Homeಅಂಕಣಗಳುನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

- Advertisement -
- Advertisement -
ಎಲೆಮರೆ – 28

ಹಾಸ್ಟೆಲುಗಳೆಂದರೆ ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಗಳ ತವರು ಮನೆಗಳಂತಿದ್ದವು. ಹಾಸ್ಟೆಲ್ ವಿದ್ಯಾರ್ಥಿಗಳು ಎಲ್ಲ ಬಗೆಯ ಚಳವಳಿಗಳ ಕೇಂದ್ರಬಿಂದುವಾಗಿದ್ದರು. ಕಾರಣ ಹಳ್ಳಿಗಳಿಂದ ನಗರದ ಹಾಸ್ಟೆಲ್‍ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಓದುತ್ತಲೇ ಸಾಮಾಜಿಕ ಅಸಮಾನತೆಯ ಬಗೆಗೆ ಅರಿವು ಮೂಡಿಸಿಕೊಂಡು, ಬಿಸಿರಕ್ತದ ಯುವಕ ಯುವತಿಯರು ಎಲ್ಲ ಬಗೆಯ ಅಸಮಾನತೆಯ ವಿರುದ್ಧ ಹೋರಾಟಕ್ಕೆ ಅಣಿಯಾತ್ತಿದ್ದರು. ಎಲ್ಲಾ ಹಿರಿಯ ಹೋರಾಟಗಾರರ ಹಾಸ್ಟೆಲ್ ಡೈರಿಗಳನ್ನು ಕೆದಕಿದರೆ ಅದೊಂದು ಅತ್ಯುತ್ತಮ ದಾಖಲೆಯಾಗಬಲ್ಲದು. ಆದರೆ 70-80 ರ ದಶಕದ ಹಾಸ್ಟೆಲುಗಳ ಕಣ್ಣೋಟದಿಂದ ಇಂದಿನ ಹಾಸ್ಟೆಲುಗಳನ್ನು ನೋಡುವಂತಿಲ್ಲ. ಹತ್ತಾರು ಬಿಗಿ ಬಂದೋಬಸ್ತುಗಳು, ವಿದ್ಯಾರ್ಥಿಗಳ ಗಂಭೀರ ಓದಿನ ಕೊರತೆ, ಹಾಸ್ಟೆಲ್ ವಾರ್ಡನ್, ಶಾಲಾ ಕಾಲೇಜು ಮೇಷ್ಟ್ರುಗಳ ಜಡತೆ ಹೀಗೆ ವ್ಯತ್ಯಾಸಗಳನ್ನು ಪಟ್ಟಿ ಮಾಡಬಹುದು. ಅದರಲ್ಲಿಯೂ ಕೆಲವು ಹಾಸ್ಟೆಲ್‍ಗಳು ಈಗಲೂ ವೈಚಾರಿಕ ತಿಳಿವಿನ ಕೇಂದ್ರಗಳಾಗಿ ಉಳಿದಿವೆ. ನಾನು ಗಮನಿಸಿದಂತೆ ಹರಪನಹಳ್ಳಿಯ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ ಈ ಕಾರಣಕ್ಕೆ ಗಮನಸೆಳೆಯುತ್ತಾರೆ.

ನಾನೊಮ್ಮೆ ಹರಪನಹಳ್ಳಿಗೆ ಟಿಪ್ಪು ಸುಲ್ತಾನ್ ಜಯಂತಿಯ ಭಾಷಣ ಮಾಡಲು ಹೋಗಿದ್ದೆ. ಅಂದು ನಾನು ತುಂಬಾ ಜೋಷಲ್ಲಿ ಮೈದುಂಬಿ ಮಾತನಾಡಿದೆ. ಮಾತು ಮುಗಿದ ನಂತರ ಗೆಳೆಯ ಶಿಕ್ಷಕ ಗಂಗಾಧರ ತನ್ನ ಸ್ನೇಹಬಳಗವನ್ನು ಪರಿಚಯಿಸಿದರು. ಅದರಲ್ಲಿ ಗಮನಸೆಳೆದ ವ್ಯಕ್ತಿ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಹೆಚ್.ಬಿ. ಚಂದ್ರಪ್ಪ. ಕುಳ್ಳಗೆ ಪುಟಿಯುವ ವ್ಯಕ್ತಿತ್ವದ ಚಂದ್ರಪ್ಪ ಸದಾ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಒಂದಿಲ್ಲೊಂದು ಚರ್ಚೆ ಸಂವಾದಗಳಲ್ಲಿ ತೊಡಗಿರುತ್ತಾರೆ.

ಮೂಲತಃ ಹರಿಹರ ತಾಲೂಕಿನ ನಿಟ್ಟೂರಿನ ಚಂದ್ರಪ್ಪನವರು ಬಿಎಸ್ಸಿ, ಬಿಎಡ್ ಮುಗಿದ ಮೇಲೆ 2002ರ ನವೆಂಬರ್‍ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ವಾರ್ಡ್‍ನ್ ಆಗಿ ನೇಮಕಗೊಂಡರು. ಚಂದ್ರಪ್ಪರಿಗೆ ವಿದ್ಯಾರ್ಥಿದೆಸೆಯಲ್ಲಿ ಓದಿನ ಹಸಿವಿತ್ತು. ಆದರೆ ಹಾಸ್ಟೆಲುಗಳಲ್ಲಿ ಪುಸ್ತಕಗಳಾಗಲಿ, ಅಂತಹದ್ದೊಂದು ವಾತಾವರಣವಾಗಲಿ ಇರಲಿಲ್ಲ. ಹೀಗಿದ್ದೂ ಹೇಗೋ ಪುಸ್ತಕಗಳನ್ನು ಒದಗಿಸಿಕೊಂಡು ಓದುತ್ತಿದ್ದರು. ವಿಶೇಷವಾಗಿ ತೇಜಸ್ವಿ ಕೃತಿಗಳು ವೈಚಾರಿಕ ಸೂಕ್ಷ್ಮತೆಯನ್ನೂ, ಪರಿಸರ ಪ್ರೀತಿಯನ್ನೂ, ಫೋಟೋಗ್ರಫಿಯ ಕನಸನ್ನೂ ಕಲಿಸಿದವು. ವಿದ್ಯಾರ್ಥಿದೆಸೆಯ ಕನಸುಗಳನ್ನು ಚಂದ್ರಪ್ಪ ತನ್ನ ಹಾಸ್ಟೆಲ್ ವಿದ್ಯಾರ್ಥಿಗಳ ಕನಸಾಗಿ ಪರಿವರ್ತಿಸಿದರು. ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಓದಿನ ಹಸಿವನ್ನು ಹೆಚ್ಚಿಸಿ, ಹಾಸ್ಟೆಲಿನಲ್ಲಿ ಪುಸ್ತಕಗಳ ಒದಗಿಸಲು ಮುಂದಾದರು.

ಶಾಲೆಗಳು ಪಠ್ಯಪುಸ್ತಕಗಳಿಗೆ ಒತ್ತು ನೀಡುತ್ತವೆ. ಹೀಗಾಗಿ ಶಾಲಾ ಪಠ್ಯಗಳಿಗಿಂತಲೂ ವೈಚಾರಿಕ ಮತ್ತು ಸ್ಪರ್ಧಾತ್ಮಕ ಕೃತಿಗಳನ್ನು ನಾವುಗಳು ಕೊಡಬೇಕೆನ್ನುವುದು ಚಂದ್ರಪ್ಪರ ಕನಸಾಗಿತ್ತು. ಮೊದಲು ಕೆಲಸಕ್ಕೆ ಸೇರಿದ ಚನ್ನಗಿರಿ ತಾಲೂಕಿನ ಕೆರೆಬಿಳಚಿಯಲ್ಲಿ ಮಕ್ಕಳಿಗಾಗಿ ಪುಸ್ತಕಗಳ ಸಂಗ್ರಹ ಆರಂಭಿಸುತ್ತಾರೆ. ಪ್ರೀ ಮೆಟ್ರಿಕ್ ಮಕ್ಕಳಾದ ಕಾರಣ ವೈಚಾರಿಕ ಪುಸ್ತಕಗಳು ಅಷ್ಟು ಅರಗಲಿಲ್ಲ. ಮೆಟ್ರಿಕ್ ನಂತರದ ಹಾಸ್ಟೆಲ್ ವಾರ್ಡನ್ ಆಗಿ ಹರಪನಹಳ್ಳಿಗೆ ಬಂದಾಗ ಈ ಪ್ರಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು.

ಚಂದ್ರಪ್ಪರ ಪುಸ್ತಕದ ನಂಟು ಸಹಜವಾಗಿ ಹರಪನಹಳ್ಳಿ ಭಾಗದ ಸಾಹಿತ್ಯ ವಲಯವನ್ನು ಬೆಸೆಯುತ್ತದೆ. ಕೊಟ್ಟೂರಿನ ಕುಂ.ವಿ, ಸ್ಥಳೀಯರಾದ ಇಸ್ಮಾಯಿಲ್ ಎಲಿಗಾರ, ರಾಮನ ಮಲಿ ಮುಂತಾದವರ ಸಂಪರ್ಕ ಸಿಕ್ಕ ಮೇಲೆ ಸಾಹಿತ್ಯ ಓದಿನ ಅಭಿರುಚಿಯ ವ್ಯಾಪಕತೆ ಹೆಚ್ಚುತ್ತದೆ. `ಮಕ್ಕಳು ವೈಚಾರಿಕವಾಗಿ ಪ್ರಬುದ್ಧರಾಗಬೇಕು, ಓದು ಮುಗಿಯುತ್ತಲೇ ಉದ್ಯೋಗ ಹಿಡಿಯಬೇಕು’ ಎನ್ನುವ ತತ್ವವನ್ನು ಚಂದ್ರಪ್ಪ ಪಾಲಿಸಿದರು. ಇದರ ಪರಿಣಾಮ ಸಾಹಿತ್ಯಿಕ ಕೃತಿಗಳ ಜೊತೆಗೆ ಸ್ಪರ್ಧಾತ್ಮಕ ಪುಸ್ತಕಗಳ ಸಂಗ್ರಹ ಮತ್ತು ಓದಿಸುವಿಕೆಯೂ ಹೆಚ್ಚಿತು.

ಮಳೆಯಾಧಾರಿತ ಈ ಪ್ರದೇಶದ ಮಕ್ಕಳಿಗೆ ಸರಕಾರಿ ಕೆಲಸ ಬಹುದೊಡ್ಡ ಕನಸು. ಹಾಗಾಗಿ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಠಿಣವಾಗಿ ತೊಡಗಿಸಿದರು. ಪರಿಣಾಮ ಐಎಎಸ್, ಕೆಎಎಸ್ ಹೊರತುಪಡಿಸಿ ಎಲ್ಲಾ ಇಲಾಖೆಯಲ್ಲಿಯೂ ಐದುನೂರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉದ್ಯೋಗಸ್ತರಾಗಿದ್ದಾರೆ. ಇದು ಹಾಸ್ಟೆಲ್ ವಾರ್ಡನ್ ಆಗಿ ಚಂದ್ರಪ್ಪ ಅವರ ಅತ್ತುತ್ತಮ ಮಾದರಿಯಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಓದಿದ ಮಕ್ಕಳು ಉದ್ಯೋಗ ಹಿಡಿಯುವಂತಾದರೆ, ಹಳ್ಳಿಗಳಲ್ಲಿ ಶಿಕ್ಷಣದ ಬಗೆಗಿನ ಒತ್ತು ಹೆಚ್ಚುತ್ತದೆ. ನಿರುದ್ಯೋಗ ಹೆಚ್ಚಾದರೆ, ಗ್ರಾಮೀಣರ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಚಂದ್ರಪ್ಪ ಅವರ ಕೆಲಸ ಹರಪನಹಳ್ಳಿ ಭಾಗದ ಹಳ್ಳಿಗಳಲ್ಲಿ ಶಿಕ್ಷಣದ ಬಗೆಗೆ ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿದೆ. ಮನೆಗಳಲ್ಲಿ ತಂದೆ ತಾಯಿಗಳು ಮಕ್ಕಳ ಭವಿಷ್ಯ ರೂಪಿಸಲು ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟು ಕಾಳಜಿಯನ್ನು ನಾವು ವಹಿಸುತ್ತೇವೆ ಎನ್ನುವ ಚಂದ್ರಪ್ಪ ಅವರ ಮಾತಿನಲ್ಲಿಯೇ ಅವರ ಬದ್ಧತೆ ಅರ್ಥವಾಗುತ್ತದೆ.

`ದಾರಿದೀಪ’ ಎನ್ನುವ ವೇದಿಕೆಯೊಂದನ್ನು ಚಂದ್ರಪ್ಪ ರೂಪಿಸಿದ್ದಾರೆ. ಇದು ಈ ಹಾಸ್ಟೆಲ್ ದಾರಿಯಲ್ಲಿ ಬದುಕನ್ನು ಕಟ್ಟಿಕೊಂಡವರು ಮರಳಿ ಹಾಸ್ಟೆಲ್‍ಗೆ ಎನ್ನುವಂತಿದೆ. ಈಗಾಗಲೆ ಈ ಹಾಸ್ಟೆಲಿನಲ್ಲಿ ಓದಿ, ನೌಕರಿ ಪಡೆದವರು ಈಗ ಹಾಸ್ಟೆಲಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಜಿಲ್ಲಾ, ತಾಲೂಕು ಆಡಳಿತಕ್ಕೆ ಬರುವ ಯುವ ಐಎಎಸ್ ಕೆಎಎಸ್ ಅಧಿಕಾರಿಗಳನ್ನು ಹಾಸ್ಟೆಲಿಗೆ ಕರೆಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪನ್ಯಾಸ ಕೊಡಿಸುತ್ತಾರೆ. ಚಂದ್ರಪ್ಪ ಸ್ವತಃ ಪರಿಸರವಾದಿ ಪಕ್ಷಿಪ್ರೇಮಿ. ತನ್ನ ಈ ಪರಿಸರ ಪ್ರೇಮವನ್ನು ತನ್ನ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ವಿಸ್ತರಿಸುತ್ತಾರೆ. ಬೇಸಿಗೆಯಲ್ಲಿ ಬೆಟ್ಟ ಗುಡ್ಡಗಳ ಅಲೆದು ವಿದ್ಯಾರ್ಥಿಗಳ ಸಹಾಯದಿಂದ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಹಿಂದೆ ಉಚ್ಚಂಗಿದುರ್ಗದ ಗುಡ್ಡವನ್ನು ದತ್ತು ಪಡೆದು ರಜೆಗಳಲ್ಲಿ ವಿದ್ಯಾರ್ಥಿಗಳ ಸಹಾಯದಿಂದ ಸಸಿ ನೆಡುವ, ಇರುವ ಸಸ್ಯ ಜಾತಿಗಳನ್ನು ಉಳಿಸುವ ಕಾರ್ಯಕ್ರಮ ಆಯೋಜಿಸಿದ್ದರು.

ಚಂದ್ರಪ್ಪ ಸ್ವತಃ ಒಳ್ಳೆಯ ಫೋಟೋಗ್ರಾಫರ್, ಮೊದಲಿಂದಲೂ ವೈಲ್ಡ್ ಲೈಫ್ ಫೋಟೊಗ್ರಫಿಯ ಆಸಕ್ತಿ ಇತ್ತು. ಇದೀಗ ಬಯಲು ಸೀಮೆ ಪಕ್ಷಿಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಗಾಳಿಫ್ಯಾನು (ವಿಂಡ್ ಪವರ್) ಗಳಿಂದ ನೆಲವಾಸಿ ಕ್ರಿಮಿ, ಕೀಟ, ಪಶು, ಪಕ್ಷಿಗಳಿಗೆ ಹೇಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಗುರುತಿಸುತ್ತಿದ್ದಾರೆ. ಚಂದ್ರಪ್ಪ ಹೇಳುವಂತೆ ಗಾಳಿಯ ಫ್ಯಾನುಗಳ ಶಬ್ದದಿಂದಾಗಿ ಜೀವಜಂತುಗಳ ನಿದ್ರೆ ಮತ್ತು ವಿಶ್ರಾಂತಿಗೆ ತೊಂದರೆಯಾಗಿ, ಅವುಗಳ ದೈನಂದಿನ ದಿನಚರಿ ಏರುಪೇರಾಗುತ್ತದೆ. ಇದು ಮೊಟ್ಟೆ ಇಟ್ಟು ಮರಿ ಮಾಡುವುದರ ಮೇಲೂ ಪರಿಣಾಮ ಬೀರುತ್ತದೆ, ಹೀಗಾಗಿ ಪಕ್ಷಿ ಕ್ರಿಮಿ ಕೀಟಗಳ ಸಂತಾನೋತ್ಪತ್ತಿ ಕುಂಟಿತವಾಗಿ ಅಳಿವಿನಂಚಿಗೆ ಬರುತ್ತವೆ ಎನ್ನುವುದು ಚಂದ್ರಪ್ಪ ಅವರ ಕಕ್ಕುಲಾತಿ.

ಹೀಗೆ ಚಂದ್ರಪ್ಪ ಅವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮನೆಯ ವಾತಾವರಣವನ್ನು ಸೃಷ್ಟಿಸಿ, ಅವರಲ್ಲಿ ಓದಿನ ಮೂಲಕ ವೈಚಾರಿಕತೆ ಬೆಳೆಸಿ, ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಏಕಕಾಲದಲ್ಲಿ ಪರಿಸರದ ಕಾಳಜಿಯನ್ನೂ, ಬದುಕಿನ ಪ್ರೀತಿಯನ್ನೂ ಕಲಿಸುತ್ತಾ, ನಿಜಕ್ಕೂ ಒಬ್ಬ ಹಾಸ್ಟೆಲ್ ವಾರ್ಡನ್ ಅಂದರೆ ಹೀಗಿರಬೇಕು ಎನ್ನುವಂತಿರುವ ಚಂದ್ರಪ್ಪ ಅವರ ಹೊಸ ಹೊಸ ಕನಸುಗಳೂ ಸಾಕಾರವಾಗಲಿ.

ಚಂದ್ರಪ್ಪ ಅವರ ಫೋಟೋಗ್ರಫಿ ಮತ್ತು ಹಾಸ್ಟೆಲ್ ಚಟುವಟಿಕೆಗಳನ್ನು ಗಮನಿಸಲು ಅವರ ಫೇಸ್‍ಬುಕ್ ಪೇಜನ್ನು ಗಮನಿಸಿ. https://www.facebook.com/chandrappabh.bcm

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚಂದ್ರಪ್ಪನವರ ಕಾರ್ಯವೈಖರಿ ಶ್ಲಾಘನೀಯ ಮತ್ತು ಅನುಕರಣನೀಯ. ನಮ್ಮ ಎಲ್ಲಾ ಹಾಸ್ಟೆಲ್ ಗಳ ವಾರ್ಡನ್ಗಳೂ ಚಂದ್ರಪ್ಪನವರ ಕಾರ್ಯವೈಖರಿಯನ್ನು ಅನುಸರಿಸಿದರೆ ವಿದ್ಯಾರ್ಥಿಗಳಲ್ಲಿ ಅದ್ಭುತ ಸಾಧನೆಯನ್ನು ಕಾಣಬಹುದು. ಅರುಣ್ ಅವರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...