Homeಮುಖಪುಟಬಿಲ್ಕಿಸ್ ಪ್ರಕರಣ - ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

ಬಿಲ್ಕಿಸ್ ಪ್ರಕರಣ – ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

- Advertisement -
- Advertisement -

ಗರ್ಭಿಣಿಯಾದ ಆಕೆಯ ಮೇಲೆ ಬಿಟ್ಟೂಬಿಡದೆ 22 ಬಾರಿ ಅತ್ಯಾಚಾರ ನಡೆಯುತ್ತದೆ. ಮೂರು ವರ್ಷದ ಮಗಳ ತಲೆಯನ್ನು ನೆಲಕ್ಕೆ ಅಪ್ಪಳಿಸಿ ಕೊಲ್ಲಲಾಗುತ್ತದೆ. ಆಕೆಯ ತಾಯಿಯೂ ಸೇರಿದಂತೆ ಕುಟುಂಬದ ಇತರೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಚ್ಚಿ ಹಾಕಲಾಗುತ್ತದೆ.ಕಣ್ಣೆದುರಿಗೇ ಕುಟುಂಬದ 14 ಹೆಣಗಳು ಉರುಳುತ್ತವೆ. ಈ ಅಪರಾಧವನ್ನು ಹೀನಾತಿಹೀನ ಎಂದು ಒಪ್ಪಿಕೊಳ್ಳಲು ತಯಾರಿಲ್ಲ ಗುಜರಾತ್ ಸರ್ಕಾರ.

ಕೋಮುವಾದಿ ಹಿಂಸೆಯ ದಳ್ಳುರಿಯ ನಡುವೆ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಬಡ ಹೆಣ್ಣುಮಗಳೊಬ್ಬಳಿಗೆ 50 ಲಕ್ಷರೂಪಾಯಿ ಪರಿಹಾರ ನೀಡುವಂತೆ ಸುಪ್ರೀಮ್‍ ಕೋರ್ಟ್‍ತೀರ್ಪು ನೀಡಿ ನಾಲ್ಕು ತಿಂಗಳುಗಳೇ ಉರುಳಿವೆ. ಈ ಮುನ್ನತನಗೆ ನ್ಯಾಯ ಬೇಡಿ 17 ವರ್ಷಗಳ ಕಾಲ ಕೋರ್ಟುಗಳ ಕಂಬ ಸುತ್ತಿದ್ದಳು ಆಕೆ.

ಬಿಲ್ಕಿಸ್‍ ಗುಜರಾತ್ ಸರ್ಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಲಯ ನಿಂದನೆ ಮೊಕದ್ದಮೆ ಕಳೆದ ವಾರ ಸುಪ್ರೀಮ್‍ಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಪರಿಹಾರದ ಆದೇಶದ ವಿರುದ್ಧ ಮರುವಿಮರ್ಶೆಅರ್ಜಿ ಸಲ್ಲಿಸುವ ಇರಾದೆ ತನಗಿರುವ ಕಾರಣ ಪರಿಹಾರವನ್ನು ನೀಡಿಲ್ಲ ಎಂದು ಗುಜರಾತ್ ಸರ್ಕಾರ ಹೇಳಿಕೊಂಡಿತು. ಒಂದು ಪ್ರಕರಣದಲ್ಲಿ 50 ಲಕ್ಷ ನೀಡಿದರೆ ಇತರೆ ಪ್ರಕರಣಗಳ ಪಾಲಿಗೆ ಅದು ಪೂರ್ವನಿದರ್ಶನ ಆಗುತ್ತದೆಂಬುದು ಗುಜರಾತ್ ಸರ್ಕಾರದ ಬಾಧೆ.

2002ರ ಫೆಬ್ರವರಿ 27ರ ಮುಂಜಾನೆ ಗುಜರಾತಿನ ಗೋಧ್ರಾ ಬಳಿ ಸಾಬರಮತಿ ಎಕ್ಸ್ ಪ್ರೆಸ್‍ನ ಕರಸೇವಕರಿದ್ದ ಬೋಗಿಗೆ ಬೆಂಕಿ ಬಿದ್ದು 59 ಮಂದಿ ಆಹುತಿಯಾಗಿದ್ದರು. ಆಗ ಹೊತ್ತಿಕೊಂಡ ಕೋಮು ಗಲಭೆಗಳ ದಳ್ಳುರಿ ಗುಜರಾತಿನ ಉದ್ದಗಲಕ್ಕೆ ಅಲ್ಪಸಂಖ್ಯಾತರ ಮಾರಣ ಹೋಮಕ್ಕೆ ಕಾರಣವಾಯಿತು.

ಅಹ್ಮದಾಬಾದ್ ನಿಂದ 200 ಕಿ.ಮೀ. ದೂರದ ದಾಹೋದ್ ನ ಒಂದು ಹಳ್ಳಿ ರಾಧಿಕಾಪುರ ಬಿಲ್ಕಿಸ್ ಬಾನುವಿನ ಹುಟ್ಟೂರು. ನೆರೆ ಹೊರೆಯವರು ಮುಸಲ್ಮಾನರಎಲ್ಲ 60 ಮನೆಗಳಿಗೆ ಬೆಂಕಿ ಇಟ್ಟಿದ್ದರು. ಬಿಲ್ಕಿಸ್ ಮತ್ತು ಆಕೆಯ ಕುಟುಂಬ ಬೆದರಿ ಹೊಲಗಳತ್ತ ಪರಾರಿಯಾಗಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಪರಾರಿಯಾಗುತ್ತಲೇ ತಲೆಮರೆಸಿಕೊಂಡಿದ್ದಾಗ ಆಕೆಯ ರಕ್ತಸಂಬಂಧಿ ಶಮೀಮ್ ಹೆಣ್ಣುಮಗುವನ್ನು ಪ್ರಸವಿಸಿದ್ದಳು.

ಸುತ್ತಮುತ್ತಲ ಅಡವಿಯ ಗಿಡಮರಗಳ ನೆರಳುಗಳಲ್ಲಿ ಅಡಗಿಕೊಳ್ಳುತ್ತಿದ್ದ ಅವರು ಹೇಗಾದರೂ ಮಾಡಿ ಮುಸ್ಲಿಂ ಬಾಹುಳ್ಯದ ವಸತಿಯನ್ನು ತಲುಪಬೇಕಿತ್ತು. ಹೆದ್ದಾರಿಗಳನ್ನು ಹಿಡಿಯುವಂತಿರಲಿಲ್ಲ. ಒಳನಾಡಿನ ಕಚ್ಚಾದಾರಿಗಳಲ್ಲೇ ಸಾಗಬೇಕಿತ್ತು. ಭೀತಿಯ ಪಯಣದಲ್ಲಿಕರುಣೆ ಸಹಾನುಭೂತಿಯುಳ್ಳ ಜನ ಅವರನ್ನು ಕಾಪಾಡಿದ್ದುಂಟು.

ಪನ್ನಿವೇಲ್ ಎಂಬ ಹಳ್ಳಿ ಸೇರಿದ್ದರೆ ಈ ಕುಟುಂಬದ ಪ್ರಾಣಗಳು ಉಳಿಯುತ್ತಿದ್ದವು. ಆದರೆ ಹಾಗಾಗಲಿಲ್ಲ. ಈ ಕುಟುಂಬ ಪಯಣಿಸುತ್ತಿದ್ದ ಟ್ರಕ್‍ನ್ನು ಎರಡು ಟ್ರಕ್‍ಗಳು ಅಡ್ಡ ಹಾಕಿದ್ದವು. 20- 30 ಮಂದಿಯ ಕೈಗಳಲ್ಲಿ ಹಿರಿದಿದ್ದಕತ್ತಿ ಕುಡುಗೋಲುಗಳು. ಬಿಲ್ಕಿಸ್‍ ಅಪ್ಪನಿಗೆ ಚಿಕಿತ್ಸೆ ನೀಡಿದ್ದ, ಅದೇ ಬೀದಿಯ ಎದುರಿಗಿದ್ದ ವೈದ್ಯನ ಮಗ, ಬಳೆ ಅಂಗಡಿ ನಡೆಸುತ್ತಿದ್ದ ವ್ಯಕ್ತಿ, ಹೊಟೇಲು ಇಟ್ಟು ಕೊಂಡಿದ್ದಾತ, ಗ್ರಾಮಪಂಚಾಯಿತಿ ಸದಸ್ಯೆಯಗಂಡ… ಇವರೆಲ್ಲ ಬಿಲ್ಕಿಸ್ ಗೆ ಚಿರ ಪರಿಚಿತರೇ. ಬಾಲ್ಯದಿಂದತನ್ನನ್ನು ಬಲ್ಲವರೇಆದರೂತನ್ನನ್ನು ಎಷ್ಟು ಕ್ರೌರ್ಯದಿಂದ ಉಲ್ಲಂಘಿಸಿದರಲ್ಲ ಎಂಬುದು ಆಕೆಯನ್ನು ಬಹುಕಾಲ ಅಲ್ಲಾಡಿಸಿದ ಕಟು ವಾಸ್ತವ.

ಬಗಲಲ್ಲಿ ಮೂರು ವರ್ಷದ ಮಗಳು ಸಾಲೇಹ. ಅವಳನ್ನು ಕಸಿದುಕೊಂಡು ತಲೆಯನ್ನು ನೆಲಕ್ಕೆ ಅಪ್ಪಳಿಸಿ ಅರೆನಿಮಿಷದಲ್ಲೇಕೊಂದು ಹಾಕಿದನೊಬ್ಬ. ತನ್ನದೇ ಹಳ್ಳಿಯ ಮೂವರು ಪುರುಷರು ಆಕೆಯನ್ನು ಎಳೆದುಕೊಂಡು ಬಟ್ಟೆಗಳನ್ನು ಹರಿದೆಸೆದರು. ಗರ್ಭಿಣಿಯೆಂದು ಆಕೆ ಅಲವತ್ತು ಕೊಂಡಳು. ನೀವೆಲ್ಲ ನನ್ನ ಅಣ್ಣಂದಿರು, ಚಿಕ್ಕಪ್ಪಂದಿರಿದ್ದಂತೆ ಎಂದರೂ ಬಿಡದೆ ಅತ್ಯಾಚಾರ ನಡೆಸಿದರು.

ಹತ್ಯೆಅತ್ಯಾಚಾರದ ಅಮಾನುಷತೆಯ ವಿಕೃತ ವಿಜೃಂಭಣೆಗೆ 14 ಮಂದಿ ಬಲಿಯಾದರು. ಹಿಂದಿನ ದಿನವಷ್ಟೇ ಹೆಣ್ಣುಮಗುವನ್ನು ಹಡೆದಿದ್ದ ಶಮೀಮ್‍ಳನ್ನು ಅವಳ ಹಸುಳೆಯ ಸಹಿತ ಹತ್ಯೆ ಮಾಡಲಾಗಿತ್ತು.ಮೂರ್ಛೆ ಹೋಗಿದ್ದ ಬಿಲ್ಕಿಸ್ ಸತ್ತೇ ಹೋಗಿದ್ದಾಳೆಂದು ಭಾವಿಸಿದ ದಾಳಿಕೋರರು ಮಾರಣಹೋಮದತಾಣವನ್ನುತೊರೆದಿದ್ದರು.

ಎಚ್ಚ ಬಂದಾಗ ಪೂರ್ಣ ಬೆತ್ತಲಾಗಿದ್ದದ್ದು ತಿಳಿಯಿತು. ಸುತ್ತಮುತ್ತಕೊಚ್ಚಿ ಹಾಕಲಾಗಿದ್ದತನ್ನದೇಕುಟುಂಬದ ರಕ್ತಸಿಕ್ತ ಕಳೇಬರಗಳು. ಪೆಟ್ಟಿಕೋಟಿನಿಂದ ಮೈ ಮುಚ್ಚಿಕೊಂಡು ಪಕ್ಕದಲ್ಲಿದ್ದ ಗುಡ್ಡ ಹತ್ತಿ ಅಲ್ಲಿಯೇದುಃಖ ಭೀತಿಯಲ್ಲಿ ಮುಳುಗಿ ಇರುಳು ಕಳೆದಳು. ಮರುದಿನ ನೀರಿಗಾಗಿ ಅರಸುತ್ತಿದ್ದವಳನ್ನು ಕೊಳವೆ ಬಾವಿಯೊಂದರ ಬಳಿ ಕಂಡ ಆದಿವಾಸಿ ಹೆಣ್ಣುಮಗಳು ಬಟ್ಟೆಗಳನ್ನಿತ್ತಳು. ಪೊಲೀಸ್‍ ಅಧಿಕಾರಿಯೊಬ್ಬನನ್ನು ಸಂಪರ್ಕಿಸಿದಳು. ಆತ ಆಕೆಯನ್ನು ತನ್ನ ವಾಹನದಲ್ಲಿ ಲಿಮ್ಖೇಡ ಪೊಲೀಸ್‍ಠಾಣೆಗೆ ಕರೆದೊಯ್ದ.

ಎಂಟು ಸಾಮೂಹಿಕ ಅತ್ಯಾಚಾರಗಳು ಮತ್ತು 14 ಹತ್ಯೆಗಳನ್ನು ನೋಡಿದ ನಂತರವೂ ಪ್ರಾಣಸಹಿತ ಉಳಿದಿದ್ದ ಏಕೈಕ ಸಾಕ್ಷಿ ಬಿಲ್ಕಿಸ್ ಬಾನು.ಆದರೆ ಪೊಲೀಸರುದೂರು ದಾಖಲಿಸಿಕೊಳ್ಳುವುದಿಲ್ಲ. ಒತ್ತಾಯಿಸಿದರೆ ವಿಷದ ಸೂಜಿಮದ್ದು ನೀಡಿಕೊಲ್ಲುವ ಬೆದರಿಕೆ ಹಾಕಲಾಗುತ್ತದೆ. ಪರಿಹಾರ ಶಿಬಿರವೊಂದಕ್ಕೆ ಆಕೆಯನ್ನು ಸಾಗ ಹಾಕಲಾಗುತ್ತದೆ. ಅಲ್ಲಿತನ್ನ ಪತಿಯಾಕೂಬ್‍ರಸೂಲನನ್ನು ಸೇರಿಕೊಳ್ಳುತ್ತಾಳೆ.

ಬಿಲ್ಕಿಸ್‍ ಕುಟುಂಬದ ಹತ್ಯೆ ನಡೆದಎರಡು ದಿನಗಳ ನಂತರಎಂಟು ಶವಗಳನ್ನು ಕಂಡವರು ಕೆಲ ಸ್ಥಳೀಯ ಛಾಯಾ ಚಿತ್ರಕಾರರು. ಪೊಲೀಸರು ಕಾರ್ಯಪ್ರವೃತ್ತರಾಗುತ್ತಾರೆ. ಅತ್ಯಾಚಾರಜರುಗಿದ ನಾಲ್ಕು ದಿನಗಳ ನಂತರ ಗೋಧ್ರಾ ಸಿವಿಲ್ ಆಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ಪರೀಕ್ಷೆ ನಡೆಯಿತು.

ಕಳೇಬರಗಳ ಮಹಜರು ನಡೆಯುವುದಿಲ್ಲ. ಕೊಳೆಯಲು ಬಿಡಲಾಗುತ್ತದೆ. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಹತ್ವದ ಸಾಕ್ಷ್ಯ ಪುರಾವೆಗಳಾಗಬೇಕಿದ್ದ ರಕ್ತ ಮತ್ತು ಇತರೆ ಜೈವಿಕ ಸ್ಯಾಂಪಲ್ ಗಳನ್ನು ಸಂಗ್ರಹಿಸಲಿಲ್ಲ. ಶವಗಳನ್ನು ಸಾಮೂಹಿಕವಾಗಿ ದಫನು ಮಾಡಲಾಗುತ್ತದೆ. ಎರಡು ವರ್ಷಗಳ ನಂತರ 2004ರಲ್ಲಿ ಸಿಬಿಐ ಈ ತನಿಖೆಯನ್ನುಕೈಗೆತ್ತಿಕೊಂಡಾಗ ಹೂತಿದ್ದ ಶವಗಳನ್ನು ಹೊರತೆಗೆದಾಗಯಾವ ಶವಕ್ಕೂ ರುಂಡವಿರುವುದಿಲ್ಲ. ಮರಣೋತ್ತರ ಪರೀಕ್ಷೆಯ ನಂತರಗುರುತು ಸಿಗದಿರಲೆಂದು ರುಂಡಗಳನ್ನು ಬೇರ್ಪಡಿಸಲಾಗಿತ್ತು. ಶವಗಳು ಬೇಗನೆ ಕೊಳೆತು ಹೋಗಲೆಂದು ಅವುಗಳ ಮೇಲೆ ಉಪ್ಪು ಸುರಿದು ಹುಗಿಯಲಾಗಿರುತ್ತದೆ.

ಹನ್ನೊಂದು ಮಂದಿ ಅಪರಾಧಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಮುಂಬಯಿ ಹೈಕೋರ್ಟ್ 2017ರ ಮೇ 4ರಂದು ಎತ್ತಿ ಹಿಡಿದಿತ್ತು. ಮಹತ್ವದ ಸಾಕ್ಷ್ಯ ಪುರಾವೆಗಳನ್ನು ತಿದ್ದಿದ ಮತ್ತು ನಾಶ ಮಾಡಿದ ಏಳು ಮಂದಿ ಪೊಲೀಸರು ಹಾಗೂ ವೈದ್ಯರಖುಲಾಸೆಯ ಆದೇಶವನ್ನು ತಳ್ಳಿ ಹಾಕಿತ್ತು.

ಮನುಷ್ಯಳಾಗಿ, ನಾಗರಿಕಳಾಗಿ, ಮಹಿಳೆಯಾಗಿ, ತಾಯಿಯಾಗಿ ತನ್ನ ಹಕ್ಕುಗಳನ್ನು ಅತ್ಯಂತ ಪಾಶವೀತನದಿಂದ ಉಲ್ಲಂಘಿಸಲಾಗಿದೆ ಎಂದು ಬಿಲ್ಕಿಸ್ ಬಾನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡಿದ್ದಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...