ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಈ ನಡುವೆ ಬಿಜೆಪಿಯಲ್ಲಿರುವ ಅತ್ಯಂತ ಪ್ರಾಮಾಣಿಕ ವ್ಯಕ್ತಿಯೆಂದರೆ ಎಂಎಲ್ಎ ಬಕ್ಷಿಶ್ ಸಿಂಗ್ ವರ್ಕ್. ಯಾಕೆಂದರೆ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯಿಂದಾಗಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಇವಿಎಂ ಎಂದರೆ “ಎವೆರಿ ವೋಟ್ ಟು ಮೋದಿ”, ಮತದಾರರು ಇವಿಎಂನಲ್ಲಿ ಯಾವ ಪಕ್ಷದ ಬಟನ್ ಒತ್ತಿದರೂ ಸಹ ಆ ವೋಟ್ ಆಡಳಿತದಲ್ಲಿರುವ ಬಿಜೆಪಿಗೆ ಹೋಗುತ್ತದೆ’ ಎಂದು ಈ ಹಿಂದೆ ಬಿಜೆಪಿ ಮುಖಂಡ ಬಕ್ಷಿಶ್ ಸಿಂಗ್ ವರ್ಕ್ ಹೇಳಿದ್ದರು. ಅದಕ್ಕೆ ಇಂದು ರಾಹುಲ್ ಛಾಟಿ ಬೀಸಿದ್ದಾರೆ.
The most honest man in the BJP. pic.twitter.com/6Q4D43uo0d
— Rahul Gandhi (@RahulGandhi) October 21, 2019
ನೀವು ಎಲ್ಲಿಂದಾದರೂ ಮತ ಹಾಕಿ. ಆ ಮತ ಯಾರಿಗೆ ಹಾಕಿದ್ದೀರೆಂದು ನಮಗೆ ಗೊತ್ತಾಗುತ್ತದೆ. ಯಾರು ಯಾರಿಗೆ ಮತ ಹಾಕಿದ್ದರೆಂದು ನಮಗೆ ಗೊತ್ತಾಗುವುದಿಲ್ಲ ಎಂದು ತಿಳಿಯಬೇಡಿ. ಏಕೆಂದರೆ ಮೋದಿ ಮತ್ತು ಮನೋಹರ್ ಲಾಲ್ ಕಟ್ಟರ್ರವರು ಬಹಳ ಚಾಣಾಕ್ಷರಿದ್ದಾರೆ. ನಮಗೆ ಎಲ್ಲಾವೂ ಗೊತ್ತಾಗುತ್ತದೆ. ನೀವು ಯಾರಿಗೆ ಮತ ಹಾಕಿದರೂ ಅದು ಬಿಜೆಪಿಗೆ ಬೀಳುತ್ತದೆ. ಆ ರೀತಿ ಇವಿಯಂ ಅನ್ನು ಮಾಡಿಕೊಂಡಿದ್ದೇವೆ ಎಂದು ಬಿಜೆಪಿಯ ಬಕ್ಷಿಶ್ ಸಿಂಗ್ ಹೇಳಿದ್ದರು.
ಬಕ್ಷಿಶ್ ಸಿಂಗ್ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅವರು ಬಿಜೆಪಿಯು ಮತದಾರರ ಕಣ್ಣಿಗೆ ಮಣ್ಣೆರೆಚುತ್ತಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಇತ್ತ ಬಕ್ಷಿಶ್ ಸಿಂಗ್ ಅವರ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಹೀಗೆ ನಾನು ಹೇಳಿಲ್ಲ, ಇದೊಂದು ನಕಲಿ ವಿಡಿಯೋ ಎಂದು ಬಕ್ಷಿಶ್ ಸಿಂಗ್ ಆರೋಪಿಸಿದ್ದಾರೆ.