ಉತ್ತರ ಪ್ರದೇಶ ಸರ್ಕಾರದಲ್ಲಿ ಇರುವ ಜಾತಿ ಪಕ್ಷಪಾತದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಪತ್ರಕರ್ತೆಯ ವಿರುದ್ಧ ದಾಖಲಾಗಿರುವ ನಾಲ್ಕು ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. ಯುಪಿ ಸರ್ಕಾರದಲ್ಲಿ ಜಾತಿ ಪಕ್ಷಪಾತ
ಇದೇ ವೇಳೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಪಿ ಕೆ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ನೇತೃತ್ವದ ಪೀಠವು ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ ಪತ್ರಕರ್ತೆ ಮಮತಾ ತ್ರಿಪಾಠಿ ಅವರು ಸಲ್ಲಿಸಿದ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಎಫ್ಐಆರ್ಗಳು ರಾಜಕೀಯ ಪ್ರೇರಿತವಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ಷುಲ್ಲಕ ಪ್ರಯತ್ನದೊಂದಿಗೆ ದಾಖಲಿಸಲಾಗಿದೆ ಎಂದು ತ್ರಿಪಾಠಿ ಆರೋಪಿಸಿದ್ದಾರೆ. ತನ್ನ ಕೆಲವು ಟ್ವೀಟ್ಗಳಿಗೆ ಸಂಬಂಧಿಸಿ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಯುಪಿ ಸರ್ಕಾರದಲ್ಲಿ ಜಾತಿ ಪಕ್ಷಪಾತ
ಅವರ ಮನವಿಯನ್ನು ಆಲಿಸಿದ ಪೀಠವು, “ಪ್ರಕರಣದಲ್ಲಿ ಲೇಖನಗಳಿಗೆ ಸಂಬಂಧಿಸಿದಂತೆ ಅರ್ಜಿದಾರರ (ತ್ರಿಪಾಠಿ) ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ನಿರ್ದೇಶಿಸಲಾಗಿದೆ” ಎಂದು ಹೇಳಿದೆ. ನಾಲ್ಕು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಯಲಿದೆ.
ಪತ್ರಕರ್ತೆ ತ್ರಿಪಾಠಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ, “ರಾಜ್ಯದ ಸಾಮಾನ್ಯ ಆಡಳಿತದ ಜಾತಿ ಚಲನಶೀಲತೆ” ಕುರಿತ ಸುದ್ದಿ ವರದಿಗಾಗಿ ತಮ್ಮ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಪತ್ರಕರ್ತರಾದ ಅಭಿಷೇಕ್ ಉಪಾಧ್ಯಾಯ ಅವರು ಈ ಹಿಂದೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಉಪಾಧ್ಯಾಯ ಅವರ ಮನವಿಯ ಮೇಲಿನ ಸುಪ್ರಿಂಕೋರ್ಟ್ ಆದೇಶವನ್ನು ಉಲ್ಲೇಖಿಸಿದ ದವೆ, ತ್ರಿಪಾಠಿ ವಿರುದ್ಧ ದಾಖಲಾಗಿರುವ ಈ ಎಫ್ಐಆರ್ಗಳಲ್ಲಿ ಒಂದರಲ್ಲಿ ತಾನು ಸಹ-ಆರೋಪಿಯಾಗಿದ್ದೇನೆ ಮತ್ತು ಅವರ ಅರ್ಜಿಯ ಮೇರೆಗೆ, ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಕ್ರಮಗಳಿಂದ ಅವರನ್ನು ರಕ್ಷಿಸಿತ್ತು ಎಂದು ಹೇಳಿದ್ದಾರೆ.
“ಪತ್ರಕರ್ತರ ಬರಹಗಳನ್ನು ಸರ್ಕಾರದ ಟೀಕೆ ಎಂದು ಭಾವಿಸುವುದ ಲೇಖಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಾರದು ಎಂದು ಉಪಾಧ್ಯಾಯ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಇದು ಶುದ್ಧ ಕಿರುಕುಳವಾಗಿದ್ದು, ಕೇವಲ X ನಲ್ಲಿನ ಪೋಸ್ಟ್ಗಳಿಗಾಗಿ ಪತ್ರಕರ್ತೆಯ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗಿದೆ” ಎಂದು ದವೆ ಹೇಳಿದ್ದಾರೆ.
ವಕೀಲ ಅಮರ್ಜಿತ್ ಸಿಂಗ್ ಬೇಡಿ ಅವರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ, ಪತ್ರಕರ್ತೆ ತ್ರಿಪಾಠಿ ವಿರುದ್ಧ ನಾಲ್ಕು ಎಫ್ಐಆರ್ಗಳನ್ನು ಕ್ರಮವಾಗಿ ಅಯೋಧ್ಯೆ, ಅಮೇಥಿ, ಬಾರಾಬಂಕಿ ಮತ್ತು ಲಕ್ನೋದಲ್ಲಿ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. “ಎಫ್ಐಆರ್ಗಳು ರಾಜಕೀಯ ಪ್ರೇರಿತವಾಗಿದ್ದು, ಅರ್ಜಿದಾರರ ವಿರುದ್ಧ ಕ್ಷುಲ್ಲಕ ಎಫ್ಐಆರ್ಗಳನ್ನು ದಾಖಲಿಸುವ ಮೂಲಕ ಅವರ ಪತ್ರಿಕಾ ಸ್ವಾತಂತ್ರ್ಯವನ್ನು ಹಾಳುಮಾಡಲು ಪ್ರಯತ್ನಿಸಲಾಗುತ್ತಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮುಡಾ ಪ್ರಕರಣ | ರಾಜ್ಯಪಾಲರ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಮುಡಾ ಪ್ರಕರಣ | ರಾಜ್ಯಪಾಲರ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ


