Homeಚಳವಳಿಸಿಬಿಐ ದಾಳಿಗಳು ಮತ್ತು ವಕೀಲರು, ಪತ್ರಕರ್ತರ ಕಾನೂನುಬಾಹಿರ ಬಂಧನಗಳು: ಕರಾಳ ದಿನಗಳ ಮುನ್ಸೂಚನೆ

ಸಿಬಿಐ ದಾಳಿಗಳು ಮತ್ತು ವಕೀಲರು, ಪತ್ರಕರ್ತರ ಕಾನೂನುಬಾಹಿರ ಬಂಧನಗಳು: ಕರಾಳ ದಿನಗಳ ಮುನ್ಸೂಚನೆ

ಮೋದಿ ಅಮಿತ್ ಶಾ ರವರ ಸಿಬಿಐ ದಾಳಿಗಳು ಮತ್ತು ನಕ್ಸಲ್ ಲಿಂಕ್ ಆರೋಪಗಳು, ಮಾನವ ಹಕ್ಕು ಕಾರ್ಯಕರ್ತರನ್ನು ತೆಪ್ಪಗಾಗಿಸುವ ಸಾಧನಗಳಾಗಿವೆ ಅಷ್ಟೇ..

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ-2 ಸರ್ಕಾರವು ಯಾವುದೇ ನೈಜ ಮತ್ತು ಗ್ರಹಿತ ವಿರೋಧಗಳನ್ನು ಮೆಟ್ಟಿ ಹಾಕಲು ಒಂದಿನಿತೂ ಸಮಯವನ್ನು ವ್ಯರ್ಥ ಮಾಡುತ್ತಿಲ್ಲ. ಗುಜರಾತ್ ಗಲಭೆಗಳಲ್ಲಿ ಮೋದಿ ಪಾತ್ರವಿದೆಯೆಂದು ಆರೋಪಿಸಿದ್ದ ಸಂಜೀವ್ ಭಟ್ಟ ಅವರಿಗೆ ಜೀವಾವಧಿ ಶಿಕ್ಷೆ ಆಗುವಂತೆ ಮಾಡುವ ಮೂಲಕ ಇದು ಆರಂಭವಾಯಿತು. ನಂತರದಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರದ ಟೀಕಾಕಾರರಾಗಿದ್ದ ಪರ್ತಕರ್ತರ ಮೇಲೆ ದಾಳಿ ಮತ್ತು ಬಂಧನಗಳಾದವು.

ಈ ವಾರವಷ್ಟೇ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರ ಮನೆ ಮತ್ತು ಲಾಯರ್ಸ್ ಕಲೆಕ್ಟಿವ್ ಕಚೇರಿ ಮೇಲೆ ಸಿಬಿಐ ದಾಳಿ ನಡೆದಿದ್ದು ಇದೆಲ್ಲದರ ಮುಂದುವರಿಕೆ. ಇಂದಿರಾರವರು 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಅವರ ಮತ್ತು ಅವರ ನೀತಿಗಳ ಪ್ರಖರ ಟೀಕಾಕಾರರಾಗಿದ್ದಾರೆ.

ಆನಂದ್ ಗ್ರೋವರ್ ಮತ್ತು ಇಂದಿರಾ ಜೈಸಿಂಗ್

ಇಂದಿರಾ ಮತ್ತು ಅವರ ಸಂಸ್ಥೇ ಲಾಯರ್ಸ್ ಕಲೆಕ್ಟಿವ್ ಬಿಜೆಪಿ ವಿರುದ್ಧ ಹಲವಾರು ಕಾನೂನು ಪ್ರಕರಣಗಳನ್ನು ಕೈಗೆತ್ತಿಕೊಂಡಿದೆ. ಸಂಜೀವ್ ಭಟ್ ಮತ್ತು ತೀಸ್ತಾ ಸೆಟೆಲ್ ವಾಡ್ ಕೇಸುಗಳು ಇದರಲ್ಲಿ ಮುಖ್ಯವಾಗಿವೆ. 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಪಾತ್ರವಿತ್ತು ಎಂದು ಸಂಜೀವ್ ಭಟ್ ಆರೋಪಿಸಿದ್ದರು. 2002ರ ಗುಜರಾತ್ ಗಲಭೆಯ ಸಂತ್ರಸ್ಥರ ಪರವಾಗಿ ತೀಸ್ತಾ ಅವರ ಸಂಸ್ಥೇ ಕಾನೂನಾತ್ಕ ಹೋರಾಟ ನಡೆಸುತ್ತ ಬಂದಿದೆ. ತೀಸ್ತಾರ ಮೇಲಿನ ಹಣ ದುರುಪಯೋಗ ಪ್ರಕರಣದ ಕೇಸನ್ನು ಇಂದಿರಾ ಜೈಸಿಂಗ್ ಅವರೇ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಇಂದಿರಾ ಜೈಸಿಂಗ್ ಯಾರು? ಅವರ ಮೇಲೆ ಮೋದಿ ಶಾಗೇಕೆ ಕೋಪ?

ಗ್ರೀನ್‍ಪೀಸ್ ಕಾರ್ಯಕರ್ತೆ ಪ್ರಿಯಾ ಪಿಳ್ಳೈ ಅವರಿಗೆ ಭಾರತದ ಆಚೆ ಪ್ರವಾಸಿಸದಂತೆ ನಿರ್ಬಂಧ ಹೇರಿದ್ದರ ವಿರುದ್ದವೂ ಇಂದಿರಾ ವಕೀಲಿಕೆ ಮಾಡಿದ್ದರು. ಸುಪ್ರಿಂಕೋರ್ಟಿನಲ್ಲಿ ಹಿರಿಯ ನ್ಯಾಯಾಧೀಶರನ್ನು ನೇಮಿಸುವ ಪ್ರಕ್ರಿಯೆಯನ್ನು ಇಂದಿರಾ ಟಿಕಿಸುತ್ತ ಬಂದಿದ್ದು, 2016ರಲ್ಲಿ ಅವರು ಕೋರ್ಟಿನಲ್ಲಿ ಅದನ್ನು ಪ್ರಶ್ನಿಸಿದ್ದರು. ನ್ಯಾಯಾಧೀಶ ಲೋಯಾ ಸಾವಿನ ಪ್ರಕರಣದ ವಿಚಾರಣಗೆ ನ್ಯಾಯಾಧೀಶರನ್ನು ನೇಮಿಸುವಲ್ಲಿ ಆದ ಲೋಪವನ್ನೂ ಇಂದಿರಾ ವಿರೋಧಿಸಿದ್ದರು.

ಉತ್ತರಪ್ರದೇಶದಲ್ಲಿ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದ ಪ್ರಕರಣದ ನಂತರ ಇಲ್ಲಿವರೆಗೆ ಐವರು ಪತ್ರಕರ್ತರು ಮತ್ತ ಮಾನವ ಹಕ್ಕು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಪ್ರಕರಣಗಳು ಸಣ್ಣ ಪಟ್ಟಣಗಳಿಗೆ ಸಂಬಂಧಿಸಿದ್ದವಾದ್ದರಿಂದ ಕನೋಜಿಯಾ ಪ್ರಕರಣದಂತೆ ಸುದ್ದಿಯಾಗಲಿಲ್ಲ.

1. 9, ಜೂನ್ 2019ರಂದು ಜಾರ್ಖಂಡಿನಲ್ಲಿ ಪತ್ರಕರ್ತ ಮತ್ತ ಸಾಮಾಜಿಕ ಕಾರ್ಯಕರ್ತ ರೂಪೇಶಕುಮಾರ್ ಮತ್ತು ವಕೀಲ ಮಿಥಿಲೇಶ್ ಕುಮಾರ್ ಸಿಂಗ್ ಬಂಧನ.

2. 8, ಜುಲೈ 2019, ಕೃಪಾಶಂಕರ್ ಮತ್ತು ಅವರ ಪತ್ನಿ ಪ್ರತಿಭಾ ಅವರನ್ನು ಹೊಟೆಲ್ ಒಂದರಿಂದ ಕರೆದೊಯ್ದು ಬಂಧಿಸಲಾಯಿತು. ಕೃಪಾಶಂಕರ್ ಯುಪಿಯ ದಿನಪತ್ರಿಕೆ ‘ವಿರುದ್ಧ್’ನ ಸಂಪಾದಕರು ಮತ್ತು ಹಿಂದೂತ್ವ ಫ್ಯಾಸಿಸಂ ವಿರೋಧಿ ವೇದಿಕೆಯ ಸದಸ್ಯರು.

3. 9, ಜುಲೈ 2019, ಸಾಮಾಜಿಕ ಕಾರ್ಯಕರ್ತರು ಮತ್ತು ಶಿಕ್ಷಕರಾದ ಮನಿಶ್ ಮತ್ತು ಅವರ ಪತ್ನಿ ಅಮಿತಾ ಶ್ರೀವಾಸ್ತವ್ ಬಂಧನ.

ಈ ಎಲ್ಲ ಪ್ರಕರಣಗಳಲ್ಲಿ ಒಂದು ನಿರ್ದಿಷ್ಟ ಪ್ಯಾಟರ್ನ್ ಇದ್ದು, ಮೊದಲಿಗೆ ಅಪಹರಿಸಿ ನಂತರ ಬಂಧಿಸುವುದು. ನಕ್ಸಲ್‍ರೊಂದಿಗೆ ಸಂಪರ್ಕ ಎಂಬ ಆರೋಪದ ಮೇಲೆ ಆ ಮೂರು ಬಂಧನಗಳನ್ನು ಮಾಡಲಾಗಿದೆ. ಕಳೆದ 6 ತಿಂಗಳಿಂದ ಇಂಥವನ್ನೆಲ್ಲ ನಾವು ನೋಡುತ್ತಿದ್ದೇವೆ.

ನಕ್ಸಲ್ ಸಂಪರ್ಕ ಎಂಬ ನಿರಾಧಾರ ಆರೋಪದ ಮೇಲೆ ಮೋದಿ ಸರ್ಕಾರ ಮಾನವ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸುತ್ತ ನಡೆದಿದೆ. ಈ ಕಾರ್ಯಕರ್ತರ ಅಪರಾಧವಾದರೂ ಏನು? ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಅವರು ಮಾತನಾಡುತ್ತಿರುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು.

ತನ್ನ ನೀತಿಗಳ ಟೀಕೆ ಮಾಡುವ ಸಣ್ಣ ಪಟ್ಟಣಗಳ ಮಾನವ ಹಕ್ಕು ಕಾರ್ಯಕರ್ತರು, ಪತ್ರಕರ್ತರು ಮತ್ತು ಖ್ಯಾತ ವಕೀಲರನ್ನು ಬಂಧಿಸುವ ಮೂಲಕ ಮೋದಿ ಸರ್ಕಾರವು ತನ್ನ ಟೀಕಾಕಾರರು ಮತ್ತು ವಿರೋಧಿಗಳನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸುತ್ತಿದೆ. ಅದು ಎಲ್ಲಾ ವಿರೋಧ ಮತ್ತು ಭಿನ್ನಮತವನ್ನು ಮಟ್ಟ ಹಾಕಲು ಹೊರಟಿದೆ. ನಮ್ಮ ಮುಂದಿನ ಪ್ರಶ್ನೆ: ಎಷ್ಟು ದಿನಾ ಅಂತ ನಾವು ಮೌನವಾಗಿರುವುದು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...