Homeಕರೋನಾ ತಲ್ಲಣಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

ಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

- Advertisement -
- Advertisement -

ಒನಿಪೆಂಟಾ ಆಂಧ್ರಪ್ರದೇಶದ ಒಂದು ಚಿಕ್ಕ ಹಳ್ಳಿ. ಹಿತ್ತಾಳೆ, ಕಂಚಿನ ಮೇಲೆ ಕುಸುರಿ ಕಲೆಗಾಗಿ ಜಗತ್‌ಪ್ರಸಿದ್ದವಾಗಿದ್ದ ಊರು. ದೇಶದ ಮೂಲೆ ಮೂಲೆಯಿಂದ, ಜಗತ್ತಿನ ನಾನಾ ದೇಶಗಳಿಂದ ಬರುವ ಪ್ರವಾಸಿಗಳಿಂದ ಒನಿಪೆಂಟಾ ಹಳ್ಳಿ ಒಂದು ಕಾಲದಲ್ಲಿ ತುಂಬಿರುತ್ತಿತ್ತು. ಬೇರೆ ಬೇರೆ ಭಾಷೆಯ ಜನರ ಮಾತಿನ ಕಲರವ ಕೇಳುತ್ತಿತ್ತು.  ಚೌಕಾಸಿಯ ವ್ಯಾಪಾರಗಳು ನಡೆಯುತ್ತಿತ್ತು. ಇಂದು ಒನಿಪೆಂಟಾದಲ್ಲಿ ಹೇಳಲಿಕ್ಕೆ ಏನೂ ಇಲ್ಲ. ಪ್ರವಾಸಿಗಳಿಲ್ಲ. ಕಲಾವಿದರೂ ಊರು ಬಿಡುವ ಹಂತಕ್ಕೆ ತಲುಪಿದ್ದಾರೆ. ಕೊರೋನಾ ಸಾಂಕ್ರಾಮಿಕದ ಆರ್ಥಿಕ ಹೊಡೆತಕ್ಕೆ ದೇಶದಲ್ಲಿ ನೂರಾರು ಕಸುಬುಗಳು ನಾಶವಾಗಿವೆ. ಅದರೆ ನಡುವೆ ಒನಿಪೆಂಟಾದ ಹಿತ್ತಾಳೆಯ ಕಲಾವಿದರ ಬದುಕು ಇನ್ನಷ್ಟು ದುಸ್ತರವಾಗಿದೆ.

ಕಳೆದ 15 ತಿಂಗಳುಗಳಿಂದ ಹಿತ್ತಾಳೆಯ ಕಲೆಯನ್ನೇ ನಂಬಿ, ಲೋಹದಲ್ಲಿ ಜೀವ ಹಿಡಿದು ಬದುಕುತ್ತಿದ್ದ ಒನಿಪೆಂಟಾ ಕಲಾವಿದರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ದೇವಸ್ಥಾನಗಳು, ಶಾಲೆ – ಕಾಲೇಜುಗಳು, ಮಾರುಕಟ್ಟೆಗಳು ಕೊರೋನಾ ಕಾರಣಕ್ಕೆ ಬಂದ್‌ ಆಗಿರುವುದರಿಂದ ಹಿತ್ತಾಳೆ ಕಂಚುಗಳ ಮೇಲೆ ಚಿತ್ತಾರ ಮೂಡಿಸುತ್ತಿದ್ದ ಕಲಾವಿದರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ನೂರಕ್ಕು ಹೆಚ್ಚು ಕಲಾವಿದರು ಲೋಹದ ಕುಸುರಿ ಕಲೆಗಾರಿಕೆಯಲ್ಲಿಯೇ ತೊಡಗಿಕೊಂಡಿದ್ದಾರೆ. ಹಿತ್ತಾಳೆಯ ಕಲಾಕೃತಿಗಳ ತಯಾರಿಕೆಯಲ್ಲಿಯೇ ಜೀವನ ಆಧರಿಸಿದ್ದಾರೆ. ಅವರಿಗೆ ಸದ್ಯದಲ್ಲಿ ಯಾವ ಆದಾಯವೂ ಇಲ್ಲವಾಗಿದೆ ಎಂದು ಒನಪೆಂಟಾ ಲೋಹ ಕಲಾವಿದರ ಸಹಕಾರಿ ಸಂಘದ ಅಧ್ಯಕ್ಷ ಎಫ್.ಎಮ್‌ ಇಸ್ಮಾಯಿಲ್‌ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ವ್ಯಾಪರ ನೆಲ ಕಚ್ಚಿದೆ. ಬೇರೆ ಬೇರೆ ಊರುಗಳಿಂದ ವ್ಯಾಪಾರಿಗಳು ಬರುತ್ತಿಲ್ಲ. ಸರ್ಕಾರ ಸಾಂಪ್ರದಾಯಿಕ ಕಲೆಯಲ್ಲಿ ತೊಡಗಿರುವ ಕಲಾವಿದರ ಸಹಾಯಕ್ಕೆ ನಿಲ್ಲಬೇಕಿದೆ. ಒಂದಷ್ಟು ಪರಿಹಾರದ ರೀತಿಯಲ್ಲಿ ಸಹಾಯವನ್ನು, ಸಬ್ಸಿಡಿಯನ್ನು ನೀಡಬೇಕು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ : ರಾಜ್ಯಕ್ಕೆ ಹೆಚ್ಚಿನ ಲಸಿಕೆ ನೀಡುವಂತೆ ಆಗ್ರಹಿಸಿ ಪ್ರಧಾನಿ ಭೇಟಿಗೆ ಸಜ್ಜಾದ ತಮಿಳುನಾಡು ಸಿಎಂ ಸ್ಟಾಲಿನ್

ಕಳೆದ ಅನೇಕ ಶತಮಾನಗಳಿಂದ ತಲೆ ಮಾರುಗಳಿಂದ ತಲೆ ಮಾರುಗಳಿಗೆ ಈ ಕಂಚಿನ, ಹಿತ್ತಾಳೆಯ ಮೇಲೆ ಚಿತ್ತಾರ ಮೂಡಿಸುವ ಕಲೆ ಹರಿದು ಬಂದಿದೆ. ಇಷ್ಟು ವರ್ಷದಲ್ಲಿ ಹಿಂದೆ ಎಂದೂ ಇಂತಹ ವಿಪತ್ತುಗಳು ಬಂದಿರಲಿಲ್ಲ. ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್‌ ದೂರವಿರುವ ಒನಿಪೆಂಟಾ ಹಳ್ಳಿಯಲ್ಲಿ ಇಂದು ವಿಶೇಷವಾದ ಲೋಹದ ಕಲೆ ಅಳಿವಿನ ಅಂಚಿಗೆ ಬಂದು ತಲುಪಿದೆ. 13 ನೇ ಶತಮಾನದ ಜನಮೇಜಯಡು ಎಂಬ ರಾಜನ ಕಾಲದಿಂದ ಆರಂಭವಾದ ಲೋಹದ ಚಿತ್ತಾರ ಕಲೆ ಆ ಕಾಲದಲ್ಲಿ ಪೋಥುಲುರಿ ವೀರ ಬ್ರಹ್ಮೇಂದ್ರ ಸ್ವಾಮಿ ಎಂಬ ಕಲಾವಿದನಿಂದ ವಿಶ್ವಪ್ರಸಿದ್ಧವಾಯಿತು.

ಆರಂಭದಲ್ಲಿ ಈ ಊರನ್ನು ಕಾಮಸಲಿವನಿಪೆಂಟಾ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಊರಿನ ಹೆಸರು ಒನಿಪೆಂಟಾ ಎಂದಾಯಿತು. ಈ ಊರಿನಲ್ಲಿ ಸಧ್ಯ 500 ಕ್ಕೂ ಹೆಚ್ಚು ಕುಟುಂಬಗಳು ಹಿತ್ತಾಳೆಯ ಕರ ಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಭಿನ್ನ ಭಿನ್ನ ಶೈಲಿಯ ದೀಪಗಳು, ಚಿತ್ತಾರದ ಪಾತ್ರೆಗಳು, ವಿಭಿನ್ನ ಕಲಾಕೃತಿಗಳು ಒನಿಪೆಂಟಾ ಕಲಾವಿದರ ಕೈಯಲ್ಲಿ ತಯಾರಾಗಿ ಬಾಂಬೆ, ಹೈದ್ರಾಬಾದ್‌, ಬೆಂಗಳೂರು, ಚೆನ್ನೈಗೆ ಹೋಗುತ್ತಿದ್ದವು. ಹಾಗೇ ಕಚ್ಚಾ ಲೋಹಗಳು ಹೈದ್ರಾಬಾದ್‌, ಬೆಂಗಳೂರು, ಚೆನ್ನೈ, ಹೈದ್ರಾಬಾದ್‌ ನಗರಗಳಿಂದ ಒನಿಪೆಂಟಾ ಊರಿಗೆ ಬರುತ್ತವೆ. ಹಿತ್ತಾಳೆಯನ್ನು ಬಳಸಿಕೊಂಡು ಒನಿಪೆಂಟಾದ ಕಲಾವಿದರು, ಅಡಿಗೆ ಮನೆ ಪಾತ್ರೆ, ಪಗಡೆಗಳು, ಚಿತ್ರಗಳು, ದೇವ – ದೇವತೆಯ ವಿಗ್ರಹಗಳು, ಹಂಡೆಗಳು, ಸುಂದರ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಒನಿಪೆಂಟಾದ ವಿಶೇಷ ಶೈಲಿಯ ಕುಸುರಿಯಿಂದ ಅಲಂಕೃತವಾದ ಯಾವುದೇ ಲೋಹವಿರಲಿ ಅದು ಮನೆಗೆ ಮೆರಗು ಕೊಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಮದುವೆಗಳಲ್ಲಿ ವಧುವಿಗೆ ಹಿತ್ತಾಳೆಯ ಪಾತ್ರೆ ಪಗಡೆಗಳನ್ನು ಕೊಟ್ಟು ಕಳುಹಿಸುವ ಸಂಪ್ರದಾಯವಿದೆ. ಹಾಗೇ ದೇವಸ್ಥಾನಗಳ ಧ್ವಜಸ್ಥಂಭ, ದೇವರ ವಿಗ್ರಹಗಳು, ಹಿತ್ತಾಳೆ ದೀಪಗಳು, ಗೋಪುರದ ಕಳಶ, ಗೋಡೆಗಳಿಗೆ ಲೇಪನ ಹೀಗೆ ವರ್ಷವಿಡಿ ಒಂದಿಲ್ಲೊಂದು ದೇವಸ್ಥಾನಗಳಲ್ಲಿ ಇಲ್ಲಿನ ಕಲಾವಿದರಿಗೆ ಕೆಲಸವಿರುತ್ತಿತ್ತು. ಆದರೆ ಕೊರೋನಾ ಕಾರಣದಿಂದ ಎಲ್ಲಿಂದಲೂ ಈ ಕಲಾವಿದರಿಗೆ ಕೆಲಸ ಬರುತ್ತಿಲ್ಲ. ಹಾಗಾಗಿ ಹಿತ್ತಾಳೆ ಮತ್ತು ಲೋಹದ ಕೆಲಸ ಮಾಡುತ್ತಿದ್ದ 500 ಕುಟುಂಬಗಳಲ್ಲಿ ಈಗ ಕೇವಲ 222 ಕುಟುಂಬಗಳು ಮಾತ್ರ ತಮ್ಮ ಸಾಂಪ್ರದಾಯಿಕ ಕಸುಬಿನಲ್ಲಿ ಉಳಿದಿವೆ. 100 ಕುಟುಂಬಗಳು ಚೆನ್ನೈ, ಹೈದ್ರಾಬಾದ್‌, ಬೆಂಗಳೂರಿನಂತಹ  ನಗರಗಳಿಗೆ ಬದುಕು ಅರಸಿ ವಲಸೆ ಹೋಗಿವೆ. ಉಳಿದ ಕೆಲವೇ ಕೆಲವರು ಇರುವ ಕೆಲಸವನ್ನೇ ನಂಬಿ ಜೀವ ಸಾಗಿಸುತ್ತಿದ್ದಾರೆ.

ನಮಗೆ ಬೇರೆ ಕೆಲಸ ಗೊತ್ತಿಲ್ಲ. ನಾವು ಹಿತ್ತಾಳೆಯ ಕುಸುರಿ ವೃತ್ತಿಯನ್ನು ಬಿಟ್ಟು ಬಿಡಲು ಸಾದ್ಯವಿಲ್ಲ. ನಮ್ಮ ತಲತಲಾಂತರದಿಂದ ನಡೆಸಿಕೋಂಡು ಬಂದಿದ್ದೇವೆ. ಈ ಕಾಲ ಸರಿದು ಮುಂದೆ ನಮಗೂ ಒಳ್ಳೆಯ ದಿನಗಳು ಬರಬಹುದು.‌ ಹಿತ್ತಾಳೆಯೂ ಹೊಳೆಯಬಹುದು ಎನ್ನುತ್ತಾರೆ ಮೋರ್ ವಿರೋಜಿ ಮತ್ತು ಮುಕ್ತಿಯಾ ಭಾಷಾ ಎಂಬ ಒನಿಪೆಂಟಾದ ಕಲಾವಿದರು.

ಕೊರೋನಾ ಸಾಂಕ್ರಾಮಿಕ ಕಳೆದು ಒನಿಪೆಂಟಾ ಕಲಾವಿದರಿಗೆ ಒಂದಷ್ಟು ನೆಮ್ಮದಿಯ ಉಸಿರಾಡುವ ಕಾಲ ಬರಲಿ. ತಲ ತಲಾಂತರದಿಂದ ಕಾಪಾಡಿಕೊಂಡು ಬಂದಿರುವ ಒನಿಪೆಂಟಾದ ದೇಸೀ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಲು ಸರ್ಕಾರಗಳೂ ಒಂದಷ್ಟು ಪ್ರಯತ್ನ ಪಡಬೇಕು. ಒನಿಪೆಂಟಾದ ಕಲಾವಿದರಿಗೆ  ಸರ್ಕಾರಗಳು ಆರ್ಥಿಕವಾಗಿ ಸಹಾಯ ಮಾಡಿ ಅವರನ್ನು ಮೇಲೆತ್ತಬೇಕು.


ಇದನ್ನೂ ಓದಿ :ಗೋಹತ್ಯೆ ತಡೆ ಕಾನೂನಿನ ದುರ್ಬಳಕೆ: ಪೊಲೀಸರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಗರಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...