Homeಅಂಕಣಗಳುನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

- Advertisement -
- Advertisement -
ಎಲೆಮರೆ – 28

ಹಾಸ್ಟೆಲುಗಳೆಂದರೆ ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಗಳ ತವರು ಮನೆಗಳಂತಿದ್ದವು. ಹಾಸ್ಟೆಲ್ ವಿದ್ಯಾರ್ಥಿಗಳು ಎಲ್ಲ ಬಗೆಯ ಚಳವಳಿಗಳ ಕೇಂದ್ರಬಿಂದುವಾಗಿದ್ದರು. ಕಾರಣ ಹಳ್ಳಿಗಳಿಂದ ನಗರದ ಹಾಸ್ಟೆಲ್‍ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಓದುತ್ತಲೇ ಸಾಮಾಜಿಕ ಅಸಮಾನತೆಯ ಬಗೆಗೆ ಅರಿವು ಮೂಡಿಸಿಕೊಂಡು, ಬಿಸಿರಕ್ತದ ಯುವಕ ಯುವತಿಯರು ಎಲ್ಲ ಬಗೆಯ ಅಸಮಾನತೆಯ ವಿರುದ್ಧ ಹೋರಾಟಕ್ಕೆ ಅಣಿಯಾತ್ತಿದ್ದರು. ಎಲ್ಲಾ ಹಿರಿಯ ಹೋರಾಟಗಾರರ ಹಾಸ್ಟೆಲ್ ಡೈರಿಗಳನ್ನು ಕೆದಕಿದರೆ ಅದೊಂದು ಅತ್ಯುತ್ತಮ ದಾಖಲೆಯಾಗಬಲ್ಲದು. ಆದರೆ 70-80 ರ ದಶಕದ ಹಾಸ್ಟೆಲುಗಳ ಕಣ್ಣೋಟದಿಂದ ಇಂದಿನ ಹಾಸ್ಟೆಲುಗಳನ್ನು ನೋಡುವಂತಿಲ್ಲ. ಹತ್ತಾರು ಬಿಗಿ ಬಂದೋಬಸ್ತುಗಳು, ವಿದ್ಯಾರ್ಥಿಗಳ ಗಂಭೀರ ಓದಿನ ಕೊರತೆ, ಹಾಸ್ಟೆಲ್ ವಾರ್ಡನ್, ಶಾಲಾ ಕಾಲೇಜು ಮೇಷ್ಟ್ರುಗಳ ಜಡತೆ ಹೀಗೆ ವ್ಯತ್ಯಾಸಗಳನ್ನು ಪಟ್ಟಿ ಮಾಡಬಹುದು. ಅದರಲ್ಲಿಯೂ ಕೆಲವು ಹಾಸ್ಟೆಲ್‍ಗಳು ಈಗಲೂ ವೈಚಾರಿಕ ತಿಳಿವಿನ ಕೇಂದ್ರಗಳಾಗಿ ಉಳಿದಿವೆ. ನಾನು ಗಮನಿಸಿದಂತೆ ಹರಪನಹಳ್ಳಿಯ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ ಈ ಕಾರಣಕ್ಕೆ ಗಮನಸೆಳೆಯುತ್ತಾರೆ.

ನಾನೊಮ್ಮೆ ಹರಪನಹಳ್ಳಿಗೆ ಟಿಪ್ಪು ಸುಲ್ತಾನ್ ಜಯಂತಿಯ ಭಾಷಣ ಮಾಡಲು ಹೋಗಿದ್ದೆ. ಅಂದು ನಾನು ತುಂಬಾ ಜೋಷಲ್ಲಿ ಮೈದುಂಬಿ ಮಾತನಾಡಿದೆ. ಮಾತು ಮುಗಿದ ನಂತರ ಗೆಳೆಯ ಶಿಕ್ಷಕ ಗಂಗಾಧರ ತನ್ನ ಸ್ನೇಹಬಳಗವನ್ನು ಪರಿಚಯಿಸಿದರು. ಅದರಲ್ಲಿ ಗಮನಸೆಳೆದ ವ್ಯಕ್ತಿ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಹೆಚ್.ಬಿ. ಚಂದ್ರಪ್ಪ. ಕುಳ್ಳಗೆ ಪುಟಿಯುವ ವ್ಯಕ್ತಿತ್ವದ ಚಂದ್ರಪ್ಪ ಸದಾ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಒಂದಿಲ್ಲೊಂದು ಚರ್ಚೆ ಸಂವಾದಗಳಲ್ಲಿ ತೊಡಗಿರುತ್ತಾರೆ.

ಮೂಲತಃ ಹರಿಹರ ತಾಲೂಕಿನ ನಿಟ್ಟೂರಿನ ಚಂದ್ರಪ್ಪನವರು ಬಿಎಸ್ಸಿ, ಬಿಎಡ್ ಮುಗಿದ ಮೇಲೆ 2002ರ ನವೆಂಬರ್‍ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ವಾರ್ಡ್‍ನ್ ಆಗಿ ನೇಮಕಗೊಂಡರು. ಚಂದ್ರಪ್ಪರಿಗೆ ವಿದ್ಯಾರ್ಥಿದೆಸೆಯಲ್ಲಿ ಓದಿನ ಹಸಿವಿತ್ತು. ಆದರೆ ಹಾಸ್ಟೆಲುಗಳಲ್ಲಿ ಪುಸ್ತಕಗಳಾಗಲಿ, ಅಂತಹದ್ದೊಂದು ವಾತಾವರಣವಾಗಲಿ ಇರಲಿಲ್ಲ. ಹೀಗಿದ್ದೂ ಹೇಗೋ ಪುಸ್ತಕಗಳನ್ನು ಒದಗಿಸಿಕೊಂಡು ಓದುತ್ತಿದ್ದರು. ವಿಶೇಷವಾಗಿ ತೇಜಸ್ವಿ ಕೃತಿಗಳು ವೈಚಾರಿಕ ಸೂಕ್ಷ್ಮತೆಯನ್ನೂ, ಪರಿಸರ ಪ್ರೀತಿಯನ್ನೂ, ಫೋಟೋಗ್ರಫಿಯ ಕನಸನ್ನೂ ಕಲಿಸಿದವು. ವಿದ್ಯಾರ್ಥಿದೆಸೆಯ ಕನಸುಗಳನ್ನು ಚಂದ್ರಪ್ಪ ತನ್ನ ಹಾಸ್ಟೆಲ್ ವಿದ್ಯಾರ್ಥಿಗಳ ಕನಸಾಗಿ ಪರಿವರ್ತಿಸಿದರು. ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಓದಿನ ಹಸಿವನ್ನು ಹೆಚ್ಚಿಸಿ, ಹಾಸ್ಟೆಲಿನಲ್ಲಿ ಪುಸ್ತಕಗಳ ಒದಗಿಸಲು ಮುಂದಾದರು.

ಶಾಲೆಗಳು ಪಠ್ಯಪುಸ್ತಕಗಳಿಗೆ ಒತ್ತು ನೀಡುತ್ತವೆ. ಹೀಗಾಗಿ ಶಾಲಾ ಪಠ್ಯಗಳಿಗಿಂತಲೂ ವೈಚಾರಿಕ ಮತ್ತು ಸ್ಪರ್ಧಾತ್ಮಕ ಕೃತಿಗಳನ್ನು ನಾವುಗಳು ಕೊಡಬೇಕೆನ್ನುವುದು ಚಂದ್ರಪ್ಪರ ಕನಸಾಗಿತ್ತು. ಮೊದಲು ಕೆಲಸಕ್ಕೆ ಸೇರಿದ ಚನ್ನಗಿರಿ ತಾಲೂಕಿನ ಕೆರೆಬಿಳಚಿಯಲ್ಲಿ ಮಕ್ಕಳಿಗಾಗಿ ಪುಸ್ತಕಗಳ ಸಂಗ್ರಹ ಆರಂಭಿಸುತ್ತಾರೆ. ಪ್ರೀ ಮೆಟ್ರಿಕ್ ಮಕ್ಕಳಾದ ಕಾರಣ ವೈಚಾರಿಕ ಪುಸ್ತಕಗಳು ಅಷ್ಟು ಅರಗಲಿಲ್ಲ. ಮೆಟ್ರಿಕ್ ನಂತರದ ಹಾಸ್ಟೆಲ್ ವಾರ್ಡನ್ ಆಗಿ ಹರಪನಹಳ್ಳಿಗೆ ಬಂದಾಗ ಈ ಪ್ರಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು.

ಚಂದ್ರಪ್ಪರ ಪುಸ್ತಕದ ನಂಟು ಸಹಜವಾಗಿ ಹರಪನಹಳ್ಳಿ ಭಾಗದ ಸಾಹಿತ್ಯ ವಲಯವನ್ನು ಬೆಸೆಯುತ್ತದೆ. ಕೊಟ್ಟೂರಿನ ಕುಂ.ವಿ, ಸ್ಥಳೀಯರಾದ ಇಸ್ಮಾಯಿಲ್ ಎಲಿಗಾರ, ರಾಮನ ಮಲಿ ಮುಂತಾದವರ ಸಂಪರ್ಕ ಸಿಕ್ಕ ಮೇಲೆ ಸಾಹಿತ್ಯ ಓದಿನ ಅಭಿರುಚಿಯ ವ್ಯಾಪಕತೆ ಹೆಚ್ಚುತ್ತದೆ. `ಮಕ್ಕಳು ವೈಚಾರಿಕವಾಗಿ ಪ್ರಬುದ್ಧರಾಗಬೇಕು, ಓದು ಮುಗಿಯುತ್ತಲೇ ಉದ್ಯೋಗ ಹಿಡಿಯಬೇಕು’ ಎನ್ನುವ ತತ್ವವನ್ನು ಚಂದ್ರಪ್ಪ ಪಾಲಿಸಿದರು. ಇದರ ಪರಿಣಾಮ ಸಾಹಿತ್ಯಿಕ ಕೃತಿಗಳ ಜೊತೆಗೆ ಸ್ಪರ್ಧಾತ್ಮಕ ಪುಸ್ತಕಗಳ ಸಂಗ್ರಹ ಮತ್ತು ಓದಿಸುವಿಕೆಯೂ ಹೆಚ್ಚಿತು.

ಮಳೆಯಾಧಾರಿತ ಈ ಪ್ರದೇಶದ ಮಕ್ಕಳಿಗೆ ಸರಕಾರಿ ಕೆಲಸ ಬಹುದೊಡ್ಡ ಕನಸು. ಹಾಗಾಗಿ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಠಿಣವಾಗಿ ತೊಡಗಿಸಿದರು. ಪರಿಣಾಮ ಐಎಎಸ್, ಕೆಎಎಸ್ ಹೊರತುಪಡಿಸಿ ಎಲ್ಲಾ ಇಲಾಖೆಯಲ್ಲಿಯೂ ಐದುನೂರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉದ್ಯೋಗಸ್ತರಾಗಿದ್ದಾರೆ. ಇದು ಹಾಸ್ಟೆಲ್ ವಾರ್ಡನ್ ಆಗಿ ಚಂದ್ರಪ್ಪ ಅವರ ಅತ್ತುತ್ತಮ ಮಾದರಿಯಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಓದಿದ ಮಕ್ಕಳು ಉದ್ಯೋಗ ಹಿಡಿಯುವಂತಾದರೆ, ಹಳ್ಳಿಗಳಲ್ಲಿ ಶಿಕ್ಷಣದ ಬಗೆಗಿನ ಒತ್ತು ಹೆಚ್ಚುತ್ತದೆ. ನಿರುದ್ಯೋಗ ಹೆಚ್ಚಾದರೆ, ಗ್ರಾಮೀಣರ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಚಂದ್ರಪ್ಪ ಅವರ ಕೆಲಸ ಹರಪನಹಳ್ಳಿ ಭಾಗದ ಹಳ್ಳಿಗಳಲ್ಲಿ ಶಿಕ್ಷಣದ ಬಗೆಗೆ ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿದೆ. ಮನೆಗಳಲ್ಲಿ ತಂದೆ ತಾಯಿಗಳು ಮಕ್ಕಳ ಭವಿಷ್ಯ ರೂಪಿಸಲು ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟು ಕಾಳಜಿಯನ್ನು ನಾವು ವಹಿಸುತ್ತೇವೆ ಎನ್ನುವ ಚಂದ್ರಪ್ಪ ಅವರ ಮಾತಿನಲ್ಲಿಯೇ ಅವರ ಬದ್ಧತೆ ಅರ್ಥವಾಗುತ್ತದೆ.

`ದಾರಿದೀಪ’ ಎನ್ನುವ ವೇದಿಕೆಯೊಂದನ್ನು ಚಂದ್ರಪ್ಪ ರೂಪಿಸಿದ್ದಾರೆ. ಇದು ಈ ಹಾಸ್ಟೆಲ್ ದಾರಿಯಲ್ಲಿ ಬದುಕನ್ನು ಕಟ್ಟಿಕೊಂಡವರು ಮರಳಿ ಹಾಸ್ಟೆಲ್‍ಗೆ ಎನ್ನುವಂತಿದೆ. ಈಗಾಗಲೆ ಈ ಹಾಸ್ಟೆಲಿನಲ್ಲಿ ಓದಿ, ನೌಕರಿ ಪಡೆದವರು ಈಗ ಹಾಸ್ಟೆಲಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಜಿಲ್ಲಾ, ತಾಲೂಕು ಆಡಳಿತಕ್ಕೆ ಬರುವ ಯುವ ಐಎಎಸ್ ಕೆಎಎಸ್ ಅಧಿಕಾರಿಗಳನ್ನು ಹಾಸ್ಟೆಲಿಗೆ ಕರೆಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪನ್ಯಾಸ ಕೊಡಿಸುತ್ತಾರೆ. ಚಂದ್ರಪ್ಪ ಸ್ವತಃ ಪರಿಸರವಾದಿ ಪಕ್ಷಿಪ್ರೇಮಿ. ತನ್ನ ಈ ಪರಿಸರ ಪ್ರೇಮವನ್ನು ತನ್ನ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ವಿಸ್ತರಿಸುತ್ತಾರೆ. ಬೇಸಿಗೆಯಲ್ಲಿ ಬೆಟ್ಟ ಗುಡ್ಡಗಳ ಅಲೆದು ವಿದ್ಯಾರ್ಥಿಗಳ ಸಹಾಯದಿಂದ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಹಿಂದೆ ಉಚ್ಚಂಗಿದುರ್ಗದ ಗುಡ್ಡವನ್ನು ದತ್ತು ಪಡೆದು ರಜೆಗಳಲ್ಲಿ ವಿದ್ಯಾರ್ಥಿಗಳ ಸಹಾಯದಿಂದ ಸಸಿ ನೆಡುವ, ಇರುವ ಸಸ್ಯ ಜಾತಿಗಳನ್ನು ಉಳಿಸುವ ಕಾರ್ಯಕ್ರಮ ಆಯೋಜಿಸಿದ್ದರು.

ಚಂದ್ರಪ್ಪ ಸ್ವತಃ ಒಳ್ಳೆಯ ಫೋಟೋಗ್ರಾಫರ್, ಮೊದಲಿಂದಲೂ ವೈಲ್ಡ್ ಲೈಫ್ ಫೋಟೊಗ್ರಫಿಯ ಆಸಕ್ತಿ ಇತ್ತು. ಇದೀಗ ಬಯಲು ಸೀಮೆ ಪಕ್ಷಿಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಗಾಳಿಫ್ಯಾನು (ವಿಂಡ್ ಪವರ್) ಗಳಿಂದ ನೆಲವಾಸಿ ಕ್ರಿಮಿ, ಕೀಟ, ಪಶು, ಪಕ್ಷಿಗಳಿಗೆ ಹೇಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಗುರುತಿಸುತ್ತಿದ್ದಾರೆ. ಚಂದ್ರಪ್ಪ ಹೇಳುವಂತೆ ಗಾಳಿಯ ಫ್ಯಾನುಗಳ ಶಬ್ದದಿಂದಾಗಿ ಜೀವಜಂತುಗಳ ನಿದ್ರೆ ಮತ್ತು ವಿಶ್ರಾಂತಿಗೆ ತೊಂದರೆಯಾಗಿ, ಅವುಗಳ ದೈನಂದಿನ ದಿನಚರಿ ಏರುಪೇರಾಗುತ್ತದೆ. ಇದು ಮೊಟ್ಟೆ ಇಟ್ಟು ಮರಿ ಮಾಡುವುದರ ಮೇಲೂ ಪರಿಣಾಮ ಬೀರುತ್ತದೆ, ಹೀಗಾಗಿ ಪಕ್ಷಿ ಕ್ರಿಮಿ ಕೀಟಗಳ ಸಂತಾನೋತ್ಪತ್ತಿ ಕುಂಟಿತವಾಗಿ ಅಳಿವಿನಂಚಿಗೆ ಬರುತ್ತವೆ ಎನ್ನುವುದು ಚಂದ್ರಪ್ಪ ಅವರ ಕಕ್ಕುಲಾತಿ.

ಹೀಗೆ ಚಂದ್ರಪ್ಪ ಅವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮನೆಯ ವಾತಾವರಣವನ್ನು ಸೃಷ್ಟಿಸಿ, ಅವರಲ್ಲಿ ಓದಿನ ಮೂಲಕ ವೈಚಾರಿಕತೆ ಬೆಳೆಸಿ, ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಏಕಕಾಲದಲ್ಲಿ ಪರಿಸರದ ಕಾಳಜಿಯನ್ನೂ, ಬದುಕಿನ ಪ್ರೀತಿಯನ್ನೂ ಕಲಿಸುತ್ತಾ, ನಿಜಕ್ಕೂ ಒಬ್ಬ ಹಾಸ್ಟೆಲ್ ವಾರ್ಡನ್ ಅಂದರೆ ಹೀಗಿರಬೇಕು ಎನ್ನುವಂತಿರುವ ಚಂದ್ರಪ್ಪ ಅವರ ಹೊಸ ಹೊಸ ಕನಸುಗಳೂ ಸಾಕಾರವಾಗಲಿ.

ಚಂದ್ರಪ್ಪ ಅವರ ಫೋಟೋಗ್ರಫಿ ಮತ್ತು ಹಾಸ್ಟೆಲ್ ಚಟುವಟಿಕೆಗಳನ್ನು ಗಮನಿಸಲು ಅವರ ಫೇಸ್‍ಬುಕ್ ಪೇಜನ್ನು ಗಮನಿಸಿ. https://www.facebook.com/chandrappabh.bcm

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚಂದ್ರಪ್ಪನವರ ಕಾರ್ಯವೈಖರಿ ಶ್ಲಾಘನೀಯ ಮತ್ತು ಅನುಕರಣನೀಯ. ನಮ್ಮ ಎಲ್ಲಾ ಹಾಸ್ಟೆಲ್ ಗಳ ವಾರ್ಡನ್ಗಳೂ ಚಂದ್ರಪ್ಪನವರ ಕಾರ್ಯವೈಖರಿಯನ್ನು ಅನುಸರಿಸಿದರೆ ವಿದ್ಯಾರ್ಥಿಗಳಲ್ಲಿ ಅದ್ಭುತ ಸಾಧನೆಯನ್ನು ಕಾಣಬಹುದು. ಅರುಣ್ ಅವರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...