Homeಅಂಕಣಗಳುನರ್ವಸ್ ಬಿಜೆಪಿಯ ಮುಂದೆ ಆತ್ಮವಿಶ್ವಾಸವಿಲ್ಲದ ಕಾಂಗ್ರೆಸ್

ನರ್ವಸ್ ಬಿಜೆಪಿಯ ಮುಂದೆ ಆತ್ಮವಿಶ್ವಾಸವಿಲ್ಲದ ಕಾಂಗ್ರೆಸ್

- Advertisement -
- Advertisement -

ದಕ್ಷಿಣ ಭಾರತವನ್ನು ಬಿಟ್ಟರೆ, ದೇಶದಲ್ಲಿ ಎಲ್ಲಿಯಾದರೂ ಮೋದಿ ವಿರೋಧಿ ಭಾವನೆ ಜನರಲ್ಲಿ ಬೆಳೆಯುತ್ತಿದ್ದರೆ ಅದು ಗುಜರಾತ್‍ನಲ್ಲಿ ಮಾತ್ರ ಎಂದು ಭಾವಿಸಲು ಕಾರಣಗಳಿವೆ. ಅಲ್ಲಿನ ಜನರು ಖುದ್ದು ಮೋದಿಯ ಆಡಳಿತವನ್ನೇ ನೋಡಿದ್ದಾರೆ. ಹಾಗಾಗಿ ಆಡಳಿತ ವಿರೋಧಿ ಅಲೆ ಕೇಂದ್ರ ಸರ್ಕಾರದ ವಿರುದ್ಧ ಬಲಿಯಲು ಮಿಕ್ಕ ಭಾಗಗಳಲ್ಲಿ ಸಮಯ ಬೇಕಾಗಬಹುದಾದರೂ, ಗುಜರಾತ್‍ನಲ್ಲಿ ಹಾಗಿಲ್ಲ. ಇದರ ಸೂಚನೆಯು ಕಳೆದ ವಿಧಾನಸಭಾ ಚುನಾವಣೆಯಲ್ಲೇ ಸಿಕ್ಕಿತ್ತು. ಈಗ ಲೋಕಸಭಾ ಚುನಾವಣೆಯಲ್ಲಂತೂ ಬಿಜೆಪಿ ಹೆದರಿ ಕೊಂಡಿರುವುದು ಸ್ಪಷ್ಟವಾಗಿದೆ.
ಗುಜರಾತಿ ನಲ್ಲಿ ಎಲ್ಲಿ ನೋಡಿದರೂ ಭಾರತೀಯ ಜನತಾ ಪಾರ್ಟಿಯ ಬಿಲ್‍ಬೋರ್ಡ್ ಗಳೇ ಕಾಣುತ್ತಿವೆ. ಅದರೊಂದಿಗೆ ರಾಜ್ಯದಲ್ಲಿ ಟಿವಿ ಮತ್ತು ಸಾಮಾಜಿಕ ಜಾಲತಾಣ ಗಳಲ್ಲೂ ಬಿಜೆಪಿಯೇ ಕಾಣಿಸಿಕೊಳ್ಳುತ್ತಿದೆ. ಗುಜರಾತಿನ ಮುಖ್ಯ ಚುನಾವಣಾಧಿಕಾರಿಯ ಪ್ರಕಾರ, ಟಿವಿಯಲ್ಲಿ, ರೇಡಿಯೋದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 88% ರಷ್ಟು ರಾಜಕೀಯ ಜಾಹೀರಾತುಗಳು ಬಿಜೆಪಿಯದ್ದೇ ಆಗಿವೆ.
ಮುಖ್ಯ ಚುನಾವಣಾಧಿಕಾರಿಯ ಮೀಡಿಯಾ ಸರ್ಟಿಫಿಕೇಷನ್ ಆ್ಯಂಡ್ ಮಾನಿಟರಿಂಗ್ ಕಮಿಟಿಯು ಯಾವುದೇ ಡಿಜಿಟಲ್ ಮಾಧ್ಯಮದಲ್ಲಿ ಬರುವ ರಾಜಕೀಯ ವಿಷಯಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿದೆ. 22 ಏಪ್ರಿಲ್‍ವರೆಗೆ ಅವರ ಹತ್ತಿರ ಬಂದ 200 ಅರ್ಜಿಗಳಲ್ಲಿ 173 ಬಿಜೆಪಿಯಿಂದ ಬಂದಿದ್ದರೆ 27 ಕಾಂಗ್ರೆಸ್ಸಿನಿಂದ ಬಂದಿದ್ದವು. ಅದರಲ್ಲಿ ಬಿಜೆಪಿಯ 112 ಮತ್ತು ಕಾಂಗ್ರೆಸ್ಸಿನ 15 ವಿಷಯಗಳಿಗೆ ಅನುಮತಿ ನೀಡಲಾಯಿತು.
ಪ್ರಧಾನಮಂತ್ರಿಯವರ ರಾಜ್ಯದಲ್ಲಿಯೇ ಈ ಪ್ರಮಾಣದ ಜಾಹೀರಾತುಗಳನ್ನು ನೋಡಿ, ಬಿಜೆಪಿ ಈ ಚುನಾವಣೆಗಳಲ್ಲಿ ಯಾಕೋ ತುಂಬಾ ನರ್ವಸ್ ಆಗಿದೆ ಎನ್ನುವ ಆಲೋಚನೆ ತೇಲಿಬರುತ್ತಿದೆ.
ಗುಜರಾತಿನ ಕಾಂಗ್ರೆಸ್ ವಕ್ತಾರ ಮನೀಷ್ ದೋಷಿ ಹೇಳಿದ್ದೇನೆಂದರೆ, “ಬಿಜೆಪಿ ಎನ್ನುವ ಪಕ್ಷ ಒಂದು ಪ್ರಚಾರದ ಪಕ್ಷ, ಪ್ರಧಾನಿ ಮೋದಿಯವರು ಪ್ರಚಾರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಮೋದಿ ಸರಕಾರ ಏನಾದರೂ ಕೆಲಸ ಮಾಡಿದ್ದಲ್ಲಿ, ಜಾಹಿರಾತುಗಳಿಗಾಗಿ ಇಷ್ಟೊಂದು ಹಣ ಪೋಲು ಮಾಡುತ್ತಿರಲಿಲ್ಲ”.
“ಕಾಂಗ್ರೆಸ್ ನಕಾರಾತ್ಮಕ ಪ್ರಚಾರ ಮಾಡುತ್ತಿದೆ, ಆ ಕಾರಣದಿಂದಾಗಿಯೇ ಅಧಿಕೃತ ಅನುಮತಿ ಸಿಗುವುದಿಲ್ಲ. ಅವರು ನೆಗೆಟಿವ್ ಪ್ರಚಾರದ ಮೇಲೆಯೇ ಗಮನಹರಿಸುತ್ತಿರುವುದರಿಂದ ಅವರ ಜಾಹಿರಾತುಗಳ ಸಂಖ್ಯೆ ಕಡಿಮೆ. ನಾವು ಸಕಾರಾತ್ಮಕ ಪ್ರಚಾರ ಮಾಡುತ್ತೇವೆ” ಇದು ಗುಜರಾತಿನ ಬಿಜೆಪಿ ವಕ್ತಾರ ಭರತ್ ಪಾಂಡ್ಯಾ ಹೇಳಿದ್ದು.
ಎಲ್ಲೆಲ್ಲೂ ಮೋದಿ
ಗುಜರಾತಿನಾದ್ಯಂತ ಎಲ್ಲಾ ಭಿತ್ತಿಪತ್ರಗಳು ಮತ್ತು ಇತರೆ ಪ್ರಚಾರ ಸಾಮಗ್ರಿಗಳಲ್ಲಿ ಕಂಡುಬರುವುದು ಮೋದಿಯ ಚಿತ್ರ ಮಾತ್ರ. ಅವರ ಚಿತ್ರದೊಂದಿಗೆ, ‘ಈ ಸಲವೂ ಮೋದಿ ಸರಕಾರ’ ಎನ್ನುವ ಸಂದೇಶವಿರುತ್ತದೆ. ಮುಖ್ಯಮಂತ್ರಿ ವಿಜಯ್ ರೂಪಾನಿಯವರ ಸರಕಾರದ ವಿರುದ್ಧ ಹುಟ್ಟಿಕೊಂಡಿರುವ ವ್ಯಾಪಾರಿಗಳ ಮತ್ತು ರೈತರ ಸಿಟ್ಟನ್ನು ಶಮನಗೊಳಿಸುವುದಕ್ಕಾಗಿಯೇ ಬಿಜೆಪಿಯ ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಕಂಡುಬರುತ್ತಿದೆ.
2017ರ ವಿಧಾನಸಭೆ ಚುನಾವಣೆಗಳ ನೆನಪು ಇನ್ನು ಹಸಿಯಾಗಿಯೇ ಇದೆ. ಆಗ ಕಾಂಗ್ರೆಸ್ ಬಲವಾದ ಪೈಪೋಟಿಯನ್ನು ನೀಡಿತ್ತು. ಮೋದಿ ಅಲೆಯ ಹೊರತಾಗಿಯೂ ಬಿಜೆಪಿಯ ಸಂಖ್ಯೆ 100ಕ್ಕಿಂತ ಕೆಳಗಿಳಿಯಿತು ಮತ್ತು ಕಾಂಗ್ರೆಸ್ ಪಡೆದ ಸೀಟುಗಳು ಕಳೆದ ಎರಡು ದಶಕಗಳಲ್ಲಿಯೇ ಅತ್ಯಂತ ಹೆಚ್ಚು.
ರಾಜ್ಯದಲ್ಲಿ 26 ಸೀಟುಗಳಲ್ಲಿ 20 ಆದರೂ ಗೆಲ್ಲಲು ಬಿಜೆಪಿ ಮತ್ತೆ ಮೋದಿ ಬ್ರ್ಯಾಂಡ್ ಮೇಲೆಯೇ ನೆಚ್ಚಿಕೊಂಡಿದೆ. ನೆನಪಿಡಿ, 2014ರಲ್ಲಿ ಬಿಜೆಪಿ ಎಲ್ಲ 26 ಸೀಟುಗಳನ್ನು ಗೆದ್ದುಕೊಂಡಿತ್ತು. ಇಂದು, ಎಪ್ರಿಲ್ 23ರಂದು ಗುಜರಾತಿನ ಎಲ್ಲ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಲೋಕಸಭಾ ಕ್ಷೇತ್ರಗಳಿಗೆ ಅನ್ವಯಿಸಿ ನೋಡುವುದಾದರೆ, ಕಾಂಗ್ರೆಸ್ ಐದಾರು ಸೀಟುಗಳಲ್ಲಿ ಗೆಲ್ಲಬೇಕು.
ಅದನ್ನು ದಾಟಿ ಅಲ್ಲಿನ ರೈತರ, ಗೋಪಾಲಕರ, ಪಾಟೀದಾರರ ಹಾಗೂ ಸಣ್ಣ ವ್ಯಾಪಾರಸ್ಥರ ಅಸಮಾಧಾನವು ಬಿಜೆಪಿ ವಿರುದ್ಧದ ಮತಗಳಾಗಿ ಧ್ರುವೀಕರಣಗೊಳ್ಳುತ್ತದಾ ಎಂಬುದು ಬಿಜೆಪಿಯ ದೌರ್ಬಲ್ಯದ ಮೇಲಷ್ಟೇ ಅವಲಂಬಿಸಿಲ್ಲ. ಅದು ಕಾಂಗ್ರೆಸ್ಸಿನ ಸಾಮಥ್ರ್ಯದ ಮೇಲೆ ನಿಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‍ನ ನೇರ ಪಾಲ್ಗೊಳ್ಳುವಿಕೆಯಿಂದ ಚುರುಕಾಗಿದ್ದ ಸ್ಥಳೀಯ ಕಾಂಗ್ರೆಸ್ ದೇಶವ್ಯಾಪಿ ಚುನಾವಣೆ ನಡೆಯುತ್ತಿರುವಾಗ ಅಷ್ಟೇ ಸಮರ್ಥವಾಗಿಲ್ಲ. ಹೀಗಾಗಿ ಮೋದಿ ವಿರುದ್ಧದ ಭಾವನೆ ಬೆಳೆಯುತ್ತಿರುವ ರಾಜ್ಯವಾದ ಗುಜರಾತ್‍ನಲ್ಲಿ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಶಕ್ತವಾಗಿಲ್ಲ.
ಒಂದೇ ಸುತ್ತಿನ ಚುನಾವಣೆ ನಡೆಯುತ್ತಿರುವ ಅಲ್ಲಿ ಜನರೇ ಮನಸ್ಸು ಮಾಡಿ ಕಾಂಗ್ರೆಸ್‍ಗೆ ಮತ ಹಾಕಿದಲ್ಲಿ, 2009ರ ಸಾಧನೆಯನ್ನು (15 ಬಿಜೆಪಿ-11 ಕಾಂಗ್ರೆಸ್) ಅದು ಮಾಡಬಹುದು.
ಅಮುಲ್ ನಾಡಿನಲ್ಲಿ ಗೋಪಾಲಕರ ಸಿಟ್ಟು
ಭಾರತದ ಮೊಟ್ಟಮೊದಲ ಬೃಹತ್ ಸಹಕಾರೀ ಹಾಲು ಉದ್ದಿಮೆಯ ಯಶಸ್ವಿ ಪ್ರಯೋಗ ಗುಜರಾತಿನದ್ದೇ. ಅಮುಲ್‍ನಿಂದ ಆರಂಭವಾದದ್ದು ಇತರ ರಾಜ್ಯಗಳಿಗೂ ಹಬ್ಬಿತು. ಆದರೆ ರಾಜ್ಯದ ಮೂಲೆಮೂಲೆಗಳಿಗೂ ಹಬ್ಬಿರುವ ಅಮುಲ್‍ನ ಕಾರ್ಯಕ್ಷೇತ್ರವು ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸಿದೆ. ಇದು ಕೇವಲ ಗುಜರಾತಿನ ಸಮಸ್ಯೆಯಲ್ಲ. ಕೃಷಿ ಬಿಕ್ಕಟ್ಟಿನ ಕಾರಣಕ್ಕೆ ಹೈನುಗಾರಿಕೆಗೆ ಹೆಚ್ಚೆಚ್ಚು ರೈತರು ಮುಂದಾಗುತ್ತಿರುವುದು ಇಡೀ ದೇಶದಲ್ಲಿದೆ. ಹಾಗಾಗಿ ಮಾರುಕಟ್ಟೆಯನ್ನು ಇನ್ನೂ ಹೆಚ್ಚು ವಿಸ್ತರಿಸಿಕೊಳ್ಳುವುದು ಸುಲಭವಿಲ್ಲ.
ಜೊತೆಗೆ ಗುಜರಾತಿನಲ್ಲಿ ಹಾಲಿನ ದರವನ್ನು ಹೆಚ್ಚಿಸುವುದೂ ಕಷ್ಟ. ಏಕೆಂದರೆ ಪ್ರತೀ ಮನೆಯಲ್ಲೂ ಹಾಲಿನ ಬಳಕೆ ವಿಪರೀತ. ಇಂತಹ ಸಮಸ್ಯೆ ಇರುವಾಗ ಗುಜರಾತಿನಲ್ಲಿ ಬರ ತೀವ್ರವಾಗಿದೆ. ಹುಲ್ಲಿಗೆ ಸಬ್ಸಿಡಿ ನೀಡಿದ್ದೇವೆ ಎಂದು ಬಿಜೆಪಿ ಸರ್ಕಾರವು ಹೇಳಿಕೊಳ್ಳುತ್ತಿದೆಯಾದರೂ ಬರ ಹೆಚ್ಚಾಗಿ, ಹುಲ್ಲು ಸಿಗುತ್ತಿಲ್ಲ. ಇನ್ನೂ ಹೆಚ್ಚು ಹಸುಗಳನ್ನು ಸಾಕಲು ಸಾಲ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರಿಗೆ ಸಮಸ್ಯೆಯ ಮೂಲವೇ ಅರ್ಥವಾದಂತಿಲ್ಲ.
ಅದೇ ಸಂದರ್ಭದಲ್ಲಿ ಕಾಂಗ್ರೆಸ್‍ನ ಪ್ರಣಾಳಿಕೆಯಲ್ಲಿ ಪ್ರತ್ಯೇಕ ರೈತ ಬಜೆಟ್ ಮತ್ತು ಹಾಲಿಗೆ ಪ್ರೋತ್ಸಾಹಧನ ನೀಡುವ ಭರವಸೆಯಿದೆ. ಈಗಾಗಲೇ ಕರ್ನಾಟಕದಲ್ಲಿ ಆ ವ್ಯವಸ್ಥೆ ಇದೆ. ಇದು ಗುಜರಾತ್‍ನ ಹಾಲು ಉತ್ಪಾದಕರಿಗೂ ಗೊತ್ತಿರುವ ವಿಚಾರವಾಗಿದೆ. ಗೋಪಾಲಕ ಸಮುದಾಯವಾದ ಮಾಲ್ಧಾರಿಗಳು ನರೇಂದ್ರ ಮೋದಿಯ ಸ್ವಂತ ಜಿಲ್ಲೆ ಮೆಹ್ಸಾನಾದಲ್ಲೂ ಸಾಕಷ್ಟಿದ್ದಾರೆ. ಈ ಸರ್ಕಾರವು ತಮಗೇನೂ ಮಾಡುತ್ತಿಲ್ಲ ಎಂಬ ಭಾವನೆ ದಟ್ಟವಾಗಿದ್ದು, ಇದನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಆಧಾರ: ಪ್ರಿಂಟ್ ಮತ್ತು ಗುಜರಾತಿನ
ವಿವಿಧ ಜನಪರ ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...