Homeಮುಖಪುಟದರ್ಶನ್ ಬರ್ತಡೇ ಪಾರ್ಟಿ v/s ಫ್ಯಾನ್ಸ್ ಕಿರಿಕ್ ಪಾರ್ಟಿ

ದರ್ಶನ್ ಬರ್ತಡೇ ಪಾರ್ಟಿ v/s ಫ್ಯಾನ್ಸ್ ಕಿರಿಕ್ ಪಾರ್ಟಿ

ಆದರ್ಶವಾಗ ಬೇಕಿದ್ದ ಸಂಭ್ರಮ ಕಿರಿಕ್ ಪಾರ್ಟಿಯಾಗಿದ್ದಾದರೂ ಯಾಕೆ?

- Advertisement -
- Advertisement -

ಸಿನಿಮಾ ಸ್ಟಾರ್‌ಗಳ ಹುಟ್ಟಿದ ದಿನವನ್ನು ಅಭಿಮಾನಿಗಳು ಅದ್ದೂರಿ ಸಂಭ್ರಮದಿಂದ ಆಚರಿಸುವುದು ಕಳೆದೆರಡು ದಶಕದಿಂದ ಸಾಮಾನ್ಯವಾಗಿರುವ ಸಂಗತಿ. ಅದರಲ್ಲಿ ಹಲವು ಸ್ಟಾರ್‌ಗಳು ತಮ್ಮ ಬರ್ತಡೆಯನ್ನು ಅದ್ದೂರಿಯಾಗಿ ಮಾಡಿಕೊಂಡರೆ, ಕೆಲವರು ಯಾವುದೋ ಒಂದು ಸಂದರ್ಭವನ್ನು ಮುಂದಿಟ್ಟು ತಮ್ಮ ಬರ್ತಡೇಯನ್ನು ಆಚರಿಸಿಕೊಳ್ಳುವುದಿಲ್ಲವೆಂದು ಘೋಷಿಸುವ, ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುವಂತಹದ್ದನ್ನು ಮಾಡಿದ್ದಾರೆ. ಈ ಎಲ್ಲದರ ನಡುವೆ ವಿಶೇಷವಾಗಿದ್ದು ದರ್ಶನ್ ಹುಟ್ಟಿದ ದಿನದ ಆಚರಣೆ.

ದರ್ಶನ್ ತನ್ನ ಹುಟ್ಟಿದ ಹಬ್ಬದ ಒಂದು ತಿಂಗಳ ಮುಂಚೆಯೇ ಮನೆಮುಂದೆ “ಯಾರೂ ಹಾರತುರಾಯಿ ತರಬೇಡಿ, ಬದಲಾಗಿ ತಮ್ಮ ಕೈಲ್ಟಾದಷ್ಟು ದಿನಸಿ ಸಾಮಗ್ರಿಗಳನ್ನು ತಂದುಕೊಡಿ” ಎಂದು ಅಭಿಮಾನಿಗಳಿಗೆ ಮನವಿ ಮಾಡಿ ಬ್ಯಾನರ್ ಹಾಕಿದ್ದರು.

ಅದರಂತೆಯೇ ಅಭಿಮಾನಿಗಳು ಸಾಕಷ್ಟು ದಿನಸಿಗಳನ್ನು ತಂದು ದರ್ಶನ್ ಮನೆ ತುಂಬಿಸಿದ್ದರು. ಅಲ್ಲದೆ ಮೈಸೂರಿನ ಅಭಿಮಾನಿಗಳು ಹತ್ತಾರು ಮರಗಳಿಗೆ ಎರಡೆರಡು ಲೋಟಗಳನ್ನು ನೇತುಹಾಕಿ ಒಂದು ಲೋಟಕ್ಕೆ ನೀರನ್ನು, ಮತ್ತೊಂದು ಲೋಟಕ್ಕೆ ಆಹಾರವನ್ನು ಹಾಕಿ ದರ್ಶನ್ ಹುಟ್ಟಿದ ದಿನವನ್ನು ಸಂಭ್ರಮಿಸಿದ್ದರು. ಈ ಎಲ್ಲಾ ಕಾರಣಗಳಿಂದ ಸಿನಿ ಅಂಗಳದಲ್ಲಿ ಕೇಜಿಗಟ್ಟಲೆ ಕೇಕ್ ಕಟ್ ಮಾಡಿ ಕುಣಿದು ಕುಪ್ಪಳಿಸುವ ಸಿನಿಮಾ ಸ್ಟಾರ್‍ಗಳಿಗೆ ದರ್ಶನ್ ಹುಟ್ಟಿದ ಹಬ್ಬದ ಸಂಭ್ರಮ ಆದರ್ಶವಾಗಬೇಕು.

ಆದರೆ, ಈಗ ದರ್ಶನ್ ಬರ್ತಡೇ ಸಂಭ್ರಮ ಆದರ್ಶದ ಸುದ್ದಿಗಿಂತ ಕಿರಿಕ್ ಪಾರ್ಟಿಯ ಸದ್ದುಗದ್ದಲದಿಂದ ಸುದ್ದಿಯಾಗುತ್ತಿದೆ. ಅಂತದ್ದೇನಾಯಿತು ಎಂದರೆ, ದರ್ಶನ್ ಬರ್ತಡೇಗೆ ಸ್ಯಾಂಡಲ್‍ವುಡ್‍ನ ಎಲ್ಲಾ ಸ್ಟಾರ್‍ಗಳು ವಿಶ್ ಮಾಡಿದ್ದರು. ಅದರಲ್ಲಿ ಪುನೀತ್ ಕೂಡ ‘ಹ್ಯಾಪಿ ಬರ್ತಡೇ ದರ್ಶನ್’ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ‘ಥ್ಯಾಂಕ್ಸ್ ಸರ್, ಡಿ ಬಾಸ್ ರೇಂಜ್‍ಗೆ ನೀವು ಬೆಳೆಯಬೇಕು’ ಎಂದು ‘ಡಿ ಬಾಸ್ ಕ್ರೇಜ್ ಕಾ ಬಾಪ್’ ಎನ್ನುವ ಟ್ವಿಟರ್ ಅಕೌಂಟ್‍ನಿಂದ ದರ್ಶನ್ ಅಭಿಮಾನಿಯೊಬ್ಬ ಪ್ರತಿಕ್ರಿಯಿಸಿದ್ದಾನೆ.

ಈ ಪ್ರತಿಕ್ರಿಯೆ ಪುನೀತ್ ಅಭಿಮಾನಿಗಳನ್ನು ಸಿಟ್ಟಿಗೇರಿಸಿದೆ. ಪುನೀತ್ ಅಭಿಮಾನಿಗಳು ಪುನೀತ್ ರೇಂಜ್ ಎಲ್ಲರಿಗಿಂತ ಮೇಲಿದೆ, ಅವರು 08ನೇ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದವರು, ಪುನೀತ್ ರೇಂಜ್‍ಗೆ ಬೆಳಿಬೇಕಿರೋದು ದರ್ಶನ್ ಎಂದು ವಾದಕ್ಕಿಳಿದಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಹಸಿ-ಹುಸಿ ಕೋಪ-ತಾಪಗಳಿದ್ದರೂ ಒಂದು ಮಟ್ಟಕ್ಕೆ ಎಲ್ಲರೂ ಚೆನ್ನಾಗಿಯೇ ಇದ್ದಾರೆ. ಆದರೆ ಈ ಅಭಿಮಾನಿಗಳ ಹುಚ್ಚಾಟದಿಂದ ಬೂದಿಮುಚ್ಚಿದ ಕೆಂಡದಂತಿರುವ ಸ್ಟಾರ್‌ಗಳ ಶೀತಲ ಸಮರದ ಬೆಂಕಿಗೆ ತುಪ್ಪಸುರಿದಂತಾಗುತ್ತಿದೆ.

ಇದಲ್ಲದೆ, ದರ್ಶನ್ ಬರ್ತಡೇ ದಿನ ಅವರ ಮನೆಮುಂದೆ ಜಮಾಯಿಸಿದ್ದ ಅಭಿಮಾನಿಗಳು ಅಲ್ಲೂ ಇಲ್ಲಸಲ್ಲದ ಕಿತಾಪತಿ ಮಾಡಿ ದರ್ಶನ್ ಮನೆಯ ನೆರೆಹೊರೆಯವರು ದರ್ಶನ್‍ಗೆ ಹಿಡಿಶಾಪ ಹಾಕುವಂತೆ ಮಾಡಿದ್ದಾರೆ. ಬರ್ತಡೇ ಸೆಲೆಬ್ರೆಷನ್‍ಗೆ ಬಂದಿದ್ದ ಫ್ಯಾನ್‍ಗಳು ಪಕ್ಕ-ಪಕ್ಕದ ಮನೆಯ ಹಲವಾರು ವಸ್ತುಗಳನ್ನು ಹಾಳುಗೆಡವಿ ಹೋಗಿದ್ದಾರೆ. ಅದು ಯಾವ ರೇಂಜಿಗೆಂದರೆ ಪಕ್ಕದ ಮನೆಯ ಬಳಿ ನಿಂತಿದ್ದ ಕಾರಿನ ಮೇಲೆ ಹತ್ತಿ, ಕುಳಿದುಕುಪ್ಪಳಿಸಿ ಕಾರಿನ ಮೇಲೆಲ್ಲಾ ಗೀಚಿ ಕಾರು ಗುಜರಿ ಸೇರುವ ಹಂತಕ್ಕೆ ಹಾಳು ಮಾಡಿ ಹೋಗಿದ್ದಾರೆ.

ಇದರಿಂದಾಗಿ ನೆರೆಹೊರೆಯವರು ದರ್ಶನ್ ಬರ್ತಡೇ ಮ್ಯಾನೇಜ್‍ಮೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, ಅದೇ ದಿನ ಅಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಪೇದೆಯ ಮೇಲೆ ಅಭಿಮಾನಿ ಪುಂಡರು ಹಲ್ಲೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇಂತಹ ಅಭಿಮಾನಿಗಳ ಮಂಗಾಟದಿಂದಾಗಿ ಹಲವು ವಿಶೇಷತೆಯಿಂದ ಕೂಡಿದ್ದ ಬರ್ತಡೇ ಸಂಭ್ರಮ, ಕಿರಿಕ್ ಪಾರ್ಟಿಯಾಗಿ ಮಾರ್ಪಟ್ಟಿದೆ. ಕಳೆದ ಕೆಲವು ದಿನಗಳ ಹಿಂದೆ ಅಂಡ್ ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ ಎಂದಿದ್ದ ದರ್ಶನ್, ತಮ್ಮ ಅಭಿಮಾನಿಗಳಿಗೆ ಅಂಡ್ ಬಗ್ಗಿಸಿಕೊಂಡು ತಮ್ಮ ಕೆಲಸ ನೋಡ್ಕಂಡ್ ಸುಮ್ಮನಿರಿ ಎಂದು ಹೇಳದಿದ್ದರೆ ಇಂತಹ ರಾದ್ಧಾಂತಗಳು ನಿಲ್ಲುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...