Homeಮುಖಪುಟಊರಿಗೆ ಆಹಾರದ ಕಿಟ್‌ ಕೇಳಿದರೆ 20% ಕಮಿಷನ್ ಕೇಳಿದ ಬಿಜೆಪಿ ಶಾಸಕ: ಆಡಿಯೋ ವೈರಲ್

ಊರಿಗೆ ಆಹಾರದ ಕಿಟ್‌ ಕೇಳಿದರೆ 20% ಕಮಿಷನ್ ಕೇಳಿದ ಬಿಜೆಪಿ ಶಾಸಕ: ಆಡಿಯೋ ವೈರಲ್

- Advertisement -
- Advertisement -

ಕೊರೊನಾ ಸಂದರ್ಭದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಲು ಮನವಿ ಮಾಡಿದರೆ ಶೇಕಡ 20ರಷ್ಟು ಕಮಿಷನ್ ಕೊಡಬೇಕೆಂದು ತಿಪಟೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ.ನಾಗೇಶ್ ಕೇಳಿರುವ ಆಡಿಯೋ ವೈರಲ್ ಆಗುತ್ತಿದೆ.

ಆಡಿಯೋದಲ್ಲಿರುವ ಮಾತುಗಳು ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಹೀಗೆ ಮಾತನಾಡಿರುವುದು ಅಕ್ರೋಶಕ್ಕೆ ಕಾರಣವಾಗಿದೆ. ಕೊರೊನ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿರುವಾಗ ಬಿಜೆಪಿ ಕಾರ್ಯಕರ್ತ ಉಮಾಶಂಕರ್ ಎಂಬಾತ ನಮ್ಮ ಊರಿಗೆ ಆಹಾರದ ಕಿಟ್ ಗಳನ್ನು ವಿತರಿಸಬೇಕೆಂದು ಮನವಿ ಮಾಡಿದಾಗ ಆಗುತ್ತೆ ಆಗಲ್ಲ ಎಂದಷ್ಟೇ ಉತ್ತರ ಕೊಡಬಹುದಿತ್ತು. ಆದರೆ ಕಮಿಷನ್ ಕೊಡಬೇಕೆಂದು ತಾಕೀತು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಆಡಿಯೋ ಕೇಳಿ

ಊರಿಗೆ ಆಹಾರದ ಕಿಟ್‌ ಕೇಳಿದರೆ 20% ಕಮಿಷನ್ ಕೇಳಿದ ಬಿಜೆಪಿ ಶಾಸಕ

ಊರಿಗೆ ಆಹಾರದ ಕಿಟ್‌ ಕೇಳಿದರೆ 20% ಕಮಿಷನ್ ಕೇಳಿದ ತಿಪಟೂರು ಕ್ಷೇತ್ರದ ಬಿಜೆಪಿ ಶಾಸಕ: ಆಡಿಯೋ ವೈರಲ್

Posted by Naanu Gauri on Wednesday, April 29, 2020

ವೈರಲ್‌ ಆಡಿಯೋದ ಸಂಭಾಷಣೆ ಕೆಳಗಿನಂತಿದೆ.

ಕಾರ್ಯಕರ್ತ:’ಅಣ್ಣಾ ನಾನು,
ಶಾಸಕ: ಹೇಳು ಉಮಾಶಂಕರ
ಕಾರ್ಯಕರ್ತ: ಅಣ್ಣಾ ಊಟ ಆಯ್ತ ಅಣ್ಣಾ
ಕಾರ್ಯಕರ್ತ: ನಗುತ್ತ ಅಣ್ಣಾ ಸಮ್ಮೂರಿಗೂ ಏನಾದ್ರು ನೋಡ್ಬೇಕಾಗಿತ್ತಣ್ಣಾ
ಶಾಸಕ :ಏನ್ ನಾ
ಕಾರ್ಯಕರ್ತ: ಅದೇ ಆಹಾರದ ಕಿಟ್ ಏನಾದ್ರೂ…ವಿತರಣೆ ಮಾ.
ಶಾಸಕ: ‘ಒಂದ್ ಕೆಲ್ಸ ಮಾಡು, ನಿಮಗೆಲ್ಲಾ ಕೆಲ್ಸ ಕೊಟ್ಟಿದ್ದೀನಲ್ಲಾ 20 ಪರ್ಸೆಂಟ್ ದುಡ್ ತಂದ್ಕೊಡಿ ಕೊಡ್ತಿನಿ
ಅಣ್ಣಾ
ನಿಮ್ಗೆಲ್ಲಾ ಕೆಲ್ಸ ಕೊಟ್ಟಿದ್ದೀನಲ್ಲೋ ಅದ್ಕೆಎಲ್ಲಾ ಎಂಎಲ್ಎ ಗಳು 20 ಪರ್ಸೆಂಟ್ ಬಸೂಲಿ ಮಾಡ್ತಾರಲ್ಲ ಹಂಗೆ ನೀವು ತಂಗಂಡ್ ಬಂದ್ ಕೊಡಿ 20 ಪರ್ಷೆಂಟ್ ಕೊಟ್ಬಿಡಿ’
ಕಾರ್ಯಕರ್ತ: ಕೆಲ್ಸ ಎಲ್ಲಣ್ಣ, ಯಾವ್ ಕೆಲ್ಸನಣ್ಣ, ನಗು
ಶಾಸಕ: ಕೆಲ್ಸ ಕೊಟ್ಟಿರೋದೆಲ್ಲ ನೀನ್ ಯಾವ್ದೋ ಒಂದು ಕೆಲ್ಸ ಮಾಡ್ತೀದ್ದೀಯ ನನಗೆ ಗೊತ್ತಿದೆ’
ಕಾರ್ಯಕರ್ತ: ‘ಇಲ್ಲ ಕಣಣ್ಣಾ ನನ್ಗೆ ಯಾವುದು ಕೊಡ್ಸಿಲ್ಲ
ಶಾಸಕ: ಕೊಡ್ಸಿಲ್ಲ, ಅವ್ರು ಕೊಡ್ಸಿರಬೇಕು, ಬೆಸ್ಟ್ ನಿಮಗೆಲ್ಲ ಸಹಾಯ ಮಾಡ್ತೀವಲ್ಲ  ಅವಾಗ 30 ಪರ್ಷೆಂಟ್ ಕಮಿಷನ್ ಹೊಡೀಬೇಕು ನಾವು
ಕಾರ್ಯಕರ್ತ: ನನಗೆ ಯಾರು ಕೊಡ್ಸಿಲ್ಲಣ್ಣ ಅವ್ರು
ಶಾಸಕ ‘ಸರಿ ಬಿಡು’.

ಹೀಗೆ ಇಬ್ಬರ ನಡುವೆ ಸಂಭಾಷಣೆ ನಡೆದು ಆಡಿಯೋ ಮುಕ್ತಾಯವಾಗುತ್ತದೆ. ಕೇವಲ 47 ಸೆಕೆಂಡ್ ಇರುವ ಆಡಿಯೋದಲ್ಲಿ ಕಾರ್ಯಕರ್ತರಿಗೆ ಕೆಲಸ ಕೊಡಿಸಿರುವ ವಿಷಯ, 20 ಪರ್ಸೆಂಟ್ ಕಮಿಷನ್ ಕೊಡಬೇಕೆಂಬುದು ಮತ್ತು ಬೇರೆ ಶಾಸಕರು 30 ಪರ್ಸೆಂಟ್ ಕಮಿಷನ್ ಹೊಡಿತಾರೆ ಎಂಬ ವಿಷಯ ಪ್ರಸ್ತಾಪವಾಗಿದೆ. ಇದು ಬೇರೆಯವರು ಲೂಟಿ ಮಾಡುತ್ತಿದ್ದಾರೆ. ತನಗೇನೂ ಸಿಗುತ್ತಿಲ್ಲ ಎಂಬ ಬೇಸರ ನೋವು ಹತಾಶೆಯನ್ನು ಹೊರಹಾಕಿದಂತೆ ನಾಗೇಶ್ ಮಾತುಗಳು ಇವೆ.  ಕೊರೊನ ಸಂಕಟ ಸಮಯದಲ್ಲಿ ಶಾಸಕರು ಕಮಿಷನ್ ಹೊಡಿಯುತ್ತಿದ್ದಾರೆ ಆರೋಪ ಕೇಳಿಬಂದಿರುವ ನಡುವೆಯೇ ಆಹಾರದ ಕಿಟ್ ಗಳನ್ನು ವಿತರಿಸುವಲ್ಲಿ ಬಾರಿ ಪ್ರಮಾಣದ ಗೋಲ್ ಮಾಲ್ ನಡೆಯುತ್ತಿದೆ ಎಂಬುದಕ್ಕೆ ಆಡಿಯೋ ಸಾಕ್ಷ್ಯ ನೀಡುತ್ತದೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಜೆಪಿ ಶಾಸಕರು ತಮ್ಮ ಪೋಟೋಗಳನ್ನು ಆಹಾರದ ಕಿಟ್‌ಗಳ ಮೇಲೆ ಹಾಕಿಕೊಂಡು ವಿತರಿಸಿದರು. ಶಾಸಕ ಬಿ.ಸಿ.ನಾಗೇಶ್ ಮಾತುಗಳಲ್ಲಿ ವ್ಯಕ್ತವಾಗುವ ಅಂಶವೆಂದರೆ ಶಾಸಕರ ಬಳಿ ಸಹಾಯ ಮತ್ತು ಕೆಲಸ ಪಡೆದಿರುವ ವ್ಯಕ್ತಿಗಳು ಆಹಾರದ ಕಿಟ್ ಗಳಿಗೆ ಹಣ ತೆತ್ತಿದ್ದಾರೆ. ಗುತ್ತಿಗೆದಾರರಿಂದ ಹಣವೂ ಬಂದಿದೆ. ಆಹಾರದ ಕಿಟ್ ಗಳು ಲಭ್ಯವಾಗಿವೆ. ಇದರಿಂದ  ಬಿಜೆಪಿಯ ಬಹುತೇಕ ಶಾಸಕರು ಜನರಿಗೆ ಆಹಾರದ ಕಿಟ್ ಗಳನ್ನು ವಿತರಿಸಲು ಸಾಧ್ಯವಾಗಿದೆ ಎಂಬುದರತ್ತ ನಾಗೇಶ ಮಾತುಗಳು ಬೊಟ್ಟುಮಾಡಿ ತೋರಿಸುತ್ತವೆ.

ದೇಶಭಕ್ತಿ, ಸೇವೆ ಎಂದೆಲ್ಲಾ ಹೇಳಿಕೊಳ್ಳುವ ಬಿಜೆಪಿ ಮುಖಂಡರ ಪೊಳ್ಳುತನವನ್ನು ಆಡಿಯೋ ಬಹಿರಂಗಗೊಳಿಸಿದೆ. ಕೊರೊನ ಸಂಕಷ್ಟದಲ್ಲೂ ಹಣ ಮಾಡುವುದರಲ್ಲಿ ಶಾಸಕರು ನಿರತರಾಗಿದ್ದಾರೆ. ಜನ ಸೇವೆ, ಜನರ ಕೆಲಸ ದೇವರ ಕೆಲಸ ಇವೆಲ್ಲ ಕೇವಲ ಬಾಯಿಯಲ್ಲಿ ಹೇಳುವುದಕ್ಕೆ ಮಾತ್ರ. ಗಾದೆ ಹೇಳೋಕಾಯ್ತು ಬಾನ ಉಣ್ಣೋಕಾಯ್ತು ಎಂಬಂತಿದೆ.


ಇದನ್ನೂ ಓದಿ: ಯುಪಿ ಸಾಧುಗಳ ಹತ್ಯೆಯನ್ನು ಕೋಮುವಾದೀಕರಿಸಬೇಡಿ: ಯೋಗಿಗೆ ಉದ್ಧವ್‌ ಪಾಠ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...