Homeಅಂಕಣಗಳುನರ್ವಸ್ ಬಿಜೆಪಿಯ ಮುಂದೆ ಆತ್ಮವಿಶ್ವಾಸವಿಲ್ಲದ ಕಾಂಗ್ರೆಸ್

ನರ್ವಸ್ ಬಿಜೆಪಿಯ ಮುಂದೆ ಆತ್ಮವಿಶ್ವಾಸವಿಲ್ಲದ ಕಾಂಗ್ರೆಸ್

- Advertisement -
- Advertisement -

ದಕ್ಷಿಣ ಭಾರತವನ್ನು ಬಿಟ್ಟರೆ, ದೇಶದಲ್ಲಿ ಎಲ್ಲಿಯಾದರೂ ಮೋದಿ ವಿರೋಧಿ ಭಾವನೆ ಜನರಲ್ಲಿ ಬೆಳೆಯುತ್ತಿದ್ದರೆ ಅದು ಗುಜರಾತ್‍ನಲ್ಲಿ ಮಾತ್ರ ಎಂದು ಭಾವಿಸಲು ಕಾರಣಗಳಿವೆ. ಅಲ್ಲಿನ ಜನರು ಖುದ್ದು ಮೋದಿಯ ಆಡಳಿತವನ್ನೇ ನೋಡಿದ್ದಾರೆ. ಹಾಗಾಗಿ ಆಡಳಿತ ವಿರೋಧಿ ಅಲೆ ಕೇಂದ್ರ ಸರ್ಕಾರದ ವಿರುದ್ಧ ಬಲಿಯಲು ಮಿಕ್ಕ ಭಾಗಗಳಲ್ಲಿ ಸಮಯ ಬೇಕಾಗಬಹುದಾದರೂ, ಗುಜರಾತ್‍ನಲ್ಲಿ ಹಾಗಿಲ್ಲ. ಇದರ ಸೂಚನೆಯು ಕಳೆದ ವಿಧಾನಸಭಾ ಚುನಾವಣೆಯಲ್ಲೇ ಸಿಕ್ಕಿತ್ತು. ಈಗ ಲೋಕಸಭಾ ಚುನಾವಣೆಯಲ್ಲಂತೂ ಬಿಜೆಪಿ ಹೆದರಿ ಕೊಂಡಿರುವುದು ಸ್ಪಷ್ಟವಾಗಿದೆ.
ಗುಜರಾತಿ ನಲ್ಲಿ ಎಲ್ಲಿ ನೋಡಿದರೂ ಭಾರತೀಯ ಜನತಾ ಪಾರ್ಟಿಯ ಬಿಲ್‍ಬೋರ್ಡ್ ಗಳೇ ಕಾಣುತ್ತಿವೆ. ಅದರೊಂದಿಗೆ ರಾಜ್ಯದಲ್ಲಿ ಟಿವಿ ಮತ್ತು ಸಾಮಾಜಿಕ ಜಾಲತಾಣ ಗಳಲ್ಲೂ ಬಿಜೆಪಿಯೇ ಕಾಣಿಸಿಕೊಳ್ಳುತ್ತಿದೆ. ಗುಜರಾತಿನ ಮುಖ್ಯ ಚುನಾವಣಾಧಿಕಾರಿಯ ಪ್ರಕಾರ, ಟಿವಿಯಲ್ಲಿ, ರೇಡಿಯೋದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 88% ರಷ್ಟು ರಾಜಕೀಯ ಜಾಹೀರಾತುಗಳು ಬಿಜೆಪಿಯದ್ದೇ ಆಗಿವೆ.
ಮುಖ್ಯ ಚುನಾವಣಾಧಿಕಾರಿಯ ಮೀಡಿಯಾ ಸರ್ಟಿಫಿಕೇಷನ್ ಆ್ಯಂಡ್ ಮಾನಿಟರಿಂಗ್ ಕಮಿಟಿಯು ಯಾವುದೇ ಡಿಜಿಟಲ್ ಮಾಧ್ಯಮದಲ್ಲಿ ಬರುವ ರಾಜಕೀಯ ವಿಷಯಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿದೆ. 22 ಏಪ್ರಿಲ್‍ವರೆಗೆ ಅವರ ಹತ್ತಿರ ಬಂದ 200 ಅರ್ಜಿಗಳಲ್ಲಿ 173 ಬಿಜೆಪಿಯಿಂದ ಬಂದಿದ್ದರೆ 27 ಕಾಂಗ್ರೆಸ್ಸಿನಿಂದ ಬಂದಿದ್ದವು. ಅದರಲ್ಲಿ ಬಿಜೆಪಿಯ 112 ಮತ್ತು ಕಾಂಗ್ರೆಸ್ಸಿನ 15 ವಿಷಯಗಳಿಗೆ ಅನುಮತಿ ನೀಡಲಾಯಿತು.
ಪ್ರಧಾನಮಂತ್ರಿಯವರ ರಾಜ್ಯದಲ್ಲಿಯೇ ಈ ಪ್ರಮಾಣದ ಜಾಹೀರಾತುಗಳನ್ನು ನೋಡಿ, ಬಿಜೆಪಿ ಈ ಚುನಾವಣೆಗಳಲ್ಲಿ ಯಾಕೋ ತುಂಬಾ ನರ್ವಸ್ ಆಗಿದೆ ಎನ್ನುವ ಆಲೋಚನೆ ತೇಲಿಬರುತ್ತಿದೆ.
ಗುಜರಾತಿನ ಕಾಂಗ್ರೆಸ್ ವಕ್ತಾರ ಮನೀಷ್ ದೋಷಿ ಹೇಳಿದ್ದೇನೆಂದರೆ, “ಬಿಜೆಪಿ ಎನ್ನುವ ಪಕ್ಷ ಒಂದು ಪ್ರಚಾರದ ಪಕ್ಷ, ಪ್ರಧಾನಿ ಮೋದಿಯವರು ಪ್ರಚಾರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಮೋದಿ ಸರಕಾರ ಏನಾದರೂ ಕೆಲಸ ಮಾಡಿದ್ದಲ್ಲಿ, ಜಾಹಿರಾತುಗಳಿಗಾಗಿ ಇಷ್ಟೊಂದು ಹಣ ಪೋಲು ಮಾಡುತ್ತಿರಲಿಲ್ಲ”.
“ಕಾಂಗ್ರೆಸ್ ನಕಾರಾತ್ಮಕ ಪ್ರಚಾರ ಮಾಡುತ್ತಿದೆ, ಆ ಕಾರಣದಿಂದಾಗಿಯೇ ಅಧಿಕೃತ ಅನುಮತಿ ಸಿಗುವುದಿಲ್ಲ. ಅವರು ನೆಗೆಟಿವ್ ಪ್ರಚಾರದ ಮೇಲೆಯೇ ಗಮನಹರಿಸುತ್ತಿರುವುದರಿಂದ ಅವರ ಜಾಹಿರಾತುಗಳ ಸಂಖ್ಯೆ ಕಡಿಮೆ. ನಾವು ಸಕಾರಾತ್ಮಕ ಪ್ರಚಾರ ಮಾಡುತ್ತೇವೆ” ಇದು ಗುಜರಾತಿನ ಬಿಜೆಪಿ ವಕ್ತಾರ ಭರತ್ ಪಾಂಡ್ಯಾ ಹೇಳಿದ್ದು.
ಎಲ್ಲೆಲ್ಲೂ ಮೋದಿ
ಗುಜರಾತಿನಾದ್ಯಂತ ಎಲ್ಲಾ ಭಿತ್ತಿಪತ್ರಗಳು ಮತ್ತು ಇತರೆ ಪ್ರಚಾರ ಸಾಮಗ್ರಿಗಳಲ್ಲಿ ಕಂಡುಬರುವುದು ಮೋದಿಯ ಚಿತ್ರ ಮಾತ್ರ. ಅವರ ಚಿತ್ರದೊಂದಿಗೆ, ‘ಈ ಸಲವೂ ಮೋದಿ ಸರಕಾರ’ ಎನ್ನುವ ಸಂದೇಶವಿರುತ್ತದೆ. ಮುಖ್ಯಮಂತ್ರಿ ವಿಜಯ್ ರೂಪಾನಿಯವರ ಸರಕಾರದ ವಿರುದ್ಧ ಹುಟ್ಟಿಕೊಂಡಿರುವ ವ್ಯಾಪಾರಿಗಳ ಮತ್ತು ರೈತರ ಸಿಟ್ಟನ್ನು ಶಮನಗೊಳಿಸುವುದಕ್ಕಾಗಿಯೇ ಬಿಜೆಪಿಯ ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಕಂಡುಬರುತ್ತಿದೆ.
2017ರ ವಿಧಾನಸಭೆ ಚುನಾವಣೆಗಳ ನೆನಪು ಇನ್ನು ಹಸಿಯಾಗಿಯೇ ಇದೆ. ಆಗ ಕಾಂಗ್ರೆಸ್ ಬಲವಾದ ಪೈಪೋಟಿಯನ್ನು ನೀಡಿತ್ತು. ಮೋದಿ ಅಲೆಯ ಹೊರತಾಗಿಯೂ ಬಿಜೆಪಿಯ ಸಂಖ್ಯೆ 100ಕ್ಕಿಂತ ಕೆಳಗಿಳಿಯಿತು ಮತ್ತು ಕಾಂಗ್ರೆಸ್ ಪಡೆದ ಸೀಟುಗಳು ಕಳೆದ ಎರಡು ದಶಕಗಳಲ್ಲಿಯೇ ಅತ್ಯಂತ ಹೆಚ್ಚು.
ರಾಜ್ಯದಲ್ಲಿ 26 ಸೀಟುಗಳಲ್ಲಿ 20 ಆದರೂ ಗೆಲ್ಲಲು ಬಿಜೆಪಿ ಮತ್ತೆ ಮೋದಿ ಬ್ರ್ಯಾಂಡ್ ಮೇಲೆಯೇ ನೆಚ್ಚಿಕೊಂಡಿದೆ. ನೆನಪಿಡಿ, 2014ರಲ್ಲಿ ಬಿಜೆಪಿ ಎಲ್ಲ 26 ಸೀಟುಗಳನ್ನು ಗೆದ್ದುಕೊಂಡಿತ್ತು. ಇಂದು, ಎಪ್ರಿಲ್ 23ರಂದು ಗುಜರಾತಿನ ಎಲ್ಲ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಲೋಕಸಭಾ ಕ್ಷೇತ್ರಗಳಿಗೆ ಅನ್ವಯಿಸಿ ನೋಡುವುದಾದರೆ, ಕಾಂಗ್ರೆಸ್ ಐದಾರು ಸೀಟುಗಳಲ್ಲಿ ಗೆಲ್ಲಬೇಕು.
ಅದನ್ನು ದಾಟಿ ಅಲ್ಲಿನ ರೈತರ, ಗೋಪಾಲಕರ, ಪಾಟೀದಾರರ ಹಾಗೂ ಸಣ್ಣ ವ್ಯಾಪಾರಸ್ಥರ ಅಸಮಾಧಾನವು ಬಿಜೆಪಿ ವಿರುದ್ಧದ ಮತಗಳಾಗಿ ಧ್ರುವೀಕರಣಗೊಳ್ಳುತ್ತದಾ ಎಂಬುದು ಬಿಜೆಪಿಯ ದೌರ್ಬಲ್ಯದ ಮೇಲಷ್ಟೇ ಅವಲಂಬಿಸಿಲ್ಲ. ಅದು ಕಾಂಗ್ರೆಸ್ಸಿನ ಸಾಮಥ್ರ್ಯದ ಮೇಲೆ ನಿಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‍ನ ನೇರ ಪಾಲ್ಗೊಳ್ಳುವಿಕೆಯಿಂದ ಚುರುಕಾಗಿದ್ದ ಸ್ಥಳೀಯ ಕಾಂಗ್ರೆಸ್ ದೇಶವ್ಯಾಪಿ ಚುನಾವಣೆ ನಡೆಯುತ್ತಿರುವಾಗ ಅಷ್ಟೇ ಸಮರ್ಥವಾಗಿಲ್ಲ. ಹೀಗಾಗಿ ಮೋದಿ ವಿರುದ್ಧದ ಭಾವನೆ ಬೆಳೆಯುತ್ತಿರುವ ರಾಜ್ಯವಾದ ಗುಜರಾತ್‍ನಲ್ಲಿ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಶಕ್ತವಾಗಿಲ್ಲ.
ಒಂದೇ ಸುತ್ತಿನ ಚುನಾವಣೆ ನಡೆಯುತ್ತಿರುವ ಅಲ್ಲಿ ಜನರೇ ಮನಸ್ಸು ಮಾಡಿ ಕಾಂಗ್ರೆಸ್‍ಗೆ ಮತ ಹಾಕಿದಲ್ಲಿ, 2009ರ ಸಾಧನೆಯನ್ನು (15 ಬಿಜೆಪಿ-11 ಕಾಂಗ್ರೆಸ್) ಅದು ಮಾಡಬಹುದು.
ಅಮುಲ್ ನಾಡಿನಲ್ಲಿ ಗೋಪಾಲಕರ ಸಿಟ್ಟು
ಭಾರತದ ಮೊಟ್ಟಮೊದಲ ಬೃಹತ್ ಸಹಕಾರೀ ಹಾಲು ಉದ್ದಿಮೆಯ ಯಶಸ್ವಿ ಪ್ರಯೋಗ ಗುಜರಾತಿನದ್ದೇ. ಅಮುಲ್‍ನಿಂದ ಆರಂಭವಾದದ್ದು ಇತರ ರಾಜ್ಯಗಳಿಗೂ ಹಬ್ಬಿತು. ಆದರೆ ರಾಜ್ಯದ ಮೂಲೆಮೂಲೆಗಳಿಗೂ ಹಬ್ಬಿರುವ ಅಮುಲ್‍ನ ಕಾರ್ಯಕ್ಷೇತ್ರವು ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸಿದೆ. ಇದು ಕೇವಲ ಗುಜರಾತಿನ ಸಮಸ್ಯೆಯಲ್ಲ. ಕೃಷಿ ಬಿಕ್ಕಟ್ಟಿನ ಕಾರಣಕ್ಕೆ ಹೈನುಗಾರಿಕೆಗೆ ಹೆಚ್ಚೆಚ್ಚು ರೈತರು ಮುಂದಾಗುತ್ತಿರುವುದು ಇಡೀ ದೇಶದಲ್ಲಿದೆ. ಹಾಗಾಗಿ ಮಾರುಕಟ್ಟೆಯನ್ನು ಇನ್ನೂ ಹೆಚ್ಚು ವಿಸ್ತರಿಸಿಕೊಳ್ಳುವುದು ಸುಲಭವಿಲ್ಲ.
ಜೊತೆಗೆ ಗುಜರಾತಿನಲ್ಲಿ ಹಾಲಿನ ದರವನ್ನು ಹೆಚ್ಚಿಸುವುದೂ ಕಷ್ಟ. ಏಕೆಂದರೆ ಪ್ರತೀ ಮನೆಯಲ್ಲೂ ಹಾಲಿನ ಬಳಕೆ ವಿಪರೀತ. ಇಂತಹ ಸಮಸ್ಯೆ ಇರುವಾಗ ಗುಜರಾತಿನಲ್ಲಿ ಬರ ತೀವ್ರವಾಗಿದೆ. ಹುಲ್ಲಿಗೆ ಸಬ್ಸಿಡಿ ನೀಡಿದ್ದೇವೆ ಎಂದು ಬಿಜೆಪಿ ಸರ್ಕಾರವು ಹೇಳಿಕೊಳ್ಳುತ್ತಿದೆಯಾದರೂ ಬರ ಹೆಚ್ಚಾಗಿ, ಹುಲ್ಲು ಸಿಗುತ್ತಿಲ್ಲ. ಇನ್ನೂ ಹೆಚ್ಚು ಹಸುಗಳನ್ನು ಸಾಕಲು ಸಾಲ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರಿಗೆ ಸಮಸ್ಯೆಯ ಮೂಲವೇ ಅರ್ಥವಾದಂತಿಲ್ಲ.
ಅದೇ ಸಂದರ್ಭದಲ್ಲಿ ಕಾಂಗ್ರೆಸ್‍ನ ಪ್ರಣಾಳಿಕೆಯಲ್ಲಿ ಪ್ರತ್ಯೇಕ ರೈತ ಬಜೆಟ್ ಮತ್ತು ಹಾಲಿಗೆ ಪ್ರೋತ್ಸಾಹಧನ ನೀಡುವ ಭರವಸೆಯಿದೆ. ಈಗಾಗಲೇ ಕರ್ನಾಟಕದಲ್ಲಿ ಆ ವ್ಯವಸ್ಥೆ ಇದೆ. ಇದು ಗುಜರಾತ್‍ನ ಹಾಲು ಉತ್ಪಾದಕರಿಗೂ ಗೊತ್ತಿರುವ ವಿಚಾರವಾಗಿದೆ. ಗೋಪಾಲಕ ಸಮುದಾಯವಾದ ಮಾಲ್ಧಾರಿಗಳು ನರೇಂದ್ರ ಮೋದಿಯ ಸ್ವಂತ ಜಿಲ್ಲೆ ಮೆಹ್ಸಾನಾದಲ್ಲೂ ಸಾಕಷ್ಟಿದ್ದಾರೆ. ಈ ಸರ್ಕಾರವು ತಮಗೇನೂ ಮಾಡುತ್ತಿಲ್ಲ ಎಂಬ ಭಾವನೆ ದಟ್ಟವಾಗಿದ್ದು, ಇದನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಆಧಾರ: ಪ್ರಿಂಟ್ ಮತ್ತು ಗುಜರಾತಿನ
ವಿವಿಧ ಜನಪರ ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...