Homeಮುಖಪುಟಬಿಲ್ಕಿಸ್ ಪ್ರಕರಣ - ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

ಬಿಲ್ಕಿಸ್ ಪ್ರಕರಣ – ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

- Advertisement -
- Advertisement -

ಗರ್ಭಿಣಿಯಾದ ಆಕೆಯ ಮೇಲೆ ಬಿಟ್ಟೂಬಿಡದೆ 22 ಬಾರಿ ಅತ್ಯಾಚಾರ ನಡೆಯುತ್ತದೆ. ಮೂರು ವರ್ಷದ ಮಗಳ ತಲೆಯನ್ನು ನೆಲಕ್ಕೆ ಅಪ್ಪಳಿಸಿ ಕೊಲ್ಲಲಾಗುತ್ತದೆ. ಆಕೆಯ ತಾಯಿಯೂ ಸೇರಿದಂತೆ ಕುಟುಂಬದ ಇತರೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಚ್ಚಿ ಹಾಕಲಾಗುತ್ತದೆ.ಕಣ್ಣೆದುರಿಗೇ ಕುಟುಂಬದ 14 ಹೆಣಗಳು ಉರುಳುತ್ತವೆ. ಈ ಅಪರಾಧವನ್ನು ಹೀನಾತಿಹೀನ ಎಂದು ಒಪ್ಪಿಕೊಳ್ಳಲು ತಯಾರಿಲ್ಲ ಗುಜರಾತ್ ಸರ್ಕಾರ.

ಕೋಮುವಾದಿ ಹಿಂಸೆಯ ದಳ್ಳುರಿಯ ನಡುವೆ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಬಡ ಹೆಣ್ಣುಮಗಳೊಬ್ಬಳಿಗೆ 50 ಲಕ್ಷರೂಪಾಯಿ ಪರಿಹಾರ ನೀಡುವಂತೆ ಸುಪ್ರೀಮ್‍ ಕೋರ್ಟ್‍ತೀರ್ಪು ನೀಡಿ ನಾಲ್ಕು ತಿಂಗಳುಗಳೇ ಉರುಳಿವೆ. ಈ ಮುನ್ನತನಗೆ ನ್ಯಾಯ ಬೇಡಿ 17 ವರ್ಷಗಳ ಕಾಲ ಕೋರ್ಟುಗಳ ಕಂಬ ಸುತ್ತಿದ್ದಳು ಆಕೆ.

ಬಿಲ್ಕಿಸ್‍ ಗುಜರಾತ್ ಸರ್ಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಲಯ ನಿಂದನೆ ಮೊಕದ್ದಮೆ ಕಳೆದ ವಾರ ಸುಪ್ರೀಮ್‍ಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಪರಿಹಾರದ ಆದೇಶದ ವಿರುದ್ಧ ಮರುವಿಮರ್ಶೆಅರ್ಜಿ ಸಲ್ಲಿಸುವ ಇರಾದೆ ತನಗಿರುವ ಕಾರಣ ಪರಿಹಾರವನ್ನು ನೀಡಿಲ್ಲ ಎಂದು ಗುಜರಾತ್ ಸರ್ಕಾರ ಹೇಳಿಕೊಂಡಿತು. ಒಂದು ಪ್ರಕರಣದಲ್ಲಿ 50 ಲಕ್ಷ ನೀಡಿದರೆ ಇತರೆ ಪ್ರಕರಣಗಳ ಪಾಲಿಗೆ ಅದು ಪೂರ್ವನಿದರ್ಶನ ಆಗುತ್ತದೆಂಬುದು ಗುಜರಾತ್ ಸರ್ಕಾರದ ಬಾಧೆ.

2002ರ ಫೆಬ್ರವರಿ 27ರ ಮುಂಜಾನೆ ಗುಜರಾತಿನ ಗೋಧ್ರಾ ಬಳಿ ಸಾಬರಮತಿ ಎಕ್ಸ್ ಪ್ರೆಸ್‍ನ ಕರಸೇವಕರಿದ್ದ ಬೋಗಿಗೆ ಬೆಂಕಿ ಬಿದ್ದು 59 ಮಂದಿ ಆಹುತಿಯಾಗಿದ್ದರು. ಆಗ ಹೊತ್ತಿಕೊಂಡ ಕೋಮು ಗಲಭೆಗಳ ದಳ್ಳುರಿ ಗುಜರಾತಿನ ಉದ್ದಗಲಕ್ಕೆ ಅಲ್ಪಸಂಖ್ಯಾತರ ಮಾರಣ ಹೋಮಕ್ಕೆ ಕಾರಣವಾಯಿತು.

ಅಹ್ಮದಾಬಾದ್ ನಿಂದ 200 ಕಿ.ಮೀ. ದೂರದ ದಾಹೋದ್ ನ ಒಂದು ಹಳ್ಳಿ ರಾಧಿಕಾಪುರ ಬಿಲ್ಕಿಸ್ ಬಾನುವಿನ ಹುಟ್ಟೂರು. ನೆರೆ ಹೊರೆಯವರು ಮುಸಲ್ಮಾನರಎಲ್ಲ 60 ಮನೆಗಳಿಗೆ ಬೆಂಕಿ ಇಟ್ಟಿದ್ದರು. ಬಿಲ್ಕಿಸ್ ಮತ್ತು ಆಕೆಯ ಕುಟುಂಬ ಬೆದರಿ ಹೊಲಗಳತ್ತ ಪರಾರಿಯಾಗಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಪರಾರಿಯಾಗುತ್ತಲೇ ತಲೆಮರೆಸಿಕೊಂಡಿದ್ದಾಗ ಆಕೆಯ ರಕ್ತಸಂಬಂಧಿ ಶಮೀಮ್ ಹೆಣ್ಣುಮಗುವನ್ನು ಪ್ರಸವಿಸಿದ್ದಳು.

ಸುತ್ತಮುತ್ತಲ ಅಡವಿಯ ಗಿಡಮರಗಳ ನೆರಳುಗಳಲ್ಲಿ ಅಡಗಿಕೊಳ್ಳುತ್ತಿದ್ದ ಅವರು ಹೇಗಾದರೂ ಮಾಡಿ ಮುಸ್ಲಿಂ ಬಾಹುಳ್ಯದ ವಸತಿಯನ್ನು ತಲುಪಬೇಕಿತ್ತು. ಹೆದ್ದಾರಿಗಳನ್ನು ಹಿಡಿಯುವಂತಿರಲಿಲ್ಲ. ಒಳನಾಡಿನ ಕಚ್ಚಾದಾರಿಗಳಲ್ಲೇ ಸಾಗಬೇಕಿತ್ತು. ಭೀತಿಯ ಪಯಣದಲ್ಲಿಕರುಣೆ ಸಹಾನುಭೂತಿಯುಳ್ಳ ಜನ ಅವರನ್ನು ಕಾಪಾಡಿದ್ದುಂಟು.

ಪನ್ನಿವೇಲ್ ಎಂಬ ಹಳ್ಳಿ ಸೇರಿದ್ದರೆ ಈ ಕುಟುಂಬದ ಪ್ರಾಣಗಳು ಉಳಿಯುತ್ತಿದ್ದವು. ಆದರೆ ಹಾಗಾಗಲಿಲ್ಲ. ಈ ಕುಟುಂಬ ಪಯಣಿಸುತ್ತಿದ್ದ ಟ್ರಕ್‍ನ್ನು ಎರಡು ಟ್ರಕ್‍ಗಳು ಅಡ್ಡ ಹಾಕಿದ್ದವು. 20- 30 ಮಂದಿಯ ಕೈಗಳಲ್ಲಿ ಹಿರಿದಿದ್ದಕತ್ತಿ ಕುಡುಗೋಲುಗಳು. ಬಿಲ್ಕಿಸ್‍ ಅಪ್ಪನಿಗೆ ಚಿಕಿತ್ಸೆ ನೀಡಿದ್ದ, ಅದೇ ಬೀದಿಯ ಎದುರಿಗಿದ್ದ ವೈದ್ಯನ ಮಗ, ಬಳೆ ಅಂಗಡಿ ನಡೆಸುತ್ತಿದ್ದ ವ್ಯಕ್ತಿ, ಹೊಟೇಲು ಇಟ್ಟು ಕೊಂಡಿದ್ದಾತ, ಗ್ರಾಮಪಂಚಾಯಿತಿ ಸದಸ್ಯೆಯಗಂಡ… ಇವರೆಲ್ಲ ಬಿಲ್ಕಿಸ್ ಗೆ ಚಿರ ಪರಿಚಿತರೇ. ಬಾಲ್ಯದಿಂದತನ್ನನ್ನು ಬಲ್ಲವರೇಆದರೂತನ್ನನ್ನು ಎಷ್ಟು ಕ್ರೌರ್ಯದಿಂದ ಉಲ್ಲಂಘಿಸಿದರಲ್ಲ ಎಂಬುದು ಆಕೆಯನ್ನು ಬಹುಕಾಲ ಅಲ್ಲಾಡಿಸಿದ ಕಟು ವಾಸ್ತವ.

ಬಗಲಲ್ಲಿ ಮೂರು ವರ್ಷದ ಮಗಳು ಸಾಲೇಹ. ಅವಳನ್ನು ಕಸಿದುಕೊಂಡು ತಲೆಯನ್ನು ನೆಲಕ್ಕೆ ಅಪ್ಪಳಿಸಿ ಅರೆನಿಮಿಷದಲ್ಲೇಕೊಂದು ಹಾಕಿದನೊಬ್ಬ. ತನ್ನದೇ ಹಳ್ಳಿಯ ಮೂವರು ಪುರುಷರು ಆಕೆಯನ್ನು ಎಳೆದುಕೊಂಡು ಬಟ್ಟೆಗಳನ್ನು ಹರಿದೆಸೆದರು. ಗರ್ಭಿಣಿಯೆಂದು ಆಕೆ ಅಲವತ್ತು ಕೊಂಡಳು. ನೀವೆಲ್ಲ ನನ್ನ ಅಣ್ಣಂದಿರು, ಚಿಕ್ಕಪ್ಪಂದಿರಿದ್ದಂತೆ ಎಂದರೂ ಬಿಡದೆ ಅತ್ಯಾಚಾರ ನಡೆಸಿದರು.

ಹತ್ಯೆಅತ್ಯಾಚಾರದ ಅಮಾನುಷತೆಯ ವಿಕೃತ ವಿಜೃಂಭಣೆಗೆ 14 ಮಂದಿ ಬಲಿಯಾದರು. ಹಿಂದಿನ ದಿನವಷ್ಟೇ ಹೆಣ್ಣುಮಗುವನ್ನು ಹಡೆದಿದ್ದ ಶಮೀಮ್‍ಳನ್ನು ಅವಳ ಹಸುಳೆಯ ಸಹಿತ ಹತ್ಯೆ ಮಾಡಲಾಗಿತ್ತು.ಮೂರ್ಛೆ ಹೋಗಿದ್ದ ಬಿಲ್ಕಿಸ್ ಸತ್ತೇ ಹೋಗಿದ್ದಾಳೆಂದು ಭಾವಿಸಿದ ದಾಳಿಕೋರರು ಮಾರಣಹೋಮದತಾಣವನ್ನುತೊರೆದಿದ್ದರು.

ಎಚ್ಚ ಬಂದಾಗ ಪೂರ್ಣ ಬೆತ್ತಲಾಗಿದ್ದದ್ದು ತಿಳಿಯಿತು. ಸುತ್ತಮುತ್ತಕೊಚ್ಚಿ ಹಾಕಲಾಗಿದ್ದತನ್ನದೇಕುಟುಂಬದ ರಕ್ತಸಿಕ್ತ ಕಳೇಬರಗಳು. ಪೆಟ್ಟಿಕೋಟಿನಿಂದ ಮೈ ಮುಚ್ಚಿಕೊಂಡು ಪಕ್ಕದಲ್ಲಿದ್ದ ಗುಡ್ಡ ಹತ್ತಿ ಅಲ್ಲಿಯೇದುಃಖ ಭೀತಿಯಲ್ಲಿ ಮುಳುಗಿ ಇರುಳು ಕಳೆದಳು. ಮರುದಿನ ನೀರಿಗಾಗಿ ಅರಸುತ್ತಿದ್ದವಳನ್ನು ಕೊಳವೆ ಬಾವಿಯೊಂದರ ಬಳಿ ಕಂಡ ಆದಿವಾಸಿ ಹೆಣ್ಣುಮಗಳು ಬಟ್ಟೆಗಳನ್ನಿತ್ತಳು. ಪೊಲೀಸ್‍ ಅಧಿಕಾರಿಯೊಬ್ಬನನ್ನು ಸಂಪರ್ಕಿಸಿದಳು. ಆತ ಆಕೆಯನ್ನು ತನ್ನ ವಾಹನದಲ್ಲಿ ಲಿಮ್ಖೇಡ ಪೊಲೀಸ್‍ಠಾಣೆಗೆ ಕರೆದೊಯ್ದ.

ಎಂಟು ಸಾಮೂಹಿಕ ಅತ್ಯಾಚಾರಗಳು ಮತ್ತು 14 ಹತ್ಯೆಗಳನ್ನು ನೋಡಿದ ನಂತರವೂ ಪ್ರಾಣಸಹಿತ ಉಳಿದಿದ್ದ ಏಕೈಕ ಸಾಕ್ಷಿ ಬಿಲ್ಕಿಸ್ ಬಾನು.ಆದರೆ ಪೊಲೀಸರುದೂರು ದಾಖಲಿಸಿಕೊಳ್ಳುವುದಿಲ್ಲ. ಒತ್ತಾಯಿಸಿದರೆ ವಿಷದ ಸೂಜಿಮದ್ದು ನೀಡಿಕೊಲ್ಲುವ ಬೆದರಿಕೆ ಹಾಕಲಾಗುತ್ತದೆ. ಪರಿಹಾರ ಶಿಬಿರವೊಂದಕ್ಕೆ ಆಕೆಯನ್ನು ಸಾಗ ಹಾಕಲಾಗುತ್ತದೆ. ಅಲ್ಲಿತನ್ನ ಪತಿಯಾಕೂಬ್‍ರಸೂಲನನ್ನು ಸೇರಿಕೊಳ್ಳುತ್ತಾಳೆ.

ಬಿಲ್ಕಿಸ್‍ ಕುಟುಂಬದ ಹತ್ಯೆ ನಡೆದಎರಡು ದಿನಗಳ ನಂತರಎಂಟು ಶವಗಳನ್ನು ಕಂಡವರು ಕೆಲ ಸ್ಥಳೀಯ ಛಾಯಾ ಚಿತ್ರಕಾರರು. ಪೊಲೀಸರು ಕಾರ್ಯಪ್ರವೃತ್ತರಾಗುತ್ತಾರೆ. ಅತ್ಯಾಚಾರಜರುಗಿದ ನಾಲ್ಕು ದಿನಗಳ ನಂತರ ಗೋಧ್ರಾ ಸಿವಿಲ್ ಆಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ಪರೀಕ್ಷೆ ನಡೆಯಿತು.

ಕಳೇಬರಗಳ ಮಹಜರು ನಡೆಯುವುದಿಲ್ಲ. ಕೊಳೆಯಲು ಬಿಡಲಾಗುತ್ತದೆ. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಹತ್ವದ ಸಾಕ್ಷ್ಯ ಪುರಾವೆಗಳಾಗಬೇಕಿದ್ದ ರಕ್ತ ಮತ್ತು ಇತರೆ ಜೈವಿಕ ಸ್ಯಾಂಪಲ್ ಗಳನ್ನು ಸಂಗ್ರಹಿಸಲಿಲ್ಲ. ಶವಗಳನ್ನು ಸಾಮೂಹಿಕವಾಗಿ ದಫನು ಮಾಡಲಾಗುತ್ತದೆ. ಎರಡು ವರ್ಷಗಳ ನಂತರ 2004ರಲ್ಲಿ ಸಿಬಿಐ ಈ ತನಿಖೆಯನ್ನುಕೈಗೆತ್ತಿಕೊಂಡಾಗ ಹೂತಿದ್ದ ಶವಗಳನ್ನು ಹೊರತೆಗೆದಾಗಯಾವ ಶವಕ್ಕೂ ರುಂಡವಿರುವುದಿಲ್ಲ. ಮರಣೋತ್ತರ ಪರೀಕ್ಷೆಯ ನಂತರಗುರುತು ಸಿಗದಿರಲೆಂದು ರುಂಡಗಳನ್ನು ಬೇರ್ಪಡಿಸಲಾಗಿತ್ತು. ಶವಗಳು ಬೇಗನೆ ಕೊಳೆತು ಹೋಗಲೆಂದು ಅವುಗಳ ಮೇಲೆ ಉಪ್ಪು ಸುರಿದು ಹುಗಿಯಲಾಗಿರುತ್ತದೆ.

ಹನ್ನೊಂದು ಮಂದಿ ಅಪರಾಧಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಮುಂಬಯಿ ಹೈಕೋರ್ಟ್ 2017ರ ಮೇ 4ರಂದು ಎತ್ತಿ ಹಿಡಿದಿತ್ತು. ಮಹತ್ವದ ಸಾಕ್ಷ್ಯ ಪುರಾವೆಗಳನ್ನು ತಿದ್ದಿದ ಮತ್ತು ನಾಶ ಮಾಡಿದ ಏಳು ಮಂದಿ ಪೊಲೀಸರು ಹಾಗೂ ವೈದ್ಯರಖುಲಾಸೆಯ ಆದೇಶವನ್ನು ತಳ್ಳಿ ಹಾಕಿತ್ತು.

ಮನುಷ್ಯಳಾಗಿ, ನಾಗರಿಕಳಾಗಿ, ಮಹಿಳೆಯಾಗಿ, ತಾಯಿಯಾಗಿ ತನ್ನ ಹಕ್ಕುಗಳನ್ನು ಅತ್ಯಂತ ಪಾಶವೀತನದಿಂದ ಉಲ್ಲಂಘಿಸಲಾಗಿದೆ ಎಂದು ಬಿಲ್ಕಿಸ್ ಬಾನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡಿದ್ದಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...