Homeಅಂಕಣಗಳುರಹಸ್ಯ ಭೇದಿಸಿ ಶೋಷಕರಿಗೆ ದಿಗಿಲು ಮೂಡಿಸಿದ್ದ ಅಸ್ಸಾಂಜ್ ಅವರ ವಿಕಿಲೀಕ್ಸ್

ರಹಸ್ಯ ಭೇದಿಸಿ ಶೋಷಕರಿಗೆ ದಿಗಿಲು ಮೂಡಿಸಿದ್ದ ಅಸ್ಸಾಂಜ್ ಅವರ ವಿಕಿಲೀಕ್ಸ್

- Advertisement -
- Advertisement -

ಅಸ್ಸಾಂಜ್ ಗಡಿಪಾರು ಮನವಿ ತಿರಸ್ಕೃತ

ಸದ್ಯಕ್ಕೆ ಬ್ರಿಟಿಷ್ ಪೊಲೀಸರ ವಶದಲ್ಲಿರುವ ಆಸ್ಟ್ರೇಲಿಯಾ ಮೂಲದ ಪತ್ರಕರ್ತ, ವಿಕಿಲೀಕ್ಸ್ ಸಂಸ್ಥಾಪಕ-ಸಂಪಾದಕ ಜೂಲಿಯನ್ ಅಸ್ಸಾಂಜ್ ಅವರ ಗಡಿಪಾರು ಮನವಿಯನ್ನು ಬ್ರಿಟನ್ ನ್ಯಾಯಲಯ ತಿರಸ್ಕರಿಸಿದೆ. ಅಮೆರಿಕದ ರಹಸ್ಯ ದಾಖಲೆಗಳನ್ನು ಬಯಲಿಗೆಳೆದ ಗೂಢಚರ್ಯೆ ಆರೋಪವನ್ನು ಎದುರಿಸುತ್ತಿರುವ ಅಸ್ಸಾಂಜ್ ಅವರು ಮಾಡಿದ ಪತ್ರಿಕೋದ್ಯಮ ಈ ಶತಮಾನದಲ್ಲಿ ಹಲವು ಕಾರಣಗಳಿಗೆ ಪ್ರಮುಖವಾದದ್ದು.

ಇಟಾಲಿಯನ್ ಚಿಂತಕ ದಿವಂಗತ ಅಂಬರ್ಟೋ ಇಕೋ ಅವರು ಗುರುತಿಸುವಂತೆ ಇತ್ತೀಚಿನವರೆಗೂ ಪ್ರಭುತ್ವಗಳು ಮಾತ್ರ ನಾಗರಿಕರ ಮೇಲೆ ಕಣ್ಗಾವಲು ಇರಿಸಬಹುದು ಅದರ ವಿರುದ್ಧದ ಪ್ರಕ್ರಿಯೆ ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ಬುಡಮೇಲು ಮಾಡಿದ್ದು ವಿಕಿಲೀಕ್ಸ್‌ನ ದಾಖಲೆಗಳು ಮತ್ತು ಪತ್ರಿಕೋದ್ಯಮ. ಪ್ರಭುತ್ವದ ಕೆಲಸ ಕಾರ್ಯಗಳ ಮೇಲೆ, ರಹಸ್ಯಗಳ ಮೇಲೆ ನಾಗರಿಕರು ಕೂಡ ಕಣ್ಣಿಡಬಹುದು, ಎಲ್ಲ ನಾಗರಿಕರು ಅಲ್ಲದಿದ್ದರೂ ಅವರ ಪ್ರತಿನಿಧಿಯೊಬ್ಬ ಅದನ್ನು ಮಾಡಿ ಪ್ರಭುತ್ವದ ಕರಾಳತೆಯನ್ನು ಬಯಲಿಗೆಳೆಯಬಹುದು ಎಂದು ತೋರಿಸಿಕೊಟ್ಟಿದ್ದು ಅಸ್ಸಾಂಜ್ ಅವರ ಈ ಎಪಿಸೋಡ್.

ವಿಕಿಲೀಕ್ಸ್ ಹೆಚ್ಚು ಗಮನ ಹರಿಸಿದ್ದು ಮತ್ತು ಗುರಿಯಾಗಿಸಿಕೊಂಡಿದ್ದು ಅಂದಿನ ಅಮೆರಿಕ ಆಡಳಿತ ವ್ಯವಸ್ಥೆ ಮತ್ತು ಅದರ ಯುದ್ಧಪಿಪಾಸು ಸ್ವಭಾವದ ವಿರುದ್ಧ. ಅಮೆರಿಕ ಇರಾಕ್ ಮತ್ತು ಆಫ್ಘಾನಿಸ್ತಾನಗಳಲ್ಲಿ ನಡೆಸುತ್ತಿದ ಯುದ್ಧ ಕ್ರೌರ್ಯಗಳು, ಅಲ್ಲಿ ಆ ಪಡೆಗಳು ಸಾಮಾನ್ಯ ನಾಗರಿಕರ ವಿರುದ್ಧ ನಡೆಸಿದ ದೌರ್ಜನ್ಯಗಳು ಮತ್ತು ಸಾಮಾನ್ಯ ನಿಶ್ಯಸ್ತ್ರ ನಾಗರಿಕರನ್ನು ವಿಡಿಯೋ ಗೇಮ್ ಮಾದರಿಯಲ್ಲಿ ಕೊಂದ ಸಂಗತಿಗಳನ್ನು ವಿಕಿಲೀಕ್ಸ್ ಬಯಲು ಮಾಡಿದ್ದು ಮಾನವೀಯತೆ ಬಗ್ಗೆ ಎಚ್ಚರ ಉಳಿಸಿಕೊಂಡಿದ್ದ ಒಂದು ವಲಯಕ್ಕಾದರೂ ಬೆಚ್ಚಿ ಬೀಳಿಸಿತ್ತು. ಅಮೆರಿಕದ ಇಂತಹ ಕೃತ್ಯಗಳ ಬಗ್ಗೆ ಸಾಮಾನ್ಯ ನಂಬಿಕೆಯೊಂದು ಜನರಲ್ಲಿ ಮನೆಮಾಡಿತ್ತಾದರೂ, ಅದನ್ನು ದೃಢಪಡಿಸಿದ, ಅದಕ್ಕೆ ಪೂರಕ ದಾಖಲೆಗಳನ್ನು ನೀಡಿ ಸಾಬೀತುಪಡಿಸಿದ್ದ ಈ ಪತ್ರಿಕೋದ್ಯಮ ಪ್ರಭುತ್ವಗಳನ್ನು ಮೊಟ್ಟಮೊದಲ ಬಾರಿಗೆ ಈ ಮಟ್ಟದಲ್ಲಿ ಬೆಚ್ಚಿ ಬೀಳಿಸಿತ್ತು.

ವಿಕಿಲೀಕ್ಸ್ ಬಯಲು ಮಾಡಿದ ಒಂದು ಮಹತ್ವದ ಪ್ರಕರಣವನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವೆನಿಸುತ್ತದೆ. ಇರಾಕ್ ಮೇಲೆ ಅಮೆರಿಕ ಯುದ್ಧ ನಡೆಸುವ ಸಮಯದಲ್ಲಿ ನಡೆದ ಘಟನೆ ಅದು. ಜುಲೈ 2007ರಲ್ಲಿ ಜರುಗಿದ ಶೂಟಿಂಗ್ ಘಟನೆಯ ಒಂದು ವಿಡಿಯೋ ವಿಕಿಲೀಕ್ಸ್‌ನಲ್ಲಿ ಪ್ರಕಟಗೊಂಡ ಮೇಲೆ ಭಾರಿ ಸದ್ದು ಮಾಡಿತ್ತು. ಅಮೆರಿಕ ಯುದ್ಧ ವಿಮಾನದ ತಂಡ ಸುಳ್ಳು ಸುಳ್ಳೇ ಮಾಹಿತಿ ನೀಡಿ, ಸುಮಾರು 12 ಜನ ಅಮಾಯಕರನ್ನು ಗುಂಡಿಕ್ಕಿ ಕೊಲ್ಲುವ ಮತ್ತು ಹತ್ಯೆ ಮಾಡಿದ ಮೇಲೆ ವಾಯುಪಡೆಯ ಸೈನಿಕರು ಗಹಗಹಿಸಿ ನಗುತ್ತಾ ಮಾತನಾಡುವ ವಿಡಿಯೋ ಇದಾಗಿತ್ತು. ಈ ಶೂಟಿಂಗ್‌ನಲ್ಲಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ 22 ವರ್ಷದ ಫೋಟೋ ಜರ್ನಲಿಸ್ಟ್ ನಮೀರ್ ನೂರ್-ಎಲ್ದೀನ್ ಮತ್ತು ಅವರ ಚಾಲಕ 40 ವರ್ಷದ ಸಯೀದ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯ ವಿಡಿಯೋ ಕೋರಿ ಪೆಂಟಗನ್‌ಗೆ ರಾಯ್ಟರ್ಸ್ ಮಾಡಿದ ಮನವಿಯನ್ನು ತಿರಸ್ಕರಿಸಿದ್ದ ಅಮೆರಿಕ ಸರ್ಕಾರ ಅಲ್ಲಿ ನಡೆದಿದ್ದ ಹತ್ಯೆಗಳನ್ನು ಸಮರ್ಥಿಸಿಕೊಂಡಿತ್ತು. ಆದರೆ ಮಿಲಿಟರಿ ಎನ್ಕ್ರಿಪ್ಶನ್ ಮುರಿದು ಈ ವಿಡಿಯೋವನ್ನು ವಿಕಿಲೀಕ್ಸ್ ಪ್ರಕಟ ಮಾಡಿದ ಮೇಲೆ ಅಮೆರಿಕ ಸರ್ಕಾರದ ಧೂರ್ತತನ ಬಟಾಬಯಲಾಗಿತ್ತು. ಇದರ ಪ್ರಕಟಣೆ ಅಮೆರಿಕವನ್ನು ಅತಿಹೆಚ್ಚು ಕೆರಳಿಸಿತು. ಏಕವ್ಯಕ್ತಿ ಅಸ್ಸಾಂಜ್ ವಿರುದ್ಧ ಯುದ್ಧ ಹೂಡಿ ಅವರನ್ನು ಬಂಧಿಸಲು ಅಮೆರಿಕ ಇವತ್ತಿಗೂ ಹವಣಿಸುತ್ತಲೇ ಇದೆ. ಹಲವು ವರ್ಷಗಳ ಕಾಲ ತಲೆಮರೆಸಿಕೊಂಡು ನಂತರ 2012ರಿಂದ ಬ್ರಿಟನ್‌ನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅಸ್ಸಾಂಜ್ ಆಶ್ರಯ ಪಡೆದಿದ್ದರು.

ಈ ರಾಜಕೀಯ ಆಶ್ರಯವನ್ನು ಈಕ್ವೆಡಾರ್ ಹಿಂತೆಗೆದುಕೊಂಡ ನಂತರ, ಅವರನ್ನು ಬ್ರಿಟಿಷ್ ಪೊಲೀಸರು ಜಾಮೀನು ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಈಗ ಅಮೆರಿಕದ ಜೈಲುಗಳಲ್ಲಿ ಸುರಕ್ಷತೆಯ ಕೊರತೆಯ ಕಾರಣದಿಂದಾಗಿ ಗಡಿಪಾರು ಮನವಿ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ಅಸ್ಸಾಂಜ್ ತಮ್ಮನ್ನು ಸ್ವತಂತ್ರಗೊಳಿಸಲು ಅರ್ಜಿ ಹಾಕಲಿದ್ದಾರೆ ಎನ್ನಲಾಗಿದೆ.

ಭಾರತದ ಮಟ್ಟಿಗೂ ಈ ವಿಕಿಲೀಕ್ಸ್ ಹಲವು ವಿಷಯಗಳನ್ನು ಹೊರಹಾಕಿತ್ತು. ರಾಯಭಾರಿ ಕಚೇರಿ ಎಂದರೆ ರಾಜತಾಂತ್ರಿಕ ಸಂಬಂಧಗಳಿಗಾಗಿ ಇರುವುದಲ್ಲ, ಬದಲಾಗಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅಮೆರಿಕದ ಸರ್ಕಾರಕ್ಕೆ ವರದಿ ಮಾಡುವ, ಇಲ್ಲಿ ಔತಣಕೂಟಗಳನ್ನು ಏರ್ಪಡಿಸಿ ಮುಖಂಡರ ಮಾತುಗಳನ್ನು ಕದ್ದಾಲಿಸುವ, ಅವುಗಳನ್ನು ವಾಪಸ್ ತಮ್ಮ ದೇಶಕ್ಕೆ ವರದಿ ಮಾಡುವ, ಇಲ್ಲಿನ ಯೋಜನೆಗಳ ಮೇಲೆ ಹಸ್ತಕ್ಷೇಪ ಮಾಡಲು ಪ್ರಯತ್ನಿಸುವ ಏರ್ಪಾಡುಗಳು ಈ ರಾಯಭಾರಿ ಕಚೇರಿಗಳು ಎಂಬ ಸಾಮಾನ್ಯ ತಿಳಿವಳಿಕೆಯನ್ನು ವಿಕಿಲೀಕ್ಸ್ ದಾಖಲೆಗಳ ಸಮೇತ ಸಾಬೀತುಪಡಿಸಿತ್ತು.

ಹೀಗೆ ಪ್ರಭುತ್ವಗಳ ರಹಸ್ಯಗಳನ್ನು ಹೊರಗೆ ಎಳೆಯುವ (ಹಿಲರಿ ಕ್ಲಿಂಟನ್ ವಿರುದ್ಧ ಅಮೆರಿಕದ ಚುನಾವಣೆಯಲ್ಲಿಯೂ ಇದು ಪ್ರಭಾವ ಬೀರಿತ್ತು ಕೂಡ) ಸಾಧ್ಯತೆಯ ಬಗ್ಗೆ ವಿಕಿಲೀಕ್ಸ್ ನಂಬಿಕೆ ಹುಟ್ಟಿಸಿತ್ತಾದರೂ ಪ್ರಭುತ್ವಗಳ ಕ್ರೂರತನಕ್ಕೆ ಅದು ಸಾಟಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ವಿಸಲ್‌ಬ್ಲೋವರ್‌ಗಳಾದ ಅಸ್ಸಾಂಜ್ ಆಗಲಿ, ಸ್ನೋಡೆನ್ ಆಗಲಿ ತಲೆಮರೆಸಿಕೊಳ್ಳುವ, ಬೇರೊಂದು ದೇಶದಲ್ಲಿ ರಾಜಕೀಯ ಆಶ್ರಯ ಪಡೆಯುವ ಸ್ಥಿತಿಯಿಂದ ಹೊರಬರದ ಪರಿಸ್ಥಿತಿಯಲ್ಲಿ ಇದ್ದಾರೆ. ಇಂತಹ ಸ್ಥಿತಿ ಹೊಸದಾಗಿ ಹುಟ್ಟಿಕೊಳ್ಳಬಹುದಾದ ಜನಪರ ಹ್ಯಾಕರ್‌ಗೆ ಸ್ಫೂರ್ತಿ ನೀಡಲು ಎಲ್ಲಿ ಸಾಧ್ಯವಿದೆ?

ಅಷ್ಟೇ ಅಲ್ಲ, ಬ್ಲ್ಯಾಕ್‌ವಾಟರ್ ಯುದ್ಧ ಅಪರಾಧ ಎಂದೇ ಕುಖ್ಯಾತವಾದ ಪ್ರಕರಣವನ್ನು ಕೂಡ ವಿಕಿಲೀಕ್ಸ್ ಪ್ರಕಟಿಸಿತ್ತು. ಇರಾಕ್ ಯುದ್ಧದಲ್ಲಿ ಖಾಸಗಿ ರಕ್ಷಣಾ ಪಡೆಯನ್ನು ಅಮೆರಿಕ ಬಳಸಿಕೊಂಡಿತ್ತು. ಈ ಬ್ಲ್ಯಾಕ್‌ವಾಟರ್ ಪಡೆ ಸೆಪ್ಟಂಬರ್ 2007ರಲ್ಲಿ ಬಾಗ್ದಾದ್‌ನ ನಿಸ್ಸೋರ್ ವೃತ್ತದಲ್ಲಿ 17 ಸಾಮಾನ್ಯ ನಾಗರಿಕರ ಮಾರಣಹೋಮ ನಡೆಸಿತ್ತು. ಇಂತಹ ಸುಮಾರು 14 ಪ್ರತ್ಯೇಕ ಬ್ಲ್ಯಾಕ್‌ವಾಟರ್ ಕ್ರೌರ್ಯಗಳ ಬಗ್ಗೆ ವಿಕಿಲೀಕ್ಸ್ ಇರಾಕ್ ಫೈಲ್ಸ್ ವರದಿ ಮಾಡಿತ್ತು. ಇಂತಹ ಒಂದು ಪ್ರಕರಣದ ವಿಚಾರಣೆಯಾಗಿ ಬ್ಲ್ಯಾಕ್‌ವಾಟರ್‌ನ ನಾಲ್ಕು ಜನ ಸದಸ್ಯರಿಗೆ ಅಮೆರಿಕದ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಈಗ ಅಧ್ಯಕ್ಷ ಸ್ಥಾನ ತೊರೆಯುತ್ತಿರುವ ಡೊನಾಲ್ಡ್ ಟ್ರಂಪ್, ತಮ್ಮ ಇತ್ತೀಚಿನ ಆದೇಶದಲ್ಲಿ ಈ ನಾಲ್ವರಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದ್ದಾರೆ. ಅಮೆರಿಕ ಆಡಳಿತ ವ್ಯವಸ್ಥೆಯ ಈ ಪ್ರಹಸನ ಅಲ್ಲಿನ ಎಷ್ಟು ನಾಗರಿಕರಿಗೆ ಆಕ್ರೋಶ ತರಿಸದೆಯೋ ತಿಳಿಯದು!

ಇವೆಲ್ಲಾ ಹಿನ್ನಡೆಗಳ ಹೊರತಾಗಿಯೂ ಎಲ್ಲೋ ಯಾವುದೋ ಮೂಲೆಯಲ್ಲಿ ಜಗತ್ತಿನ ಎಲ್ಲ ಪ್ರಭುತ್ವಗಳ ಕ್ರೌರ್ಯಗಳನ್ನು ಕಣ್ಗಾವಲಿನಲ್ಲಿ ಇರಿಸಿರುವ ಯಾರೋ ಒಬ್ಬ ಹ್ಯಾಕರ್ ಖಂಡಿತಾ ಇದ್ದಾನೆ. ಹೆಚ್ಚು ಜನರೂ ಇರಬಹುದು. ಅಸ್ಯಾಂಜ್ ಅಂತಹ ಸ್ನೋಡೆನ್ ಅಂತಹ ವ್ಯಕ್ತಿಗಳ ಧೈರ್ಯ ಅವರಿಗೆ ಒಂದು ದಿನ ಸ್ಫೂರ್ತಿ ತರಬಲ್ಲದು. ನಿರಂಕುಶಪ್ರಭುತ್ವದ ಅಹಂಕಾರಕ್ಕೆ ಪೆಟ್ಟು ನೀಡಲು ಅವರೆಲ್ಲಾ ಕಾಯುತ್ತಿದ್ದಾರೆ. ಈ ಭಯ ಆ ಪ್ರಭುತ್ವಗಳಿಗೂ ಇದೆ ಎಂಬುದಂತೂ ನಿಜ.


ಇದನ್ನೂ ಓದಿ: ಅಂದು ಟ್ಯಾಗೋರ್ ದ್ವೇಷ, ಇಂದು ಅವರನ್ನೇ ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಯತ್ನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...