Homeಅಂತರಾಷ್ಟ್ರೀಯಕಪ್ಪು ಹಣ, ಅನಿಲ್ ಅಂಬಾನಿ, ಮೋದಿ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್: ಒಂದು ಸ್ಫೋಟಕ...

ಕಪ್ಪು ಹಣ, ಅನಿಲ್ ಅಂಬಾನಿ, ಮೋದಿ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್: ಒಂದು ಸ್ಫೋಟಕ ವರದಿ

ಅನಿಲ್ ಅಂಬಾನಿ, ಅವರ ಪತ್ನಿ ಮತ್ತು ಮಕ್ಕಳ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳಬೇಕೆಂಬ ಮನವಿಯನ್ನು ಸ್ವಿಟ್ಜರ್ಲೆಂಡ್‌ನ ಉನ್ನತ ನ್ಯಾಯಾಲಯ ಅಂಗೀಕರಿಸಿದೆ.

- Advertisement -
- Advertisement -
  • ನೂಪೂರ್ ತಿವಾರಿ

ಕೃಪೆ: ನ್ಯೂಸ್‌ಲಾಂಡ್ರಿ

ರಿಲಯನ್ಸ್ ಗ್ರೂಪ್ ಮುಖ್ಯಸ್ಥ, ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳಬೇಕೆಂಬ ಮನವಿಯನ್ನು ಸ್ವಿಟ್ಜರ್ಲೆಂಡ್‌ನ ಉನ್ನತ ನ್ಯಾಯಾಲಯ ಅಂಗೀಕರಿಸಿದೆ.

ಅನಿಲ್ ಅಂಬಾನಿ, ಟೀನಾ ಅಂಬಾನಿ ಮತ್ತು ಅವರ ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಸ್ವಿಸ್ ಫೆಡರಲ್ ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಸ್ವಿಸ್ ಪ್ರಕಟಣೆ ಗೊಥಮ್ ಸಿಟಿ ವರದಿ ಮಾಡಿದೆ.

ಭಾರತೀಯ ಹಣಕಾಸು ಸಚಿವಾಲಯದ ವಿದೇಶಿ ತೆರಿಗೆ ಮತ್ತು ಸಂಶೋಧನಾ ವಿಭಾಗದಿಂದ ಪರಸ್ಪರ ಸಹಾಯಕ್ಕಾಗಿ ಕೋರಿಕೆಯನ್ನು ಅನುಮೋದಿಸುವ ನ್ಯಾಯಾಲಯದ ಏಪ್ರಿಲ್ 29ರ ತೀರ್ಪಿನ ಪ್ರತಿ ನ್ಯೂಸ್‌ಲಾಂಡ್ರಿ ಬಳಿಯಿದೆ. ರಿಲಯನ್ಸ್ ಗ್ರೂಪ್ ಮುಖ್ಯಸ್ಥರು (ಅನಿಲ್ ಅಂಬಾನಿ), ಏಪ್ರಿಲ್ 2011ರಿಂದ ಸೆಪ್ಟೆಂಬರ್ 2018ರ ಅವಧಿಯಲ್ಲಿ ವಿದೇಶಿ ಹಣಕಾಸು ವ್ಯವಹಾರಗಳಲ್ಲಿ ತೋರಿದ ಆಸಕ್ತಿಯನ್ನು ಪರೀಕ್ಷಿಸಲು ಅಂಬಾನಿಯ ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡುವಂತೆ ಭಾರತದ ಹಣಕಾಸು ಇಲಾಖೆ ಕೋರಿತ್ತು.

ಈ ವಿನಿಮಯಕ್ಕೆ ಸ್ವಿಟ್ಜರ್ಲೆಂಡ್ ಅನುಮತಿ ನೀಡಬಾರದು ಎಂದು ವಾದಿಸಿ ಪರಸ್ಪರ ಸಹಾಯವನ್ನು ನಿರ್ಬಂಧಿಸಲು ಸಂಬಂಧಪಟ್ಟ ವ್ಯಕ್ತಿಗಳು ಪ್ರಯತ್ನಿಸಿದ್ದಾರೆ ಎಂದು ತೀರ್ಪು ಹೇಳುತ್ತದೆ. ಆದರೆ ಅವರ ಮನವಿಯನ್ನು ವಜಾಗೊಳಿಸಲಾಯಿತು. ಇದು ಭಾರತೀಯ ಅಧಿಕಾರಿಗಳ ಮನವಿಗೆ ಸಿಕ್ಕ ಪುರಸ್ಕಾರವಾಗಿದೆ. ನ್ಯಾಯಾಲಯದ ತೀರ್ಪು ಅಂಬಾನಿ ಕುಟುಂಬವನ್ನು ಸ್ಪಷ್ಟವಾಗಿ ಹೆಸರಿಸುವುದಿಲ್ಲ, ಆದರೆ ಗೋಥಮ್ ಸಿಟಿ (ಸ್ವಿಟ್ಜರ್‌ಲೆಂಡ್‌ನ ಮಾಧ್ಯಮ), ನ್ಯಾಯಾಲಯದ ದಾಖಲೆಗಳಿಂದ ಎ, ಬಿ, ಸಿ ಮತ್ತು ಡಿ ಎಂದು ಉಲ್ಲೇಖಿಸಲ್ಪಟ್ಟ ವ್ಯಕ್ತಿಗಳು ಅನಿಲ್ ಧೀರೂಭಾಯ್ ಅಂಬಾನಿ, ಟೀನಾ ಅನಿಲ್ ಅಂಬಾನಿ, ಜೈ ಅನ್ಮೋಲ್ ಅನಿಲ್ ಅಂಬಾನಿ ಮತ್ತು ಜೈ ಅನ್ಶುಲ್ ಅನಿಲ್ ಅಂಬಾನಿ ಎಂದು ವಿವರಿಸಿದೆ. ಫ್ರೆಡೆರಿಕ್ ಸೆರಾ ಅವರು ನ್ಯಾಯಾಲಯದಲ್ಲಿ ಇವರ ಪರ ವಾದ ಮಾಡಿದ್ದರು.

ನ್ಯಾಯಾಲಯದ ತೀರ್ಪಿನಲ್ಲಿ ಎ, ಬಿ, ಸಿ ಮತ್ತು ಡಿ ಅಂದರೆ, ಅನಿಲ್ ಅಂಬಾನಿ, ಅವರ ಪತ್ನಿ ಮತ್ತು ಇಬ್ಬರು ಪುತ್ರರು ಎಂದು ಗೊಥಮ್ ಸಿಟಿಗೆ ಕಥೆಯನ್ನು ವರದಿ ಮಾಡಿದ ಫ್ರಾಂಕೋಯಿಸ್ ಪಿಲೆಟ್ ಇದನ್ನು ಹೇಗೆ ದೃಢಪಡಿಸುತ್ತಾರೆ? “ನ್ಯಾಯಾಲಯದ ವರದಿಗಾರರಾಗಿ, ಸ್ವಿಸ್ ಸುಪ್ರೀಂಕೋರ್ಟಿನ ಪ್ರತಿಯೊಂದು ತೀರ್ಪಿನಲ್ಲೂ ಪಕ್ಷಗಳ (ವ್ಯಕ್ತಿ ಅಥವಾ ಕಂಪನಿಗಳ) ಹೆಸರನ್ನು ನೋಡಲು ನಮಗೆ ಅವಕಾಶವಿದೆ” ಎಂದು ಅವರು ವಿವರಿಸಿದರು. “ಗುಮಾಸ್ತರ ಕಚೇರಿಗೆ ಖುದ್ದಾಗಿ ಹೋಗುವುದರಿಂದ ಮಾತ್ರ ಇದು ಸಾಧ್ಯ” ಎಂದು ಅವರು ಹೇಳಿದ್ದಾರೆ.
ಸ್ವಿಟ್ಜರ್ಲೆಂಡ್ ಈ ವರ್ಷ ಇಲ್ಲಿಯವರೆಗೆ ಭಾರತದಿಂದ ತೆರಿಗೆ ವಿನಂತಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎಂದು ಪಿಲೆಟ್ ನ್ಯೂಸ್‌ಲಾಂಡ್ರಿಗೆ ತಿಳಿಸಿದರು. ಅವೆಲ್ಲವನ್ನೂ ಫೆಡರಲ್ ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂದೂ ತಿಳಿಸಿದರು.

ಸ್ವಿಸ್ ಬ್ಯಾಂಕ್‌ಗಳ ಗೌಪ್ಯತೆ

ಸ್ವಿಸ್ ಬ್ಯಾಂಕಿಂಗ್ ಗೌಪ್ಯತೆ ಕಾನೂನುಗಳ ಪ್ರಕಾರ, ವಿವಿಧ ದೇಶದ ಖಾಸಗಿ ಬ್ಯಾಂಕುಗಳ ಮೂಲಕ ಶಂಕಿತ ಹಣ ವರ್ಗಾವಣೆಯ ಬಗ್ಗೆ ಸರ್ಕಾರಗಳು ಮಾಹಿತಿ ಪಡೆಯುವುದು ಇಲ್ಲಿವರೆಗೆ ಅಸಾಧ್ಯವಾಗಿತ್ತು. ಆದರೆ ಈ ಪ್ರಕರಣ ಅದನ್ನು ಮುರಿದು ಹಾಕುವ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಸ್ವಿಸ್ ಕಾನೂನಿಗೆ ತನ್ನ ಸರ್ಕಾರಕ್ಕೆ ಆಡಳಿತಾತ್ಮಕ ನೆರವು ನೀಡುವಂತೆ ವಿಶೇಷ ವಿನಂತಿಯ ಅಗತ್ಯವಿರುತ್ತದೆ, ನಂತರ ಮಾಹಿತಿಯನ್ನು ಒದಗಿಸಲು ಸ್ವಿಸ್ ಬ್ಯಾಂಕುಗಳಿಗೆ ಸೂಚನೆ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ.

ಕಪ್ಪುಹಣ ಇಡಲು ಸುಭದ್ರ ಎಂದು ಸ್ವಿಸ್ ಬ್ಯಾಂಕುಗಳು ಅಪಖ್ಯಾತಿಗೆ ಒಳಗಾಗಿವೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಸ್ವಿಟ್ಜರ್ಲೆಂಡ್ ಸರ್ಕಾರಕ್ಕೆ ಹಲವು ದೇಶಗಳು ಮನವಿ ಮಾಡಿ, ತಮ್ಮ ದೇಶದ ಉದ್ಯಮಿಗಳು, ರಾಜಕಾರಣಿಗಳ ಬ್ಯಾಂಕ್ ವಿವರ ನೀಡಲು ಒತ್ತಾಯಿಸುತ್ತ ಬಂದಿವೆ. ಕೆಲವೊಮ್ಮೆ, ಸರ್ಕಾರಗಳು ತೆರಿಗೆ ಮೂಲಗಳಿಂದ ಆಯ್ದ ಮಾಹಿತಿಯನ್ನು ಪಡೆದುಕೊಳ್ಳುತ್ತವೆ ಅಥವಾ ಅವರ ವಿವೇಚನೆಯಿಂದ ಕಾರ್ಯನಿರ್ವಹಿಸುತ್ತವೆ. ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು “ಪ್ರಭುತ್ವದ ತೆರಿಗೆ ಭಯೋತ್ಪಾದನೆ” ನಡೆಯುತ್ತದೆ.

ಸ್ವಿಸ್ ಬ್ಯಾಂಕ್ ಈಗ ಅಗತ್ಯವಾದ ಮಾಹಿತಿಯನ್ನು ಹಂಚಿಕೊಂಡರೆ, ಅಂಬಾನಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಸಾಬೀತುಪಡಿಸಬಹುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಭಾರತೀಯ ಅಧಿಕಾರಿಗಳು ಪೂರ್ಣ ಚಿತ್ರವನ್ನು ಪಡೆಯಲು ಸಹಾಯ ಮಾಡುತ್ತದೆ. ಆದರೂ, ಅಂತಹ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಭಾರತೀಯ ಅಧಿಕಾರಿಗಳಿಂದ ಪಾರದರ್ಶಕತೆ ಅಗತ್ಯವಿರುತ್ತದೆ. ಈ ಹಿಂದೆ, ಕಪ್ಪು ಹಣದ ತನಿಖೆಗೆ ಸಹಾಯ ಮಾಡಲು ನರೇಂದ್ರ ಮೋದಿ ಸರ್ಕಾರ ಮುಂದಾಗಿಲ್ಲ ಎಂದು ಹಲವರು ವಿಶಲ್ ಬ್ಲೋವರ್ಸ್ ಆರೋಪಿಸಿದ್ದಾರೆ.

‘2015ರಲ್ಲಿ, ಸ್ವಿಸ್ ಪ್ರಕಟಣೆಯ ಪ್ರಕಾರ, ಅನಿಲ್ ಅಂಬಾನಿ ಫ್ರಾನ್ಸ್‌ನಲ್ಲಿನ ತನ್ನ ರಿಲಯನ್ಸ್ ಗ್ರೂಪ್ ಕಂಪೆನಿಗಳಿಗೆ ಸಂಬಂಧಿಸಿದಂತೆ 140 ಮಿಲಿಯನ್ ಯುರೋಗಳಷ್ಟು ತೆರಿಗೆ ಹೊಂದಾಣಿಕೆಯನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. “ಲೆ ಮಾಂಡೆ (ಫ್ರಾನ್ಸ್ ಮಾಧ್ಯಮ, ಇತ್ತೀಚೆಗೆ ಕೊರೋನಾ ನಿರ್ವಹಣೆಯ ವಿಫಲತೆಗೆ ಮೋದಿ ಕಾರಣ ಎಂದು ಸಂಪಾದಕೀಯ ಬರೆದಿದ್ದ ಪತ್ರಿಕೆ) ಬಹಿರಂಗಪಡಿಸಿದಂತೆ, ಫ್ರಾನ್ಸ್ ದೇಶದ ಡಸಾಲ್ಟ್ ಕಂಪನಿಯು ಭಾರತದೊಂದಿಗೆ ರಫೇಲ್ ಯುದ್ಧವಿಮಾನಗಳ ಮಾರಾಟದ ಬಗ್ಗೆ ಮಾತುಕತೆ ನಡೆಸುತ್ತಿದ್ದಾಗ ಅದೇ ಸಮಯದಲ್ಲಿ ನಡೆದ ಅನಿಲ್ ಅಂಬಾನಿಯವರ ಈ ‘ವಿದ್ಯಮಾನ’ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮಾರಾಟವು ಪ್ರಭುತ್ವದ ಅತ್ಯುನ್ನತ ಮಟ್ಟದಲ್ಲಿ ಭ್ರಷ್ಟಾಚಾರದ ಅನುಮಾನದಿಂದ ಕಳಂಕಿತವಾಗಿದೆ. ಅದರಲ್ಲಿ ಅನಿಲ್ ಅಂಬಾನಿ ಮುಖ್ಯ ಫಲಾನುಭವಿಗಳಲ್ಲಿ ಒಬ್ಬರು ಎಂದು ಹೇಳಲಾಗಿದೆ” ಎಂದು ಗೊಥಮ್ ಸಿಟಿ ವರದಿ ಹೇಳುತ್ತದೆ.

ಅಗತ್ಯವಾದ ಅನುಭವ ಮತ್ತು ವಿವರಗಳನ್ನು ಹೊಂದಿಲ್ಲದಿದ್ದರೂ ಸಹ, ಇಂಡೋ-ಫ್ರೆಂಚ್ ರಫೇಲ್ ಫೈಟರ್ ಜೆಟ್ ವ್ಯವಹಾರದಲ್ಲಿ ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಅನ್ನು ಡಸಾಲ್ಟ್‌ನ ಕೈಗಾರಿಕಾ ಪಾಲುದಾರನನ್ನಾಗಿ ಮಾಡಲಾಗಿದೆ ಎಂದು ಫ್ರೆಂಚ್ ಸುದ್ದಿ ಪ್ರಕಟಣೆ ಮೀಡಿಯಾಪಾರ್ಟ್ ಬಹಿರಂಗಪಡಿಸಿತ್ತು. ಆಗ 2018ರಲ್ಲಿ ಅಂಬಾನಿ ವಿರುದ್ಧ ಭ್ರಷ್ಟಾಚಾರದ ಅನುಮಾನಗಳು ಎದ್ದವು. ಒಪ್ಪಂದದ ಪ್ರಕಾರ, ರಿಲಯನ್ಸ್ ಡಿಫೆನ್ಸ್‌ಗಾಗಿ ಡಸಾಲ್ಟ್ 30,000 ಕೋಟಿ ರೂ.ಗಳ ವ್ಯವಹಾರವನ್ನು ನೀಡಿತು!

ಫ್ರೆಂಚ್ ಪ್ರಕಟಣೆಯು ಆಗಿನ ಫ್ರೆಂಚ್ ಅಧ್ಯಕ್ಷರಾಗಿದ್ದ ಫ್ರಾಂಕೋಯಿಸ್ ಹೊಲಾಂಡ್ ಅವರನ್ನು ಉಲ್ಲೇಖಿಸಿತ್ತು: “ಇದರಲ್ಲಿ ನಾವು ಯಾವುದೇ ಹೇಳಿಕೆಯನ್ನು ಹೊಂದಿಲ್ಲ. ಭಾರತ ಸರ್ಕಾರ ಈ ಸೇವಾ ಗುಂಪನ್ನು (ಸರ್ವಿಸ್ ಗ್ರೂಪ್- ಅನಿಲ್ ಅಂಬಾಮಿಯ ಕಂಪನಿ) ಪ್ರಸ್ತಾಪಿಸಿತು ಮತ್ತು ಡಸಾಲ್ಟ್ ಕಂಪನಿ ಅಂಬಾನಿ ಸಮೂಹದೊಂದಿಗೆ ಮಾತುಕತೆ ನಡೆಸಿತು. ನಮಗೆ ಆಯ್ಕೆ ಇರಲಿಲ್ಲ, ನಮಗೆ ನೀಡಿದ ಪಾಲುದಾರನನ್ನು ನಾವು ಒಪ್ಪಿಕೊಂಡಿದ್ದೇವೆ…..’

2016 ರಲ್ಲಿ ಮೋದಿ ನೇತೃತ್ವದ ಸರ್ಕಾರ, 7.8 ಬಿಲಿಯನ್ ಯೂರೋ ಒಪ್ಪಂದ ಕುರಿತಂತೆ ಆಗಿನ ಫ್ರೆಂಚ್ ಅಧ್ಯಕ್ಷರಾಗಿದ್ದ ಫ್ರಾಂಕೋಯಿಸ್ ಹೊಲಾಂಡ್ ಅವರ ಹೇಳಿಕೆಯು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು. ಒಪ್ಪಂದದ ಪ್ರಮುಖ ಫಲಾನುಭವಿ ಎಂದು ಅನಿಲ್ ಅಂಬಾನಿಯನ್ನು “ಆಯ್ಕೆ ಮಾಡಲಾಗಿದೆ” ಎಂದು ತೋರುತ್ತದೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗಿತ್ತು. ಆಗಿನ ಫ್ರೆಂಚ್ ಅಧ್ಯಕ್ಷರ ಪಾಲುದಾರ ನಟ ಜೂಲಿ ಗಯೆತ್‌ಗೆ ರಿಲಯನ್ಸ್ ಗ್ರೂಪ್ ಹಣ ನೀಡಿದೆ ಎಂದು ತಿಳಿದುಬಂದಿತ್ತು.

2008 ರಲ್ಲಿ ಫ್ರಾಂಕೊ-ಇಟಾಲಿಯನ್ ವಿಶಲ್ ಬ್ಲೋವರ್ ಹೆರ್ವೆ ಫಾಲ್ಸಿಯಾನಿ ಸೋರಿಕೆ ಮಾಡಿದ ಎಚ್‌ಎಸ್‌ಬಿಸಿ ಪಟ್ಟಿಯಲ್ಲಿ ಅನಿಲ್ ಅಂಬಾನಿಯ ಹೆಸರನ್ನು ಗುರುತಿಸಲಾಗಿದೆ ಮತ್ತು ನಂತರ ಅದೇ ಡೇಟಾವನ್ನು ಬಳಸಿಕೊಂಡು 2015 ರಲ್ಲಿ ಸ್ವಿಸ್‌ಲೀಕ್ಸ್‌ನಲ್ಲಿ ಇದನ್ನು ಬಹಿರಂಗ ಮಾಡಲಾಗಿದೆ.  ಅನಿಲ್ ಅಂಬಾನಿಯ ಸಹೋದರ ಮುಖೇಶ್ ಅಂಬಾನಿಯನ್ನೂ ಈ ಪಟ್ಟಿಗಳಲ್ಲಿ ಹೆಸರಿಸಲಾಗಿದೆ. ಸ್ವಿಟ್ಜರ್ಲೆಂಡ್, ದಶಕಗಳಿಂದ, ವಿಶ್ವದ ಪ್ರಮುಖ ತೆರಿಗೆ ಆಶ್ರಯ ತಾಣಗಳಲ್ಲಿ ಒಂದಾಗಿದೆ. ಅಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಸೂಪರ್ ಶ್ರೀಮಂತರು ದೊಡ್ಡ ಪ್ರಮಾಣದ ಹಣವನ್ನು ಮರೆಮಾಡಬಹುದು. ಅದು ಹಣಕಾಸು ಅಧಿಕಾರಿಗಳಿಂದ ಕಂಡುಹಿಡಿಯುವುದು ಕಷ್ಟ ಅಥವಾ ಅಸಾಧ್ಯವಾಗುತ್ತದೆ.

ಮೋದಿಯವರ ಕಪ್ಪುಹಣದ ಬೇಟೆ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್, ಅನಿಲ್ ಅಂಬಾನಿಗೆ ನೆರವು ಮತ್ತು ಸ್ವಿಸ್ ಬ್ಯಾಂಕ್‌ಗಳ ಮರ್ಮ ಈ ಪ್ರಕರಣದಲ್ಲಿ ಒಂದಕ್ಕೊಂದು ತಳುಕು ಹಾಕಿಕೊಂಡಿದೆ.

(ನೂಪುರ್ ತಿವಾರಿ ಪ್ಯಾರಿಸ್‌ನಲ್ಲಿ ನೆಲೆಸಿರುವ ಸ್ವತಂತ್ರ ಪತ್ರಕರ್ತರು. ಕೃಪೆ: ದಿ ನ್ಯೂಸ್ ಲ್ಯಾಂಡ್ರಿ)

ಕನ್ನಡಕ್ಕೆ: ಪಿ.ಕೆ.ಮಲ್ಲನಗೌಡರ್


ಇದನ್ನೂ ಓದಿ: ಸರ್ಕಾರ ಕೈಚೆಲ್ಲಿ ಕುಳಿತಾಗ ಕೈಹಿಡಿದು ನಡೆಸಿದ ಮಾನವೀಯ ಮನಸ್ಸುಗಳಿಗೊಂದು ಸಲಾಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...