Homeಮುಖಪುಟವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು ಗ್ರಂಥಾಲಯಗಳು

ವಿಶ್ವ ಪುಸ್ತಕ ದಿನ; ಸಂಶೋಧನೆಯ ಕೆಲಸದಲ್ಲಿ ನನ್ನ ಅನುಭವವನ್ನು ವಿಸ್ತರಿಸಿದ ಪುಸ್ತಕದ ಅಂಗಡಿಗಳು ಮತ್ತು ಗ್ರಂಥಾಲಯಗಳು

- Advertisement -
- Advertisement -

ಇತಿಹಾಸದ ಅಧ್ಯಯನ ಅಂದರೆ ಹಳೆ ಪುಸ್ತಕ ಮತ್ತು ದಾಖಲೆಗಳ ನಡುವೆ ಸಹಜೀವನ. ಮನುಷ್ಯ ಬರೆದ ಕೃತಿ ಅಥವಾ ಬಿಡಿಸಿದ ಚಿತ್ರ ಆ ಸಮಯದ, ಇತಿಹಾಸದ ಪ್ರಮುಖ ಮೂಲ. ಇಂತಹ ಮೂಲ ಕೃತಿಗಳನ್ನು, ದಾಖಲೆಗಳನ್ನು ಹುಡುಕಿ, ಅವುಗಳನ್ನು ಅಭ್ಯಾಸ ಮಾಡಿ, ಅವುಗಳಲ್ಲಿ ಇರುವ ಪ್ರಮುಖ ಮಾಹಿತಿಗಳನ್ನು ಒರೆಗೆ ಹಚ್ಚಿ ಹೊರತರುವುದು ಇತಿಹಾಸಕಾರರ ಕೆಲಸ. ನಾನು ಇತಿಹಾಸ ಕಲಿಯಲು ಕಾಲೇಜಿಗೆ ಹೋದವನಲ್ಲ. ಆದರೆ ನನಗೆ ನಾನಾ ತರಹದ ಇತಿಹಾಸಗಳಲ್ಲಿ ಆಸಕ್ತಿ.

ಸುಮಾರು ವರ್ಷಗಳ ಹಿಂದೆ, ನನಗೆ ಇತಿಹಾಸದ ಹುಚ್ಚು ಹಿಡಿದ ಹರೆಯದಲ್ಲಿ, ನಾನು ಬೆಂಗಳೂರಿನ ಬ್ರಿಗೇಡ್ ರೋಡಿನ ಸಂದಿಯಲ್ಲಿ ಇರುವ ’ಸೆಲೆಕ್ಟ್’ ಬುಕ್ ಅಂಗಡಿಗೆ ಹೋಗುತ್ತಿದ್ದೆ. ಎರಡೇ ಕೋಣೆ ಇರುವ ಈ ಚಿಕ್ಕ ಅಂಗಡಿಯಲ್ಲಿ ನಾನಾ ತರಹದ-ನಮೂನೆಯ ಪುಸ್ತಕಗಳು. ನನಗೆ ಫಜ್ಲುಲ್ ಹಸನ್ ಅವರ “Bangalore through Centuries” ಪುಸ್ತಕ ಬೇಕಾಗಿತ್ತು. ಆದರೆ ಅಲ್ಲಿಯ ಸಂಗ್ರಹ ನೋಡಿ ಯಾವುದ್ಯಾವದೋ ಪುಸ್ತಕಗಳಲ್ಲಿ ಮೈಮರೆತುಬಿಟ್ಟೆ. ನನ್ನ ವಿಚಿತ್ರ ನಡವಳಿಕೆ ಗಮನಿಸಿದ ಸೆಲೆಕ್ಟ್ ಮಾಲೀಕರಾದ ಮೂರ್ತಿ ಅವರು “ನೀವು ಇಲ್ಲಿಗೆ ಮೊದಲು ಸರ್ತಿ ಬಂದಿದ್ದು, ಅಲ್ವ, ಏನು ಹುಡುಕ್ತಾ ಇದ್ದೀರಾ” ಅಂತ ಕೇಳಿದರು. ನಾನು ಹಸನ್ ಅವರ ಪುಸ್ತಕದ ಹೆಸರು ಹೇಳಿದ ತಕ್ಷಣ ಅವರು “ಅಯ್ಯೋ, ನಿಮಗೆ ಬೆಂಗಳೂರು ಇತಿಹಾಸದಲ್ಲಿ ಆಸಕ್ತಿನಾ? ಬನ್ನಿ ಇಲ್ಲಿ” ಅಂದು, ಹಸನ್ ಅವರ ಪುಸ್ತಕದ ಜೆರಾಕ್ಸ್ ಜೊತೆಗೆ ಇನ್ನು ಎರಡು ಮೂರು ಬೆಂಗಳೂರಿನ ಬಗೆಗಿನ ಪುಸ್ತಕಗಳನ್ನು ಕೊಟ್ಟರು. ಆ ದಿನದ ನಂತರ, ಸೆಲೆಕ್ಟ್ ಅಂಗಡಿ ಹೋಗೋದು ಒಂದು ರೂಢಿಯಾಯಿತು. ಒಂದ ಸರ್ತಿ ಅಂತೂ, ಮೂರ್ತಿ ಅವರು ಮಹಡಿಯ ಕೋಣೆಗೆ ಕರೆದೊಯ್ದರು; ಅಲ್ಲಿ ಸಿಕ್ಕಾಪಟ್ಟೆ ನಕ್ಷೆಗಳು ಇದ್ದವು. ಅವತ್ತು, ನಾನು, ಏನಿಲ್ಲ ಅಂದರು ಮೂರು ಗಂಟೆಗಳ ಕಾಲ ಆ ಹಳೆ ನಕ್ಷೆಗಳನ್ನು ನೋಡುತ್ತಾ ಕೂತಿರಬೇಕು. ನನ್ನನ್ನು ಆ ಕೋಣೆಯಲ್ಲಿ ಬಿಟ್ಟು ಮೂರ್ತಿಯವರು ಅಂಗಡಿಯಲ್ಲಿ ಕುಳಿತಿದ್ದರು. ಹೀಗೆ ಅವರ ಜೊತೆ ಒಂದು ಸಂಬಂಧ ಬೆಳೆಯಿತು. ಅಗಾಗ, ಹೊಸ ಯಾವುದಾದರೂ ಹೊಸ ಪುಸ್ತಕ ಬಂದರೆ ಮೂರ್ತಿ ಅವರು ಫೋನ್ ಮಾಡಿ ತಿಳಿಸುವರು. ಒಂದೊಂದು ಸಾರಿ ಬರಿ ಕಷ್ಟ ಸುಖ ಹಂಚಿಕೊಳ್ಳಕ್ಕೆ ಮಾತ್ರ ಅಲ್ಲಿ ಹೋಗ್ತಾ ಇದ್ದೆ.

ಇತಿಹಾಸದ ಅಧ್ಯಯನ ಮುಂದುವರಿದಂತೆ ಹೊಸ ಹೊಸ ಜಾಗಗಳು ಪರಿಚಯವಾದವು. ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ಮಿಥಿಕ್ ಸೊಸೈಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ ಮತ್ತೆ ನಗರದ ಕೇಂದ್ರ ಗ್ರಂಥಾಲಯಗಳು ನನ್ನ ಮನೆಯಷ್ಟೇ ಪ್ರಿಯವಾದವು. ಇಲ್ಲಿಯ ಸಿಬ್ಬಂದಿ ಕೂಡ ತುಂಬಾ ಸಹಾಯಕಾರಿ. ಅವರಿಗೆ ಪುಸ್ತಕಪ್ರಿಯರನ್ನು ಕಂಡರೆ ಅದೇನೋ ಪ್ರೀತಿ. ಖುಷಿಖುಶಿಯಾಗಿ ಬೇಕಾದ್ದನ್ನು ಹುಡುಕಿ, ಸ್ವಚ್ಛ ಮಾಡಿಕೊಡ್ತಾರೆ. ಕೆಲವರಂತೂ ಟೀ, ಕಾಫಿ ಮತ್ತೆ ತಿಂಡಿಯನ್ನೂ ಕೇಳಿ ಕೊಟ್ಟಿದ್ದುಂಟು.

PC : Edex live

ಈ ಗ್ರಂಥಾಲಯ ಜಗತ್ತು ಮತ್ತೊಂದು ಬೇರೆಯದೇ ಲೋಕ. ಇಲ್ಲಿ ರೀಡಿಂಗ್ ಕೋಣೆಗಳಲ್ಲಿ ಸಾಮೂಹಿಕವಾಗಿ ಓದುತ್ತಿರುವ ಜನರನ್ನು ನೋಡಿದರೆ ನನ್ನ ಮನಸ್ಸಿಗೆ ಏನೋ ಒಂದು ಹಿಗ್ಗು. ಕಬ್ಬನ್‌ಪಾರ್ಕಿನ ಸೆಂಟ್ರಲ್ ಲೈಬ್ರರಿ ಅಂತೂ ಯಾವಾಗಲೂ ಜನರಿಂದ ಕಿಕ್ಕಿರುತ್ತದೆ. ಬಹಳ ವರ್ಷಗಳ ಹಿಂದೆ ಈ ಜನ ಸಮುದ್ರದ ನಡುವೆ ಕುಳಿತು ನಾನು ರಾಮಚಂದ್ರ ಗುಹಾ ಅವರ “A Corner Field” ಓದಿದ್ದೆ. ಇನ್ನೊಂದು ಸಾರಿ ಬೆಂಗಳೂರಿನ ಹಳೆ ನಕ್ಷೆಗಳನ್ನು ಹುಡುಕುತ್ತ ಇದ್ದಾಗ, ಒಬ್ಬ ಗೆಳೆಯ ನೃಪತಂಗ ರೋಡ್‌ನಲ್ಲಿ ಇರುವ ಮಿಥಿಕ್ ಸೊಸೈಟಿಗೆ ಕರೆದೊಯ್ದ. ಅಲ್ಲಿನ ಗ್ರಂಥಾಲಯದಲ್ಲಿ ಬೆಂಗಳೂರು ನಗರದ 1880ರ ಭೂಗೋಳ ನಕ್ಷೆ ಸಿಕ್ಕಿತು. ಆ ದೊಡ್ಡ ನಕ್ಷೆಯನ್ನು ಸಿಬ್ಬಂದಿಯೊಬ್ಬರು ಸೂಕ್ಷ್ಮದಿಂದ ಟೇಬಲ್ ಮೇಲೆ ಹರಡಿ ತೋರಿಸಿದರು. ನಾನು ಬೀದರ್ ಮತ್ತು ಬಿಜಾಪುರ್ ಸುಲ್ತಾನೇಟ್ ಕಲೆ ಇತಿಹಾಸ ಸಂಶೋಧಿಸುವಾಗ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಿಬ್ಬಂದಿಯೊಬ್ಬರು ನನಗೆ ಮಾರ್ಗ್ ಸಾಂಸ್ಕೃತಿಕ ಪತ್ರಿಕೆಯ ನೂರಾರು ಸಂಚಿಕೆಗಳನ್ನು ಕೊಟ್ಟರು. ಅದೇ ದಿನ ಬೀದರ್ ಮೇಲೆ ಒಬ್ಬ ಬ್ರಿಟಿಷ್ ಆಫೀಸರ್ ಬರೆದ ಪ್ರವಾಸಕಥನವನ್ನು ಹುಡುಕಿ ಕೊಟ್ಟರು. ಈ ತರಹದ ಆಕಸ್ಮಿಕ ಕಥನಗಳು ಗ್ರಂಥಾಲಯಗಳಲ್ಲಿ ಸಹಜ. ಯಾವಾಗಾದರೂ ಜೆರಾಕ್ಸ್ ಬೇಕಾದರೆ ಇಂಡಿಯನ್ ಕೌನ್ಸಿಲ್ ಆ ಹಿಸ್ಟಾರಿಕಲ್ ರಿಸರ್ಚ್‌ನ ಸಿಬ್ಬಂದಿ ಅವೆನ್ಯೂ ರೋಡಿನ ಅಂಗಡಿಯಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಿಸಿಕೊಡುತ್ತಾರೆ. ಕನ್ನಡ ರಂಗಭೂಮಿಯ ಬಗ್ಗೆ ಸಂಶೋಧಿಸುತ್ತಿರುವಾಗ ಗೋಖಲೆ ಇನ್‌ಸ್ಟಿಟ್ಯೂಟ್‌ನಲ್ಲಿ ಸಿಕ್ಕ ಹಳೆ ರಂಗಭೂಮಿ ಎಂಬ ಪತ್ರಿಕೆಯ ಸಂಚಿಕೆಗಳು ಹಾಗು ಬೇರೆ ಪತ್ರಿಕೆಗಳಲ್ಲಿ ಮೂಡಿಬಂದ ವಿಮರ್ಶೆಗಳು ತುಂಬಾ ಸಹಾಯವಾದವು. ಇದೇ ಗ್ರಂಥಾಲಯದಲ್ಲಿ ಪ್ರಜಾವಾಣಿ ಹಾಗು ಹಲವಾರು ಪತ್ರಿಕೆಗಳ 30 ವರ್ಷಕ್ಕಿಂತ ಹಿಂದಿನ ಸಂಚಿಕೆಗಳು ಲಭ್ಯವಿವೆ.

ಬಹಳಷ್ಟು ಬೆಂಗಳೂರಿನ ಸುಂದರ ದಿನಗಳನ್ನು ನಾನು ಈ ನಗರದ ಗ್ರಂಥಾಲಯಗಳಲ್ಲಿ ಕಳೆದಿದ್ದೀನಿ. ಅವರ ಸಿಬ್ಬಂದಿಗಳ ಜೊತೆ ಟೀ, ಕಾಫಿ, ಊಟ ಸವಿದಿದ್ದೀನಿ. ಪುಸ್ತಕಗಳ ವಿಶಾಲ ಜಗತ್ತಿನಲ್ಲಿ ವಿದ್ಯೆಯಷ್ಟೇ ಅಲ್ಲ, ಸರಳ ಮನಸ್ಸಿನ ಒಳ್ಳೆ ಜನ ಕೂಡ ಇದ್ದಾರೆ ಅಂತ ನನ್ನ ಅನುಭವಗಳು ನನಗೆ ಕಲಿಸಿವೆ.

ಹಳೆ ಪುಸ್ತಕ ಅಂಗಡಿಗಳ ಅನುಭವ ಕೂಡ ಬೇರೆಯಲ್ಲ. ’ಸೆಲೆಕ್ಟ್’ನಲ್ಲಿ ಮೂರ್ತಿ, ’ನಾಗಶ್ರೀ’ಯಲ್ಲಿ ಪ್ರಸಾದ್, ’ಬುಕ್‌ವರ್ಮ್’ನಲ್ಲಿ ಕೃಷ್ಣರವರ ಜೊತೆಗೆ ಇಂಥವೇ ಸಿಹಿ ಕ್ಷಣಗಳನ್ನು ಕಳೆದಿದ್ದೇನೆ. ನಾನು ಕೆ.ಜಿ.ಎಫ್ ಮೇಲೆ ಒಂದು ಸಾಕ್ಷ್ಯಚಿತ್ರ ಮಾಡುವಾಗ ಪ್ರಸಾದ್‌ರವರನ್ನು ಭೇಟಿ ಆಗಿದ್ದೆ. ಅವರಿಗೆ ಈ ತರಹ ಒಂದು ಚಿತ್ರ ಮಾಡ್ತಿದ್ದೇನೆ ಅಂತ ಹೇಳಿದಾಗ, ಅವರು ದಿಢೀರನೆ ತಾವು ಕುಡಿಯುತ್ತಿದ್ದ ಕಾಫಿ ಬಿಟ್ಟು ಅಂಗಡಿಯೊಳಗೆ ಹೋಗಿ ಗಾಯತ್ರಿ ಚಂದ್ರಶೇಖರ್ ಅವರ “Grit and gold” ಪುಸ್ತಕವನ್ನ ತಂದುಕೊಟ್ಟರು. ಅದರ ಬಗ್ಗೆ ನಾನು ಅಲ್ಲೇ ಮೊದಲು ತಿಳಿದಿದ್ದು. ಅದಷ್ಟೇ ಅಲ್ಲ, ಗಾಯತ್ರಿಯವರ ಮನೆ ಅಡ್ರೆಸ್ ಕೂಡ ಪ್ರಸಾದ್‌ರವರು ಕೊಟ್ಟು ಅವರನ್ನ ಭೇಟಿಯಾಗಲು ಪ್ರೋತ್ಸಾಹಿಸಿದರು. ಕಡೆಗೆ ಗಾಯತ್ರಿ ಅವರು ನನ್ನ ಸಾಕ್ಷ್ಯಚಿತ್ರಕ್ಕೆ ಬಹಳ ಸಹಾಯ ಮಾಡಿದರು ಹಾಗು ಚಿತ್ರದಲ್ಲಿ ಅವರ ಸಂದರ್ಶನ ಕೂಡ ಮೂಡಿಬಂತು.

ಬೆಂಗಳೂರಿನಲ್ಲಿ ಅತಿ ಮುಖ್ಯವಾದ ದಾಖಲೆಗಳಿರುವ ಜಾಗವೆಂದರೆ ವಿಧಾನಸೌಧ. ಇಲ್ಲಿಯ ಸಂಗ್ರಹದಲ್ಲಿ 19ನೆ ಶತಮಾನದಿಂದ ಹಿಡಿದು ಈವರೆಗಿನ ರಾಜ್ಯದ ಅಫಿಷಿಯಲ್ ದಾಖಲೆಗಳು ಇವೆ. ಆದರೆ ಇಲ್ಲಿ ಸಂಶೋಧಕರಿಗೆ ಮಾತ್ರ ಪ್ರವೇಶ. ಮೈಸೂರು ರಾಜ್ಯದ ಆಧುನಿಕ ಇತಿಹಾಸ ಓದುವವರಿಗೆ ಇದು ಪ್ರಮುಖ ಸಂಗ್ರಹ. ನಾನು ಇಲ್ಲಿ ಒಂದೇ ಸಲ ಹೋಗಿದ್ದು. ಇಲ್ಲಿ ಮೂರ್ತಿ, ಪ್ರಸಾದ್ ಅಂಥವರು ಇಲ್ಲ. ಆದರೆ ಪದೇಪದೇ ಹೋದರೆ ಅವರೂ ಸ್ನೇಹಿತರಾಗ್ತಾರೆ ಅನ್ನೋದರಲ್ಲಿ ಸಂದೇಹವೇ ಇಲ್ಲ.

ಅಂತರ್ಜಾಲದ ಸಂಶೋಧನೆಯಲ್ಲಿ ಈ ತರಹ ಮರೆಯಲಾಗದಂತಹ ಅನುಭವಗಳು ಕಮ್ಮಿ. ಆಮೇಲೆ ಆಕಸ್ಮಿಕ ಅನುಭವಗಳೂ ಸಿಗುವುದು ಕಷ್ಟ. ಹಳೆ ಗೆಜೆಟಿಯರ್‌ಗಳು ಮತ್ತೆ “Indian Antiquary” ಮತ್ತೆ “Indian Archaeology Review” ಪತ್ರಿಕೆಗಳು ಆನ್‌ಲೈನ್‌ನಲ್ಲಿ ಸಿಕ್ಕರೂ, ಅವುಗಳನ್ನು ಶೆಲ್ಫ್‌ಗಳಲ್ಲಿ ಹುಡುಕಿ, ಕೈಯಲ್ಲಿ ಹಿಡಿದು, ನೋಟ್ಸ್ ಮಾಡಿಕೊಂಡು, ಗ್ರಂಥಪಾಲಕರ ಅಭಿಪ್ರಾಯ ಕೇಳಿ ಅಭ್ಯಾಸ ಮಾಡೋದು ನನಗೆ ತುಂಬಾ ಅನನ್ಯವಾದ ಅನುಭವವಾಗಿದೆ.

ಕೋವಿಡ್ ರೋಗ ಈ ಗ್ರಂಥಾಲಯಗಳು ಮತ್ತು ಪುಸ್ತಕದ ಅಂಗಡಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈಗ ಓದುವ ಕೋಣೆಗಳು ಮುಚ್ಚಿವೆ. ಮತ್ತೆ ಯಾವಾಗ ಸಾಮೂಹಿಕವಾಗಿ ನಾವು ಓದನ್ನು ಸವಿಯುತ್ತೇವೋ ಹೇಳೋದು ಕಷ್ಟ. ಈ ಕಷ್ಟದ ಕಾಲದಲ್ಲಿ ಈ ವಿದ್ಯೆಯ ದೇಗುಲಗಳನ್ನು ನಮ್ಮ ಪ್ರಾರ್ಥನೆಗಳಲ್ಲಿ ಇಟ್ಟುಕೊಳ್ಳೋಣ ಬನ್ನಿ.

ಬಸವ ಬಿರಾದರ್

ಬಸವ ಬಿರಾದರ್
ಬಸವ ಸ್ವತಂತ್ರ ಸಂಶೋಧಕ ಮತ್ತು ಚಿತ್ರನಿರ್ದೇಶಕ. ಇತಿಹಾಸ, ಸಂಶೋಧನೆ ಮತ್ತು ಚಲನಚಿತ್ರಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಇವರು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಿಯತವಾಗಿ ಪತ್ರಿಕೆಗಳಿಗೆ ಬರೆಯುತ್ತಾರೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ವಿಶ್ವ ಪುಸ್ತಕ ದಿನ ವಿಶೇಷ; ಪುಸ್ತಕಗಳು ಅಳಿವಿನಂಚಿನಲ್ಲಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...