Homeಕರೋನಾ ತಲ್ಲಣಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

ಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

- Advertisement -
- Advertisement -

ಒನಿಪೆಂಟಾ ಆಂಧ್ರಪ್ರದೇಶದ ಒಂದು ಚಿಕ್ಕ ಹಳ್ಳಿ. ಹಿತ್ತಾಳೆ, ಕಂಚಿನ ಮೇಲೆ ಕುಸುರಿ ಕಲೆಗಾಗಿ ಜಗತ್‌ಪ್ರಸಿದ್ದವಾಗಿದ್ದ ಊರು. ದೇಶದ ಮೂಲೆ ಮೂಲೆಯಿಂದ, ಜಗತ್ತಿನ ನಾನಾ ದೇಶಗಳಿಂದ ಬರುವ ಪ್ರವಾಸಿಗಳಿಂದ ಒನಿಪೆಂಟಾ ಹಳ್ಳಿ ಒಂದು ಕಾಲದಲ್ಲಿ ತುಂಬಿರುತ್ತಿತ್ತು. ಬೇರೆ ಬೇರೆ ಭಾಷೆಯ ಜನರ ಮಾತಿನ ಕಲರವ ಕೇಳುತ್ತಿತ್ತು.  ಚೌಕಾಸಿಯ ವ್ಯಾಪಾರಗಳು ನಡೆಯುತ್ತಿತ್ತು. ಇಂದು ಒನಿಪೆಂಟಾದಲ್ಲಿ ಹೇಳಲಿಕ್ಕೆ ಏನೂ ಇಲ್ಲ. ಪ್ರವಾಸಿಗಳಿಲ್ಲ. ಕಲಾವಿದರೂ ಊರು ಬಿಡುವ ಹಂತಕ್ಕೆ ತಲುಪಿದ್ದಾರೆ. ಕೊರೋನಾ ಸಾಂಕ್ರಾಮಿಕದ ಆರ್ಥಿಕ ಹೊಡೆತಕ್ಕೆ ದೇಶದಲ್ಲಿ ನೂರಾರು ಕಸುಬುಗಳು ನಾಶವಾಗಿವೆ. ಅದರೆ ನಡುವೆ ಒನಿಪೆಂಟಾದ ಹಿತ್ತಾಳೆಯ ಕಲಾವಿದರ ಬದುಕು ಇನ್ನಷ್ಟು ದುಸ್ತರವಾಗಿದೆ.

ಕಳೆದ 15 ತಿಂಗಳುಗಳಿಂದ ಹಿತ್ತಾಳೆಯ ಕಲೆಯನ್ನೇ ನಂಬಿ, ಲೋಹದಲ್ಲಿ ಜೀವ ಹಿಡಿದು ಬದುಕುತ್ತಿದ್ದ ಒನಿಪೆಂಟಾ ಕಲಾವಿದರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ದೇವಸ್ಥಾನಗಳು, ಶಾಲೆ – ಕಾಲೇಜುಗಳು, ಮಾರುಕಟ್ಟೆಗಳು ಕೊರೋನಾ ಕಾರಣಕ್ಕೆ ಬಂದ್‌ ಆಗಿರುವುದರಿಂದ ಹಿತ್ತಾಳೆ ಕಂಚುಗಳ ಮೇಲೆ ಚಿತ್ತಾರ ಮೂಡಿಸುತ್ತಿದ್ದ ಕಲಾವಿದರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ನೂರಕ್ಕು ಹೆಚ್ಚು ಕಲಾವಿದರು ಲೋಹದ ಕುಸುರಿ ಕಲೆಗಾರಿಕೆಯಲ್ಲಿಯೇ ತೊಡಗಿಕೊಂಡಿದ್ದಾರೆ. ಹಿತ್ತಾಳೆಯ ಕಲಾಕೃತಿಗಳ ತಯಾರಿಕೆಯಲ್ಲಿಯೇ ಜೀವನ ಆಧರಿಸಿದ್ದಾರೆ. ಅವರಿಗೆ ಸದ್ಯದಲ್ಲಿ ಯಾವ ಆದಾಯವೂ ಇಲ್ಲವಾಗಿದೆ ಎಂದು ಒನಪೆಂಟಾ ಲೋಹ ಕಲಾವಿದರ ಸಹಕಾರಿ ಸಂಘದ ಅಧ್ಯಕ್ಷ ಎಫ್.ಎಮ್‌ ಇಸ್ಮಾಯಿಲ್‌ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ವ್ಯಾಪರ ನೆಲ ಕಚ್ಚಿದೆ. ಬೇರೆ ಬೇರೆ ಊರುಗಳಿಂದ ವ್ಯಾಪಾರಿಗಳು ಬರುತ್ತಿಲ್ಲ. ಸರ್ಕಾರ ಸಾಂಪ್ರದಾಯಿಕ ಕಲೆಯಲ್ಲಿ ತೊಡಗಿರುವ ಕಲಾವಿದರ ಸಹಾಯಕ್ಕೆ ನಿಲ್ಲಬೇಕಿದೆ. ಒಂದಷ್ಟು ಪರಿಹಾರದ ರೀತಿಯಲ್ಲಿ ಸಹಾಯವನ್ನು, ಸಬ್ಸಿಡಿಯನ್ನು ನೀಡಬೇಕು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ : ರಾಜ್ಯಕ್ಕೆ ಹೆಚ್ಚಿನ ಲಸಿಕೆ ನೀಡುವಂತೆ ಆಗ್ರಹಿಸಿ ಪ್ರಧಾನಿ ಭೇಟಿಗೆ ಸಜ್ಜಾದ ತಮಿಳುನಾಡು ಸಿಎಂ ಸ್ಟಾಲಿನ್

ಕಳೆದ ಅನೇಕ ಶತಮಾನಗಳಿಂದ ತಲೆ ಮಾರುಗಳಿಂದ ತಲೆ ಮಾರುಗಳಿಗೆ ಈ ಕಂಚಿನ, ಹಿತ್ತಾಳೆಯ ಮೇಲೆ ಚಿತ್ತಾರ ಮೂಡಿಸುವ ಕಲೆ ಹರಿದು ಬಂದಿದೆ. ಇಷ್ಟು ವರ್ಷದಲ್ಲಿ ಹಿಂದೆ ಎಂದೂ ಇಂತಹ ವಿಪತ್ತುಗಳು ಬಂದಿರಲಿಲ್ಲ. ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್‌ ದೂರವಿರುವ ಒನಿಪೆಂಟಾ ಹಳ್ಳಿಯಲ್ಲಿ ಇಂದು ವಿಶೇಷವಾದ ಲೋಹದ ಕಲೆ ಅಳಿವಿನ ಅಂಚಿಗೆ ಬಂದು ತಲುಪಿದೆ. 13 ನೇ ಶತಮಾನದ ಜನಮೇಜಯಡು ಎಂಬ ರಾಜನ ಕಾಲದಿಂದ ಆರಂಭವಾದ ಲೋಹದ ಚಿತ್ತಾರ ಕಲೆ ಆ ಕಾಲದಲ್ಲಿ ಪೋಥುಲುರಿ ವೀರ ಬ್ರಹ್ಮೇಂದ್ರ ಸ್ವಾಮಿ ಎಂಬ ಕಲಾವಿದನಿಂದ ವಿಶ್ವಪ್ರಸಿದ್ಧವಾಯಿತು.

ಆರಂಭದಲ್ಲಿ ಈ ಊರನ್ನು ಕಾಮಸಲಿವನಿಪೆಂಟಾ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಊರಿನ ಹೆಸರು ಒನಿಪೆಂಟಾ ಎಂದಾಯಿತು. ಈ ಊರಿನಲ್ಲಿ ಸಧ್ಯ 500 ಕ್ಕೂ ಹೆಚ್ಚು ಕುಟುಂಬಗಳು ಹಿತ್ತಾಳೆಯ ಕರ ಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಭಿನ್ನ ಭಿನ್ನ ಶೈಲಿಯ ದೀಪಗಳು, ಚಿತ್ತಾರದ ಪಾತ್ರೆಗಳು, ವಿಭಿನ್ನ ಕಲಾಕೃತಿಗಳು ಒನಿಪೆಂಟಾ ಕಲಾವಿದರ ಕೈಯಲ್ಲಿ ತಯಾರಾಗಿ ಬಾಂಬೆ, ಹೈದ್ರಾಬಾದ್‌, ಬೆಂಗಳೂರು, ಚೆನ್ನೈಗೆ ಹೋಗುತ್ತಿದ್ದವು. ಹಾಗೇ ಕಚ್ಚಾ ಲೋಹಗಳು ಹೈದ್ರಾಬಾದ್‌, ಬೆಂಗಳೂರು, ಚೆನ್ನೈ, ಹೈದ್ರಾಬಾದ್‌ ನಗರಗಳಿಂದ ಒನಿಪೆಂಟಾ ಊರಿಗೆ ಬರುತ್ತವೆ. ಹಿತ್ತಾಳೆಯನ್ನು ಬಳಸಿಕೊಂಡು ಒನಿಪೆಂಟಾದ ಕಲಾವಿದರು, ಅಡಿಗೆ ಮನೆ ಪಾತ್ರೆ, ಪಗಡೆಗಳು, ಚಿತ್ರಗಳು, ದೇವ – ದೇವತೆಯ ವಿಗ್ರಹಗಳು, ಹಂಡೆಗಳು, ಸುಂದರ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಒನಿಪೆಂಟಾದ ವಿಶೇಷ ಶೈಲಿಯ ಕುಸುರಿಯಿಂದ ಅಲಂಕೃತವಾದ ಯಾವುದೇ ಲೋಹವಿರಲಿ ಅದು ಮನೆಗೆ ಮೆರಗು ಕೊಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಮದುವೆಗಳಲ್ಲಿ ವಧುವಿಗೆ ಹಿತ್ತಾಳೆಯ ಪಾತ್ರೆ ಪಗಡೆಗಳನ್ನು ಕೊಟ್ಟು ಕಳುಹಿಸುವ ಸಂಪ್ರದಾಯವಿದೆ. ಹಾಗೇ ದೇವಸ್ಥಾನಗಳ ಧ್ವಜಸ್ಥಂಭ, ದೇವರ ವಿಗ್ರಹಗಳು, ಹಿತ್ತಾಳೆ ದೀಪಗಳು, ಗೋಪುರದ ಕಳಶ, ಗೋಡೆಗಳಿಗೆ ಲೇಪನ ಹೀಗೆ ವರ್ಷವಿಡಿ ಒಂದಿಲ್ಲೊಂದು ದೇವಸ್ಥಾನಗಳಲ್ಲಿ ಇಲ್ಲಿನ ಕಲಾವಿದರಿಗೆ ಕೆಲಸವಿರುತ್ತಿತ್ತು. ಆದರೆ ಕೊರೋನಾ ಕಾರಣದಿಂದ ಎಲ್ಲಿಂದಲೂ ಈ ಕಲಾವಿದರಿಗೆ ಕೆಲಸ ಬರುತ್ತಿಲ್ಲ. ಹಾಗಾಗಿ ಹಿತ್ತಾಳೆ ಮತ್ತು ಲೋಹದ ಕೆಲಸ ಮಾಡುತ್ತಿದ್ದ 500 ಕುಟುಂಬಗಳಲ್ಲಿ ಈಗ ಕೇವಲ 222 ಕುಟುಂಬಗಳು ಮಾತ್ರ ತಮ್ಮ ಸಾಂಪ್ರದಾಯಿಕ ಕಸುಬಿನಲ್ಲಿ ಉಳಿದಿವೆ. 100 ಕುಟುಂಬಗಳು ಚೆನ್ನೈ, ಹೈದ್ರಾಬಾದ್‌, ಬೆಂಗಳೂರಿನಂತಹ  ನಗರಗಳಿಗೆ ಬದುಕು ಅರಸಿ ವಲಸೆ ಹೋಗಿವೆ. ಉಳಿದ ಕೆಲವೇ ಕೆಲವರು ಇರುವ ಕೆಲಸವನ್ನೇ ನಂಬಿ ಜೀವ ಸಾಗಿಸುತ್ತಿದ್ದಾರೆ.

ನಮಗೆ ಬೇರೆ ಕೆಲಸ ಗೊತ್ತಿಲ್ಲ. ನಾವು ಹಿತ್ತಾಳೆಯ ಕುಸುರಿ ವೃತ್ತಿಯನ್ನು ಬಿಟ್ಟು ಬಿಡಲು ಸಾದ್ಯವಿಲ್ಲ. ನಮ್ಮ ತಲತಲಾಂತರದಿಂದ ನಡೆಸಿಕೋಂಡು ಬಂದಿದ್ದೇವೆ. ಈ ಕಾಲ ಸರಿದು ಮುಂದೆ ನಮಗೂ ಒಳ್ಳೆಯ ದಿನಗಳು ಬರಬಹುದು.‌ ಹಿತ್ತಾಳೆಯೂ ಹೊಳೆಯಬಹುದು ಎನ್ನುತ್ತಾರೆ ಮೋರ್ ವಿರೋಜಿ ಮತ್ತು ಮುಕ್ತಿಯಾ ಭಾಷಾ ಎಂಬ ಒನಿಪೆಂಟಾದ ಕಲಾವಿದರು.

ಕೊರೋನಾ ಸಾಂಕ್ರಾಮಿಕ ಕಳೆದು ಒನಿಪೆಂಟಾ ಕಲಾವಿದರಿಗೆ ಒಂದಷ್ಟು ನೆಮ್ಮದಿಯ ಉಸಿರಾಡುವ ಕಾಲ ಬರಲಿ. ತಲ ತಲಾಂತರದಿಂದ ಕಾಪಾಡಿಕೊಂಡು ಬಂದಿರುವ ಒನಿಪೆಂಟಾದ ದೇಸೀ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಲು ಸರ್ಕಾರಗಳೂ ಒಂದಷ್ಟು ಪ್ರಯತ್ನ ಪಡಬೇಕು. ಒನಿಪೆಂಟಾದ ಕಲಾವಿದರಿಗೆ  ಸರ್ಕಾರಗಳು ಆರ್ಥಿಕವಾಗಿ ಸಹಾಯ ಮಾಡಿ ಅವರನ್ನು ಮೇಲೆತ್ತಬೇಕು.


ಇದನ್ನೂ ಓದಿ :ಗೋಹತ್ಯೆ ತಡೆ ಕಾನೂನಿನ ದುರ್ಬಳಕೆ: ಪೊಲೀಸರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಗರಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...