Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

ಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

- Advertisement -
- Advertisement -

ರಮೇಶ್ ಜಾರಕಿಹೊಳಿ ಅವರ ಮನಿ ಒಳಗ ಸಿಡಿ ಪ್ಲೇಯರ್ ಇಲ್ಲ. ಅದು ಇರೋದು ಅವರ ಕಚೇರಿಯೊಳಗ. ಅವರು ಜಾಸ್ತಿ ಪಿಚ್ಚರು ನೋಡೋದಿಲ್ಲ. ಮೊನ್ನೆ ಮೊನ್ನೆಯಿಂದ ಟಿವಿ ನೋಡೋದು ಕಮ್ಮಿ ಅಗೆತಿ ಅಂತ ಅವರ ಪಿಎ ಸಾಹೇಬರು ಅಂದ್ರು ಮೊನ್ನೆ.

ಅದು ಯಾಕಾಪಾ ಅಂದ್ರ ಅವರು ತಮ್ಮ ವಿರುದ್ಧದ ಸುದ್ದಿ ಹಾಗೂ ಕೋವಿಡ್ ವೈರಸ್‌ಗಳಿಗೆ ಗುರಿಯಾಗಿ ತಮ್ಮ ಗೋಕಾಕ ಜಲಪಾತದ ಹತ್ತಿರದ ಮನಿ ಒಳಗ ಸುಧಾರಿಸಿಕೊಳ್ಳತಾ ಇದ್ದಾರ.

“ಗೋಕಾಕ ಸಾಹುಕಾರ್ ಅವರ ರಾಸಲೀಲೆ” ಅಂತ ಉದ್ದುದ್ದ ಸುದ್ದಿ ಬರೆದು ಊರೆಲ್ಲ ಗದ್ದಲ ಮಾಡಿದ ನಮ್ಮ ಮಾಧ್ಯಮಗಳು ಆ ಪ್ರಕರಣದ ಅಳಕ್ಕೆ ಇಳಿಯಲಿಲ್ಲ. ಹಂಗಂದ್ರ ಅದರ ಸರಿ ತಪ್ಪುಗಳ ಲೆಕ್ಕಾಚಾರ ಅಂತ ಅಲ್ಲ. ಆ ಘಟನೆಯ ಬೇರೆ ಬೇರೆ ಆಯಾಮಗಳ ವಿಚಾರ ಮಾಡಲಿಲ್ಲ ಅಂತ.

ಮೊದಲನೆದಾಗಿ ಮಾಧ್ಯಮಗಳ ಭಾಷೆ ಸೂಕ್ಷ್ಮವಾಗಿರಲಿಲ್ಲ. ಸಂತ್ರಸ್ತ ಯುವತಿಯನ್ನು ಸಿಡಿ ಲೇಡಿ ಅಂತ ಕರೆದ ನಮ್ಮ ಟಿವಿಯ ಹಿಡಿಗೂಟಗಳು (ಆಂಕರ್‌ಗಳು) ಆರೋಪಿ ರಾಜಕಾರಣಿಯನ್ನು ಬಣ್ಣಿಸುವಾಗ ಸಭ್ಯ ಭಾಷೆ ಬಳಸಿದವು. ಅವರ ಅಭಿಮಾನಿ ಯಾರೋ ವಕೀಲರ ನೋಟಿಸು ಕಳಿಸಿದರು ಅನ್ನುವ ಕಾರಣಕ್ಕೆ ಸಾಹುಕಾರ್ ಅನ್ನುವ ಪದ ಬಳಕೆ ಸಹಿತ ಬಿಟ್ಟವು.

ಆ ಹುಡುಗಿಗೆ ಅನ್ಯಾಯ ಅಗಿದೆಯೋ ಇಲ್ಲವೋ ಅನ್ನುವ ವಿಚಾರ ಮಾಡುವ ಬದಲಿಗೆ ‘ಅಕಿ ಯಾರು’, ‘ಯಾವ ಜಾತಿಯವಳು?’, ‘ಅಕಿ ಗೆಣೆಕಾರರು ಯಾರು’, ‘ಅವರ ಬೆನ್ನ ಹಿಂದಿನ ಮಹಾ ನಾಯಕರು ಯಾರು?’ ಇಂಥಾ ವಿಚಾರಗಳನ್ನು ಜನರ ತಲೆಯೊಳಗೆ ಒತ್ತಾಯದಿಂದ ತುಂಬಿದರು. ‘ಪಾಪ ಸಾಹುಕಾರರು ನೊಂದುಕೊಂಡರೇನೋ’ ಅಂತ ಬೇಜಾನ್ ಬೇಸರ ಮಾಡಿಕೊಂಡ ಟಿವಿ ಹಿಡಿಗೂಟಗಳು ‘ಆ ಬಡ ಹುಡುಗಿ ನೊಂದುಕೊಂಡಳೋ ಇಲ್ಲವೋ’ ಅಂತ ವಿಚಾರ ಸಹಿತ ಮಾಡಲಿಲ್ಲ.

ಇದೆಲ್ಲಾ ಆರಂಭವಾಗಿದ್ದು ಸಾಹುಕಾರರು ಗೃಹ ಸಚಿವರಿಗೆ ಬರೆದ ಒಂದು ಓಲೆಯಿಂದ. ರಾಜಕೀಯದಲ್ಲಿ ತಮ್ಮ ಬುಲೆಟ್ ಟ್ರೇನ್ ವೇಗದ ಬೆಳವಣಿಗೆಯನ್ನು ಸಹಿಸದ ಯಾರೋ ಕೆಲ ದುರುಳರು ತಮ್ಮ ವಿರುದ್ಧ ಷಡ್ಯಂತ್ರ ಮಾಡಿ ತಮ್ಮನ್ನು ಜೇನುಪಾಶದಲ್ಲಿ ಸಿಲುಕಿಸಿಬಿಟ್ಟಿದ್ದಾರೆ ಅಂತ ಅವರು ಗೋಳು ಹೇಳಿಕೊಂಡರು. ತನ್ನ ಸರ್ಕಾರದ ಹುಟ್ಟಿಗೆ ಕಾರಣವಾದ ಈ ಆಧುನಿಕ ಜಮೀನುದಾರನ ಗೋಳು ನೋಡಲಿಕ್ಕೆ ಆಗದ ಘನ ಸರಕಾರ ಮಂತ್ರಿಗಳಿಗೆ ಗಾಳ ಹಾಕಿದ ಕಂತ್ರಿಗಳು ಯಾರು ಅಂತ ತನಿಖೆ ಮಾಡಲು ಒಂದು ಸಿಟ್ (ಎಸ್‌ಐಟಿ) ನೇಮಿಸಿತು. ಆ ನಿಕಟಪೂರ್ವ ಮಂತ್ರಿಗಳಿಂದ ಸಂತ್ರಸ್ತ ಯುವತಿ ಅನ್ಯಾಯ ಮಾಡಿದರೋ ಇಲ್ಲವೋ ಅನ್ನೋದು ಆ ಸಿಟ್‌ನ ಲಿಸ್ಟ್‌ನಲ್ಲಿ ಇರಲಿಲ್ಲ.

ಶುರುವಾತಿಗೆ ಅದು ಹೆಸರಿಗೆ ತಕ್ಕ ಹಾಗೆ ಸಿಟ್ ಮಾಡಿತು. ಅಂದರೆ ಸುಮ್ಮನೆ ಕೂತುಬಿಟ್ಟಿತು.
ಆಮ್ಯಾಲೆ ಒಂದು ಪ್ರಥಮ ಮಾಹಿತಿ ವರದಿಯ ಪ್ರಹಸನ ನಡೀತು. ಒಬ್ಬ ಸಾಮಾಜಿಕ ಹಾರಾಟಗಾರರು ಒಂದು ದೂರು, ಅದಕ್ಕೆ ತಕ್ಕ ಸಾಕ್ಷಿ ಕೊಟ್ಟ ಮೇಲೆ ಅದರ ತಯಾರಿ ಆರಂಭವಾಯಿತು. ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳ ಹಲವಾರು ತೀರ್ಪುಗಳ ವಿರುದ್ಧ ರಾಜ್ಯದ ಪೊಲೀಸರು ನಡೆದುಕೊಂಡರು. ಇಷ್ಟು ಘೋರ ಅಪರಾಧದ ಆರೋಪ ಇದ್ದರೂ ದೂರು ದಾಖಲು ಆಗಲಿಲ್ಲ. ಎಫ್‌ಐಆರ್ ಮಾಡೋರು ಯಾರು ಅನ್ನೋದು ಗೊತ್ತಾಗೋ ಮೊದಲೇ ಅದರ ಜೀವ ಆರಿಹೋತು.

ಆನಂತರ, ಸಾರ್ವಜನಿಕರ ಒತ್ತಡ ಹೆಚ್ಚಿ, ನ್ಯಾಯಾಲಯದ ಮಧ್ಯಪ್ರವೇಶ ಆದನಂತರ ಇನ್ನೊಂದು ಎಫ್‌ಐಆರ್ ಆಯಿತು. ಇಷ್ಟು ಎಲ್ಲಾ ಆಗೋವಾಗ ಮೊದಲಿಗೆ ದೂರು ನೀಡಿದ ಸಾಮಾಜಿಕ ಹಾರಾಟಗಾರರು ಪ್ರಕರಣದಿಂದ ದೂರವಾದರು.

ಅಲ್ಲಿಗೆ ಈ ಪ್ರಕರಣದ ಅಪರಾಧದ ಆಯಾಮದ ಬಿಸಿ ಕಮ್ಮಿ ಆಗಿ ಅದರ ರಾಜಕಿಯ ಆಯಾಮದ ಉಗಿ ಎದ್ದಿತ್ತು. ಅದರ ಝಳ ಬೆಂಗಳೂರಿನಿಂದ ಶುರು ಆಗಿ ಗೋಕಾಕಗೆ ತಟ್ಟಿತ್ತು.

ಈಗ ಗೋಕಾಕ ಎಂಬ ಸರ್ವಾಧಿಪತ್ಯದ ರಾಜ್ಯದಲ್ಲಿ ಎಲ್ಲರೂ ಸಿಡಿ ಲೇಡಿ ಅನ್ನುವ ಪದ ಬಳಸತಾರ. ಅದರ ಅದು ಆ ಹುಡುಗಿಗೆ ಅಲ್ಲ. ರಾಜೀನಾಮೆ ನೀಡಿ ಸರಕಾರದೊಂದಿಗೆ ರಾಜಿ ಮಾಡಿಕೊಂಡ ಮಾಜಿ ಮಂತ್ರಿಯ ಬಗ್ಗೆ ಮಾತಾಡುವಾಗ. ಆದರೆ ಅದು ಕುಶಾಲಿಗೆ. ಆ ನಂತರ ಅವರ ಮಾತು ಗಂಭೀರ ಆಗತಾವ.

“ನಂ ಸಾಹುಕಾರ್ ಏನು ತಪ್ಪು ಮಾಡಿದ್ದಾನ ಹೇಳ್ರಿ?” ಅಂತ ನಿಮ್ಮನ್ನ ಪ್ರಶ್ನೆ ಮಾಡತಾರ. “ಎಲ್ಲ ಗಂಡಸರು ಮಾಡೋದನ್ನ ಮಾಡಿದ್ದಾನ. ಅವತ್ತ ಟಿವಿ ಒಳಗ ಹೇಳಲಿಲ್ಲೇನು ‘ನಾನು ಗಂಡಸು ಅವನು ಅಲ್ಲ ಅಂತ’. ಅದರಾಗ ತಪ್ಪು ಏನು ಐತಿ?, ಆ ಹುಡುಗಿನ ಪ್ರಚೋದನೆ ಮಾಡಿದರ ಇವರ ತಪ್ಪು ಏನು? ಅಕಿ ಇವರ ಕಡೆ ಮೊದಲು ಬಂದು ಎಲ್ಲ ಉಪಯೋಗ ತೊಗೊಂಡಳು. ಆಮ್ಯಾಲೆ ಸಾಹುಕಾರರಿಗೆ ತಿರುಗಿ ಬಿದ್ದಳು. ಬ್ಲಾಕ್‌ಮೇಲು ಮಾಡಿದಳು. ರೊಕ್ಕ ಕೇಳಿರ್‌ಬೇಕು, ಸಾಹುಕಾರರು ಕೊಡೋ ಅಷ್ಟು ಕೊಟ್ಟಿರಬೇಕು, ಆಮ್ಯಾಲೆ ಒಲ್ಲೆ ಅಂದಿರಬೇಕು. ಆವಾಗ ತನ್ನ ಬಾಯ್‌ಫ್ರೆಂಡ್ ಮತ್ತು ಅವನ ಫ್ರೆಂಡ್ಸ್ ಜೊತಿಗೆ ಸೇರಿಕೊಂಡು ಈ ಹಲ್ಕಾ ಕೆಲಸ ಮಾಡಿರಬೇಕು. ಈ ಟಿವಿ ಪತ್ರಕರ್ತರಿಗೆ ಹೆಂಗು ಕೆಲಸ ಇಲ್ಲ. ಲಾಕ್‌ಡೌನ್‌ದಾಗ ಅವರ ನೌಕರಿ ಹೋಗಿದ್ದಾವು. ಬಿಟ್ಟಿ ರೊಕ್ಕ ಸಿಗತದ ಅಂತ ಅದನ್ನ ವಿಡಿಯೋ ಮಾಡಿ ಬಿಟ್ಟರಬೇಕು” ಅಂತ ವಾದ ಮಾಡತಾರ.
ಭಾರತದಂತಹ ಗಂಡಾಳಿಕೆ ಸಮಾಜದೊಳಗ ಇದು ಏನು ಹೊಸದಲ್ಲ. ಆಶ್ಚರ್ಯಚಕಿತ ಮಾಡೋ ಅಂತ ವಿಷಯನೂ ಅಲ್ಲ.

ನಮ್ಮ ಜನ, ಮಾಧ್ಯಮ, ಪೊಲೀಸರು, ನ್ಯಾಯಾಲಯ ಎಲ್ಲರೂ ಹಿಂಗ ವಿಚಾರ ಮಾಡತಾರ ಅನ್ನಲಿಕ್ಕೆ ನಮ್ಮ ಇತಿಹಾಸ ಸಾಕ್ಷಿ ಅದ. ಈ ರೀತಿ ಮಾಡಲಿಲ್ಲ ಅಂದ್ರ ಆವಾಗ ಆಶ್ಚರ್ಯ ಆಗತದ.

ಇಂದಿಗೆ ಮೂವತ್ತು ವರ್ಷದ ಹಿಂದ ರಾಜಸ್ತಾನದ ಹಳ್ಳಿಯೊಳಗ ಭನವಾರಿ ದೇವಿ ಮೋಹನ ಲಾಲ್ ಅನ್ನುವ ಶೂದ್ರ ಜನಾಂಗಕ್ಕ ಸೇರಿದ ಹೆಣ್ಣು ಮಗಳ ಮೇಲೆ ಅತ್ಯಾಚಾರ ಆಗಿತ್ತು. ಇಂದಿನ ಅಂಗನವಾಡಿ- ಆಶಾ ಕಾರ್ಯಕರ್ತರ ರೀತಿಯಲ್ಲಿ ಅಂದು ಸಾಥಿನ ಆಗಿ ಕೆಲಸ ಮಾಡುತ್ತಿದ್ದ ಭನವಾರಿ ದೇವಿ ಮೇಲು ಜಾತಿ ಅನ್ನಿಸಿಕೊಳ್ಳುವ ಗೌಳಿ ಗುಜ್ಜರ ಜಾತಿಯ ಮನೆತನದ ಬಾಲ್ಯ ವಿವಾಹ ನಿಲ್ಲಿಸಲಿಕ್ಕೆ ಹೋದಳು. ಆ ಸಿಟ್ಟಿಗೆ ಆ ಐದು ಜನ ದನ ಕಾಯೋರು ಭನವಾರಿ ದೇವಿಯ ಗಂಡನನ್ನು ಥಳಿಸಿ ಅವಳನ್ನು ಗುಂಪು ಅತ್ಯಾಚಾರ ಮಾಡಿದರು. ಇದನ್ನು ಪ್ರತಿಭಟಿಸಿ ಮಹಿಳಾ ಸಂಘಟನೆಗಳು ದೆಹಲಿಯೊಳಗೆ ಹೋರಾಟ ಮಾಡಿದರು.

ಆದರ ನ್ಯಾಯಾಲಯ ಅದನ್ನ ಒಪ್ಪಲಿಲ್ಲ. ಅಲ್ಲಿನ ನ್ಯಾಯಾಧೀಶರು ಸಾಕ್ಷಿ ಸಾಲದು ಅಂತ ಆ ಐದು ಕಿರಾತಕರನ್ನ ಬಿಡುಗಡೆ ಮಾಡಿದರು. ಅವರು ಕೊಟ್ಟ ಕಾರಣಗಳು ಇವು:

1. ಗ್ರಾಮದ ಮುಖ್ಯಸ್ಥ ಅತ್ಯಾಚಾರದಂತಹ ಹೀನ ಕೆಲಸ ಮಾಡಲಾರ.

2. ವಿಭಿನ್ನ ಜಾತಿಯ ಜನ ಸೇರಿ ಗುಂಪು ಅತ್ಯಾಚಾರ ಮಾಡಲಾರರು.

3. ಚಿಕ್ಕಪ್ಪ ಹಾಗೂ ಅವರ ಅಣ್ಣನ ಮಗ ಸೇರಿ ಒಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಲಿಕ್ಕೆ ಸಾಧ್ಯ ಇಲ್ಲ. ಅವರಿಗೆ ನಾಚಿಕೆ ಆದೀತು.

4. 50-60-70 ವರ್ಷದ ಹಿರಿಯ ನಾಗರಿಕರು ಈ ಕೆಲಸ ಮಾಡಲಾರರು.

5. ಮೇಲುಜಾತಿಯವರು ಕೆಳಜಾತಿಯ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಲಾರರು. ಅದು ಅಪವಿತ್ರ ಅಂತ ಅವರಿಗೆ ಗೊತ್ತು.

6. ಹೆಂಡತಿಯನ್ನು ಅತ್ಯಾಚಾರ ಮಾಡುವಾಗ ಗಂಡನೇಕೆ ಸುಮ್ಮನೆ ಇದ್ದ? ಅದು ಅಸಾಧ್ಯ.

ಇತ್ಯಾದಿ.

ಈಗಲೂ ಇಂತಹ ಪ್ರಶ್ನೆಗಳನ್ನ ಕೇಳೋ ಜನ ಇದ್ದಾರ.

ಅನೇಕ ವರ್ಷದ ಹಿಂದ, ಹಿಂದಿ ಚಿತ್ರರಂಗದ ವಯಸ್ಸೇ ಆಗದ ಸುಂದರಿ ರೇಖಾ ನಟಿಸಿದ ಚಿತ್ರವೊಂದು ಭಾರಿ ಸುದ್ದಿ ಮಾಡಿತ್ತು. ಅದರೊಳಗ ರೇಖಾ ಭನವಾರಿ ದೇವಿ ಪಾತ್ರ ವಹಿಸಿದ್ದರು. ‘ರೇಖಾ ಅವರ ಮಾಸದ ಸೌಂದರ್ಯದ ಕಾರಣ ಅವರನ್ನ ನಾಯಕಿಯಾಗಿ ಆಯ್ಕೆ ಮಾಡಿರಬಹುದು’ ಅಂತ ನಮ್ಮ ಪಡ್ಡೆ ಬುದ್ಧಿಗೆ ಅನ್ನಿಸಬಹುದು. ಆದರೆ ಅದರ ನಿಜವಾದ ಕಾರಣ ಏನು ಅಂದ್ರ ಆ ಕಾಲದಾಗ ನಮ್ಮ ಜನರ ಮನಸ್ಸಿನೊಳಗ ಯಾವ ಪ್ರಶ್ನೆ – ಸಂದೇಹ ಇದ್ದವಲ್ಲ, ಅವೇ ಪ್ರಶ್ನೆ, ಸಂದೇಹ, ಇವತ್ತಿಗೂ ಅದಾವು. ಅದಕ್ಕೆ ಚಿರ ಜವ್ವನೆ ರೇಖಾ ಅವರನ್ನು ಭನವಾರಿ ದೇವಿ ಪಾತ್ರ ಮಾಡಲು ಆರಿಸಲಾಯಿತು.

ಇನ್ನೊಂದು ಸಾಮ್ಯ ಏನು ಅಂದ್ರ ಅಂದು ತಾಲೂಕು ನ್ಯಾಯಾಲಯದಿಂದ ಹಿಡಿದು ದೆಹಲಿಯ ಸರ್ವೋಚ್ಚ ನ್ಯಾಯಾಲಯದವರೆಗೆ ಹೆಂಗ ಭನವಾರಿ ದೇವಿ ಹೋರಾಟ ಮಾಡಿದಳಲ್ಲ, ಹಂಗ ಸಾಹುಕಾರರ ಸಂತ್ರಸ್ತ ಮಹಿಳೆ ಸಹಿತ ಗಟ್ಟಿತನದಿಂದ ಹೋರಾಟ ಶುರು ಮಾಡಿದ್ದಾಳ. ನಮ್ಮ ಸಮಾಜ ಅಕಿಗೆ ಹೆಂಗ ಸಾಥ್ ಕೊಡತದ ಅನ್ನೋದು ನೋಡಬೇಕು.

ಒಂದ ವ್ಯತ್ಯಾಸ ಎನಪಾ ಅಂದ್ರ ಆವಾಗ ಮಾಧ್ಯಮಗಳು ಭನವಾರಿ ದೇವಿ ಪರವಾಗಿ ಇದ್ದವು. ಸಾಹುಕಾರರ ಪರವಾಗಿ ಇರಲಿಲ್ಲ. ರಾಜಸ್ತಾನದ ಸ್ಥಳೀಯ ಪತ್ರಿಕೆಗಳು ಸಹಿತ ಜಮೀನುದಾರರನ್ನು ಎದುರು ಹಾಕಿಕೊಂಡು ಸುದ್ದಿ ಬರೆದವು. ಈಗ ಮಾತ್ರ ಮಾಧ್ಯಮಗಳು ಸಾಹುಕಾರರ ಪರವಾಗಿ ಇದ್ದಾವು. ಬಡವಿಯ ಚಿತ್ರ – ವಿಡಿಯೋಗಳನ್ನ ಟಿಆರ್‌ಪಿ ಸಲುವಾಗಿ ಮಾತ್ರ ಬಳಸಿಕೊಳ್ಳುತ್ತಾ ಅದಾವು.

ಅಲ್ಲವೇ ಮನೋಲ್ಲಾಸಿನಿ ?


ಇದನ್ನೂ ಓದಿ: ಭಿಕ್ಷೆ ಬೇಡಿ, ಸಾಲ ತನ್ನಿ ಇಲ್ಲವೇ ಕದ್ದುಕೊಂಡು ಬನ್ನಿ: ಆಮ್ಲಜನಕ ವಿಷಯವಾಗಿ ಕೇಂದ್ರದ ವಿರುದ್ಧ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...