ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ದೌರ್ಜನ್ಯ ವಿರೋಧಿಸಿ ಮಹಿಳೆ ಕೂಗಾಡಿದಾಗ ಜನಸಮೂಹ ಜಮಾಹಿಸಿದೆ, ಈಗಿದ್ದರೂ ಅಪರಾಧ ಕೃತ್ಯ ನಿಲ್ಲಿಸದ ದುಷ್ಟರು ಆಕೆಯ ಮೇಲೆ ತೀವ್ರ ಹಲ್ಲೆಯನ್ನು ಮಾಡಿ ವಿಡಿಯೋ ಚಿತ್ರಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ, ಆದರೆ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈ ಘಟನೆಯು ಪ್ರದೇಶದಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದೆ.
2026 ಮಾರ್ಚ್ 26 ರಂದು ನಡೆದಿದ್ದ ಈ ಘಟನೆ ವಿಡಿಯೋ ವೈರಲ್ ಆದ ನಂತರ ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 74/75/76/115(2)/126(2)/3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಪಚು ಯಾದವ್ ಅಲಿಯಾಸ್ ಪುನಾ ಯಾದವ್ ಅವರ ಪುತ್ರ ಅಶೋಕ್ ಯಾದವ್ ಮತ್ತು ದಿವಂಗತ ಹರಿಹರ್ ಮಹ್ತೊ ಅವರ ಪುತ್ರ ಮಟ್ಲು ಮಹ್ತೊ ಅಲಿಯಾಸ್ ನವನೀತ್ ಕುಮಾರ್ ನರೋತ್ತಮ್ ಎಂದು ಗುರುತಿಸಲಾಗಿದೆ. ನಳಂದ ಜಿಲ್ಲೆಯ ನೂರ್ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಅಜಯ್ಪುರ ಗ್ರಾಮದ ನಿವಾಸಿಗಳಿಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ವರದಿಯ ಪ್ರಕಾರ, ಸಂತ್ರಸ್ತೆ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದಳು. ಮಾರ್ಚ್ 26 ರಂದು ಸಂಜೆ 6 ರಿಂದ 7 ಗಂಟೆಯ ನಡುವೆ, ಅವಳು ದಿನಸಿ ಸಾಮಾನುಗಳೊಂದಿಗೆ ಹಿಂತಿರುಗುತ್ತಿದ್ದಾಗ ಮೂವರು ಆರೋಪಿಗಳು ಅವಳನ್ನು ಹಿಡಿದುಕೊಂಡರು. ಅವಳು ವಿರೋಧಿಸಿದಾಗ ಅವರು ಅವಳನ್ನು ನೆಲಕ್ಕೆ ಎಸೆದು ಬಟ್ಟೆಗಳನ್ನು ಹರಿದು ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೇ ಹಲ್ಲೆ ಮಾಡಿ ವಿಡಿಯೋ ಚಿತ್ರಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.


