸಗಿ ಶಾಲಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ, ಎಲ್ ಕೆ ಜಿ ಯಿಂದ 5ನೇ ತರಗತಿಯವರೆಗೆ ಆನ್ ಲೈನ್ ಪಾಠ ನಿಷೇಧಿಸಿ, 6ನೇ ತರಗತಿಯಿಂದ 10ನೇ ತರಗತಿಯವರಿಗೆ ತಂತ್ರಜ್ಞಾನ ಸೂಕ್ತವಾಗಿ ಅಳವಡಿಸಿಕೊಂಡು ಹೇಗೆ ಪಾಠ ಮಾಡಬಹುದು ಎಂದು ಶಿಫಾರಸ್ಸುಗಳನ್ನು ನೀಡಲು ಒಂದು ತಜ್ಞರ ಸಮಿತಿ ರಚಿಸಿತು.

ಈ ನಿಷೇಧದಿಂದ ರೋಷಗೊಂಡ ಅನೇಕ ಮೇಲ್ವರ್ಗದ ಪೋಷಕರು, ಸರ್ಕಾರದ ಈ ಆದೇಶ ವಿರುದ್ಧ ಉಚ್ಛ ನ್ಯಾಯಾಲಯದ ಮೆಟ್ಟಲೇರಿದರು. ಟ್ವಿಟ್ಟರ್ ನಲ್ಲಿ #righttolearn ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿದರು. ನಮ್ಮ ಹಕ್ಕನ್ನು ಏಕೆ ಕಿತ್ತುಕೊಳ್ಳುತಿದ್ದಿರಿ ಎಂದು ವಾದಿಸಿದರು. ಮಾಧ್ಯಮಗಳಲ್ಲೂ ಇದೇ ದೊಡ್ಡ ವಿಷಯವಾಯಿತು.

ಇದೆಲ್ಲರ ಮಧ್ಯೆ ಆನ್ ಲೈನ್ ಪಾಠದಿಂದ ಬಡವರಿಗೆ ಯಾವ ರೀತಿಯ ತೊಂದರೆಯಾಗುತ್ತದೆ ಎಂದು ಸರ್ಕಾರ ಅಥವಾ ಈ ಮೇಲ್ವರ್ಗದ  ಪೋಷಕರು ಯೋಚಿಸಿಲ್ಲ. ಸರ್ಕಾರಿ ಶಾಲೆಗಳಲ್ಲಿ ಏನಾಗುತ್ತಿದೆ ಎಂದು ಯಾರು ಯೋಚಿಸಿಲ್ಲ.

ಆನ್  ಲೈನ್ ನಿಷೇಧದ ಪರ ವಿರೋಧದ ಗದ್ದಲದ ಮಧ್ಯೆ ಶಿಕ್ಷಣ ಕ್ಷೇತ್ರದ ಮೂಲ ಸಮಸ್ಯೆ  ಬಗ್ಗೆ ಯಾರೂ ಯೋಚಿಸುತ್ತಿಲ್ಲ.  ಈ ಆನ್ ಲೈನ್ ಪಾಠಗಳಿಂದ ನಮ್ಮ ಸಮಾಜದಲ್ಲಿದ್ದ ಅಸಮಾನತೆ ಇನ್ನೂ ಹೆಚ್ಚುತ್ತಿದೆ. ಅದು ಹೇಗೆ ಎಂದು ಕೇಳುತ್ತೀರಾ? ವಿಷಯ ಹೀಗಿದೆ ನೋಡಿ:

ಆನ್ ಲೈನ್ ಕ್ಲಾಸ್ ಅಂದರೆ ಜೂಮ್  ಆಪ್ ಅಥವಾ ಮೈಕ್ರೋಸಾಫ್ಟ್ ಕಂಪನಿಯ ಕೆಲ ಆಪ್ ಗಳು ಅಥವಾ  ಇನ್ಯಾವುದೋ ಆಪ್ ಗಳ  ಮೂಲಕ ಶಿಕ್ಷಕರು ಹಾಗು ಮಕ್ಕಳು ಒಂದೇ ವರ್ಚುವಲ್ ತರಗತಿಗೆ ಬಂದು ಅಲ್ಲಿ ಪಾಠ ಮಾಡಲಾಗುವುದು.  ಈ ರೀತಿಯ ಬೋಧನೆಯಲ್ಲಿ  ಬಡ ಕುಟುಂಬದ ಮಕ್ಕಳು ಭಾಗವಹಿಸಿಕೆ ಕಡಿಮೆ ಇದೆ. ಅದಕ್ಕೆ ಹಲವಾರು ಕಾರಣಗಳಿವೆ.

ಇದರ ಬಗ್ಗೆ ಕಳೆದ ಕೆಲವು ದಿವಸಗಳಿಂದ, ಅನೇಕ ಪೋಷಕರೊಂದಿಗೆ ಮಾತನಾಡಿದೆ. ಅವರು ಎದುರಿಸತ್ತಿರುವ ಸಮಸ್ಯೆಗಳನ್ನು ಕೇಳಿ ಬಹಳ ನೋವಾಗಿದೆ. ಇದು ಡಿಜಿಟಿಲ್ ಇಂಡಿಯಾ –  ಸಿಲಿಕಾನ್ ಸಿಟಿ ಆಗಿರಬಹುದು ಆದರೆ ಇಲ್ಲಿ  ತಂತ್ರಜ್ಞಾನ  ಬಳಿಕೆ ಕೆಲವರಿಗೆ  ಮಾತ್ರ ಸೀಮಿತವಾಗಿದೆ. ಬಡ ಕುಟುಂಬಗಳು ಎಂದಿಗೂ ಲ್ಯಾಪ್ ಟಾಪ್ ಹೊಂದಿರಲಿಲ್ಲ. ಕೆಲವರ ಬಳಿ ಸ್ಮಾರ್ಟ್ ಫೋನ್ ಇದೆ. ಆದರೆ ಅದು ಸಹ ಹಲವರ ಬಳಿ ಇಲ್ಲ. ಎಷ್ಟೋ ಜನ ಬಡವರು ಬಳಿ ಸ್ಮಾರ್ಟ್ ಫೋನ್ ಸಹ ಇಲ್ಲದೆ, ಆನ್ ಲೈನ್ ಕ್ಲಾಸ್ ಅಲ್ಲಿ ಭಾಗವಹಿಸಲು ಸಾಧ್ಯವಿಲ್ಲವೆಂದು ಮಕ್ಕಳನ್ನು ಶಾಲೆಗೆ ಸೇರಿಸಿಯೇ ಇಲ್ಲ. ಇದರಿಂದ ಡ್ರಾಪ್ ಔಟ್ ಸಂಖ್ಯೆ ಜಾಸ್ತಿ ಆಗುತ್ತಿದೆ.

ಸ್ಮಾರ್ಟ್ ಫೋನ್ ಇರುವ ಕುಟುಂಬಗಳಿಗೆ ಸಮಸ್ಯೆ ಇಲ್ಲ ಎಂದು ಊಹಿಸಿಬೇಡಿ, ಅವರಿಗೂ ಹಲವಾರು ಸಮಸ್ಯೆಗಳಿವೆ. ಕೆಲ ಕುಟುಂಬಗಳಲ್ಲಿ  ಒಂದೇ ಸ್ಮಾರ್ಟ್ ಫೋನ್ ಇದೆ ಆದರೆ ಇಬ್ಬರು ಮಕ್ಕಳಿದ್ದಾರೆ. ಹಾಗಾಗಿ ಒಂದೇ ಮಗುವಿಗೆ ಕ್ಲಾಸ್ ಅಲ್ಲಿ ಭಾಗವಹಿಸಲು ಸಾಧ್ಯ . ಕೆಲ  ಕುಟುಂಬದಲ್ಲಿ ಪೋಷಕರಿಬ್ಬರು ಕೆಲಸಕ್ಕೆ ಹೋಗಬೇಕು,  ಆಗ ಫೋನ್ ಮನೇಲೆ ಬಿಟ್ಟು ಕೆಲಸಕ್ಕೆ ಹೋಗಲು  ಕಷ್ಟ – ಎರಡನೇ ಫೋನ್ ಇರುವುದಿಲ್ಲ. ಮತ್ತೊಂದು ಸಮಸ್ಯೆ ಮೇಲ್ವಿಚಾರಣೆ ಇಲ್ಲದೆ ಮಕ್ಕಳನ್ನು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡು ಎನ್ನಲಿಕ್ಕೆ ಹಿಂಜರಿಕೆ – ಅವರು ಬೇರೆ ಏನೇನೋ ನೋಡಬಹುದು, ಅಥವಾ ಅವರಿಗೆ ಅರ್ಥ ಆಗದೆ ಇರಬಹುದು ಎಂಬ ಆತಂಕಗಳು.

ಮತ್ತೆ ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ; ಕೋವಿಡ್ ಹಾಗು ಲಾಕ್ ಡೌನ್ ನ ನಂತರ, ದುಡಿಯುವ ವರ್ಗದ  ಹಲವಾರು ಜನರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಒಂದು ಸ್ಮಾರ್ಟ್ ಫೋನ್ ಕೊಳ್ಳಲು ಸಾಧ್ಯವಿಲ್ಲ, ಶಾಲೆ ಶುಲ್ಕ ಪಾವತಿಸಲು ಕೂಡ ಸಾಧ್ಯವಾಗುತ್ತಿಲ್ಲ.

ಹೋಗಲಿ ಇಷ್ಟೆಲ್ಲಾ ಸಮಸ್ಯೆ ದಾಟಿ ಸ್ಮಾರ್ಟ್ ಫೋನ್ ಒಂದನ್ನು ಮಕ್ಕಳ ಕೈಯಿಗೆ ತಲುಪಿಸಿದರೆ ಅಲ್ಲಿಗೆ ಕಥೆ ಮುಗಿಯಿತೇ? ಇಲ್ಲ. ಅವರ ಎದುರು ಇರುವ ಮುಂದಿನ ಸವಾಲು – ಇಂಟರ್ನೆಟ್.  ಕೆಲವು ಪ್ರದೇಶದಲ್ಲಿ ನೆಟ್ ವರ್ಕ್ ಸರಿಯಿಲ್ಲ, ಹಾಗಾಗಿ ಕ್ಲಾಸ್ ಅಟೆಂಡ್ ಮಾಡಲು ಆಗುತ್ತಿಲ್ಲ. ಡ್ಯಾಟಾ ಪ್ಯಾಕ್ ಗೆ ಸಹ ಸುಮಾರು ಹಣ ವೆಚ್ಚುವಾಗುತಿದೆ.  ಇದು ಸಹ ಸಮಸ್ಯೆ ಏಕೆಂದರೆ ಆಗಲೇ ಹೇಳಿದ ಹಾಗೆ ಊಟಕ್ಕೆ, ಬಾಡಿಗೆಗೆ ಸಮಸ್ಯೆ ಇರುವಾಗ ಇನ್ನು ಡ್ಯಾಟಾ  ಪ್ಯಾಕ್ ಗೆ ಎಲ್ಲಿ ದುಡ್ಡು ಇರುತ್ತದೆ?

ಈ ಸವಾಲನ್ನು ಎದುರಿಸಿ, ಇಂಟರ್ ನೆಟ್ ಸಹ ಪಡೆದು ಪಾಠ ಕೇಳೋಣಾ ಎಂದು ಕುಳಿತರೆ ಅಲ್ಲಿಗೆ ಸಮಸ್ಯೆ ಮುಗಿಯದು.   ಎಷ್ಟೋ ಪೋಷಕರಿಗೆ  ತಂತ್ರಜ್ಞಾನ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ. ಜೂಮ್ ಆಪ್ ಅಥವಾ ಇತರೆ ಆಪ್ ಗಳಲ್ಲಿ ಸಮಸ್ಯೆ ಆದಾಗ ಅದನ್ನು ನಿವಾರಿಸಲು ಗೊತ್ತಾಗುತ್ತಿಲ್ಲ. ಕೆಲವು ಮಕ್ಕಳಿಗೆ ಆನ್ ಲೈನ್ ಪಾಠ ಹೆಚ್ಚು ಅರ್ಥವಾಗುತ್ತಿಲ್ಲ  ಹಾಗು ಅವರ ಪ್ರಶ್ನೆಗೆ ಉತ್ತರ ಕೊಡಲು ಶಿಕ್ಷಕರನ್ನು ಪ್ರತ್ಯೇಕವಾಗಿ ಮಾತನಾಡಿಸಲು ಆಗುತ್ತಿಲ್ಲ.

ಒಟ್ಟಾರೆ ಈ ಆನ್ ಲೈನ್ ಬೋಧನೆ, ಕಲಿಕೆಗೆ ದೊಡ್ಡ ಸಮಸ್ಯೆಯಾಗಿದೆ. ದುಡಿಯುವ ವರ್ಗದ  ಮಕ್ಕಳು ಶಿಕ್ಷಣದಲ್ಲಿ ಹಿಂದೆ ಬೀಳುತ್ತಿದ್ದಾರೆ.

ಈ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಮಾತು ನೆನಪಾಗುತ್ತದೆ

“The growth of education if it is confined to one class, will not necessarily  lead to liberalism. It may lead to the justification and conservation of
class interest; and instead of creating the liberators of the down-trodden,  it may create champions of the past and the supporters of the status
quo.”

– Dr. B.R. Ambedkar, 1919

ಶಿಕ್ಷಣದ ಅಭಿವೃದ್ಧಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾದರೆ, ಅದು ಉದಾರೀಕರಣಕ್ಕೆ ದಾರಿ ಮಾಡಿಕೊಡದೆ ಹೋಗಬಹುದು. ಅದು ವರ್ಗ ಹಿತಾಸಕ್ತಿಯನ್ನು ಸಂರಕ್ಷಿಸಲು ಮತ್ತು ಸಮರ್ಥಿಸಿಕೊಳ್ಳಲು ಬಳಕೆಯಾಗುತ್ತದೆ; ಶೋಷಿತರ ಮುಕ್ತಿ ಗಳಿಸುವ ಬದಲು  ಈಗಾಗಲೇ ಇರುವ ಅಸಾಮಾನತೆಯನ್ನು ಹಾಗು ವರ್ಗ ತಾರತಮ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು.

ಇದಕ್ಕೆ ನಾವು ಅವಕಾಶ ಮಾಡಬಾರದು. ಸರ್ಕಾರ ಕೂಡಲೇ ಎಲ್ಲರಿಗು ಶಿಕ್ಷಣ ತಲುಪುವಂತೆ,  ಅಸಮಾನತೆ ಕಡಿಮೆಯಾಗುವಂತೆ ಮಾಡುವುದು ಹೇಗೆ ಎಂದು ನೋಡಬೇಕು. ಪಕ್ಕದ ರಾಜ್ಯವಾದ  ಕೇರಳದಲ್ಲಿ ಟಿ.ವಿ ಮೂಲಕ ಪಾಠ ಮಾಡುತ್ತಿದ್ದಾರೆ. ಆ ರೀತಿಯ ಪರಿಹಾರಗಳನ್ನು ನಾವು ಗುರುತಿಸಬಹುದೇ?

ಸಿಲಿಕಾನ್ ಸಿಟಿಯ ಶ್ರೀಮಂತರಿಗೆ ಅವರ ಧ್ವನಿ ಏರಿಸಲು ಟ್ವಿಟರ್ ಇದೆ, ಅವರ ಪರ ವಾದ ಮಾಡಲು ದೊಡ್ಡ ವಕೀಲರಿದ್ದಾರೆ, ಅರಚುವ ಮಾಧ್ಯಮಗಳು ಇವೆ. ತಂತ್ರಜ್ಞಾನದಿಂದ ಸಮಸ್ಯೆಗೆ ಸಿಲುಕಿರುವ ದುಡಿಯುವ ವರ್ಗದ ಧ್ವನಿ ಕೇಳುವವರಾರು?

– ಈ ಅಂಕಣದ ಲೇಖಕರಾದ ವಿನಯ್ ಕೂರಗಾಯಲ ಶ್ರೀನಿವಾಸ,ರವರು ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು


ಇದನ್ನೂ ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...