Homeಅಂಕಣಗಳುನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

- Advertisement -
- Advertisement -
ಎಲೆಮರೆ – 28

ಹಾಸ್ಟೆಲುಗಳೆಂದರೆ ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಗಳ ತವರು ಮನೆಗಳಂತಿದ್ದವು. ಹಾಸ್ಟೆಲ್ ವಿದ್ಯಾರ್ಥಿಗಳು ಎಲ್ಲ ಬಗೆಯ ಚಳವಳಿಗಳ ಕೇಂದ್ರಬಿಂದುವಾಗಿದ್ದರು. ಕಾರಣ ಹಳ್ಳಿಗಳಿಂದ ನಗರದ ಹಾಸ್ಟೆಲ್‍ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಓದುತ್ತಲೇ ಸಾಮಾಜಿಕ ಅಸಮಾನತೆಯ ಬಗೆಗೆ ಅರಿವು ಮೂಡಿಸಿಕೊಂಡು, ಬಿಸಿರಕ್ತದ ಯುವಕ ಯುವತಿಯರು ಎಲ್ಲ ಬಗೆಯ ಅಸಮಾನತೆಯ ವಿರುದ್ಧ ಹೋರಾಟಕ್ಕೆ ಅಣಿಯಾತ್ತಿದ್ದರು. ಎಲ್ಲಾ ಹಿರಿಯ ಹೋರಾಟಗಾರರ ಹಾಸ್ಟೆಲ್ ಡೈರಿಗಳನ್ನು ಕೆದಕಿದರೆ ಅದೊಂದು ಅತ್ಯುತ್ತಮ ದಾಖಲೆಯಾಗಬಲ್ಲದು. ಆದರೆ 70-80 ರ ದಶಕದ ಹಾಸ್ಟೆಲುಗಳ ಕಣ್ಣೋಟದಿಂದ ಇಂದಿನ ಹಾಸ್ಟೆಲುಗಳನ್ನು ನೋಡುವಂತಿಲ್ಲ. ಹತ್ತಾರು ಬಿಗಿ ಬಂದೋಬಸ್ತುಗಳು, ವಿದ್ಯಾರ್ಥಿಗಳ ಗಂಭೀರ ಓದಿನ ಕೊರತೆ, ಹಾಸ್ಟೆಲ್ ವಾರ್ಡನ್, ಶಾಲಾ ಕಾಲೇಜು ಮೇಷ್ಟ್ರುಗಳ ಜಡತೆ ಹೀಗೆ ವ್ಯತ್ಯಾಸಗಳನ್ನು ಪಟ್ಟಿ ಮಾಡಬಹುದು. ಅದರಲ್ಲಿಯೂ ಕೆಲವು ಹಾಸ್ಟೆಲ್‍ಗಳು ಈಗಲೂ ವೈಚಾರಿಕ ತಿಳಿವಿನ ಕೇಂದ್ರಗಳಾಗಿ ಉಳಿದಿವೆ. ನಾನು ಗಮನಿಸಿದಂತೆ ಹರಪನಹಳ್ಳಿಯ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ ಈ ಕಾರಣಕ್ಕೆ ಗಮನಸೆಳೆಯುತ್ತಾರೆ.

ನಾನೊಮ್ಮೆ ಹರಪನಹಳ್ಳಿಗೆ ಟಿಪ್ಪು ಸುಲ್ತಾನ್ ಜಯಂತಿಯ ಭಾಷಣ ಮಾಡಲು ಹೋಗಿದ್ದೆ. ಅಂದು ನಾನು ತುಂಬಾ ಜೋಷಲ್ಲಿ ಮೈದುಂಬಿ ಮಾತನಾಡಿದೆ. ಮಾತು ಮುಗಿದ ನಂತರ ಗೆಳೆಯ ಶಿಕ್ಷಕ ಗಂಗಾಧರ ತನ್ನ ಸ್ನೇಹಬಳಗವನ್ನು ಪರಿಚಯಿಸಿದರು. ಅದರಲ್ಲಿ ಗಮನಸೆಳೆದ ವ್ಯಕ್ತಿ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಹೆಚ್.ಬಿ. ಚಂದ್ರಪ್ಪ. ಕುಳ್ಳಗೆ ಪುಟಿಯುವ ವ್ಯಕ್ತಿತ್ವದ ಚಂದ್ರಪ್ಪ ಸದಾ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಒಂದಿಲ್ಲೊಂದು ಚರ್ಚೆ ಸಂವಾದಗಳಲ್ಲಿ ತೊಡಗಿರುತ್ತಾರೆ.

ಮೂಲತಃ ಹರಿಹರ ತಾಲೂಕಿನ ನಿಟ್ಟೂರಿನ ಚಂದ್ರಪ್ಪನವರು ಬಿಎಸ್ಸಿ, ಬಿಎಡ್ ಮುಗಿದ ಮೇಲೆ 2002ರ ನವೆಂಬರ್‍ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ವಾರ್ಡ್‍ನ್ ಆಗಿ ನೇಮಕಗೊಂಡರು. ಚಂದ್ರಪ್ಪರಿಗೆ ವಿದ್ಯಾರ್ಥಿದೆಸೆಯಲ್ಲಿ ಓದಿನ ಹಸಿವಿತ್ತು. ಆದರೆ ಹಾಸ್ಟೆಲುಗಳಲ್ಲಿ ಪುಸ್ತಕಗಳಾಗಲಿ, ಅಂತಹದ್ದೊಂದು ವಾತಾವರಣವಾಗಲಿ ಇರಲಿಲ್ಲ. ಹೀಗಿದ್ದೂ ಹೇಗೋ ಪುಸ್ತಕಗಳನ್ನು ಒದಗಿಸಿಕೊಂಡು ಓದುತ್ತಿದ್ದರು. ವಿಶೇಷವಾಗಿ ತೇಜಸ್ವಿ ಕೃತಿಗಳು ವೈಚಾರಿಕ ಸೂಕ್ಷ್ಮತೆಯನ್ನೂ, ಪರಿಸರ ಪ್ರೀತಿಯನ್ನೂ, ಫೋಟೋಗ್ರಫಿಯ ಕನಸನ್ನೂ ಕಲಿಸಿದವು. ವಿದ್ಯಾರ್ಥಿದೆಸೆಯ ಕನಸುಗಳನ್ನು ಚಂದ್ರಪ್ಪ ತನ್ನ ಹಾಸ್ಟೆಲ್ ವಿದ್ಯಾರ್ಥಿಗಳ ಕನಸಾಗಿ ಪರಿವರ್ತಿಸಿದರು. ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಓದಿನ ಹಸಿವನ್ನು ಹೆಚ್ಚಿಸಿ, ಹಾಸ್ಟೆಲಿನಲ್ಲಿ ಪುಸ್ತಕಗಳ ಒದಗಿಸಲು ಮುಂದಾದರು.

ಶಾಲೆಗಳು ಪಠ್ಯಪುಸ್ತಕಗಳಿಗೆ ಒತ್ತು ನೀಡುತ್ತವೆ. ಹೀಗಾಗಿ ಶಾಲಾ ಪಠ್ಯಗಳಿಗಿಂತಲೂ ವೈಚಾರಿಕ ಮತ್ತು ಸ್ಪರ್ಧಾತ್ಮಕ ಕೃತಿಗಳನ್ನು ನಾವುಗಳು ಕೊಡಬೇಕೆನ್ನುವುದು ಚಂದ್ರಪ್ಪರ ಕನಸಾಗಿತ್ತು. ಮೊದಲು ಕೆಲಸಕ್ಕೆ ಸೇರಿದ ಚನ್ನಗಿರಿ ತಾಲೂಕಿನ ಕೆರೆಬಿಳಚಿಯಲ್ಲಿ ಮಕ್ಕಳಿಗಾಗಿ ಪುಸ್ತಕಗಳ ಸಂಗ್ರಹ ಆರಂಭಿಸುತ್ತಾರೆ. ಪ್ರೀ ಮೆಟ್ರಿಕ್ ಮಕ್ಕಳಾದ ಕಾರಣ ವೈಚಾರಿಕ ಪುಸ್ತಕಗಳು ಅಷ್ಟು ಅರಗಲಿಲ್ಲ. ಮೆಟ್ರಿಕ್ ನಂತರದ ಹಾಸ್ಟೆಲ್ ವಾರ್ಡನ್ ಆಗಿ ಹರಪನಹಳ್ಳಿಗೆ ಬಂದಾಗ ಈ ಪ್ರಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು.

ಚಂದ್ರಪ್ಪರ ಪುಸ್ತಕದ ನಂಟು ಸಹಜವಾಗಿ ಹರಪನಹಳ್ಳಿ ಭಾಗದ ಸಾಹಿತ್ಯ ವಲಯವನ್ನು ಬೆಸೆಯುತ್ತದೆ. ಕೊಟ್ಟೂರಿನ ಕುಂ.ವಿ, ಸ್ಥಳೀಯರಾದ ಇಸ್ಮಾಯಿಲ್ ಎಲಿಗಾರ, ರಾಮನ ಮಲಿ ಮುಂತಾದವರ ಸಂಪರ್ಕ ಸಿಕ್ಕ ಮೇಲೆ ಸಾಹಿತ್ಯ ಓದಿನ ಅಭಿರುಚಿಯ ವ್ಯಾಪಕತೆ ಹೆಚ್ಚುತ್ತದೆ. `ಮಕ್ಕಳು ವೈಚಾರಿಕವಾಗಿ ಪ್ರಬುದ್ಧರಾಗಬೇಕು, ಓದು ಮುಗಿಯುತ್ತಲೇ ಉದ್ಯೋಗ ಹಿಡಿಯಬೇಕು’ ಎನ್ನುವ ತತ್ವವನ್ನು ಚಂದ್ರಪ್ಪ ಪಾಲಿಸಿದರು. ಇದರ ಪರಿಣಾಮ ಸಾಹಿತ್ಯಿಕ ಕೃತಿಗಳ ಜೊತೆಗೆ ಸ್ಪರ್ಧಾತ್ಮಕ ಪುಸ್ತಕಗಳ ಸಂಗ್ರಹ ಮತ್ತು ಓದಿಸುವಿಕೆಯೂ ಹೆಚ್ಚಿತು.

ಮಳೆಯಾಧಾರಿತ ಈ ಪ್ರದೇಶದ ಮಕ್ಕಳಿಗೆ ಸರಕಾರಿ ಕೆಲಸ ಬಹುದೊಡ್ಡ ಕನಸು. ಹಾಗಾಗಿ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಠಿಣವಾಗಿ ತೊಡಗಿಸಿದರು. ಪರಿಣಾಮ ಐಎಎಸ್, ಕೆಎಎಸ್ ಹೊರತುಪಡಿಸಿ ಎಲ್ಲಾ ಇಲಾಖೆಯಲ್ಲಿಯೂ ಐದುನೂರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉದ್ಯೋಗಸ್ತರಾಗಿದ್ದಾರೆ. ಇದು ಹಾಸ್ಟೆಲ್ ವಾರ್ಡನ್ ಆಗಿ ಚಂದ್ರಪ್ಪ ಅವರ ಅತ್ತುತ್ತಮ ಮಾದರಿಯಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಓದಿದ ಮಕ್ಕಳು ಉದ್ಯೋಗ ಹಿಡಿಯುವಂತಾದರೆ, ಹಳ್ಳಿಗಳಲ್ಲಿ ಶಿಕ್ಷಣದ ಬಗೆಗಿನ ಒತ್ತು ಹೆಚ್ಚುತ್ತದೆ. ನಿರುದ್ಯೋಗ ಹೆಚ್ಚಾದರೆ, ಗ್ರಾಮೀಣರ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಚಂದ್ರಪ್ಪ ಅವರ ಕೆಲಸ ಹರಪನಹಳ್ಳಿ ಭಾಗದ ಹಳ್ಳಿಗಳಲ್ಲಿ ಶಿಕ್ಷಣದ ಬಗೆಗೆ ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿದೆ. ಮನೆಗಳಲ್ಲಿ ತಂದೆ ತಾಯಿಗಳು ಮಕ್ಕಳ ಭವಿಷ್ಯ ರೂಪಿಸಲು ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟು ಕಾಳಜಿಯನ್ನು ನಾವು ವಹಿಸುತ್ತೇವೆ ಎನ್ನುವ ಚಂದ್ರಪ್ಪ ಅವರ ಮಾತಿನಲ್ಲಿಯೇ ಅವರ ಬದ್ಧತೆ ಅರ್ಥವಾಗುತ್ತದೆ.

`ದಾರಿದೀಪ’ ಎನ್ನುವ ವೇದಿಕೆಯೊಂದನ್ನು ಚಂದ್ರಪ್ಪ ರೂಪಿಸಿದ್ದಾರೆ. ಇದು ಈ ಹಾಸ್ಟೆಲ್ ದಾರಿಯಲ್ಲಿ ಬದುಕನ್ನು ಕಟ್ಟಿಕೊಂಡವರು ಮರಳಿ ಹಾಸ್ಟೆಲ್‍ಗೆ ಎನ್ನುವಂತಿದೆ. ಈಗಾಗಲೆ ಈ ಹಾಸ್ಟೆಲಿನಲ್ಲಿ ಓದಿ, ನೌಕರಿ ಪಡೆದವರು ಈಗ ಹಾಸ್ಟೆಲಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಜಿಲ್ಲಾ, ತಾಲೂಕು ಆಡಳಿತಕ್ಕೆ ಬರುವ ಯುವ ಐಎಎಸ್ ಕೆಎಎಸ್ ಅಧಿಕಾರಿಗಳನ್ನು ಹಾಸ್ಟೆಲಿಗೆ ಕರೆಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪನ್ಯಾಸ ಕೊಡಿಸುತ್ತಾರೆ. ಚಂದ್ರಪ್ಪ ಸ್ವತಃ ಪರಿಸರವಾದಿ ಪಕ್ಷಿಪ್ರೇಮಿ. ತನ್ನ ಈ ಪರಿಸರ ಪ್ರೇಮವನ್ನು ತನ್ನ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ವಿಸ್ತರಿಸುತ್ತಾರೆ. ಬೇಸಿಗೆಯಲ್ಲಿ ಬೆಟ್ಟ ಗುಡ್ಡಗಳ ಅಲೆದು ವಿದ್ಯಾರ್ಥಿಗಳ ಸಹಾಯದಿಂದ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಹಿಂದೆ ಉಚ್ಚಂಗಿದುರ್ಗದ ಗುಡ್ಡವನ್ನು ದತ್ತು ಪಡೆದು ರಜೆಗಳಲ್ಲಿ ವಿದ್ಯಾರ್ಥಿಗಳ ಸಹಾಯದಿಂದ ಸಸಿ ನೆಡುವ, ಇರುವ ಸಸ್ಯ ಜಾತಿಗಳನ್ನು ಉಳಿಸುವ ಕಾರ್ಯಕ್ರಮ ಆಯೋಜಿಸಿದ್ದರು.

ಚಂದ್ರಪ್ಪ ಸ್ವತಃ ಒಳ್ಳೆಯ ಫೋಟೋಗ್ರಾಫರ್, ಮೊದಲಿಂದಲೂ ವೈಲ್ಡ್ ಲೈಫ್ ಫೋಟೊಗ್ರಫಿಯ ಆಸಕ್ತಿ ಇತ್ತು. ಇದೀಗ ಬಯಲು ಸೀಮೆ ಪಕ್ಷಿಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಗಾಳಿಫ್ಯಾನು (ವಿಂಡ್ ಪವರ್) ಗಳಿಂದ ನೆಲವಾಸಿ ಕ್ರಿಮಿ, ಕೀಟ, ಪಶು, ಪಕ್ಷಿಗಳಿಗೆ ಹೇಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಗುರುತಿಸುತ್ತಿದ್ದಾರೆ. ಚಂದ್ರಪ್ಪ ಹೇಳುವಂತೆ ಗಾಳಿಯ ಫ್ಯಾನುಗಳ ಶಬ್ದದಿಂದಾಗಿ ಜೀವಜಂತುಗಳ ನಿದ್ರೆ ಮತ್ತು ವಿಶ್ರಾಂತಿಗೆ ತೊಂದರೆಯಾಗಿ, ಅವುಗಳ ದೈನಂದಿನ ದಿನಚರಿ ಏರುಪೇರಾಗುತ್ತದೆ. ಇದು ಮೊಟ್ಟೆ ಇಟ್ಟು ಮರಿ ಮಾಡುವುದರ ಮೇಲೂ ಪರಿಣಾಮ ಬೀರುತ್ತದೆ, ಹೀಗಾಗಿ ಪಕ್ಷಿ ಕ್ರಿಮಿ ಕೀಟಗಳ ಸಂತಾನೋತ್ಪತ್ತಿ ಕುಂಟಿತವಾಗಿ ಅಳಿವಿನಂಚಿಗೆ ಬರುತ್ತವೆ ಎನ್ನುವುದು ಚಂದ್ರಪ್ಪ ಅವರ ಕಕ್ಕುಲಾತಿ.

ಹೀಗೆ ಚಂದ್ರಪ್ಪ ಅವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮನೆಯ ವಾತಾವರಣವನ್ನು ಸೃಷ್ಟಿಸಿ, ಅವರಲ್ಲಿ ಓದಿನ ಮೂಲಕ ವೈಚಾರಿಕತೆ ಬೆಳೆಸಿ, ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಏಕಕಾಲದಲ್ಲಿ ಪರಿಸರದ ಕಾಳಜಿಯನ್ನೂ, ಬದುಕಿನ ಪ್ರೀತಿಯನ್ನೂ ಕಲಿಸುತ್ತಾ, ನಿಜಕ್ಕೂ ಒಬ್ಬ ಹಾಸ್ಟೆಲ್ ವಾರ್ಡನ್ ಅಂದರೆ ಹೀಗಿರಬೇಕು ಎನ್ನುವಂತಿರುವ ಚಂದ್ರಪ್ಪ ಅವರ ಹೊಸ ಹೊಸ ಕನಸುಗಳೂ ಸಾಕಾರವಾಗಲಿ.

ಚಂದ್ರಪ್ಪ ಅವರ ಫೋಟೋಗ್ರಫಿ ಮತ್ತು ಹಾಸ್ಟೆಲ್ ಚಟುವಟಿಕೆಗಳನ್ನು ಗಮನಿಸಲು ಅವರ ಫೇಸ್‍ಬುಕ್ ಪೇಜನ್ನು ಗಮನಿಸಿ. https://www.facebook.com/chandrappabh.bcm

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚಂದ್ರಪ್ಪನವರ ಕಾರ್ಯವೈಖರಿ ಶ್ಲಾಘನೀಯ ಮತ್ತು ಅನುಕರಣನೀಯ. ನಮ್ಮ ಎಲ್ಲಾ ಹಾಸ್ಟೆಲ್ ಗಳ ವಾರ್ಡನ್ಗಳೂ ಚಂದ್ರಪ್ಪನವರ ಕಾರ್ಯವೈಖರಿಯನ್ನು ಅನುಸರಿಸಿದರೆ ವಿದ್ಯಾರ್ಥಿಗಳಲ್ಲಿ ಅದ್ಭುತ ಸಾಧನೆಯನ್ನು ಕಾಣಬಹುದು. ಅರುಣ್ ಅವರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...