Homeಮುಖಪುಟಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

ಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

- Advertisement -
- Advertisement -

ಕರ್ನಾಟಕದಲ್ಲಿ ಹಲವು ಕಾಲಘಟ್ಟಗಳಲ್ಲಿ ಸಾಂಸ್ಕೃತಿಕ ಚರ್ಚೆ-ವಾಗ್ವಾದಗಳು ಜರುಗಿವೆ. ಆ ವಾಗ್ವಾದಗಳಲ್ಲಿ ಹಲವು ಬಾರಿ ಜಾತಿಯ ವಿಷಯವೂ ಮುನ್ನೆಲೆಗೆ ಬಂದು ಒಂದಷ್ಟು ಹೊಸ ತಿಳಿವಳಿಕೆಗೆ ದಾರಿಮಾಡಿಕೊಟ್ಟಿದೆ. ಕುವೆಂಪು ಅವರ ಶೂದ್ರತಪಸ್ವಿ ನಾಟಕದ ವಾಗ್ವಾದ ಇರಬಹುದು, ಬಿ.ಬಸವಲಿಂಗಪ್ಪನವರ ಬೂಸಾ ಪ್ರಕರಣ ಇರಬಹುದು, ಸಾಂಸ್ಕೃತಿಕ ಮತ್ತು ರಾಜಕೀಯ ರಂಗಗಳಲ್ಲಿ ಬಿಸಿಬಿಸಿ ಜಾತಿ ಚರ್ಚೆಗಳು ನಡೆದಿವೆ. ಬ್ರಾಹ್ಮಣ್ಯ ಮತ್ತು ಪುರೋಹಿತಶಾಹಿ ಪಾರಮ್ಯವನ್ನು ಪ್ರಶ್ನಿಸಲಾಗಿದೆ. ಆದರೂ ಬ್ರಾಹ್ಮಣ್ಯದ ಯಜಮಾನಿಕೆಯನ್ನು ನಮ್ಮ ಸಮಾಜದಿಂದ ತೊಲಗಿಸುವುದು ಸುಲಭ ಮಾತಲ್ಲ. ಈಗ ಕನ್ನಡ ಚಿತ್ರನಟರಾದ ಚೇತನ್ ಅಹಿಂಸ ಮತ್ತು ಕಿರಣ್ ಶ್ರೀನಿವಾಸ್ ಈ ಚರ್ಚೆಗೆ ಹೊಸ ಹೊಳಪು ನೀಡಿದ್ದು, ಚೇತನ್ ಅವರ ಮೇಲೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನಗರ ಪೊಲೀಸ ಕಮಿಶನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು. ಅದಲ್ಲದೆ ರಾಜ್ಯದ ಹಲವು ಕಡೆ ಚೇತನ್ ವಿರುದ್ಧ ದೂರು ದಾಖಲಾಗಿದ್ದು, ಅವರು ಪೊಲೀಸ್ ವಿಚಾರಣೆಗೂ ಹಾಜರಾಗಿದ್ದಾರೆ. ತಾವು ನುಡಿದಿರುವ ಮಾತುಗಳಿಗೆ ಬದ್ಧರಾಗಿರುವುದಾಗಿಯೂ ಮತ್ತು ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿಯೂ ಚೇತನ್ ತಿಳಿಸಿ ಘನತೆಯನ್ನು ಮೆರೆದಿದ್ದಾರೆ. ತಾವು ಒಂದು ನಿರ್ದಿಷ್ಟ ಜಾತಿಯ ವಿರುದ್ಧ ಮಾತನಾಡಿಲ್ಲ; ಬದಲಾಗಿ ಬ್ರಾಹ್ಮಣ್ಯದ ವಿರುದ್ಧ ಮಾತನಾಡಿದ್ದೀನಿ, ತಾರತಮ್ಯವನ್ನು ಪೋಷಿಸುವ ಬ್ರಾಹ್ಮಣ್ಯ ಇಂದು ಎಲ್ಲ ಜಾತಿಗಳಲ್ಲೂ ಇದೆ ಎಂದು ಅವರು ಸ್ಪಷ್ಟಪಡಿಸಿದ್ದರೂ ಅವರ ವಿರುದ್ಧ ಹಲವು ವೇದಿಕೆಗಳಲ್ಲಿ ನಿಂದನೆಯನ್ನು ಸುರಿಸಲಾಗುತ್ತಿದೆ.

1938ರಲ್ಲಿ ನಡೆದ ರೈಲ್ವೇ ನಿಮ್ನವರ್ಗದ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡುತ್ತಾ ಬಾಬಾಸಾಹೇಬರು ಬ್ರಾಹ್ಮಣ್ಯವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ: “ನನ್ನ ದೃಷ್ಟಿಯಲ್ಲಿ, ಈ ದೇಶದ ಕಾರ್ಮಿಕರು ಇಬ್ಬರು ಶತ್ರುಗಳ ಜೊತೆಗೆ ಹೋರಾಡಬೇಕಿದೆ. ಆ ಇಬ್ಬರು ಶತ್ರುಗಳು ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ” ಎನ್ನುವ ಅವರು ಮುಂದುವರೆದು “ಬ್ರಾಹ್ಮಣ್ಯ ಅಂದರೆ ಬ್ರಾಹ್ಮಣರು ಒಂದು ಸಮುದಾಯವಾಗಿ ಹೊಂದಿರುವ ಅಧಿಕಾರ, ಸವಲತ್ತುಗಳು ಮತ್ತು ಹಿತಾಸಕ್ತಿಯಷ್ಟೇ ಅಲ್ಲ. ಆ ದೃಷ್ಟಿಯಲ್ಲಿ ನಾನು ಆ ಪದವನ್ನು ಬಳಸುತ್ತಿಲ್ಲ. ಬ್ರಾಹ್ಮಣ್ಯ ಅಂದರೆ ನನ್ನ ಪ್ರಕಾರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಯನ್ನು ಇಲ್ಲವಾಗಿಸುವುದು. ಆ ನಿಟ್ಟಿನಲ್ಲಿ ಇದು ಎಲ್ಲಾ ವರ್ಗಗಳಲ್ಲೂ ವ್ಯಾಪಕವಾಗಿದೆ ಮತ್ತು ಇದರ ಹುಟ್ಟಿಗೆ ಅವರೇ ಕಾರಣರಾಗಿದ್ದರೂ ಬ್ರಾಹ್ಮಣರಲ್ಲಿ ಮಾತ್ರ ಅದು ಉಳಿದಿದೆ ಎನ್ನಲಾಗುವುದಿಲ್ಲ” ಎನ್ನುತ್ತಾರೆ. ಮುಂದುವರೆದು “…ಬ್ರಾಹ್ಮಣ್ಯ ಕೆಲವು ವರ್ಗಗಳಿಗೆ ಮಾತ್ರ ಸವಲತ್ತಿನ ಸ್ಥಾನ ನೀಡುತ್ತದೆ. ಕೆಲವು ವರ್ಗಗಳಿಗೆ ಅದು ಅವಕಾಶದ ಸಮಾನತೆಯನ್ನು ನಿರಾಕರಿಸುತ್ತದೆ” ಎಂದು ವ್ಯಾಖ್ಯಾನಿಸಿ, ಅಂದಿನ ಯೂನಿಯನ್ ಲೀಡರ್‌ಗಳಲ್ಲಿ ಇದ್ದ ಬ್ರಾಹ್ಮಣ್ಯವನ್ನೂ ವಿಮರ್ಶಿಸಿ, ಟೀಕಿಸಿ ನಿಮ್ನವರ್ಗದ ಕಾರ್ಮಿಕರ ಹಿತವನ್ನು ಕಾಪಾಡುವಂತಹ ಹೊಸ ಯೂನಿಯನ್ ಅವಶ್ಯಕತೆಯ ಬಗ್ಗೆ, ಆ ಯೂನಿಯನ್ ರಾಜಕೀಯ ಅಧಿಕಾರಕ್ಕೆ ಪ್ರಯತ್ನಿಸಬೇಕಾದ ಬಗ್ಗೆ ಬಾಬಾಸಾಹೇಬರು ಅಂದು ಮಾಡಿದ ಭಾಷಣ ಐತಿಹಾಸಿಕವಾದದ್ದು.

ಬ್ರಾಹ್ಮಣ್ಯದ ಬಗ್ಗೆ ಇಷ್ಟು ವರ್ಷಗಳಿಂದ ಹೊಮ್ಮಿರುವ ಸ್ಪಷ್ಟವಾದ ವಿಚಾರವನ್ನು ಕಡೆಗಣಿಸಿ, ಈ ನೆಲದ ಪಾರಂಪರಿಕ ಜಾತಿ ತಾರತಮ್ಯವನ್ನು ಬಯಸುವ ಮನಸ್ಸುಗಳು ಇಂದು ಮತ್ತೆ ರಚ್ಚೆ ಹಿಡಿದಿವೆ. ಇದು ಕುವೆಂಪು ಕಾಲದಲ್ಲಿಯೂ ಆಗಿತ್ತು. ಬಸವಲಿಂಗಪ್ಪ, ಸಿದ್ಧಲಿಂಗಯ್ಯನವರ ಮೇಲೆ ದಾಳಿ ನಡೆಸಿದ ಶಕ್ತಿಗಳು ಕೂಡ ಇವೇ ಆಗಿದ್ದವು. ಇಂದು ಚೇತನ್ ಮೇಲೆ ಮುಗಿಬಿದ್ದವರೂ ಅವರೇ ಆಗಿದ್ದಾರೆ. ವಿವಿಧ ಕಾಲಘಟ್ಟಗಳಲ್ಲಿ ಬ್ರಾಹ್ಮಣ್ಯವನ್ನು ತೊಲಗಿಸುವುದಕ್ಕೆ ಚಿಂತಿಸಿದವರ ಮೇಲೆ, ಅದಕ್ಕಾಗಿ ಕೆಲಸ ಮಾಡಿದವರ ಮೇಲೆ ದಾಳಿ ನಡೆಸಿರುವುದಕ್ಕೆ ಹಲವು ನಿದರ್ಶನಗಳಿವೆ. ಆರ್.ವೆಂಕಟೇಶ್ ಎಂಬುವವರು ’ವಿಚಾರ ತರಂಗ’ ಎಂಬ ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ವಿಚಾರವಾದ ಗೌಣವಾಗಿದ್ದು ಬ್ರಾಹ್ಮಣ್ಯದ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದಿರುವ ಕೃತಿಯದು. ಪುಸ್ತಕದ ಕೊನೆಯ ಭಾಗದ ’ವಿಶ್ವಮಾನವೀಯ ಚಿಂತನ’ ಎಂಬ ತಲೆಬರಹದಲ್ಲಿ ಪ್ರಕಟವಾಗಿರುವ ಲೇಖನಗಳಲ್ಲಿ ಕುವೆಂಪು ಅವರನ್ನು, ಅವರ ವಿಶ್ವಮಾನವ ವಿಚಾರವನ್ನು

PC : Prajavani

ವಿರೋಧಿಸುವ ಲೇಖನಗಳದ್ದೇ ಸಿಂಹಪಾಲು. ಅದರಲ್ಲಿ ಸ್ಥಾನ ಪಡೆದುಕೊಂಡಿರುವ ಪರಮ ಬ್ರಾಹ್ಮಣ್ಯದ ಲೇಖನ ’ವಿಶ್ವಮಾನವೀಯತೆ ಹಾಗು ಸಮಯಸಾಧಕತನ’. 1975ರಲ್ಲಿ ’ಮಧ್ವವಿಜಯ’ ಎಂಬ ಪತ್ರಿಕೆಗೆ ಪುತ್ತಿಗೆ ಲಕ್ಷ್ಮೀನಾರಾಯಣರಾಯರು ಎಂಬುವವರು ಬರೆದಿರುವ ಸಂಪಾದಕೀಯದಲ್ಲಿ ಕುವೆಂಪು ಮತ್ತು ಪ್ರಗತಿಪರ ಬರಹಗಾರರ ಒಕ್ಕೂಟದ ಮೇಲೆ ವಿಷ ಕಾರುವುದಕ್ಕೆಂದೇ ಅವರು ತಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಿದ್ದಾರೆ. ಅದರ ಒಂದು ಪ್ಯಾರಾವನ್ನು ಇಲ್ಲಿ ಉಲ್ಲೇಖಿಸುತ್ತಿರುವ ಉದ್ದೇಶ, ಬ್ರಾಹ್ಮಣ್ಯದ ನೀಚತನ ಸ್ಪಷ್ಟವಾದೀತೆಂದು: “…ನನಗೀಗ ಬಲವಾದ ಅನುಮಾನವೊಂದು ಕಾಡುತ್ತಿದೆ. ಇದನ್ನು ಅಮೆರಿಕಾದ ವಾಟರ್‌ಗೇಟ್ ಪ್ರಕರಣದಂತೆ ಯಾರಾದರೂ ಸಾಹಸಿಗಳು ಬಯಲಿಗೆಳೆದರೆ ಉಪಕಾರ. ಇತ್ತೀಚೆಗೆ ಗತಿಸಿದ ದೊಡ್ಡ ವಾಗ್ಗೇಯಕಾರರು, ತತ್ತ್ವಶಾಸ್ತ್ರ ಪಂಡಿತರು, ಮಹಾಮೇಧಾವಿಗಳೆಂದು ದೇಶವಿದೇಶಗಳಲ್ಲಿ ಮೂಢ ಜನರಿಂದ ಮತ್ತು ಭಟ್ಟಂಗಿಗಳಿಂದ ಹೊಗಳಿಸಿಕೊಂಡ ದೊಡ್ಡ ವ್ಯಕ್ತಿಯೊಬ್ಬರಿಗೆ ಕೀರ್ತನೆ ಪ್ರಬಂಧಗಳನ್ನು ಭಾಷಣಗಳನ್ನು ಬರೆದುಕೊಡುತ್ತಿದ್ದವರೆಲ್ಲಾ ಯಾರು ಯಾರು ಎಂಬುದು ನನಗೆ ಗೊತ್ತು. ಇದು ಪ್ರಚಾರಯುಗ, ಭಾಷಣಯುಗ. ಪತ್ರಿಕೆಗಳಲ್ಲಿ ಬಂದದ್ದೆಲ್ಲಾ ಸತ್ಯವೆಂದು ತಿಳಿದು ವಿಮರ್ಶೆ ಮಾಡದೆ ನಂಬುವ ಅವಿದ್ಯಾವಂತರೇ ಬಹುತೇಕವಾಗಿರುವ ಈ ನಮ್ಮ ದೇಶದಲ್ಲಿ ಇದೆಲ್ಲಾ ಈಗೀಗ ಮಾಮೂಲು. ಇಲಿಮರಿಯಿಂದ ಹಿಡಿದು ಪರಮಾಣು ಬಾಂಬಿನವರೆಗೆ (Every Thing Under Sun) ವೇದಿಕೆಯ ಮೇಲೆ ಭರ್ಜರಿ ಹೂ ಹಾರ ಹಾಕಿಸಿಕೊಂಡು ತಾವು ಮಾತನಾಡುವ ವಿಷಯದ ಬಗ್ಗೆ ಸ್ವಲ್ಪ ಕೂಡಾ ತಮಗೆ ತಿಳಿದಿಲ್ಲವಾದರೂ ಮಂತ್ರಿಗಳೆಲ್ಲ ಭಾಷಣ ಬಿಗಿಯುತ್ತಾರೆ. ಕಾರ್ಯದರ್ಶಿಗಳು ಬರೆದುಕೊಡುತ್ತಾರೆ, ಮಂತ್ರಿಗಳು ಭಾಷಣ ಬಿಗಿಯುತ್ತಾರೆ. ಇಬ್ಬರಿಗೂ ಇದೇ ಕೆಲಸ ಯಾವಾಗಲೂ. ಹಾಗೆಯೇ ಪುಟ್ಟಪ್ಪ ದಕ್ಷಿಣೆಯ ಆಸೆ ತೋರಿಸಿ ಬಡ ಬ್ರಾಹ್ಮಣನೊಬ್ಬನಿಂದ ಬರೆಸಿರಬಹುದೆ?”

PC : ಅರಳಿಮರ

ಕುವೆಂಪು ಅವರಿಗೆ ಇಂತಹ ನೀಚ ಶಕ್ತಿಗಳನ್ನು ಮೆಟ್ಟಿನಿಲ್ಲುವ ಶಕ್ತಿ ಹಲವು ಕಾರಣಗಳಿಂದ ಒದಗಿತ್ತು. ಆದರೆ ಒಂದು ಹೇಳಿಕೆಗಾಗಿ ಬಿ.ಬಸವಲಿಂಗಪ್ಪನವರನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ ಜಾತಿ ಕಬಂಧಗಳು ಮತ್ತು ಅದರಲ್ಲಿ ಅಂತರ್ಗತವಾಗಿರುವ ಬ್ರಾಹ್ಮಣ್ಯ ಎಷ್ಟು ದೈತ್ಯಾಕಾರವಾದದ್ದು, ಎಷ್ಟು ವಿಷಕಾರಿ ಮತ್ತು ಎಷ್ಟು ವಿನಾಶಕಾರಿ ಎಂಬುದನ್ನು ಮನಗಾಣಬಹುದು. ಇಂದು ಚೇತನ್ ವಿರುದ್ಧ ಅದು ತನ್ನ ತೋಳು ತಟ್ಟಿರುವುದು ಸಾಂಕೇತಿಕವಷ್ಟೇ! ಸಾವಿರಾರು ವರ್ಷಗಳಿಂದ ಅದರ ಕಾಲ್ತುಳಿತಕ್ಕೆ ಸಿಕ್ಕಿ ನಶಿಸಿಹೋದವರಿಗೆ ಲೆಕ್ಕವೇ ಇಲ್ಲ. ಮತ್ತೊಂದು ಕೋನದಿಂದ ನೋಡುವುದಾದರೆ ಆರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಹೇಳುವಂತೆ, ಸಂವಿಧಾನ ನೀಡಿದ ಬಲದಿಂದ ಈಗಷ್ಟೇ ಹಿಂದುಳಿದವರು ಮತ್ತು ದಲಿತರು ಸಣ್ಣ ಮಟ್ಟದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯುತ್ತಿದ್ದಂತೆ, ಹೊಟ್ಟೆ ಉರಿಯಿಂದ ಮೇಲ್ಜಾತಿಗಳು ಎದ್ದಿರುವ ’ಬಂಡಾಯ’ ಕೂಡ ಇದಾಗಿದೆ.

ಇಂತಹ ದುರಿತ ಸಮಯದಲ್ಲಿ ನ್ಯಾಯಪಥ ಪತ್ರಿಕೆಯ ಈ ಸಂಚಿಕೆಯಲ್ಲಿ ಬ್ರಾಹ್ಮಣ್ಯದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದ್ದೇವೆ. ಚಿಂತಕರಾದ ರಾಜೇಂದ್ರ ಚೆನ್ನಿ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಯುವ ಸಂಶೋಧಕ ಅಮರ್ ಹೊಳೆಗದ್ದೆ ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಬ್ರಾಹ್ಮಣ್ಯದ ಬೇರುಗಳು ಎಷ್ಟು ಆಳಕ್ಕೆ ಇಳಿದಿವೆಯೋ ಹಾಗೆಯೇ ಈ ಆಧುನಿಕ ಜಗತ್ತಿನಲ್ಲಿ ಅದು ಚಾಚಿರುವ ಕೊಂಬೆಗಳು ಕೂಡ ವಿಸ್ತಾರವಾಗಿದೆ. ವಾಸಿಸುವ ಸ್ಥಳಗಳಲ್ಲಿ ಸೆಗ್ರಿಗೇಶನ್, ಮೆರಿಟ್ ಎಂಬುದರ ಬಗ್ಗೆ ಸುಳ್ಳಿನ ಪ್ರಾಮುಖ್ಯತೆ, ಮೀಸಲಾತಿ-ಪ್ರಾತಿನಿಧ್ಯದ ಬಗ್ಗೆ ಲೇವಡಿ ಮಾಡುವ ಪ್ರಚಾರ ಇತ್ಯಾದಿಯಾಗಿ ಅದು ರೂಪಾಂತರಗೊಂಡಿದೆ. ಪತ್ರಿಕೆ ಮುಂದಿನ ವಾರಗಳಲ್ಲಿ ಇವುಗಳ ಚರ್ಚೆಯನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲಿದೆ.


ಇದನ್ನೂ ಓದಿ: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...