Homeಅಂಕಣಗಳುಜಾತಿ ಪದ್ಧತಿಯೇ ಜಾಣ ಮೀಸಲಾತಿಯಲ್ಲವೆ?

ಜಾತಿ ಪದ್ಧತಿಯೇ ಜಾಣ ಮೀಸಲಾತಿಯಲ್ಲವೆ?

- Advertisement -
- Advertisement -

ನಾಡಿನ ಹಿರಿಯ ಸಾಹಿತಿಗಳಾದ ಲಕ್ಷ್ಮಿಪತಿ ಕೋಲಾರ ಇವರು ಈ ಹಿಂದೆ ಮಂಡಲ್ ವರದಿ ಜಾರಿಯಾದಾಗ ಅದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಮೇಲ್ಜಾತಿಗಳು ಮತ್ತು ಮೇಲ್ಜಾತಿಗಳಿಗೆ ಬೆಂಬಲ ಸೂಚಿಸಿದ ಹಿಂದುಳಿದ ಜಾತಿಗಳ ಮೇಲ್ಮಧ್ಯಮ ವರ್ಗಗಳನ್ನುದ್ದೇಶಿಸಿ ಬರೆದ ಲೇಖನವಿದು. ಅಂದು ಪ್ರತಿಭೆ ಎಂಬ ಪದವನ್ನು ಹಿಡಿದು ಮಂಡಲ್ ಮೀಸಲಾತಿ ವಿರುದ್ಧ ಮಾತಾಡಿದವರಿಗೆ ಲಕ್ಷ್ಮಿಪತಿಯವರು ಪ್ರಶ್ನೆಗಳ ಮೂಲಕವೇ ಉತ್ತರವಿತ್ತಿದ್ದರು. ಈ ಲೇಖನವನ್ನು ಅಹಿಂದ ಪ್ರಕಾಶನದಿಂದಲೂ ಪ್ರಕಟಿಸಲಾಗಿತ್ತು. ಇಂದಿಗೂ ಈ ಲೇಖನ ಪ್ರಸ್ತುತವಾಗಿರುವ ಕಾರಣ ಇಲ್ಲಿ ಪ್ರಕಟಿಸಲಾಗಿದೆ.

ಮೀಸಲಾತಿ ಪರ ವಾದಗಳಿಗೆ ಇಳಿಯತೊಡಗಿದೊಡನೆ ಅವರು ಪ್ರಯೋಗಿಸುವ ಅತ್ಯಂತ ಸವಕಲು ಅಸ್ತ್ರ ‘ಪ್ರತಿಭೆ’ ಎಂಬ ಪದ. ಇಲ್ಲಿಂದಲೇ ಶುರುವಾಗಲಿ ನಮ್ಮ ವಾದವೂ. ಪ್ರತಿಭೆ ಎಂಬುದು ಯಾವುದೋ ಒಂದು ಜಾತಿಯ ಗುತ್ತಿಗೆಯಾಗಿದೆಯೇನು? ಪ್ರತಿಭೆ, ಆಲೋಚನೆಗಳೆಂಬುದು ಕೂಡ ಯಾರಪ್ಪನ ಮನೆಯ ಸ್ವತ್ತಲ್ಲವಲ್ಲ? ಆದರೂ ಮೀಸಲಾತಿಯ ವಿರುದ್ಧ ಮೈಪರಚಿಕೊಳ್ಳುತ್ತಿರುವ ಮೇಲ್ಜಾತಿ ಮನಸುಗಳ ವಾದ ಗಮನಿಸಿದರೆ ‘ಈ ದೇಶದ ಬಹುಸಂಖ್ಯಾತ ದಲಿತ ಮತ್ತು ಹಿಂದುಳಿದ ಜಾತಿಗಳ ಜನರಿಗೆ ಪ್ರತಿಭಟನೆಯೇ ಇಲ್ಲ; ಅವರು ವೈದ್ಯಕೀಯದಂತಹ ವೃತ್ತಿಗಳಿಗೆ ಅನರ್ಹರು’ ಎಂದು ಪರೋಕ್ಷವಾಗಿ ಈ ದೇಶದ ಮುಕ್ಕಾಲು ಭಾಗದ ಜನಸಮುದಾಯವನ್ನು ಜಾತಿನೆಲೆಯ ಕಾರಣಕ್ಕಾಗಿ ಅವಮಾನಿಸುತ್ತಿದ್ದಾರೆ ಎನಿಸುವುದಿಲ್ಲವೆ? ದೇಶದ ಜನರನ್ನು ಅವಮಾನಿಸುವುದೆಂದರೆ ದೇಶವನ್ನೇ ಅಪಮಾನಿಸಿದಂತಲ್ಲವೆ? ಮೀಸಲಾತಿಯೆಂಬ ಸಾಮಾಜಿಕ ನ್ಯಾಯ ರಕ್ಷಣೆಯಲ್ಲಿ ಅನರ್ಹರಿಗೂ, ಪ್ರತಿಭಾಹೀನರಿಗೂ ಅವಕಾಶ ನೀಡಿಬಿಡುತ್ತಿದ್ದಾರೆಂದು ಭಾವಿಸುವುದರ ಆಳದಲ್ಲಿ ತಾವಷ್ಟೆ ಪ್ರತಿಭಾವಂತರೆಂಬ ಮೇಲ್ಜಾತಿಯ ಇಂಗಿತಗಳು, ಅಹಮ್ಮಿಕೆಯೂ ಅಡಗಿಲ್ಲವೆ?

ವಸಂತಕುಮಾರ್ ಮೊಕದ್ದಮೆಯ ವಿಚಾರಣೆಯಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ‘ಅಸಮಾನ ಅವಕಾಶಗಳನ್ನು ಪಡೆಯುತ್ತಿರುವ ವ್ಯವಸ್ಥೆಯಲ್ಲಿ ಪ್ರತಿಭೆಗೆ ಅನ್ಯಾಯವೆಂಬ ಮಾತು ಆಡುವುದೇ ಅನ್ಯಾಯ’ ಎಂದಿರುವರಲ್ಲದೆ ‘ಯಾವುದೇ ಸೌಲಭ್ಯಗಳಿಲ್ಲದ ಗ್ರಾಮೀಣ ಪರಿಸರದಲ್ಲಿ ಬೆಳೆಯುವ ಮಕ್ಕಳು ಕಾನ್ವೆಂಟ್ ಶಿಕ್ಷಣ ಪಡೆದ, ಶ್ರೀಮಂತರ ಹಾಗೂ ಸಾಮಾಜಿಕವಾಗಿ ಉನ್ನತ ಶ್ರೇಣಿಗೆ ಸೇರಿದ ಮಕ್ಕಳ ಜೊತೆ ಸ್ಪರ್ಧಿಸುವುದು ನಿಜಕ್ಕೂ ಅಸಾಧ್ಯ. ಇಂತಹ ಎರಡು ವಿರೋಧಾಬಾಸದ ಪರಿಸರದ ಮಕ್ಕಳು ಸಮಾನವಾಗಿ ಅಂಕಗಳನ್ನು ಗಳಿಸಬೇಕೆಂದು ನಿರೀಕ್ಷಿಸುವುದು ಅಸಂಬದ್ಧ’ ಎಂಬ ಉನ್ನತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟಿನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿಗಳು, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶಿಫಾರಸ್ಸು ಮಾಡಿ ವರದಿ ನೀಡಿರುವವರು ಆದ ನ್ಯಾಯಮೂರ್ತಿ ಓ. ಚಿನ್ನಪ್ಪರೆಡ್ಡಿಯವರು ‘ಪ್ರತಿಭೆಗೆ ಅನ್ಯಾಯ’ ಎಂಬ ಬೀದಿ ಬೊಬ್ಬೆಗಳಿಗೆ ಸರಿಯಾದ ಉತ್ತರವನ್ನು ಹೀಗೆ ನೀಡಿದ್ದಾರೆ ‘ಭಾರತದ ಕೆಲವೇ ಸಮುದಾಯಗಳು ಇಂದು “ಪ್ರತಿಭೆಗೆ ಮನ್ನಣೆ ದೊರಕಬೇಕು” ಎಂದು ಕೂಗು ಹಾಕಲು ಅಸಾಧ್ಯವಾಗಿದ್ದೇ ಇಲ್ಲಿನ ದುರ್ಬಲ ವರ್ಗಗಳಿಂದಾಗಿ. ಯಾಕೆಂದರೆ ಈ ಕೆಲವೇ ಸಮುದಾಯಗಳಲ್ಲಿ ಕಾಣುವ ಪ್ರತಿಭೆ ಈ ದುರ್ಬಲ ವರ್ಗಗಳ ಶ್ರಮದ ಮೊತ್ತ. ಹೀಗಿರುವಾಗ ಭಾರತದ ದುರ್ಬಲ ವರ್ಗಗಳಲ್ಲಿ ಬೌದ್ಧಿಕ ದಾರಿದ್ರ್ಯ ತುಂಬಿದೆ ಎಂದು ಅವಹೇಳನ ಮಾಡುವುದು ಪ್ರತಿಷ್ಠಿತ ಸಮುದಾಯಗಳ ಅಹಂಕಾರ ಹಾಗೂ ಪೊಳ್ಳು ಪ್ರತಿಷ್ಠೆಗೆ ಸಂಕೇತವಾಗುತ್ತದೆ’.

ಮಂಡಲ್ ವರದಿಯಲ್ಲಿನ ಅಂಕಿಅಂಶಗಳ ಪ್ರಕಾರ ಈ ದೇಶದ ಅತ್ಯುನ್ನತ ಹುದ್ದೆಗಳಾದ ಮುಖ್ಯಮಂತ್ರಿಗಳು, ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗಳು, ಯೋಜನಾಧಿಕಾರಿಗಳು, ವಿಭಾಗ ಮುಖ್ಯಸ್ಥರು, ಐಎಎಸ್, ಐಪಿಎಸ್, ಐಆರ್‍ಎಸ್, ಐಎಫ್‍ಎಸ್‍ನಂತಹ ಅಧಿಕಾರಿಗಳ ಶೇಕಡ 74ರಷ್ಟು ಸ್ಥಾನಗಳಲ್ಲಿ ಶೇ.4ರಷ್ಟಿರುವ ಬ್ರಾಹ್ಮಣರು ತುಂಬಿಕೊಂಡಿದ್ದಾರೆ, ಇನ್ನುಳಿದ ಶೇ.26ರಷ್ಟು ಹುದ್ದೆಗಳನ್ನು ಶೇ.96ರಷ್ಟು ಜನಸಮುದಾಯಗಳು ಹಂಚಿಕೊಂಡಿವೆ. ಇದು ಆಕಾಶ ಪಾತಾಳದಂತಹ ಅಸಮಾನತೆ. ಹೀಗಿದ್ದು, ತಮ್ಮನ್ನು ಪ್ರತಿಭಾವಂತರೆಂದು ಸ್ವಯಂಘೋಷಿಸಿಕೊಂಡಿರುವವರೆ ಹೀಗೆ ಈ ದೇಶವನ್ನು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಆಳುತ್ತಿದ್ದರು. ಭಾರತಕ್ಕೆ ದಾರಿದ್ರ್ಯ, ಅಸಮಾನತೆ, ಹಸಿವು, ನಿರುದ್ಯೋಗ, ಅಶಾಂತಿಯ ಭಯಾನಕ ಸ್ಥಿತಿ ಬಂದದ್ದಾದರೂ ಹೇಗೆ? ಮತ್ತು ಯಾಕೆ? ಅಂತಹ ಪ್ರತಿಭಾವಂತರೇ ಆಳಿದರೂ ಈ ದೇಶ ಯಾಕಿಷ್ಟು ಅಧೋಗತಿಗಿಳಿಯಿತು. ಇದು ನಿಚ್ಚಳವಾಗಿ ಬ್ರಾಹ್ಮಣ ಪ್ರತಿಭೆಯ ಅಸಮರ್ಥತೆಯ ಫಲ ಮತ್ತು ಸೋಲುಗಳೇ ಅಲ್ಲವೆ? ಭಾರತದಂತಹ ಬೃಹತ್ ಸಮಾಜವೊಂದರ ಜನರ ಬದುಕನ್ನು ಕನಿಷ್ಠ ಸಹನೀಯವಾಗಿಸಲು ಕೂಡ ವಿಫಲವಾದ ಈ ಮೇಲ್ಜಾತಿಗಳ ಬುದ್ಧಿವಂತಿಕೆ ಎಂಬುದು ನಿಸ್ಸಂಶಯವಾಗಿಯೂ ವ್ಯರ್ಥ ಬುದ್ಧಿವಂತಿಕೆ ಮತ್ತು ಅಂತಹ ಪ್ರತಿಭೆ ಗೊಡ್ಡು ಪ್ರತಿಭೆ ಮಾತ್ರ ಆಗಿರಬಲ್ಲದು. ನಿಜವಾದ ಪ್ರತಿಭೆಯೆಂದು ಚಿಗುರದಂತೆಯೂ, ತನ್ನ ಸ್ಥಾನ-ಅಧಿಕಾರಗಳು ಕೈತಪ್ಪದಂತೆಯೂ ಕೇವಲ ಕ್ಷುಲ್ಲಕ ಸಂಚುಗಳಿಗೆ ಬಹುತೇಕ ವಿನಿಯೋಗಗೊಂಡ ಈ ವ್ಯವಸ್ಥಿತ ವಿನಾಶಕಾರಿ ಆಲೋಚನೆಗಳು ಹಿಟ್ಲರನ ಆರ್ಯ ಜನಾಂಗವಾದಿ ನಾಝಿ ಇಸಂಗಿಂತಲೂ ಹೆಚ್ಚು ಅಪಾಯಕಾರಿ ಎನಿಸುತ್ತದೆ.

ಗೆಳೆಯ ಮತ್ತು ದಲಿತ ಕವಿಯಾದ ಗೊಲ್ಲಹಳ್ಳಿ ಶಿವಪ್ರಸಾದ್ ದೆಹಲಿ ಮತ್ತು ಬೆಂಗಳೂರಿನ ವೈದ್ಯಕೀಯ ವಿದ್ಯಾರ್ಥಿಗಳ ಹಾಗೆ ಮೇಧಾವಿ ಅಲ್ಲವಾದರೂ ಆತನ ಮುಗ್ಧತೆ, ಘನತೆ ಮತ್ತು ಸರಳ ವಿವೇಕ ಮೇಲ್ಜಾತಿಗಳ ಕೂಗಾದ ಪ್ರತಿಭೆಗೇ ಅನ್ಯಾಯವೆಂಬುದರ ಕುರಿತು ಹಾಡಿನ ಮೂಲಕ ಹೀಗೆ ಪ್ರಶ್ನಿಸುತ್ತೆ: ತುಟಿ ಬಿಚ್ಚಿದರೆ ಪ್ರತಿಭೆಯೆನ್ನುವರು! ಪ್ರತಿಭೆಗೇ ಪ್ರಾಧಾನ್ಯವೆನ್ನುವರು! ಪ್ರತಿಭೆ ತೋರಿದ ಏಕಲವ್ಯನ ಬೆರಳು ಕೊಯ್ದವರು ಯಾರಣ್ಣ?’ ಬೆಂಗಳೂರಿನ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳ ಬಳಿಯೇನಾದರೂ ಈ ಪ್ರಶ್ನೆಗೆ ಉತ್ತರದ ಮದ್ದಿದೆಯೇ? ಬೆಸ್ತನಾದ ವ್ಯಾಸ, ಬೇಡನಾದ ವಾಲ್ಮೀಕಿ, ಕುರುಬನಾದ ಕಾಳಿದಾಸನಿಂದ ಹಿಡಿದು ಅಂಬೇಡ್ಕರ್‍ವರೆಗೂ ಬಂದ ಅನೇಕ ಪ್ರತಿಭೆಗಳು ಮೇಲ್ಜಾತಿಯ ಇಕ್ಕಟ್ಟು ಮನಸುಗಳ ನಡುವೆಯೂ ಅರಳಿದ ಕೆಳಜಾತಿಯ ವ್ಯಕ್ತಿತ್ವಗಳೇ ಆಗಿಲ್ಲವೇನು? ಈ ಕೆಳಜಾತಿಗಳ ಪ್ರತಿಭೆ, ವಿದ್ವತ್ತು, ಪಾಂಡಿತ್ಯಗಳನ್ನು ಯಾರಿಗೆ ಅಲ್ಲಗಳೆಯಲು ಸಾಧ್ಯ? ಕಲ್ಲುಲೋಹದ ಶಿಲ್ಪಗಳನ್ನು ಕೆತ್ತಿದವರು, ಕುಶಲಕಲೆಯ ಗುಡಿಗೋಪುರಗಳು, ಅರಮನೆಗಳನ್ನು ನಿರ್ಮಿಸಿದವರು, ಸಂಗೀತ ನೃತ್ಯ ಕಲೆಗಳನ್ನು ಸಾವಿರಾರು ಪೋಷಿಸಿಕೊಂಡು ಬಂದವರು, ಆಭರಣಗಳಿಂದ ಆಯುಧಗಳವರೆಗೂ ಚಿನ್ನ-ಬೆಳ್ಳಿ-ಹಿತ್ತಾಳೆ-ಕಬ್ಬಿಣದ ಸಾಧನಗಳನ್ನು ತಯಾರಿಸಿದವರು, ಮಡಿವಾಳ, ಕ್ಷೌರಿಕ, ಮೇದಾರರ ವೃತ್ತಿಗಳು, ಇಂದಿಗೂ ರಸ್ತೆಗಳನ್ನು ನಿರ್ಮಿಸುವವರು, ಹತ್ತಿ ರೇಷ್ಮೆಗಳಿಂದ ವಸ್ತ್ರಗಳನ್ನು ನೇಯುವವರು, ಕೆಳಜಾತಿಯ ಕೃಷಿಕಾರ್ಮಿಕರು, ಬಾವಿಕೆರೆಗಳನ್ನು ತೋಡುವವರು, ಜನಪದ ಕಲೆ ಸಾಹಿತ್ಯಗಳನ್ನು ಸೃಷ್ಟಿಸಿದವರು ಪ್ರತಿಭಾವಂತರಲ್ಲವೆ?

ಇವೆಲ್ಲಾ ಪ್ರತಿಭೆಗಳಲ್ಲವೆಂದರೆ ಮತ್ಯಾವುದನ್ನು ಪ್ರತಿಭೆ ಎನ್ನಲಾದೀತು? ಪ್ರತಿಭೆಯ ಮಾನದಂಡಗಳಾದರೂ ಯಾವುವು? ಬಹುಸಂಖ್ಯಾತ ಸಮುದಾಯಗಳನ್ನು ಎಂದಾದರೂ ಹೊಟ್ಟೆ, ಬಟ್ಟೆ, ಸೂರಿನ ಮೂಲಕ ಮುನ್ನಡೆಸಿದಂತಹ ಮೇಲ್ಜಾತಿಗಳ ಪ್ರತಿಭೆಗೆ ಈ ದೇಶದಲ್ಲಿ ಚರಿತ್ರೆಯಾದರೂ ಎಲ್ಲಿದೆ?

ಜಾತಿಪದ್ಧತಿ ಎಂಬುದೇ ಈ ದೇಶದಲ್ಲಿ ಜಾಣ ಮೀಸಲಾತಿ! ಇಂದಿಗೆ 170 ವರ್ಷಗಳ ಹಿಂದೆ ಮೆಕಾಲೆ ಎಲ್ಲರಿಗೂ ಶಿಕ್ಷಣ ಪದ್ಧತಿಯನ್ನು ಮುಕ್ತವಾಗಿಸುವವರೆಗೂ ಶಿಕ್ಷಣದಲ್ಲಿ 100 ಕ್ಕೆ 100 ರಷ್ಟು ಮೀಸಲಾತಿಯನ್ನು ಉಚ್ಚ ಕುಲಗಳವರೇ ಅನುಭವಿಸುತ್ತಿರಲಿಲ್ಲವೇ? 100 ಕ್ಕೆ 100 ರಷ್ಟು ರಾಜಕೀಯ ಅಧಿಕಾರವನ್ನು ಕ್ಷತ್ರಿಯರು, ಆರ್ಥಿಕ ವಹಿವಾಟನ್ನು ವೈಶ್ಯರು ಅನುಭವಿಸುತ್ತಾ ಉಳಿದ ಶೂದ್ರ ಕುಲಗಳ ಶ್ರಮದ ಕೆಲಸಗಳನ್ನು ತಲೆಬಗ್ಗಿಸಿ ಮಾಡುತ್ತಿರಲಿಲ್ಲವೇ? ಇದು 3000 ವರ್ಷಗಳಿಂದ ಮುಂದುವರೆದುಕೊಂಡೇ ಬಂದ ಜಾಣ ಜಾತಿ ಮೀಸಲಾತಿಯಲ್ಲವೇ? ಈ ಚಾರಿತ್ರಿಕ ಹುಳುಕಿಗೆ ಈಗಲಾದರೂ ಪರಿಹಾರ ಬೇಡವೆಂದರೆ ಹೇಗೆ? ಅದರೊಂದಿಗೆ ಮೀಸಲಾತಿಯನ್ನು ಈಗ ವಿರೋಧಿಸುತ್ತಿರುವ ಎಲ್ಲಾ ಮೇಲ್ಜಾತಿಗಳು ಹಿಂದೊಮ್ಮೆ ಅದರ ಎಲ್ಲಾ ಅನುಕೂಲತೆಗಳನ್ನು ಪಡೆದಿರುವವರೆ. ಬ್ರಿಟಿಷರ ವಿರುದ್ಧ ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಭಾರತದ ಬ್ರಾಹ್ಮಣರು, ಮಿಲ್ಲರ್ ಆಯೋಗದ ಸಂದರ್ಭದಲ್ಲಿ ಬ್ರಾಹ್ಮಣರ ವಿರುದ್ಧ ಲಿಂಗಾಯತ, ಒಕ್ಕಲಿಗರು, ಹಾವನೂರು ಆಯೋಗದ ಸಂದರ್ಭದಲ್ಲಿ ಒಕ್ಕಲಿಗ, ಹಿಂದುಳಿದರ ವಿರುದ್ಧ ಎಲ್ಲಾ ಮೇಲ್ಜಾತಿಗಳು ಹಾಗೂ ಚಿನ್ನಪ್ಪರೆಡ್ಡಿ ವರದಿ ಮತ್ತು ಮಂಡಲ್ ವರದಿಗಳ ವಿರುದ್ಧ ಲಿಂಗಾಯತ-ಒಕ್ಕಲಿಗರನ್ನು ಸೇರಿಕೊಂಡಂತೆ ಎಲ್ಲಾ ಮೇಲ್ಜಾತಿಗಳು ಹೋರಾಡಿದ ಮೀಸಲಾತಿ ಸಂಘರ್ಷದ ಇತಿಹಾಸವೇ ಈ ದೇಶದಲ್ಲಿದೆ. ಹಿಂದೆಲ್ಲ ಸಾಮಾಜಿಕ ನ್ಯಾಯವೆನಿಸಿದ್ದ ಮೀಸಲಾತಿ ಕೆಳಜಾತಿಗಳಿಗೆ ವಿಸ್ತರಿಸಿದೊಡನೆ ಅನ್ಯಾಯ ಹೇಗಾಗಿ ಬಿಟ್ಟಿತು?

ಈ ಚಾರಿತ್ರಿಕ ಸತ್ಯಗಳ ಹಿನ್ನೆಲೆಯಲ್ಲಿ ಜಾತಿನಾಶಕ್ಕೆ ಜಾತಿ ಆಧಾರಿತ ಮೀಸಲಾತಿಯೊಂದೇ ಮದ್ದು. ಇದರಾಚೆಗಿನದೆಲ್ಲ ಕಲಿತವರ ಕಂದಾಚಾರ. ಹಿಂದುಳಿದ, ದಲಿತ ವರ್ಗಗಳ ಬದುಕಲ್ಲಿ ಮೇಲ್ಜಾತಿಗಳವರು ಕಹಿ ಬಿತ್ತಿದರೆ ಅದು ಅವರಿಗೇ ಮುಂದೆ ವಾಪಾಸಾಗಲಿದೆ. ಬಿತ್ತಿದ್ದಂತೆ ಬೆಳೆಯಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...