ಇಂದು ದೇಶದ ಮೊದಲ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನ. ‘ಉಕ್ಕಿನ ಮನುಷ್ಯ’ ಎಂದು ಕರೆಯಲ್ಪಡುವ ಅವರ ಜನ್ಮದಿನಕ್ಕೆ ಪ್ರಧಾನ ಮೋದಿ, ಗೃಹ ಸಚಿವ ಅಮಿತ್ ಶಾ, ರಾಹುಲ್ ಗಾಂಧಿ ಸೇರಿದಂತೆ ಹಲವಾರು ಜನರು ಶುಭಕೋರಿದ್ದಾರೆ.
ಅವರ ಜನ್ಮವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸಲಾಗುತ್ತದೆ. ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲೊಬ್ಬರಾಗಿದ್ದ ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಸರ್ದಾರ್ ಪಟೇಲ್ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ.
ಇದನ್ನೂ ಓದಿ: ನರೇಂದ್ರ ಮೋದಿ ಸ್ಟೇಡಿಯಂ ಟ್ರೋಲ್: ಸರ್ದಾರ್ ಪಟೇಲ್ಗೆ ಅವಮಾನ ಎಂದ ನೆಟ್ಟಿಗರು!
RSS ಬಗ್ಗೆ ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್!
ಮಹಾತ್ಮ ಗಾಂಧಿ ಕೊಲೆಯ ನಂತರ ಸೆಪ್ಟೆಂಬರ್ 11, 1948 ರಂದು ಸರ್ದಾರ್ ಪಟೇಲ್ ಅವರು ಆರೆಸ್ಸೆಸ್ ನಾಯಕ ಗೋಳ್ವಲ್ಕರ್ಗೆ ಬರೆದ ಪತ್ರದಲ್ಲಿ ಹೀಗಿದ್ದವು…
“…ವ್ಯಕ್ತಿತ್ವ, ಸಭ್ಯತೆ ಅಥವಾ ಸಜ್ಜನಿಕೆಯ ಎಲ್ಲ ಪರಿಗಣನೆಗಳನ್ನು ಕಡೆಗಣಿಸಿ ಜನರಲ್ಲಿ ವಿಷಕಾರಿ ಅಶಾಂತಿ ಸೃಷ್ಟಿಸಿತು. ಭಾಷಣಗಳೆಲ್ಲ ಸಂಪೂರ್ಣ ಕೋಮು ವಿಷಮಯವಾಗಿತ್ತು. ಈ ವಿಷವನ್ನು ಹರಡಿ ಹಿಂದೂಗಳನ್ನು ಪ್ರಚೋದಿಸಿ ಅವರನ್ನು ರಕ್ಷಣೆಗಾಗಿ ಸಂಘಟಿಸಬೇಕಾಗಿರಲಿಲ್ಲ.
ವಿಷದ ಪರಿಣಾಮವಾಗಿ, ಗಾಂಧೀಜಿಯ ಅಮೂಲ್ಯವಾದ ಜೀವದ ತ್ಯಾಗವನ್ನು ದೇಶವು ಅನುಭವಿಸಬೇಕಾಯಿತು. ಆರೆಸ್ಸೆಸ್ ಮೇಲೆ ಸರ್ಕಾರ ಅಥವಾ ಜನರ ಸಹಾನುಭೂತಿಯ ಒಂದು ತುಣುಕೂ ಉಳಿದಿಲ್ಲ. ನಿಜ ಹೇಳಬೇಕೆಂದರೆ ವಿರೋಧವೇ ಉಳಿಯಿತು.
ಗಾಂಧೀಜಿಯ ಮರಣದ ನಂತರ ಆರೆಸ್ಸೆಸ್ನವರು ಸಂತೋಷ ವ್ಯಕ್ತಪಡಿಸಿ ಸಿಹಿ ಹಂಚಿದಾಗ ಈ ವಿರೋಧ ತೀವ್ರವಾಯಿತು. ಈ ಪರಿಸ್ಥಿತಿಯಲ್ಲಿ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಯಿತು.
ಅಂದಿನಿಂದ, ಆರು ತಿಂಗಳುಗಳು ಕಳೆದಿವೆ. ಆರೆಸ್ಸೆಸ್ ಈಗಲಾದರೂ ಸರಿ ದಾರಿಗೆ ಬರುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ನನಗೆ ಬಂದಿರುವ ವರದಿಗಳ ಪ್ರಕಾರ ಆರೆಸ್ಸೆಸ್ ಅದೇ ಹಳೆಯ ಚಟುವಟಿಕೆಗಳಿಗೆ ಜೀವ ತುಂಬುತ್ತಿದೆ ಎಂದು ಸ್ಪಷ್ಟವಾಗಿದೆ”
ಇದನ್ನೂ ಓದಿ: “ಬದುಕಿರುವವರ ಬಗ್ಗೆಯೇ ಸುಳ್ಳು ಹೇಳುವವರು, ಗಾಂಧೀಜಿ ಬಗ್ಗೆ ಹೇಳುವುದಿಲ್ಲವೇ?”
ಸರ್ದಾರ್ ಪಟೇಲ್ ಹಿಂದೂ ರಾಷ್ಟ್ರದ ಪ್ರತಿಪಾದನೆಯನ್ನು ತಿರಸ್ಕರಿಸಿದ್ದರು. ದೇಶದಲ್ಲಿ ಜಾತ್ಯಾತೀತ ಉಳಿಸುವ ವಿಷಯಗಳ ಬಗ್ಗೆ ಅವರು ಪ್ರಧಾನಿ ನೆಹರೂ ಅವರ ಚಿಂತನೆಗಳನ್ನು ಒಪ್ಪಿಕೊಂಡಿದ್ದರು.
ಪತ್ರವೊಂದರಲ್ಲಿ ಸರ್ದಾರ್ ಪಟೇಲ್ ಅವರು, “ಭಾರತವನ್ನು ಹಿಂದೂ ರಾಷ್ಟ್ರವೆಂದು ಹಾಗೂ ಹಿಂದೂ ಧರ್ಮವನ್ನು ದೇಶದ ಧರ್ಮವೆಂದು ಪರಿಗಣಿಸಲು ಸಾಧ್ಯವಿಲ್ಲ. ದೇಶದಲ್ಲಿ ಇತರ ಅಲ್ಪಸಂಖ್ಯಾತರಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಅವರ ರಕ್ಷಣೆಯು ನಮ್ಮ ಪ್ರಾಥಮಿಕ ಜವಾಬ್ದಾರಿಯಾಗಿದೆ. ದೇಶವು ಜಾತಿ ಅಥವಾ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಸಲ್ಲಬೇಕು”
A tribute to the great Sardar Patel. https://t.co/P2eUmvo61n
— Narendra Modi (@narendramodi) October 31, 2021
ಇದನ್ನೂ ಓದಿ: ನಾವಿಬ್ಬರು ನಮಗಿಬ್ಬರು ಎನ್ನುವ ಸತ್ಯ ಬಹಿರಂಗಗೊಳ್ಳುತ್ತಿದೆ: ಮೋದಿ ಕ್ರೀಡಾಂಗಣದ ಬಗ್ಗೆ ರಾಹುಲ್ ವ್ಯಂಗ್ಯ