Homeಕರ್ನಾಟಕಭಟ್ಕಳದ ಎಮ್ಮೆಲ್ಲೆ ಇಪ್ಪತ್ತೈದೇ ದಿನಕ್ಕೆ ಖಡಕ್ ಎಎಸ್‍ಪಿಯನ್ನು ಎತ್ತಂಗಡಿ ಮಾಡಿಸಿದೇಕೆ? ಶುದ್ದೋಧನ

ಭಟ್ಕಳದ ಎಮ್ಮೆಲ್ಲೆ ಇಪ್ಪತ್ತೈದೇ ದಿನಕ್ಕೆ ಖಡಕ್ ಎಎಸ್‍ಪಿಯನ್ನು ಎತ್ತಂಗಡಿ ಮಾಡಿಸಿದೇಕೆ? ಶುದ್ದೋಧನ

- Advertisement -
- Advertisement -

ಭಟ್ಕಳದ ಎಎಸ್‍ಪಿಯಾಗಿ ಚಾರ್ಜ್‍ತೆಗೆದು ಕೊಂಡ ಕೇವಲ ಇಪ್ಪತ್ತೈದು ದಿನಗಳಲ್ಲೇ ಐಪಿಎಸ್‍ ಅಧಿಕಾರಿ ನಿಖಿಲ್ ಬುಳ್ಳಾ ಅವರ ಎತ್ತಂಗಡಿ ಆಗಿರೋದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಸಮಾಜ ಕಂಟಕರಿಗೆ, ದೋನಂಬರಿನ ದಂಧೆದಾರರ ನಿದ್ದೆಗೆಡಿಸಿದ್ದ ನಿಖಿಲ್‍ರನ್ನು ಸ್ಥಳೀಯ ಬಿಜೆಪಿ ಶಾಸಕನೂ ಸ್ವಯಂಘೋಷಿತ ದೇಶಭಕ್ತ ಹೆಂಡೋದ್ಯಮಿಯೂ ಆಗಿರುವ ಸುನಿಲ್ ನಾಯ್ಕನೇ ಹಠಕ್ಕೆ ಬಿದ್ದು ಜಡಿಸಿದ್ದಾನೆಂಬುದೀಗ ಜಗಜ್ಜಾಹೀರಾಗಿ ಹೋಗಿದೆ! ಖುದ್ದು ಸಿಎಂ ಸಾಹೇಬರ ಅಪ್ಪಣೆಯಂತೆಯೇ ಈ ಎತ್ತಂಗಡಿ ನಡೆದಿರೋದು ಈಗ ರಹಸ್ಯವಾಗುಳಿದಿಲ್ಲ.

 

 

ಅಷ್ಟಕ್ಕೂ ನಿಖಿಲ್, ಶಾಸಕನ ಪಿತ್ತ ನೆತ್ತಿಗೇರಿಸುವಂಥ “ಉದ್ಧಟತನ” ಮಾಡಿದ್ದಾದರೂ ಏನು? ಭಟ್ಕಳದಲ್ಲಿ ಹಾವಳಿ ಎಬ್ಬಿಸಿರುವ ಅಕ್ರಮ ಹೆಂಡ ಮತ್ತು ಜೂಜು ಮಾಫಿಯಾದ ಹೆಡೆಮುರಿಕಟ್ಟುವ ನಿರ್ಧಾರಕ್ಕೆ ಬಂದಿದ್ದ ನಿಖಿಲ್‍ ಅಕ್ರಮ ಮದ್ಯ ಮಾರಾಟದ ಕಿಂಗ್‍ಪಿನ್‍ಗಳ ಮೇಲೆ ಒಂದರಹಿಂದೊಂದರಂತೆ ನಾಲ್ಕು ಪ್ರಕರಣ ದಾಖಲಿಸಿದ್ದರು.ತನ್ನ ಕೃಪಾಶಿರ್ವಾದವಿದ್ದ ನಾಲ್ವರು ಕಳ್ಳ ಹೆಂಡದಂಧೆದಾರರನ್ನು ಜೈಲಿಗಟ್ಟಿದ್ದೇ ಶಾಸಕನ ಪಿತ್ತ ನೆತ್ತಿಗೇರಿಸಿತ್ತು. ಕಮ್ಯುನಲಿ ಸೆನ್ಸಿಟಿವ್ ಎಂಬ ಹಣೆಪಟ್ಟಿಯ ಭಟ್ಕಳದಲ್ಲಿ ಬಲು ನಾಜೂಕಿನಿಂದಲೇ ಕಾರ್ಯಾಚರಣೆಗಿಳಿದಿದ್ದ ನಿಖಿಲ್ “ಪ್ರಭಾವಿಗಳ” ಮೇಲೆ 21 ಜೂಜು ಪ್ರಕರಣಜಡಿದಿದ್ದಲ್ಲದೆ ಸಿಗರೇಟ್ ಮತ್ತು ತಂಬಾಕುಉತ್ಪನ್ನಕಾಯ್ದೆಯಡಿ 93 ಕೇಸು ಹಾಕಿದ್ದರು.

ಈ ಕಾರಣಕ್ಕೇ ನಿಖಿಲ್‍ ಜನರ ನಡುವೆ ಭರ್ಜರಿ ಪ್ರಶಂಸೆಗೆ ಪಾತ್ರರಾಗಿದ್ದರು. ಶಾಸಕರ ಪರಮಾಪ್ತರು, ನೆಂಟರು-ಇಷ್ಟರೇ ಗ್ರಾಮೀಣ ಭಾಗದಲ್ಲಿ ಕಳ್ಳ ಹೆಂಡ ಯಥೇಚ್ಛವಾಗಿ ಸರಬರಾಜು ಮಾಡುತ್ತಿದ್ದುದನ್ನು ನಿಖಿಲ್‍ ಕಂಡುಹಿಡಿದಿದ್ದರು. ಇವರ್ಯಾರಿಗೂ ಆತ ಸೊಪ್ಪು ಹಾಕಲಿಲ್ಲ. ಅಕ್ರಮ ಹೆಂಡ ಹಂಚಿಕೆ ಬಗ್ಗೆ ಸಾರ್ವಜನಿಕರಿಂದ ದೂರೇನಾದರೂ ಬಂದರೆ ಆ ವ್ಯಾಪ್ತಿಯ ಅಧಿಕಾರಿಗಳೇ ಹೊಣೆಯೆಂಬ ಎಚ್ಚರಿಕೆ ತನ್ನ ಅಧೀನ ಸಿಬ್ಬಂದಿಗೆ ಕೊಟ್ಟಿದ್ದರು.ಹೀಗಾಗಿ ಶಾಸಕ ಸುನಿಲ್ ನಾಯ್ಕ ಸೂತ್ರಧಾರತ್ವದ ಮದ್ಯ ಮಾಫಿಯಾ ವಿಲ ವಿಲ ಒದ್ದಾಡುವಂತಾಗಿತ್ತು.

ಶಿರಾಲಿಯ ಬಾಳೆಲೆಚಂದ್ರು ಯಾನೆಚಂದ್ರು ನಾಯ್ಕ ಶಾಸಕ ಸುನಿಲ್ ನಾಯ್ಕನ ಕಷ್ಟ-ಸುಖದ ನಿಷ್ಠ ಸನ್ಮಿತ್ರ! ಹೊಟೇಲ್‍ ಉದ್ಯಮಿಯಾಗಿದ್ದಚಂದ್ರು, ದೋಸ್ತ್‍ ಎಮ್ಮೆಲ್ಲೆ ಆಗಿದ್ದೇತಡ ಸರ್ಕಾರಿಕಾಮಗಾರಿ ನಡೆಸುವ ಲಕ್ಷಾಧೀಶ ಗುತ್ತಿಗೆದಾರನಾಗಿ ಅವತರಿಸಿದ್ದಾನೆ. ಇಂಥಚಂದ್ರುನ ಭಾಮೈದ ಶಿರಾಲಿಯಲ್ಲಿ ನಡೆಸುತ್ತಿದ್ದ ಮೀನು ಊಟದ ಹೊಟೇಲಿನಲ್ಲಿ ಪರವಾನಗಿಇಲ್ಲದ ಹೆಂಡದ ವ್ಯವಹಾರ ಲಕ್ಷದ ಲೆಕ್ಕದಲ್ಲೇ ದಿನವೂ ನಡೆಯುತ್ತಿತ್ತು. ಈ ಹೊಟೇಲಿನ ಮೇಲೆ ರೇಡು ಹಾಕಿದ ಎಎಸ್‍ಪಿ ಪಡೆ ಚಂದ್ರುನ ಭಾಮೈದನ ಎತ್ಹಾಕಿಕೊಂಡು ಬಂದಿತ್ತು! ಆಗ ಶಾಸಕ ಸಾಹೇಬ ಫೋನಾಯಿಸಿದರೂ ಕೇರ್ ಮಾಡಿರಲಿಲ್ಲ.

ಕಂಡಕಂಡಲ್ಲಿ ಎಎಸ್‍ಪಿಗೆ ಬುದ್ಧಿ ಕಲಿಸುವ ಆವಾಜ್ ಹಾಕತೊಡಗಿದ್ದ ಎಮ್ಮೆಲ್ಲೆ ಸುನೀಲ್ ನಾಯ್ಕ ತನ್ನ ಖಾಸಾ ಭಾಮೈದನ ಕಳ್ಳಹೆಂಡದ ವ್ಯವಹಾರಕ್ಕೆ ತೊಂದರೆ ಪೊಲೀಸರಿಂದಾದಾಗ ನಿಗಿ ನಿಗಿ ಬೆಂಕಿಯಾಗಿ ಹೋದ!! ಭಟ್ಕಳದ ಹಳ್ಳಿಗಳ ಗೂಡಂಗಡಿಯಲ್ಲಿ ಹೆಂಡದ ವ್ಯಾಪಾರಜೋರಾಗಿದೆ. ಈ ಗೂಡಂಗಡಿಗಳಿಗೆ ಹೆಂಡ ಪೂರೈಕೆಯಾಗುವುದು ಶಾಸಕನ ಭಾಮೈದನ “ಕಂಪನಿ”ಯಿಂದ. ಹಾಡುವಳ್ಳಿ ಎಂಬಲ್ಲಿ ಗೂಡಂಗಡಿಯಲ್ಲಿ ಅಕ್ರಮವಾಗಿ ಸಾರಾಯಿ ಮಾಡುತ್ತಿದ್ದವನನ್ನು ಎಎಸ್‍ಪಿ ಬಂಧಿಸಿದ್ದರು. ಹೆಂಡ ಮಾರಾಟಗಾರ ಕಾಂಗ್ರೆಸ್‍ನ ಹಿಂದಿನ ಶಾಸಕ ಮಂಕಾಳು ವೈದ್ಯನ ಶಿಷ್ಯನಾದರೆ ಹೆಂಡ ಪೂರೈಸಿದವರು ಬಿಜೆಪಿ ಶಾಸಕನ ನೆಂಟನಗ್ಯಾಂಗಿನವರು. ಎರಡೂ ಕಡೆಯಿಂದ ಎಎಸ್‍ಪಿಗೆ ಫೋನ್ ಹೋಗಿದೆ. “ಇಲ್ಲ…. ಇಲ್ಲಾ…. ಕಾನೂನು ಬಿಟ್ಟು ನಾನು ನಡೆಯುವುದಿಲ್ಲ…..” ಎಂದಿದ್ದಾರೆ ಎಎಸ್‍ಪಿ ನಿಖಿಲ್.

ಈ ಎಎಸ್‍ಪಿಯನ್ನು ಹೀಗೆ ಬಿಟ್ಟರೆ ತಮ್ಮ ಕಳ್ಳ ವ್ಯವಹಾರಕ್ಕೆ ಸಂಚಕಾರ ಬರುತ್ತದೆಂದು ಕಂಗಾಲಾದ ಎಮ್ಮೆಲ್ಲೆ ಪಟಾಲಮ್‍ ಆತನ ಎತ್ತಂಗಡಿಗೆ ಪ್ರಯತ್ನ ಪ್ರಾರಂಭಿಸಿಯೇ ಬಿಟ್ಟರು. “…. ನೀನು ನಿನ್ನಡ್ಯೂಟಿ ಮಾಡಿದೆಯಲ್ಲಾ…. ಈಗ ನಾನು ನನ್ನಡ್ಯೂಟಿ ಮಾಡ್ತೇನೆ ನೋಡು….. ನೀನು ಒಂದು ಮಾತೂ ಕೇಳೋನಲ್ಲ….” ಎಂದು ಎಗರಾಡಿದ್ದ ಸುನಿಲ್ ರಾತ್ರೋರಾತ್ರಿ ಬೆಂಗಳೂರಿಗೆ ಹೋಗಿ, ಸಿಎಂ ಯಡ್ಡಿಗೆ ಗಂಟು ಬಿದ್ದು ಎಎಸ್‍ಪಿ ವರ್ಗ ಮಾಡುವಂತೆ ಅಲವತ್ತುಕೊಂಡಿದ್ದಾನೆ. ಒಂದು ವಾರ ಬೆಂಗಳೂರಲ್ಲೇ ಠಿಕಾಣಿ ಹೂಡಿ ಅಂತಿಮವಾಗಿ ಸಾಕ್ಷಾತ್ ಸಿಎಂ ಸಾಹೇಬರಿಂದಲೇ ಎಎಸ್‍ಪಿ ವರ್ಗಾವಣೆ ಆದೇಶ ಮಾಡಿಸಿದ್ದಾನೆ. ಆ ಜಾಗಕ್ಕೆ ತನ್ನಜಾತಿ ಬಂಧುವಾದ ನಾನ್‍ ಐಪಿಎಸ್‍ ಅಧಿಕಾರಿಯನ್ನು ಹಾಕಿಸಿಕೊಂಡಿದ್ದಾನೆ.
ಶಿರಾಲಿಯಲ್ಲಿ ತನ್ನ ಹೆಂಡದ ಅಂಗಡಿ ಸುತ್ತಲೆಲ್ಲೂ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ ತಲೆಯೆತ್ತದಂತೆ ಮಾಡಿರುವ ಸುನಿಲ್ ನಾಯ್ಕ ಅಕ್ರಮ ಸಾರಾಯಿದಂಧೆ ನಿರಾತಂಕ ಮಾಡಿಕೊಂಡಿದ್ದಾನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ತನ್ನ ಪಕ್ಷದ ಶಾಸಕ ಕಾಯಕಕ್ಕೆ ಅಡ್ಡಿಪಡಿಸಿದ ಅಧಿಕಾರಿಯನ್ನು ಎತ್ತಂಗಡಿ ಮಾಡಿರುವ ಯಡಿಯೂರಪ್ಪನವರ ಸಾಧನೆ ಪ್ರಶಂಸನೀಯ ಮತ್ತು ಅನುಕರಣೆಗೆ ಯೋಗ್ಯವಾದದ್ದು!? ಭೇಷ್ ಯಡಿಯೂರಪ್ಪನವರ ಮರಿ ಸರ್ವಾಧಿಕಾರಕ್ಕೆ ಭೋಪರಾಕ್. ಒಂದು ಕಡೆ ಮಾಧ್ಯಮಕ್ಕೆ ನಿರ್ಬಂಧ. ಮತ್ತೊಂದು ಕಡೆ ಕಾನೂನಿನ ಬಗ್ಗೆ ನಿಷ್ಠೆ ಉಳ್ಳ ಅಧಿಕಾರಿಯ ಎತ್ತಂಗಡಿ. ಇದಕ್ಕಿಂತಲೂ ಒಳ್ಳೆಯ “ರಾಮ ರಾಜ್ಯ” ಯಾರಿಂದಲೂ ಸಾಧ್ಯವಿಲ್ಲ.

  2. ಇಂತಹ ಸುಳ್ಳು ಸುದ್ದಿ ಬಿತ್ತರಿಸುವ ನಿಮ್ಮಂತ ನಾಯಿಗಳನ್ನು ನಡು ಬೀದಿಯಲ್ಲಿ ದುಓಡಗೆ ನಿಲ್ಲಿಸಬೇಕು. ಗೌರಿಯಂತ ಶನಿಯಿಂದ ಮುಕ್ತಿ ಸಿಕ್ಕಿದ್ದರು ಅವಳ ಹೆಸರಿನ ಶನಿ ಕರ್ನಾಟಕವನ್ನು ಕಾಡುತ್ತಲೇ ಇದೆ.

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...