Homeಮುಖಪುಟ‘ಕಾಂಗ್ರೆಸ್ ಆಟ’ ಆಡುತ್ತಾ ಸೋಲುತ್ತಿರುವ ಬಿಜೆಪಿ...

‘ಕಾಂಗ್ರೆಸ್ ಆಟ’ ಆಡುತ್ತಾ ಸೋಲುತ್ತಿರುವ ಬಿಜೆಪಿ…

- Advertisement -
- Advertisement -

ಕಳೆದ ವಾರ ಮೋದಿಯವರು ಆಡಿದರೆನ್ನಲಾದ ಒಂದು ಮಾತು ಗಮನ ಸೆಳೆದಿತ್ತು. ಮಹಾರಾಷ್ಟ್ರದಲ್ಲಿ ಕಳೆದ ಬಾರಿಗಿಂತ ಕಡಿಮೆ ಸೀಟುಗಳನ್ನು ಪಡೆದರೂ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯು ಸರ್ಕಾರ ರಚಿಸಿರಲಿಲ್ಲ. ಏಕೆಂದರೆ ಶಿವಸೇನಾದ ಜೊತೆಗೆ ಡೀಲ್ ಕುದುರಲಿಲ್ಲ. ರಾಜ್ಯಪಾಲರ ಬಳಿ ಹೋದ ಬಿಜೆಪಿಯು ಅಧಿಕೃತವಾಗಿ ತಾನು ಸರ್ಕಾರ ರಚಿಸುವುದಿಲ್ಲ ಎಂದು ಹೇಳಿತ್ತು. ಸಂಸತ್ತಿನ ಅಧಿವೇಶನ ಆ ನಂತರ ಆರಂಭವಾಗುವುದರಲ್ಲಿತ್ತು. ಅದಕ್ಕೆ ಮುಂಚೆ ನಡೆದ ಬಿಜೆಪಿ ಸಂಸತ್‌ ಸದಸ್ಯರ ಸಭೆಯಲ್ಲಿ ಪ್ರಧಾನಿ ಮೋದಿಯವರು ಆ ಮಾತನ್ನು ಹೇಳಿದರು. ‘ಮಹಾರಾಷ್ಟ್ರದಲ್ಲಿ ನೋಡಿ, ಸರ್ಕಾರ ರಚಿಸದಿದ್ದರೂ ಪರವಾಗಿಲ್ಲ. ನಾವಾಗಲೇ ಗೆದ್ದಿದ್ದೇವೆ. ಏಕೆಂದರೆ ನಮ್ಮವರು ಯಾರೂ ಬೇಕಾದ್ದನ್ನು ಮಾತಾಡಲಿಲ್ಲ’.

ಅಂದರೆ, ಕಾಂಗ್ರೆಸ್ ಮತ್ತಿತರ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕಾಗಿ ಅನೈತಿಕ ಮೈತ್ರಿಯನ್ನು ಮಾಡಿಕೊಳ್ಳಲು ಹವಣಿಸಿವೆಯೆಂದೂ, ಬಿಜೆಪಿಯು ಶಿವಸೇನೆಯು ‘ನೀತಿಬದ್ಧವಾಗಿ ತನ್ನೊಂದಿಗೆ ಬರದೇ ಇದ್ದರೆ’ ತಾನು ಅಧಿಕಾರದಿಂದ ದೂರವುಳಿಯುವುದಾಗಿಯೂ ತೋರ್ಪಡಿಸಿದ್ದರ ಕುರಿತಾಗಿ ಪ್ರಧಾನಿ ಮಾತಾಡಿದ್ದು ಸ್ಪಷ್ಟವಾಗಿತ್ತು. ವಾಸ್ತವದಲ್ಲಿ ಅಂತಹ ಯಾವ ನೀತಿಗಳೂ ಇಲ್ಲದೇ ವಿರೋಧಪಕ್ಷಗಳನ್ನು ಬೆದರಿಸಿ, ಆಮಿಷವೊಡ್ಡಿ ಅಥವಾ ಯಾವುದಾದರೂ ಒಂದು ಮಾರ್ಗದ ಮೂಲಕ ಬಿಜೆಪಿಯು ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತಿರುವುದು ಸ್ಪಷ್ಟ. ಸೈದ್ಧಾಂತಿಕ ವಿರೋಧಿಗಳ ಜೊತೆಗೂ ಅದು ಕೈ ಜೋಡಿಸಿದೆ. ಕರ್ನಾಟಕದಿಂದ ಕಾಶ್ಮೀರದವರೆಗೆ, ಬಿಹಾರದಿಂದ ಈಶಾನ್ಯ ಭಾರತದ ರಾಜ್ಯಗಳವರೆಗೆ ಅದು ನಡೆದಿದೆ.

ಬಹುಕಾಲ ನಡೆಯುತ್ತಾ ಬರುತ್ತಿದ್ದ ಈ ‘ಕಾಂಗ್ರೆಸ್ ಆಟ’ದಲ್ಲಿ ಬಿಜೆಪಿ ಎಲ್ಲ ಸೀಮಾರೇಖೆಗಳನ್ನು ದಾಟಿರುವುದು ಸ್ಪಷ್ಟ. ಹೀಗಿರುವಾಗ ಮಹಾರಾಷ್ಟ್ರದಲ್ಲಿ ಮಾತ್ರ ಅಧಿಕೃತವಾಗಿ ರಾಜ್ಯಪಾಲರ ಬಳಿ ಹೋಗಿ ಸರ್ಕಾರ ರಚಿಸುವುದಿಲ್ಲವೆಂದು ಹೇಳಿದ್ದು ಮತ್ತು ಮೋದಿಯವರು ಅದನ್ನು ಉಲ್ಲೇಖಿಸಿ ಬಿಜೆಪಿಯ ಹಿರಿಮೆಯ ಕುರಿತಾಗಿ ಮಾತಾಡಿದ್ದು ವಿಶೇಷವಾಗಿತ್ತು. ‘ಬೇಕಾದಷ್ಟು ರಾಜ್ಯಗಳಲ್ಲಿ ಅಧಿಕಾರ ಹಿಡಿದಾಗಿದೆ. ಕೇಂದ್ರದಲ್ಲಂತೂ ನಮ್ಮನ್ನು ಸರಿಗಟ್ಟುವವರಾರೂ ಇಲ್ಲ. ಹಾಗಾಗಿ ಇನ್ನು ಸಾಕು’ ಎಂದೇನಾದರೂ ತೀರ್ಮಾನ ಮಾಡಿಕೊಂಡಿದ್ದರೆ ಅಷ್ಟರಮಟ್ಟಿಗಾದರೂ ಅದು ಒಳ್ಳೆಯದೇ ಆಗಿರುತ್ತಿತ್ತು.

ಹಾಗೆ ನೋಡಿದರೆ ಅಧಿಕಾರ ಹಂಚಿಕೊಳ್ಳಲು ಸಾಕಾಗಿದ್ದ ಮೈತ್ರಿಯನ್ನು ಇಟ್ಟುಕೊಂಡು ಸರ್ಕಾರ ರಚನೆಯ ಹಕ್ಕು ಮಂಡಿಸಲು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಾಯಕರು ರಾಜ್ಯಪಾಲರಲ್ಲಿ ಹೋಗಲು ಆತುರ ತೋರಿರಲಿಲ್ಲ. ಮೈತ್ರಿ ಮಾಡಿಕೊಳ್ಳಲೂ ಮೀನಮೇಷ ಎಣಿಸಿದ್ದಲ್ಲದೇ, ಅಧಿಕಾರ ಹಂಚಿಕೆಯ ಸೂತ್ರ ಮತ್ತು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಅಂದರೆ ಕೂಡಲೇ ಅಧಿಕಾರ ಹಿಡಿದುಬಿಡುವ ಆತುರ ತಮಗೇನೂ ಇಲ್ಲ ಎಂಬಂತೆ ನಡೆದುಕೊಂಡರು.

ಶಿವಸೇನೆ ಜೊತೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅಧಿಕಾರಕ್ಕಾಗಿಯೇ ಎನ್‌ಸಿಪಿ ಹಾಗೂ ಕಾಂಗ್ರೆಸ್‌ಗಳು ಮುಂದಾದವು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಆರಂಭದ ತೋರ್ಪಡಿಕೆಯ ಹಿಂಜರಿಕೆಯ ನಂತರ ಅವೂ ಪವರ್ ಷೇರಿಂಗ್ ಮಾತುಕತೆಗಳಿಗೆ ಕೂತರು. ಯಾರೂ ಸರ್ಕಾರ ರಚನೆ ಮಾಡಲಾಗದ ಅನಿವಾರ್ಯ ಸ್ಥಿತಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದ ಮೇಲೆ ಸೇರುತ್ತಿದ್ದೇವಷ್ಟೇ ಎಂದು ಹೇಳಿಕೊಳ್ಳಬಲ್ಲ ಒಂದು ವಾತಾವರಣ ನಿರ್ಮಿಸಿಕೊಳ್ಳುವಷ್ಟಾದರೂ ತಾಳ್ಮೆಯನ್ನು ತೋರಿದರು ಎಂದು ಹೇಳಬಹುದು.

ಆದರೆ, ಮತ್ತೆ ಪ್ರಜಾಪ್ರಭುತ್ವದ ಕನಿಷ್ಠ ನೀತಿ ಸಂಹಿತೆಯ ಎಲ್ಲೆಗಳನ್ನು ಬಿಜೆಪಿ ಮತ್ತೊಮ್ಮೆ ಮೀರಿತು. ಯಾವ ಕಾರಣ ಹೇಳಿದರೂ ‘ಅಧಿಕಾರದಾಹದ ನಿರ್ಲಜ್ಜ ನಡವಳಿಕೆ’ ಎಂದಷ್ಟೇ ವ್ಯಾಖ್ಯಾನಿಸಬಹುದಾದ ಕ್ರಮಗಳಿಗೆ ಮುಂದಾಯಿತು. ರಾಜ್ಯಪಾಲರ ಕಚೇರಿ ಮತ್ತು ರಾಷ್ಟ್ರಪತಿಗಳ ಕಚೇರಿಯನ್ನು ಹಿಂದೆ ಕಾಂಗ್ರೆಸ್ ಬಳಸಿದ ರೀತಿಯಲ್ಲೇ ಅಥವಾ ಇನ್ನೂ ಕೆಟ್ಟದಾಗಿ ಬಳಸಿಕೊಳ್ಳಲಾಯಿತು. ಈ ರೀತಿ ಅಧಿಕಾರ ಹಿಡಿದರೆ ಬಹುಮತ ಗಳಿಸಿಕೊಳ್ಳುವುದು ಕಷ್ಟವೇನಲ್ಲ ಎಂಬುದೇ ಅವರ ಲೆಕ್ಕಾಚಾರವೆಂದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿದೆ.

ಇದನ್ನೂ ಓದಿ: ನಾಳೆಯೇ ಬಹುಮತ ಸಾಬೀತುಮಾಡಿ: ಸುಪ್ರೀಂ ಕೋರ್ಟ್‌ ಆದೇಶ

ಹಾಗಿದ್ದ ಮೇಲೆ ಕೇವಲ ಒಂದು ವಾರದ ಕೆಳಗೆ ಆ ಪಕ್ಷದ ಅತ್ಯುನ್ನತ ನಾಯಕ ಸಾರ್ವಜನಿಕ ಮರ್ಯಾದೆಯ ರೀತಿ-ನೀತಿಗಳ ಕುರಿತು ಮಾತನಾಡಿದರೇಕೆ? ರಾಷ್ಟ್ರಪತಿ ಆಡಳಿತವನ್ನು ಹಿಂಪಡೆಯಲು ಕ್ಯಾಬಿನೆಟ್ ಸಭೆಯನ್ನು ಕರೆಯುವ ಅಗತ್ಯವೂ ಇಲ್ಲದ ವಿಶೇಷ ಅಧಿಕಾರವನ್ನು ಬಳಸಿದರೇಕೆ? ಇನ್ನೂ ಬೆಳಕು ಹರಿಯುವ ಮುನ್ನವೇ ಮಹಾರಾಷ್ಟ್ರದ ರಾಜಭವನದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಗೌಪ್ಯ ರೀತಿಯಲ್ಲಿ ಪ್ರಮಾಣ ವಚನ ಬೋಧಿಸಲಾಗಿದೆ ಎಂದು ಹೆಚ್ಚಿನವರಿಗೆ ಗೊತ್ತಾಗಿದ್ದೇ ಪ್ರಧಾನಮಂತ್ರಿಗಳ ಟ್ವೀಟ್ ಮೂಲಕ. 70,000 ಕೋಟಿ ರೂ.ಗಳ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಒಂದು ತಿಂಗಳ ಹಿಂದಿನವರೆಗೂ ತಾವೇ ಆರೋಪಿಸುತ್ತಿದ್ದ ಅಜಿತ್ ಪವಾರ್‌ಜೀಯವರಿಗೂ ಅವರು ಅಭಿನಂದಿಸಿದ್ದರು.

ಅಂದರೆ, ರಾಜಕೀಯ ನೀತಿ ಸಂಹಿತೆಯ ಪ್ರತಿಪಾದನೆ ಮತ್ತು ಪ್ರದರ್ಶನವು ಮುಖ್ಯ ಎಂದು ಮೋದಿಯವರು ಭಾವಿಸುವುದಾದಲ್ಲಿ (ಅವರೇ ಬಿಜೆಪಿ ಸಂಸತ್ ಸದಸ್ಯರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದಂತೆ), ಅದರಲ್ಲಿ ಅವರು ಸೋತಿದ್ದಾರೆ. ಆ ಭಾಷಣದಲ್ಲಿ ಅವರು ಸೂಚಿಸಿದಂತೆ ಜನರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ. ಹಾಗಾಗಿ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಗ್ಗೆ ಅವಿಶ್ವಾಸವು ವ್ಯಕ್ತವಾಗಲು ಆರಂಭವಾಗಿ ಬಹಳ ಕಾಲವಾಯಿತು. ರಾಜ್ಯಗಳಲ್ಲಾಗಲೀ, ಕೇಂದ್ರದಲ್ಲಾಗಲೀ ಜನರು ವಿಶ್ವಾಸವಿಡಬಲ್ಲ ಪರ್ಯಾಯ ಇಲ್ಲದಿರುವುದರಿಂದ ಅವರ ಕೆಲಸ ಸುಲಭವಾಗಿದೆ ಎಂಬುದೂ ಸ್ಪಷ್ಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...