Homeಚಳವಳಿಇಂದಿರಾ ಜೈಸಿಂಗ್ ಯಾರು? ಅವರ ಮೇಲೆ ಮೋದಿ ಶಾಗೇಕೆ ಕೋಪ?

ಇಂದಿರಾ ಜೈಸಿಂಗ್ ಯಾರು? ಅವರ ಮೇಲೆ ಮೋದಿ ಶಾಗೇಕೆ ಕೋಪ?

80 ವರ್ಷದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಜನಸಾಮಾನ್ಯರ ಪರ ಮಾಡಿರುವ ವಕೀಲಿಕೆ ಅಗಾಧವಾದದ್ದು

- Advertisement -
- Advertisement -

ನಿನ್ನೆ ಇಂದಿರಾ ಜೈಸಿಂಗ್ ಮತ್ತು ಅವರ ಪತಿ ಆನಂದ್ ಗ್ರೋವರ್ ಅವರ ಸ್ವಯಂ ಸೇವಾ ಸಂಸ್ಥೆಯ (ಲಾಯರ್ಸ್ ಕಲೆಕ್ಟಿವ್) ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿದ್ದು, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 2010ರ ಅಡಿಯಲ್ಲಿ ಹಲವು ಆರೋಪಗಳನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಜೈಸಿಂಗ್ ಯಾರು, ಯಾತಕ್ಕಾಗಿ ಸಿಬಿಐ ದಾಳಿ ಮತ್ತಿತರರ ವಿಚಾರಗಳನ್ನು ಚರ್ಚಿಸಬೇಕಾಗಿದೆ.

ಇಂದಿರಾ ಜೈಸಿಂಗ್ ಯಾರು?

ಮಾನವ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ಇಂದಿರಾ ಜೈಸಿಂಗ್ ರವರ ಹೆಸರು ಐತಿಹಾಸಿಕವಾದುದ್ದು. ಹಲವು ಕಾನೂನು ಹೋರಾಟಗಳಲ್ಲಿ ಬಹಿರಂಗ ಮತ್ತು ಧೈರ್ಯವಂತಿಕೆಯ ಮಧ್ಯಪ್ರವೇಶ ಮತ್ತು ಕೆಲಸಕ್ಕೆ ಹೆಸರುವಾಸಿಯಾದ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ದೊರಕಿದೆ. 1986 ರಲ್ಲಿ, ಬಾಂಬೆಯ ಹೈಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು 2009 ರಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡರು.

ಇಂದಿರಾ ಜೈಸಿಂಗ್ ಹಲವಾರು ಮಹತ್ವದ ಕಾನೂನು ಹೋರಾಟಗಳನ್ನು ಗೆದ್ದಿದ್ದಾರೆ, ಅದರಲ್ಲೂ ವಿಶೇಷವಾಗಿ ಕ್ರಿಶ್ಚಿಯನ್ ಮಹಿಳೆಯರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಹಕ್ಕು, ಮಕ್ಕಳ ಪಾಲನೆ ಪ್ರಕರಣಗಳಲ್ಲಿ ನೈಸರ್ಗಿಕ ರಕ್ಷಕರಾಗಿ ತಾಯಿಯ ಹಕ್ಕು ಮುಖ್ಯವಾದವು. ಜೊತೆಗೆ 1984 ರ ಡಿಸೆಂಬರ್‌ನಲ್ಲಿ ಭೋಪಾಲ್ ಅನಿಲ ದುರಂತದಿಂದ ಬಲಿಯಾದವರಿಗೆ ಮತ್ತು ಬದುಕುಳಿದವರಿಗೆ ನ್ಯಾಯ ಮತ್ತು ಪರಿಹಾರಕ್ಕಾಗಿ ಅವರು ಯೂನಿಯನ್ ಕಾರ್ಬೈಡ್ ನಿಗಮದ ವಿರುದ್ಧ ಹೋರಾಡಿದವರು.

1980 ರ ಅವಧಿಯಲ್ಲಿ ಬಾಂಬೆಯ ಪಾದಚಾರಿ ನಿವಾಸಿಗಳ ಹಕ್ಕುಗಳ ಪರವಾಗಿ ಮತ್ತು  ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳ ಪ್ರದೇಶವನ್ನು ಗಣಿಗಾರಿಕೆಯಿಂದ ರಕ್ಷಿಸುವ ಸಲುವಾಗಿ ಇವರು ಮಾಡಿರುವ ಕೆಲಸಗಳು ಮಾನವ ಹಕ್ಕುಗಳು ಮತ್ತು ಪರಿಸರ ಕಾರ್ಯಗಳಲ್ಲಿ ಪ್ರಮುಖವಾದವುಗಳಾಗಿವೆ.

ಜೀವ ಉಳಿಸುವ ಕ್ಯಾನ್ಸರ್ ಔಷಧ ಗ್ಲಿವೆಕ್‌ ಎಲ್ಲಾರಿಗೂ ಸಿಗಬೇಕೆಂದು ನೊವಾರ್ಟಿಸ್ ಪೇಟೆಂಟ್ ಅನ್ನು ವಿರೋಧಿಸುವ ಹೋರಾಟದಲ್ಲಿ ಇಂದಿರಾ ಜೈಸಿಂಗ್ ನೇತೃತ್ವದ ಲಾಯರ್ಸ್ ಕಲೆಕ್ಟಿವ್ ಸಾಕಷ್ಟು ಕೆಲಸ ಮಾಡೆದೆ. ತದ ನಂತರವಷ್ಟೇ  ಏಪ್ರಿಲ್ 01, 2013 ರಂದು, ನೊವಾರ್ಟಿಸ್ ಅವರ ಪೇಟೆಂಟ್ ಅನ್ನು ಭಾರತದ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಎಚ್‌ಐವಿ ವ್ಯಕ್ತಿ ಗಳಿಗೆ ತಾರತಮ್ಯದ ಮಸೂದೆಯ ವಿರುದ್ಧವೂ ಜೈಸಿಂಗ್ ಕೆಲಸ ಮಾಡಿದ್ದಾರೆ.

ಇಂದಿರಾ ಜೈಸಿಂಗ್ ರವರ ಲಾಯರ್ಸ್ ಕಲೆಕ್ಟಿವ್ ಮೇಲೆ ಸಿಬಿಐ ದಾಳಿ ಏಕೆ?

ಎಫ್‌ಸಿಆರ್‌ಎ (ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 2010) ಉಲ್ಲಂಘನೆ ಆರೋಪದ ಮೇಲೆ ಗೃಹ ಸಚಿವಾಲಯದ ಆದೇಶದ ಮೇರೆಗೆ ಆರು ತಿಂಗಳ ಕಾಲ ಲಾಯರ್ಸ್ ಕಲೆಕ್ಟಿವ್ ಪರವಾನಗಿಗಳನ್ನು ರದ್ದುಗೊಳಿಸಿದೆ. ಲಾಯರ್ಸ್ ಕಲೆಕ್ಟಿವ್ ಜೂನ್ 2016 ರಿಂದಲೂ ಮೋದಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ವಿದೇಶಿ ದೇಣಿಗೆಯನ್ನು ರಾಜಕೀಯ ಪ್ರೇರಿತ ರ್ಯಾಲಿ ಮತ್ತು ಧರಣಿಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. 2016 ರಲ್ಲಿ ದೇಶದ ಹಿತಾಸಕ್ತಿಗೆ ಹಾನಿಕಾರಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆಂದು ಆರೋಪಿಸಲಾದ 25 ಎನ್‌ಜಿಒಗಳ ಪಟ್ಟಿಯಲ್ಲಿಯೂ ಈ ಸಂಘಟನೆಯನ್ನು ಸೇರಿಸಲಾಗಿದೆ.

ಇಂದಿರಾ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಲ್ಲೇ 2016 ರಲ್ಲಿಯೇ ದಾಖಲೆಗಳನ್ನು ನೀಡಿ ಸ್ಪಷ್ಟಪಡಿಸಿದ್ದಾರೆ. ಆದರೆ 2019 ರ ಮೇ ತಿಂಗಳಲ್ಲಿ ಬಿಜೆಪಿ ಬೆಂಬಲಿತ ಲಾಯರ್ಸ್ ವಾಯ್ಸ್ ಎಂಬ ಮತ್ತೊಂದು ಎನ್‌ಜಿಒ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿ ಲಾಯರ್ಸ್ ಕಲೆಕ್ಟಿವ್ ಎಫ್‌ಸಿಆರ್‌ಎ ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. “ರಾಷ್ಟ್ರದ ವಿರುದ್ಧದ ಚಟುವಟಿಕೆಗಳಿಗಾಗಿ” ವಿದೇಶಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಲಾಯರ್ಸ್ ಕಲೆಕ್ಟಿವ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಲಾಯರ್ಸ್ ವಾಯ್ಸ್ ಕೋರಿದೆ. ಲಾಯರ್ಸ್ ವಾಯ್ಸ್ ನ ಸಂಯೋಜಕರಾದ ನೀರಜ್ ಅವರು ಬಿಜೆಪಿಯ ಅಖಿಲ ಭಾರತ ಕಾನೂನು ಸೆಲ್ ನ ಸಹ ಸಂಯೋಜಕರು ಆಗಿದ್ದಾರೆ.

ಇಂದಿರಾರವರ ಚಟುವಟಿಕೆಗಳು “ದೇಶದ ಹಿತಾಸಕ್ತಿಗಳಿಗೆ ಹಾನಿಕಾರಕವೆ”?

ಮೇಲ್ನೋಟದಲ್ಲಿಯೇ ಈ ಆರೋಪಗಳು ಸುಳ್ಳೆಂದು ಕಾಣುತ್ತವೆ. ಗೃಹ ಸಚಿವಾಲಯವು ಲಾಯರ್ಸ್ ಕಲೆಕ್ಟಿವ್ 2009, 2011 ಮತ್ತು 2014 ರಲ್ಲಿ ಕರಡು ಮಸೂದೆ ರಚಿಸುವ ಶಾಸನ ಸಭೆಗಳಿಗೆ ಮತ್ತು ಸಂಸದರು ಹಾಗೂ ಮಾಧ್ಯಮದ ಪರವಾಗಿ ವಕಾಲತ್ತು ವಹಿಸಲು, ರ್ಯಾಲಿಗಳು / ಧರಣಿಗಳನ್ನು ಆಯೋಜಿಸಲು ವಿದೇಶಿ ಕೊಡುಗೆಯಿಂದ 13 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಬಳಸಿದೆ, ಎಂದು ಆರೋಪಿಸಿದೆ.

ನಿಜ ಅಂದರೆ ಯಾವುದೇ ಮಸೂದೆ ರಚನೆಯಾಗಬೇಕಾದರೆ ಹಲವಾರು ಕರಡುಗಳು ಮತ್ತು ಸಂಬಂಧಪಟ್ಟವರ ಸಭೆಗಳ ಮೂಲಕ ನಡೆಯಬೇಕು. ಕರಡು ಶಾಸನ ಸಭೆಗಳು, ರ್ಯಾಲಿಗಳನ್ನು ಆಯೋಜಿಸಿದ್ದು ಕೂಡ ತಾನು ಕಾರ್ಯನಿರ್ವಹಿಸುತ್ತಿರುವ ಎಚ್‌ಐವಿ ಸೊಂಕಿತರಿಗೆ ತಾರತಮ್ಯವಾಗಬಾರದು ಎಂಬ ಮಸೂದೆಗಾಗಿ. ಆನಂದ್ ಗ್ರೋವರ್ ಮೇಲೆ ಆರೋಪಿಸಿರುವ ವಿದೇಶಿ ಕೊಡುಗೆಯೊಂದಿಗೆ ಪ್ರಯಾಣವು ನೊವಾರ್ಟಿಸ್ ಪ್ರಕರಣಕ್ಕೆ ಸಂಬಂಧಿಸಿದೆ. ಇವುಗಳಲ್ಲಿ ಯಾವುದಾದರೂ ರಾಷ್ಟ್ರ ವಿರೋಧಿ ಹೇಗೆ ಆಗುತ್ತದೆ?

ಇಂದಿರಾ ಜೈಸಿಂಗ್ ಅವರು ಸರ್ಕಾರಿ ನೌಕರರಾಗಿದ್ದಾಗ ವಿದೇಶಿ ಹಣವನ್ನು ಸ್ವೀಕರಿಸಿದ್ದಾರೆ ಎಂಬ ಆರೋಪವಿದೆ. ಅದು ಲಾಯರ್ಸ್ ಕಲೆಕ್ಟಿವ್ ಅನುದಾನ ಪಡೆದಿರುವುದೇ ವಿನಃ ಲಂಚವಲ್ಲವೆಂದು ಮತ್ತು ಆ ಅವಧಿಯಲ್ಲಿ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಕಾರಣದಿಂದ ಲಾಯರ್ಸ್ ಕಲೆಕ್ವಿವ್ ಗೆ ಕೆಲಸ ಮಾಡಿಲ್ಲವೆಂದೂ, ಆ ಅವಧಿಯಲ್ಲಿ ಪಡೆದ ಅನುದಾನಕ್ಕೆ ಸರ್ಕಾರದ ಅನುಮತಿ ಸಹ ಇತ್ತು ಎಂದು ಅವರು 2016 ರಲ್ಲಿಯೇ ಸ್ಪಷ್ಟಪಡಿಸಿದ್ದರು. ಇದರಲ್ಲಿ ಅಪರಾಧವೇನಿದೆ?

ಹಾಗಾದರೆ ಇವರ ಮೇಲೆ ಟಾರ್ಗೆಟ್ ಏಕೆ?

ಏಕೆಂದರೆ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನರೇಂದ್ರ ಮೋದಿಯವರ ನೀತಿಗಳನ್ನು ಈ ದಂಪತಿಗಳು ನಿರ್ಭಯವಾಗಿ ಟೀಕಿಸುತ್ತಿದ್ದರು. ಜೊತೆಗೆ ಭಾರತೀಯ ಜನತಾ ಪಕ್ಷದ ಅವ್ಯವಹಾರ ಮತ್ತು ಸಂವಿಧಾನ ವಿರೋಧಿ ನಡೆಗಳನ್ನು ಪ್ರಶ್ನಿಸಿದ ಸಂಜೀವ್ ಭಟ್, ತಿಸ್ತಾ ಸೆಟ್ಲವಾದ್ ರವರ ಪರವಾದ ಕೇಸುಗಳನ್ನು ಇಂದಿರಾ ಜೈಸಿಂಗ್ ಮತ್ತು ಆನಂದ್ ಗ್ರೋವರ್ ರವರ ಲಾಯರ್ಸ್ ಕಲೆಕ್ವಿವ್ ನಡೆಸುತ್ತಿದೆ. ಈ ರೀತಿಯ ಪ್ರಜಾತಾಂತ್ರಿಕ ಮತ್ತು ಸಂವಿಧಾನಬದ್ಧವಾದ ಕೆಲಸ ಮಾಡುತ್ತಿರುವುದೇ ಮೋದಿ ಮತ್ತು ಅಮಿತ್ ಶಾರಿಗೆ ತಲೆನೋವಾಗಿದೆ. ಆ ಕಾರಣಕ್ಕಾಗಿಯೇ ಇವರ ಮೇಲೆ ದಾಳಿ ನಡೆಸಲಾಗುತ್ತಿದೆ.

ಭುಗಿಲೆದ್ದ ಪ್ರತಿರೋಧ

ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಆನಂದ್ ಗ್ರೋವರ್ ಅವರ ಮನೆಗಳು ಮತ್ತು ಕಚೇರಿಗಳ ಮೇಲೆ ಸಿಬಿಐ ನಡೆಸಿದ ದಾಳಿಯನ್ನು ಖಂಡಿಸಿ ಸುಮಾರು 200 ಶಿಕ್ಷಣ ತಜ್ಞರು, ಕಾರ್ಯಕರ್ತರು, ಕಲಾವಿದರು ಮತ್ತು ಇತರರು ಹೇಳಿಕೆಗೆ ಸಹಿ ಹಾಕಿದ್ದಾರೆ. ಹಿರಿಯ ವಕೀಲರ ಮೇಲಿನ ದಾಳಿಗಳನ್ನು ಖಂಡಿಸಿ ರಾಜ್ಯಸಭೆಯ ಪ್ರತಿಪಕ್ಷ ಸಂಸದರು ಪಿಎಂ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಈ ದಂಪತಿಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ನಾಗರಿಕ ಸಮಾಜದ ಪ್ರತಿನಿಧಿಗಳು ಇಂದಿರಾ ಮತ್ತು ಗ್ರೋವರ್ ಮೇಲಿನ ದಾಳಿಯೂ ದೀರ್ಘಕಾಲದಿಂದಲೂ ನಡೆಯುತ್ತಿರುವ ಬೆದರಿಕೆ ಮತ್ತು ಹತ್ತಿಕ್ಕುವಿಕೆಯ ಇತ್ತೀಚೆಗಿನ ಸೇರ್ಪಡೆಗಳಾಗಿವೆ. ಇದು ಅಧಿಕಾರ ದುರಪಯೋಗದ ಹಸಿ ಕ್ರೌರ್ಯವಲ್ಲದೇ ಬೇರೆನಲ್ಲ ಎಂದು ಕಿಡಿಕಾರಿದ್ದಾರೆ.

ಇಂಗ್ಲಿಷ್ ನಲ್ಲಿ ಓದಿ: Who is Indira Jaising and why CBI raid?

 

ಸಹಿ ಮಾಡಿದವರಲ್ಲಿ ಅರ್ಥಶಾಸ್ತ್ರಜ್ಞರಾದ ಅಮಿಯಾ ಕುಮಾರ್ ಬಾಗ್ಚಿ ಮತ್ತು ಜಯತಿ ಘೋಷ್, ಲೇಖಕಿ ಗೀತಾ ಹರಿಹರನ್, ಪತ್ರಕರ್ತರಾದ ನಿತಿನ್ ಸೇಥಿ ಮತ್ತು ಪಮೇಲಾ ಫಿಲಿಪೋಸ್, ಮತ್ತು ಕಲಾವಿದರು ವಿವನ್ ಸುಂದರಂ ಮತ್ತು ಪಾರ್ಥಿವ್ ಷಾ ಪ್ರಮುಖರಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...