Homeಮುಖಪುಟಉತ್ತರ ಭಾರತದ ರಾಜ್ಯಗಳೇ ಟಾರ್ಗೆಟ್‌: 30 ದಿನಗಳಲ್ಲಿ ಗೂಗಲ್‌ ಜಾಹೀರಾತಿಗೆ 30 ಕೋಟಿ ವ್ಯಯಿಸಿದ ಬಿಜೆಪಿ

ಉತ್ತರ ಭಾರತದ ರಾಜ್ಯಗಳೇ ಟಾರ್ಗೆಟ್‌: 30 ದಿನಗಳಲ್ಲಿ ಗೂಗಲ್‌ ಜಾಹೀರಾತಿಗೆ 30 ಕೋಟಿ ವ್ಯಯಿಸಿದ ಬಿಜೆಪಿ

- Advertisement -
- Advertisement -

ಬಿಜೆಪಿ 2024ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಗೂಗಲ್ ಸರ್ಚ್ ಮತ್ತು ಯೂಟ್ಯೂಬ್ ಸೇರಿದಂತೆ ಗೂಗಲ್‌ನ ಡಿಸ್‌ಪ್ಲೇ ನೆಟ್‌ವರ್ಕ್ ಮತ್ತು ಆಲ್ಫಾಬೆಟ್ ಪ್ಲಾಟ್‌ಫಾರ್ಮ್‌ಗಳಿಗೆ ಸಾವಿರಾರು ರಾಜಕೀಯ ಜಾಹೀರಾತುಗಳಿಗೆ 30 ದಿನಗಳಲ್ಲಿ 30 ಕೋಟಿ ರೂ. ವೆಚ್ಚವನ್ನು ಮಾಡಿದೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.

2019ರ ಚುನಾವಣೆಯ ವೇಳೆ ಫೆಬ್ರವರಿಯಿಂದ- ಮೇವರೆಗೆ ನಾಲ್ಕು ತಿಂಗಳುಗಳ ನಡುವೆ ಜಾಹೀರಾತಿಗಾಗಿ ಮಾಡಿದ ವೆಚ್ಚಕ್ಕಿಂತ ಇದು ದುಪ್ಪಟ್ಟಾಗಿದೆ. 2019ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ನಾಲ್ಕು ತಿಂಗಳ ಅವಧಿಯಲ್ಲಿ ಪಕ್ಷವು ಕೇವಲ 12.3 ಕೋಟಿ ರೂ.ವೆಚ್ಚವನ್ನು ಮಾಡಿತ್ತು. ಅದೇ ಅವಧಿಯಲ್ಲಿ ಪ್ರಮುಖ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ವೆಚ್ಚ 2.99 ಕೋಟಿ ರೂ.ಆಗಿತ್ತು. ಫೆಬ್ರವರಿ 2024ರಲ್ಲಿ ಕಾಂಗ್ರೆಸ್‌ ಪಕ್ಷವು Google ಜಾಹೀರಾತುಗಳ ಮೂಲಕ ಯಾವುದೇ ಸಂದೇಶವನ್ನುಪ್ರಚಾರ ಮಾಡಿಲ್ಲ ಎನ್ನುವುದು ತಿಳಿಯುತ್ತದೆ.

30 ದಿನಗಳಲ್ಲಿ ಅಂದರೆ ಜನವರಿ 29ರಿಂದ ಫೆಬ್ರವರಿ 28ರ ನಡುವೆ ಜಾಹೀರಾತಿಗಾಗಿ ಬಿಜೆಪಿ 29.7 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಗೂಗಲ್ ಜಾಹೀರಾತುಗಳ ಕುರಿತ ಡೇಟಾ ತೋರಿಸುತ್ತದೆ. ಗೂಗಲ್‌ 12,600ಕ್ಕೂ ಹೆಚ್ಚು ಜಾಹೀರಾತುಗಳನ್ನು ಸ್ಟ್ರೀಮ್ ಮಾಡಿದೆ. ಹೆಚ್ಚಾಗಿ ವೀಡಿಯೊಗಳನ್ನು ಅಂದರೆ 75%ದಷ್ಟು ವಿಡಿಯೋ ಜಾಹೀರಾತುಗಳನ್ನು ಪ್ರಸಾರ ಮಾಡಿದೆ. ಇದು ಬಹು ಭಾರತೀಯ ಭಾಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರವನ್ನು ಮಾಡುತ್ತದೆ. ಇವುಗಳಲ್ಲಿ ಹೆಚ್ಚಿನವು ವೀಡಿಯೊ ಜಾಹೀರಾತುಗಳಾಗಿದ್ದು, 50%ಕ್ಕಿಂತ ಹೆಚ್ಚು ಜಾಹೀರಾತುಗಳನ್ನು ಪ್ಲಾಟ್‌ಫಾರ್ಮ್ ನೀತಿಯ ಉಲ್ಲಂಘನೆಗಾಗಿ Googleನಿಂದ ತೆಗೆದುಹಾಕಲಾಗಿದೆ.

30 ದಿನಗಳಲ್ಲಿ ಸುಮಾರು 30 ಕೋಟಿ ರೂಪಾಯಿಗಳ ವೆಚ್ಚವು ಭಾರತದಲ್ಲಿ ಆನ್‌ಲೈನ್ ರಾಜಕೀಯ ಜಾಹೀರಾತುಗಳ ಹೆಚ್ಚಳದ ಗಮನಾರ್ಹ ಸೂಚಕವಾಗಿದೆ. 2019 ರಿಂದ 52,000ಕ್ಕೂ ಹೆಚ್ಚು ಜಾಹೀರಾತುಗಳ ಮೂಲಕ ತನ್ನ ಸಂದೇಶಗಳನ್ನು ಹರಡಲು ಬಿಜೆಪಿ ಇದುವರೆಗೆ 79.16 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ, ಇತ್ತೀಚಿನ ಬ್ಯುಸಿನೆಸ್ ಲೈನ್ ವರದಿಯು ಫೆಬ್ರವರಿ 2019 ಮತ್ತು ಫೆಬ್ರವರಿ 2023ರ ನಡುವೆ ಫೇಸ್‌ಬುಕ್ ಜಾಹೀರಾತುಗಳಿಗಾಗಿ ಬಿಜೆಪಿ 33 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ತಿಳಿಸುತ್ತದೆ.

ಕಳೆದ ತಿಂಗಳಲ್ಲಿ ಹೆಚ್ಚಿನ Google ಜಾಹೀರಾತುಗಳು ಬಿಜೆಪಿ ಅಥವಾ ಅದರ ಮೈತ್ರಿ ಪಾಲುದಾರ ಆಡಳಿತವಿರುವ ಉತ್ತರ ಭಾರತದ ರಾಜ್ಯಗಳ ಮತದಾರರನ್ನು ಗುರಿಯಾಗಿಸಿಕೊಂಡಿವೆ. ಕಳೆದ 30 ದಿನಗಳಲ್ಲಿ ಒಂದು ಕೋಟಿ ವೀಕ್ಷಣೆಯ ಒಂದು ವಿಡಿಯೋಗೆ 30 ಲಕ್ಷಕ್ಕೂ ಅಧಿಕ ವ್ಯಯಿಸಲಾಗಿದೆ. ಬಿಜೆಪಿ 10 ಲಕ್ಷದಿಂದ 30 ಲಕ್ಷದವರೆಗೆ 50 ವೀಡಿಯೋಗಳಿಗೆ ವ್ಯಯಿಸಿದೆ, 100 ವೀಡಿಯೋಗಳಿಗೆ 5 ಲಕ್ಷದಿಂದ 10 ಲಕ್ಷದವರೆಗೆ, 124 ವೀಡಿಯೊಗಳಿಗೆ 2.5 ಲಕ್ಷದಿಂದ 5 ಲಕ್ಷದವರೆಗೆ ಮತ್ತು 109 ವಿಡಿಯೋಗಳಿಗೆ 1 ಲಕ್ಷದಿಂದ 2.5 ಲಕ್ಷದವರೆಗೆ ವ್ಯಯಿಸಲಾಗಿದೆ ಎಂದು ವರದಿ ತಿಳಿಸಿದೆ.

2019ರಿಂದ ಕಳೆದ ಐದು ವರ್ಷಗಳ ದತ್ತಾಂಶವು, ಗೂಗಲ್ ಜಾಹೀರಾತುಗಳಿಗಾಗಿ ಬಿಜೆಪಿ ಹೆಚ್ಚು ಹಣವನ್ನು ಖರ್ಚು ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ  8.9 ಕೋಟಿ ವ್ಯಯಿಸಿ ಅಗ್ರಸ್ಥಾನದಲ್ಲಿದೆ ಎನ್ನುವುದನ್ನು ತೋರಿಸುತ್ತದೆ. ಕರ್ನಾಟಕದ ನಂತರ ಉತ್ತರಪ್ರದೇಶ 7.76 ಕೋಟಿ ರೂ. ವ್ಯಯಿಸಿದೆ, ದೆಹಲಿ 6.84 ಕೋಟಿ ವ್ಯಯಿಸಿದೆ, ಗುಜರಾತ್ 6.1 ಕೋಟಿ ರೂ. ವ್ಯಯಿಸಿದೆ, ಮಧ್ಯಪ್ರದೇಶ 5.9 ಕೋಟಿ ರೂ. ವ್ಯಯಿಸಿದೆ, ಬಿಹಾರ  4.38 ಕೋಟಿ ರೂ.ವ್ಯಯಿಸಿದೆ, ಪಶ್ಚಿಮ ಬಂಗಾಳ 3.46 ಕೋಟಿ ರೂ.ವ್ಯಯಿಸಿದೆ, ತೆಲಂಗಾಣ 3.18 ಕೋಟಿ ರೂ ವ್ಯಯಿಸಿದೆ, ಮಹಾರಾಷ್ಟ್ರ 3 ಕೋಟಿ ಮತ್ತು ಹರಿಯಾಣ 2.6 ಕೋಟಿ ರೂ.ವ್ಯಯಿಸಿದೆ ಎಂದು ವರದಿ ತಿಳಿಸಿದೆ.

50% ಕ್ಕಿಂತ ಹೆಚ್ಚು ಬಿಜೆಪಿ ವೀಡಿಯೊ ಜಾಹೀರಾತುಗಳನ್ನು ತೆಗೆದು ಹಾಕಿದ ಗೂಗಲ್‌

Googleನ ಜಾಹೀರಾತು ನೀತಿ ಉಲ್ಲಂಘನೆಗಾಗಿ ಬಿಜೆಪಿಯ 50%ಕ್ಕಿಂತ ಹೆಚ್ಚು ವೀಡಿಯೊಗಳನ್ನು Googleನಿಂದ ತೆಗೆದು ಹಾಕಲಾಗಿದೆ. Google ಜಾಹೀರಾತುದಾರರಿಗೆ ಮೂರು ಮುಖ್ಯ ಫ್ಲ್ಯಾಟ್‌ ಫಾರ್ಮ್‌ ನೀಡುತ್ತದೆ. Google ಹುಡುಕಾಟ, ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಮತ್ತು YouTube ಮೂಲಕ ಜಾಹೀರಾತು ಪ್ರಚಾರ ಮಾಡುತ್ತದೆ. ಅವುಗಳನ್ನು ವಯಸ್ಸು, ಲಿಂಗ ಮತ್ತು ಪೋಸ್ಟಲ್ ಕೋಡ್ ಸೇರಿ ನಿಯಮಗಳಂತೆ ಪ್ರೇಕ್ಷಕರನ್ನು ಸೀಮಿತಗೊಳಿಸುತ್ತದೆ. ಬಿಜೆಪಿಯ ವೀಡಿಯೊಗಳನ್ನು ಏಕೆ ತೆಗೆದುಹಾಕಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ Google ಕಾರಣವನ್ನು ಬಹಿರಂಗಪಡಿಸುವುದಿಲ್ಲ ಮತ್ತು ಕೇವಲ ‘ನೀತಿ ಉಲ್ಲಂಘನೆಗಾಗಿ’ ಅವುಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳುತ್ತದೆ. ಅಳಿಸಿದ ವೀಡಿಯೊಗಳನ್ನು ವೀಕ್ಷಿಸಲು ಇದು ಬಳಕೆದಾರರಿಗೆ ಅನುಮತಿಸುವುದಿಲ್ಲ.

ಭಾರತೀಯ ಚುನಾವಣಾ ಆಯೋಗ (ಇಸಿಐ) ನೀಡಿರುವ ಸೂಚನೆಗಳ ಪ್ರಕಾರ, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳು ಸೇರಿದಂತೆ ಅಂತರ್ಜಾಲದಲ್ಲಿ ಪೋಸ್ಟ್ ಮಾಡಲಾದ ವಿಷಯಕ್ಕೆ ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ಸೂಚನೆಗಳು ಅನ್ವಯಿಸುತ್ತವೆ. 2019ರಲ್ಲಿ ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಬಿಜೆಪಿಯು ಏಪ್ರಿಲ್ 6 ರಿಂದ ಮೇ 17 ರವರೆಗೆ ನಿರಂತರವಾಗಿ ರಾಜಕೀಯ ಜಾಹೀರಾತುಗಳೊಂದಿಗೆ ಅನೇಕ ರಾಜ್ಯಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದೆ.

ಇದನ್ನು ಓದಿ: 8 ದಿನ ಕಳೆದರೂ ಪತ್ತೆಯಾಗದ ನೌಕಾಪಡೆ ಯೋಧ; ‘ನನ್ನ ಮಗ ಎಲ್ಲಿದ್ದಾನೆ..?’ ಎಂದು ಕಣ್ಣೀರಿಡುತ್ತಿರುವ ಹೆತ್ತವರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...