Homeಮುಖಪುಟಬಿಲ್ಕಿಸ್ ಪ್ರಕರಣ - ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

ಬಿಲ್ಕಿಸ್ ಪ್ರಕರಣ – ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

- Advertisement -
- Advertisement -

ಗರ್ಭಿಣಿಯಾದ ಆಕೆಯ ಮೇಲೆ ಬಿಟ್ಟೂಬಿಡದೆ 22 ಬಾರಿ ಅತ್ಯಾಚಾರ ನಡೆಯುತ್ತದೆ. ಮೂರು ವರ್ಷದ ಮಗಳ ತಲೆಯನ್ನು ನೆಲಕ್ಕೆ ಅಪ್ಪಳಿಸಿ ಕೊಲ್ಲಲಾಗುತ್ತದೆ. ಆಕೆಯ ತಾಯಿಯೂ ಸೇರಿದಂತೆ ಕುಟುಂಬದ ಇತರೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಚ್ಚಿ ಹಾಕಲಾಗುತ್ತದೆ.ಕಣ್ಣೆದುರಿಗೇ ಕುಟುಂಬದ 14 ಹೆಣಗಳು ಉರುಳುತ್ತವೆ. ಈ ಅಪರಾಧವನ್ನು ಹೀನಾತಿಹೀನ ಎಂದು ಒಪ್ಪಿಕೊಳ್ಳಲು ತಯಾರಿಲ್ಲ ಗುಜರಾತ್ ಸರ್ಕಾರ.

ಕೋಮುವಾದಿ ಹಿಂಸೆಯ ದಳ್ಳುರಿಯ ನಡುವೆ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಬಡ ಹೆಣ್ಣುಮಗಳೊಬ್ಬಳಿಗೆ 50 ಲಕ್ಷರೂಪಾಯಿ ಪರಿಹಾರ ನೀಡುವಂತೆ ಸುಪ್ರೀಮ್‍ ಕೋರ್ಟ್‍ತೀರ್ಪು ನೀಡಿ ನಾಲ್ಕು ತಿಂಗಳುಗಳೇ ಉರುಳಿವೆ. ಈ ಮುನ್ನತನಗೆ ನ್ಯಾಯ ಬೇಡಿ 17 ವರ್ಷಗಳ ಕಾಲ ಕೋರ್ಟುಗಳ ಕಂಬ ಸುತ್ತಿದ್ದಳು ಆಕೆ.

ಬಿಲ್ಕಿಸ್‍ ಗುಜರಾತ್ ಸರ್ಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಲಯ ನಿಂದನೆ ಮೊಕದ್ದಮೆ ಕಳೆದ ವಾರ ಸುಪ್ರೀಮ್‍ಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಪರಿಹಾರದ ಆದೇಶದ ವಿರುದ್ಧ ಮರುವಿಮರ್ಶೆಅರ್ಜಿ ಸಲ್ಲಿಸುವ ಇರಾದೆ ತನಗಿರುವ ಕಾರಣ ಪರಿಹಾರವನ್ನು ನೀಡಿಲ್ಲ ಎಂದು ಗುಜರಾತ್ ಸರ್ಕಾರ ಹೇಳಿಕೊಂಡಿತು. ಒಂದು ಪ್ರಕರಣದಲ್ಲಿ 50 ಲಕ್ಷ ನೀಡಿದರೆ ಇತರೆ ಪ್ರಕರಣಗಳ ಪಾಲಿಗೆ ಅದು ಪೂರ್ವನಿದರ್ಶನ ಆಗುತ್ತದೆಂಬುದು ಗುಜರಾತ್ ಸರ್ಕಾರದ ಬಾಧೆ.

2002ರ ಫೆಬ್ರವರಿ 27ರ ಮುಂಜಾನೆ ಗುಜರಾತಿನ ಗೋಧ್ರಾ ಬಳಿ ಸಾಬರಮತಿ ಎಕ್ಸ್ ಪ್ರೆಸ್‍ನ ಕರಸೇವಕರಿದ್ದ ಬೋಗಿಗೆ ಬೆಂಕಿ ಬಿದ್ದು 59 ಮಂದಿ ಆಹುತಿಯಾಗಿದ್ದರು. ಆಗ ಹೊತ್ತಿಕೊಂಡ ಕೋಮು ಗಲಭೆಗಳ ದಳ್ಳುರಿ ಗುಜರಾತಿನ ಉದ್ದಗಲಕ್ಕೆ ಅಲ್ಪಸಂಖ್ಯಾತರ ಮಾರಣ ಹೋಮಕ್ಕೆ ಕಾರಣವಾಯಿತು.

ಅಹ್ಮದಾಬಾದ್ ನಿಂದ 200 ಕಿ.ಮೀ. ದೂರದ ದಾಹೋದ್ ನ ಒಂದು ಹಳ್ಳಿ ರಾಧಿಕಾಪುರ ಬಿಲ್ಕಿಸ್ ಬಾನುವಿನ ಹುಟ್ಟೂರು. ನೆರೆ ಹೊರೆಯವರು ಮುಸಲ್ಮಾನರಎಲ್ಲ 60 ಮನೆಗಳಿಗೆ ಬೆಂಕಿ ಇಟ್ಟಿದ್ದರು. ಬಿಲ್ಕಿಸ್ ಮತ್ತು ಆಕೆಯ ಕುಟುಂಬ ಬೆದರಿ ಹೊಲಗಳತ್ತ ಪರಾರಿಯಾಗಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಪರಾರಿಯಾಗುತ್ತಲೇ ತಲೆಮರೆಸಿಕೊಂಡಿದ್ದಾಗ ಆಕೆಯ ರಕ್ತಸಂಬಂಧಿ ಶಮೀಮ್ ಹೆಣ್ಣುಮಗುವನ್ನು ಪ್ರಸವಿಸಿದ್ದಳು.

ಸುತ್ತಮುತ್ತಲ ಅಡವಿಯ ಗಿಡಮರಗಳ ನೆರಳುಗಳಲ್ಲಿ ಅಡಗಿಕೊಳ್ಳುತ್ತಿದ್ದ ಅವರು ಹೇಗಾದರೂ ಮಾಡಿ ಮುಸ್ಲಿಂ ಬಾಹುಳ್ಯದ ವಸತಿಯನ್ನು ತಲುಪಬೇಕಿತ್ತು. ಹೆದ್ದಾರಿಗಳನ್ನು ಹಿಡಿಯುವಂತಿರಲಿಲ್ಲ. ಒಳನಾಡಿನ ಕಚ್ಚಾದಾರಿಗಳಲ್ಲೇ ಸಾಗಬೇಕಿತ್ತು. ಭೀತಿಯ ಪಯಣದಲ್ಲಿಕರುಣೆ ಸಹಾನುಭೂತಿಯುಳ್ಳ ಜನ ಅವರನ್ನು ಕಾಪಾಡಿದ್ದುಂಟು.

ಪನ್ನಿವೇಲ್ ಎಂಬ ಹಳ್ಳಿ ಸೇರಿದ್ದರೆ ಈ ಕುಟುಂಬದ ಪ್ರಾಣಗಳು ಉಳಿಯುತ್ತಿದ್ದವು. ಆದರೆ ಹಾಗಾಗಲಿಲ್ಲ. ಈ ಕುಟುಂಬ ಪಯಣಿಸುತ್ತಿದ್ದ ಟ್ರಕ್‍ನ್ನು ಎರಡು ಟ್ರಕ್‍ಗಳು ಅಡ್ಡ ಹಾಕಿದ್ದವು. 20- 30 ಮಂದಿಯ ಕೈಗಳಲ್ಲಿ ಹಿರಿದಿದ್ದಕತ್ತಿ ಕುಡುಗೋಲುಗಳು. ಬಿಲ್ಕಿಸ್‍ ಅಪ್ಪನಿಗೆ ಚಿಕಿತ್ಸೆ ನೀಡಿದ್ದ, ಅದೇ ಬೀದಿಯ ಎದುರಿಗಿದ್ದ ವೈದ್ಯನ ಮಗ, ಬಳೆ ಅಂಗಡಿ ನಡೆಸುತ್ತಿದ್ದ ವ್ಯಕ್ತಿ, ಹೊಟೇಲು ಇಟ್ಟು ಕೊಂಡಿದ್ದಾತ, ಗ್ರಾಮಪಂಚಾಯಿತಿ ಸದಸ್ಯೆಯಗಂಡ… ಇವರೆಲ್ಲ ಬಿಲ್ಕಿಸ್ ಗೆ ಚಿರ ಪರಿಚಿತರೇ. ಬಾಲ್ಯದಿಂದತನ್ನನ್ನು ಬಲ್ಲವರೇಆದರೂತನ್ನನ್ನು ಎಷ್ಟು ಕ್ರೌರ್ಯದಿಂದ ಉಲ್ಲಂಘಿಸಿದರಲ್ಲ ಎಂಬುದು ಆಕೆಯನ್ನು ಬಹುಕಾಲ ಅಲ್ಲಾಡಿಸಿದ ಕಟು ವಾಸ್ತವ.

ಬಗಲಲ್ಲಿ ಮೂರು ವರ್ಷದ ಮಗಳು ಸಾಲೇಹ. ಅವಳನ್ನು ಕಸಿದುಕೊಂಡು ತಲೆಯನ್ನು ನೆಲಕ್ಕೆ ಅಪ್ಪಳಿಸಿ ಅರೆನಿಮಿಷದಲ್ಲೇಕೊಂದು ಹಾಕಿದನೊಬ್ಬ. ತನ್ನದೇ ಹಳ್ಳಿಯ ಮೂವರು ಪುರುಷರು ಆಕೆಯನ್ನು ಎಳೆದುಕೊಂಡು ಬಟ್ಟೆಗಳನ್ನು ಹರಿದೆಸೆದರು. ಗರ್ಭಿಣಿಯೆಂದು ಆಕೆ ಅಲವತ್ತು ಕೊಂಡಳು. ನೀವೆಲ್ಲ ನನ್ನ ಅಣ್ಣಂದಿರು, ಚಿಕ್ಕಪ್ಪಂದಿರಿದ್ದಂತೆ ಎಂದರೂ ಬಿಡದೆ ಅತ್ಯಾಚಾರ ನಡೆಸಿದರು.

ಹತ್ಯೆಅತ್ಯಾಚಾರದ ಅಮಾನುಷತೆಯ ವಿಕೃತ ವಿಜೃಂಭಣೆಗೆ 14 ಮಂದಿ ಬಲಿಯಾದರು. ಹಿಂದಿನ ದಿನವಷ್ಟೇ ಹೆಣ್ಣುಮಗುವನ್ನು ಹಡೆದಿದ್ದ ಶಮೀಮ್‍ಳನ್ನು ಅವಳ ಹಸುಳೆಯ ಸಹಿತ ಹತ್ಯೆ ಮಾಡಲಾಗಿತ್ತು.ಮೂರ್ಛೆ ಹೋಗಿದ್ದ ಬಿಲ್ಕಿಸ್ ಸತ್ತೇ ಹೋಗಿದ್ದಾಳೆಂದು ಭಾವಿಸಿದ ದಾಳಿಕೋರರು ಮಾರಣಹೋಮದತಾಣವನ್ನುತೊರೆದಿದ್ದರು.

ಎಚ್ಚ ಬಂದಾಗ ಪೂರ್ಣ ಬೆತ್ತಲಾಗಿದ್ದದ್ದು ತಿಳಿಯಿತು. ಸುತ್ತಮುತ್ತಕೊಚ್ಚಿ ಹಾಕಲಾಗಿದ್ದತನ್ನದೇಕುಟುಂಬದ ರಕ್ತಸಿಕ್ತ ಕಳೇಬರಗಳು. ಪೆಟ್ಟಿಕೋಟಿನಿಂದ ಮೈ ಮುಚ್ಚಿಕೊಂಡು ಪಕ್ಕದಲ್ಲಿದ್ದ ಗುಡ್ಡ ಹತ್ತಿ ಅಲ್ಲಿಯೇದುಃಖ ಭೀತಿಯಲ್ಲಿ ಮುಳುಗಿ ಇರುಳು ಕಳೆದಳು. ಮರುದಿನ ನೀರಿಗಾಗಿ ಅರಸುತ್ತಿದ್ದವಳನ್ನು ಕೊಳವೆ ಬಾವಿಯೊಂದರ ಬಳಿ ಕಂಡ ಆದಿವಾಸಿ ಹೆಣ್ಣುಮಗಳು ಬಟ್ಟೆಗಳನ್ನಿತ್ತಳು. ಪೊಲೀಸ್‍ ಅಧಿಕಾರಿಯೊಬ್ಬನನ್ನು ಸಂಪರ್ಕಿಸಿದಳು. ಆತ ಆಕೆಯನ್ನು ತನ್ನ ವಾಹನದಲ್ಲಿ ಲಿಮ್ಖೇಡ ಪೊಲೀಸ್‍ಠಾಣೆಗೆ ಕರೆದೊಯ್ದ.

ಎಂಟು ಸಾಮೂಹಿಕ ಅತ್ಯಾಚಾರಗಳು ಮತ್ತು 14 ಹತ್ಯೆಗಳನ್ನು ನೋಡಿದ ನಂತರವೂ ಪ್ರಾಣಸಹಿತ ಉಳಿದಿದ್ದ ಏಕೈಕ ಸಾಕ್ಷಿ ಬಿಲ್ಕಿಸ್ ಬಾನು.ಆದರೆ ಪೊಲೀಸರುದೂರು ದಾಖಲಿಸಿಕೊಳ್ಳುವುದಿಲ್ಲ. ಒತ್ತಾಯಿಸಿದರೆ ವಿಷದ ಸೂಜಿಮದ್ದು ನೀಡಿಕೊಲ್ಲುವ ಬೆದರಿಕೆ ಹಾಕಲಾಗುತ್ತದೆ. ಪರಿಹಾರ ಶಿಬಿರವೊಂದಕ್ಕೆ ಆಕೆಯನ್ನು ಸಾಗ ಹಾಕಲಾಗುತ್ತದೆ. ಅಲ್ಲಿತನ್ನ ಪತಿಯಾಕೂಬ್‍ರಸೂಲನನ್ನು ಸೇರಿಕೊಳ್ಳುತ್ತಾಳೆ.

ಬಿಲ್ಕಿಸ್‍ ಕುಟುಂಬದ ಹತ್ಯೆ ನಡೆದಎರಡು ದಿನಗಳ ನಂತರಎಂಟು ಶವಗಳನ್ನು ಕಂಡವರು ಕೆಲ ಸ್ಥಳೀಯ ಛಾಯಾ ಚಿತ್ರಕಾರರು. ಪೊಲೀಸರು ಕಾರ್ಯಪ್ರವೃತ್ತರಾಗುತ್ತಾರೆ. ಅತ್ಯಾಚಾರಜರುಗಿದ ನಾಲ್ಕು ದಿನಗಳ ನಂತರ ಗೋಧ್ರಾ ಸಿವಿಲ್ ಆಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ಪರೀಕ್ಷೆ ನಡೆಯಿತು.

ಕಳೇಬರಗಳ ಮಹಜರು ನಡೆಯುವುದಿಲ್ಲ. ಕೊಳೆಯಲು ಬಿಡಲಾಗುತ್ತದೆ. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಹತ್ವದ ಸಾಕ್ಷ್ಯ ಪುರಾವೆಗಳಾಗಬೇಕಿದ್ದ ರಕ್ತ ಮತ್ತು ಇತರೆ ಜೈವಿಕ ಸ್ಯಾಂಪಲ್ ಗಳನ್ನು ಸಂಗ್ರಹಿಸಲಿಲ್ಲ. ಶವಗಳನ್ನು ಸಾಮೂಹಿಕವಾಗಿ ದಫನು ಮಾಡಲಾಗುತ್ತದೆ. ಎರಡು ವರ್ಷಗಳ ನಂತರ 2004ರಲ್ಲಿ ಸಿಬಿಐ ಈ ತನಿಖೆಯನ್ನುಕೈಗೆತ್ತಿಕೊಂಡಾಗ ಹೂತಿದ್ದ ಶವಗಳನ್ನು ಹೊರತೆಗೆದಾಗಯಾವ ಶವಕ್ಕೂ ರುಂಡವಿರುವುದಿಲ್ಲ. ಮರಣೋತ್ತರ ಪರೀಕ್ಷೆಯ ನಂತರಗುರುತು ಸಿಗದಿರಲೆಂದು ರುಂಡಗಳನ್ನು ಬೇರ್ಪಡಿಸಲಾಗಿತ್ತು. ಶವಗಳು ಬೇಗನೆ ಕೊಳೆತು ಹೋಗಲೆಂದು ಅವುಗಳ ಮೇಲೆ ಉಪ್ಪು ಸುರಿದು ಹುಗಿಯಲಾಗಿರುತ್ತದೆ.

ಹನ್ನೊಂದು ಮಂದಿ ಅಪರಾಧಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಮುಂಬಯಿ ಹೈಕೋರ್ಟ್ 2017ರ ಮೇ 4ರಂದು ಎತ್ತಿ ಹಿಡಿದಿತ್ತು. ಮಹತ್ವದ ಸಾಕ್ಷ್ಯ ಪುರಾವೆಗಳನ್ನು ತಿದ್ದಿದ ಮತ್ತು ನಾಶ ಮಾಡಿದ ಏಳು ಮಂದಿ ಪೊಲೀಸರು ಹಾಗೂ ವೈದ್ಯರಖುಲಾಸೆಯ ಆದೇಶವನ್ನು ತಳ್ಳಿ ಹಾಕಿತ್ತು.

ಮನುಷ್ಯಳಾಗಿ, ನಾಗರಿಕಳಾಗಿ, ಮಹಿಳೆಯಾಗಿ, ತಾಯಿಯಾಗಿ ತನ್ನ ಹಕ್ಕುಗಳನ್ನು ಅತ್ಯಂತ ಪಾಶವೀತನದಿಂದ ಉಲ್ಲಂಘಿಸಲಾಗಿದೆ ಎಂದು ಬಿಲ್ಕಿಸ್ ಬಾನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡಿದ್ದಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...