Homeಮುಖಪುಟಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ...

ಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ ಗೊತ್ತೇನು?

ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ – ಐ.ವಿ ಗೌಲ್‌

ಸುಪ್ರೀಂಕೋರ್ಟು ಮೊನ್ನೆ ಮೊನ್ನೆ ಫ್ರೆಷ್ ಆಗಿ ಒಂದು ಟಪ್ಪಣಿ ಕೊಟ್ಟದ. ಅದು ಎಷ್ಟು ಬಿಸಿ ಬಿಸಿ ಸುದ್ದಿ ಅಂದರ ಅದನ್ನ ಬರೆದ ಕಾಗದ ಇನ್ನೂ ಸುಡು -ಸುಡು ಅನ್ನಲಿಕ್ಕೆ ಹತ್ತೇದ.

ಅದೇನಪಾ ಅಂದರ ಮೀಸಲಾತಿ ಅಂದರ ನಾಗರಿಕರ ಮೂಲಭೂತ ಹಕ್ಕೇನಲ್ಲ. ಅದು ಸರಕಾರದ ಜನ ಕಲ್ಯಾಣ ನೀತಿ. ಅದನ್ನು ಸರಕಾರಗಳು ಕೊಟ್ಟರ ಕೊಡಬಹುದು, ಇಲ್ಲಾಂದರ ಇಲ್ಲಾ. ಅವರ ಮ್ಯಾಲೆ ನೀವು ಈ ಸೌಲತ್ತು ಕೊಡಲೇಬೇಕು ಅಂತ ದಬಾಯಿಸಲಿಕ್ಕೆ ಬರಂಗಿಲ್ಲ ಅಂತ.

ಅದು ಅಂತಿಮ ತೀರ್ಪು ಅಲ್ಲ. ಅದಕ್ಕ ಸರಕಾರ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಅದು ಏನಂತ ಪ್ರತಿಕ್ರಿಯೆ ಕೊಡತದ ಅನ್ನೋದರ ಮ್ಯಾಲೆ ನಾವು ಪ್ರತಿಕ್ರಿಯೆ ಕೊಡೋಣಂತ. ಆದರ ಅದರ ಹಿನ್ನೆಲೆ ತಿಳದು ಕೊಳ್ಳೋಣ.

ಈಗ ಮೀಸಲಾತಿ ಅನ್ನೋದು ಏನು ಅಂತ ತಿಳಕೋಕಿಂತಾ ಮೊದಲ ಮೂಲಭೂತ ಹಕ್ಕು ಅಂದರೇನು ಅಂತ ತಿಳಿಯೋಣು. ಮೂಲಭೂತ ಹಕ್ಕು ಅಂದರ ಹುಟ್ಟಿನಿಂದ ಬಂದ ಹಕ್ಕು. ಅದರ ಸಲುವಾಗಿ ಏನೂ ವಿಶೇಷ ಮಸಲತ್ತು ಮಾಡಬೇಕಿಲ್ಲ. ಯಾ ಮನುಷಾ ನಾಗರಿಕ ಇರತಾನೋ ಅವನಿಗೆ ಸಹಜವಾಗಿ ಬಂದ ಬಿಡೋ ಹಕ್ಕುಗಳು ಮೂಲಭೂತ ಹಕ್ಕುಗಳು. ಕೆಲವು ಎಲ್ಲಾ ಮನುಷ್ಯರಿಗೂ ಬರತಾವು. ಅವಕ್ಕ ಮಾನವ ಹಕ್ಕುಗಳು ಅಂತ ಅನಸಿಗೋತಾವು.

ಇನ್ನು ಕೆಲವು ಬರೇ ನಾಗರಿಕರಿಗೆ ಮಾತ್ರ ಸಿಗೋವು. ಅವು ಕಾನೂನಿನಿಂದ ಮಾತ್ರ ಸಿಗೋವಂಥವು. ಅವನ್ನು ಆಯಾ ದೇಶದ ಸಂವಿಧಾನದ ಒಳಗ ಬರದು ಇಡಲಾಗುತ್ತದೆ. ಅದರಾಗ ಬರದಾರ ಅಂದ ಮಾತ್ರಕ್ಕ ಅವು ಸಿಗತಾವು ಅಂತ ಅಲ್ಲ. ಅವು ನಿಸರ್ಗದ ನಿಯಮಗಳು. ಮಾನವ ಅಂತ ಅನ್ನಿಸಿಕೊಂಡವನು ಹಿಂಗ ಇರಬೇಕು ಅಂತ ಮಾನವ ಇತಿಹಾಸದ ಜೀವನಚಕ್ರದ ಅಲ್ಲಲ್ಲಿ ನಿಂತು ತೋರಸತದ. ಅದನ್ನು ಸಂವಿಧಾನದಾಗ ದಾಖಲಿಸಲಾಗತದ. ಸಂವಿಧಾನಕ್ಕ ಅಷ್ಟು ಯಾಕ ಇಂಪಾರ್ಟನ್ಸ ಕೊಡತೀರಿ? ಅದು ಒಂದು ಬುಕ್ಕು ಅಷ್ಟ. ಅಂತ ಮಾತಾಡೋರನ್ನ ವಾದದಾಗ ಸೋಲಸಲಿಕ್ಕೆ ಆಗಂಗಿಲ್ಲ. ಆದರ ಅವರಿಗೆ ಒಂದು ಮಾತು ಹೇಳಬೇಕು. ಸಂವಿಧಾನ ಅನ್ನೋದು ಒಂದು ಬುಕ್ಕು ಅಷ್ಟ. ಆದರ ಅದು ಸಮಗ್ರ ಮಾನವ ಜೀವ ವಿಕಾಸದ ಬುದ್ಧಿಮತ್ತೆ ಹಾಗೂ ವಿವೇಕವನ್ನು ದಾಖಲಿಸಿರುವ ಬುಕ್ಕು. ಅದನ್ನು ಬದಲು ಮಾಡಿದರ, ಮುಚ್ಚಿ ಇಟ್ಟರ, ಬೀಸಿ ಒಗದರ ಸಹಿತ ಅದರಲ್ಲಿರುವ ವಿವೇಕ ಹಾಳಾಗುವುದಿಲ್ಲ ಅಂತ.

ಇನ್ನು ಭಾರತದ ಸಂವಿಧಾನದಲ್ಲಿ ಇರುವ ಸುಮಾರು 20 ಮೂಲಭೂತ ಹಕ್ಕುಗಳಲ್ಲಿ ಪ್ರಮುಖವಾದ್ದು ಸಮಾನತೆಯ ಹಕ್ಕು. ಅಸಮಾನತೆ ತಳಹದಿಯ ಮೇಲೆ ನಿಂತಿರುವ ಸಮಾಜದಲ್ಲೆ ಸಮಾನತೆ ಸ್ಥಾಪಿಸೋದು ಹೆಂಗ ಹಂಗಾರ?

ಈ ದೇಶದ ರಾಜಕೀಯದ ಮೇಲೆ ಹಿಂದೆಂದೂ ಇಲ್ಲದ ಪ್ರಭಾವ ಬೀರಿ ಬದಲಾವಣೆ ತಂದದ್ದು ಮಂಡಲ ವರದಿ. ಅದರ ಶಿಫಾರಸು ಪುಸ್ತಕ ನೋಡಿದವರು ಕಮ್ಮಿ. ಅದರ ಹೆಸರಿನಲ್ಲಿ ಹೋರಾಟ ಮಾಡಿದವರು ಹೆಚ್ಚು. ಅದು ಆ ಕಡೆನೂ ಇರಬಹುದು, ಈ ಕಡೆನೂ ಇರಬಹುದು.

ಆ ವರದಿಯ ಮೊದಲ ಪುಟದ ಮೇಲೆ ಒಂದು ಮಾತು ಬರದದ. ಸಾವಿರ ವರ್ಷಕ್ಕೂ ಸಲ್ಲುವ ಮಾತು ಅದು. “ಅಸಮಾನನನ್ನು ಸಮಾನನ ಜೊತೆ ಸೇರಿಸಿ ನೋಡುವುದು, ಅಸಮಾನತೆಯನ್ನು ಮುಂದುವರೆಸಿದಂತೆ”. ಅಸಮಾನತೆಯನ್ನು ಮುರಿಯಲಿಕ್ಕೆ ಬೇರೆ ಬೇರೆ ಪ್ರಯತ್ನ ಮಾಡಿ ಅವು ಯಾವುವೂ ಯಶಸ್ಸು ಗಳಿಸದೇ ಹೋದಾಗ ಪ್ರಾರಂಭವಾಗಿದ್ದು, ತಕ್ಕಮಟ್ಟಿಗೆ ಯಶಸ್ಸು ಗಳಿಸಿದ್ದು ಮೀಸಲಾತಿ.

ಅದರ ಬಗ್ಗೆ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳೋಣ. ಈ ಬ್ರಹ್ಮಾಂಡದಾಗ 200 ದೇಶ ಅವ. ಅದರಾಗ ಸುಮಾರು 170 ದೇಶದೊಳಗ ಪ್ರಜಾಪ್ರಭುತ್ವ ಅದ. ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

ಬಿಲ್ ಕ್ಲಿಂಟನ್ನಿನ ಕಚೇರಿಯೊಳಗ ಕರಿಯರು, ಮೆಕ್ಸಿಕೋದವರು, ಏಷಿಯಾದವರು, ಮಹಿಳೆಯರು ಕಮ್ಮಿ ಇದ್ದಾರೆ ಅಂತ ಅಲ್ಲಿನ ಧನಾತ್ಮಕ ತಾರತಮ್ಯ ಆಯೋಗ ಅಲ್ಲಿನ ಅಧ್ಯಕ್ಷನಿಗೆ ನೋಟಿಸು ಕೊಟ್ಟಿತ್ತು.

ಯುರೋಪಿನಲ್ಲಿ ಪ್ರತಿ ಸರಕಾರಿ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ, ಎಲ್ಲಾ ರೀತಿಯ ಜಾತಿ- ಜನಾಂಗ- ಲಿಂಗದವರಿಗೆ ಅವಕಾಶ ನೀಡಲೇಬೇಕು ಅಂತ ಒಂದು ಕಾನೂನು ಇದೆ. ಅದನ್ನು ತಪ್ಪಿದರೆ ವಾಗ್ದಂಡನೆ ಹಾಗೂ ಇತರ ಶಿಕ್ಷೆ ಅದ. ಇದು ನಮ್ಮ ಭಾಳ ಜಾನ ಎನ್‍ಆರ್‍ಐಗಳಿಗೆ ಅನಿವಾಸಿ ಭಾರತೀಯರಿಗೆ ಗೊತ್ತಿರೋದಿಲ್ಲ. ಭಾರತ ಹಾಳಾಗಿರುವುದು ಮೀಸಲಾತಿಯಿಂದ ಅಂತ ಅವರು ಘಂಟಾಘೋಷವಾಗಿ ಹೇಳತಾರ. ತಮ್ಮ ಅಜ್ಞಾನದ ಬಲದಿಂದ ತಿಳಿದವರನ್ನ ಗೋಳು ಹೊಯ್ಕೊತಾರ.

ಯಾಕಂದರ ಅವರು ತಮಗೆ ರೊಟ್ಟಿ – ಬ್ಯಾಳಿ ನೀಡಿದ ದೇಶದ ಸರಕಾರ ಹಾಗೂ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಬೆಳೆಸಿಕೊಳ್ಳಲಿಕ್ಕೆ ಹೋಗಿರೋದಿಲ್ಲ.

ಅವರು ಅಲ್ಲಿ ಇರೋತನಕಾ ಪ್ರವಾಸಿಗಳ ಥರಾ ಇದ್ದು, ತಮಗೆ ಕೆಲಸ ನೀಡಿದ ದೇಶದ ಬಗ್ಗೆ ಅಭಿಮಾನ ಹಾಗೂ ತಮಗೆ ಜನ್ಮ ನೀಡಿದ ದೇಶದ ಬಗ್ಗೆ ತಾತ್ಸಾರ ಬೆಳೆಸಿಕೊಂಡಿರತಾರ.

ನೀವು ಹಳ್ಳಿಯೊಳಗ ಜಂಗೀ ನಿಕಾಲಿ ಕುಸ್ತಿ ನೋಡಿರಬಹುದು. ಹಂಗಂದರ ಯುದ್ಧದಲ್ಲಿ ಕೊನೆಯಾಗುವ ಕುಸ್ತಿ ಅಂತ ಅರ್ಥ. ಅದರಾಗ ಎದುರಾಳಿಗಳನ್ನ ಹೆಂಗ ಹುಡುಕತಾರ, ಹೆಂಗ ಅವರ ನಡುವೆ ಸ್ಪರ್ಧೆ ಹಚ್ಚತಾರ ಅಂತ ನೋಡಬೇಕು .ಅದು ಅವರ ವಯಸ್ಸು ಅಥವಾ ಅನುಭವದ ಮ್ಯಾಲೆ ಇರಂಗಿಲ್ಲ. ಅವರ ದೇಹದ ತೂಕದ ಮ್ಯಾಲೆ ಇರತದ. ಯಾಕಂದರ ಸ್ಪರ್ಧೆ ಅನ್ನೋದು ಸಮಾನರ ನಡುವೆ ಇರಬೇಕು ಅಂತ. ಒಲಂಪಿಕ್ಸನ್ಯಾಗ ನಮ್ಮ ಹೆಮ್ಮೆಯ ಹುಡುಗಿ ಮೇರಿ ಕೋಮ ಅಂತಿಮ ಸುತ್ತಿನ್ಯಾಗ ಯಾಕ ಸೋತು ಹೋದಳು ಅಂದರ ಅಕಿನ್ನ ತನಗಿಂತ ಹೆಚ್ಚು ತೂಕದ ಹುಡುಗಿಯೊಂದಿಗೆ ಹೊಡದಾಡಲಿಕ್ಕೆ ಹಚ್ಚಿದರು.

ನಮ್ಮ ಸಮಾಜದಾಗ ಅಸಮಾನತೆ ಸಾವಿರಾರು ವರ್ಷಗಳಿಂದ ಅದ. ಅದನ್ನ ಪ್ರಜಾಪ್ರಭುತ್ವದ ನಂತರ ಅಳಿಸಬೇಕು ಅಂದರ ಸರಳ ಇಲ್ಲ. ಆದರೂ ಪ್ರಯತ್ನ ಕೈಬಿಡಬಾರದು. ಅದರಾಗುನೂ ಆ ಅಸಮಾನತೆ ಮಾನವ ನಿರ್ಮಿತವಾದ್ದರಿಂದ ಅದನ್ನು ಮಾನವರೇ ಅಳಿಸಬೇಕು. ಸಮಾನತೆ ಮೂಲಭೂತ ಹಕ್ಕು ಅಂದರ ಅದನ್ನು ನಿವಾರಿಸಲು ಬೇಕಾಗುವ ಪರಿಕರಗಳು ಮೂಲಭೂತ ಹಕ್ಕು ಯಾಕ ಆಗಂಗಿಲ್ಲ? ಆ ಪರಿಕರಗಳನ್ನ ಕಸಗೊಂಡರ ಯಾವ ರೀತಿ ಸಮಾನತೆ ಸಾಧಿಸಲಿಕ್ಕೆ ಸಾಧ್ಯ ಅದ?

ಘನ ಸರಕಾರಗಳು ನ್ಯಾಯಾಧೀಶರ ಮುಂದ ಇಡುವ ವಾದಗಳಲ್ಲಿ ಈ ಮಾತುಗಳು ಬರಬಹುದು ಅಂತ ಆಶೆ ಮಾಡೋಣ. ಪ್ರಾರ್ಥನೆಗಿಂತ ದೊಡ್ಡದು ಯಾವುದೂ ಇಲ್ಲ ಅನ್ನೋ ಮಾತನ್ನು ಬಂಗಾಳದ ಭಕ್ತಿ ಸಂತ ಕೃಷ್ಣ ಚೈತನ್ಯ ಹೇಳಿದರು. ಸದ್ಯಕ್ಕಂತೂ ನಮಗ ಪ್ರಾರ್ಥನೆ ಮಾಡೋದು ಬಿಟ್ಟು ಬ್ಯಾರೆ ದಾರಿನ ಇಲ್ಲ. ಅದು ದೇವರಿಗೆ ಇರಬಹುದು, ಸರಕಾರದಲ್ಲಿ ಇರೋ ನಮ್ಮ ದಾತಾರರಿಗೆ ಇರಬಹುದು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...