Homeಅಂಕಣಗಳುಜಾತಿ ಪದ್ಧತಿಯೇ ಜಾಣ ಮೀಸಲಾತಿಯಲ್ಲವೆ?

ಜಾತಿ ಪದ್ಧತಿಯೇ ಜಾಣ ಮೀಸಲಾತಿಯಲ್ಲವೆ?

- Advertisement -
- Advertisement -

ನಾಡಿನ ಹಿರಿಯ ಸಾಹಿತಿಗಳಾದ ಲಕ್ಷ್ಮಿಪತಿ ಕೋಲಾರ ಇವರು ಈ ಹಿಂದೆ ಮಂಡಲ್ ವರದಿ ಜಾರಿಯಾದಾಗ ಅದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಮೇಲ್ಜಾತಿಗಳು ಮತ್ತು ಮೇಲ್ಜಾತಿಗಳಿಗೆ ಬೆಂಬಲ ಸೂಚಿಸಿದ ಹಿಂದುಳಿದ ಜಾತಿಗಳ ಮೇಲ್ಮಧ್ಯಮ ವರ್ಗಗಳನ್ನುದ್ದೇಶಿಸಿ ಬರೆದ ಲೇಖನವಿದು. ಅಂದು ಪ್ರತಿಭೆ ಎಂಬ ಪದವನ್ನು ಹಿಡಿದು ಮಂಡಲ್ ಮೀಸಲಾತಿ ವಿರುದ್ಧ ಮಾತಾಡಿದವರಿಗೆ ಲಕ್ಷ್ಮಿಪತಿಯವರು ಪ್ರಶ್ನೆಗಳ ಮೂಲಕವೇ ಉತ್ತರವಿತ್ತಿದ್ದರು. ಈ ಲೇಖನವನ್ನು ಅಹಿಂದ ಪ್ರಕಾಶನದಿಂದಲೂ ಪ್ರಕಟಿಸಲಾಗಿತ್ತು. ಇಂದಿಗೂ ಈ ಲೇಖನ ಪ್ರಸ್ತುತವಾಗಿರುವ ಕಾರಣ ಇಲ್ಲಿ ಪ್ರಕಟಿಸಲಾಗಿದೆ.

ಮೀಸಲಾತಿ ಪರ ವಾದಗಳಿಗೆ ಇಳಿಯತೊಡಗಿದೊಡನೆ ಅವರು ಪ್ರಯೋಗಿಸುವ ಅತ್ಯಂತ ಸವಕಲು ಅಸ್ತ್ರ ‘ಪ್ರತಿಭೆ’ ಎಂಬ ಪದ. ಇಲ್ಲಿಂದಲೇ ಶುರುವಾಗಲಿ ನಮ್ಮ ವಾದವೂ. ಪ್ರತಿಭೆ ಎಂಬುದು ಯಾವುದೋ ಒಂದು ಜಾತಿಯ ಗುತ್ತಿಗೆಯಾಗಿದೆಯೇನು? ಪ್ರತಿಭೆ, ಆಲೋಚನೆಗಳೆಂಬುದು ಕೂಡ ಯಾರಪ್ಪನ ಮನೆಯ ಸ್ವತ್ತಲ್ಲವಲ್ಲ? ಆದರೂ ಮೀಸಲಾತಿಯ ವಿರುದ್ಧ ಮೈಪರಚಿಕೊಳ್ಳುತ್ತಿರುವ ಮೇಲ್ಜಾತಿ ಮನಸುಗಳ ವಾದ ಗಮನಿಸಿದರೆ ‘ಈ ದೇಶದ ಬಹುಸಂಖ್ಯಾತ ದಲಿತ ಮತ್ತು ಹಿಂದುಳಿದ ಜಾತಿಗಳ ಜನರಿಗೆ ಪ್ರತಿಭಟನೆಯೇ ಇಲ್ಲ; ಅವರು ವೈದ್ಯಕೀಯದಂತಹ ವೃತ್ತಿಗಳಿಗೆ ಅನರ್ಹರು’ ಎಂದು ಪರೋಕ್ಷವಾಗಿ ಈ ದೇಶದ ಮುಕ್ಕಾಲು ಭಾಗದ ಜನಸಮುದಾಯವನ್ನು ಜಾತಿನೆಲೆಯ ಕಾರಣಕ್ಕಾಗಿ ಅವಮಾನಿಸುತ್ತಿದ್ದಾರೆ ಎನಿಸುವುದಿಲ್ಲವೆ? ದೇಶದ ಜನರನ್ನು ಅವಮಾನಿಸುವುದೆಂದರೆ ದೇಶವನ್ನೇ ಅಪಮಾನಿಸಿದಂತಲ್ಲವೆ? ಮೀಸಲಾತಿಯೆಂಬ ಸಾಮಾಜಿಕ ನ್ಯಾಯ ರಕ್ಷಣೆಯಲ್ಲಿ ಅನರ್ಹರಿಗೂ, ಪ್ರತಿಭಾಹೀನರಿಗೂ ಅವಕಾಶ ನೀಡಿಬಿಡುತ್ತಿದ್ದಾರೆಂದು ಭಾವಿಸುವುದರ ಆಳದಲ್ಲಿ ತಾವಷ್ಟೆ ಪ್ರತಿಭಾವಂತರೆಂಬ ಮೇಲ್ಜಾತಿಯ ಇಂಗಿತಗಳು, ಅಹಮ್ಮಿಕೆಯೂ ಅಡಗಿಲ್ಲವೆ?

ವಸಂತಕುಮಾರ್ ಮೊಕದ್ದಮೆಯ ವಿಚಾರಣೆಯಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ‘ಅಸಮಾನ ಅವಕಾಶಗಳನ್ನು ಪಡೆಯುತ್ತಿರುವ ವ್ಯವಸ್ಥೆಯಲ್ಲಿ ಪ್ರತಿಭೆಗೆ ಅನ್ಯಾಯವೆಂಬ ಮಾತು ಆಡುವುದೇ ಅನ್ಯಾಯ’ ಎಂದಿರುವರಲ್ಲದೆ ‘ಯಾವುದೇ ಸೌಲಭ್ಯಗಳಿಲ್ಲದ ಗ್ರಾಮೀಣ ಪರಿಸರದಲ್ಲಿ ಬೆಳೆಯುವ ಮಕ್ಕಳು ಕಾನ್ವೆಂಟ್ ಶಿಕ್ಷಣ ಪಡೆದ, ಶ್ರೀಮಂತರ ಹಾಗೂ ಸಾಮಾಜಿಕವಾಗಿ ಉನ್ನತ ಶ್ರೇಣಿಗೆ ಸೇರಿದ ಮಕ್ಕಳ ಜೊತೆ ಸ್ಪರ್ಧಿಸುವುದು ನಿಜಕ್ಕೂ ಅಸಾಧ್ಯ. ಇಂತಹ ಎರಡು ವಿರೋಧಾಬಾಸದ ಪರಿಸರದ ಮಕ್ಕಳು ಸಮಾನವಾಗಿ ಅಂಕಗಳನ್ನು ಗಳಿಸಬೇಕೆಂದು ನಿರೀಕ್ಷಿಸುವುದು ಅಸಂಬದ್ಧ’ ಎಂಬ ಉನ್ನತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟಿನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿಗಳು, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶಿಫಾರಸ್ಸು ಮಾಡಿ ವರದಿ ನೀಡಿರುವವರು ಆದ ನ್ಯಾಯಮೂರ್ತಿ ಓ. ಚಿನ್ನಪ್ಪರೆಡ್ಡಿಯವರು ‘ಪ್ರತಿಭೆಗೆ ಅನ್ಯಾಯ’ ಎಂಬ ಬೀದಿ ಬೊಬ್ಬೆಗಳಿಗೆ ಸರಿಯಾದ ಉತ್ತರವನ್ನು ಹೀಗೆ ನೀಡಿದ್ದಾರೆ ‘ಭಾರತದ ಕೆಲವೇ ಸಮುದಾಯಗಳು ಇಂದು “ಪ್ರತಿಭೆಗೆ ಮನ್ನಣೆ ದೊರಕಬೇಕು” ಎಂದು ಕೂಗು ಹಾಕಲು ಅಸಾಧ್ಯವಾಗಿದ್ದೇ ಇಲ್ಲಿನ ದುರ್ಬಲ ವರ್ಗಗಳಿಂದಾಗಿ. ಯಾಕೆಂದರೆ ಈ ಕೆಲವೇ ಸಮುದಾಯಗಳಲ್ಲಿ ಕಾಣುವ ಪ್ರತಿಭೆ ಈ ದುರ್ಬಲ ವರ್ಗಗಳ ಶ್ರಮದ ಮೊತ್ತ. ಹೀಗಿರುವಾಗ ಭಾರತದ ದುರ್ಬಲ ವರ್ಗಗಳಲ್ಲಿ ಬೌದ್ಧಿಕ ದಾರಿದ್ರ್ಯ ತುಂಬಿದೆ ಎಂದು ಅವಹೇಳನ ಮಾಡುವುದು ಪ್ರತಿಷ್ಠಿತ ಸಮುದಾಯಗಳ ಅಹಂಕಾರ ಹಾಗೂ ಪೊಳ್ಳು ಪ್ರತಿಷ್ಠೆಗೆ ಸಂಕೇತವಾಗುತ್ತದೆ’.

ಮಂಡಲ್ ವರದಿಯಲ್ಲಿನ ಅಂಕಿಅಂಶಗಳ ಪ್ರಕಾರ ಈ ದೇಶದ ಅತ್ಯುನ್ನತ ಹುದ್ದೆಗಳಾದ ಮುಖ್ಯಮಂತ್ರಿಗಳು, ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗಳು, ಯೋಜನಾಧಿಕಾರಿಗಳು, ವಿಭಾಗ ಮುಖ್ಯಸ್ಥರು, ಐಎಎಸ್, ಐಪಿಎಸ್, ಐಆರ್‍ಎಸ್, ಐಎಫ್‍ಎಸ್‍ನಂತಹ ಅಧಿಕಾರಿಗಳ ಶೇಕಡ 74ರಷ್ಟು ಸ್ಥಾನಗಳಲ್ಲಿ ಶೇ.4ರಷ್ಟಿರುವ ಬ್ರಾಹ್ಮಣರು ತುಂಬಿಕೊಂಡಿದ್ದಾರೆ, ಇನ್ನುಳಿದ ಶೇ.26ರಷ್ಟು ಹುದ್ದೆಗಳನ್ನು ಶೇ.96ರಷ್ಟು ಜನಸಮುದಾಯಗಳು ಹಂಚಿಕೊಂಡಿವೆ. ಇದು ಆಕಾಶ ಪಾತಾಳದಂತಹ ಅಸಮಾನತೆ. ಹೀಗಿದ್ದು, ತಮ್ಮನ್ನು ಪ್ರತಿಭಾವಂತರೆಂದು ಸ್ವಯಂಘೋಷಿಸಿಕೊಂಡಿರುವವರೆ ಹೀಗೆ ಈ ದೇಶವನ್ನು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಆಳುತ್ತಿದ್ದರು. ಭಾರತಕ್ಕೆ ದಾರಿದ್ರ್ಯ, ಅಸಮಾನತೆ, ಹಸಿವು, ನಿರುದ್ಯೋಗ, ಅಶಾಂತಿಯ ಭಯಾನಕ ಸ್ಥಿತಿ ಬಂದದ್ದಾದರೂ ಹೇಗೆ? ಮತ್ತು ಯಾಕೆ? ಅಂತಹ ಪ್ರತಿಭಾವಂತರೇ ಆಳಿದರೂ ಈ ದೇಶ ಯಾಕಿಷ್ಟು ಅಧೋಗತಿಗಿಳಿಯಿತು. ಇದು ನಿಚ್ಚಳವಾಗಿ ಬ್ರಾಹ್ಮಣ ಪ್ರತಿಭೆಯ ಅಸಮರ್ಥತೆಯ ಫಲ ಮತ್ತು ಸೋಲುಗಳೇ ಅಲ್ಲವೆ? ಭಾರತದಂತಹ ಬೃಹತ್ ಸಮಾಜವೊಂದರ ಜನರ ಬದುಕನ್ನು ಕನಿಷ್ಠ ಸಹನೀಯವಾಗಿಸಲು ಕೂಡ ವಿಫಲವಾದ ಈ ಮೇಲ್ಜಾತಿಗಳ ಬುದ್ಧಿವಂತಿಕೆ ಎಂಬುದು ನಿಸ್ಸಂಶಯವಾಗಿಯೂ ವ್ಯರ್ಥ ಬುದ್ಧಿವಂತಿಕೆ ಮತ್ತು ಅಂತಹ ಪ್ರತಿಭೆ ಗೊಡ್ಡು ಪ್ರತಿಭೆ ಮಾತ್ರ ಆಗಿರಬಲ್ಲದು. ನಿಜವಾದ ಪ್ರತಿಭೆಯೆಂದು ಚಿಗುರದಂತೆಯೂ, ತನ್ನ ಸ್ಥಾನ-ಅಧಿಕಾರಗಳು ಕೈತಪ್ಪದಂತೆಯೂ ಕೇವಲ ಕ್ಷುಲ್ಲಕ ಸಂಚುಗಳಿಗೆ ಬಹುತೇಕ ವಿನಿಯೋಗಗೊಂಡ ಈ ವ್ಯವಸ್ಥಿತ ವಿನಾಶಕಾರಿ ಆಲೋಚನೆಗಳು ಹಿಟ್ಲರನ ಆರ್ಯ ಜನಾಂಗವಾದಿ ನಾಝಿ ಇಸಂಗಿಂತಲೂ ಹೆಚ್ಚು ಅಪಾಯಕಾರಿ ಎನಿಸುತ್ತದೆ.

ಗೆಳೆಯ ಮತ್ತು ದಲಿತ ಕವಿಯಾದ ಗೊಲ್ಲಹಳ್ಳಿ ಶಿವಪ್ರಸಾದ್ ದೆಹಲಿ ಮತ್ತು ಬೆಂಗಳೂರಿನ ವೈದ್ಯಕೀಯ ವಿದ್ಯಾರ್ಥಿಗಳ ಹಾಗೆ ಮೇಧಾವಿ ಅಲ್ಲವಾದರೂ ಆತನ ಮುಗ್ಧತೆ, ಘನತೆ ಮತ್ತು ಸರಳ ವಿವೇಕ ಮೇಲ್ಜಾತಿಗಳ ಕೂಗಾದ ಪ್ರತಿಭೆಗೇ ಅನ್ಯಾಯವೆಂಬುದರ ಕುರಿತು ಹಾಡಿನ ಮೂಲಕ ಹೀಗೆ ಪ್ರಶ್ನಿಸುತ್ತೆ: ತುಟಿ ಬಿಚ್ಚಿದರೆ ಪ್ರತಿಭೆಯೆನ್ನುವರು! ಪ್ರತಿಭೆಗೇ ಪ್ರಾಧಾನ್ಯವೆನ್ನುವರು! ಪ್ರತಿಭೆ ತೋರಿದ ಏಕಲವ್ಯನ ಬೆರಳು ಕೊಯ್ದವರು ಯಾರಣ್ಣ?’ ಬೆಂಗಳೂರಿನ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳ ಬಳಿಯೇನಾದರೂ ಈ ಪ್ರಶ್ನೆಗೆ ಉತ್ತರದ ಮದ್ದಿದೆಯೇ? ಬೆಸ್ತನಾದ ವ್ಯಾಸ, ಬೇಡನಾದ ವಾಲ್ಮೀಕಿ, ಕುರುಬನಾದ ಕಾಳಿದಾಸನಿಂದ ಹಿಡಿದು ಅಂಬೇಡ್ಕರ್‍ವರೆಗೂ ಬಂದ ಅನೇಕ ಪ್ರತಿಭೆಗಳು ಮೇಲ್ಜಾತಿಯ ಇಕ್ಕಟ್ಟು ಮನಸುಗಳ ನಡುವೆಯೂ ಅರಳಿದ ಕೆಳಜಾತಿಯ ವ್ಯಕ್ತಿತ್ವಗಳೇ ಆಗಿಲ್ಲವೇನು? ಈ ಕೆಳಜಾತಿಗಳ ಪ್ರತಿಭೆ, ವಿದ್ವತ್ತು, ಪಾಂಡಿತ್ಯಗಳನ್ನು ಯಾರಿಗೆ ಅಲ್ಲಗಳೆಯಲು ಸಾಧ್ಯ? ಕಲ್ಲುಲೋಹದ ಶಿಲ್ಪಗಳನ್ನು ಕೆತ್ತಿದವರು, ಕುಶಲಕಲೆಯ ಗುಡಿಗೋಪುರಗಳು, ಅರಮನೆಗಳನ್ನು ನಿರ್ಮಿಸಿದವರು, ಸಂಗೀತ ನೃತ್ಯ ಕಲೆಗಳನ್ನು ಸಾವಿರಾರು ಪೋಷಿಸಿಕೊಂಡು ಬಂದವರು, ಆಭರಣಗಳಿಂದ ಆಯುಧಗಳವರೆಗೂ ಚಿನ್ನ-ಬೆಳ್ಳಿ-ಹಿತ್ತಾಳೆ-ಕಬ್ಬಿಣದ ಸಾಧನಗಳನ್ನು ತಯಾರಿಸಿದವರು, ಮಡಿವಾಳ, ಕ್ಷೌರಿಕ, ಮೇದಾರರ ವೃತ್ತಿಗಳು, ಇಂದಿಗೂ ರಸ್ತೆಗಳನ್ನು ನಿರ್ಮಿಸುವವರು, ಹತ್ತಿ ರೇಷ್ಮೆಗಳಿಂದ ವಸ್ತ್ರಗಳನ್ನು ನೇಯುವವರು, ಕೆಳಜಾತಿಯ ಕೃಷಿಕಾರ್ಮಿಕರು, ಬಾವಿಕೆರೆಗಳನ್ನು ತೋಡುವವರು, ಜನಪದ ಕಲೆ ಸಾಹಿತ್ಯಗಳನ್ನು ಸೃಷ್ಟಿಸಿದವರು ಪ್ರತಿಭಾವಂತರಲ್ಲವೆ?

ಇವೆಲ್ಲಾ ಪ್ರತಿಭೆಗಳಲ್ಲವೆಂದರೆ ಮತ್ಯಾವುದನ್ನು ಪ್ರತಿಭೆ ಎನ್ನಲಾದೀತು? ಪ್ರತಿಭೆಯ ಮಾನದಂಡಗಳಾದರೂ ಯಾವುವು? ಬಹುಸಂಖ್ಯಾತ ಸಮುದಾಯಗಳನ್ನು ಎಂದಾದರೂ ಹೊಟ್ಟೆ, ಬಟ್ಟೆ, ಸೂರಿನ ಮೂಲಕ ಮುನ್ನಡೆಸಿದಂತಹ ಮೇಲ್ಜಾತಿಗಳ ಪ್ರತಿಭೆಗೆ ಈ ದೇಶದಲ್ಲಿ ಚರಿತ್ರೆಯಾದರೂ ಎಲ್ಲಿದೆ?

ಜಾತಿಪದ್ಧತಿ ಎಂಬುದೇ ಈ ದೇಶದಲ್ಲಿ ಜಾಣ ಮೀಸಲಾತಿ! ಇಂದಿಗೆ 170 ವರ್ಷಗಳ ಹಿಂದೆ ಮೆಕಾಲೆ ಎಲ್ಲರಿಗೂ ಶಿಕ್ಷಣ ಪದ್ಧತಿಯನ್ನು ಮುಕ್ತವಾಗಿಸುವವರೆಗೂ ಶಿಕ್ಷಣದಲ್ಲಿ 100 ಕ್ಕೆ 100 ರಷ್ಟು ಮೀಸಲಾತಿಯನ್ನು ಉಚ್ಚ ಕುಲಗಳವರೇ ಅನುಭವಿಸುತ್ತಿರಲಿಲ್ಲವೇ? 100 ಕ್ಕೆ 100 ರಷ್ಟು ರಾಜಕೀಯ ಅಧಿಕಾರವನ್ನು ಕ್ಷತ್ರಿಯರು, ಆರ್ಥಿಕ ವಹಿವಾಟನ್ನು ವೈಶ್ಯರು ಅನುಭವಿಸುತ್ತಾ ಉಳಿದ ಶೂದ್ರ ಕುಲಗಳ ಶ್ರಮದ ಕೆಲಸಗಳನ್ನು ತಲೆಬಗ್ಗಿಸಿ ಮಾಡುತ್ತಿರಲಿಲ್ಲವೇ? ಇದು 3000 ವರ್ಷಗಳಿಂದ ಮುಂದುವರೆದುಕೊಂಡೇ ಬಂದ ಜಾಣ ಜಾತಿ ಮೀಸಲಾತಿಯಲ್ಲವೇ? ಈ ಚಾರಿತ್ರಿಕ ಹುಳುಕಿಗೆ ಈಗಲಾದರೂ ಪರಿಹಾರ ಬೇಡವೆಂದರೆ ಹೇಗೆ? ಅದರೊಂದಿಗೆ ಮೀಸಲಾತಿಯನ್ನು ಈಗ ವಿರೋಧಿಸುತ್ತಿರುವ ಎಲ್ಲಾ ಮೇಲ್ಜಾತಿಗಳು ಹಿಂದೊಮ್ಮೆ ಅದರ ಎಲ್ಲಾ ಅನುಕೂಲತೆಗಳನ್ನು ಪಡೆದಿರುವವರೆ. ಬ್ರಿಟಿಷರ ವಿರುದ್ಧ ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಭಾರತದ ಬ್ರಾಹ್ಮಣರು, ಮಿಲ್ಲರ್ ಆಯೋಗದ ಸಂದರ್ಭದಲ್ಲಿ ಬ್ರಾಹ್ಮಣರ ವಿರುದ್ಧ ಲಿಂಗಾಯತ, ಒಕ್ಕಲಿಗರು, ಹಾವನೂರು ಆಯೋಗದ ಸಂದರ್ಭದಲ್ಲಿ ಒಕ್ಕಲಿಗ, ಹಿಂದುಳಿದರ ವಿರುದ್ಧ ಎಲ್ಲಾ ಮೇಲ್ಜಾತಿಗಳು ಹಾಗೂ ಚಿನ್ನಪ್ಪರೆಡ್ಡಿ ವರದಿ ಮತ್ತು ಮಂಡಲ್ ವರದಿಗಳ ವಿರುದ್ಧ ಲಿಂಗಾಯತ-ಒಕ್ಕಲಿಗರನ್ನು ಸೇರಿಕೊಂಡಂತೆ ಎಲ್ಲಾ ಮೇಲ್ಜಾತಿಗಳು ಹೋರಾಡಿದ ಮೀಸಲಾತಿ ಸಂಘರ್ಷದ ಇತಿಹಾಸವೇ ಈ ದೇಶದಲ್ಲಿದೆ. ಹಿಂದೆಲ್ಲ ಸಾಮಾಜಿಕ ನ್ಯಾಯವೆನಿಸಿದ್ದ ಮೀಸಲಾತಿ ಕೆಳಜಾತಿಗಳಿಗೆ ವಿಸ್ತರಿಸಿದೊಡನೆ ಅನ್ಯಾಯ ಹೇಗಾಗಿ ಬಿಟ್ಟಿತು?

ಈ ಚಾರಿತ್ರಿಕ ಸತ್ಯಗಳ ಹಿನ್ನೆಲೆಯಲ್ಲಿ ಜಾತಿನಾಶಕ್ಕೆ ಜಾತಿ ಆಧಾರಿತ ಮೀಸಲಾತಿಯೊಂದೇ ಮದ್ದು. ಇದರಾಚೆಗಿನದೆಲ್ಲ ಕಲಿತವರ ಕಂದಾಚಾರ. ಹಿಂದುಳಿದ, ದಲಿತ ವರ್ಗಗಳ ಬದುಕಲ್ಲಿ ಮೇಲ್ಜಾತಿಗಳವರು ಕಹಿ ಬಿತ್ತಿದರೆ ಅದು ಅವರಿಗೇ ಮುಂದೆ ವಾಪಾಸಾಗಲಿದೆ. ಬಿತ್ತಿದ್ದಂತೆ ಬೆಳೆಯಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...