Homeಮುಖಪುಟಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ...

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ…

- Advertisement -
- Advertisement -

ಜೀವನ ಕಲೆಗಳು : ಅಂಕಣ – 13

ಸಮರ್ಪಕ ಸಂವಹನ ಕಲೆ –2 ಮಾತನಾಡುವುದು,  ಓದುವುದು ಮತ್ತು ಬರೆಯುವುದು.

ಸಂವಹನ ಪ್ರಕ್ರಿಯೆಯಲ್ಲಿ ನಾವು ಸುಮಾರು 45% ಸಮಯ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿರುತ್ತೇವೆ, ಕೇವಲ 30% ಸಮಯ ಮಾತನಾಡುತ್ತಿರುತ್ತೇವೆ, 16% ಸಮಯ ಓದುತ್ತಿರುತ್ತೇವೆ ಮತ್ತು 9% ಸಮಯ ಬರೆಯುತ್ತೇವೆ ಎಂದು ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಅದೇ ರೀತಿ ಸಕ್ರಿಯ ಕೇಳಿಸಿಕೊಳ್ಳುವಿಕೆಯ ಬಗ್ಗೆಯೂ ತಿಳಿಸಿದ್ದೆ.

ಮಾತನಾಡುವ ಸಮಯದಲ್ಲಿ ನಾವು ಮೂರು ಮಾಧ್ಯಮಗಳನ್ನು ಬಳಸುತ್ತೇವೆ. ಅವೆಂದರೆ ಬ್ಯಾಷ್ಯಾತೀತ ದೈಹಿಕಭಾಷೆ ಅಥವಾ ಬಾಡಿಲಾಂಗ್ವೇಜ್, ಎರಡನೆಯದು ಸ್ವರಬೇಧ/ಶಬ್ದಾಧರಿತ ಧ್ವನಿಗಳ ಏರಿಳಿತ (ಇನ್ಟೊನೇಶನ್). ಮೂರನೆಯದು ಸಂಪೂರ್ಣ ಭಾಷೆಯನ್ನು ಆಧರಿಸಿದ ಮಾತುಕತೆ, ಅದನ್ನು ನಾವು ಓದುವ/ಬರೆಯುವ ಕಲೆ ಎನ್ನಲೂಬಹುದು. ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಬಗ್ಗೆ ಪ್ರತ್ಯೇಕವಾಗಿ ಮುಂದೆತಿಳಿಸುತ್ತೇನೆ.

ಟೋನ್ ಅಥವಾ ನಾದವನ್ನು ಆಧರಿಸಿದ ಧ್ವನಿಯ ಸಮರ್ಪಕ ಏರಿಳಿತದಿಂದ ಸಂವಹನದಲ್ಲಿ ಸಮಯಕ್ಕೆ/ಸಂದರ್ಭಕ್ಕೆ ತಕ್ಕ ಪರಿಣಾಮವನ್ನು ಸೃಷ್ಟಿಸಬಹುದು. ಇದನ್ನು ಸಣ್ಣ ಮಕ್ಕಳು ತಮ್ಮ ಸುತ್ತಮುತ್ತ ಇರುವವರ ಜೊತೆ ಸಂವಹನಕ್ಕೆ ಬಳಕೆ ಮಾಡುವುದನ್ನು ನೋಡಿರಬಹುದು. ಮೂಕ ಪ್ರಾಣಿಗಳು ಸಹ ತಮ್ಮ ವಿವಿಧ ಸದ್ದಿನಿಂದ ತಮ್ಮ ಭಾವನಾತ್ಮಕ ಸಂದೇಶ ರವಾನಿಸುತ್ತವೆ. ಧ್ವನಿಯ ಏರಿಳಿತ, ಉಚ್ಚಾರಣೆಯ ವಿಧಾನ ಮತ್ತು ಕಂಪನಗಳ ನಿಯಂತ್ರಣದಿಂದ ಸಂದೇಶಕ್ಕೆ ಹೆಚ್ಚಿನ ಬಲ ಸಿಕ್ಕು, ಇನ್ನಷ್ಟು ಪ್ರಭಾವಶಾಲಿಯಾಗುತ್ತದೆ. ಇದನ್ನು ಭಾವನಾತ್ಮಕ ವಾಚನ ಎಂದೂ ಕರೆಯಬಹುದು. ಗಾಯನ ಸಹ ಇದೇ ಗುಂಪಿಗೆ ಸೇರುತ್ತದೆ. ಧ್ವನಿಯ ಏರಿಳಿತ, ಕಂಪನ ನಿಯಂತ್ರಣವಿಲ್ಲದಿದ್ದರೆ ಭಾಷೆ ನೀರಸ ಮತ್ತು ಏಕತಾನೀಯವಾಗುತ್ತದೆ.

ಮಾತನಾಡುತ್ತಿರುವವರು ನಮ್ಮ ಕಣ್ಮುಂದೆ ಇಲ್ಲದಿದ್ದರೂ ಸ್ವರಬೇಧದಿಂದ ನಾವು ಅವರ ಭಾವನೆಗಳನ್ನು ಅರಿಯಬಹುದು. ಧ್ವನಿಯು ಗದ್ಗದಿತವಾಗಿದ್ದಲ್ಲಿ ಅವರು ದುಃಖದಲ್ಲಿರಬಹುದೆಂತಲೂ, ಮೌನವಾಗಿದ್ದರೆ ಅತೀವ ಸಂತೋಷವಾದಾಗ ಮಾತು ಹೊರಡಲಿಲ್ಲವೇನೋ ಎಂದುಕೊಳ್ಳಬಹುದು. ಭಾವನೆಗಳ ಜೊತೆಗೆ, ವಾಕ್ಯ ಕೇವಲ ಹೇಳಿಕೆಯೋ ಅಥವಾ ಪ್ರಶ್ನಾರ್ಥಕವೋ ಎಂಬುದನ್ನೂ ಸ್ವರಭೇದ ಸೂಚಿಸುತ್ತದೆ. ಆಸಕ್ತಿ, ಉತ್ಸಾಹ ಮುಂತಾದ ಭಾವನೆಗಳನ್ನೂ ಸ್ವರಬೇಧ ಹೊರತರುತ್ತದೆ. ಪದದ ಅರ್ಥ ಪದದಲ್ಲಿ ಅಡಗಿರುವುದಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಒಂದು ವಾಕ್ಯದಲ್ಲಿ ಸಾಮಾನ್ಯವಾಗಿ ನಾಮಪದ, ಕ್ರಿಯಾಪದ, ಗುಣವಾಚಕ ಅಥವಾ ಕ್ರಿಯಾ ವಿಶೇಷಣ, ಸಂಧಿ, ಉಪಸರ್ಗ ಮುಂತಾದ ಪದಗಳಿರುತ್ತವೆ. ಯಾವ ಪದದ ಮೇಲೆ ಹೆಚ್ಚು ಒತ್ತು ಬೀಳುತ್ತದೋ ಅದೇ ರೀತಿಯಲ್ಲಿ ವಾಕ್ಯದ ಅರ್ಥ ಬದಲಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಅರ್ಥ ಹೇಳುವವರ ಅಥವಾ/ಮತ್ತು ಕೇಳುವವರ ಮನಸ್ಸಿನಲ್ಲಿ ಅಡಗಿರುತ್ತದೆ. ಮನಃಸ್ಥಿತಿಯ ವ್ಯತ್ಯಾಸದಿಂದ ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ತಪ್ಪಾಗಿ ಅರ್ಥೈಸಬಹುದು. ಕೆಲವೊಮ್ಮೆ ಕೇವಲ ಒಂದು ಪದದಲ್ಲಿ ಅನೇಕ ಅರ್ಥಗಳು ಗೂಢೈಸಿರಬಹುದು. ಅದೇ ರೀತಿ ಕಿರುಚುವಿಕೆ ಅಥವಾ ದ್ವನಿಯ ಗಡಸುತನವೂ ಶಕ್ತಿ ಸಾಮರ್ಥ್ಯವನ್ನು ಸೂಚಿಸುತ್ತದೆ. ಮಾತನಾಡುವ ವೇಗದಿಂದಲೂ ನಮ್ಮ ಉದ್ವೇಗ, ನಿರಾಸಕ್ತಿಯನ್ನು ತೋರಿಸಬಹುದು.

ದೃಶ್ಯ ಮಾಧ್ಯಮದ ಬಳಕೆಯಿಲ್ಲದೇ ಭಾವನೆಗಳ ನವರಸಗಳನ್ನು (ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ) ಧ್ವನಿಯಲ್ಲಿ ಮೂಡಿಸಬಹುದು. ಅಷ್ಟೇ ಅಲ್ಲ, ಯಾರು ತಮ್ಮ ಧ್ವನಿಯ ಕಂಪನವನ್ನು, ನಿಯಂತ್ರಣದಲ್ಲಿ, ಮೇಲೆ-ಕೆಳಗೆ ಸಮರ್ಪಕವಾಗಿ ಮಾಡಬಲ್ಲರೋ ಅವರು ಇನ್ನೋರ್ವ ವ್ಯಕ್ತಿಯ ಧ್ವನಿಯನ್ನೂ ಪ್ರತಿರೂಪಿಸಬಲ್ಲರು. ಸಿನಿಮಾ/ಟಿವಿ ಯಲ್ಲಿ ಇದನ್ನು “ವಾಯ್ಸ್ ಆರ್ಟಿಸ್ಟ್” ಗಳು ಸಮರ್ಪಕವಾಗಿ ಬಳಸುತ್ತಾರೆ. ಕೀರಲು-ಗಡಸು ಧ್ವನಿಯಿಂದ ಅವರು ಹೆಂಗಸು ಮತ್ತು ಗಂಡಸಿನ ಧ್ವನಿಯಲ್ಲಿ ಹಾಡಲೂ ಬಲ್ಲರು. ಈ ನಿಯಂತ್ರಣ ಅವರಿಗೆ ಸಾಕಷ್ಟು ಪರಿಶ್ರಮದಿಂದ ಬಂದಿರುತ್ತದೆ, ಹಾಗಾಗಿ ಈ ಕಲೆಯನ್ನು ಎಲ್ಲರೂ ಕಲಿಯಬಹುದು.

ಕೆಲವು ಭಾಷೆಗಳಲ್ಲಿ ಹೆಚ್ಚಿನ ನಾದಗಳ (ಟೋನ್) ಬಳಕೆ ಇರುತ್ತದೆ, ಉದಾ: ಚೈನೀಸ್ ಭಾಷೆಯಲ್ಲಿ ಸಾಧಾರಣವಾಗಿ ನಾಲ್ಕು ನಾದಗಳಿದ್ದರೆ, ಲಾಓಸ್, ಥಾಯ್ಲೆಂಡ್, ವಿಯಟ್ನಾಮ್, ಚೈನಾ ಪ್ರದೇಶದಲ್ಲಿ ಮಾತನಾಡುವ ಹಮೊಂಗ್ (ಚೈನೀಸ್) ಭಾಷೆಯಲ್ಲಿ ಉನ್ನತ, ಮಧ್ಯಮ, ಕೆಳಮಟ್ಟದ, ಏರುತ್ತಿರುವ, ಇಳಿಯುತ್ತಿರುವ  ನಾದಗಳ ಸಂಯೋಗದಿಂದ ಒಂದೇ ಪದಕ್ಕೆ ಎಂಟು ಅರ್ಥ ಕಲ್ಪಿಸಬಹುದು. ಆದ್ದರಿಂದ ಧ್ವನಿಯ  ಏರಿಳಿತಗಳನ್ನು ಸರಿಯಾಗಿ ತಿಳಿದಿರಬೇಕು. ಚೈನೀಸ್ ಭಾಷೆಗೆ ಹೋಲಿಸಿದರೆ ಇಂಗ್ಲಿಷ್ ಭಾಷೆಯನ್ನು ನಾದರಹಿತ ಭಾಷೆ ಎಂದೇ ಕರೆಯಬಹುದು. ಆದ್ದರಿಂದ ಇಂಗ್ಲಿಷ್ ಭಾಷಾ ಮೂಲದ ಜನರಿಗೆ ಚೈನೀಸ್ ಭಾಷೆ ಕಲಿಯುವುದು ಕಷ್ಟಕರ ಎನಿಸಬಹುದು. ಒಂದು ಭಾಷೆ ಕರತಲಾಮಲಕವಾಗಿರುವವರಿಗೆ ಇನ್ನೊಂದು ವಿಭಿನ್ನ ಭಾಷೆಯ ಪದಗಳನ್ನು ಉಚ್ಚಾರ ಮಾಡುವುದೂ ಕಷ್ಟವೆನಿಸಬಹುದು. ಉತ್ತರ ಭಾರತದವರು ದಕ್ಷಿಣದ ರಾಜ್ಯಗಳನ್ನು ಕರ್ನಾಟಕ್, ಕೇರಳ್, ಎನ್ನುವುದನ್ನು ನೀವು ಕೇಳಿರಬಹುದು.

ಓದುವುದೂ ಸಹ ಒಂದು ಕಲೆ. ಭಾವನಾತ್ಮಕವಾಗಿ ಬರೆದ ವಾಕ್ಯವನ್ನು ನಿರ್ಜೀವವಾಗಿಸಿ ಓದುವ ಸುದ್ದಿವಾಚಕರೂ ಇದ್ದಾರೆ, ಅದೇ ರೀತಿ ಏನೂ ಇಲ್ಲದ ಸುದ್ದಿಯನ್ನು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಬ್ರೇಕಿಂಗ್ ನ್ಯೂಸ್ ಎಂದು ಅರಚುವವರೂ ಇದ್ದಾರೆ. ಆದ್ದರಿಂದ ಗಟ್ಟಿಯಾಗಿ ಓದುವ ಮುಂಚೆ, ಬರೆದಿರುವ ವಾಕ್ಯವನ್ನಷ್ಟೇ ಅಲ್ಲ, ಸಂಪೂರ್ಣ ಪರಿಚ್ಛೇದವನ್ನು ಮನಸ್ಸಿನಲ್ಲಿ ಒಮ್ಮೆ ಓದಿಕೊಂಡು, ಅದರ ಭಾವಾರ್ಥ ಅರಗಿಸಿಕೊಂಡು, ಯಾವ ಪದಗಳಿಗೆ ಎಷ್ಟು ಒತ್ತು ನೀಡಿ, ಯಾವ ಭಾವನೆ ವ್ಯಕ್ತ ಪಡಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಓದಿದಷ್ಟು ಭಾಷಾಜ್ಞಾನ ಹೆಚ್ಚುತ್ತದೆ. ಬೇರೆ ಬೇರೆ ಲೇಖಕರು ಭಾಷೆಯನ್ನು ಹೇಗೆ ಶಕ್ತಿಶಾಲಿಯಾಗಿ ಬಳಸುತ್ತಾರೆ ಎಂಬುದನ್ನು ಕಲಿಯಬಹುದು.

ಬರೆಯುವುದೂ ಒಂದು ಕಲೆ ಎಂದು ಬೇರೆ ಹೇಳಬೇಕಿಲ್ಲ. ಬರೆಯಲು ಪ್ರಾರಂಭಿಸುವ ಮುನ್ನ ಬರೆಯಬೇಕೆಂದಿರುವ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಸಾಕಷ್ಟು ಸಂಶೋಧನೆ ಇಲ್ಲದ ಬರವಣಿಗೆಯಲ್ಲಿ ಶಕ್ತಿ ಇರುವುದಿಲ್ಲ. ಹತ್ತು ಪುಟಗಳಷ್ಟು ಓದಿದರೆ ಒಂದು ಪುಟದಷ್ಟು ಸಾರಾಂಶ ಮಾಡಿಕೊಳ್ಳಬಹುದು. ಹತ್ತು ಪುಟದ ಸಾರಾಂಶವನ್ನು ಬರೆಯಲು ಪ್ರಾರಂಬಿಸಿದರೆ ಒಂದು ಪುಟದ ಲೇಖನವಾಗುತ್ತದೆ. ಅಂದರೆ ಒಂದು ಪುಟ ಬರೆಯಲು ನೂರು ಪುಟ ಓದಬೇಕು. ಆದ್ದರಿಂದ ನಾವು ಬರೆಯುವುದಕ್ಕಿಂತ ಹೆಚ್ಚು ಏಕೆ ಓದುತ್ತೇವೆ ಅಥವಾ ಹೆಚ್ಚು ಮಾತನಾಡುತ್ತೇವೆ ಎಂಬುದು ಸ್ಪಷ್ಟವಾಗಿರಬಹುದಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...