Homeಮುಖಪುಟಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು... ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ.

- Advertisement -
- Advertisement -

| ಅರನಿ ಬಸು | ಸಂಶೋಧನಾ ವಿದ್ಯಾರ್ಥಿ

ಚರಿತ್ರೆಯನ್ನು ಸಂಯೋಜನಗೊಳಿಸುವ ಘಟನೆಗಳು ಇರುತ್ತವೆ. ಬಂಗಾಳದಲ್ಲಿ ಮೇ 23, 2019 ಅಂಥದ್ದೊಂದು. ಬಂಗಾಳದಲ್ಲಿ ಹಿಂದುತ್ವ ಬ್ರಿಗೇಡ್ ದೊಡ್ಡಮಟ್ಟದಲ್ಲಿ ಒಳಹೊಕ್ಕ ಮೇಲೆ, ಬರಲಿರುವ ದಿನಗಳಲ್ಲಿ ಇಲ್ಲಿನ ಸಮಾಜೋ-ಆರ್ಥಿಕ ವಿನ್ಯಾಸವೇ ತ್ವರಿತಗತಿಯಲ್ಲಿ ‘ಬಲ’ಕ್ಕೆ ಶಿಫ್ಟ್ ಆಗಬಹುದು. ಇದೇ ಹೊತ್ತಿಗೆ ಬಿಜೆಪಿಯ ಈ ಕ್ಷಿಪ್ರ ಉದಯವು, ಮಮತಾ ಬ್ಯಾನರ್ಜಿ ಮತ್ತವರ ಪಕ್ಷಕ್ಕೆ ಮರಣಗಂಟೆ ಆಗಲೂಬಹುದು.

ಬಿಜೆಪಿ ಹೀಗೆ ಬಂಗಾಳದಲ್ಲಿ ಗಟ್ಟಿಯಾಗಿ ಮತ್ತು ಅಗ್ರಸಿವ್ ಆಗಿ ನುಗ್ಗುತ್ತದೆ ಎಂದು ನಮ್ಮಲ್ಲಿ ಎಷ್ಟು ಜನ ಕಲ್ಪಿಸಿಕೊಂಡಿದ್ದೆವು? ಇಲ್ಲಿವರೆಗೆ ಬಂಗಾಳ ಮತ್ತು ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳು ಹಿಂದುತ್ವದ ಅಲೆಗೆ ವಿಚಲಿತರಾಗಿರಲಿಲ್ಲ. ಆದರೆ ಈಗ ಕೇಸರಿ ಅಲೆ ಬಂಗಾಳ ಹೊಕ್ಕಾಗಿದೆ, ಇದು ನಮಗೆ ಆತ್ಮವಿಮರ್ಶೆಯ ಕಾಲ. ಸದ್ಯಕ್ಕೆ ಇಲ್ಲಿ ಮೂರು ಪ್ರಶ್ನೆಗಳಿವೆ: 1) ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ 18 ಸೀಟು ಗಳಿಸಲು ಸಾಧ್ಯವಾದದ್ದು ಹೇಗೆ? 2) ಮಮತಾ ಬ್ಯಾನರ್ಜಿಗೆ ಕೈಕೊಟ್ಟಿದ್ದೇನು?. 3) ಬಂಗಾಳದಲ್ಲಿ ಮೊದಲ ಬಾರಿಗೆ ಸಿಪಿಎಂಗೆ ಒಂದೂ ಸೀಟು ಸಿಗಲಿಲ್ಲವೇಕೆ?

2019ರ ಫಲಿತಾಂಶಗಳು ಎರಡು ಅಂಶಗಳನ್ನು ಹೊರಹಾಕಿವೆ: ಜನರಿಗೆ ಮಮತಾ ನೇತೃತ್ವದ ಸರ್ಕಾರದ ಬಗ್ಗೆ ಅತೃಪ್ತಿಯಿತ್ತು… ಮತ್ತು ಎರಡನೇದಾಗಿ ಬಂಗಾಳದ ಜನತೆಗೆ ಕೇಸರಿ ಪಡೆಯನ್ನು ಅಪ್ಪಿಕೊಳ್ಳಲು ಯಾವ ಮುಜುಗುರವೂ ಇಲ್ಲ. ಎರಡೇ ಆಯ್ಕೆಗಳ ನಡುವೆ ಸಿಕ್ಕಿಕೊಂಡಾಗ ಸಿಪಿಎಂ ಸಹಜ ಆಯ್ಕೆ. ಆದರೆ ಅದರ ಸಂಘಟನೆಯ ಸತತ ವಿಘಟನೆಯ ಕಾರಣದಿಂದ ಅದು ಸಾಧ್ಯವಿಲ್ಲದ ಆಯ್ಕೆ.

ನಾವೀಗ ಕೊನೆ ಪ್ರಶ್ನೆಯತ್ತ ಗಮನ ಹರಿಸೋಣ. ಒಂದು ಕಾಲಕ್ಕೆ ಇಲ್ಲಿ ಗಟ್ಟಿ ತಳಹದಿ ಹೊಂದಿದ್ದ ಸಿಪಿಎಂಗೆ ಈಗ ನಾಯಕತ್ವದ ಕೊರತೆ, ಯುವಜನರ ಸಂಘಟನೆಯ ಕೊರತೆ ಮತ್ತು ತಳಮಟ್ಟದ ಸಂಪರ್ಕದ ಕೊರತೆ ಕಾಡುತ್ತಿವೆ. ಇಲ್ಲಿ ಲಕ್ಷಾಂತರ ಜನ ತಮ್ಮನ್ನು ಗುರುತಿಸಿಕೊಳ್ಳಬಯಸುವ ಯುವ ನಾಯಕರ ಕೊರತೆ ಸಿಪಿಎಂನಲ್ಲಿ ತುಂಬಾ ಇದೆ. ಈ ಸಲ ಸ್ವಾತಂತ್ರ್ಯಾ ನಂತರ ಅತಿ ಹೆಚ್ಚಿನ ಮತದಾನ (ಶೆ. 67.11) ಆಗಿದೆ. ಈ ದೃಷ್ಟಿಯಲ್ಲಿ ಈ ಲಕ್ಷಾಂತರ ಜನ ಯಾರಿಗೆ ಮತ ಹಾಕಿದರು? ಬಂಗಾಳದಲ್ಲಿ ಎಡಪಕ್ಷಗಳಿಗೆ ಹಾಕಿರುವ ಸಾಧ್ಯತೆಗಳೇ ಇಲ್ಲ. ಯುವ ನಾಯಕರ ಕೊರತೆ ಮತ್ತು ಒಂದು ಸ್ಪಷ್ಟ ಅಜೆಂಡಾದ ಕೊರತೆಯ ಕಾರಣಕ್ಕೆ. ಅದು ದುರಾದೃಷ್ಟ ಅನಿಸಿದರೂ ಬಂಗಾಳದಲ್ಲಿ ಸಿಪಿಎಂ ಒಂದೂ ಸೀಟೂ ಗೆಲ್ಲಲಿಲ್ಲ ಎನ್ನುವುದು ಅತಾರ್ಕಿಕವಂತೂ ಅಲ್ಲ.

ಎರಡನೇ ಪ್ರಶ್ನೆಗೆ ಬರುವುದಾದರೆ, ಯಾವುದೇ ಯೋಜನೆಗಳ ಜಾರಿಯ ಬಗ್ಗೆ ಕಾಳಜಿ ವಹಿಸದೇ ವೋಟ್‍ವ್ಯಾಂಕ್ ರಾಜಕಾರಣವನ್ನು ದೂರದಿಂದ (ಸುರಂಗ ದೃಷ್ಟಿ) ಅರ್ಥೈಸಿಕೊಂಡಿದ್ದೇ ಮಮತಾರಿಗೆ ಮುಳುವಾಯಿತು. ಪಶ್ಚಿಮ ಬಂಗಾಳದಲ್ಲಿ ಒಂದು ಬಲವಾದ ಅಲ್ಪಸಂಖ್ಯಾತ ಸಮುದಾಯವಿದೆ. ಬಾಬ್ರಿ ಮಸೀದಿ ಉರುಳಿದಾಗ ಈ ರಾಜ್ಯದಲ್ಲಿ ಯಾವುದೇ ಕೋಮು ಕಂಪನ ಸಂಭವಿಸಿರಲಿಲ್ಲ. ಆದರೆ ಈ 8-9 ವರ್ಷಗಳಲ್ಲಿ ಟಿಎಂಸಿ ಮಾಡಿದ ಓಲೈಸುವಿಕೆ ರಾಜಕೀಯ ಮತದಾರರಿಗೆ ಇಷ್ಟವಾಗಿಲ್ಲ ಅನಿಸುತ್ತದೆ. ಉದ್ಯೋಗ ಸೃಷಿಯಲ್ಲಿ ವಿಫಲತೆ, ರಾಜ್ಯದ ಒಳಭಾಗಗಳಲ್ಲಿ ದೌರ್ಜನ್ಯ ಮತ್ತು ಹಿಂಸೆಯ ಯತ್ನಗಳಿಂದಾಗಿ ಬೇಸರಗೊಂಡ ಹಿಂದೂಗಳು ಈ ಸಲ ಕೋಮುವಾದಿ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ.

ಇದರ ಜೊತೆಗೆ ಬಿಜೆಪಿಯ ಸಂಘಟನಾ ಶಕ್ತಿ ಟಿಎಂಸಿ ಮತ್ತು ಸಿಪಿಎಂಗಿಂತ ಪ್ರಬಲವಾಗಿತ್ತು. ಹಿಂದುತ್ವ ಎಂಬ ‘ಮೇವನ್ನು’ ಹಿಡಿದು ಬಂದ ಅವರು, ಮತದಾರರ ನಾಡಿಮಿಡಿತವನ್ನು ಸರಿಯಾಗಿಯೇ ಗ್ರಹಿಸಿದರು, ಸರಿಯಾದ ಸಂದರ್ಭಕ್ಕೆ ಅವರನ್ನು ಹಿಡಿದುಕೊಂಡು ಪರಿಸ್ಥಿಯ ಲಾಭ ಪಡೆದುಕೊಂಡರು. ಈ ಐದು ವರ್ಷ ತಾವು ಎಂತಹ ಆಡಳಿತ ಕೊಟ್ಟೆವು ಎಂಬುದನನ್ನೇನೂ ಹೇಳಲಿಲ್ಲ, ಬದಲಿಗೆ ಏಕೀಕೃತ ಭಾರತದ ವಿಷಯವನ್ನು ‘ಮಾರಿದರು’. ಈಗ ಮತ್ತೆ ಮೊದಲ ಪ್ರಶ್ನೆ, ಅಂದರೆ ಬಿಜೆಪಿಗೆ 18 ಸೀಟು ಸಿಕ್ಕಿದ್ದು ಹೇಗೆ ಎಂಬುದಕ್ಕೆ ಬರೋಣ. ಅದಕ್ಕೆ ಕಾರಣ: ಟಿಎಂಸಿಯ ವಿಫಲಗೊಂಡ ಓಲೈಸುವಿಕೆಯ ನೀತಿ-ಕಾರ್ಯಕ್ರಮಗಳು ಮತ್ತು ಸಿಪಿಎಂ ಸಾರ್ವಜನಿಕ ಜೀವನದೊಂದಿಗೇ ಅದೃಶ್ಯವಾದದ್ದು.

ಮುಂದಿನ ದಾರಿಯ ಬಗ್ಗೆ ಯೋಚಿಸಿದಾಗ, ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು… ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ. ಒಮ್ಮೆ ಬಿಜೆಪಿ ಬಂಗಾಳದಲ್ಲಿ ತನ್ನ ಕೋಮು ಭಯೋತ್ಪಾದನೆಯನ್ನು ಶುರು ಮಾಡಿದರೆ, ಆಡಳಿತದ ಬಗ್ಗೆ ಅದರ ನಿಷ್ಠೆ ಎಂಥದ್ದು ಎಂಬುದು ಜನತೆಗೆ ಅರ್ಥವಾಗಲಿದೆ. ಆಗವರು, ಸಾರ್ವಜನಿಕವಾಗಿ ಅಂತಹ ವೇಷವಿಲ್ಲದಿದ್ದರೂ ಅಂತರಾಳದಲ್ಲಿ ಕೋಮುವಾದಿಯೇ ಆಗಿರುವ ಟಿಎಂಸಿಯ ಆಶ್ರಯದ ಮೊರೆ ಹೋಗಲಾರರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...