Homeಅಂಕಣಗಳುಬೆಂಗಳೂರು ಭೇಲ್1: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್ 

ಬೆಂಗಳೂರು ಭೇಲ್1: ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಡಿವೈಡ್ 

ಸಿಲಿಕಾನ್ ಸಿಟಿಯ ಶ್ರೀಮಂತರಿಗೆ ಅವರ ಧ್ವನಿ ಏರಿಸಲು ಟ್ವಿಟರ್ ಇದೆ, ಅವರ ಪರ ವಾದ ಮಾಡಲು ದೊಡ್ಡ ವಕೀಲರಿದ್ದಾರೆ, ಅರಚುವ ಮಾಧ್ಯಮಗಳು ಇವೆ. ತಂತ್ರಜ್ಞಾನದಿಂದ ಸಮಸ್ಯೆಗೆ ಸಿಲುಕಿರುವ ದುಡಿಯುವ ವರ್ಗದ ಧ್ವನಿ ಕೇಳುವವರಾರು?

- Advertisement -
- Advertisement -

ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ #righttolearn ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಅದನ್ನು ಟ್ರೆಂಡ್ ಮಾಡಿದವರು ಶಿಕ್ಷಣದ ಹಕ್ಕಿನ ವಿಷಯಕ್ಕೆ ಬಂದಾಗ ಅವರು ಎಲ್ಲರ ಶಿಕ್ಷಣದ ಬಗ್ಗೆ ಮಾತುನಾಡುತ್ತಿದ್ದಾರೆ ಅಂದುಕೊಂಡಿರಾ, ಹುಷಾರ್.

ಈ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಹಿಂದೆ ಕತೆ ಹೀಗಿದೆ. ಕೋವಿಡ್ ಸೋಂಕಿನಿಂದಾಗಿ ಯಾವ ಶಾಲೆಯು ತೆಗೆದಿಲ್ಲ. ಹಾಗಂದ ಮಾತ್ರಕ್ಕೆ ಪಾಠ ಮಾಡುತ್ತಿಲ್ಲ ಅಂತಲ್ಲ, ಶುಲ್ಕ ಪಾವತಿಸಿಕೊಂಡಿಲ್ಲ ಅಂತಲ್ಲ! ಶಾಲೆಗಳನ್ನು ವರ್ಚುವಲ್ ಮೋಡ್ ನಲ್ಲಿ ಪ್ರಾರಂಭ ಮಾಡಿ, ಶುಲ್ಕ ಪಾವತಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದರು. ಎಲ್.ಕೆ.ಜಿ, ಯು.ಕೆ.ಜಿಗು ಸಹ ಆನ್ ಲೈನ್ ಪಾಠ ಮಾಡುತಿದ್ದರು. ಈ ಆನ್ ಲೈನ್ ಪಾಠಗಳಿಂದ ಮಕ್ಕಳ  ಆರೋಗ್ಯಕ್ಕೆ ತೊಂದರೆ ಆಗುತ್ತಿದೆ ಎಂದು ಕೆಲವು ಪೋಷಕರು ಸರ್ಕಾರಕ್ಕೆ ದೂರು ನೀಡಿದ್ದರು ಹಾಗು ಆನ್ ಲೈನ್ ಪಾಠದ ಹೆಸರಿನಲ್ಲಿ ಹೆಚ್ಚು ಶುಲ್ಕವನ್ನು ಪಾವತಿಸಿಕೊಳ್ಳುತಿದ್ದಾರೆ ಎಂದು ಸಹ ದೂರಿದ್ದರು. ಈ ದೂರುಗಳನ್ನು ಪರಿಶೀಲಿಸಿದ ಸರ್ಕಾರ ಕೆಲ ಪೋಷಕರೊಂದಿಗೆ, ಶಿಕ್ಷಣದ ತಜ್ಞರೊಂದಿಗೆ ಹಾಗು ಖಾಸಗಿ ಶಾಲಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ, ಎಲ್ ಕೆ ಜಿ ಯಿಂದ 5ನೇ ತರಗತಿಯವರೆಗೆ ಆನ್ ಲೈನ್ ಪಾಠ ನಿಷೇಧಿಸಿ, 6ನೇ ತರಗತಿಯಿಂದ 10ನೇ ತರಗತಿಯವರಿಗೆ ತಂತ್ರಜ್ಞಾನ ಸೂಕ್ತವಾಗಿ ಅಳವಡಿಸಿಕೊಂಡು ಹೇಗೆ ಪಾಠ ಮಾಡಬಹುದು ಎಂದು ಶಿಫಾರಸ್ಸುಗಳನ್ನು ನೀಡಲು ಒಂದು ತಜ್ಞರ ಸಮಿತಿ ರಚಿಸಿತು.

ಈ ನಿಷೇಧದಿಂದ ರೋಷಗೊಂಡ ಅನೇಕ ಮೇಲ್ವರ್ಗದ ಪೋಷಕರು, ಸರ್ಕಾರದ ಈ ಆದೇಶ ವಿರುದ್ಧ ಉಚ್ಛ ನ್ಯಾಯಾಲಯದ ಮೆಟ್ಟಲೇರಿದರು. ಟ್ವಿಟ್ಟರ್ ನಲ್ಲಿ #righttolearn ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿದರು. ನಮ್ಮ ಹಕ್ಕನ್ನು ಏಕೆ ಕಿತ್ತುಕೊಳ್ಳುತಿದ್ದಿರಿ ಎಂದು ವಾದಿಸಿದರು. ಮಾಧ್ಯಮಗಳಲ್ಲೂ ಇದೇ ದೊಡ್ಡ ವಿಷಯವಾಯಿತು.

ಇದೆಲ್ಲರ ಮಧ್ಯೆ ಆನ್ ಲೈನ್ ಪಾಠದಿಂದ ಬಡವರಿಗೆ ಯಾವ ರೀತಿಯ ತೊಂದರೆಯಾಗುತ್ತದೆ ಎಂದು ಸರ್ಕಾರ ಅಥವಾ ಈ ಮೇಲ್ವರ್ಗದ  ಪೋಷಕರು ಯೋಚಿಸಿಲ್ಲ. ಸರ್ಕಾರಿ ಶಾಲೆಗಳಲ್ಲಿ ಏನಾಗುತ್ತಿದೆ ಎಂದು ಯಾರು ಯೋಚಿಸಿಲ್ಲ.

ಆನ್  ಲೈನ್ ನಿಷೇಧದ ಪರ ವಿರೋಧದ ಗದ್ದಲದ ಮಧ್ಯೆ ಶಿಕ್ಷಣ ಕ್ಷೇತ್ರದ ಮೂಲ ಸಮಸ್ಯೆ  ಬಗ್ಗೆ ಯಾರೂ ಯೋಚಿಸುತ್ತಿಲ್ಲ.  ಈ ಆನ್ ಲೈನ್ ಪಾಠಗಳಿಂದ ನಮ್ಮ ಸಮಾಜದಲ್ಲಿದ್ದ ಅಸಮಾನತೆ ಇನ್ನೂ ಹೆಚ್ಚುತ್ತಿದೆ. ಅದು ಹೇಗೆ ಎಂದು ಕೇಳುತ್ತೀರಾ? ವಿಷಯ ಹೀಗಿದೆ ನೋಡಿ:

ಆನ್ ಲೈನ್ ಕ್ಲಾಸ್ ಅಂದರೆ ಜೂಮ್  ಆಪ್ ಅಥವಾ ಮೈಕ್ರೋಸಾಫ್ಟ್ ಕಂಪನಿಯ ಕೆಲ ಆಪ್ ಗಳು ಅಥವಾ  ಇನ್ಯಾವುದೋ ಆಪ್ ಗಳ  ಮೂಲಕ ಶಿಕ್ಷಕರು ಹಾಗು ಮಕ್ಕಳು ಒಂದೇ ವರ್ಚುವಲ್ ತರಗತಿಗೆ ಬಂದು ಅಲ್ಲಿ ಪಾಠ ಮಾಡಲಾಗುವುದು.  ಈ ರೀತಿಯ ಬೋಧನೆಯಲ್ಲಿ  ಬಡ ಕುಟುಂಬದ ಮಕ್ಕಳು ಭಾಗವಹಿಸಿಕೆ ಕಡಿಮೆ ಇದೆ. ಅದಕ್ಕೆ ಹಲವಾರು ಕಾರಣಗಳಿವೆ.

ಇದರ ಬಗ್ಗೆ ಕಳೆದ ಕೆಲವು ದಿವಸಗಳಿಂದ, ಅನೇಕ ಪೋಷಕರೊಂದಿಗೆ ಮಾತನಾಡಿದೆ. ಅವರು ಎದುರಿಸತ್ತಿರುವ ಸಮಸ್ಯೆಗಳನ್ನು ಕೇಳಿ ಬಹಳ ನೋವಾಗಿದೆ. ಇದು ಡಿಜಿಟಿಲ್ ಇಂಡಿಯಾ –  ಸಿಲಿಕಾನ್ ಸಿಟಿ ಆಗಿರಬಹುದು ಆದರೆ ಇಲ್ಲಿ  ತಂತ್ರಜ್ಞಾನ  ಬಳಿಕೆ ಕೆಲವರಿಗೆ  ಮಾತ್ರ ಸೀಮಿತವಾಗಿದೆ. ಬಡ ಕುಟುಂಬಗಳು ಎಂದಿಗೂ ಲ್ಯಾಪ್ ಟಾಪ್ ಹೊಂದಿರಲಿಲ್ಲ. ಕೆಲವರ ಬಳಿ ಸ್ಮಾರ್ಟ್ ಫೋನ್ ಇದೆ. ಆದರೆ ಅದು ಸಹ ಹಲವರ ಬಳಿ ಇಲ್ಲ. ಎಷ್ಟೋ ಜನ ಬಡವರು ಬಳಿ ಸ್ಮಾರ್ಟ್ ಫೋನ್ ಸಹ ಇಲ್ಲದೆ, ಆನ್ ಲೈನ್ ಕ್ಲಾಸ್ ಅಲ್ಲಿ ಭಾಗವಹಿಸಲು ಸಾಧ್ಯವಿಲ್ಲವೆಂದು ಮಕ್ಕಳನ್ನು ಶಾಲೆಗೆ ಸೇರಿಸಿಯೇ ಇಲ್ಲ. ಇದರಿಂದ ಡ್ರಾಪ್ ಔಟ್ ಸಂಖ್ಯೆ ಜಾಸ್ತಿ ಆಗುತ್ತಿದೆ.

ಸ್ಮಾರ್ಟ್ ಫೋನ್ ಇರುವ ಕುಟುಂಬಗಳಿಗೆ ಸಮಸ್ಯೆ ಇಲ್ಲ ಎಂದು ಊಹಿಸಿಬೇಡಿ, ಅವರಿಗೂ ಹಲವಾರು ಸಮಸ್ಯೆಗಳಿವೆ. ಕೆಲ ಕುಟುಂಬಗಳಲ್ಲಿ  ಒಂದೇ ಸ್ಮಾರ್ಟ್ ಫೋನ್ ಇದೆ ಆದರೆ ಇಬ್ಬರು ಮಕ್ಕಳಿದ್ದಾರೆ. ಹಾಗಾಗಿ ಒಂದೇ ಮಗುವಿಗೆ ಕ್ಲಾಸ್ ಅಲ್ಲಿ ಭಾಗವಹಿಸಲು ಸಾಧ್ಯ . ಕೆಲ  ಕುಟುಂಬದಲ್ಲಿ ಪೋಷಕರಿಬ್ಬರು ಕೆಲಸಕ್ಕೆ ಹೋಗಬೇಕು,  ಆಗ ಫೋನ್ ಮನೇಲೆ ಬಿಟ್ಟು ಕೆಲಸಕ್ಕೆ ಹೋಗಲು  ಕಷ್ಟ – ಎರಡನೇ ಫೋನ್ ಇರುವುದಿಲ್ಲ. ಮತ್ತೊಂದು ಸಮಸ್ಯೆ ಮೇಲ್ವಿಚಾರಣೆ ಇಲ್ಲದೆ ಮಕ್ಕಳನ್ನು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡು ಎನ್ನಲಿಕ್ಕೆ ಹಿಂಜರಿಕೆ – ಅವರು ಬೇರೆ ಏನೇನೋ ನೋಡಬಹುದು, ಅಥವಾ ಅವರಿಗೆ ಅರ್ಥ ಆಗದೆ ಇರಬಹುದು ಎಂಬ ಆತಂಕಗಳು.

ಮತ್ತೆ ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ; ಕೋವಿಡ್ ಹಾಗು ಲಾಕ್ ಡೌನ್ ನ ನಂತರ, ದುಡಿಯುವ ವರ್ಗದ  ಹಲವಾರು ಜನರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಒಂದು ಸ್ಮಾರ್ಟ್ ಫೋನ್ ಕೊಳ್ಳಲು ಸಾಧ್ಯವಿಲ್ಲ, ಶಾಲೆ ಶುಲ್ಕ ಪಾವತಿಸಲು ಕೂಡ ಸಾಧ್ಯವಾಗುತ್ತಿಲ್ಲ.

ಹೋಗಲಿ ಇಷ್ಟೆಲ್ಲಾ ಸಮಸ್ಯೆ ದಾಟಿ ಸ್ಮಾರ್ಟ್ ಫೋನ್ ಒಂದನ್ನು ಮಕ್ಕಳ ಕೈಯಿಗೆ ತಲುಪಿಸಿದರೆ ಅಲ್ಲಿಗೆ ಕಥೆ ಮುಗಿಯಿತೇ? ಇಲ್ಲ. ಅವರ ಎದುರು ಇರುವ ಮುಂದಿನ ಸವಾಲು – ಇಂಟರ್ನೆಟ್.  ಕೆಲವು ಪ್ರದೇಶದಲ್ಲಿ ನೆಟ್ ವರ್ಕ್ ಸರಿಯಿಲ್ಲ, ಹಾಗಾಗಿ ಕ್ಲಾಸ್ ಅಟೆಂಡ್ ಮಾಡಲು ಆಗುತ್ತಿಲ್ಲ. ಡ್ಯಾಟಾ ಪ್ಯಾಕ್ ಗೆ ಸಹ ಸುಮಾರು ಹಣ ವೆಚ್ಚುವಾಗುತಿದೆ.  ಇದು ಸಹ ಸಮಸ್ಯೆ ಏಕೆಂದರೆ ಆಗಲೇ ಹೇಳಿದ ಹಾಗೆ ಊಟಕ್ಕೆ, ಬಾಡಿಗೆಗೆ ಸಮಸ್ಯೆ ಇರುವಾಗ ಇನ್ನು ಡ್ಯಾಟಾ  ಪ್ಯಾಕ್ ಗೆ ಎಲ್ಲಿ ದುಡ್ಡು ಇರುತ್ತದೆ?

ಈ ಸವಾಲನ್ನು ಎದುರಿಸಿ, ಇಂಟರ್ ನೆಟ್ ಸಹ ಪಡೆದು ಪಾಠ ಕೇಳೋಣಾ ಎಂದು ಕುಳಿತರೆ ಅಲ್ಲಿಗೆ ಸಮಸ್ಯೆ ಮುಗಿಯದು.   ಎಷ್ಟೋ ಪೋಷಕರಿಗೆ  ತಂತ್ರಜ್ಞಾನ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ. ಜೂಮ್ ಆಪ್ ಅಥವಾ ಇತರೆ ಆಪ್ ಗಳಲ್ಲಿ ಸಮಸ್ಯೆ ಆದಾಗ ಅದನ್ನು ನಿವಾರಿಸಲು ಗೊತ್ತಾಗುತ್ತಿಲ್ಲ. ಕೆಲವು ಮಕ್ಕಳಿಗೆ ಆನ್ ಲೈನ್ ಪಾಠ ಹೆಚ್ಚು ಅರ್ಥವಾಗುತ್ತಿಲ್ಲ  ಹಾಗು ಅವರ ಪ್ರಶ್ನೆಗೆ ಉತ್ತರ ಕೊಡಲು ಶಿಕ್ಷಕರನ್ನು ಪ್ರತ್ಯೇಕವಾಗಿ ಮಾತನಾಡಿಸಲು ಆಗುತ್ತಿಲ್ಲ.

ಒಟ್ಟಾರೆ ಈ ಆನ್ ಲೈನ್ ಬೋಧನೆ, ಕಲಿಕೆಗೆ ದೊಡ್ಡ ಸಮಸ್ಯೆಯಾಗಿದೆ. ದುಡಿಯುವ ವರ್ಗದ  ಮಕ್ಕಳು ಶಿಕ್ಷಣದಲ್ಲಿ ಹಿಂದೆ ಬೀಳುತ್ತಿದ್ದಾರೆ.

ಈ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಮಾತು ನೆನಪಾಗುತ್ತದೆ

“The growth of education if it is confined to one class, will not necessarily  lead to liberalism. It may lead to the justification and conservation of
class interest; and instead of creating the liberators of the down-trodden,  it may create champions of the past and the supporters of the status
quo.”

– Dr. B.R. Ambedkar, 1919

ಶಿಕ್ಷಣದ ಅಭಿವೃದ್ಧಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾದರೆ, ಅದು ಉದಾರೀಕರಣಕ್ಕೆ ದಾರಿ ಮಾಡಿಕೊಡದೆ ಹೋಗಬಹುದು. ಅದು ವರ್ಗ ಹಿತಾಸಕ್ತಿಯನ್ನು ಸಂರಕ್ಷಿಸಲು ಮತ್ತು ಸಮರ್ಥಿಸಿಕೊಳ್ಳಲು ಬಳಕೆಯಾಗುತ್ತದೆ; ಶೋಷಿತರ ಮುಕ್ತಿ ಗಳಿಸುವ ಬದಲು  ಈಗಾಗಲೇ ಇರುವ ಅಸಾಮಾನತೆಯನ್ನು ಹಾಗು ವರ್ಗ ತಾರತಮ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು.

ಇದಕ್ಕೆ ನಾವು ಅವಕಾಶ ಮಾಡಬಾರದು. ಸರ್ಕಾರ ಕೂಡಲೇ ಎಲ್ಲರಿಗು ಶಿಕ್ಷಣ ತಲುಪುವಂತೆ,  ಅಸಮಾನತೆ ಕಡಿಮೆಯಾಗುವಂತೆ ಮಾಡುವುದು ಹೇಗೆ ಎಂದು ನೋಡಬೇಕು. ಪಕ್ಕದ ರಾಜ್ಯವಾದ  ಕೇರಳದಲ್ಲಿ ಟಿ.ವಿ ಮೂಲಕ ಪಾಠ ಮಾಡುತ್ತಿದ್ದಾರೆ. ಆ ರೀತಿಯ ಪರಿಹಾರಗಳನ್ನು ನಾವು ಗುರುತಿಸಬಹುದೇ?

ಸಿಲಿಕಾನ್ ಸಿಟಿಯ ಶ್ರೀಮಂತರಿಗೆ ಅವರ ಧ್ವನಿ ಏರಿಸಲು ಟ್ವಿಟರ್ ಇದೆ, ಅವರ ಪರ ವಾದ ಮಾಡಲು ದೊಡ್ಡ ವಕೀಲರಿದ್ದಾರೆ, ಅರಚುವ ಮಾಧ್ಯಮಗಳು ಇವೆ. ತಂತ್ರಜ್ಞಾನದಿಂದ ಸಮಸ್ಯೆಗೆ ಸಿಲುಕಿರುವ ದುಡಿಯುವ ವರ್ಗದ ಧ್ವನಿ ಕೇಳುವವರಾರು?

– ಈ ಅಂಕಣದ ಲೇಖಕರಾದ ವಿನಯ್ ಕೂರಗಾಯಲ ಶ್ರೀನಿವಾಸ,ರವರು ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು


ಇದನ್ನೂ ಓದಿ: ತಮಿಳುನಾಡು ಲಾಕಪ್‌ ಡೆತ್: ಪೊಲೀಸ್ ದೌರ್ಜನ್ಯಕ್ಕೆ ಕೊನೆಯೆಂದು? ಮಾತು ಸೋತ ಭಾರತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....