Homeಮುಖಪುಟಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ...

ಈ ಬ್ರಹ್ಮಾಂಡದಾಗ ಇರೋ 200 ದೇಶಗಳಲ್ಲಿ 170 ದೇಶದೊಳಗ ಮೀಸಲಾತಿ ಐತಿ. ಇದರ ಬಗ್ಗೆ ನಿಮಗೆ ಗೊತ್ತೇನು?

ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ – ಐ.ವಿ ಗೌಲ್‌

ಸುಪ್ರೀಂಕೋರ್ಟು ಮೊನ್ನೆ ಮೊನ್ನೆ ಫ್ರೆಷ್ ಆಗಿ ಒಂದು ಟಪ್ಪಣಿ ಕೊಟ್ಟದ. ಅದು ಎಷ್ಟು ಬಿಸಿ ಬಿಸಿ ಸುದ್ದಿ ಅಂದರ ಅದನ್ನ ಬರೆದ ಕಾಗದ ಇನ್ನೂ ಸುಡು -ಸುಡು ಅನ್ನಲಿಕ್ಕೆ ಹತ್ತೇದ.

ಅದೇನಪಾ ಅಂದರ ಮೀಸಲಾತಿ ಅಂದರ ನಾಗರಿಕರ ಮೂಲಭೂತ ಹಕ್ಕೇನಲ್ಲ. ಅದು ಸರಕಾರದ ಜನ ಕಲ್ಯಾಣ ನೀತಿ. ಅದನ್ನು ಸರಕಾರಗಳು ಕೊಟ್ಟರ ಕೊಡಬಹುದು, ಇಲ್ಲಾಂದರ ಇಲ್ಲಾ. ಅವರ ಮ್ಯಾಲೆ ನೀವು ಈ ಸೌಲತ್ತು ಕೊಡಲೇಬೇಕು ಅಂತ ದಬಾಯಿಸಲಿಕ್ಕೆ ಬರಂಗಿಲ್ಲ ಅಂತ.

ಅದು ಅಂತಿಮ ತೀರ್ಪು ಅಲ್ಲ. ಅದಕ್ಕ ಸರಕಾರ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಅದು ಏನಂತ ಪ್ರತಿಕ್ರಿಯೆ ಕೊಡತದ ಅನ್ನೋದರ ಮ್ಯಾಲೆ ನಾವು ಪ್ರತಿಕ್ರಿಯೆ ಕೊಡೋಣಂತ. ಆದರ ಅದರ ಹಿನ್ನೆಲೆ ತಿಳದು ಕೊಳ್ಳೋಣ.

ಈಗ ಮೀಸಲಾತಿ ಅನ್ನೋದು ಏನು ಅಂತ ತಿಳಕೋಕಿಂತಾ ಮೊದಲ ಮೂಲಭೂತ ಹಕ್ಕು ಅಂದರೇನು ಅಂತ ತಿಳಿಯೋಣು. ಮೂಲಭೂತ ಹಕ್ಕು ಅಂದರ ಹುಟ್ಟಿನಿಂದ ಬಂದ ಹಕ್ಕು. ಅದರ ಸಲುವಾಗಿ ಏನೂ ವಿಶೇಷ ಮಸಲತ್ತು ಮಾಡಬೇಕಿಲ್ಲ. ಯಾ ಮನುಷಾ ನಾಗರಿಕ ಇರತಾನೋ ಅವನಿಗೆ ಸಹಜವಾಗಿ ಬಂದ ಬಿಡೋ ಹಕ್ಕುಗಳು ಮೂಲಭೂತ ಹಕ್ಕುಗಳು. ಕೆಲವು ಎಲ್ಲಾ ಮನುಷ್ಯರಿಗೂ ಬರತಾವು. ಅವಕ್ಕ ಮಾನವ ಹಕ್ಕುಗಳು ಅಂತ ಅನಸಿಗೋತಾವು.

ಇನ್ನು ಕೆಲವು ಬರೇ ನಾಗರಿಕರಿಗೆ ಮಾತ್ರ ಸಿಗೋವು. ಅವು ಕಾನೂನಿನಿಂದ ಮಾತ್ರ ಸಿಗೋವಂಥವು. ಅವನ್ನು ಆಯಾ ದೇಶದ ಸಂವಿಧಾನದ ಒಳಗ ಬರದು ಇಡಲಾಗುತ್ತದೆ. ಅದರಾಗ ಬರದಾರ ಅಂದ ಮಾತ್ರಕ್ಕ ಅವು ಸಿಗತಾವು ಅಂತ ಅಲ್ಲ. ಅವು ನಿಸರ್ಗದ ನಿಯಮಗಳು. ಮಾನವ ಅಂತ ಅನ್ನಿಸಿಕೊಂಡವನು ಹಿಂಗ ಇರಬೇಕು ಅಂತ ಮಾನವ ಇತಿಹಾಸದ ಜೀವನಚಕ್ರದ ಅಲ್ಲಲ್ಲಿ ನಿಂತು ತೋರಸತದ. ಅದನ್ನು ಸಂವಿಧಾನದಾಗ ದಾಖಲಿಸಲಾಗತದ. ಸಂವಿಧಾನಕ್ಕ ಅಷ್ಟು ಯಾಕ ಇಂಪಾರ್ಟನ್ಸ ಕೊಡತೀರಿ? ಅದು ಒಂದು ಬುಕ್ಕು ಅಷ್ಟ. ಅಂತ ಮಾತಾಡೋರನ್ನ ವಾದದಾಗ ಸೋಲಸಲಿಕ್ಕೆ ಆಗಂಗಿಲ್ಲ. ಆದರ ಅವರಿಗೆ ಒಂದು ಮಾತು ಹೇಳಬೇಕು. ಸಂವಿಧಾನ ಅನ್ನೋದು ಒಂದು ಬುಕ್ಕು ಅಷ್ಟ. ಆದರ ಅದು ಸಮಗ್ರ ಮಾನವ ಜೀವ ವಿಕಾಸದ ಬುದ್ಧಿಮತ್ತೆ ಹಾಗೂ ವಿವೇಕವನ್ನು ದಾಖಲಿಸಿರುವ ಬುಕ್ಕು. ಅದನ್ನು ಬದಲು ಮಾಡಿದರ, ಮುಚ್ಚಿ ಇಟ್ಟರ, ಬೀಸಿ ಒಗದರ ಸಹಿತ ಅದರಲ್ಲಿರುವ ವಿವೇಕ ಹಾಳಾಗುವುದಿಲ್ಲ ಅಂತ.

ಇನ್ನು ಭಾರತದ ಸಂವಿಧಾನದಲ್ಲಿ ಇರುವ ಸುಮಾರು 20 ಮೂಲಭೂತ ಹಕ್ಕುಗಳಲ್ಲಿ ಪ್ರಮುಖವಾದ್ದು ಸಮಾನತೆಯ ಹಕ್ಕು. ಅಸಮಾನತೆ ತಳಹದಿಯ ಮೇಲೆ ನಿಂತಿರುವ ಸಮಾಜದಲ್ಲೆ ಸಮಾನತೆ ಸ್ಥಾಪಿಸೋದು ಹೆಂಗ ಹಂಗಾರ?

ಈ ದೇಶದ ರಾಜಕೀಯದ ಮೇಲೆ ಹಿಂದೆಂದೂ ಇಲ್ಲದ ಪ್ರಭಾವ ಬೀರಿ ಬದಲಾವಣೆ ತಂದದ್ದು ಮಂಡಲ ವರದಿ. ಅದರ ಶಿಫಾರಸು ಪುಸ್ತಕ ನೋಡಿದವರು ಕಮ್ಮಿ. ಅದರ ಹೆಸರಿನಲ್ಲಿ ಹೋರಾಟ ಮಾಡಿದವರು ಹೆಚ್ಚು. ಅದು ಆ ಕಡೆನೂ ಇರಬಹುದು, ಈ ಕಡೆನೂ ಇರಬಹುದು.

ಆ ವರದಿಯ ಮೊದಲ ಪುಟದ ಮೇಲೆ ಒಂದು ಮಾತು ಬರದದ. ಸಾವಿರ ವರ್ಷಕ್ಕೂ ಸಲ್ಲುವ ಮಾತು ಅದು. “ಅಸಮಾನನನ್ನು ಸಮಾನನ ಜೊತೆ ಸೇರಿಸಿ ನೋಡುವುದು, ಅಸಮಾನತೆಯನ್ನು ಮುಂದುವರೆಸಿದಂತೆ”. ಅಸಮಾನತೆಯನ್ನು ಮುರಿಯಲಿಕ್ಕೆ ಬೇರೆ ಬೇರೆ ಪ್ರಯತ್ನ ಮಾಡಿ ಅವು ಯಾವುವೂ ಯಶಸ್ಸು ಗಳಿಸದೇ ಹೋದಾಗ ಪ್ರಾರಂಭವಾಗಿದ್ದು, ತಕ್ಕಮಟ್ಟಿಗೆ ಯಶಸ್ಸು ಗಳಿಸಿದ್ದು ಮೀಸಲಾತಿ.

ಅದರ ಬಗ್ಗೆ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳೋಣ. ಈ ಬ್ರಹ್ಮಾಂಡದಾಗ 200 ದೇಶ ಅವ. ಅದರಾಗ ಸುಮಾರು 170 ದೇಶದೊಳಗ ಪ್ರಜಾಪ್ರಭುತ್ವ ಅದ. ಎಲ್ಲೆಲ್ಲಿ ಪ್ರಜಾಪ್ರಭುತ್ವ ಅದನೋ ಅಲ್ಲೆಲ್ಲಾ ಮೀಸಲಾತಿ ಅದ. ಅದರ ಹೆಸರು ಬ್ಯಾರೆ ಬ್ಯಾರೆ ಇರಬಹುದು ಅಷ್ಟ. ಅಮೆರಿಕಾದ ಅದನ್ನು ಧನಾತ್ಮಕ ತಾರತಮ್ಯ ಅಂತಾರ. ಯುರೋಪಿನ್ಯಾಗ ಸಕಾರಾತ್ಮಕ ಕ್ರಿಯೆ ಅಂತಾರ, ಅನೇಕ ದೇಶದೊಳಗ ಕೋಟಾ ಅಂತಾರ. ಭಾರತದಾಗ ಸರಳವಾಗಿ ಮೀಸಲಾತಿ ಅಂತೇವಿ.

ಬಿಲ್ ಕ್ಲಿಂಟನ್ನಿನ ಕಚೇರಿಯೊಳಗ ಕರಿಯರು, ಮೆಕ್ಸಿಕೋದವರು, ಏಷಿಯಾದವರು, ಮಹಿಳೆಯರು ಕಮ್ಮಿ ಇದ್ದಾರೆ ಅಂತ ಅಲ್ಲಿನ ಧನಾತ್ಮಕ ತಾರತಮ್ಯ ಆಯೋಗ ಅಲ್ಲಿನ ಅಧ್ಯಕ್ಷನಿಗೆ ನೋಟಿಸು ಕೊಟ್ಟಿತ್ತು.

ಯುರೋಪಿನಲ್ಲಿ ಪ್ರತಿ ಸರಕಾರಿ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ, ಎಲ್ಲಾ ರೀತಿಯ ಜಾತಿ- ಜನಾಂಗ- ಲಿಂಗದವರಿಗೆ ಅವಕಾಶ ನೀಡಲೇಬೇಕು ಅಂತ ಒಂದು ಕಾನೂನು ಇದೆ. ಅದನ್ನು ತಪ್ಪಿದರೆ ವಾಗ್ದಂಡನೆ ಹಾಗೂ ಇತರ ಶಿಕ್ಷೆ ಅದ. ಇದು ನಮ್ಮ ಭಾಳ ಜಾನ ಎನ್‍ಆರ್‍ಐಗಳಿಗೆ ಅನಿವಾಸಿ ಭಾರತೀಯರಿಗೆ ಗೊತ್ತಿರೋದಿಲ್ಲ. ಭಾರತ ಹಾಳಾಗಿರುವುದು ಮೀಸಲಾತಿಯಿಂದ ಅಂತ ಅವರು ಘಂಟಾಘೋಷವಾಗಿ ಹೇಳತಾರ. ತಮ್ಮ ಅಜ್ಞಾನದ ಬಲದಿಂದ ತಿಳಿದವರನ್ನ ಗೋಳು ಹೊಯ್ಕೊತಾರ.

ಯಾಕಂದರ ಅವರು ತಮಗೆ ರೊಟ್ಟಿ – ಬ್ಯಾಳಿ ನೀಡಿದ ದೇಶದ ಸರಕಾರ ಹಾಗೂ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಬೆಳೆಸಿಕೊಳ್ಳಲಿಕ್ಕೆ ಹೋಗಿರೋದಿಲ್ಲ.

ಅವರು ಅಲ್ಲಿ ಇರೋತನಕಾ ಪ್ರವಾಸಿಗಳ ಥರಾ ಇದ್ದು, ತಮಗೆ ಕೆಲಸ ನೀಡಿದ ದೇಶದ ಬಗ್ಗೆ ಅಭಿಮಾನ ಹಾಗೂ ತಮಗೆ ಜನ್ಮ ನೀಡಿದ ದೇಶದ ಬಗ್ಗೆ ತಾತ್ಸಾರ ಬೆಳೆಸಿಕೊಂಡಿರತಾರ.

ನೀವು ಹಳ್ಳಿಯೊಳಗ ಜಂಗೀ ನಿಕಾಲಿ ಕುಸ್ತಿ ನೋಡಿರಬಹುದು. ಹಂಗಂದರ ಯುದ್ಧದಲ್ಲಿ ಕೊನೆಯಾಗುವ ಕುಸ್ತಿ ಅಂತ ಅರ್ಥ. ಅದರಾಗ ಎದುರಾಳಿಗಳನ್ನ ಹೆಂಗ ಹುಡುಕತಾರ, ಹೆಂಗ ಅವರ ನಡುವೆ ಸ್ಪರ್ಧೆ ಹಚ್ಚತಾರ ಅಂತ ನೋಡಬೇಕು .ಅದು ಅವರ ವಯಸ್ಸು ಅಥವಾ ಅನುಭವದ ಮ್ಯಾಲೆ ಇರಂಗಿಲ್ಲ. ಅವರ ದೇಹದ ತೂಕದ ಮ್ಯಾಲೆ ಇರತದ. ಯಾಕಂದರ ಸ್ಪರ್ಧೆ ಅನ್ನೋದು ಸಮಾನರ ನಡುವೆ ಇರಬೇಕು ಅಂತ. ಒಲಂಪಿಕ್ಸನ್ಯಾಗ ನಮ್ಮ ಹೆಮ್ಮೆಯ ಹುಡುಗಿ ಮೇರಿ ಕೋಮ ಅಂತಿಮ ಸುತ್ತಿನ್ಯಾಗ ಯಾಕ ಸೋತು ಹೋದಳು ಅಂದರ ಅಕಿನ್ನ ತನಗಿಂತ ಹೆಚ್ಚು ತೂಕದ ಹುಡುಗಿಯೊಂದಿಗೆ ಹೊಡದಾಡಲಿಕ್ಕೆ ಹಚ್ಚಿದರು.

ನಮ್ಮ ಸಮಾಜದಾಗ ಅಸಮಾನತೆ ಸಾವಿರಾರು ವರ್ಷಗಳಿಂದ ಅದ. ಅದನ್ನ ಪ್ರಜಾಪ್ರಭುತ್ವದ ನಂತರ ಅಳಿಸಬೇಕು ಅಂದರ ಸರಳ ಇಲ್ಲ. ಆದರೂ ಪ್ರಯತ್ನ ಕೈಬಿಡಬಾರದು. ಅದರಾಗುನೂ ಆ ಅಸಮಾನತೆ ಮಾನವ ನಿರ್ಮಿತವಾದ್ದರಿಂದ ಅದನ್ನು ಮಾನವರೇ ಅಳಿಸಬೇಕು. ಸಮಾನತೆ ಮೂಲಭೂತ ಹಕ್ಕು ಅಂದರ ಅದನ್ನು ನಿವಾರಿಸಲು ಬೇಕಾಗುವ ಪರಿಕರಗಳು ಮೂಲಭೂತ ಹಕ್ಕು ಯಾಕ ಆಗಂಗಿಲ್ಲ? ಆ ಪರಿಕರಗಳನ್ನ ಕಸಗೊಂಡರ ಯಾವ ರೀತಿ ಸಮಾನತೆ ಸಾಧಿಸಲಿಕ್ಕೆ ಸಾಧ್ಯ ಅದ?

ಘನ ಸರಕಾರಗಳು ನ್ಯಾಯಾಧೀಶರ ಮುಂದ ಇಡುವ ವಾದಗಳಲ್ಲಿ ಈ ಮಾತುಗಳು ಬರಬಹುದು ಅಂತ ಆಶೆ ಮಾಡೋಣ. ಪ್ರಾರ್ಥನೆಗಿಂತ ದೊಡ್ಡದು ಯಾವುದೂ ಇಲ್ಲ ಅನ್ನೋ ಮಾತನ್ನು ಬಂಗಾಳದ ಭಕ್ತಿ ಸಂತ ಕೃಷ್ಣ ಚೈತನ್ಯ ಹೇಳಿದರು. ಸದ್ಯಕ್ಕಂತೂ ನಮಗ ಪ್ರಾರ್ಥನೆ ಮಾಡೋದು ಬಿಟ್ಟು ಬ್ಯಾರೆ ದಾರಿನ ಇಲ್ಲ. ಅದು ದೇವರಿಗೆ ಇರಬಹುದು, ಸರಕಾರದಲ್ಲಿ ಇರೋ ನಮ್ಮ ದಾತಾರರಿಗೆ ಇರಬಹುದು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...