Homeಕರ್ನಾಟಕ‘ಕನ್ನಡ ರಾಜ್ಯೋತ್ಸವ’ ಕುರಿತ ಪಾಠವನ್ನೇ ಕಿತ್ತುಬಿಸಾಡಿದ ಚಕ್ರತೀರ್ಥ ಸಮಿತಿ!

‘ಕನ್ನಡ ರಾಜ್ಯೋತ್ಸವ’ ಕುರಿತ ಪಾಠವನ್ನೇ ಕಿತ್ತುಬಿಸಾಡಿದ ಚಕ್ರತೀರ್ಥ ಸಮಿತಿ!

ಕನ್ನಡ ಭಾವುಟದ ಬದಲು ಕೇಸರಿ ಭಾವುಟ ಹಾರಾಡುತ್ತಿರುವ ಚಿತ್ರವನ್ನು ಬದಲಿ ಪಠ್ಯದಲ್ಲಿ ಕಾಣಬಹುದು. ಭಾಷೆ v/s ಧರ್ಮ ಸಂಘರ್ಷವನ್ನು ಹುಟ್ಟುಹಾಕಲು ಹೊರಟಿದೆಯೇ ಸರ್ಕಾರ?

- Advertisement -
- Advertisement -

ಕನ್ನಡ ರಾಜ್ಯೋತ್ಸವದ ಕುರಿತು ಆರನೇ ತರಗತಿಯಲ್ಲಿ ಅಳವಡಿಸಲಾಗಿದ್ದ ಪಾಠವನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟುರುವುದು ಬೆಳಕಿಗೆ ಬಂದಿದೆ. ತಾಯಿ ಭುವನೇಶ್ವರಿಯ ‘ಮೆರವಣಿಗೆ’ ಕುರಿತ ಈ ಪಾಠವನ್ನು ತೆಗೆದದ್ದು ಏತಕ್ಕೆ ಎಂಬ ಪ್ರಶ್ನೆ ಎದ್ದಿದೆ.

ಆರನೇ ತರಗತಿಯ ‘ಸಿರಿಗನ್ನಡ’ ಪ್ರಥಮಭಾಷಾ ಪಠ್ಯಪುಸ್ತಕದಲ್ಲಿ ಆರನೇ ಗದ್ಯವಾಗಿ ‘ಮೆರವಣಿಗೆ’ ಇತ್ತು. ಈ ಪಠ್ಯವನ್ನು ಸಮಿತಿಯೇ ರೂಪಿಸಿತ್ತು. ಕನ್ನಡ ರಾಜ್ಯೋತ್ಸವಕ್ಕಾಗಿ ಶಾಲೆಯೊಂದರಲ್ಲಿ ನಡೆದ ಸಿದ್ಧತೆ ಕುರಿತು ಮಾತನಾಡುವ ಈ ಪಾಠ, ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ತಿಳಿಸುತ್ತದೆ. ವಿವಿಧ ಧರ್ಮಗಳ ಹಿನ್ನೆಲೆಯ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಉದ್ದೀಪಿಸುವ ಕೆಲಸವನ್ನು ಈ ಗದ್ಯಭಾಗ ಮಾಡುತ್ತದೆ. ಇಲ್ಲಿನ ಪಾಠದ ಉದ್ದೇಶ ಮುಖ್ಯವಾಗಿ ತಾಯಿ ಭುವನೇಶ್ವರಿಯ ಆರಾಧನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಲ್ಲ ಸಿದ್ಧತೆಗಳು ನಡೆದು ನವೆಂಬರ್‌ 1ರಂದು ಹೇಗೆ ಸಂಭ್ರಮಾಚರಣೆ ಮಾಡಲಾಯಿತು, ಮೆರವಣಿಗೆಯನ್ನು ಹೇಗೆ ನಡೆಸಲಾಯಿತು ಎಂಬುದನ್ನು ಪಾಠದ ಕೊನೆಯ ಪ್ಯಾರಾಗಳಲ್ಲಿ ಕಾಣಬಹುದು.

ಯೋಜನೆಯಂತೆ ಎಲ್ಲವೂ ನಡೆಯಿತು. ನವೆಂಬರ್‌ -೧ ಬಂದೇ ಬಿಟ್ಟಿತು! ಶಿಕ್ಷಕರ ಸೂಚನೆಯಂತೆ ಎಲ್ಲ ತಂಡದವರೂ ಮೆರವಣಿಗೆಗೆ ಸಿದ್ಧರಾಗಿ ಬಂದರು. ಆದರೆ “ಭುವನೇಶ್ವರಿ ಎಲ್ಲಿ?” ಕರ್ನಾಟಕ ಮಾತೆ ಭುವನೇಶ್ವರಿ ಎಲ್ಲಿ”- ಎಲ್ಲರೂ ಪರಸ್ಪರ ಮಾತನಾಡಿಕೊಂಡರು. ನೋಡುನೋಡುತ್ತಿದಂತೆಯೇ ಮುಚ್ಚಿದ್ದ ಅಧ್ಯಾಪಕರ ಕೊಠಡಿಯ ಬಾಗಿಲು ತೆರೆಯಿತು. ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಮೆಚ್ಚಿನ ಹಸೀನಾ ಕರ್ನಾಟಕ ಮಾತೆ ಭುವನೇಶ್ವರಿಯಾಗಿ ಕೊಠಡಿಯಿಂದ ಹೊರಬಂದು ರಥವೇರಿ ನಿಂತಳು! ಮೆರವಣಿಗೆ ಹೊರಟಿತು. ಎಲ್ಲರೂ “ಕರ್ನಾಟಕ ಮಾತೆ ಭುವನೇಶ್ವರಿಗೆ ಜಯವಾಗಲಿ” ಎಂದರು. “ಎಂಥ ಅಪೂರ್ವ ದೃಶ್ಯ! ನೋಡಲು ಎರಡು ಕಣ್ಣುಗಳು ಸಾಲವು. ಯಾವ ದಸೆರೆಗೂ ಕಡಿಮೆ ಇಲ್ಲ” ಎಂದು ಜನರು ಮಾತನಾಡುತ್ತಿದ್ದರು. ಕೆಲವರಿಗೆ ಮಾತೇ ಹೊರಡಲಿಲ್ಲ. ಇನ್ನು ಕೆಲವರಿಗೆ ಅಬ್ಬಾಬ್ಬಾ! ಎಂದು ಬೆರಗಾದರು. ಹಂಪಣ್ಣನಿಗೆ ಎಲ್ಲರೂ ತನ್ನನ್ನು ನೋಡಬೇಕೆಂಬ ಆಸೆ. ವಿವಿಧ ಭಂಗಿಯಲ್ಲಿ ಬ್ಯಾಂಡ್ ಬಾರಿಸಿದ. ಬೀಗುತ್ತಾ ಹೆಜ್ಜೆ ಹಾಕಿದ.

ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಸಾಗಿದೆ. ತಾಯಿ ಭುವನೇಶ್ವರಿಯ ಭವ್ಯತೆಗೆ ಜನರೆಲ್ಲ ಕೈ ಮುಗಿಯುತ್ತಿದ್ದಾರೆ. ಮನಸಾರೆ ನಮಿಸುತ್ತಿದ್ದಾರೆ. ತಾಯಿ ನಗುತ್ತ ಎಲ್ಲರನ್ನೂ ಹರಸುತ್ತಿದ್ದಾಳೆ… ಮೆರವಣಿಗೆ ಸಾಗಿದೆ… ಸಾಗಿದೆ… ಸಾಗುತ್ತಲೇ ಇದೆ…

ಇದನ್ನೂ ಓದಿರಿ: ಬಾಬಾ ಸಾಹೇಬರಿಗೆ ಅಗೌರವ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌’ ಎಂಬ ಸಾಲನ್ನೇ ಕತ್ತರಿಸಿದ ಚಕ್ರತೀರ್ಥ ಸಮಿತಿ!

ಹೀಗೆ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬಿತ್ತುವ ಕೆಲಸವನ್ನು ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಡಿತ್ತು. ಆದರೆ ಈ ಪಾಠವನ್ನು ಕೈಬಿಟ್ಟು `ಕನ್ನಡ v/s ಧರ್ಮ’ ಎಂಬ ವಿವಾದವನ್ನು ಸೃಷ್ಟಿಸುವ ಕೆಲಸಕ್ಕೆ ರೋಹಿತ್‌ ಚಕ್ರತೀರ್ಥ ಸಮಿತಿ ಮಾಡಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.

‘ಮೆರವಣಿಗೆ’ ಬದಲಿಗೆ ‘ಸಿದ್ಧಾರೂಢರ ಜಾತ್ರೆ’

ಸಿರಿಗನ್ನಡ ಆರನೇ ತರಗತಿ ಪಠ್ಯದಲ್ಲಿದ್ದ ಕನ್ನಡ ರಾಜ್ಯೋತ್ಸವ ಕುರಿತ ಪಠ್ಯದ ಬದಲಿಗೆ ‘ಸಿದ್ಧಾರೂಢರ ಜಾತ್ರೆ’ ಪಾಠವನ್ನು ಇಟ್ಟಿರುವುದಾಗಿ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಹೇಳಿದೆ. ‘ಸಿದ್ಧಾರೂಢರ ಜಾತ್ರೆ’ ಪಾಠವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಮಠಮಾನ್ಯಗಳ ಪರಿಚಯವನ್ನು ಮಾಡಿಕೊಡುವುದನ್ನು ಇಲ್ಲಿ ಕಾಣಬಹುದು.

ಹುಬ್ಬಳ್ಳಿಯ ಸಿದ್ಧಾರೂಢಸ್ವಾಮಿ ಮಠದಿಂದ ನಡೆಯುವ ಪ್ರತಿವರ್ಷದ ಜಾತ್ರೆಯ ಕುರಿತು ಮಕ್ಕಳಿಗೆ ಪರಿಚಯ ಮಾಡಿಕೊಡಲಾಗಿದೆ. ರುಸ್ತುಮ್‌ ಎಂಬ ಹುಡುಗ, ಸಿದ್ಧಾರೂಢರ ಕುರಿತು ಕೇಳುತ್ತಾನೆ. ಗುರುಗಳು ಪರಿಚಯ ಮಾಡಿಕೊಡುತ್ತಾರೆ. ನಂತರ ಹಸೀನಾ ಎಂಬ ವಿದ್ಯಾರ್ಥಿನಿ ಮಠದ ಬಗ್ಗೆ ಕೇಳುತ್ತಾಳೆ. ಯಾವ ವಿದ್ಯಾರ್ಥಿ, ಯಾವುದರ ಕುರಿತು ಕೇಳುತ್ತಿದ್ದಾಳೆಂಬುದನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಹಸೀನಾಳಿಗೆ ಗುರುಗಳು ಕೊಡುವ ಉತ್ತರವನ್ನು ಸೂಕ್ಷ್ಮವಾಗಿ ನೋಡಿದರೆ, ಮಕ್ಕಳಲ್ಲಿ ಹಿಂದೂ ಮುಸ್ಲಿಂ ಬೇಧವನ್ನು ಶಿಕ್ಷಕರೇ ಬೋಧಿಸಲು ಅವಕಾಶ ಮಾಡಿಕೊಟ್ಟಂತೆ ಕಾಣುತ್ತಿದೆ.

ಗುರುಗಳು ಹೀಗೆ ಹೇಳುತ್ತಾರೆ: “ಹಸೀನಾ, ಮಠ ಎಂಬುದು ಹಿಂದೂ ಧರ್ಮದಲ್ಲಿರುವ ಒಂದು ಸಾಮಾಜಿಕ ವ್ಯವಸ್ಥೆ. ಸಮಾಜದ ಮಂದಿಗೆ ಕಷ್ಟಕಾಲದಲ್ಲಿ ಒಂದು ಭರವಸೆ ಬೇಕಾಗುತ್ತದೆ. ತಮ್ಮ ಗೊಂದಲಗಳಿಗೆ ಪರಿಹಾರ ಕೊಡುವ ಒಬ್ಬರು ಹಿರಿಯ ವ್ಯಕ್ತಿ ಬೇಕಾಗುತ್ತಾರೆ. ಅಥವಾ ಕಷ್ಟಕಾರ್ಪಣ್ಯಗಳು ಏನೂ ಇಲ್ಲದಿದ್ದರೂ ಒಟ್ಟಾರೆಯಾಗಿ ಮಾನಸಿಕ ನೆಮ್ಮದಿಗಾಗಿ ಮನುಷ್ಯ ಒಂದಿಲ್ಲೊಂದು ವ್ಯವಸ್ಥೆಯನ್ನು ಹುಡುಕುತ್ತಲೇ ಇರುತ್ತಾನೆ ಅಲ್ಲವೇ? ಜನರಿಗೆ ಅಂಥದೊಂದು ಭದ್ರತೆ, ಭರವಸೆ ಮೂಡಿಸುವ ಕೆಲಸ ಮಾಡುವುದೇ ಮಠಗಳು. ಸಮಾಜದಲ್ಲಿರುವ ಮಠಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜಮುಖಿ ಕೆಲಸವನ್ನು ಮಾಡುತ್ತವೆ. ಅವು ಬಡಬಗ್ಗರಿಗೆ ಧನಸಹಾಯ ಮಾಡಬಹುದು, ವಿದ್ಯಾರ್ಥಿಗಳಿಗೆ ಊಟ ವಸತಿ ನೀಡಬಹುದು. ದಿಕ್ಕು ತೋಚದವರಿಗೆ ಮಾನಸಿಕ ನೆಮ್ಮದಿ ನೀಡುವ ಉಪದೇಶ ಮಾಡಬಹುದು, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು, ಧರ್ಮದೊಳಗಿನ ಅನೇಕ ತತ್ತ್ವಶಾಸ್ತ್ರದ ವಿಚಾರಗಳನ್ನು ಪಂಡಿತರ ಪ್ರಚನಗಳ ಮೂಲಕ ಜನರಿಗೆ ತಲುಪಿಸಬಹುದು. ಒಟ್ಟಾರೆಯಾಗಿ ಮಠವೆಂದರೆ ಸಮಾಜವೆಂಬ ಸಮುದ್ರದ ಕಿನಾರೆಯಲ್ಲಿ ನಿಂತ ದೀಪಸ್ತಂಭ” ಉತ್ತರಿಸಿದರು ಗುರುಗಳು.

ಪಾಠದ ಕೊನೆಯಲ್ಲಿ ಹೀಗೆ ಹೇಳಲಾಗುತ್ತದೆ:

“ಸಿದ್ಧಾರೂಢರ ಮಹಿಮೆ ಎಂಥದು! ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿದ್ದ ಮಠವಿದು. ಗಾಂಧೀಜಿ, ತಿಲಕರಂಥ ರಾಷ್ಟ್ರನಾಯಕರಿಗೆ ಸ್ಪೂರ್ತಿ ಕೊಟ್ಟ ಮಠವಿದು” ಎನ್ನುತ್ತ ಗುರುಗಳು ಮಠದ ಪ್ರಸಾದವನ್ನು ಕಣ್ಣಿಗೊತ್ತಿಕೊಂಡರು. “ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ…”, “ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ…” ಮುಂತಾದ ಜಯಘೋಷಗಳು ಜನಸ್ತೋಮದಿಂದ ಕೇಳಿಬರುತ್ತಿದ್ದವು…

ಧರ್ಮರಾಜಕಾರಣಕ್ಕೆ ಪಠ್ಯವನ್ನು ಬಳಸಿರುವುದನ್ನು ಇಲ್ಲಿ ಕಾಣಬಹುದು. ಕನ್ನಡ ಮಾತೆಯ ಕುರಿತ ಪಾಠವನ್ನು ಯಾಕೆ ತೆಗೆದಿದ್ದೀರಿ ಎಂದು ಯಾರಾದರೂ ಕೇಳಿದರೆ, “ಸಿದ್ಧಾರೂಢ ಮಠದ ವಿರೋಧಿಗಳು ನೀವು, ಹಿಂದೂ ವಿರೋಧಿಗಳು ನೀವು” ಎಂದು ವಿವಾದವನ್ನೂ ಸೃಷ್ಟಿಸಲು ಇಲ್ಲಿ ಅವಕಾಶವಿದೆ.

ಕೇಸರಿ ಭಾವುಟ v/s ಕನ್ನಡ ಭಾವುಟ

ಕನ್ನಡ ಬಾವುಟವನ್ನು ಹೊತ್ತ ತಾಯಿ ಭುವನೇಶ್ವರಿ ಚಿತ್ರವನ್ನು ಹಳೆಯ ಪಠ್ಯದಲ್ಲಿ ಕಾಣಹುದಿತ್ತು. ಆದರೆ ಹೊಸ ಪಠ್ಯದಲ್ಲಿ ತೇರಿನ ಮುಂದೆ ಕೇಸರಿ ಭಾವುಟಗಳು ಹಾರಾಡುತ್ತಿರುವ ಚಿತ್ರವನ್ನು ಕಾಣಬಹುದು. ‘ಕನ್ನಡ ಭಾವುಟ v/s ಕೇಸರಿ ಬಾವುಟ’ ಎಂಬ ವಾದವನ್ನು ಸಮಿತಿ ಮಂಡಿಸುತ್ತಿದೆಯೇ? ರೋಹಿತ್ ಚಕ್ರತೀರ್ಥ ಅವರು ಹಿಂದೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಬಾವುಟದ ಕುರಿತು ಅಶ್ಲೀಲವಾಗಿ ಬರೆದದ್ದು ಇಲ್ಲಿಯೂ ಅನಾವರಣವಾಗಿದೆಯೇ?

‘ಮೆರವಣಿಗೆ’ ಪಾಠ ಉಳಿಸಿಕೊಳ್ಳಬಹುದಿತ್ತು!

ಪಠ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವ ಸಮಿತಿಯು, ‘ಮೆರವಣಿಗೆ’ ಪಾಠವನ್ನು ಉಳಿಸಿಕೊಂಡು, ಬೇರೆ ಯಾವುದಾದರೂ ಪಠ್ಯದಲ್ಲಿ ‘ಸಿದ್ಧಾರೂಢರ ಜಾತ್ರೆ’ಯ ಪಾಠವನ್ನು ಇಡಬಹುದಿತ್ತು ಎಂಬುದು ಎಂಥವರಿಗೂ ಅರ್ಥವಾಗುವ ಸರಳ ಸಂಗತಿ. ಆದರೆ ಕನ್ನಡ ತಾಯಿಯ ಪಾಠವನ್ನು ಕಿತ್ತು ಹಾಕಿ, ಜಾತ್ರೆಯ ಪಾಠವನ್ನು ಇಟ್ಟುದ್ದು ಏತಕ್ಕೆ? ಭಾಷೆ v/s ಧರ್ಮ ಎಂಬ ಬೆಂಕಿ ಹಚ್ಚಲು ಸಮಿತಿ ಬಯಸಿದೆಯೇ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಈಗ ದೊಡ್ಡ ರಾಷ್ಟ್ರಪ್ರೇಮಿಗಳಂತೆ ಬಿಂಬಿಸಿಕೊಳ್ಳುತ್ತಿರುವ ಸಂಘಟನೆಗಳ ಕೂಗಾಟ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಸಿದ್ಧಾರೂಢರ ಮಠದ ಕುರಿತು ವಿಶೇಷ ಪಾಠವನ್ನೇ ಬೇರೆಡೆ ಇಡಬಹುದಿತ್ತಲ್ಲ. ಗಾಂಧೀಜಿ ಹಾಗೂ ತಿಲಕರಿಗೆ ಸಿದ್ಧಾರೂಢ ಮಠ ಹೇಗೆ ಸ್ಫೂರ್ತಿಯಾಯಿತು ಎಂದೂ, ಉಳಿದ ನಕಲಿ ದೇಶಭಕ್ತ ಸಂಘಟನೆಗಳು ಕಲಿಯಬೇಕಾದದ್ದು ಏನೆಂಬುದನ್ನೂ ವಿಸ್ತೃತವಾಗಿ ಬೇರೊಂದು ಪಾಠವಾಗಿಯೇ ಮಕ್ಕಳಿಗೆ ಕಲಿಸಬಹುದಿತ್ತಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...