Homeಮುಖಪುಟಊರಿಗೆ ಆಹಾರದ ಕಿಟ್‌ ಕೇಳಿದರೆ 20% ಕಮಿಷನ್ ಕೇಳಿದ ಬಿಜೆಪಿ ಶಾಸಕ: ಆಡಿಯೋ ವೈರಲ್

ಊರಿಗೆ ಆಹಾರದ ಕಿಟ್‌ ಕೇಳಿದರೆ 20% ಕಮಿಷನ್ ಕೇಳಿದ ಬಿಜೆಪಿ ಶಾಸಕ: ಆಡಿಯೋ ವೈರಲ್

- Advertisement -
- Advertisement -

ಕೊರೊನಾ ಸಂದರ್ಭದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಲು ಮನವಿ ಮಾಡಿದರೆ ಶೇಕಡ 20ರಷ್ಟು ಕಮಿಷನ್ ಕೊಡಬೇಕೆಂದು ತಿಪಟೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ.ನಾಗೇಶ್ ಕೇಳಿರುವ ಆಡಿಯೋ ವೈರಲ್ ಆಗುತ್ತಿದೆ.

ಆಡಿಯೋದಲ್ಲಿರುವ ಮಾತುಗಳು ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಹೀಗೆ ಮಾತನಾಡಿರುವುದು ಅಕ್ರೋಶಕ್ಕೆ ಕಾರಣವಾಗಿದೆ. ಕೊರೊನ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿರುವಾಗ ಬಿಜೆಪಿ ಕಾರ್ಯಕರ್ತ ಉಮಾಶಂಕರ್ ಎಂಬಾತ ನಮ್ಮ ಊರಿಗೆ ಆಹಾರದ ಕಿಟ್ ಗಳನ್ನು ವಿತರಿಸಬೇಕೆಂದು ಮನವಿ ಮಾಡಿದಾಗ ಆಗುತ್ತೆ ಆಗಲ್ಲ ಎಂದಷ್ಟೇ ಉತ್ತರ ಕೊಡಬಹುದಿತ್ತು. ಆದರೆ ಕಮಿಷನ್ ಕೊಡಬೇಕೆಂದು ತಾಕೀತು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಆಡಿಯೋ ಕೇಳಿ

ಊರಿಗೆ ಆಹಾರದ ಕಿಟ್‌ ಕೇಳಿದರೆ 20% ಕಮಿಷನ್ ಕೇಳಿದ ಬಿಜೆಪಿ ಶಾಸಕ

ಊರಿಗೆ ಆಹಾರದ ಕಿಟ್‌ ಕೇಳಿದರೆ 20% ಕಮಿಷನ್ ಕೇಳಿದ ತಿಪಟೂರು ಕ್ಷೇತ್ರದ ಬಿಜೆಪಿ ಶಾಸಕ: ಆಡಿಯೋ ವೈರಲ್

Posted by Naanu Gauri on Wednesday, April 29, 2020

ವೈರಲ್‌ ಆಡಿಯೋದ ಸಂಭಾಷಣೆ ಕೆಳಗಿನಂತಿದೆ.

ಕಾರ್ಯಕರ್ತ:’ಅಣ್ಣಾ ನಾನು,
ಶಾಸಕ: ಹೇಳು ಉಮಾಶಂಕರ
ಕಾರ್ಯಕರ್ತ: ಅಣ್ಣಾ ಊಟ ಆಯ್ತ ಅಣ್ಣಾ
ಕಾರ್ಯಕರ್ತ: ನಗುತ್ತ ಅಣ್ಣಾ ಸಮ್ಮೂರಿಗೂ ಏನಾದ್ರು ನೋಡ್ಬೇಕಾಗಿತ್ತಣ್ಣಾ
ಶಾಸಕ :ಏನ್ ನಾ
ಕಾರ್ಯಕರ್ತ: ಅದೇ ಆಹಾರದ ಕಿಟ್ ಏನಾದ್ರೂ…ವಿತರಣೆ ಮಾ.
ಶಾಸಕ: ‘ಒಂದ್ ಕೆಲ್ಸ ಮಾಡು, ನಿಮಗೆಲ್ಲಾ ಕೆಲ್ಸ ಕೊಟ್ಟಿದ್ದೀನಲ್ಲಾ 20 ಪರ್ಸೆಂಟ್ ದುಡ್ ತಂದ್ಕೊಡಿ ಕೊಡ್ತಿನಿ
ಅಣ್ಣಾ
ನಿಮ್ಗೆಲ್ಲಾ ಕೆಲ್ಸ ಕೊಟ್ಟಿದ್ದೀನಲ್ಲೋ ಅದ್ಕೆಎಲ್ಲಾ ಎಂಎಲ್ಎ ಗಳು 20 ಪರ್ಸೆಂಟ್ ಬಸೂಲಿ ಮಾಡ್ತಾರಲ್ಲ ಹಂಗೆ ನೀವು ತಂಗಂಡ್ ಬಂದ್ ಕೊಡಿ 20 ಪರ್ಷೆಂಟ್ ಕೊಟ್ಬಿಡಿ’
ಕಾರ್ಯಕರ್ತ: ಕೆಲ್ಸ ಎಲ್ಲಣ್ಣ, ಯಾವ್ ಕೆಲ್ಸನಣ್ಣ, ನಗು
ಶಾಸಕ: ಕೆಲ್ಸ ಕೊಟ್ಟಿರೋದೆಲ್ಲ ನೀನ್ ಯಾವ್ದೋ ಒಂದು ಕೆಲ್ಸ ಮಾಡ್ತೀದ್ದೀಯ ನನಗೆ ಗೊತ್ತಿದೆ’
ಕಾರ್ಯಕರ್ತ: ‘ಇಲ್ಲ ಕಣಣ್ಣಾ ನನ್ಗೆ ಯಾವುದು ಕೊಡ್ಸಿಲ್ಲ
ಶಾಸಕ: ಕೊಡ್ಸಿಲ್ಲ, ಅವ್ರು ಕೊಡ್ಸಿರಬೇಕು, ಬೆಸ್ಟ್ ನಿಮಗೆಲ್ಲ ಸಹಾಯ ಮಾಡ್ತೀವಲ್ಲ  ಅವಾಗ 30 ಪರ್ಷೆಂಟ್ ಕಮಿಷನ್ ಹೊಡೀಬೇಕು ನಾವು
ಕಾರ್ಯಕರ್ತ: ನನಗೆ ಯಾರು ಕೊಡ್ಸಿಲ್ಲಣ್ಣ ಅವ್ರು
ಶಾಸಕ ‘ಸರಿ ಬಿಡು’.

ಹೀಗೆ ಇಬ್ಬರ ನಡುವೆ ಸಂಭಾಷಣೆ ನಡೆದು ಆಡಿಯೋ ಮುಕ್ತಾಯವಾಗುತ್ತದೆ. ಕೇವಲ 47 ಸೆಕೆಂಡ್ ಇರುವ ಆಡಿಯೋದಲ್ಲಿ ಕಾರ್ಯಕರ್ತರಿಗೆ ಕೆಲಸ ಕೊಡಿಸಿರುವ ವಿಷಯ, 20 ಪರ್ಸೆಂಟ್ ಕಮಿಷನ್ ಕೊಡಬೇಕೆಂಬುದು ಮತ್ತು ಬೇರೆ ಶಾಸಕರು 30 ಪರ್ಸೆಂಟ್ ಕಮಿಷನ್ ಹೊಡಿತಾರೆ ಎಂಬ ವಿಷಯ ಪ್ರಸ್ತಾಪವಾಗಿದೆ. ಇದು ಬೇರೆಯವರು ಲೂಟಿ ಮಾಡುತ್ತಿದ್ದಾರೆ. ತನಗೇನೂ ಸಿಗುತ್ತಿಲ್ಲ ಎಂಬ ಬೇಸರ ನೋವು ಹತಾಶೆಯನ್ನು ಹೊರಹಾಕಿದಂತೆ ನಾಗೇಶ್ ಮಾತುಗಳು ಇವೆ.  ಕೊರೊನ ಸಂಕಟ ಸಮಯದಲ್ಲಿ ಶಾಸಕರು ಕಮಿಷನ್ ಹೊಡಿಯುತ್ತಿದ್ದಾರೆ ಆರೋಪ ಕೇಳಿಬಂದಿರುವ ನಡುವೆಯೇ ಆಹಾರದ ಕಿಟ್ ಗಳನ್ನು ವಿತರಿಸುವಲ್ಲಿ ಬಾರಿ ಪ್ರಮಾಣದ ಗೋಲ್ ಮಾಲ್ ನಡೆಯುತ್ತಿದೆ ಎಂಬುದಕ್ಕೆ ಆಡಿಯೋ ಸಾಕ್ಷ್ಯ ನೀಡುತ್ತದೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಜೆಪಿ ಶಾಸಕರು ತಮ್ಮ ಪೋಟೋಗಳನ್ನು ಆಹಾರದ ಕಿಟ್‌ಗಳ ಮೇಲೆ ಹಾಕಿಕೊಂಡು ವಿತರಿಸಿದರು. ಶಾಸಕ ಬಿ.ಸಿ.ನಾಗೇಶ್ ಮಾತುಗಳಲ್ಲಿ ವ್ಯಕ್ತವಾಗುವ ಅಂಶವೆಂದರೆ ಶಾಸಕರ ಬಳಿ ಸಹಾಯ ಮತ್ತು ಕೆಲಸ ಪಡೆದಿರುವ ವ್ಯಕ್ತಿಗಳು ಆಹಾರದ ಕಿಟ್ ಗಳಿಗೆ ಹಣ ತೆತ್ತಿದ್ದಾರೆ. ಗುತ್ತಿಗೆದಾರರಿಂದ ಹಣವೂ ಬಂದಿದೆ. ಆಹಾರದ ಕಿಟ್ ಗಳು ಲಭ್ಯವಾಗಿವೆ. ಇದರಿಂದ  ಬಿಜೆಪಿಯ ಬಹುತೇಕ ಶಾಸಕರು ಜನರಿಗೆ ಆಹಾರದ ಕಿಟ್ ಗಳನ್ನು ವಿತರಿಸಲು ಸಾಧ್ಯವಾಗಿದೆ ಎಂಬುದರತ್ತ ನಾಗೇಶ ಮಾತುಗಳು ಬೊಟ್ಟುಮಾಡಿ ತೋರಿಸುತ್ತವೆ.

ದೇಶಭಕ್ತಿ, ಸೇವೆ ಎಂದೆಲ್ಲಾ ಹೇಳಿಕೊಳ್ಳುವ ಬಿಜೆಪಿ ಮುಖಂಡರ ಪೊಳ್ಳುತನವನ್ನು ಆಡಿಯೋ ಬಹಿರಂಗಗೊಳಿಸಿದೆ. ಕೊರೊನ ಸಂಕಷ್ಟದಲ್ಲೂ ಹಣ ಮಾಡುವುದರಲ್ಲಿ ಶಾಸಕರು ನಿರತರಾಗಿದ್ದಾರೆ. ಜನ ಸೇವೆ, ಜನರ ಕೆಲಸ ದೇವರ ಕೆಲಸ ಇವೆಲ್ಲ ಕೇವಲ ಬಾಯಿಯಲ್ಲಿ ಹೇಳುವುದಕ್ಕೆ ಮಾತ್ರ. ಗಾದೆ ಹೇಳೋಕಾಯ್ತು ಬಾನ ಉಣ್ಣೋಕಾಯ್ತು ಎಂಬಂತಿದೆ.


ಇದನ್ನೂ ಓದಿ: ಯುಪಿ ಸಾಧುಗಳ ಹತ್ಯೆಯನ್ನು ಕೋಮುವಾದೀಕರಿಸಬೇಡಿ: ಯೋಗಿಗೆ ಉದ್ಧವ್‌ ಪಾಠ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...