Homeಕರ್ನಾಟಕಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

ಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

- Advertisement -
- Advertisement -

“ನನ್ನ ಮಗ ಯಾರ ತಂಟೆಗೂ ಹೋಗೋನಲ್ಲ… ಮನೆಯ ಜಗುಲಿ ಮೇಲೆ ತನ್ನ ಪಾಡಿಗೆ ತಾನು ಕುಳಿತಿದ್ದವನನ್ನು ಬಿಜೆಪಿಯ ಪಾತಕ ಸ್ವಭಾವದ ಇಬ್ಬರು ಪುಢಾರಿಗಳು ಪ್ಲಾನ್‌ಮಾಡಿ ಏಳು ಕಿ.ಮೀ ದೂರದ ದುರ್ಗಮ ಕಾಡಿನ ಹೊಳೆ ಹತ್ತಿರ ಕರೆದೊಯ್ದು ಕಗ್ಗೊಲೆ ಮಾಡಿದ್ದಾರೆ… ಅಲ್ಲಿಗೆ ಹೋಗಲು ಸರಿಯಾದ ದಾರಿಯೂ ಇಲ್ಲ…. ಏಳೆಂಟು ಅಡಿಯಷ್ಟು ಆಳ ನೀರು ಹರಿವ ಆ ಹೊಳೆಗೆ ಮೀನು ಹಿಡಿಯಲಿಕ್ಕೂ ಯಾರೂ ಹೋಗೋದಿಲ್ಲ…. ಅಂಥ ಕಡೆ ನನ್ನ ಮಗನ ಕರೆದೊಯ್ದು ಕೊಂದು ಹಾಕಿದ್ದಾರೆ…. ನನ್ನ ಮನೆ ದೀಪವೇ ಆರಿಹೋಗಿದೆ…” ಎಂದು ಆ ತಾಯಿ ಭೋರೆಂದು ಬಿಕ್ಕಳಿಸುವಾಗ ಎಂಥವರ ಕರುಳು ಚುರ್ ಅನ್ನದೇ ಇರದು!!

ಆಕೆ ಬ್ರಹ್ಮಾವರ ತಾಲ್ಲೂಕಿನ ಹೊಸೂರು ಗ್ರಾಮದ ಕುರ್ಪಾಡಿಯಲ್ಲಿ ಬೀಡಿ ಕಟ್ಟಿ ಬದುಕು ಸಾಗಿಸುವ ಶೋಭಾ ಶೇರ್ವೆಗಾರ್. ಗಂಡನಿಗೆ ಅನಾರೋಗ್ಯ, ಇರುವ ಚೂರುಪಾರು ಬಂಗಾರ ಗಿರವಿಯಿಟ್ಟು, ಕೂಲಿ ಮಾಡಿ ತನ್ನೆರಡು ಮಕ್ಕಳನ್ನು ಓದಿಸುತ್ತಿದ್ದ ಆಕೆ ಹಿರಿಯ ಮಗ ಶ್ರೇಯಸ್‌ನನ್ನು ಅನ್ಯಾಯವಾಗಿ ಕಳಕೊಂಡ ನೋವಿನಲ್ಲಿ ಜರ್ಜರಿತಳಾಗಿಹೋಗಿದ್ದಾಳೆ. ವಯಸ್ಸಿನಲ್ಲಿ ಶ್ರೇಯಸ್‌ಗಿಂತ ಎರಡು ಪಟ್ಟು ದೊಡ್ಡವನಾದ ಸದಾನಂದ ಪೂಜಾರಿ ಮತ್ತಾತನ ಶಿಷ್ಯ ಯೋಗೀಶ್ ಪೂಜಾರಿ ಎಂಬ ರೌಡಿಗಳೇ ಕೊಲೆ ಮಾಡಿದ್ದಾರೆಂದು ಆಕೆ ನೇರಾನೇರ ಹೇಳುತ್ತ ಬಾಯ್ಬಾಯಿ ಬಡಿದುಕೊಳ್ಳುತ್ತಿದ್ದಾಳೆ. ಈ ಇಬ್ಬರೂ ಪಕ್ಕಾ ಭಜರಂಗಿ ಭೂಪರು ಹಲವು ದೋನಂಬರ್ ದಂಧೆ-ದೊಂಬಿಯ ಈ ಧೀರರ ಬಗ್ಗೆ ಕರ್ಜೆ-ಕಳ್ತೂರು, ಹೊಸೂರು ಪರಿಸರದಲ್ಲಿ ಯಾರೊಬ್ಬರಲ್ಲೂ ಒಳ್ಳೆಯ ಅಭಿಪ್ರಾಯವಿಲ್ಲ.

ಸದಾನಂದ ಪೂಜಾರಿ

ಆ ತಾಯಿ ಆರೋಪಿಸುತ್ತಿರುವ ಸದಾನಂದ ಪೂಜಾರಿ ಯಾರು ಎಂದು ಹುಡುಕಿದರೆ ಗಾಬರಿಯಾಗುತ್ತದೆ. ಹುಡುಗಿಯರಂತೂ ಸದಾನಂದ ಪೂಜಾರಿಯ ನೆರಳು ಕಂಡರೇ ಸಾಕು, ದೂರದಲ್ಲೇ ಅದೃಶ್ಯರಾಗಿ ಬಿಡುತ್ತಾರೆ. ಇಂಥ ಸದಾನಂದ ಪೂಜಾರಿಯ ದಾದಾಗಿರಿ ಯಾವ ರೇಂಜಿಗಿದೆಯೆಂದರೆ, ಕೌಬ್ರಿಗೇಡ್, ಅನೈತಿಕ ಪೊಲೀಸ್ ಪಡೆಯೂ ಆತ ಖತರ್‌ನಾಕ್ ಅಂತಲೇ ಬ್ರಾಂಡ್ ಮಾಡಿಬಿಟ್ಟಿದೆ!! ಆದರೆ ಪೊಲೀಸರು ಮಾತ್ರ ಅದ್ಯಾಕೋ ಸುಮ್ಮನಿದ್ದಾರೆ. ಖಡಕ್ ಎಸ್ಪಿ ನಿಶಾ ಜೇಮ್ಸ್‌ಗೂ ಏನು ಮಾಡೋದಂತಲೇ ಹೊಳೆಯುತ್ತಿಲ್ಲ. ಉಡುಪಿ-ಬ್ರಹ್ಮಾವರದ ಶಾಸಕ ರಂಗೀಲಾ ರಘುಪತಿಭಟ್ಟನ ಅತ್ಯಾಪ್ತ ಸರ್ಕಲ್ಲಿನ ಧಾಂಡಿಗ ಈ ಸದಾನಂದ ಪೂಜಾರಿ ಎಂಬುದೇ ಪೊಲೀಸರ ಕೈಕಟ್ಟಿಹಾಕಿಬಿಟ್ಟಿದೆಯೆಂದು ಜನರಾಡಿಕೊಳ್ಳುತ್ತಿದ್ದಾರೆ…….

ಯೋಗೇಶ್

ಅಂದು ನವೆಂಬರ್ ಐದನೇ ತಾರೀಖು ಮಧ್ಯಾಹ್ನ 12;30ರ ಸುಮಾರಿಗೆ ಪಕ್ಕದ ಮನೆಯ ರಾಕೇಶ್ ಎಂಬ ಹುಡುಗ ಬಂದು ಮೀನು ಹಿಡಿಯಲು ಹೋಗೋಣ ಎಂದು ಶ್ರೇಯಸ್‌ನ ಕರೆದಿದ್ದಾರೆ. ಇಲ್ಲ ನಂಗೆ ಓದೋದಿದೆ ಎಂದು ಹೇಳಿದ್ದಾನೆ ಶ್ರೇಯಸ್. ಒತ್ತಾಯ ಮಾಡಿ ತನ್ನ ಬೈಕಲ್ಲಿ ರಾಕೇಶ್ ಆತನ ಕರೆದುಕೊಂಡು ಮುಡಿಸಾಲು ಹೊಳೆಬಳಿ ಹೋಗಿದ್ದಾನೆ. ಅಲ್ಲಿ ಸದಾನಂದ ಪೂಜಾರಿ ತನ್ನ ಚೇಲಾ ಯೋಗೀಶ್ ಜೊತೆ ತೋಟೆ (ಸ್ಫೋಟಕ) ಹಾಕಿ ಮೀನು ಹಿಡಿಯುತ್ತಿರುತ್ತಾನೆ. ಕೆಲದಿನಗಳ ಹಿಂದೆ ಸಂತೆಕಟ್ಟೆಯಲ್ಲಿ ನಡೆದ ಶಾರದೋತ್ಸವ ಮೆರವಣಿಗೆ ಸಂದರ್ಭದಲ್ಲಿ ಶ್ರೇಯಸ್ ಮತ್ತವನ ಗೆಳೆಯರ ಮೇಲೆ ವಿನಾಕಾರಣ ಮುಗಿಬಿದ್ದಿದ್ದ ಸದಾನಂದ ಪೂಜಾರಿ-ಯೋಗೀಶ್ ಪೂಜಾರಿ ಕಂಡಾಗ ಆತ ಗಾಬರಿಗೆ ಬಿದ್ದಿರಬೇಕು. ಯಾಕೆ ಉಪಾಯವಾಗಿ ರಾಕೇಶ್ ತನ್ನನ್ನು ವೈರಿಗಳ ಕೈಗೆ ಕೊಡುತ್ತಿದ್ದಾನೆಂಬ ಭಯಕ್ಕೂ ಬಿದ್ದಿರಲೇಬೇಕು.

ಹುಡುಗಿ ಒಬ್ಬಳ ವಿಷಯವಾಗಿ ಸದಾನಂದ ಪೂಜಾರಿ ಮತ್ತು ಶ್ರೇಯಸ್ ನಡುವೆ ವೈಮನಸ್ಸು ಬೆಳೆದಿತ್ತು. ಸುರಸುಂದರಾಂಗನೂ, ಪ್ರತಿಭಾನ್ವಿತ ವಿದ್ಯಾರ್ಥಿಯೂ, ಪ್ರಸಿದ್ಧ ವಾಲಿಬಾಲ್ ಪಟುವೂ ಆಗಿದ್ದ ಶ್ರೇಯಸ್‌ಗೆ ಬುಡಕಟ್ಟು ಸಮುದಾಯದ ಚೆಂದದ ಸಹಪಾಠಿ ಜತೆ ಅನ್ಯೋನ್ಯ ಗೆಳೆತನವಿತ್ತು. ಆ ಬಡವರ ಮನೆ ಹುಡುಗಿ ಮೇಲೆ ಸದಾನಂದ ಕಣ್ಣುಹಾಕಿದ್ದ. ಹೇಗಾದರೂ ಮಾಡಿ ಆಕೆಯನ್ನು ತನ್ನ ಅಡ್ಡೆಗೆ ತಂದುಬಿಡುವಂತೆ ಶ್ರೇಯಸ್‌ಗೆ  ಆತ ಒತ್ತಡ ಹಾಕುತ್ತಲೇ ಇದ್ದ. ಇದೇ ಕಾರಣಕ್ಕೆ ಶಾರದೋತ್ಸವ ಹೊತ್ತಲ್ಲಿ ಶ್ರೇಯಸ್‌ಗೆ ಹೆದರಿಸಲು ಸದಾನಂದ ಗ್ಯಾಂಗ್ ಕಟ್ಟಿಕೊಂಡುಹೋಗಿದ್ದ. ಶ್ರೇಯಸ್‌ನ ಪಳಗಿಸಲು ವಿಫಲವಾಗಿದ್ದ ಸದಾನಂದ ಆತನ ಮನ ಒಲಿಸಲಿಕ್ಕೋ ಅಥವಾ ಬೆದರಿಸಲಿಕ್ಕೋ ಭೀಭತ್ಸ ಹೊಳೆ ಹತ್ತಿರ ಕರೆಸಿಕೊಂಡಿದ್ದನಾ ಎಂಬ ಅನುಮಾನ ಊರಲ್ಲಿ ಮಡುಗಟ್ಟಿದೆ.

ಹೊಳೆಯಿಂದ ಹೊರತಂದ ಶ್ರೇಯಸ್‌ನ ಮೃತದೇಹ ಕಂಡವರಿಗೆ ಅದು ನೀರಿಗೆ ಬಿದ್ದು ಸಾವು ಅನ್ನಿಸುತ್ತಿಲ್ಲ. ಕೊಲೆ ಎಂಬ ಅನುಮಾನ ಮೂಡಲು ಇದಕ್ಕೆ ಬಲವಾದ ಸಾಂದರ್ಭಿಕ ಸಾಕ್ಷ್ಯಗಳೂ ಇವೆ. ತಾವು ನೀರಿಗೆ ಬಿದ್ದ ಶ್ರೇಯಸ್‌ನ ಬಚಾಯಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎನ್ನುತ್ತಿರುವ ಸದಾನಂದ ಮತ್ತು ಯೋಗೀಶನ ಬಟ್ಟೆ ಒಂಚೂರು ಒದ್ದೆಯಾಗಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಶ್ರೇಯಸ್‌ನ ಕುತ್ತಿಗೆಯಲ್ಲಿ ಗಾಯದ ಗುರುತೂ ಇತ್ತು. ನಡುವಯಸ್ಸಿಗೆ ಹತ್ತಿರವಿರುವ ಸದಾನಂದನೊಂದಿಗೆ ಹತ್ತೊಂಬತ್ತರ ಪೋರ ಶ್ರೇಯಸ್‌ಗೆ ಮೀನು ಹಿಡಿಯಲು ಜತೆಯಾಗಿ ಹೋಗುವಂತ ದೋಸ್ತಿ ಇರಲು ಸಾಧ್ಯವೇ ಇಲ್ಲ. ಅಲ್ಲದೆ ಹುಡುಗಿ ವಿಷಯವಾಗಿ ಸದಾನಂದ ಸತಾಯಿಸಲು ಶುರುಮಾಡಿದ ನಂತರವಂತೂ ಶ್ರೇಯಸ್ ಆತನ ಫೋನ್ ಕಾಲ್ ಕೂಡ ಸ್ವೀಕರಿಸದೆ ಅವಾಯ್ಡ್ ಮಾಡುತ್ತಿದ್ದನಂತೆ ಎನ್ನುವ ಅವನ ಸ್ನೇಹಿತರು ಶ್ರೇಯಸ್‌ನ ಹೆಣ ಕಂಡ ಹತ್ತಿರದವರು ಆತ ನೀರೇ ಕುಡಿದಿಲ್ಲವೆಂದು ದೃಢವಾಗಿ ಹೇಳುತ್ತಾರೆ.

ಇದೆಲ್ಲ ಸಹಜವಾಗೇ ಕೊಲೆಯ ಶಂಕೆ ಮೂಡಿಸುತ್ತದೆ. ಹೆಣಸಿಕ್ಕ ನಂತರ ಬ್ರಹ್ಮಾವರದ ಪೊಲೀಸರ ವರ್ತನೆಯೂ ಏನೋ ಮುಚ್ಚಿಹಾಕಲು ತಿಣುಕಾಡುತ್ತಿರುವಂತಿದೆ. ಮಣಿಪಾಲದಲ್ಲಿ ಪೋಸ್ಟ್ಮಾರ್ಟಮ್ ನಡೆಯುತ್ತಿದ್ದಾಗ ಸಬ್‌ಇನ್ಸ್ಪೆಕ್ಟರ್ ರಾಘವೇಂದ್ರ ವೈದ್ಯರ ಬಳಿಯೇ ಇದ್ದದ್ದು ಏಕೆ? ಪ್ರಕರಣ ನಡೆದು ಎರಡು ವಾರವಾದರೂ ಪೊಲೀಸರೇಕೆ ಹುಡುಗನ ತಾಯ್ತಂದೆಯ ಹೇಳಿಕೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ? ಶಾಸಕ ರಘುಪತಿ ಭಟ್ಟರ ರಹಸ್ಯ ನಿರ್ದೇಶನ ಪೊಲೀಸರು ಪಾಲಿಸುತ್ತಿದ್ದಾರಾ? ಸದಾನಂದ ಪೂಜಾರಿಯ “ಇತಿಹಾಸ” ಗೊತ್ತಿದ್ದೂ ಪೊಲೀಸರೇಕೆ ಕಾನೂನಿನ ಕುಣಿಕೆ ಬಿಗಿಮಾಡುತ್ತಿಲ್ಲಾ? ಇಂಥ ಚರ್ಚೆ ಈಗ ಉಡುಪಿ-ಬ್ರಹ್ಮಾವರದಾದ್ಯಂತ ಬಿರುಸಾಗಿ ಸಾಗಿದೆ.

ಶ್ರೇಯಸ್‌ನ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಸದಾನಂದ ಪೂಜಾರಿ “ಅಮಾಯಕ”ನೆಂದು ಹೇಳಲು ಸ್ಥಳೀಯರಿಗೆ ಕಾರಣಗಳೇ ಸಿಗುತ್ತಿಲ್ಲ. ಸದ್ಯಕ್ಕೆ ಅಕ್ರಮ ಮರಳು ದಂಧೆಯಲ್ಲಿ ಹೆಬ್ರಿ ಪೊಲೀಸ್ ಸ್ಟೇಷನ್‌ನಲ್ಲೇ ರೌಡಿ ಶೀಟರ್ ಎಂಬ ಕೀರ್ತಿಯೂ ಇದೆ. ತನಗೆ ಎಮ್ಮೆಲ್ಲೆ ಸಾಹೇಬರ ಬಲವಿರುವುದರಿಂದ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತೇನೆಂಬ ಪೊಗರಿನ ಸದಾನಂದ ಕರ್ಜೆ ಪರಿಸರದಲ್ಲಿ ಬಾರಾಭಾನ್ಗಡಿ ಮಾಡುತ್ತಲೇ ಇದ್ದಾನೆ.  ಕೆಲವು ದಿನಗಳ ಹಿಂದೆ ಪಾಪದವರೊಬ್ಬರ ಮನೆಯ ಗೇಟು ಕಿತ್ತು ಎಲ್ಲೋ ಎಸೆದಿದ್ದ ಸದಾನಂದನ ಗ್ಯಾಂಗ್ ಮೇಲೆ ಕಂಪ್ಲೇಂಟೂ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಕರ್ಜೆಯ ಮಹಾಲಿಂಗೇಶ್ವರ ದೇವಳದ ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕನ ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಪ್ರಕರಣ ಕೇಸೂ ಈ ಗ್ಯಾಂಗಿನ ಮೇಲಿದೆ. ದಿನಕ್ಕೊಂದು ಅನಾಹುತ-ಅವ್ಯವಹಾರ ಮಾಡುವ ಸದಾನಂದನ ತಂಡ ಮುಗ್ಧ ಶ್ರೇಯಸ್‌ನ ಸಾಯಿಸಿಲ್ಲವೆಂದು ಹೇಳೋದಾದರೂ ಎನ್ನುವುದು ಊರವರ ಅಭಿಪ್ರಾಯ.

ದುರ್ಬಲ-ಅಸಹಾಯಕ ಶ್ರೇಯಸ್ ಹೆತ್ತವರಿಗೆ ಎಸ್ಪಿ ನಿಶಾ ಮೇಡಮ್ ನ್ಯಾಯ ಕೊಡಿಸುವರಾ? ಒಂದು ವಾರದಲ್ಲಿ ಸರಿಯಾದ ತನಿಖೆ ನಡೆಯದಿದ್ದರೆ ಎಸ್ಪಿ ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಮಾಜಿ ಶಾಸಕ ಪ್ರಮೋದ್ ಮಧ್ವಾರಾಜ್ ಆವಾಜ್ ಹಾಕಿದ್ದಾರೆ. ಆಗಲೇ ಹತ್ತು ದಿನ ಕಳೆದಿದೆ. ಶ್ರೇಯಸ್ ತಾಯ್ತಂದೆ ಪ್ರಮೋದ್‌ರನ್ನು ನಂಬಿಕೊಂಡಿದ್ದಾರೆ. ಏಳು ಮೀನುಗಾರರ ಸುವರ್ಣ ತ್ರಿಭುಜ ನೋಟನ್ನು ಮುಳುಗಿಸಿದ ನೇವಿ ಹಡಗು ಐಎಸ್‌ಎಸ್ ಕೊಚ್ಚಿನ್ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪಿಸದ ಪ್ರಮೋದ್ ಮಧ್ವರಾಜ್ ಶ್ರೇಯಸ್ ಕೇಸ್ ಗಂಭೀರವಾಗಿ ಪರಿಗಣಿಸಿದ್ದಾರಾ? ಎಂಬ ಪ್ರಶ್ನೆ ಏಳುವುದು ಸಹಜವಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆದರೆ ಕೇಂದ್ರ ಮತ್ತು ರಾಜ್ಯ; ಎರಡೂ ಕಡೆ ಮನುವಾದಿಗಳೇ ಅಧಿಕಾರದಲ್ಲಿ ಇರುವುದರಿಂದ ಇದು ಸಾಧ್ಯವಾ?

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...