Homeಕರ್ನಾಟಕ‘ಕನ್ನಡ ರಾಜ್ಯೋತ್ಸವ’ ಕುರಿತ ಪಾಠವನ್ನೇ ಕಿತ್ತುಬಿಸಾಡಿದ ಚಕ್ರತೀರ್ಥ ಸಮಿತಿ!

‘ಕನ್ನಡ ರಾಜ್ಯೋತ್ಸವ’ ಕುರಿತ ಪಾಠವನ್ನೇ ಕಿತ್ತುಬಿಸಾಡಿದ ಚಕ್ರತೀರ್ಥ ಸಮಿತಿ!

ಕನ್ನಡ ಭಾವುಟದ ಬದಲು ಕೇಸರಿ ಭಾವುಟ ಹಾರಾಡುತ್ತಿರುವ ಚಿತ್ರವನ್ನು ಬದಲಿ ಪಠ್ಯದಲ್ಲಿ ಕಾಣಬಹುದು. ಭಾಷೆ v/s ಧರ್ಮ ಸಂಘರ್ಷವನ್ನು ಹುಟ್ಟುಹಾಕಲು ಹೊರಟಿದೆಯೇ ಸರ್ಕಾರ?

- Advertisement -
- Advertisement -

ಕನ್ನಡ ರಾಜ್ಯೋತ್ಸವದ ಕುರಿತು ಆರನೇ ತರಗತಿಯಲ್ಲಿ ಅಳವಡಿಸಲಾಗಿದ್ದ ಪಾಠವನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟುರುವುದು ಬೆಳಕಿಗೆ ಬಂದಿದೆ. ತಾಯಿ ಭುವನೇಶ್ವರಿಯ ‘ಮೆರವಣಿಗೆ’ ಕುರಿತ ಈ ಪಾಠವನ್ನು ತೆಗೆದದ್ದು ಏತಕ್ಕೆ ಎಂಬ ಪ್ರಶ್ನೆ ಎದ್ದಿದೆ.

ಆರನೇ ತರಗತಿಯ ‘ಸಿರಿಗನ್ನಡ’ ಪ್ರಥಮಭಾಷಾ ಪಠ್ಯಪುಸ್ತಕದಲ್ಲಿ ಆರನೇ ಗದ್ಯವಾಗಿ ‘ಮೆರವಣಿಗೆ’ ಇತ್ತು. ಈ ಪಠ್ಯವನ್ನು ಸಮಿತಿಯೇ ರೂಪಿಸಿತ್ತು. ಕನ್ನಡ ರಾಜ್ಯೋತ್ಸವಕ್ಕಾಗಿ ಶಾಲೆಯೊಂದರಲ್ಲಿ ನಡೆದ ಸಿದ್ಧತೆ ಕುರಿತು ಮಾತನಾಡುವ ಈ ಪಾಠ, ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ತಿಳಿಸುತ್ತದೆ. ವಿವಿಧ ಧರ್ಮಗಳ ಹಿನ್ನೆಲೆಯ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಉದ್ದೀಪಿಸುವ ಕೆಲಸವನ್ನು ಈ ಗದ್ಯಭಾಗ ಮಾಡುತ್ತದೆ. ಇಲ್ಲಿನ ಪಾಠದ ಉದ್ದೇಶ ಮುಖ್ಯವಾಗಿ ತಾಯಿ ಭುವನೇಶ್ವರಿಯ ಆರಾಧನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಲ್ಲ ಸಿದ್ಧತೆಗಳು ನಡೆದು ನವೆಂಬರ್‌ 1ರಂದು ಹೇಗೆ ಸಂಭ್ರಮಾಚರಣೆ ಮಾಡಲಾಯಿತು, ಮೆರವಣಿಗೆಯನ್ನು ಹೇಗೆ ನಡೆಸಲಾಯಿತು ಎಂಬುದನ್ನು ಪಾಠದ ಕೊನೆಯ ಪ್ಯಾರಾಗಳಲ್ಲಿ ಕಾಣಬಹುದು.

ಯೋಜನೆಯಂತೆ ಎಲ್ಲವೂ ನಡೆಯಿತು. ನವೆಂಬರ್‌ -೧ ಬಂದೇ ಬಿಟ್ಟಿತು! ಶಿಕ್ಷಕರ ಸೂಚನೆಯಂತೆ ಎಲ್ಲ ತಂಡದವರೂ ಮೆರವಣಿಗೆಗೆ ಸಿದ್ಧರಾಗಿ ಬಂದರು. ಆದರೆ “ಭುವನೇಶ್ವರಿ ಎಲ್ಲಿ?” ಕರ್ನಾಟಕ ಮಾತೆ ಭುವನೇಶ್ವರಿ ಎಲ್ಲಿ”- ಎಲ್ಲರೂ ಪರಸ್ಪರ ಮಾತನಾಡಿಕೊಂಡರು. ನೋಡುನೋಡುತ್ತಿದಂತೆಯೇ ಮುಚ್ಚಿದ್ದ ಅಧ್ಯಾಪಕರ ಕೊಠಡಿಯ ಬಾಗಿಲು ತೆರೆಯಿತು. ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಮೆಚ್ಚಿನ ಹಸೀನಾ ಕರ್ನಾಟಕ ಮಾತೆ ಭುವನೇಶ್ವರಿಯಾಗಿ ಕೊಠಡಿಯಿಂದ ಹೊರಬಂದು ರಥವೇರಿ ನಿಂತಳು! ಮೆರವಣಿಗೆ ಹೊರಟಿತು. ಎಲ್ಲರೂ “ಕರ್ನಾಟಕ ಮಾತೆ ಭುವನೇಶ್ವರಿಗೆ ಜಯವಾಗಲಿ” ಎಂದರು. “ಎಂಥ ಅಪೂರ್ವ ದೃಶ್ಯ! ನೋಡಲು ಎರಡು ಕಣ್ಣುಗಳು ಸಾಲವು. ಯಾವ ದಸೆರೆಗೂ ಕಡಿಮೆ ಇಲ್ಲ” ಎಂದು ಜನರು ಮಾತನಾಡುತ್ತಿದ್ದರು. ಕೆಲವರಿಗೆ ಮಾತೇ ಹೊರಡಲಿಲ್ಲ. ಇನ್ನು ಕೆಲವರಿಗೆ ಅಬ್ಬಾಬ್ಬಾ! ಎಂದು ಬೆರಗಾದರು. ಹಂಪಣ್ಣನಿಗೆ ಎಲ್ಲರೂ ತನ್ನನ್ನು ನೋಡಬೇಕೆಂಬ ಆಸೆ. ವಿವಿಧ ಭಂಗಿಯಲ್ಲಿ ಬ್ಯಾಂಡ್ ಬಾರಿಸಿದ. ಬೀಗುತ್ತಾ ಹೆಜ್ಜೆ ಹಾಕಿದ.

ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಸಾಗಿದೆ. ತಾಯಿ ಭುವನೇಶ್ವರಿಯ ಭವ್ಯತೆಗೆ ಜನರೆಲ್ಲ ಕೈ ಮುಗಿಯುತ್ತಿದ್ದಾರೆ. ಮನಸಾರೆ ನಮಿಸುತ್ತಿದ್ದಾರೆ. ತಾಯಿ ನಗುತ್ತ ಎಲ್ಲರನ್ನೂ ಹರಸುತ್ತಿದ್ದಾಳೆ… ಮೆರವಣಿಗೆ ಸಾಗಿದೆ… ಸಾಗಿದೆ… ಸಾಗುತ್ತಲೇ ಇದೆ…

ಇದನ್ನೂ ಓದಿರಿ: ಬಾಬಾ ಸಾಹೇಬರಿಗೆ ಅಗೌರವ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌’ ಎಂಬ ಸಾಲನ್ನೇ ಕತ್ತರಿಸಿದ ಚಕ್ರತೀರ್ಥ ಸಮಿತಿ!

ಹೀಗೆ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬಿತ್ತುವ ಕೆಲಸವನ್ನು ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಡಿತ್ತು. ಆದರೆ ಈ ಪಾಠವನ್ನು ಕೈಬಿಟ್ಟು `ಕನ್ನಡ v/s ಧರ್ಮ’ ಎಂಬ ವಿವಾದವನ್ನು ಸೃಷ್ಟಿಸುವ ಕೆಲಸಕ್ಕೆ ರೋಹಿತ್‌ ಚಕ್ರತೀರ್ಥ ಸಮಿತಿ ಮಾಡಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.

‘ಮೆರವಣಿಗೆ’ ಬದಲಿಗೆ ‘ಸಿದ್ಧಾರೂಢರ ಜಾತ್ರೆ’

ಸಿರಿಗನ್ನಡ ಆರನೇ ತರಗತಿ ಪಠ್ಯದಲ್ಲಿದ್ದ ಕನ್ನಡ ರಾಜ್ಯೋತ್ಸವ ಕುರಿತ ಪಠ್ಯದ ಬದಲಿಗೆ ‘ಸಿದ್ಧಾರೂಢರ ಜಾತ್ರೆ’ ಪಾಠವನ್ನು ಇಟ್ಟಿರುವುದಾಗಿ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಹೇಳಿದೆ. ‘ಸಿದ್ಧಾರೂಢರ ಜಾತ್ರೆ’ ಪಾಠವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಮಠಮಾನ್ಯಗಳ ಪರಿಚಯವನ್ನು ಮಾಡಿಕೊಡುವುದನ್ನು ಇಲ್ಲಿ ಕಾಣಬಹುದು.

ಹುಬ್ಬಳ್ಳಿಯ ಸಿದ್ಧಾರೂಢಸ್ವಾಮಿ ಮಠದಿಂದ ನಡೆಯುವ ಪ್ರತಿವರ್ಷದ ಜಾತ್ರೆಯ ಕುರಿತು ಮಕ್ಕಳಿಗೆ ಪರಿಚಯ ಮಾಡಿಕೊಡಲಾಗಿದೆ. ರುಸ್ತುಮ್‌ ಎಂಬ ಹುಡುಗ, ಸಿದ್ಧಾರೂಢರ ಕುರಿತು ಕೇಳುತ್ತಾನೆ. ಗುರುಗಳು ಪರಿಚಯ ಮಾಡಿಕೊಡುತ್ತಾರೆ. ನಂತರ ಹಸೀನಾ ಎಂಬ ವಿದ್ಯಾರ್ಥಿನಿ ಮಠದ ಬಗ್ಗೆ ಕೇಳುತ್ತಾಳೆ. ಯಾವ ವಿದ್ಯಾರ್ಥಿ, ಯಾವುದರ ಕುರಿತು ಕೇಳುತ್ತಿದ್ದಾಳೆಂಬುದನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಹಸೀನಾಳಿಗೆ ಗುರುಗಳು ಕೊಡುವ ಉತ್ತರವನ್ನು ಸೂಕ್ಷ್ಮವಾಗಿ ನೋಡಿದರೆ, ಮಕ್ಕಳಲ್ಲಿ ಹಿಂದೂ ಮುಸ್ಲಿಂ ಬೇಧವನ್ನು ಶಿಕ್ಷಕರೇ ಬೋಧಿಸಲು ಅವಕಾಶ ಮಾಡಿಕೊಟ್ಟಂತೆ ಕಾಣುತ್ತಿದೆ.

ಗುರುಗಳು ಹೀಗೆ ಹೇಳುತ್ತಾರೆ: “ಹಸೀನಾ, ಮಠ ಎಂಬುದು ಹಿಂದೂ ಧರ್ಮದಲ್ಲಿರುವ ಒಂದು ಸಾಮಾಜಿಕ ವ್ಯವಸ್ಥೆ. ಸಮಾಜದ ಮಂದಿಗೆ ಕಷ್ಟಕಾಲದಲ್ಲಿ ಒಂದು ಭರವಸೆ ಬೇಕಾಗುತ್ತದೆ. ತಮ್ಮ ಗೊಂದಲಗಳಿಗೆ ಪರಿಹಾರ ಕೊಡುವ ಒಬ್ಬರು ಹಿರಿಯ ವ್ಯಕ್ತಿ ಬೇಕಾಗುತ್ತಾರೆ. ಅಥವಾ ಕಷ್ಟಕಾರ್ಪಣ್ಯಗಳು ಏನೂ ಇಲ್ಲದಿದ್ದರೂ ಒಟ್ಟಾರೆಯಾಗಿ ಮಾನಸಿಕ ನೆಮ್ಮದಿಗಾಗಿ ಮನುಷ್ಯ ಒಂದಿಲ್ಲೊಂದು ವ್ಯವಸ್ಥೆಯನ್ನು ಹುಡುಕುತ್ತಲೇ ಇರುತ್ತಾನೆ ಅಲ್ಲವೇ? ಜನರಿಗೆ ಅಂಥದೊಂದು ಭದ್ರತೆ, ಭರವಸೆ ಮೂಡಿಸುವ ಕೆಲಸ ಮಾಡುವುದೇ ಮಠಗಳು. ಸಮಾಜದಲ್ಲಿರುವ ಮಠಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜಮುಖಿ ಕೆಲಸವನ್ನು ಮಾಡುತ್ತವೆ. ಅವು ಬಡಬಗ್ಗರಿಗೆ ಧನಸಹಾಯ ಮಾಡಬಹುದು, ವಿದ್ಯಾರ್ಥಿಗಳಿಗೆ ಊಟ ವಸತಿ ನೀಡಬಹುದು. ದಿಕ್ಕು ತೋಚದವರಿಗೆ ಮಾನಸಿಕ ನೆಮ್ಮದಿ ನೀಡುವ ಉಪದೇಶ ಮಾಡಬಹುದು, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು, ಧರ್ಮದೊಳಗಿನ ಅನೇಕ ತತ್ತ್ವಶಾಸ್ತ್ರದ ವಿಚಾರಗಳನ್ನು ಪಂಡಿತರ ಪ್ರಚನಗಳ ಮೂಲಕ ಜನರಿಗೆ ತಲುಪಿಸಬಹುದು. ಒಟ್ಟಾರೆಯಾಗಿ ಮಠವೆಂದರೆ ಸಮಾಜವೆಂಬ ಸಮುದ್ರದ ಕಿನಾರೆಯಲ್ಲಿ ನಿಂತ ದೀಪಸ್ತಂಭ” ಉತ್ತರಿಸಿದರು ಗುರುಗಳು.

ಪಾಠದ ಕೊನೆಯಲ್ಲಿ ಹೀಗೆ ಹೇಳಲಾಗುತ್ತದೆ:

“ಸಿದ್ಧಾರೂಢರ ಮಹಿಮೆ ಎಂಥದು! ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಕ್ರಿಯವಾಗಿದ್ದ ಮಠವಿದು. ಗಾಂಧೀಜಿ, ತಿಲಕರಂಥ ರಾಷ್ಟ್ರನಾಯಕರಿಗೆ ಸ್ಪೂರ್ತಿ ಕೊಟ್ಟ ಮಠವಿದು” ಎನ್ನುತ್ತ ಗುರುಗಳು ಮಠದ ಪ್ರಸಾದವನ್ನು ಕಣ್ಣಿಗೊತ್ತಿಕೊಂಡರು. “ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ…”, “ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ…” ಮುಂತಾದ ಜಯಘೋಷಗಳು ಜನಸ್ತೋಮದಿಂದ ಕೇಳಿಬರುತ್ತಿದ್ದವು…

ಧರ್ಮರಾಜಕಾರಣಕ್ಕೆ ಪಠ್ಯವನ್ನು ಬಳಸಿರುವುದನ್ನು ಇಲ್ಲಿ ಕಾಣಬಹುದು. ಕನ್ನಡ ಮಾತೆಯ ಕುರಿತ ಪಾಠವನ್ನು ಯಾಕೆ ತೆಗೆದಿದ್ದೀರಿ ಎಂದು ಯಾರಾದರೂ ಕೇಳಿದರೆ, “ಸಿದ್ಧಾರೂಢ ಮಠದ ವಿರೋಧಿಗಳು ನೀವು, ಹಿಂದೂ ವಿರೋಧಿಗಳು ನೀವು” ಎಂದು ವಿವಾದವನ್ನೂ ಸೃಷ್ಟಿಸಲು ಇಲ್ಲಿ ಅವಕಾಶವಿದೆ.

ಕೇಸರಿ ಭಾವುಟ v/s ಕನ್ನಡ ಭಾವುಟ

ಕನ್ನಡ ಬಾವುಟವನ್ನು ಹೊತ್ತ ತಾಯಿ ಭುವನೇಶ್ವರಿ ಚಿತ್ರವನ್ನು ಹಳೆಯ ಪಠ್ಯದಲ್ಲಿ ಕಾಣಹುದಿತ್ತು. ಆದರೆ ಹೊಸ ಪಠ್ಯದಲ್ಲಿ ತೇರಿನ ಮುಂದೆ ಕೇಸರಿ ಭಾವುಟಗಳು ಹಾರಾಡುತ್ತಿರುವ ಚಿತ್ರವನ್ನು ಕಾಣಬಹುದು. ‘ಕನ್ನಡ ಭಾವುಟ v/s ಕೇಸರಿ ಬಾವುಟ’ ಎಂಬ ವಾದವನ್ನು ಸಮಿತಿ ಮಂಡಿಸುತ್ತಿದೆಯೇ? ರೋಹಿತ್ ಚಕ್ರತೀರ್ಥ ಅವರು ಹಿಂದೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಬಾವುಟದ ಕುರಿತು ಅಶ್ಲೀಲವಾಗಿ ಬರೆದದ್ದು ಇಲ್ಲಿಯೂ ಅನಾವರಣವಾಗಿದೆಯೇ?

‘ಮೆರವಣಿಗೆ’ ಪಾಠ ಉಳಿಸಿಕೊಳ್ಳಬಹುದಿತ್ತು!

ಪಠ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವ ಸಮಿತಿಯು, ‘ಮೆರವಣಿಗೆ’ ಪಾಠವನ್ನು ಉಳಿಸಿಕೊಂಡು, ಬೇರೆ ಯಾವುದಾದರೂ ಪಠ್ಯದಲ್ಲಿ ‘ಸಿದ್ಧಾರೂಢರ ಜಾತ್ರೆ’ಯ ಪಾಠವನ್ನು ಇಡಬಹುದಿತ್ತು ಎಂಬುದು ಎಂಥವರಿಗೂ ಅರ್ಥವಾಗುವ ಸರಳ ಸಂಗತಿ. ಆದರೆ ಕನ್ನಡ ತಾಯಿಯ ಪಾಠವನ್ನು ಕಿತ್ತು ಹಾಕಿ, ಜಾತ್ರೆಯ ಪಾಠವನ್ನು ಇಟ್ಟುದ್ದು ಏತಕ್ಕೆ? ಭಾಷೆ v/s ಧರ್ಮ ಎಂಬ ಬೆಂಕಿ ಹಚ್ಚಲು ಸಮಿತಿ ಬಯಸಿದೆಯೇ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಈಗ ದೊಡ್ಡ ರಾಷ್ಟ್ರಪ್ರೇಮಿಗಳಂತೆ ಬಿಂಬಿಸಿಕೊಳ್ಳುತ್ತಿರುವ ಸಂಘಟನೆಗಳ ಕೂಗಾಟ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಸಿದ್ಧಾರೂಢರ ಮಠದ ಕುರಿತು ವಿಶೇಷ ಪಾಠವನ್ನೇ ಬೇರೆಡೆ ಇಡಬಹುದಿತ್ತಲ್ಲ. ಗಾಂಧೀಜಿ ಹಾಗೂ ತಿಲಕರಿಗೆ ಸಿದ್ಧಾರೂಢ ಮಠ ಹೇಗೆ ಸ್ಫೂರ್ತಿಯಾಯಿತು ಎಂದೂ, ಉಳಿದ ನಕಲಿ ದೇಶಭಕ್ತ ಸಂಘಟನೆಗಳು ಕಲಿಯಬೇಕಾದದ್ದು ಏನೆಂಬುದನ್ನೂ ವಿಸ್ತೃತವಾಗಿ ಬೇರೊಂದು ಪಾಠವಾಗಿಯೇ ಮಕ್ಕಳಿಗೆ ಕಲಿಸಬಹುದಿತ್ತಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...