Homeಮುಖಪುಟಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

ಸಂಪಾದಕೀಯ; ಮೈಮನಸ್ಸುಗಳಲ್ಲಿ ನಾಟಿರುವ ಜಾತಿಯೆಂಬ ಅಪಾಯಕಾರಿ ಸುಳಿಯಲ್ಲಿ ಬ್ರಾಹ್ಮಣ್ಯದ ಪಾಳೆಗಾರಿಕೆ

- Advertisement -
- Advertisement -

ಕರ್ನಾಟಕದಲ್ಲಿ ಹಲವು ಕಾಲಘಟ್ಟಗಳಲ್ಲಿ ಸಾಂಸ್ಕೃತಿಕ ಚರ್ಚೆ-ವಾಗ್ವಾದಗಳು ಜರುಗಿವೆ. ಆ ವಾಗ್ವಾದಗಳಲ್ಲಿ ಹಲವು ಬಾರಿ ಜಾತಿಯ ವಿಷಯವೂ ಮುನ್ನೆಲೆಗೆ ಬಂದು ಒಂದಷ್ಟು ಹೊಸ ತಿಳಿವಳಿಕೆಗೆ ದಾರಿಮಾಡಿಕೊಟ್ಟಿದೆ. ಕುವೆಂಪು ಅವರ ಶೂದ್ರತಪಸ್ವಿ ನಾಟಕದ ವಾಗ್ವಾದ ಇರಬಹುದು, ಬಿ.ಬಸವಲಿಂಗಪ್ಪನವರ ಬೂಸಾ ಪ್ರಕರಣ ಇರಬಹುದು, ಸಾಂಸ್ಕೃತಿಕ ಮತ್ತು ರಾಜಕೀಯ ರಂಗಗಳಲ್ಲಿ ಬಿಸಿಬಿಸಿ ಜಾತಿ ಚರ್ಚೆಗಳು ನಡೆದಿವೆ. ಬ್ರಾಹ್ಮಣ್ಯ ಮತ್ತು ಪುರೋಹಿತಶಾಹಿ ಪಾರಮ್ಯವನ್ನು ಪ್ರಶ್ನಿಸಲಾಗಿದೆ. ಆದರೂ ಬ್ರಾಹ್ಮಣ್ಯದ ಯಜಮಾನಿಕೆಯನ್ನು ನಮ್ಮ ಸಮಾಜದಿಂದ ತೊಲಗಿಸುವುದು ಸುಲಭ ಮಾತಲ್ಲ. ಈಗ ಕನ್ನಡ ಚಿತ್ರನಟರಾದ ಚೇತನ್ ಅಹಿಂಸ ಮತ್ತು ಕಿರಣ್ ಶ್ರೀನಿವಾಸ್ ಈ ಚರ್ಚೆಗೆ ಹೊಸ ಹೊಳಪು ನೀಡಿದ್ದು, ಚೇತನ್ ಅವರ ಮೇಲೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನಗರ ಪೊಲೀಸ ಕಮಿಶನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು. ಅದಲ್ಲದೆ ರಾಜ್ಯದ ಹಲವು ಕಡೆ ಚೇತನ್ ವಿರುದ್ಧ ದೂರು ದಾಖಲಾಗಿದ್ದು, ಅವರು ಪೊಲೀಸ್ ವಿಚಾರಣೆಗೂ ಹಾಜರಾಗಿದ್ದಾರೆ. ತಾವು ನುಡಿದಿರುವ ಮಾತುಗಳಿಗೆ ಬದ್ಧರಾಗಿರುವುದಾಗಿಯೂ ಮತ್ತು ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿಯೂ ಚೇತನ್ ತಿಳಿಸಿ ಘನತೆಯನ್ನು ಮೆರೆದಿದ್ದಾರೆ. ತಾವು ಒಂದು ನಿರ್ದಿಷ್ಟ ಜಾತಿಯ ವಿರುದ್ಧ ಮಾತನಾಡಿಲ್ಲ; ಬದಲಾಗಿ ಬ್ರಾಹ್ಮಣ್ಯದ ವಿರುದ್ಧ ಮಾತನಾಡಿದ್ದೀನಿ, ತಾರತಮ್ಯವನ್ನು ಪೋಷಿಸುವ ಬ್ರಾಹ್ಮಣ್ಯ ಇಂದು ಎಲ್ಲ ಜಾತಿಗಳಲ್ಲೂ ಇದೆ ಎಂದು ಅವರು ಸ್ಪಷ್ಟಪಡಿಸಿದ್ದರೂ ಅವರ ವಿರುದ್ಧ ಹಲವು ವೇದಿಕೆಗಳಲ್ಲಿ ನಿಂದನೆಯನ್ನು ಸುರಿಸಲಾಗುತ್ತಿದೆ.

1938ರಲ್ಲಿ ನಡೆದ ರೈಲ್ವೇ ನಿಮ್ನವರ್ಗದ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡುತ್ತಾ ಬಾಬಾಸಾಹೇಬರು ಬ್ರಾಹ್ಮಣ್ಯವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ: “ನನ್ನ ದೃಷ್ಟಿಯಲ್ಲಿ, ಈ ದೇಶದ ಕಾರ್ಮಿಕರು ಇಬ್ಬರು ಶತ್ರುಗಳ ಜೊತೆಗೆ ಹೋರಾಡಬೇಕಿದೆ. ಆ ಇಬ್ಬರು ಶತ್ರುಗಳು ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ” ಎನ್ನುವ ಅವರು ಮುಂದುವರೆದು “ಬ್ರಾಹ್ಮಣ್ಯ ಅಂದರೆ ಬ್ರಾಹ್ಮಣರು ಒಂದು ಸಮುದಾಯವಾಗಿ ಹೊಂದಿರುವ ಅಧಿಕಾರ, ಸವಲತ್ತುಗಳು ಮತ್ತು ಹಿತಾಸಕ್ತಿಯಷ್ಟೇ ಅಲ್ಲ. ಆ ದೃಷ್ಟಿಯಲ್ಲಿ ನಾನು ಆ ಪದವನ್ನು ಬಳಸುತ್ತಿಲ್ಲ. ಬ್ರಾಹ್ಮಣ್ಯ ಅಂದರೆ ನನ್ನ ಪ್ರಕಾರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಯನ್ನು ಇಲ್ಲವಾಗಿಸುವುದು. ಆ ನಿಟ್ಟಿನಲ್ಲಿ ಇದು ಎಲ್ಲಾ ವರ್ಗಗಳಲ್ಲೂ ವ್ಯಾಪಕವಾಗಿದೆ ಮತ್ತು ಇದರ ಹುಟ್ಟಿಗೆ ಅವರೇ ಕಾರಣರಾಗಿದ್ದರೂ ಬ್ರಾಹ್ಮಣರಲ್ಲಿ ಮಾತ್ರ ಅದು ಉಳಿದಿದೆ ಎನ್ನಲಾಗುವುದಿಲ್ಲ” ಎನ್ನುತ್ತಾರೆ. ಮುಂದುವರೆದು “…ಬ್ರಾಹ್ಮಣ್ಯ ಕೆಲವು ವರ್ಗಗಳಿಗೆ ಮಾತ್ರ ಸವಲತ್ತಿನ ಸ್ಥಾನ ನೀಡುತ್ತದೆ. ಕೆಲವು ವರ್ಗಗಳಿಗೆ ಅದು ಅವಕಾಶದ ಸಮಾನತೆಯನ್ನು ನಿರಾಕರಿಸುತ್ತದೆ” ಎಂದು ವ್ಯಾಖ್ಯಾನಿಸಿ, ಅಂದಿನ ಯೂನಿಯನ್ ಲೀಡರ್‌ಗಳಲ್ಲಿ ಇದ್ದ ಬ್ರಾಹ್ಮಣ್ಯವನ್ನೂ ವಿಮರ್ಶಿಸಿ, ಟೀಕಿಸಿ ನಿಮ್ನವರ್ಗದ ಕಾರ್ಮಿಕರ ಹಿತವನ್ನು ಕಾಪಾಡುವಂತಹ ಹೊಸ ಯೂನಿಯನ್ ಅವಶ್ಯಕತೆಯ ಬಗ್ಗೆ, ಆ ಯೂನಿಯನ್ ರಾಜಕೀಯ ಅಧಿಕಾರಕ್ಕೆ ಪ್ರಯತ್ನಿಸಬೇಕಾದ ಬಗ್ಗೆ ಬಾಬಾಸಾಹೇಬರು ಅಂದು ಮಾಡಿದ ಭಾಷಣ ಐತಿಹಾಸಿಕವಾದದ್ದು.

ಬ್ರಾಹ್ಮಣ್ಯದ ಬಗ್ಗೆ ಇಷ್ಟು ವರ್ಷಗಳಿಂದ ಹೊಮ್ಮಿರುವ ಸ್ಪಷ್ಟವಾದ ವಿಚಾರವನ್ನು ಕಡೆಗಣಿಸಿ, ಈ ನೆಲದ ಪಾರಂಪರಿಕ ಜಾತಿ ತಾರತಮ್ಯವನ್ನು ಬಯಸುವ ಮನಸ್ಸುಗಳು ಇಂದು ಮತ್ತೆ ರಚ್ಚೆ ಹಿಡಿದಿವೆ. ಇದು ಕುವೆಂಪು ಕಾಲದಲ್ಲಿಯೂ ಆಗಿತ್ತು. ಬಸವಲಿಂಗಪ್ಪ, ಸಿದ್ಧಲಿಂಗಯ್ಯನವರ ಮೇಲೆ ದಾಳಿ ನಡೆಸಿದ ಶಕ್ತಿಗಳು ಕೂಡ ಇವೇ ಆಗಿದ್ದವು. ಇಂದು ಚೇತನ್ ಮೇಲೆ ಮುಗಿಬಿದ್ದವರೂ ಅವರೇ ಆಗಿದ್ದಾರೆ. ವಿವಿಧ ಕಾಲಘಟ್ಟಗಳಲ್ಲಿ ಬ್ರಾಹ್ಮಣ್ಯವನ್ನು ತೊಲಗಿಸುವುದಕ್ಕೆ ಚಿಂತಿಸಿದವರ ಮೇಲೆ, ಅದಕ್ಕಾಗಿ ಕೆಲಸ ಮಾಡಿದವರ ಮೇಲೆ ದಾಳಿ ನಡೆಸಿರುವುದಕ್ಕೆ ಹಲವು ನಿದರ್ಶನಗಳಿವೆ. ಆರ್.ವೆಂಕಟೇಶ್ ಎಂಬುವವರು ’ವಿಚಾರ ತರಂಗ’ ಎಂಬ ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ವಿಚಾರವಾದ ಗೌಣವಾಗಿದ್ದು ಬ್ರಾಹ್ಮಣ್ಯದ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದಿರುವ ಕೃತಿಯದು. ಪುಸ್ತಕದ ಕೊನೆಯ ಭಾಗದ ’ವಿಶ್ವಮಾನವೀಯ ಚಿಂತನ’ ಎಂಬ ತಲೆಬರಹದಲ್ಲಿ ಪ್ರಕಟವಾಗಿರುವ ಲೇಖನಗಳಲ್ಲಿ ಕುವೆಂಪು ಅವರನ್ನು, ಅವರ ವಿಶ್ವಮಾನವ ವಿಚಾರವನ್ನು

PC : Prajavani

ವಿರೋಧಿಸುವ ಲೇಖನಗಳದ್ದೇ ಸಿಂಹಪಾಲು. ಅದರಲ್ಲಿ ಸ್ಥಾನ ಪಡೆದುಕೊಂಡಿರುವ ಪರಮ ಬ್ರಾಹ್ಮಣ್ಯದ ಲೇಖನ ’ವಿಶ್ವಮಾನವೀಯತೆ ಹಾಗು ಸಮಯಸಾಧಕತನ’. 1975ರಲ್ಲಿ ’ಮಧ್ವವಿಜಯ’ ಎಂಬ ಪತ್ರಿಕೆಗೆ ಪುತ್ತಿಗೆ ಲಕ್ಷ್ಮೀನಾರಾಯಣರಾಯರು ಎಂಬುವವರು ಬರೆದಿರುವ ಸಂಪಾದಕೀಯದಲ್ಲಿ ಕುವೆಂಪು ಮತ್ತು ಪ್ರಗತಿಪರ ಬರಹಗಾರರ ಒಕ್ಕೂಟದ ಮೇಲೆ ವಿಷ ಕಾರುವುದಕ್ಕೆಂದೇ ಅವರು ತಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಿದ್ದಾರೆ. ಅದರ ಒಂದು ಪ್ಯಾರಾವನ್ನು ಇಲ್ಲಿ ಉಲ್ಲೇಖಿಸುತ್ತಿರುವ ಉದ್ದೇಶ, ಬ್ರಾಹ್ಮಣ್ಯದ ನೀಚತನ ಸ್ಪಷ್ಟವಾದೀತೆಂದು: “…ನನಗೀಗ ಬಲವಾದ ಅನುಮಾನವೊಂದು ಕಾಡುತ್ತಿದೆ. ಇದನ್ನು ಅಮೆರಿಕಾದ ವಾಟರ್‌ಗೇಟ್ ಪ್ರಕರಣದಂತೆ ಯಾರಾದರೂ ಸಾಹಸಿಗಳು ಬಯಲಿಗೆಳೆದರೆ ಉಪಕಾರ. ಇತ್ತೀಚೆಗೆ ಗತಿಸಿದ ದೊಡ್ಡ ವಾಗ್ಗೇಯಕಾರರು, ತತ್ತ್ವಶಾಸ್ತ್ರ ಪಂಡಿತರು, ಮಹಾಮೇಧಾವಿಗಳೆಂದು ದೇಶವಿದೇಶಗಳಲ್ಲಿ ಮೂಢ ಜನರಿಂದ ಮತ್ತು ಭಟ್ಟಂಗಿಗಳಿಂದ ಹೊಗಳಿಸಿಕೊಂಡ ದೊಡ್ಡ ವ್ಯಕ್ತಿಯೊಬ್ಬರಿಗೆ ಕೀರ್ತನೆ ಪ್ರಬಂಧಗಳನ್ನು ಭಾಷಣಗಳನ್ನು ಬರೆದುಕೊಡುತ್ತಿದ್ದವರೆಲ್ಲಾ ಯಾರು ಯಾರು ಎಂಬುದು ನನಗೆ ಗೊತ್ತು. ಇದು ಪ್ರಚಾರಯುಗ, ಭಾಷಣಯುಗ. ಪತ್ರಿಕೆಗಳಲ್ಲಿ ಬಂದದ್ದೆಲ್ಲಾ ಸತ್ಯವೆಂದು ತಿಳಿದು ವಿಮರ್ಶೆ ಮಾಡದೆ ನಂಬುವ ಅವಿದ್ಯಾವಂತರೇ ಬಹುತೇಕವಾಗಿರುವ ಈ ನಮ್ಮ ದೇಶದಲ್ಲಿ ಇದೆಲ್ಲಾ ಈಗೀಗ ಮಾಮೂಲು. ಇಲಿಮರಿಯಿಂದ ಹಿಡಿದು ಪರಮಾಣು ಬಾಂಬಿನವರೆಗೆ (Every Thing Under Sun) ವೇದಿಕೆಯ ಮೇಲೆ ಭರ್ಜರಿ ಹೂ ಹಾರ ಹಾಕಿಸಿಕೊಂಡು ತಾವು ಮಾತನಾಡುವ ವಿಷಯದ ಬಗ್ಗೆ ಸ್ವಲ್ಪ ಕೂಡಾ ತಮಗೆ ತಿಳಿದಿಲ್ಲವಾದರೂ ಮಂತ್ರಿಗಳೆಲ್ಲ ಭಾಷಣ ಬಿಗಿಯುತ್ತಾರೆ. ಕಾರ್ಯದರ್ಶಿಗಳು ಬರೆದುಕೊಡುತ್ತಾರೆ, ಮಂತ್ರಿಗಳು ಭಾಷಣ ಬಿಗಿಯುತ್ತಾರೆ. ಇಬ್ಬರಿಗೂ ಇದೇ ಕೆಲಸ ಯಾವಾಗಲೂ. ಹಾಗೆಯೇ ಪುಟ್ಟಪ್ಪ ದಕ್ಷಿಣೆಯ ಆಸೆ ತೋರಿಸಿ ಬಡ ಬ್ರಾಹ್ಮಣನೊಬ್ಬನಿಂದ ಬರೆಸಿರಬಹುದೆ?”

PC : ಅರಳಿಮರ

ಕುವೆಂಪು ಅವರಿಗೆ ಇಂತಹ ನೀಚ ಶಕ್ತಿಗಳನ್ನು ಮೆಟ್ಟಿನಿಲ್ಲುವ ಶಕ್ತಿ ಹಲವು ಕಾರಣಗಳಿಂದ ಒದಗಿತ್ತು. ಆದರೆ ಒಂದು ಹೇಳಿಕೆಗಾಗಿ ಬಿ.ಬಸವಲಿಂಗಪ್ಪನವರನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ ಜಾತಿ ಕಬಂಧಗಳು ಮತ್ತು ಅದರಲ್ಲಿ ಅಂತರ್ಗತವಾಗಿರುವ ಬ್ರಾಹ್ಮಣ್ಯ ಎಷ್ಟು ದೈತ್ಯಾಕಾರವಾದದ್ದು, ಎಷ್ಟು ವಿಷಕಾರಿ ಮತ್ತು ಎಷ್ಟು ವಿನಾಶಕಾರಿ ಎಂಬುದನ್ನು ಮನಗಾಣಬಹುದು. ಇಂದು ಚೇತನ್ ವಿರುದ್ಧ ಅದು ತನ್ನ ತೋಳು ತಟ್ಟಿರುವುದು ಸಾಂಕೇತಿಕವಷ್ಟೇ! ಸಾವಿರಾರು ವರ್ಷಗಳಿಂದ ಅದರ ಕಾಲ್ತುಳಿತಕ್ಕೆ ಸಿಕ್ಕಿ ನಶಿಸಿಹೋದವರಿಗೆ ಲೆಕ್ಕವೇ ಇಲ್ಲ. ಮತ್ತೊಂದು ಕೋನದಿಂದ ನೋಡುವುದಾದರೆ ಆರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಹೇಳುವಂತೆ, ಸಂವಿಧಾನ ನೀಡಿದ ಬಲದಿಂದ ಈಗಷ್ಟೇ ಹಿಂದುಳಿದವರು ಮತ್ತು ದಲಿತರು ಸಣ್ಣ ಮಟ್ಟದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯುತ್ತಿದ್ದಂತೆ, ಹೊಟ್ಟೆ ಉರಿಯಿಂದ ಮೇಲ್ಜಾತಿಗಳು ಎದ್ದಿರುವ ’ಬಂಡಾಯ’ ಕೂಡ ಇದಾಗಿದೆ.

ಇಂತಹ ದುರಿತ ಸಮಯದಲ್ಲಿ ನ್ಯಾಯಪಥ ಪತ್ರಿಕೆಯ ಈ ಸಂಚಿಕೆಯಲ್ಲಿ ಬ್ರಾಹ್ಮಣ್ಯದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದ್ದೇವೆ. ಚಿಂತಕರಾದ ರಾಜೇಂದ್ರ ಚೆನ್ನಿ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಯುವ ಸಂಶೋಧಕ ಅಮರ್ ಹೊಳೆಗದ್ದೆ ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಬ್ರಾಹ್ಮಣ್ಯದ ಬೇರುಗಳು ಎಷ್ಟು ಆಳಕ್ಕೆ ಇಳಿದಿವೆಯೋ ಹಾಗೆಯೇ ಈ ಆಧುನಿಕ ಜಗತ್ತಿನಲ್ಲಿ ಅದು ಚಾಚಿರುವ ಕೊಂಬೆಗಳು ಕೂಡ ವಿಸ್ತಾರವಾಗಿದೆ. ವಾಸಿಸುವ ಸ್ಥಳಗಳಲ್ಲಿ ಸೆಗ್ರಿಗೇಶನ್, ಮೆರಿಟ್ ಎಂಬುದರ ಬಗ್ಗೆ ಸುಳ್ಳಿನ ಪ್ರಾಮುಖ್ಯತೆ, ಮೀಸಲಾತಿ-ಪ್ರಾತಿನಿಧ್ಯದ ಬಗ್ಗೆ ಲೇವಡಿ ಮಾಡುವ ಪ್ರಚಾರ ಇತ್ಯಾದಿಯಾಗಿ ಅದು ರೂಪಾಂತರಗೊಂಡಿದೆ. ಪತ್ರಿಕೆ ಮುಂದಿನ ವಾರಗಳಲ್ಲಿ ಇವುಗಳ ಚರ್ಚೆಯನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲಿದೆ.


ಇದನ್ನೂ ಓದಿ: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...