Homeಅಂಕಣಗಳುನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

- Advertisement -
- Advertisement -
ಎಲೆಮರೆ – 28

ಹಾಸ್ಟೆಲುಗಳೆಂದರೆ ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಗಳ ತವರು ಮನೆಗಳಂತಿದ್ದವು. ಹಾಸ್ಟೆಲ್ ವಿದ್ಯಾರ್ಥಿಗಳು ಎಲ್ಲ ಬಗೆಯ ಚಳವಳಿಗಳ ಕೇಂದ್ರಬಿಂದುವಾಗಿದ್ದರು. ಕಾರಣ ಹಳ್ಳಿಗಳಿಂದ ನಗರದ ಹಾಸ್ಟೆಲ್‍ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಓದುತ್ತಲೇ ಸಾಮಾಜಿಕ ಅಸಮಾನತೆಯ ಬಗೆಗೆ ಅರಿವು ಮೂಡಿಸಿಕೊಂಡು, ಬಿಸಿರಕ್ತದ ಯುವಕ ಯುವತಿಯರು ಎಲ್ಲ ಬಗೆಯ ಅಸಮಾನತೆಯ ವಿರುದ್ಧ ಹೋರಾಟಕ್ಕೆ ಅಣಿಯಾತ್ತಿದ್ದರು. ಎಲ್ಲಾ ಹಿರಿಯ ಹೋರಾಟಗಾರರ ಹಾಸ್ಟೆಲ್ ಡೈರಿಗಳನ್ನು ಕೆದಕಿದರೆ ಅದೊಂದು ಅತ್ಯುತ್ತಮ ದಾಖಲೆಯಾಗಬಲ್ಲದು. ಆದರೆ 70-80 ರ ದಶಕದ ಹಾಸ್ಟೆಲುಗಳ ಕಣ್ಣೋಟದಿಂದ ಇಂದಿನ ಹಾಸ್ಟೆಲುಗಳನ್ನು ನೋಡುವಂತಿಲ್ಲ. ಹತ್ತಾರು ಬಿಗಿ ಬಂದೋಬಸ್ತುಗಳು, ವಿದ್ಯಾರ್ಥಿಗಳ ಗಂಭೀರ ಓದಿನ ಕೊರತೆ, ಹಾಸ್ಟೆಲ್ ವಾರ್ಡನ್, ಶಾಲಾ ಕಾಲೇಜು ಮೇಷ್ಟ್ರುಗಳ ಜಡತೆ ಹೀಗೆ ವ್ಯತ್ಯಾಸಗಳನ್ನು ಪಟ್ಟಿ ಮಾಡಬಹುದು. ಅದರಲ್ಲಿಯೂ ಕೆಲವು ಹಾಸ್ಟೆಲ್‍ಗಳು ಈಗಲೂ ವೈಚಾರಿಕ ತಿಳಿವಿನ ಕೇಂದ್ರಗಳಾಗಿ ಉಳಿದಿವೆ. ನಾನು ಗಮನಿಸಿದಂತೆ ಹರಪನಹಳ್ಳಿಯ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ ಈ ಕಾರಣಕ್ಕೆ ಗಮನಸೆಳೆಯುತ್ತಾರೆ.

ನಾನೊಮ್ಮೆ ಹರಪನಹಳ್ಳಿಗೆ ಟಿಪ್ಪು ಸುಲ್ತಾನ್ ಜಯಂತಿಯ ಭಾಷಣ ಮಾಡಲು ಹೋಗಿದ್ದೆ. ಅಂದು ನಾನು ತುಂಬಾ ಜೋಷಲ್ಲಿ ಮೈದುಂಬಿ ಮಾತನಾಡಿದೆ. ಮಾತು ಮುಗಿದ ನಂತರ ಗೆಳೆಯ ಶಿಕ್ಷಕ ಗಂಗಾಧರ ತನ್ನ ಸ್ನೇಹಬಳಗವನ್ನು ಪರಿಚಯಿಸಿದರು. ಅದರಲ್ಲಿ ಗಮನಸೆಳೆದ ವ್ಯಕ್ತಿ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಹೆಚ್.ಬಿ. ಚಂದ್ರಪ್ಪ. ಕುಳ್ಳಗೆ ಪುಟಿಯುವ ವ್ಯಕ್ತಿತ್ವದ ಚಂದ್ರಪ್ಪ ಸದಾ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಒಂದಿಲ್ಲೊಂದು ಚರ್ಚೆ ಸಂವಾದಗಳಲ್ಲಿ ತೊಡಗಿರುತ್ತಾರೆ.

ಮೂಲತಃ ಹರಿಹರ ತಾಲೂಕಿನ ನಿಟ್ಟೂರಿನ ಚಂದ್ರಪ್ಪನವರು ಬಿಎಸ್ಸಿ, ಬಿಎಡ್ ಮುಗಿದ ಮೇಲೆ 2002ರ ನವೆಂಬರ್‍ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ವಾರ್ಡ್‍ನ್ ಆಗಿ ನೇಮಕಗೊಂಡರು. ಚಂದ್ರಪ್ಪರಿಗೆ ವಿದ್ಯಾರ್ಥಿದೆಸೆಯಲ್ಲಿ ಓದಿನ ಹಸಿವಿತ್ತು. ಆದರೆ ಹಾಸ್ಟೆಲುಗಳಲ್ಲಿ ಪುಸ್ತಕಗಳಾಗಲಿ, ಅಂತಹದ್ದೊಂದು ವಾತಾವರಣವಾಗಲಿ ಇರಲಿಲ್ಲ. ಹೀಗಿದ್ದೂ ಹೇಗೋ ಪುಸ್ತಕಗಳನ್ನು ಒದಗಿಸಿಕೊಂಡು ಓದುತ್ತಿದ್ದರು. ವಿಶೇಷವಾಗಿ ತೇಜಸ್ವಿ ಕೃತಿಗಳು ವೈಚಾರಿಕ ಸೂಕ್ಷ್ಮತೆಯನ್ನೂ, ಪರಿಸರ ಪ್ರೀತಿಯನ್ನೂ, ಫೋಟೋಗ್ರಫಿಯ ಕನಸನ್ನೂ ಕಲಿಸಿದವು. ವಿದ್ಯಾರ್ಥಿದೆಸೆಯ ಕನಸುಗಳನ್ನು ಚಂದ್ರಪ್ಪ ತನ್ನ ಹಾಸ್ಟೆಲ್ ವಿದ್ಯಾರ್ಥಿಗಳ ಕನಸಾಗಿ ಪರಿವರ್ತಿಸಿದರು. ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಓದಿನ ಹಸಿವನ್ನು ಹೆಚ್ಚಿಸಿ, ಹಾಸ್ಟೆಲಿನಲ್ಲಿ ಪುಸ್ತಕಗಳ ಒದಗಿಸಲು ಮುಂದಾದರು.

ಶಾಲೆಗಳು ಪಠ್ಯಪುಸ್ತಕಗಳಿಗೆ ಒತ್ತು ನೀಡುತ್ತವೆ. ಹೀಗಾಗಿ ಶಾಲಾ ಪಠ್ಯಗಳಿಗಿಂತಲೂ ವೈಚಾರಿಕ ಮತ್ತು ಸ್ಪರ್ಧಾತ್ಮಕ ಕೃತಿಗಳನ್ನು ನಾವುಗಳು ಕೊಡಬೇಕೆನ್ನುವುದು ಚಂದ್ರಪ್ಪರ ಕನಸಾಗಿತ್ತು. ಮೊದಲು ಕೆಲಸಕ್ಕೆ ಸೇರಿದ ಚನ್ನಗಿರಿ ತಾಲೂಕಿನ ಕೆರೆಬಿಳಚಿಯಲ್ಲಿ ಮಕ್ಕಳಿಗಾಗಿ ಪುಸ್ತಕಗಳ ಸಂಗ್ರಹ ಆರಂಭಿಸುತ್ತಾರೆ. ಪ್ರೀ ಮೆಟ್ರಿಕ್ ಮಕ್ಕಳಾದ ಕಾರಣ ವೈಚಾರಿಕ ಪುಸ್ತಕಗಳು ಅಷ್ಟು ಅರಗಲಿಲ್ಲ. ಮೆಟ್ರಿಕ್ ನಂತರದ ಹಾಸ್ಟೆಲ್ ವಾರ್ಡನ್ ಆಗಿ ಹರಪನಹಳ್ಳಿಗೆ ಬಂದಾಗ ಈ ಪ್ರಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು.

ಚಂದ್ರಪ್ಪರ ಪುಸ್ತಕದ ನಂಟು ಸಹಜವಾಗಿ ಹರಪನಹಳ್ಳಿ ಭಾಗದ ಸಾಹಿತ್ಯ ವಲಯವನ್ನು ಬೆಸೆಯುತ್ತದೆ. ಕೊಟ್ಟೂರಿನ ಕುಂ.ವಿ, ಸ್ಥಳೀಯರಾದ ಇಸ್ಮಾಯಿಲ್ ಎಲಿಗಾರ, ರಾಮನ ಮಲಿ ಮುಂತಾದವರ ಸಂಪರ್ಕ ಸಿಕ್ಕ ಮೇಲೆ ಸಾಹಿತ್ಯ ಓದಿನ ಅಭಿರುಚಿಯ ವ್ಯಾಪಕತೆ ಹೆಚ್ಚುತ್ತದೆ. `ಮಕ್ಕಳು ವೈಚಾರಿಕವಾಗಿ ಪ್ರಬುದ್ಧರಾಗಬೇಕು, ಓದು ಮುಗಿಯುತ್ತಲೇ ಉದ್ಯೋಗ ಹಿಡಿಯಬೇಕು’ ಎನ್ನುವ ತತ್ವವನ್ನು ಚಂದ್ರಪ್ಪ ಪಾಲಿಸಿದರು. ಇದರ ಪರಿಣಾಮ ಸಾಹಿತ್ಯಿಕ ಕೃತಿಗಳ ಜೊತೆಗೆ ಸ್ಪರ್ಧಾತ್ಮಕ ಪುಸ್ತಕಗಳ ಸಂಗ್ರಹ ಮತ್ತು ಓದಿಸುವಿಕೆಯೂ ಹೆಚ್ಚಿತು.

ಮಳೆಯಾಧಾರಿತ ಈ ಪ್ರದೇಶದ ಮಕ್ಕಳಿಗೆ ಸರಕಾರಿ ಕೆಲಸ ಬಹುದೊಡ್ಡ ಕನಸು. ಹಾಗಾಗಿ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಠಿಣವಾಗಿ ತೊಡಗಿಸಿದರು. ಪರಿಣಾಮ ಐಎಎಸ್, ಕೆಎಎಸ್ ಹೊರತುಪಡಿಸಿ ಎಲ್ಲಾ ಇಲಾಖೆಯಲ್ಲಿಯೂ ಐದುನೂರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉದ್ಯೋಗಸ್ತರಾಗಿದ್ದಾರೆ. ಇದು ಹಾಸ್ಟೆಲ್ ವಾರ್ಡನ್ ಆಗಿ ಚಂದ್ರಪ್ಪ ಅವರ ಅತ್ತುತ್ತಮ ಮಾದರಿಯಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಓದಿದ ಮಕ್ಕಳು ಉದ್ಯೋಗ ಹಿಡಿಯುವಂತಾದರೆ, ಹಳ್ಳಿಗಳಲ್ಲಿ ಶಿಕ್ಷಣದ ಬಗೆಗಿನ ಒತ್ತು ಹೆಚ್ಚುತ್ತದೆ. ನಿರುದ್ಯೋಗ ಹೆಚ್ಚಾದರೆ, ಗ್ರಾಮೀಣರ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಚಂದ್ರಪ್ಪ ಅವರ ಕೆಲಸ ಹರಪನಹಳ್ಳಿ ಭಾಗದ ಹಳ್ಳಿಗಳಲ್ಲಿ ಶಿಕ್ಷಣದ ಬಗೆಗೆ ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿದೆ. ಮನೆಗಳಲ್ಲಿ ತಂದೆ ತಾಯಿಗಳು ಮಕ್ಕಳ ಭವಿಷ್ಯ ರೂಪಿಸಲು ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟು ಕಾಳಜಿಯನ್ನು ನಾವು ವಹಿಸುತ್ತೇವೆ ಎನ್ನುವ ಚಂದ್ರಪ್ಪ ಅವರ ಮಾತಿನಲ್ಲಿಯೇ ಅವರ ಬದ್ಧತೆ ಅರ್ಥವಾಗುತ್ತದೆ.

`ದಾರಿದೀಪ’ ಎನ್ನುವ ವೇದಿಕೆಯೊಂದನ್ನು ಚಂದ್ರಪ್ಪ ರೂಪಿಸಿದ್ದಾರೆ. ಇದು ಈ ಹಾಸ್ಟೆಲ್ ದಾರಿಯಲ್ಲಿ ಬದುಕನ್ನು ಕಟ್ಟಿಕೊಂಡವರು ಮರಳಿ ಹಾಸ್ಟೆಲ್‍ಗೆ ಎನ್ನುವಂತಿದೆ. ಈಗಾಗಲೆ ಈ ಹಾಸ್ಟೆಲಿನಲ್ಲಿ ಓದಿ, ನೌಕರಿ ಪಡೆದವರು ಈಗ ಹಾಸ್ಟೆಲಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಜಿಲ್ಲಾ, ತಾಲೂಕು ಆಡಳಿತಕ್ಕೆ ಬರುವ ಯುವ ಐಎಎಸ್ ಕೆಎಎಸ್ ಅಧಿಕಾರಿಗಳನ್ನು ಹಾಸ್ಟೆಲಿಗೆ ಕರೆಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪನ್ಯಾಸ ಕೊಡಿಸುತ್ತಾರೆ. ಚಂದ್ರಪ್ಪ ಸ್ವತಃ ಪರಿಸರವಾದಿ ಪಕ್ಷಿಪ್ರೇಮಿ. ತನ್ನ ಈ ಪರಿಸರ ಪ್ರೇಮವನ್ನು ತನ್ನ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ವಿಸ್ತರಿಸುತ್ತಾರೆ. ಬೇಸಿಗೆಯಲ್ಲಿ ಬೆಟ್ಟ ಗುಡ್ಡಗಳ ಅಲೆದು ವಿದ್ಯಾರ್ಥಿಗಳ ಸಹಾಯದಿಂದ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಹಿಂದೆ ಉಚ್ಚಂಗಿದುರ್ಗದ ಗುಡ್ಡವನ್ನು ದತ್ತು ಪಡೆದು ರಜೆಗಳಲ್ಲಿ ವಿದ್ಯಾರ್ಥಿಗಳ ಸಹಾಯದಿಂದ ಸಸಿ ನೆಡುವ, ಇರುವ ಸಸ್ಯ ಜಾತಿಗಳನ್ನು ಉಳಿಸುವ ಕಾರ್ಯಕ್ರಮ ಆಯೋಜಿಸಿದ್ದರು.

ಚಂದ್ರಪ್ಪ ಸ್ವತಃ ಒಳ್ಳೆಯ ಫೋಟೋಗ್ರಾಫರ್, ಮೊದಲಿಂದಲೂ ವೈಲ್ಡ್ ಲೈಫ್ ಫೋಟೊಗ್ರಫಿಯ ಆಸಕ್ತಿ ಇತ್ತು. ಇದೀಗ ಬಯಲು ಸೀಮೆ ಪಕ್ಷಿಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಗಾಳಿಫ್ಯಾನು (ವಿಂಡ್ ಪವರ್) ಗಳಿಂದ ನೆಲವಾಸಿ ಕ್ರಿಮಿ, ಕೀಟ, ಪಶು, ಪಕ್ಷಿಗಳಿಗೆ ಹೇಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಗುರುತಿಸುತ್ತಿದ್ದಾರೆ. ಚಂದ್ರಪ್ಪ ಹೇಳುವಂತೆ ಗಾಳಿಯ ಫ್ಯಾನುಗಳ ಶಬ್ದದಿಂದಾಗಿ ಜೀವಜಂತುಗಳ ನಿದ್ರೆ ಮತ್ತು ವಿಶ್ರಾಂತಿಗೆ ತೊಂದರೆಯಾಗಿ, ಅವುಗಳ ದೈನಂದಿನ ದಿನಚರಿ ಏರುಪೇರಾಗುತ್ತದೆ. ಇದು ಮೊಟ್ಟೆ ಇಟ್ಟು ಮರಿ ಮಾಡುವುದರ ಮೇಲೂ ಪರಿಣಾಮ ಬೀರುತ್ತದೆ, ಹೀಗಾಗಿ ಪಕ್ಷಿ ಕ್ರಿಮಿ ಕೀಟಗಳ ಸಂತಾನೋತ್ಪತ್ತಿ ಕುಂಟಿತವಾಗಿ ಅಳಿವಿನಂಚಿಗೆ ಬರುತ್ತವೆ ಎನ್ನುವುದು ಚಂದ್ರಪ್ಪ ಅವರ ಕಕ್ಕುಲಾತಿ.

ಹೀಗೆ ಚಂದ್ರಪ್ಪ ಅವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮನೆಯ ವಾತಾವರಣವನ್ನು ಸೃಷ್ಟಿಸಿ, ಅವರಲ್ಲಿ ಓದಿನ ಮೂಲಕ ವೈಚಾರಿಕತೆ ಬೆಳೆಸಿ, ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಏಕಕಾಲದಲ್ಲಿ ಪರಿಸರದ ಕಾಳಜಿಯನ್ನೂ, ಬದುಕಿನ ಪ್ರೀತಿಯನ್ನೂ ಕಲಿಸುತ್ತಾ, ನಿಜಕ್ಕೂ ಒಬ್ಬ ಹಾಸ್ಟೆಲ್ ವಾರ್ಡನ್ ಅಂದರೆ ಹೀಗಿರಬೇಕು ಎನ್ನುವಂತಿರುವ ಚಂದ್ರಪ್ಪ ಅವರ ಹೊಸ ಹೊಸ ಕನಸುಗಳೂ ಸಾಕಾರವಾಗಲಿ.

ಚಂದ್ರಪ್ಪ ಅವರ ಫೋಟೋಗ್ರಫಿ ಮತ್ತು ಹಾಸ್ಟೆಲ್ ಚಟುವಟಿಕೆಗಳನ್ನು ಗಮನಿಸಲು ಅವರ ಫೇಸ್‍ಬುಕ್ ಪೇಜನ್ನು ಗಮನಿಸಿ. https://www.facebook.com/chandrappabh.bcm

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚಂದ್ರಪ್ಪನವರ ಕಾರ್ಯವೈಖರಿ ಶ್ಲಾಘನೀಯ ಮತ್ತು ಅನುಕರಣನೀಯ. ನಮ್ಮ ಎಲ್ಲಾ ಹಾಸ್ಟೆಲ್ ಗಳ ವಾರ್ಡನ್ಗಳೂ ಚಂದ್ರಪ್ಪನವರ ಕಾರ್ಯವೈಖರಿಯನ್ನು ಅನುಸರಿಸಿದರೆ ವಿದ್ಯಾರ್ಥಿಗಳಲ್ಲಿ ಅದ್ಭುತ ಸಾಧನೆಯನ್ನು ಕಾಣಬಹುದು. ಅರುಣ್ ಅವರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...