Homeಮುಖಪುಟಬೀದರ್ ಮಕ್ಕಳ ನಾಟಕ ಪ್ರಕರಣ: ಜನರೆದುರು ಮತ್ತಷ್ಟು ಬೆತ್ತಲಾದ ಸರ್ಕಾರ...

ಬೀದರ್ ಮಕ್ಕಳ ನಾಟಕ ಪ್ರಕರಣ: ಜನರೆದುರು ಮತ್ತಷ್ಟು ಬೆತ್ತಲಾದ ಸರ್ಕಾರ…

ಕರ್ನಾಟಕದ ಪೊಲೀಸರು ಬಿಜೆಪಿಯವರ ಎದುರು ಇಲಿಗಳಂತೆಯೂ ಬಡ ಜನರ ಎದುರು ಹುಲಿಗಳಂತೆಯೂ ವರ್ತಿಸುತ್ತಿದ್ದಾರೆ

- Advertisement -
- Advertisement -

ಪ್ರಭುತ್ವದ ತಪ್ಪುಗಳ ಬಗ್ಗೆ ಮಾತನಾಡುವವರನ್ನು ಅಮಾನವೀಯವಾಗಿ ದಮನಿಸುವುದು ಹಿಂದಿನಿಂದಲೂ ನಡೆದುಬಂದಿರುವ ಪದ್ದತಿ. ಆ ಪ್ರಭುತ್ವಕ್ಕೆ ಇದರಿಂದ ತಾನೆಷ್ಟು ಬೆತ್ತಲಾಗುತ್ತೇನೆ ಎಂಬ ಅರಿವು ಸಹ ಇಲ್ಲದೇ ಅದು ಕ್ರೂರವಾಗಿ ವರ್ತಿಸುತ್ತದೆ. ಮೈಸೂರಿನ ಫ್ರಿ ಕಾಶ್ಮೀರ್ ವಿವಾದ, ಕೊಪ್ಪಳದ ಸಿರಾಜ್‌ರವರ ಕವನದ ಮೇಲೆ ಕೇಸು ಮತ್ತು ಬೀದರ್‌ನ ಶಾಹಿನ್ ಅನುದಾನಿತ ಶಾಲೆಯ ಸಿಎಎ ವಿರುದ್ಧದ ನಾಟಕಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಪ್ರಭುತ್ವದ ದಮನಕ್ಕೆ ಹಿಡಿದ ಕನ್ನಡಿಗಳಾಗಿವೆ.

ಒಂದು ಪ್ಲೆಕಾರ್ಡ್, ಒಂದು ಕವನ, ಒಂದು ನಾಟಕಕ್ಕೆ ಬಲಪಂಥೀಯ ಸರ್ಕಾರ ಎಷ್ಟು ಬೆದರುತ್ತದೆ ಎಂಬುದನ್ನು ನಾವಿಲ್ಲಿ ನೋಡಬಹುದಾಗಿದೆ. ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಅದು ಎಂತಹ ಹೀನ ಕೆಲಸಕ್ಕೆ ಬೇಕಾದರೂ ಇಳಿಯುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ.

ಬೀದರ್‌ನ ಘಟನೆ ಕೇಳಿದರಂತೂ ನಮ್ಮನ್ನು ಒಂದು ಕ್ಷಣ ಅವಾಕ್ಕಾಗಿಸುತ್ತದೆ. ಸಿಎಎ ವಿರುದ್ಧದ ನಾಟಕದಲ್ಲಿ 5ನೇ ತರಗತಿಯ ಮಗುವೊಬ್ಬಳು ಆಕ್ಷೆಪಾರ್ಯ ಸಂಭಾಷಣೆ ಬಳಸಿದ್ದನ್ನೇ ನೆಪವಾಗಿಟ್ಟುಕೊಂಡು ಆಕೆಯ ತಾಯಿಯನ್ನು ಮತ್ತು ಆ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಪೊಲೀಸರು ಒಂದು ವಾರದಿಂದ ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ತಂದೆಯಿಲ್ಲದ, ಕೇವಲ ತಾಯಿಯನ್ನೇ ನೆಚ್ಚಿಕೊಂಡಿದ್ದ 11 ವರ್ಷದ ಆ ಮಗು ಈ ಪ್ರಭುತ್ವದ ಕಣ್ಣಿಗೆ ದೇಶದ್ರೋಹಿಯಾಗಿ ಕಾಣುತ್ತದೆಯೆಂದರೆ ಅದರ ಸಿದ್ಧಾಂತ ಎಷ್ಟು ಟೊಳ್ಳು ಅಲ್ಲವೇ?

ನಡೆದಿದ್ದೇನು?

ಜನವರಿ 21ರಂದು ಬೀದರ್‌ನ ಅನುದಾನಿತ ಶಾಹಿನ್ ಶಾಲೆಯಲ್ಲಿ “ಸಿಎಎ ವಿರುದ್ಧ ಮಕ್ಕಳ ನಾಟಕವೊಂದು” ನಡೆದಿದೆ. ನಾಟಕದಲ್ಲಿ “ದಾಖಲೆ ಕೇಳುವವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು” ಎಂಬ ಮಾತುಗಳನ್ನು 5ನೇ ತರಗತಿಯ ಮಗು ಹೇಳಿದೆ. ಅಷ್ಟಕ್ಕೆ ಅದನ್ನು ಕೇಳಿದ ಎಬಿವಿಪಿ ಕಾರ್ಯಕರ್ತನಿಗೆ ದೇಶವೇ ಕುಸಿದುಹೋಯಿತು ಅನ್ನಿಸಿ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೊಟ್ಟಿದ್ದಾನೆ. ಅದಕ್ಕಾಗಿಯೇ ಕಾಯುತ್ತಿದ್ದರೋ ಎನ್ನುವ ರೀತಿಯಲ್ಲಿ ಪೊಲೀಸರು ದಿಢೀರ್ ಶಾಲೆಗೆ ನುಗ್ಗಿದ್ದಲ್ಲದೇ, ಎಳೆಯ ಮಕ್ಕಳನ್ನು ಕೂರಿಸಿಕೊಂಡು ತಾಸುಗಟ್ಟಲೇ ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಅವರು ಕೇಳಿದ ಪ್ರಶ್ನೆಗಳೆಂದರೆ ಆ ಡೈಲಾಗ್ ಅನ್ನು ಯಾರು ಹೇಳಿಕೊಟ್ಟರು? ನಾಟಕದ ಸ್ಕ್ರಿಪ್ಟ್ ಬರೆದುಕೊಟ್ಟ ಶಿಕ್ಷಕರು ಯಾರು?.. ಇಷ್ಟಕ್ಕೆ ಆ ಮಕ್ಕಳು ನಡುಗಿಹೋಗಿದ್ದಾರೆ.

ಪೊಲೀಸರ ಈ ದುರ್ವತನೆಯ ಫೋಟೊಗಳು ವೈರಲ್ ಆಗಿ ಸಾವಿರಾರು ಜನ ಈ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ ತಪ್ಪಿನ ಮೇಲೆ ತಪ್ಪು ಮಾಡಿದ ಪೊಲೀಸರು ಜನವರಿ 30ರಂದು 5ನೇ ತರಗತಿಯ ಮಗುವಿನ ತಾಯಿ ನಾಜುಬುನ್ನೀಸ ಮತ್ತು ಶಾಲೆಯ ಮುಖ್ಯೋಪಾಧ್ಯಯಿನಿ ಫರಿದಾ ಬೇಗಂರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಿದ್ದಾರೆ. ವಾರ ಕಳೆದರೂ ಅವರಿಬ್ಬರಿಗೂ ಬೇಲ್ ಸಿಕ್ಕಿಲ್ಲ. ಏಕೆಂದರೆ ಜಡ್ಜ್ ರಜೆಯಲ್ಲಿದ್ದಾರೆ.. ಕಾಕತಾಳಿಯವೆಂದರೆ ದೇಶದ ನ್ಯಾಯವೂ ಕೂಡ ರಜೆಯಲ್ಲಿದೆ..!

ನೋವಿನ ಕಥೆ

ಬಂಧನದಲ್ಲಿರುವ ನಾಜುಬುನ್ನೀಸ ಎಂಬ ಮಹಿಳೆಯ ಗಂಡ ತೀರಿಕೊಂಡಿದ್ದಾನೆ. ಚಿಕ್ಕಮಗುವಿನೊಂದಿಗೆ ಬೀದರ್ ಜಿಲ್ಲೆಯ ಹಳ್ಳಿಯಲ್ಲಿ ವಾಸವಿದ್ದ ಆಕೆ, ಇದ್ದ ತುಂಡು ಭೂಮಿಯನ್ನು ಗೇಣಿಗೆ ಕೊಟ್ಟು ತನ್ನ ಮಗಳು ಚೆನ್ನಾಗಿ ಓದಬೇಕೆಂಬ ಅದಮ್ಯ ಆಸೆಯಿಂದ ಎರಡು ತಿಂಗಳ ಹಿಂದೆ ತಾನೇ ಬೀದರ್ ನಗರಕ್ಕೆ ವಲಸೆ ಬಂದಿದ್ದಾಳೆ. ಆದರೆ ತನ್ನದಲ್ಲದ ತಪ್ಪಿಗೆ ಆಕೆ ದುರಂತ ಸ್ಥಿತಿಯಲ್ಲಿ ಜೈಲಿನಲ್ಲಿದ್ದರೆ, ಆಕೆಯ ಮಗಳು ತಾನು ಬಾಡಿಗೆಗೆ ಇದ್ದ ಮನೆಯ ಯಜಮಾನರ ಮನೆಯಲ್ಲಿ ಆಶ್ರಯ ಪಡೆದಿದ್ದು, ತನ್ನ ತಾಯಿಯ ಆಗಮನಕ್ಕಾಗಿ ಕಣ್ಣು ಬಿಟ್ಟಿಕೊಂಡು ಕಾಯುತ್ತಿದ್ದಾಳೆ..

ಆಕೆಯ ತಾಯಿ ಈಗಾಗಲೇ ಮಾಧ್ಯಮಗಳ ಎದುರು ತನ್ನ ಮಗಳು ಆಡಿದ ಮಾತುಗಳು ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಅವಲತ್ತುಕೊಂಡಿದ್ದಾಳೆ. ಆದರೆ ಪೊಲೀಸರು ಮಾತ್ರ ನಾಟಕದ ಡೈಲಾಗ್‌ಗಳು ಸಿಎಎ, ಎನ್‌ಆರ್‌ಸಿ ವಿರುದ್ಧ ಸುಳ್ಳು ಹರಡುತ್ತಿವೆ ಮತ್ತು ಪ್ರಧಾನಿ ನರೆಂದ್ರ ಮೋದಿಯವರಿಗೆ ಅವಮಾನಿಸುವಂತಿವೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ಅಷ್ಟು ಮಾತ್ರವಲ್ಲ ದೂರು ದಾಖಲಾದ ನಂತರ ಇದುವರೆಗೂ ನಾಲ್ಕು ಬಾರಿ ಶಾಹಿನ್ ಶಾಲೆಗೆ ಭೇಟಿ ಕೊಟ್ಟಿದ್ದಲ್ಲದೇ ಪದೇ ಪದೇ ವಿಚಾರಣೆ ನೆಪದಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳಕೊಟ್ಟಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ದೂರಿದೆ. ಪೊಲೀಸರ ಭಯಕ್ಕೆ ಹಲವು ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ.

ನ್ಯಾಯ ಎಲ್ಲಿದೆ?

ಸರ್ಕಾರ ಒಂದು ಕಡೆ ಎನ್‌ಸಿಆರ್ ಮಾಡುವುದಿಲ್ಲ ಎನ್ನುತ್ತಿದೆ. ಈ ಬಗ್ಗೆ ಪ್ರಧಾನಿ ಒಂದು ಹೇಳಿದರೆ, ಗೃಹಸಚಿವ ಅಮಿತ್ ಶಾ ಮತ್ತೊಂದು ಹೇಳುತ್ತಿದ್ದಾರೆ. ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ಸಂಬಂಧವಿದೆಯೆಂದು ಒಮ್ಮೆ, ಇಲ್ಲ ಎಂದು ಇನ್ನೊಮ್ಮೆ ಹೇಳುತ್ತಿದ್ದಾರೆ. ದಾಖಲೆ ತೋರಿಸಬೇಕಿಲ್ಲ ಎಂದು ಒಮ್ಮೆ, ತೋರಿಸಬೇಕೆಂದು ಒಮ್ಮೆ ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಸುಳ್ಳು ಸುದ್ದಿ ಹರಡಿ ದಿಕ್ಕುತಪ್ಪಿಸುತ್ತಿರುವುದು ಸರ್ಕಾರವೇ ಆಗಿದೆ. ಇವರಿಗೆ ಯಾವ ಶಿಕ್ಷೆ ಕೊಡಬೇಕು? ದಾಖಲೆ ಕೇಳಿದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬುದು ದೇಶದ್ರೋಹವೇ? ಅದಕ್ಕೂ ಪ್ರಧಾನಿಗೂ ಏನು ಸಂಬಂಧ? ಒಟ್ಟಿನಲ್ಲಿ ಕರ್ನಾಟಕ ಪೊಲೀಸರು ಸಂಘಪರಿವಾರದ ಅಣತಿಯಂತೆ ನಡೆದುಕೊಳ್ಳುತ್ತಿರುವುದು ಕರ್ನಾಟಕದ ಜನರಿಗೆ ಮಾಡಿದ ಅವಮಾನವಾಗಿದೆ.

NRC or No NRC- – Who is Lying, Modi or Shah- – CAA-NRC Protests – The Wire

NRC or No NRC- – Who is Lying, Modi or Shah- – CAA-NRC Protests – The Wire

Posted by PEclub on Wednesday, December 25, 2019

ಬಿಜೆಪಿ ಮುಖಂಡರು ರಾಜ್ಯದಲ್ಲಿ ಮತ್ತು ದೇಶದಲ್ಲಿ ದಿನಕ್ಕೊಂದು ಕೋಮುಪ್ರಚೋದಿತ, ಶಾಂತಿ -ಸಾಮರಸ್ಯ ಹಾಳುಮಾಡುವ ಹೇಳಿಕೆ ಕೊಡುತ್ತಿದ್ದಾರೆ. ಸಿಎಎ ವಿರೋಧಿಸುವವರನ್ನು ಸೆದೆಬಡಿಯುತ್ತೇವೆ ಎಂದೂ, ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟ ಮಾಡದೇ ಹೆಸರು ಪಡೆಯುತ್ತಿದ್ದಾರೆ ಎಂದು ಬಹಿರಂಗವಾಗಿ ಕರ್ನಾಟಕದ ಸಂಸದ ಅನಂತ್‌ಕುಮಾರ್‌ಹೆಗಡೆ ಹೇಳಿದ್ದಾರೆ. ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮುಸ್ಲಿಮರನ್ನು ಕೊಚ್ಚಿ ಹಾಕುತ್ತೇವೆ ಎಂದು ಭಾಷಣ ಮಾಡುತ್ತಾರೆ. ಸಚಿವ ಸಿ.ಟಿ ರವಿ ಕನ್ನಡಪರ ಸಂಘಟನೆಗಳನ್ನು ತುಕಡೆ ತುಕಡೆ ಗ್ಯಾಂಗ್ ಅನ್ನುತ್ತಾರೆ. ಗೋಧ್ರಾದಲ್ಲಿ ಮುಸ್ಲಿಮರಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. ದೆಹಲಿಯಲ್ಲಿ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎನ್ನುತ್ತಾರೆ. ಆದರೆ ಇವರ‍್ಯಾರ ಮೇಲೂ ಸಹ ಯಾವುದೇ ದೂರು ದಾಖಲಾಗುವುದಿಲ್ಲ.. ಪೊಲೀಸರು ಬಿಜೆಪಿಯವರ ಎದುರು ಇಲಿಗಳಂತೆಯೂ ಬಡ ಜನರ ಎದುರು ಹುಲಿಗಳಂತೆಯೂ ವರ್ತಿಸುತ್ತಿದ್ದಾರೆ.

ಶಾಹಿನ್ ಶಾಲೆಯ ಮೇಲೇಕೆ ಕೋಪ?

ಪೊಲೀಸರು ಪದೇ ಪದೇ ವಿಚಾರಣೆಯ ನೆಪದಲ್ಲಿ ಶಾಹಿನ್ ಶಾಲೆಗೆ ಭೇಟಿಕೊಡುವ ಮೂಲಕ ಆ ಶಾಲೆಯ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. 9-10 ವರ್ಷದ ಮಕ್ಕಳಿಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರಿಗು, ಅವರ ಪೋಷಕರಿಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಶಾಹಿನ್ ಸಂಸ್ಥೆಯು ಕಳೆದ 31 ವರ್ಷಗಳಿಂದ ದೇಶದ 8 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ಧರ್ಮದ ಸುಮಾರು 16000 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಕಳೆದ ವರ್ಷವೊಂದರಲ್ಲಿಯೇ 327 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪಾಸಾಗಿ ವೈದ್ಯಕೀಯ ಸೀಟುಗಳನ್ನು ಪಡೆದಿದ್ದಾರೆ. ಬಡವರ ಪರವಾಗಿ ಇರುವ ಇಂತಹ ಸಂಸ್ಥೆಯ ಮೇಲೆ ಕಣ್ಣುಬಿದ್ದಿರುವ ದುರುಳರ ಪರವಾಗಿ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ದೂರಿದೆ.

ಒಟ್ಟಿನಲ್ಲಿ ಮುಂದಾಲೋಚನೆಯಿಲ್ಲದೇ ಸಿಎಎ ಕಾನೂನನ್ನು ತಂದ ಸರ್ಕಾರ, ಅದನ್ನು ಸಮರ್ಥಿಸಿಕೊಳ್ಳಲು ಕಂಡ ಕಂಡವರ ಮೇಲೆ ದೂರು ದಾಖಲಿಸಿ ಹೆದರಿಸುವ ನೀಚತನಕ್ಕೆ ಇಳಿದಿದೆ. ಅದಕ್ಕಾಗಿಯೇ ಅದು ಭಿತ್ತಿಪತ್ರಕ್ಕೆ, ಕವನಕ್ಕೆ, ನಾಟಕಕ್ಕೆ ಹೆದರುತ್ತಿದೆ. ಮೈಸೂರಿನಲ್ಲಿಯೂ ಸಹ ಫ್ರಿ ಕಾಶ್ಮೀರ್ ಭಿತ್ತಿಫಲಕ ಹಿಡಿದ ವಿದ್ಯಾರ್ಥಿನಿಯದು ತಪ್ಪಿಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಾಡಲಾಗಿದೆ. ಹಾಗಾಗಿ ಆಕೆಗೆ ಜಾಮೀನು ದೊರೆತಿದೆ. ಅದೇ ರೀತಿ ಇಲ್ಲಿಯೂ ಸಹ ನ್ಯಾಯಾಲಯದಲ್ಲಿ ಈ ಕೇಸುಗಳು ನಿಲ್ಲುವುದಿಲ್ಲ. ಆದರೆ ಈ ಮೂಲಕ ಜನರಲ್ಲಿ ಭಯ ಉಂಟುಮಾಡಲು ಹೋಗಿ ಪ್ರಭುತ್ವ ಮತ್ತಷ್ಟು ಬೆತ್ತಲಾಗುತ್ತಿದೆ ಅಷ್ಟೇ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಾನ್ಯೆರೆ,
    ಹಲವಾರು ಹಿಂದಿ, ಕನ್ನಡ, ಇತರ ಭಾಷೆಗಳ ಚಲನ ಚಿತ್ರಗಳಲ್ಲಿ ಐತಿಹಾಸಿಕ ಕಥೆಗಳ ಸಿನೆಮಾಗಳಲ್ಲಿ ದೇಶ ಮತ್ತು ವಿದೇಶಿಗರ ಪಾತ್ರ ನಮ್ಮ ದೇಶ ಕಲಾವಿಧರು ಮಾಡುತ್ತಾರೆ. ಅಂಥಹವರಲ್ಲಿ ಕೆಲವರು ದೇಶ ಭಕ್ತಿಯ ಪಾತ್ರ ವಹಿಸುತ್ತಾರೆ ಕೆಲವರು ದೇಶ ದ್ರೋಹಿಗಳ ಪಾತ್ರ ವಹಿಸುತ್ತಾರೆ. ದೇಶ ಭಕ್ತರ ಪಾತ್ರ ವಹಿಸಿದವರು ಜೈಕಾರ ಹಾಕುತ್ತಾರೆ, ಭಾರತ ಕೀ ಜೈ ಹೋ ಅಂತಾರೆ, ದೇಶ ದ್ರೋಹಿಗಳ ಪಾತ್ರ ವಹಿಸಿದವರು ನಮ್ಮ ವೈರಿ ದೇಶಗಳ ಜೈಕಾರ ಹಾಕುತ್ತಾರೆ.
    ಇಂತಹ ವಿಷಯಗಳಲ್ಲಿ ಬೀದರ ಪೊಲೀಸರಿಗೆ ನನ್ನ ಸವಾಲು, ಆಗ ಸಿನೆಮಾಗಳಲ್ಲಿ ದೇಶ ದ್ರೋಹ ಪಾತ್ರ ವಹಿಸಿದ ಎಷ್ಟು ಜನರ ಮೇಲೆ ಕೇಸ ಹಾಕಿ ಜೇಲಿಗೆ ಕಳಹಿಸಿದಿರಿ ಉತ್ತರ ಕೊಡಿ?
    ನೀವು ಯಾವ ಶಾಲೆಯಲ್ಲಿ ಕಾನೂನು ಕಲಿರುವಿರಿ? ಜನರ ಬಗ್ಗೆ, ಕಾನೂನಿನ ಬಗ್ಗೆ ಕಾಳಜಿಯಿಂದ ವರ್ತಿಸಿ
    ಯಿಂದ:-
    ಸಯದ ಸಜ್ಜಾದ ಅಲಿ ಇನಾಮದಾರ
    ಮಾಜಿ ಉಪ ಮಹಾ ಪೌರರು ಕಲಬುರಗಿ

LEAVE A REPLY

Please enter your comment!
Please enter your name here

- Advertisment -

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...

ಮಣಿಪುರ: ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಇಂಫಾಲ್ ಕಣಿವೆಯಲ್ಲಿ ಪ್ರತಿಭಟನೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಮಣಿಪುರ: ಕಣಿವೆಯ ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿಗಳು ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಮಣಿಪುರ ಸರ್ಕಾರ ಮಂಗಳವಾರ ಆದೇಶಿಸಿದೆ. ಗೃಹ ಇಲಾಖೆಯ ಅಧಿಕೃತ...

ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐವರ ಬಂಧನ; ಅಂತರರಾಜ್ಯ ಎಲ್‌ಇಟಿ ಮಾಡ್ಯೂಲ್ ಪತ್ತೆ 

ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂತರರಾಜ್ಯ ಮಾಡ್ಯೂಲ್ ಅನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐದು...

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಮೂವರು ಸಾವು

ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್ ಕಟ್ಟಡದ ಬಳಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ, ಅಧಿಕಾರಿಗಳು ಆ ಪ್ರದೇಶವನ್ನು...

ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ; ತೀವ್ರ ಸ್ವರೂಪ ಪಡೆದುಕೊಂಡ ವಾಕ್ಸಮರ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಏ.7) ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಣ್ಣೂರಿನಲ್ಲಿ ನಡೆದ ಪತ್ರಿಕಾ ಸಂವಾದ...

ಹಿಮಂತ ಬಿಸ್ವಾ ಶರ್ಮಾ ಪತ್ನಿಯ ವಿರುದ್ಧ ‘ಹಲವು ಪಾಸ್‌ಪೋರ್ಟ್‌’ ಹೊಂದಿರುವ ಆರೋಪ : ಪವನ್ ಖೇರಾ ಮನೆಯಲ್ಲಿ ಶೋಧ ನಡೆಸಿದ ಅಸ್ಸಾಂ ಪೊಲೀಸರು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಮನೆಯಲ್ಲಿ ಶೋಧ...

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇಂದ್ರದ ಹಣವನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡಿದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ನಿಧಿಯ ದುರುಪಯೋಗ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಕುಸಿತವಾಗಿದೆ ಎಂದು...