Homeಮುಖಪುಟಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು... ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ.

- Advertisement -
- Advertisement -

| ಅರನಿ ಬಸು | ಸಂಶೋಧನಾ ವಿದ್ಯಾರ್ಥಿ

ಚರಿತ್ರೆಯನ್ನು ಸಂಯೋಜನಗೊಳಿಸುವ ಘಟನೆಗಳು ಇರುತ್ತವೆ. ಬಂಗಾಳದಲ್ಲಿ ಮೇ 23, 2019 ಅಂಥದ್ದೊಂದು. ಬಂಗಾಳದಲ್ಲಿ ಹಿಂದುತ್ವ ಬ್ರಿಗೇಡ್ ದೊಡ್ಡಮಟ್ಟದಲ್ಲಿ ಒಳಹೊಕ್ಕ ಮೇಲೆ, ಬರಲಿರುವ ದಿನಗಳಲ್ಲಿ ಇಲ್ಲಿನ ಸಮಾಜೋ-ಆರ್ಥಿಕ ವಿನ್ಯಾಸವೇ ತ್ವರಿತಗತಿಯಲ್ಲಿ ‘ಬಲ’ಕ್ಕೆ ಶಿಫ್ಟ್ ಆಗಬಹುದು. ಇದೇ ಹೊತ್ತಿಗೆ ಬಿಜೆಪಿಯ ಈ ಕ್ಷಿಪ್ರ ಉದಯವು, ಮಮತಾ ಬ್ಯಾನರ್ಜಿ ಮತ್ತವರ ಪಕ್ಷಕ್ಕೆ ಮರಣಗಂಟೆ ಆಗಲೂಬಹುದು.

ಬಿಜೆಪಿ ಹೀಗೆ ಬಂಗಾಳದಲ್ಲಿ ಗಟ್ಟಿಯಾಗಿ ಮತ್ತು ಅಗ್ರಸಿವ್ ಆಗಿ ನುಗ್ಗುತ್ತದೆ ಎಂದು ನಮ್ಮಲ್ಲಿ ಎಷ್ಟು ಜನ ಕಲ್ಪಿಸಿಕೊಂಡಿದ್ದೆವು? ಇಲ್ಲಿವರೆಗೆ ಬಂಗಾಳ ಮತ್ತು ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳು ಹಿಂದುತ್ವದ ಅಲೆಗೆ ವಿಚಲಿತರಾಗಿರಲಿಲ್ಲ. ಆದರೆ ಈಗ ಕೇಸರಿ ಅಲೆ ಬಂಗಾಳ ಹೊಕ್ಕಾಗಿದೆ, ಇದು ನಮಗೆ ಆತ್ಮವಿಮರ್ಶೆಯ ಕಾಲ. ಸದ್ಯಕ್ಕೆ ಇಲ್ಲಿ ಮೂರು ಪ್ರಶ್ನೆಗಳಿವೆ: 1) ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ 18 ಸೀಟು ಗಳಿಸಲು ಸಾಧ್ಯವಾದದ್ದು ಹೇಗೆ? 2) ಮಮತಾ ಬ್ಯಾನರ್ಜಿಗೆ ಕೈಕೊಟ್ಟಿದ್ದೇನು?. 3) ಬಂಗಾಳದಲ್ಲಿ ಮೊದಲ ಬಾರಿಗೆ ಸಿಪಿಎಂಗೆ ಒಂದೂ ಸೀಟು ಸಿಗಲಿಲ್ಲವೇಕೆ?

2019ರ ಫಲಿತಾಂಶಗಳು ಎರಡು ಅಂಶಗಳನ್ನು ಹೊರಹಾಕಿವೆ: ಜನರಿಗೆ ಮಮತಾ ನೇತೃತ್ವದ ಸರ್ಕಾರದ ಬಗ್ಗೆ ಅತೃಪ್ತಿಯಿತ್ತು… ಮತ್ತು ಎರಡನೇದಾಗಿ ಬಂಗಾಳದ ಜನತೆಗೆ ಕೇಸರಿ ಪಡೆಯನ್ನು ಅಪ್ಪಿಕೊಳ್ಳಲು ಯಾವ ಮುಜುಗುರವೂ ಇಲ್ಲ. ಎರಡೇ ಆಯ್ಕೆಗಳ ನಡುವೆ ಸಿಕ್ಕಿಕೊಂಡಾಗ ಸಿಪಿಎಂ ಸಹಜ ಆಯ್ಕೆ. ಆದರೆ ಅದರ ಸಂಘಟನೆಯ ಸತತ ವಿಘಟನೆಯ ಕಾರಣದಿಂದ ಅದು ಸಾಧ್ಯವಿಲ್ಲದ ಆಯ್ಕೆ.

ನಾವೀಗ ಕೊನೆ ಪ್ರಶ್ನೆಯತ್ತ ಗಮನ ಹರಿಸೋಣ. ಒಂದು ಕಾಲಕ್ಕೆ ಇಲ್ಲಿ ಗಟ್ಟಿ ತಳಹದಿ ಹೊಂದಿದ್ದ ಸಿಪಿಎಂಗೆ ಈಗ ನಾಯಕತ್ವದ ಕೊರತೆ, ಯುವಜನರ ಸಂಘಟನೆಯ ಕೊರತೆ ಮತ್ತು ತಳಮಟ್ಟದ ಸಂಪರ್ಕದ ಕೊರತೆ ಕಾಡುತ್ತಿವೆ. ಇಲ್ಲಿ ಲಕ್ಷಾಂತರ ಜನ ತಮ್ಮನ್ನು ಗುರುತಿಸಿಕೊಳ್ಳಬಯಸುವ ಯುವ ನಾಯಕರ ಕೊರತೆ ಸಿಪಿಎಂನಲ್ಲಿ ತುಂಬಾ ಇದೆ. ಈ ಸಲ ಸ್ವಾತಂತ್ರ್ಯಾ ನಂತರ ಅತಿ ಹೆಚ್ಚಿನ ಮತದಾನ (ಶೆ. 67.11) ಆಗಿದೆ. ಈ ದೃಷ್ಟಿಯಲ್ಲಿ ಈ ಲಕ್ಷಾಂತರ ಜನ ಯಾರಿಗೆ ಮತ ಹಾಕಿದರು? ಬಂಗಾಳದಲ್ಲಿ ಎಡಪಕ್ಷಗಳಿಗೆ ಹಾಕಿರುವ ಸಾಧ್ಯತೆಗಳೇ ಇಲ್ಲ. ಯುವ ನಾಯಕರ ಕೊರತೆ ಮತ್ತು ಒಂದು ಸ್ಪಷ್ಟ ಅಜೆಂಡಾದ ಕೊರತೆಯ ಕಾರಣಕ್ಕೆ. ಅದು ದುರಾದೃಷ್ಟ ಅನಿಸಿದರೂ ಬಂಗಾಳದಲ್ಲಿ ಸಿಪಿಎಂ ಒಂದೂ ಸೀಟೂ ಗೆಲ್ಲಲಿಲ್ಲ ಎನ್ನುವುದು ಅತಾರ್ಕಿಕವಂತೂ ಅಲ್ಲ.

ಎರಡನೇ ಪ್ರಶ್ನೆಗೆ ಬರುವುದಾದರೆ, ಯಾವುದೇ ಯೋಜನೆಗಳ ಜಾರಿಯ ಬಗ್ಗೆ ಕಾಳಜಿ ವಹಿಸದೇ ವೋಟ್‍ವ್ಯಾಂಕ್ ರಾಜಕಾರಣವನ್ನು ದೂರದಿಂದ (ಸುರಂಗ ದೃಷ್ಟಿ) ಅರ್ಥೈಸಿಕೊಂಡಿದ್ದೇ ಮಮತಾರಿಗೆ ಮುಳುವಾಯಿತು. ಪಶ್ಚಿಮ ಬಂಗಾಳದಲ್ಲಿ ಒಂದು ಬಲವಾದ ಅಲ್ಪಸಂಖ್ಯಾತ ಸಮುದಾಯವಿದೆ. ಬಾಬ್ರಿ ಮಸೀದಿ ಉರುಳಿದಾಗ ಈ ರಾಜ್ಯದಲ್ಲಿ ಯಾವುದೇ ಕೋಮು ಕಂಪನ ಸಂಭವಿಸಿರಲಿಲ್ಲ. ಆದರೆ ಈ 8-9 ವರ್ಷಗಳಲ್ಲಿ ಟಿಎಂಸಿ ಮಾಡಿದ ಓಲೈಸುವಿಕೆ ರಾಜಕೀಯ ಮತದಾರರಿಗೆ ಇಷ್ಟವಾಗಿಲ್ಲ ಅನಿಸುತ್ತದೆ. ಉದ್ಯೋಗ ಸೃಷಿಯಲ್ಲಿ ವಿಫಲತೆ, ರಾಜ್ಯದ ಒಳಭಾಗಗಳಲ್ಲಿ ದೌರ್ಜನ್ಯ ಮತ್ತು ಹಿಂಸೆಯ ಯತ್ನಗಳಿಂದಾಗಿ ಬೇಸರಗೊಂಡ ಹಿಂದೂಗಳು ಈ ಸಲ ಕೋಮುವಾದಿ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ.

ಇದರ ಜೊತೆಗೆ ಬಿಜೆಪಿಯ ಸಂಘಟನಾ ಶಕ್ತಿ ಟಿಎಂಸಿ ಮತ್ತು ಸಿಪಿಎಂಗಿಂತ ಪ್ರಬಲವಾಗಿತ್ತು. ಹಿಂದುತ್ವ ಎಂಬ ‘ಮೇವನ್ನು’ ಹಿಡಿದು ಬಂದ ಅವರು, ಮತದಾರರ ನಾಡಿಮಿಡಿತವನ್ನು ಸರಿಯಾಗಿಯೇ ಗ್ರಹಿಸಿದರು, ಸರಿಯಾದ ಸಂದರ್ಭಕ್ಕೆ ಅವರನ್ನು ಹಿಡಿದುಕೊಂಡು ಪರಿಸ್ಥಿಯ ಲಾಭ ಪಡೆದುಕೊಂಡರು. ಈ ಐದು ವರ್ಷ ತಾವು ಎಂತಹ ಆಡಳಿತ ಕೊಟ್ಟೆವು ಎಂಬುದನನ್ನೇನೂ ಹೇಳಲಿಲ್ಲ, ಬದಲಿಗೆ ಏಕೀಕೃತ ಭಾರತದ ವಿಷಯವನ್ನು ‘ಮಾರಿದರು’. ಈಗ ಮತ್ತೆ ಮೊದಲ ಪ್ರಶ್ನೆ, ಅಂದರೆ ಬಿಜೆಪಿಗೆ 18 ಸೀಟು ಸಿಕ್ಕಿದ್ದು ಹೇಗೆ ಎಂಬುದಕ್ಕೆ ಬರೋಣ. ಅದಕ್ಕೆ ಕಾರಣ: ಟಿಎಂಸಿಯ ವಿಫಲಗೊಂಡ ಓಲೈಸುವಿಕೆಯ ನೀತಿ-ಕಾರ್ಯಕ್ರಮಗಳು ಮತ್ತು ಸಿಪಿಎಂ ಸಾರ್ವಜನಿಕ ಜೀವನದೊಂದಿಗೇ ಅದೃಶ್ಯವಾದದ್ದು.

ಮುಂದಿನ ದಾರಿಯ ಬಗ್ಗೆ ಯೋಚಿಸಿದಾಗ, ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು… ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ. ಒಮ್ಮೆ ಬಿಜೆಪಿ ಬಂಗಾಳದಲ್ಲಿ ತನ್ನ ಕೋಮು ಭಯೋತ್ಪಾದನೆಯನ್ನು ಶುರು ಮಾಡಿದರೆ, ಆಡಳಿತದ ಬಗ್ಗೆ ಅದರ ನಿಷ್ಠೆ ಎಂಥದ್ದು ಎಂಬುದು ಜನತೆಗೆ ಅರ್ಥವಾಗಲಿದೆ. ಆಗವರು, ಸಾರ್ವಜನಿಕವಾಗಿ ಅಂತಹ ವೇಷವಿಲ್ಲದಿದ್ದರೂ ಅಂತರಾಳದಲ್ಲಿ ಕೋಮುವಾದಿಯೇ ಆಗಿರುವ ಟಿಎಂಸಿಯ ಆಶ್ರಯದ ಮೊರೆ ಹೋಗಲಾರರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...