Homeಮುಖಪುಟಬಿಜೆಪಿಯಲ್ಲಿ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಇವರೊಬ್ಬರೆ ಎಂದ ರಾಹುಲ್ ಗಾಂಧಿ!!

ಬಿಜೆಪಿಯಲ್ಲಿ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಇವರೊಬ್ಬರೆ ಎಂದ ರಾಹುಲ್ ಗಾಂಧಿ!!

- Advertisement -
- Advertisement -

ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಈ ನಡುವೆ ಬಿಜೆಪಿಯಲ್ಲಿರುವ ಅತ್ಯಂತ ಪ್ರಾಮಾಣಿಕ ವ್ಯಕ್ತಿಯೆಂದರೆ ಎಂಎಲ್‍ಎ ಬಕ್ಷಿಶ್ ಸಿಂಗ್ ವರ್ಕ್. ಯಾಕೆಂದರೆ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯಿಂದಾಗಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ ಎಂದು ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

ಇವಿಎಂ ಎಂದರೆ “ಎವೆರಿ ವೋಟ್‌ ಟು ಮೋದಿ”, ಮತದಾರರು ಇವಿಎಂನಲ್ಲಿ ಯಾವ ಪಕ್ಷದ ಬಟನ್ ಒತ್ತಿದರೂ ಸಹ ಆ ವೋಟ್ ಆಡಳಿತದಲ್ಲಿರುವ ಬಿಜೆಪಿಗೆ ಹೋಗುತ್ತದೆ’ ಎಂದು ಈ ಹಿಂದೆ ಬಿಜೆಪಿ ಮುಖಂಡ ಬಕ್ಷಿಶ್ ಸಿಂಗ್ ವರ್ಕ್ ಹೇಳಿದ್ದರು. ಅದಕ್ಕೆ ಇಂದು ರಾಹುಲ್ ಛಾಟಿ ಬೀಸಿದ್ದಾರೆ.

ನೀವು ಎಲ್ಲಿಂದಾದರೂ ಮತ ಹಾಕಿ. ಆ ಮತ ಯಾರಿಗೆ ಹಾಕಿದ್ದೀರೆಂದು ನಮಗೆ ಗೊತ್ತಾಗುತ್ತದೆ. ಯಾರು ಯಾರಿಗೆ ಮತ ಹಾಕಿದ್ದರೆಂದು ನಮಗೆ ಗೊತ್ತಾಗುವುದಿಲ್ಲ ಎಂದು ತಿಳಿಯಬೇಡಿ. ಏಕೆಂದರೆ ಮೋದಿ ಮತ್ತು ಮನೋಹರ್‌ ಲಾಲ್‌ ಕಟ್ಟರ್‌ರವರು ಬಹಳ ಚಾಣಾಕ್ಷರಿದ್ದಾರೆ. ನಮಗೆ ಎಲ್ಲಾವೂ ಗೊತ್ತಾಗುತ್ತದೆ. ನೀವು ಯಾರಿಗೆ ಮತ ಹಾಕಿದರೂ ಅದು ಬಿಜೆಪಿಗೆ ಬೀಳುತ್ತದೆ. ಆ ರೀತಿ ಇವಿಯಂ ಅನ್ನು ಮಾಡಿಕೊಂಡಿದ್ದೇವೆ ಎಂದು ಬಿಜೆಪಿಯ ಬಕ್ಷಿಶ್ ಸಿಂಗ್ ಹೇಳಿದ್ದರು.

ಬಕ್ಷಿಶ್ ಸಿಂಗ್ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅವರು ಬಿಜೆಪಿಯು ಮತದಾರರ ಕಣ್ಣಿಗೆ ಮಣ್ಣೆರೆಚುತ್ತಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಇತ್ತ ಬಕ್ಷಿಶ್ ಸಿಂಗ್ ಅವರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಹೀಗೆ ನಾನು ಹೇಳಿಲ್ಲ, ಇದೊಂದು ನಕಲಿ ವಿಡಿಯೋ ಎಂದು ಬಕ್ಷಿಶ್ ಸಿಂಗ್ ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...