Homeಮುಖಪುಟಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

ಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

- Advertisement -
- Advertisement -

ಕರ್ನಾಟಕದಲ್ಲಿ ಹಲವು ಕಾಲಘಟ್ಟಗಳಲ್ಲಿ ಸಾಂಸ್ಕೃತಿಕ ಚರ್ಚೆ-ವಾಗ್ವಾದಗಳು ಜರುಗಿವೆ. ಆ ವಾಗ್ವಾದಗಳಲ್ಲಿ ಹಲವು ಬಾರಿ ಜಾತಿಯ ವಿಷಯವೂ ಮುನ್ನೆಲೆಗೆ ಬಂದು ಒಂದಷ್ಟು ಹೊಸ ತಿಳಿವಳಿಕೆಗೆ ದಾರಿಮಾಡಿಕೊಟ್ಟಿದೆ. ಕುವೆಂಪು ಅವರ ಶೂದ್ರತಪಸ್ವಿ ನಾಟಕದ ವಾಗ್ವಾದ ಇರಬಹುದು, ಬಿ.ಬಸವಲಿಂಗಪ್ಪನವರ ಬೂಸಾ ಪ್ರಕರಣ ಇರಬಹುದು, ಸಾಂಸ್ಕೃತಿಕ ಮತ್ತು ರಾಜಕೀಯ ರಂಗಗಳಲ್ಲಿ ಬಿಸಿಬಿಸಿ ಜಾತಿ ಚರ್ಚೆಗಳು ನಡೆದಿವೆ. ಬ್ರಾಹ್ಮಣ್ಯ ಮತ್ತು ಪುರೋಹಿತಶಾಹಿ ಪಾರಮ್ಯವನ್ನು ಪ್ರಶ್ನಿಸಲಾಗಿದೆ. ಆದರೂ ಬ್ರಾಹ್ಮಣ್ಯದ ಯಜಮಾನಿಕೆಯನ್ನು ನಮ್ಮ ಸಮಾಜದಿಂದ ತೊಲಗಿಸುವುದು ಸುಲಭ ಮಾತಲ್ಲ. ಈಗ ಕನ್ನಡ ಚಿತ್ರನಟರಾದ ಚೇತನ್ ಅಹಿಂಸ ಮತ್ತು ಕಿರಣ್ ಶ್ರೀನಿವಾಸ್ ಈ ಚರ್ಚೆಗೆ ಹೊಸ ಹೊಳಪು ನೀಡಿದ್ದು, ಚೇತನ್ ಅವರ ಮೇಲೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನಗರ ಪೊಲೀಸ ಕಮಿಶನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು. ಅದಲ್ಲದೆ ರಾಜ್ಯದ ಹಲವು ಕಡೆ ಚೇತನ್ ವಿರುದ್ಧ ದೂರು ದಾಖಲಾಗಿದ್ದು, ಅವರು ಪೊಲೀಸ್ ವಿಚಾರಣೆಗೂ ಹಾಜರಾಗಿದ್ದಾರೆ. ತಾವು ನುಡಿದಿರುವ ಮಾತುಗಳಿಗೆ ಬದ್ಧರಾಗಿರುವುದಾಗಿಯೂ ಮತ್ತು ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿಯೂ ಚೇತನ್ ತಿಳಿಸಿ ಘನತೆಯನ್ನು ಮೆರೆದಿದ್ದಾರೆ. ತಾವು ಒಂದು ನಿರ್ದಿಷ್ಟ ಜಾತಿಯ ವಿರುದ್ಧ ಮಾತನಾಡಿಲ್ಲ; ಬದಲಾಗಿ ಬ್ರಾಹ್ಮಣ್ಯದ ವಿರುದ್ಧ ಮಾತನಾಡಿದ್ದೀನಿ, ತಾರತಮ್ಯವನ್ನು ಪೋಷಿಸುವ ಬ್ರಾಹ್ಮಣ್ಯ ಇಂದು ಎಲ್ಲ ಜಾತಿಗಳಲ್ಲೂ ಇದೆ ಎಂದು ಅವರು ಸ್ಪಷ್ಟಪಡಿಸಿದ್ದರೂ ಅವರ ವಿರುದ್ಧ ಹಲವು ವೇದಿಕೆಗಳಲ್ಲಿ ನಿಂದನೆಯನ್ನು ಸುರಿಸಲಾಗುತ್ತಿದೆ.

1938ರಲ್ಲಿ ನಡೆದ ರೈಲ್ವೇ ನಿಮ್ನವರ್ಗದ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡುತ್ತಾ ಬಾಬಾಸಾಹೇಬರು ಬ್ರಾಹ್ಮಣ್ಯವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ: “ನನ್ನ ದೃಷ್ಟಿಯಲ್ಲಿ, ಈ ದೇಶದ ಕಾರ್ಮಿಕರು ಇಬ್ಬರು ಶತ್ರುಗಳ ಜೊತೆಗೆ ಹೋರಾಡಬೇಕಿದೆ. ಆ ಇಬ್ಬರು ಶತ್ರುಗಳು ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ” ಎನ್ನುವ ಅವರು ಮುಂದುವರೆದು “ಬ್ರಾಹ್ಮಣ್ಯ ಅಂದರೆ ಬ್ರಾಹ್ಮಣರು ಒಂದು ಸಮುದಾಯವಾಗಿ ಹೊಂದಿರುವ ಅಧಿಕಾರ, ಸವಲತ್ತುಗಳು ಮತ್ತು ಹಿತಾಸಕ್ತಿಯಷ್ಟೇ ಅಲ್ಲ. ಆ ದೃಷ್ಟಿಯಲ್ಲಿ ನಾನು ಆ ಪದವನ್ನು ಬಳಸುತ್ತಿಲ್ಲ. ಬ್ರಾಹ್ಮಣ್ಯ ಅಂದರೆ ನನ್ನ ಪ್ರಕಾರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಯನ್ನು ಇಲ್ಲವಾಗಿಸುವುದು. ಆ ನಿಟ್ಟಿನಲ್ಲಿ ಇದು ಎಲ್ಲಾ ವರ್ಗಗಳಲ್ಲೂ ವ್ಯಾಪಕವಾಗಿದೆ ಮತ್ತು ಇದರ ಹುಟ್ಟಿಗೆ ಅವರೇ ಕಾರಣರಾಗಿದ್ದರೂ ಬ್ರಾಹ್ಮಣರಲ್ಲಿ ಮಾತ್ರ ಅದು ಉಳಿದಿದೆ ಎನ್ನಲಾಗುವುದಿಲ್ಲ” ಎನ್ನುತ್ತಾರೆ. ಮುಂದುವರೆದು “…ಬ್ರಾಹ್ಮಣ್ಯ ಕೆಲವು ವರ್ಗಗಳಿಗೆ ಮಾತ್ರ ಸವಲತ್ತಿನ ಸ್ಥಾನ ನೀಡುತ್ತದೆ. ಕೆಲವು ವರ್ಗಗಳಿಗೆ ಅದು ಅವಕಾಶದ ಸಮಾನತೆಯನ್ನು ನಿರಾಕರಿಸುತ್ತದೆ” ಎಂದು ವ್ಯಾಖ್ಯಾನಿಸಿ, ಅಂದಿನ ಯೂನಿಯನ್ ಲೀಡರ್‌ಗಳಲ್ಲಿ ಇದ್ದ ಬ್ರಾಹ್ಮಣ್ಯವನ್ನೂ ವಿಮರ್ಶಿಸಿ, ಟೀಕಿಸಿ ನಿಮ್ನವರ್ಗದ ಕಾರ್ಮಿಕರ ಹಿತವನ್ನು ಕಾಪಾಡುವಂತಹ ಹೊಸ ಯೂನಿಯನ್ ಅವಶ್ಯಕತೆಯ ಬಗ್ಗೆ, ಆ ಯೂನಿಯನ್ ರಾಜಕೀಯ ಅಧಿಕಾರಕ್ಕೆ ಪ್ರಯತ್ನಿಸಬೇಕಾದ ಬಗ್ಗೆ ಬಾಬಾಸಾಹೇಬರು ಅಂದು ಮಾಡಿದ ಭಾಷಣ ಐತಿಹಾಸಿಕವಾದದ್ದು.

ಬ್ರಾಹ್ಮಣ್ಯದ ಬಗ್ಗೆ ಇಷ್ಟು ವರ್ಷಗಳಿಂದ ಹೊಮ್ಮಿರುವ ಸ್ಪಷ್ಟವಾದ ವಿಚಾರವನ್ನು ಕಡೆಗಣಿಸಿ, ಈ ನೆಲದ ಪಾರಂಪರಿಕ ಜಾತಿ ತಾರತಮ್ಯವನ್ನು ಬಯಸುವ ಮನಸ್ಸುಗಳು ಇಂದು ಮತ್ತೆ ರಚ್ಚೆ ಹಿಡಿದಿವೆ. ಇದು ಕುವೆಂಪು ಕಾಲದಲ್ಲಿಯೂ ಆಗಿತ್ತು. ಬಸವಲಿಂಗಪ್ಪ, ಸಿದ್ಧಲಿಂಗಯ್ಯನವರ ಮೇಲೆ ದಾಳಿ ನಡೆಸಿದ ಶಕ್ತಿಗಳು ಕೂಡ ಇವೇ ಆಗಿದ್ದವು. ಇಂದು ಚೇತನ್ ಮೇಲೆ ಮುಗಿಬಿದ್ದವರೂ ಅವರೇ ಆಗಿದ್ದಾರೆ. ವಿವಿಧ ಕಾಲಘಟ್ಟಗಳಲ್ಲಿ ಬ್ರಾಹ್ಮಣ್ಯವನ್ನು ತೊಲಗಿಸುವುದಕ್ಕೆ ಚಿಂತಿಸಿದವರ ಮೇಲೆ, ಅದಕ್ಕಾಗಿ ಕೆಲಸ ಮಾಡಿದವರ ಮೇಲೆ ದಾಳಿ ನಡೆಸಿರುವುದಕ್ಕೆ ಹಲವು ನಿದರ್ಶನಗಳಿವೆ. ಆರ್.ವೆಂಕಟೇಶ್ ಎಂಬುವವರು ’ವಿಚಾರ ತರಂಗ’ ಎಂಬ ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ವಿಚಾರವಾದ ಗೌಣವಾಗಿದ್ದು ಬ್ರಾಹ್ಮಣ್ಯದ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದಿರುವ ಕೃತಿಯದು. ಪುಸ್ತಕದ ಕೊನೆಯ ಭಾಗದ ’ವಿಶ್ವಮಾನವೀಯ ಚಿಂತನ’ ಎಂಬ ತಲೆಬರಹದಲ್ಲಿ ಪ್ರಕಟವಾಗಿರುವ ಲೇಖನಗಳಲ್ಲಿ ಕುವೆಂಪು ಅವರನ್ನು, ಅವರ ವಿಶ್ವಮಾನವ ವಿಚಾರವನ್ನು

PC : Prajavani

ವಿರೋಧಿಸುವ ಲೇಖನಗಳದ್ದೇ ಸಿಂಹಪಾಲು. ಅದರಲ್ಲಿ ಸ್ಥಾನ ಪಡೆದುಕೊಂಡಿರುವ ಪರಮ ಬ್ರಾಹ್ಮಣ್ಯದ ಲೇಖನ ’ವಿಶ್ವಮಾನವೀಯತೆ ಹಾಗು ಸಮಯಸಾಧಕತನ’. 1975ರಲ್ಲಿ ’ಮಧ್ವವಿಜಯ’ ಎಂಬ ಪತ್ರಿಕೆಗೆ ಪುತ್ತಿಗೆ ಲಕ್ಷ್ಮೀನಾರಾಯಣರಾಯರು ಎಂಬುವವರು ಬರೆದಿರುವ ಸಂಪಾದಕೀಯದಲ್ಲಿ ಕುವೆಂಪು ಮತ್ತು ಪ್ರಗತಿಪರ ಬರಹಗಾರರ ಒಕ್ಕೂಟದ ಮೇಲೆ ವಿಷ ಕಾರುವುದಕ್ಕೆಂದೇ ಅವರು ತಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಿದ್ದಾರೆ. ಅದರ ಒಂದು ಪ್ಯಾರಾವನ್ನು ಇಲ್ಲಿ ಉಲ್ಲೇಖಿಸುತ್ತಿರುವ ಉದ್ದೇಶ, ಬ್ರಾಹ್ಮಣ್ಯದ ನೀಚತನ ಸ್ಪಷ್ಟವಾದೀತೆಂದು: “…ನನಗೀಗ ಬಲವಾದ ಅನುಮಾನವೊಂದು ಕಾಡುತ್ತಿದೆ. ಇದನ್ನು ಅಮೆರಿಕಾದ ವಾಟರ್‌ಗೇಟ್ ಪ್ರಕರಣದಂತೆ ಯಾರಾದರೂ ಸಾಹಸಿಗಳು ಬಯಲಿಗೆಳೆದರೆ ಉಪಕಾರ. ಇತ್ತೀಚೆಗೆ ಗತಿಸಿದ ದೊಡ್ಡ ವಾಗ್ಗೇಯಕಾರರು, ತತ್ತ್ವಶಾಸ್ತ್ರ ಪಂಡಿತರು, ಮಹಾಮೇಧಾವಿಗಳೆಂದು ದೇಶವಿದೇಶಗಳಲ್ಲಿ ಮೂಢ ಜನರಿಂದ ಮತ್ತು ಭಟ್ಟಂಗಿಗಳಿಂದ ಹೊಗಳಿಸಿಕೊಂಡ ದೊಡ್ಡ ವ್ಯಕ್ತಿಯೊಬ್ಬರಿಗೆ ಕೀರ್ತನೆ ಪ್ರಬಂಧಗಳನ್ನು ಭಾಷಣಗಳನ್ನು ಬರೆದುಕೊಡುತ್ತಿದ್ದವರೆಲ್ಲಾ ಯಾರು ಯಾರು ಎಂಬುದು ನನಗೆ ಗೊತ್ತು. ಇದು ಪ್ರಚಾರಯುಗ, ಭಾಷಣಯುಗ. ಪತ್ರಿಕೆಗಳಲ್ಲಿ ಬಂದದ್ದೆಲ್ಲಾ ಸತ್ಯವೆಂದು ತಿಳಿದು ವಿಮರ್ಶೆ ಮಾಡದೆ ನಂಬುವ ಅವಿದ್ಯಾವಂತರೇ ಬಹುತೇಕವಾಗಿರುವ ಈ ನಮ್ಮ ದೇಶದಲ್ಲಿ ಇದೆಲ್ಲಾ ಈಗೀಗ ಮಾಮೂಲು. ಇಲಿಮರಿಯಿಂದ ಹಿಡಿದು ಪರಮಾಣು ಬಾಂಬಿನವರೆಗೆ (Every Thing Under Sun) ವೇದಿಕೆಯ ಮೇಲೆ ಭರ್ಜರಿ ಹೂ ಹಾರ ಹಾಕಿಸಿಕೊಂಡು ತಾವು ಮಾತನಾಡುವ ವಿಷಯದ ಬಗ್ಗೆ ಸ್ವಲ್ಪ ಕೂಡಾ ತಮಗೆ ತಿಳಿದಿಲ್ಲವಾದರೂ ಮಂತ್ರಿಗಳೆಲ್ಲ ಭಾಷಣ ಬಿಗಿಯುತ್ತಾರೆ. ಕಾರ್ಯದರ್ಶಿಗಳು ಬರೆದುಕೊಡುತ್ತಾರೆ, ಮಂತ್ರಿಗಳು ಭಾಷಣ ಬಿಗಿಯುತ್ತಾರೆ. ಇಬ್ಬರಿಗೂ ಇದೇ ಕೆಲಸ ಯಾವಾಗಲೂ. ಹಾಗೆಯೇ ಪುಟ್ಟಪ್ಪ ದಕ್ಷಿಣೆಯ ಆಸೆ ತೋರಿಸಿ ಬಡ ಬ್ರಾಹ್ಮಣನೊಬ್ಬನಿಂದ ಬರೆಸಿರಬಹುದೆ?”

PC : ಅರಳಿಮರ

ಕುವೆಂಪು ಅವರಿಗೆ ಇಂತಹ ನೀಚ ಶಕ್ತಿಗಳನ್ನು ಮೆಟ್ಟಿನಿಲ್ಲುವ ಶಕ್ತಿ ಹಲವು ಕಾರಣಗಳಿಂದ ಒದಗಿತ್ತು. ಆದರೆ ಒಂದು ಹೇಳಿಕೆಗಾಗಿ ಬಿ.ಬಸವಲಿಂಗಪ್ಪನವರನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ ಜಾತಿ ಕಬಂಧಗಳು ಮತ್ತು ಅದರಲ್ಲಿ ಅಂತರ್ಗತವಾಗಿರುವ ಬ್ರಾಹ್ಮಣ್ಯ ಎಷ್ಟು ದೈತ್ಯಾಕಾರವಾದದ್ದು, ಎಷ್ಟು ವಿಷಕಾರಿ ಮತ್ತು ಎಷ್ಟು ವಿನಾಶಕಾರಿ ಎಂಬುದನ್ನು ಮನಗಾಣಬಹುದು. ಇಂದು ಚೇತನ್ ವಿರುದ್ಧ ಅದು ತನ್ನ ತೋಳು ತಟ್ಟಿರುವುದು ಸಾಂಕೇತಿಕವಷ್ಟೇ! ಸಾವಿರಾರು ವರ್ಷಗಳಿಂದ ಅದರ ಕಾಲ್ತುಳಿತಕ್ಕೆ ಸಿಕ್ಕಿ ನಶಿಸಿಹೋದವರಿಗೆ ಲೆಕ್ಕವೇ ಇಲ್ಲ. ಮತ್ತೊಂದು ಕೋನದಿಂದ ನೋಡುವುದಾದರೆ ಆರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಹೇಳುವಂತೆ, ಸಂವಿಧಾನ ನೀಡಿದ ಬಲದಿಂದ ಈಗಷ್ಟೇ ಹಿಂದುಳಿದವರು ಮತ್ತು ದಲಿತರು ಸಣ್ಣ ಮಟ್ಟದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯುತ್ತಿದ್ದಂತೆ, ಹೊಟ್ಟೆ ಉರಿಯಿಂದ ಮೇಲ್ಜಾತಿಗಳು ಎದ್ದಿರುವ ’ಬಂಡಾಯ’ ಕೂಡ ಇದಾಗಿದೆ.

ಇಂತಹ ದುರಿತ ಸಮಯದಲ್ಲಿ ನ್ಯಾಯಪಥ ಪತ್ರಿಕೆಯ ಈ ಸಂಚಿಕೆಯಲ್ಲಿ ಬ್ರಾಹ್ಮಣ್ಯದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದ್ದೇವೆ. ಚಿಂತಕರಾದ ರಾಜೇಂದ್ರ ಚೆನ್ನಿ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಯುವ ಸಂಶೋಧಕ ಅಮರ್ ಹೊಳೆಗದ್ದೆ ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಬ್ರಾಹ್ಮಣ್ಯದ ಬೇರುಗಳು ಎಷ್ಟು ಆಳಕ್ಕೆ ಇಳಿದಿವೆಯೋ ಹಾಗೆಯೇ ಈ ಆಧುನಿಕ ಜಗತ್ತಿನಲ್ಲಿ ಅದು ಚಾಚಿರುವ ಕೊಂಬೆಗಳು ಕೂಡ ವಿಸ್ತಾರವಾಗಿದೆ. ವಾಸಿಸುವ ಸ್ಥಳಗಳಲ್ಲಿ ಸೆಗ್ರಿಗೇಶನ್, ಮೆರಿಟ್ ಎಂಬುದರ ಬಗ್ಗೆ ಸುಳ್ಳಿನ ಪ್ರಾಮುಖ್ಯತೆ, ಮೀಸಲಾತಿ-ಪ್ರಾತಿನಿಧ್ಯದ ಬಗ್ಗೆ ಲೇವಡಿ ಮಾಡುವ ಪ್ರಚಾರ ಇತ್ಯಾದಿಯಾಗಿ ಅದು ರೂಪಾಂತರಗೊಂಡಿದೆ. ಪತ್ರಿಕೆ ಮುಂದಿನ ವಾರಗಳಲ್ಲಿ ಇವುಗಳ ಚರ್ಚೆಯನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲಿದೆ.


ಇದನ್ನೂ ಓದಿ: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...