Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

ಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

- Advertisement -
- Advertisement -

ರಮೇಶ್ ಜಾರಕಿಹೊಳಿ ಅವರ ಮನಿ ಒಳಗ ಸಿಡಿ ಪ್ಲೇಯರ್ ಇಲ್ಲ. ಅದು ಇರೋದು ಅವರ ಕಚೇರಿಯೊಳಗ. ಅವರು ಜಾಸ್ತಿ ಪಿಚ್ಚರು ನೋಡೋದಿಲ್ಲ. ಮೊನ್ನೆ ಮೊನ್ನೆಯಿಂದ ಟಿವಿ ನೋಡೋದು ಕಮ್ಮಿ ಅಗೆತಿ ಅಂತ ಅವರ ಪಿಎ ಸಾಹೇಬರು ಅಂದ್ರು ಮೊನ್ನೆ.

ಅದು ಯಾಕಾಪಾ ಅಂದ್ರ ಅವರು ತಮ್ಮ ವಿರುದ್ಧದ ಸುದ್ದಿ ಹಾಗೂ ಕೋವಿಡ್ ವೈರಸ್‌ಗಳಿಗೆ ಗುರಿಯಾಗಿ ತಮ್ಮ ಗೋಕಾಕ ಜಲಪಾತದ ಹತ್ತಿರದ ಮನಿ ಒಳಗ ಸುಧಾರಿಸಿಕೊಳ್ಳತಾ ಇದ್ದಾರ.

“ಗೋಕಾಕ ಸಾಹುಕಾರ್ ಅವರ ರಾಸಲೀಲೆ” ಅಂತ ಉದ್ದುದ್ದ ಸುದ್ದಿ ಬರೆದು ಊರೆಲ್ಲ ಗದ್ದಲ ಮಾಡಿದ ನಮ್ಮ ಮಾಧ್ಯಮಗಳು ಆ ಪ್ರಕರಣದ ಅಳಕ್ಕೆ ಇಳಿಯಲಿಲ್ಲ. ಹಂಗಂದ್ರ ಅದರ ಸರಿ ತಪ್ಪುಗಳ ಲೆಕ್ಕಾಚಾರ ಅಂತ ಅಲ್ಲ. ಆ ಘಟನೆಯ ಬೇರೆ ಬೇರೆ ಆಯಾಮಗಳ ವಿಚಾರ ಮಾಡಲಿಲ್ಲ ಅಂತ.

ಮೊದಲನೆದಾಗಿ ಮಾಧ್ಯಮಗಳ ಭಾಷೆ ಸೂಕ್ಷ್ಮವಾಗಿರಲಿಲ್ಲ. ಸಂತ್ರಸ್ತ ಯುವತಿಯನ್ನು ಸಿಡಿ ಲೇಡಿ ಅಂತ ಕರೆದ ನಮ್ಮ ಟಿವಿಯ ಹಿಡಿಗೂಟಗಳು (ಆಂಕರ್‌ಗಳು) ಆರೋಪಿ ರಾಜಕಾರಣಿಯನ್ನು ಬಣ್ಣಿಸುವಾಗ ಸಭ್ಯ ಭಾಷೆ ಬಳಸಿದವು. ಅವರ ಅಭಿಮಾನಿ ಯಾರೋ ವಕೀಲರ ನೋಟಿಸು ಕಳಿಸಿದರು ಅನ್ನುವ ಕಾರಣಕ್ಕೆ ಸಾಹುಕಾರ್ ಅನ್ನುವ ಪದ ಬಳಕೆ ಸಹಿತ ಬಿಟ್ಟವು.

ಆ ಹುಡುಗಿಗೆ ಅನ್ಯಾಯ ಅಗಿದೆಯೋ ಇಲ್ಲವೋ ಅನ್ನುವ ವಿಚಾರ ಮಾಡುವ ಬದಲಿಗೆ ‘ಅಕಿ ಯಾರು’, ‘ಯಾವ ಜಾತಿಯವಳು?’, ‘ಅಕಿ ಗೆಣೆಕಾರರು ಯಾರು’, ‘ಅವರ ಬೆನ್ನ ಹಿಂದಿನ ಮಹಾ ನಾಯಕರು ಯಾರು?’ ಇಂಥಾ ವಿಚಾರಗಳನ್ನು ಜನರ ತಲೆಯೊಳಗೆ ಒತ್ತಾಯದಿಂದ ತುಂಬಿದರು. ‘ಪಾಪ ಸಾಹುಕಾರರು ನೊಂದುಕೊಂಡರೇನೋ’ ಅಂತ ಬೇಜಾನ್ ಬೇಸರ ಮಾಡಿಕೊಂಡ ಟಿವಿ ಹಿಡಿಗೂಟಗಳು ‘ಆ ಬಡ ಹುಡುಗಿ ನೊಂದುಕೊಂಡಳೋ ಇಲ್ಲವೋ’ ಅಂತ ವಿಚಾರ ಸಹಿತ ಮಾಡಲಿಲ್ಲ.

ಇದೆಲ್ಲಾ ಆರಂಭವಾಗಿದ್ದು ಸಾಹುಕಾರರು ಗೃಹ ಸಚಿವರಿಗೆ ಬರೆದ ಒಂದು ಓಲೆಯಿಂದ. ರಾಜಕೀಯದಲ್ಲಿ ತಮ್ಮ ಬುಲೆಟ್ ಟ್ರೇನ್ ವೇಗದ ಬೆಳವಣಿಗೆಯನ್ನು ಸಹಿಸದ ಯಾರೋ ಕೆಲ ದುರುಳರು ತಮ್ಮ ವಿರುದ್ಧ ಷಡ್ಯಂತ್ರ ಮಾಡಿ ತಮ್ಮನ್ನು ಜೇನುಪಾಶದಲ್ಲಿ ಸಿಲುಕಿಸಿಬಿಟ್ಟಿದ್ದಾರೆ ಅಂತ ಅವರು ಗೋಳು ಹೇಳಿಕೊಂಡರು. ತನ್ನ ಸರ್ಕಾರದ ಹುಟ್ಟಿಗೆ ಕಾರಣವಾದ ಈ ಆಧುನಿಕ ಜಮೀನುದಾರನ ಗೋಳು ನೋಡಲಿಕ್ಕೆ ಆಗದ ಘನ ಸರಕಾರ ಮಂತ್ರಿಗಳಿಗೆ ಗಾಳ ಹಾಕಿದ ಕಂತ್ರಿಗಳು ಯಾರು ಅಂತ ತನಿಖೆ ಮಾಡಲು ಒಂದು ಸಿಟ್ (ಎಸ್‌ಐಟಿ) ನೇಮಿಸಿತು. ಆ ನಿಕಟಪೂರ್ವ ಮಂತ್ರಿಗಳಿಂದ ಸಂತ್ರಸ್ತ ಯುವತಿ ಅನ್ಯಾಯ ಮಾಡಿದರೋ ಇಲ್ಲವೋ ಅನ್ನೋದು ಆ ಸಿಟ್‌ನ ಲಿಸ್ಟ್‌ನಲ್ಲಿ ಇರಲಿಲ್ಲ.

ಶುರುವಾತಿಗೆ ಅದು ಹೆಸರಿಗೆ ತಕ್ಕ ಹಾಗೆ ಸಿಟ್ ಮಾಡಿತು. ಅಂದರೆ ಸುಮ್ಮನೆ ಕೂತುಬಿಟ್ಟಿತು.
ಆಮ್ಯಾಲೆ ಒಂದು ಪ್ರಥಮ ಮಾಹಿತಿ ವರದಿಯ ಪ್ರಹಸನ ನಡೀತು. ಒಬ್ಬ ಸಾಮಾಜಿಕ ಹಾರಾಟಗಾರರು ಒಂದು ದೂರು, ಅದಕ್ಕೆ ತಕ್ಕ ಸಾಕ್ಷಿ ಕೊಟ್ಟ ಮೇಲೆ ಅದರ ತಯಾರಿ ಆರಂಭವಾಯಿತು. ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳ ಹಲವಾರು ತೀರ್ಪುಗಳ ವಿರುದ್ಧ ರಾಜ್ಯದ ಪೊಲೀಸರು ನಡೆದುಕೊಂಡರು. ಇಷ್ಟು ಘೋರ ಅಪರಾಧದ ಆರೋಪ ಇದ್ದರೂ ದೂರು ದಾಖಲು ಆಗಲಿಲ್ಲ. ಎಫ್‌ಐಆರ್ ಮಾಡೋರು ಯಾರು ಅನ್ನೋದು ಗೊತ್ತಾಗೋ ಮೊದಲೇ ಅದರ ಜೀವ ಆರಿಹೋತು.

ಆನಂತರ, ಸಾರ್ವಜನಿಕರ ಒತ್ತಡ ಹೆಚ್ಚಿ, ನ್ಯಾಯಾಲಯದ ಮಧ್ಯಪ್ರವೇಶ ಆದನಂತರ ಇನ್ನೊಂದು ಎಫ್‌ಐಆರ್ ಆಯಿತು. ಇಷ್ಟು ಎಲ್ಲಾ ಆಗೋವಾಗ ಮೊದಲಿಗೆ ದೂರು ನೀಡಿದ ಸಾಮಾಜಿಕ ಹಾರಾಟಗಾರರು ಪ್ರಕರಣದಿಂದ ದೂರವಾದರು.

ಅಲ್ಲಿಗೆ ಈ ಪ್ರಕರಣದ ಅಪರಾಧದ ಆಯಾಮದ ಬಿಸಿ ಕಮ್ಮಿ ಆಗಿ ಅದರ ರಾಜಕಿಯ ಆಯಾಮದ ಉಗಿ ಎದ್ದಿತ್ತು. ಅದರ ಝಳ ಬೆಂಗಳೂರಿನಿಂದ ಶುರು ಆಗಿ ಗೋಕಾಕಗೆ ತಟ್ಟಿತ್ತು.

ಈಗ ಗೋಕಾಕ ಎಂಬ ಸರ್ವಾಧಿಪತ್ಯದ ರಾಜ್ಯದಲ್ಲಿ ಎಲ್ಲರೂ ಸಿಡಿ ಲೇಡಿ ಅನ್ನುವ ಪದ ಬಳಸತಾರ. ಅದರ ಅದು ಆ ಹುಡುಗಿಗೆ ಅಲ್ಲ. ರಾಜೀನಾಮೆ ನೀಡಿ ಸರಕಾರದೊಂದಿಗೆ ರಾಜಿ ಮಾಡಿಕೊಂಡ ಮಾಜಿ ಮಂತ್ರಿಯ ಬಗ್ಗೆ ಮಾತಾಡುವಾಗ. ಆದರೆ ಅದು ಕುಶಾಲಿಗೆ. ಆ ನಂತರ ಅವರ ಮಾತು ಗಂಭೀರ ಆಗತಾವ.

“ನಂ ಸಾಹುಕಾರ್ ಏನು ತಪ್ಪು ಮಾಡಿದ್ದಾನ ಹೇಳ್ರಿ?” ಅಂತ ನಿಮ್ಮನ್ನ ಪ್ರಶ್ನೆ ಮಾಡತಾರ. “ಎಲ್ಲ ಗಂಡಸರು ಮಾಡೋದನ್ನ ಮಾಡಿದ್ದಾನ. ಅವತ್ತ ಟಿವಿ ಒಳಗ ಹೇಳಲಿಲ್ಲೇನು ‘ನಾನು ಗಂಡಸು ಅವನು ಅಲ್ಲ ಅಂತ’. ಅದರಾಗ ತಪ್ಪು ಏನು ಐತಿ?, ಆ ಹುಡುಗಿನ ಪ್ರಚೋದನೆ ಮಾಡಿದರ ಇವರ ತಪ್ಪು ಏನು? ಅಕಿ ಇವರ ಕಡೆ ಮೊದಲು ಬಂದು ಎಲ್ಲ ಉಪಯೋಗ ತೊಗೊಂಡಳು. ಆಮ್ಯಾಲೆ ಸಾಹುಕಾರರಿಗೆ ತಿರುಗಿ ಬಿದ್ದಳು. ಬ್ಲಾಕ್‌ಮೇಲು ಮಾಡಿದಳು. ರೊಕ್ಕ ಕೇಳಿರ್‌ಬೇಕು, ಸಾಹುಕಾರರು ಕೊಡೋ ಅಷ್ಟು ಕೊಟ್ಟಿರಬೇಕು, ಆಮ್ಯಾಲೆ ಒಲ್ಲೆ ಅಂದಿರಬೇಕು. ಆವಾಗ ತನ್ನ ಬಾಯ್‌ಫ್ರೆಂಡ್ ಮತ್ತು ಅವನ ಫ್ರೆಂಡ್ಸ್ ಜೊತಿಗೆ ಸೇರಿಕೊಂಡು ಈ ಹಲ್ಕಾ ಕೆಲಸ ಮಾಡಿರಬೇಕು. ಈ ಟಿವಿ ಪತ್ರಕರ್ತರಿಗೆ ಹೆಂಗು ಕೆಲಸ ಇಲ್ಲ. ಲಾಕ್‌ಡೌನ್‌ದಾಗ ಅವರ ನೌಕರಿ ಹೋಗಿದ್ದಾವು. ಬಿಟ್ಟಿ ರೊಕ್ಕ ಸಿಗತದ ಅಂತ ಅದನ್ನ ವಿಡಿಯೋ ಮಾಡಿ ಬಿಟ್ಟರಬೇಕು” ಅಂತ ವಾದ ಮಾಡತಾರ.
ಭಾರತದಂತಹ ಗಂಡಾಳಿಕೆ ಸಮಾಜದೊಳಗ ಇದು ಏನು ಹೊಸದಲ್ಲ. ಆಶ್ಚರ್ಯಚಕಿತ ಮಾಡೋ ಅಂತ ವಿಷಯನೂ ಅಲ್ಲ.

ನಮ್ಮ ಜನ, ಮಾಧ್ಯಮ, ಪೊಲೀಸರು, ನ್ಯಾಯಾಲಯ ಎಲ್ಲರೂ ಹಿಂಗ ವಿಚಾರ ಮಾಡತಾರ ಅನ್ನಲಿಕ್ಕೆ ನಮ್ಮ ಇತಿಹಾಸ ಸಾಕ್ಷಿ ಅದ. ಈ ರೀತಿ ಮಾಡಲಿಲ್ಲ ಅಂದ್ರ ಆವಾಗ ಆಶ್ಚರ್ಯ ಆಗತದ.

ಇಂದಿಗೆ ಮೂವತ್ತು ವರ್ಷದ ಹಿಂದ ರಾಜಸ್ತಾನದ ಹಳ್ಳಿಯೊಳಗ ಭನವಾರಿ ದೇವಿ ಮೋಹನ ಲಾಲ್ ಅನ್ನುವ ಶೂದ್ರ ಜನಾಂಗಕ್ಕ ಸೇರಿದ ಹೆಣ್ಣು ಮಗಳ ಮೇಲೆ ಅತ್ಯಾಚಾರ ಆಗಿತ್ತು. ಇಂದಿನ ಅಂಗನವಾಡಿ- ಆಶಾ ಕಾರ್ಯಕರ್ತರ ರೀತಿಯಲ್ಲಿ ಅಂದು ಸಾಥಿನ ಆಗಿ ಕೆಲಸ ಮಾಡುತ್ತಿದ್ದ ಭನವಾರಿ ದೇವಿ ಮೇಲು ಜಾತಿ ಅನ್ನಿಸಿಕೊಳ್ಳುವ ಗೌಳಿ ಗುಜ್ಜರ ಜಾತಿಯ ಮನೆತನದ ಬಾಲ್ಯ ವಿವಾಹ ನಿಲ್ಲಿಸಲಿಕ್ಕೆ ಹೋದಳು. ಆ ಸಿಟ್ಟಿಗೆ ಆ ಐದು ಜನ ದನ ಕಾಯೋರು ಭನವಾರಿ ದೇವಿಯ ಗಂಡನನ್ನು ಥಳಿಸಿ ಅವಳನ್ನು ಗುಂಪು ಅತ್ಯಾಚಾರ ಮಾಡಿದರು. ಇದನ್ನು ಪ್ರತಿಭಟಿಸಿ ಮಹಿಳಾ ಸಂಘಟನೆಗಳು ದೆಹಲಿಯೊಳಗೆ ಹೋರಾಟ ಮಾಡಿದರು.

ಆದರ ನ್ಯಾಯಾಲಯ ಅದನ್ನ ಒಪ್ಪಲಿಲ್ಲ. ಅಲ್ಲಿನ ನ್ಯಾಯಾಧೀಶರು ಸಾಕ್ಷಿ ಸಾಲದು ಅಂತ ಆ ಐದು ಕಿರಾತಕರನ್ನ ಬಿಡುಗಡೆ ಮಾಡಿದರು. ಅವರು ಕೊಟ್ಟ ಕಾರಣಗಳು ಇವು:

1. ಗ್ರಾಮದ ಮುಖ್ಯಸ್ಥ ಅತ್ಯಾಚಾರದಂತಹ ಹೀನ ಕೆಲಸ ಮಾಡಲಾರ.

2. ವಿಭಿನ್ನ ಜಾತಿಯ ಜನ ಸೇರಿ ಗುಂಪು ಅತ್ಯಾಚಾರ ಮಾಡಲಾರರು.

3. ಚಿಕ್ಕಪ್ಪ ಹಾಗೂ ಅವರ ಅಣ್ಣನ ಮಗ ಸೇರಿ ಒಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಲಿಕ್ಕೆ ಸಾಧ್ಯ ಇಲ್ಲ. ಅವರಿಗೆ ನಾಚಿಕೆ ಆದೀತು.

4. 50-60-70 ವರ್ಷದ ಹಿರಿಯ ನಾಗರಿಕರು ಈ ಕೆಲಸ ಮಾಡಲಾರರು.

5. ಮೇಲುಜಾತಿಯವರು ಕೆಳಜಾತಿಯ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಲಾರರು. ಅದು ಅಪವಿತ್ರ ಅಂತ ಅವರಿಗೆ ಗೊತ್ತು.

6. ಹೆಂಡತಿಯನ್ನು ಅತ್ಯಾಚಾರ ಮಾಡುವಾಗ ಗಂಡನೇಕೆ ಸುಮ್ಮನೆ ಇದ್ದ? ಅದು ಅಸಾಧ್ಯ.

ಇತ್ಯಾದಿ.

ಈಗಲೂ ಇಂತಹ ಪ್ರಶ್ನೆಗಳನ್ನ ಕೇಳೋ ಜನ ಇದ್ದಾರ.

ಅನೇಕ ವರ್ಷದ ಹಿಂದ, ಹಿಂದಿ ಚಿತ್ರರಂಗದ ವಯಸ್ಸೇ ಆಗದ ಸುಂದರಿ ರೇಖಾ ನಟಿಸಿದ ಚಿತ್ರವೊಂದು ಭಾರಿ ಸುದ್ದಿ ಮಾಡಿತ್ತು. ಅದರೊಳಗ ರೇಖಾ ಭನವಾರಿ ದೇವಿ ಪಾತ್ರ ವಹಿಸಿದ್ದರು. ‘ರೇಖಾ ಅವರ ಮಾಸದ ಸೌಂದರ್ಯದ ಕಾರಣ ಅವರನ್ನ ನಾಯಕಿಯಾಗಿ ಆಯ್ಕೆ ಮಾಡಿರಬಹುದು’ ಅಂತ ನಮ್ಮ ಪಡ್ಡೆ ಬುದ್ಧಿಗೆ ಅನ್ನಿಸಬಹುದು. ಆದರೆ ಅದರ ನಿಜವಾದ ಕಾರಣ ಏನು ಅಂದ್ರ ಆ ಕಾಲದಾಗ ನಮ್ಮ ಜನರ ಮನಸ್ಸಿನೊಳಗ ಯಾವ ಪ್ರಶ್ನೆ – ಸಂದೇಹ ಇದ್ದವಲ್ಲ, ಅವೇ ಪ್ರಶ್ನೆ, ಸಂದೇಹ, ಇವತ್ತಿಗೂ ಅದಾವು. ಅದಕ್ಕೆ ಚಿರ ಜವ್ವನೆ ರೇಖಾ ಅವರನ್ನು ಭನವಾರಿ ದೇವಿ ಪಾತ್ರ ಮಾಡಲು ಆರಿಸಲಾಯಿತು.

ಇನ್ನೊಂದು ಸಾಮ್ಯ ಏನು ಅಂದ್ರ ಅಂದು ತಾಲೂಕು ನ್ಯಾಯಾಲಯದಿಂದ ಹಿಡಿದು ದೆಹಲಿಯ ಸರ್ವೋಚ್ಚ ನ್ಯಾಯಾಲಯದವರೆಗೆ ಹೆಂಗ ಭನವಾರಿ ದೇವಿ ಹೋರಾಟ ಮಾಡಿದಳಲ್ಲ, ಹಂಗ ಸಾಹುಕಾರರ ಸಂತ್ರಸ್ತ ಮಹಿಳೆ ಸಹಿತ ಗಟ್ಟಿತನದಿಂದ ಹೋರಾಟ ಶುರು ಮಾಡಿದ್ದಾಳ. ನಮ್ಮ ಸಮಾಜ ಅಕಿಗೆ ಹೆಂಗ ಸಾಥ್ ಕೊಡತದ ಅನ್ನೋದು ನೋಡಬೇಕು.

ಒಂದ ವ್ಯತ್ಯಾಸ ಎನಪಾ ಅಂದ್ರ ಆವಾಗ ಮಾಧ್ಯಮಗಳು ಭನವಾರಿ ದೇವಿ ಪರವಾಗಿ ಇದ್ದವು. ಸಾಹುಕಾರರ ಪರವಾಗಿ ಇರಲಿಲ್ಲ. ರಾಜಸ್ತಾನದ ಸ್ಥಳೀಯ ಪತ್ರಿಕೆಗಳು ಸಹಿತ ಜಮೀನುದಾರರನ್ನು ಎದುರು ಹಾಕಿಕೊಂಡು ಸುದ್ದಿ ಬರೆದವು. ಈಗ ಮಾತ್ರ ಮಾಧ್ಯಮಗಳು ಸಾಹುಕಾರರ ಪರವಾಗಿ ಇದ್ದಾವು. ಬಡವಿಯ ಚಿತ್ರ – ವಿಡಿಯೋಗಳನ್ನ ಟಿಆರ್‌ಪಿ ಸಲುವಾಗಿ ಮಾತ್ರ ಬಳಸಿಕೊಳ್ಳುತ್ತಾ ಅದಾವು.

ಅಲ್ಲವೇ ಮನೋಲ್ಲಾಸಿನಿ ?


ಇದನ್ನೂ ಓದಿ: ಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...