Homeಕರೋನಾ ತಲ್ಲಣಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

ಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

- Advertisement -
- Advertisement -

ಕೊರೊನಾ ವೈರಾಣುಗಳ ರುದ್ರ ತಾಂಡವದ ಆರ್ಭಟದಲ್ಲಿ ಅದಕ್ಕಿಂತಲೂ ಗಂಡಾಂತರಕಾರಿಯಾದ ರೋಗಗಳಿಂದ ಆಗುತ್ತಿರುವ ಅನಾಹುತವನ್ನು ಆಳುವ ಸರ್ಕಾರ ಕಡೆಗಣಿಸಿ ಕೂತಿದೆಯಾ? ರಾಜ್ಯಾದ್ಯಂತ ಇರುವ ಸಾವಿರಾರು ಕಿಡ್ನಿವೈಫಲ್ಯದ ರೋಗಿಗಳು ಅನುಭವಿಸುತ್ತಿರುವ ಸಾವುಬದುಕಿನ ನಡುವಿನ ಸಂಕಟ ಇಂತಹ ಅನುಮಾನವನ್ನು ಹುಟ್ಟುಹಾಕಿದೆ!

ಎರಡೂ ಮೂತ್ರಪಿಂಡ ವಿಫಲವಾಗಿರುವ ಮಂದಿಯದು ತೀರಾ ನಾಜೂಕಿನ ಮತ್ತು ಅಷ್ಟೇ ಕ್ಲಿಷ್ಟಕರ ಬದುಕು. ಒಂಚೂರು ಹೆಚ್ಚು ಕಮ್ಮಿಯಾದರೂ ಜೀವಕ್ಕೇ ಕುತ್ತು. ಕೆಲವರಿಗಂತೂ ವಾರದಲ್ಲಿ 2-3 ಬಾರಿ ಡಯಾಲಿಸಿಸ್ ಅನಿವಾರ್ಯ. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಇಂಥ ಸುಮಾರು 30-50 ಡಯಾಲಿಸಿಸ್ ರೋಗಿಗಳಿದ್ದಾರೆ. ಇವರಲ್ಲಿ ಬಹುತೇಕರು ಬಡ ಅಥವಾ ಕೆಳ ಮಧ್ಯಮವರ್ಗದ ಕುಟುಂಬದವರು; ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವಷ್ಟು ಚೈತನ್ಯ ಇಲ್ಲದವರು. ಇವರೆಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡುವ ಸರ್ಕಾರಿ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದ ಯು.ಟಿ ಖಾದರ್‌ಗೆ ಡಯಾಲಿಸಿಸ್ ರೋಗಿಗಳ ಗೋಳು ಗೊತ್ತಾಗಿತ್ತು. ಅವರ ಐದು ವರ್ಷದ ಕಾಲಮಿತಿಯಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಡಯಾಲಿಸಿಸ್ ಕೇಂದ್ರ ನಡೆಸುವಂಥ ಯೋಜನೆ ಹಾಕಿಕೊಂಡಿದ್ದರು. ಖಾದರ್ ಈ ಯೋಜನೆ ಸಿದ್ಧಪಡಿಸುತ್ತಿದ್ದ ಸಮಯದಲ್ಲೇ ಅವರ ಬಳಿಯಿದ್ದ ಆರೋಗ್ಯ ಖಾತೆ ಹೋಗಿ, ಅವರು ಆಹಾರ ಸಚಿವರಾದರು. ಅವರ ನಂತರ ಬಂದ ರಮೇಶ್‌ಕುಮಾರ್ ಅವರಿಗೆ ಇದಕ್ಕಿಂತ ಖಾಸಗಿಯವರಿಗೆ ಡಯಾಲಿಸಿಸ್ ಯೋಜನೆಯ ಗುತ್ತಿಗೆ ನೀಡುವುದು ಅನುಕೂಲಕರ ಎಂದೆನಿಸಿರಬೇಕು. ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಲು ಹೊರಟಿದ್ದ ಅವರು ಈ ಖಾಸಗಿ ಗುತ್ತಿಗೆಯಿಂದ ಆಗುವ ಅನಾಹುತಗಳ ಬಗ್ಗೆಯೇಕೋ ಗಮನಹರಿಸಲಿಲ್ಲ.

ರಾಜ್ಯದ 23 ತಾಲ್ಲೂಕುಗಳ 122 ತಾಲ್ಲೂಕು ಕೇಂದ್ರಗಳಲ್ಲಿ ಮೂತ್ರಪಿಂಡ ಕಾಯಿಲೆಯವರಿಗೆ ಡಯಾಲಿಸಿಸ್ ನಡೆಸುವ ಗುತ್ತಿಗೆ ಅನಿವಾಸಿ ಭಾರತೀಯ ಆರೋಗ್ಯ ಉದ್ಯಮಿ ಬಿ.ಆರ್.ಶೆಟ್ಟಿಯ ಕಂಪನಿಗೆ ರಮೇಶ್ ಕುಮಾರ್ ಕಾಲದಲ್ಲಿ ಸಲೀಸಾಗಿ ದಕ್ಕಿತ್ತು. ಪ್ರತಿ ರೋಗಿಗೆ ಒಂದೂವರೆ ಸಾವಿರ ರೂ.ನಂತೆ ಡಯಾಲಿಸಿಸ್ ನಡೆಸುವ ಗುತ್ತಿಗೆಯನ್ನು ಬಿ.ಆರ್.ಶೆಟ್ಟಿ ಕಂಪನಿ ಪಡೆದುಕೊಂಡಿದೆ. ಹಾಗೆ ನೋಡಿದರೆ ತಲಾ 500-600ರೂ ಖರ್ಚು ತಗಲುವ ಈ ಡಯಾಲಿಸಿಸ್ ದುಬಾರಿ ರೇಟಿಗೆ ಬಿ.ಆರ್.ಶೆಟ್ಟಿ ಕುದುರಿಸಿಕೊಂಡಿದ್ದಾರೆ.

ಯಡಿಯೂರಪ್ಪ ಸರ್ಕಾರದಲ್ಲಿ ಡಾ. ಸುಧಾಕರ್ ಆರೋಗ್ಯ ಮಂತ್ರಿಯಾಗುವ ತನಕ ಡಯಾಲಿಸಿಸ್ ಹೇಳುವಂಥ ತೊಂದರೆ ತೊಡಕಿಲ್ಲದೆ ನಡೆದುಕೊಂಡು ಹೋಗಿತ್ತು. ದುಬೈನಲ್ಲಿ ಬಿ.ಆರ್.ಶೆಟ್ಟರ ಉದ್ಯಮ ಸಾಮ್ರಾಜ್ಯ ಪತನವಾಗುತ್ತಿದ್ದಂತೆಯೇ ಇತ್ತ ಕರ್ನಾಟಕದಲ್ಲೂ ಆತನ ವ್ಯವಹಾರವೆಲ್ಲ ಎಡವಟ್ಟಾಗುತ್ತ ಹೋಯಿತು. ಮಂತ್ರಿ ಡಾ.ಸುಧಾಕರ್ ಮತ್ತವರ ಆರೋಗ್ಯ ಇಲಾಖೆಯ ಆಯಕಟ್ಟಿನ ಅಧಿಕಾರಿಗಳ ಮಧ್ಯೆ ಸಾಮರಸ್ಯ ಇಲ್ಲದಾಯಿತು. ಬಿಆರ್‌ಎಸ್ ಕಂಪನಿಯ ಡಯಾಲಿಸಿಸ್ ಕೇಂದ್ರಗಳಲ್ಲಿ ನಾನಾ ನಮೂನೆಯ ಅವ್ಯವಸ್ಥೆ-ಅವಾಂತರ ನಡೆಯತೊಡಗಿತು.

ರೋಗಿಗಳು ದಿಕ್ಕೆಟ್ಟು ಹೋದರು. ಸರ್ಕಾರದಿಂದ ಬರಬೇಕಾದ ಹಣ ಕಾಲ ಕಾಲಕ್ಕೆ ಪಾವತಿ ಆಗದಿರುವುದೇ ಅವ್ಯವಸ್ಥೆಗೆ ಕಾರಣವೆಂದು ಬಿಆರ್‌ಎಸ್‌ನವರು ಬಹಿರಂಗವಾಗೇ ದೂರಹತ್ತಿದರು; ಆರೋಗ್ಯ ಮಂತ್ರಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಸಹಕಾರದಿಂದಾಗಿ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸಲು ಸಾಧ್ಯವಾಗದಂತಾಗಿದೆ ಎಂದು ಬಿಆರ್‌ಎಸ್ ಕಂಪನಿಯ ಕಾರ್ಯನಿರ್ವಾಹಕ ಹೇಳಿರುವ ಆಡಿಯೋ ಒಂದು ವೈರಲ್ ಆಯಿತು.

ಆರೋಗ್ಯ ಇಲಾಖೆ ಬಿಆರ್‌ಎಸ್ ಕಂಪನಿಯದೇ ತಪ್ಪೆನ್ನುತ್ತಿದೆ. ಬಿಆರ್‌ಎಸ್ ಕಂಪನಿ ಒಪ್ಪಂದ ಉಲ್ಲಂಘಿಸಿದೆ. ವಿದ್ಯುತ್ ಶಕ್ತಿ ಮತ್ತು ನೀರಿನ ಪೂರೈಕೆ ಬಿಆರ್‌ಎಸ್ ಕಂಪನಿಯೇ ಮಾಡಿಕೊಳ್ಳಬೇಕೆಂಬುದು ಒಪ್ಪಂದದ ಷರತ್ತು. ಆದರೆ ಬಿಆರ್‌ಎಸ್ ಕಂಪನಿಯವರು ಸರ್ಕಾರಿ ಆಸ್ಪತ್ರೆಗಳಲ್ಲಿನ ನೀರು ಮತ್ತು ವಿದ್ಯುತ್ ಬಳಸಿಕೊಂಡು ಅದರ ಖರ್ಚುವೆಚ್ಚ ಭರಿಸದೆ ಪಂಗನಾಮ ಹಾಕುತ್ತಿದ್ದಾರೆ. ಲೆಕ್ಕಪತ್ರ ಪರಿಶೀಲನೆಯಲ್ಲಿ ಇದು ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಬಿಲ್ ತಡೆಹಿಡಿಯಲಾಗಿದೆ ಎಂಬುದು ಆರೋಗ್ಯ ಇಲಾಖೆಯ ಸಮಜಾಯಿಷಿ.

ಬಿಆರ್‌ಎಸ್ ಕಂಪನಿ ಹಾಗು ಆರೋಗ್ಯ ಇಲಾಖೆಯ ಮೇಲಾಟದಲ್ಲಿ ಬಲಿ ಪಶುವಾಗುತ್ತಿರುವುದು ಮಾತ್ರ ನಿಸ್ಸಹಾಯಕ-ನಿರ್ಗತಿಕ ಡಯಾಲಿಸಿಸ್ ರೋಗಿಗಳು! ಬಿಆರ್‌ಎಸ್‌ನ ಎಲ್ಲ 122 ಡಯಾಲಿಸಿಸ್ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪಾಪದ ಪೇಶೆಂಟ್‌ಗಳು ಒದ್ದಾಡುತ್ತಿದ್ದಾರೆ. ಡಯಾಲಿಸಿಸ್‌ಗೆ ಬೇಕಾದ ರಾಸಾಯನಿಕ ಔಷಧ ಡಯಲೈಸರ್ ಮುಂತಾದ ಸಲಕರಣೆ ಸೆಂಟರ್‌ಗಳಲ್ಲಿ ಇಲ್ಲದಾಗಿದೆ! ಡಯಾಲಿಸಿಸ್ ಮಾಡುವ ನರ್ಸ್, ಟೆಕ್ನಿಶಿಯನ್‌ಗಳಿಗೆ ಬೇಕಾದ ಕನಿಷ್ಟ ಕೈಗ್ಲೌಸುಗಳು, ಮಾಸ್ಕ್‌ಗಳಿಗೂ ತತ್ವಾರವಾಗಿದೆ.

ಕೆಲವು ತಾಲ್ಲೂಕಿನ ರೋಗಿಗಳು ಅಥವಾ ಅವರ ಸಂಬಂಧಿಕರು ತೀರಾ ಅಗತ್ಯವಾದ ಪರಿಕರ-ಔಷಧ-ರಾಸಾಯನಿಕ ತಂದುಕೊಟ್ಟು ಡಯಾಲಿಸಿಸ್ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಸರಿಯಾಗಿ ಸಂಬಳ ಸಿಗದೆ ಸಿಬ್ಬಂದಿ ಒಬ್ಬೊಬ್ಬರಾಗಿ ಬಿಆರ್‌ಎಸ್ ಕಂಪನಿ ಬಿಟ್ಟು ಹೋಗುತ್ತಿರುವುದು, ರೋಗಿಗಳು ಮತ್ತವರ ಪರಿವಾರದವರನ್ನು ಚಿಂತೆಗೀಡುಮಾಡಿದೆ! ಸರ್ಕಾರದಿಂದ ಬರೋಬ್ಬರಿ 28 ಕೋಟಿ ಹಣ ಬರದಿರುವುದರಿಂದ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸುವುದು ಸಾಧ್ಯವೇ ಇಲ್ಲವೆಂದು ಬಿಆರ್‌ಎಸ್ ಕಂಪನಿಯವರು ಹೇಳುತ್ತಿದ್ದಾರೆ. ಹಾಗಂತ ಸಂಬಂಧಿಸಿದ ಸಚಿವ ಅಧಿಕಾರಿಗಳಿಗೂ ಪತ್ರ ಬರೆದಿರುವುದಾಗಿ ಬಿಆರ್‌ಎಸ್ ಕಂಪನಿ ಹೇಳಿಯೂ ಆಗಿದೆ.

ಇದು ಪರ್ಸೆಂಟೇಜ್ ಪರಾಕ್ರಮದ ಅಡ್ಡ ಪರಿಣಾಮವೆಂಬ ಆರೋಪವೂ ಕೇಳಿ ಬರುತ್ತಿದೆ. ಈಗಲಾದರೂ ಆರೋಗ್ಯ ಮಂತ್ರಿ ಹಾಗು ಆ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಡಯಾಲಿಸಿಸ್ ಪೇಶೆಂಟ್‌ಗಳು ಸಾಲು ಸಾಲಾಗಿ ಸಾಯುವುದು ಖಂಡಿತ! ಆರೋಗ್ಯ ಸೌಲಭ್ಯಗಳಿಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಮೊದಲೇ ಹೈರಾಣಾಗಿರುವ ಡಯಾಲಿಸಿಸ್ ರೋಗಿಗಳು ದೂರದ ಖಾಸಗಿ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ತುಂಬ ಕಷ್ಟ. ಉದಾಹರಣೆಗೆ ಉತ್ತರಕನ್ನಡದ ರೋಗಿಗಳು ಉಡುಪಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಪಣಜಿಗೆ ಹೋಗಬೇಕು. ಹೋಗಲಿಕ್ಕೆ ನಾಲ್ಕೈದು ತಾಸು ಬೇಕು; ಬರುವುದಕ್ಕೆ ಅಷ್ಟೇ ಸಮಯಬೇಕು. ಡಯಾಲಿಸಿಸ್‌ಗೆ 2-3 ಗಂಟೆ ಬೇಕಾಗುತ್ತದೆ. ಅಷ್ಟರಲ್ಲಿ ರೋಗಿ ಏದುಸಿರು ಬಿಡತೊಡಗುತ್ತಾನೆ/ಳೆ. ನಸೀಬ್ ಇದ್ದರಷ್ಟೇ ಬಚಾವ್!!

ತಕ್ಷಣಕ್ಕೆ ಮಂತ್ರಿ ಡಾ. ಸುಧಾಕರ್ ಬಿಆರ್‌ಎಸ್ ಕಂಪನಿಯನ್ನು ಹಳಿಗೆ ತರಲು ಗಂಭೀರ-ನಿಷ್ಠುರ ಪ್ರಯತ್ನ ಮಾಡಬೇಕಿದೆ; ಅದಾಗದಿದ್ದರೆ ಬಡ ರೋಗಿಗಳನ್ನು ಬದುಕಿಸಲು ಬದಲಿ ವ್ಯವಸ್ಥೆ ಮಾಡಬೇಕಿದೆ. ನಂತರ ನಿಧಾನಕ್ಕೆ ಪ್ರತಿ ತಾಲ್ಲೂಕಾಸ್ಪತ್ರೆಗಳಲ್ಲಿ ಸರಕಾರದ್ದೇ ಸ್ವತಂತ್ರ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಯೋಜನೆ ಹಾಕಿ ಕಾರ್ಯಗತಗೊಳಿಸಬೇಕಿದೆ.


ಇದನ್ನೂ ಓದಿ: ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಾಟ ಮಾಡುತ್ತಿರುವ, ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಅಂತರರಾಷ್ಟ್ರೀಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...