Homeಮುಖಪುಟಸರಕಾರದ ಅಸಹಕಾರ; ಇತಿಹಾಸದ ಪುಟದತ್ತ ಮಲೆನಾಡಿನ ಸಹಕಾರ ಸಾರಿಗೆ!

ಸರಕಾರದ ಅಸಹಕಾರ; ಇತಿಹಾಸದ ಪುಟದತ್ತ ಮಲೆನಾಡಿನ ಸಹಕಾರ ಸಾರಿಗೆ!

- Advertisement -
- Advertisement -

ಬೆಟ್ಟಗುಡ್ಡಗಳ ಇಣುಕಿನಲ್ಲಿ, ಸರಿಯಾದ ರಸ್ತೆ ವ್ಯವಸ್ಥೆಯೂ ಇಲ್ಲದ ಕಲ್ಲುಕಣ್ಣಿನ ಮಲೆನಾಡಿನ ರಸ್ತೆಗಳಲ್ಲಿ ಕೆಎಸ್‍ಆರ್‌ಟಿಸಿ ಸೇವೆಯನ್ನು ಆರಂಭಿಸಲು ಸರ್ಕಾರವೇ ಮೀನಾಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರರೇ ಮಾಲೀಕರಾಗಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮಲೆನಾಡಿನ ಪ್ರತಿ ಮೂಲೆಮೂಲೆಗೂ, ಪ್ರತಿ ಹಳ್ಳಿಗೂ ಸಾರಿಗೆ ಸೇವೆಯನ್ನು ತಲುಪಿದ ಕೀರ್ತಿ ಮತ್ತು ಶ್ರೇಯ ಸಹಕಾರ ಸಾರಿಗೆಗೆ ಸಲ್ಲುತ್ತದೆ.

ರಾಜ್ಯದ ಅವಳಿ ಮಲೆನಾಡು ಜಿಲ್ಲೆ ಎಂದರೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು. ಈ ಎರಡೂ ಜಿಲ್ಲೆಯ ಸುಮಾರು 16 ತಾಲೂಕುಗಳೂ ಸೇರಿದಂತೆ ಇಲ್ಲಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕರಾವಳಿ ಭಾಗವಾದ ಮಂಗಳೂರಿಗೂ ಸಂಪರ್ಕ ಕಲ್ಪಿಸುವ ರಾಜ್ಯದ ಅತಿದೊಡ್ಡ ರಸ್ತೆ ಸಾರಿಗೆ ಸಂಪರ್ಕ ಜಾಲದಲ್ಲೊಂದಾದ ಸಹಕಾರ ಸಾರಿಗೆ ಇಂದು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲದೆ, ಸರ್ಕಾರದ ಅಸಹಕಾರಕ್ಕೆ ಬೇಸತ್ತು ಫೆಬ್ರವರಿ 17 ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಬೆಟ್ಟಗುಡ್ಡಗಳ ಇಣುಕಿನಲ್ಲಿ, ಸರಿಯಾದ ರಸ್ತೆ ವ್ಯವಸ್ಥೆಯೂ ಇಲ್ಲದ ಕಲ್ಲುಕಣ್ಣಿನ ಮಲೆನಾಡಿನ ರಸ್ತೆಗಳಲ್ಲಿ ಕೆಎಸ್‍ಆರ್‍ಟಿಸಿ ಸೇವೆಯನ್ನು ಆರಂಭಿಸಲು ಸರ್ಕಾರವೇ ಮೀನಾಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರರೇ ಮಾಲೀಕರಾಗಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿ ಮಲೆನಾಡಿನ ಪ್ರತಿ ಮೂಲೆಮೂಲೆಗೂ, ಪ್ರತಿ ಹಳ್ಳಿಗೂ ಸಾರಿಗೆ ಸೇವೆಯನ್ನು ತಲುಪಿದ ಕೀರ್ತಿ ಮತ್ತು ಶ್ರೇಯ ಸಹಕಾರ ಸಾರಿಗೆಗೆ ಸಲ್ಲುತ್ತದೆ.

ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಸೇವೆ ಎಂದೇ ಪರಿಗಣಿಸುತ್ತದೆ. ಆದರೆ ಸರ್ಕಾರ ಇದನ್ನು ನಿಜಕ್ಕೂ ಪಾಲಿಸುತ್ತದೆಯೋ ಇಲ್ಲವೋ? ಆದರೆ, ಇದನ್ನು ರಾಜ್ಯದ ಮಟ್ಟಿಗೆ ನಿಜವಾಗಿಯೂ ಪಾಲಿಸಿದ್ದು ಸಹಕಾರ ಸಾರಿಗೆ. ಇಂದು ದೇಶ-ವಿದೇಶದಲ್ಲಿ ಉನ್ನತ ಮಟ್ಟದ ನಾನಾ ಕೆಲಸದಲ್ಲಿರುವ ವಿದ್ಯಾರ್ಥಿಗಳು ಇದೇ ಸಹಕಾರ ಸಾರಿಗೆ ರಿಯಾಯಿತಿ ಬಸ್ ಪಾಸ್‍ನಲ್ಲಿ ಓಡಾಡಿದವರು. ಇನ್ನೂ ಹಿರಿಯ ನಾಗರಿಕರು, ಸ್ವಾತಂತ್ರ್ಯ ಹೋರಾಟಗಾರರು ವಿಕಲಚೇತನರಿಗೆ ಶೇ.50 ರಷ್ಟು ರಿಯಾಯಿತಿ ನೀಡಿದ ಮೊದಲ ಖಾಸಗಿ ಸಾರಿಗೆ ಸಂಸ್ಥೆ ಎಂಬ ಖ್ಯಾತಿಯೂ ಸಹಕಾರಿ ಸಾರಿಗೆಗೆ ಇದೆ.

ಹೀಗೆ ಮಲೆನಾಡು ಭಾಗದ ಇಂಚಿಂಚೂ ಓಡಾಡಿ ಅಕ್ಷರಶಃ ಜನರ ಜೀವನಾಡಿಯೇ ಆಗಿಹೋದ ಸಹಕಾರ ಸಾರಿಗೆ ಇಂದು ತನ್ನ ಸೇವೆಯನ್ನೇ ಸ್ಥಗಿತಗೊಳಿಸಿದೆ. ಸಹಕಾರ ವಿಭಾಗದಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದ ಸಾರಿಗೆ ವ್ಯವಸ್ಥೆ ಇಂದು ಅಕ್ಷರಶಃ ಇತಿಹಾಸ ಪುಟಕ್ಕೆ ಸೇರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಈ ಹಿನ್ನೆಲೆ ಸಹಕಾರ ಸಾರಿಗೆ ವ್ಯವಸ್ಥೆಯ ಇತಿಹಾಸ ಹಿನ್ನೆಲೆ ಏನು? ಮಲೆನಾಡು ಭಾಗದಲ್ಲಿ ಈ ಸಂಸ್ಥೆ ಸೃಷ್ಟಿಸಿರುವ ಇತಿಹಾಸ ಎಂಥಾದ್ದು? ಈಗನ ನಷ್ಟಕ್ಕೆ ಕಾರಣವೇನು? ಈ ಸಂಸ್ಥೆಯ ಸಂಕಷ್ಟಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಹಕಾರ ಸಾರಿಗೆ ಹಿನ್ನೆಲೆ ಮತ್ತು ಇತಿಹಾಸ
ಮಲೆನಾಡಿನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಶಂಕರ್ ಟ್ರಾನ್ಸ್ಪೋರ್ಟ್ ಕಂಪೆನಿ 1991ರಲ್ಲಿ ನಷ್ಟದ ಕಾರಣ ಮುಚ್ಚಲಾಯಿತು. ಈ ವೇಳೆ ಕಂಪೆನಿಯಲ್ಲಿ ಕೆಲಸ ನಿರ್ವಹಿಸಿದ್ದ ಸುಮಾರು 300 ಕಾರ್ಮಿಕರ ಬದುಕು ಬೀದಿಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ದಿವಂಗತ ಬಿ.ಕೆ. ಸುಂದರೇಶ್ ಮತ್ತು ಹೋರಾಟಗಾರ ಸಿರಿಮನೆ ನಾಗರಾಜ್ ಇದೇ ಕಾರ್ಮಿಕರನ್ನು ಒಟ್ಟುಗೂಡಿಸಿ ಎಲ್ಲರೂ ತಮ್ಮ ಕೈಲಾದ ಹಣವನ್ನು ಕ್ರೋಢೀಕರಿಸಿ ಕೇವಲ 12 ಲಕ್ಷ ರೂ. ಬಂಡವಾಳದಲ್ಲಿ ಹುಟ್ಟು ಹಾಕಿದ ಸಂಸ್ಥೆಯೇ ಸಹಕಾರ ಸಾರಿಗೆ ಸಂಸ್ಥೆ. ಭಾಗಶಃ ಇಡೀ ದೇಶದಲ್ಲೇ ಕಾರ್ಮಿಕರೇ ಮಾಲೀಕರಾಗಿ ಆರಂಭಿಸಿದ ಮೊದಲ ಸಂಸ್ಥೆ ಇದು.

ಸಂಸ್ಥೆಯಲ್ಲಿ ಪ್ರತಿಯೊಬ್ಬ ಕಾರ್ಮಿಕನೂ ತಾನೇ ಮಾಲೀಕ ಎಂಬಂತೆ ಹಗಲಿರುಳು ಶ್ರಮಿಸಿದ ಫಲವಾಗಿ 6 ಬಸ್‍ಗಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 76 ಬಸ್‍ಗಳಿವೆ. ಕೊಪ್ಪದಲ್ಲಿ ಕೇಂದ್ರ ಕಚೇರಿ ಇದ್ದರೆ, ಕೊಪ್ಪ ಮತ್ತು ಶೃಂಗೇರಿ ಎರಡು ಕಡೆಗಳಲ್ಲಿ ಸ್ವಂತ ಗ್ಯಾರೇಜ್ ಅನ್ನು ಈ ಸಂಸ್ಥೆ ಹೊಂದಿದೆ.

ಮಲೆನಾಡಿನ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ನೌಕರ ವರ್ಗ ಹಾಗೂ ಪ್ರವಾಸಿಗರು ಸೇರಿದಂತೆ ಅನೇಕರು ಕಳೆದ 3 ದಶಕಗಳಿಂದ ಈ ಸಾರಿಗೆಯನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ಸಂಚಾರ, ಸಮಯ ಪಾಲನೆ ಹಾಗೂ ಶಿಸ್ತಿಗೆ ಈ ಸಂಸ್ಥೆ ಹೆಸರುವಾಸಿ. ಆದರೆ, 2017ರಲ್ಲಿ ಬೆಳ್ಳಿಹಬ್ಬ ಆಚರಿಸಿದ ಈ ಸಂಸ್ಥೆ ಕೇವಲ ಮೂರು ವರ್ಷದಲ್ಲಿ ಇದೀಗ ನಷ್ಟದ ಸುಳಿಯಲ್ಲಿ ಸಿಲುಕಿ ಏದುಸಿರು ಬಿಡುತ್ತಿದೆ.

ಸಂಸ್ಥೆಯ ನಷ್ಟಕ್ಕೆ ಕಾರಣವೇನು?
ಕಳೆದ ಮೂರು ನಾಲ್ಕು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದಿನನಿತ್ಯ ಏರಿಸಲಾಗುತ್ತಿದೆ. ಆದರೆ, 2013ರಿಂದ ಸಹಕಾರಿ ಸಾರಿಗೆ ಬಸ್ ಪ್ರಯಾಣ ದರವನ್ನು ಏರಿಸಲಾಗಿಲ್ಲ. ಇದರಿಂದ ಸಂಸ್ಥೆಯ ಆದಾಯ ಕುಂಠಿತವಾಗಿದೆ. ಅಲ್ಲದೆ, ಡೀಸೆಲ್ ಬೆಲೆ ಏರಿಕೆಯಿಂದಲೇ ಪ್ರತಿ ತಿಂಗಳು ಕನಿಷ್ಟ 24 ಲಕ್ಷ ಹಣ ಸಂಸ್ಥೆಗೆ ನಷ್ಟವಾಗುತ್ತಿದೆ ಎನ್ನಲಾಗುತ್ತಿದೆ.

ಇದರ ಜೊತೆಗೆ ವರ್ಷಕ್ಕೆ 1.5 ಕೋಟಿ ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡಲಾಗುತ್ತಿದೆ. ಇನ್ನೂ ಬಸ್ ಪ್ರಯಾಣ ದರದಲ್ಲಿ ವಿದ್ಯಾರ್ಥಿಗಳು , ವಿಕಲಚೇತನರು, ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದವರಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ. ಪರಿಣಾಮ ಸಂಸ್ಥೆಗೆ ಆರ್ಥಿಕ ಹೊರೆ ಅಧಿಕವಾಗಿದ್ದು, ಪ್ರತಿ ತಿಂಗಳ ಖರ್ಚನ್ನು ನಿಭಾಯಿಸುವುದೇ ದುಸ್ತರವಾಗಿದೆ ಎನ್ನುತ್ತಾರೆ ಸಂಸ್ಥೆಯ ಪದಾಧಿಕಾರಿಗಳು.

ಸರ್ಕಾರದ ಎದುರು ಸಂಸ್ಥೆ ಇಟ್ಟಿರುವ ಬೇಡಿಕೆ ಏನು?
ಸಹಕಾರ ಸಾರಿಗೆ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡುತ್ತಿದೆ. ಈ ಪೈಕಿ ಸರ್ಕಾರ ಪ್ರತಿವರ್ಷ ರಿಯಾಯಿತಿ ಪಾಸ್ ಬಾಬ್ತು 6.6 ಕೋಟಿ ಹಣವನ್ನು ಸಂಸ್ಥೆಗೆ ಪಾವತಿ ಮಾಡಬೇಕು. ಆದರೆ, ಈವರೆಗೆ ಈ ಹಣ ಬಿಡುಗಡೆಯಾಗಿಲ್ಲ.

ಇದಲ್ಲದೆ, ಸಂಸ್ಥೆಯ ಬಸ್‍ಗಳ ಡೀಸೆಲ್ ಖರೀದಿಯಲ್ಲಿ ತೆರಿಗೆ ವಿನಾಯಿತಿ ನೀಡಬೇಕು, ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಸಹಕಾರ ತತ್ವದ ಅಡಿಯಲ್ಲಿ ನಡೆಯುತ್ತಿರುವ ಸಹಕಾರ ಸಾರಿಗೆಗೂ ನೀಡಬೇಕು ಎಂಬುದು ಸಂಸ್ಥೆಯ ಬೇಡಿಕೆ. ಆದರೆ, ಈವರೆಗೆ ಈ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮುಂದಾಗಿಲ್ಲ ಎಂಬುದೇ ದುರದೃಷ್ಟಕರ ಸಂಗತಿ.

ಮಲೆನಾಡಿನ ಈ ಸಹಕಾರ ಸಾರಿಗೆಯ ಸೇವಾ ಮನೋಭಾವವನ್ನು ಜಪಾನ್ ಸರ್ಕಾರ ಮೆಚ್ಚಿಕೊಂಡಿತ್ತು. ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಡಾಕ್ಟರೇಟ್ ಪದವಿ ಪಡೆದರು, ಮಣಿಪಾಲ್ ಸ್ನಾತಕೋತ್ತರ ಪದವಿಗೆ ಸಹಕಾರ ಸಾರಿಗೆ ಪಠ್ಯವಾಗಿಯೇ ಬದಲಾಗಿತ್ತು. ಇನ್ನೂ ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಯ ಇದರ ಮೇಲಿನ ಸಂಶೋಧನೆಗೆ ಪಿಹೆಚ್ಡಿ ಪದವಿಯನ್ನು ಪ್ರದಾನ ಮಾಡಿತ್ತು.

ಆದರೆ, ಇಷ್ಟೆಲ್ಲಾ ಶ್ರೇಯಕ್ಕೆ ಪಾತ್ರವಾದ ಸಹಕಾರ ಸಾರಿಗೆ ಇಂದು ಅಳಿವಿನ ಅಂಚಿನಲ್ಲಿದೆ, ಇತಿಹಾಸದ ಕಾಲಗರ್ಭ ಸೇರಲು ಅವಸರಿಸುತ್ತಿದೆ ಎಂಬ ವಿಚಾರವನ್ನು ಜೀರ್ಣಿಸಿಕೊಳ್ಳುವುದು ನಿಜಕ್ಕೂ ಕಷ್ಟದಾಯಕವಾದ ವಿಚಾರ. ಅಲ್ಲದೆ, ಮಲೆನಾಡಿಗರ ಅತೀ ಅವಶ್ಯಕವಾದ ವಿಚಾರಗಳಲ್ಲಿ ಸಹಕಾರ ಸಾರಿಗೆ ಪ್ರಮುಖವಾದದ್ದು. ಹೀಗಾಗಿ ಸರ್ಕಾರ ಈ ಸಂಸ್ಥೆಯ ಪುನಶ್ಚೇತನಕ್ಕೆ ಸಹಕಾರ ನೀಡಲೇಬೇಕಿದೆ.

ನಷ್ಟಕ್ಕೆ ಸರ್ಕಾರವೇ ಕಾರಣ ಹೊರತು ಸಹಕಾರಿ ಸಾರಿಗೆಯಲ್ಲ- ಸಿರಿಮನೆ ನಾಗರಾಜ್

ಸಹಕಾರಿ ಸಂಸ್ಥೆಯ ಸದಸ್ಯರು ಸದ್ಯಕ್ಕೆ ಧರಣಿ ಕೂತಿದ್ದಾರೆ. ಕೆ.ಎಸ್.ಆರ್.ಟಿ.ಸಿಗೆ ನೀಡುವ ಸವಲತ್ತುಗಳನ್ನು ನಮಗೂ ನೀಡಿ ಎಂಬುದು ಅವರ ಬೇಡಿಕೆ. ಏಕೆಂದರೆ ಸಹಕಾರಿ ಸಾರಿಗೆಯವರು ಲಾಭ ನಷ್ಟದ ಯೋಚನೆಯಿಲ್ಲದೇ ಸಾಮಾಜಿಕ ಜವಾಬ್ದಾರಿ ಎಂದು ತಿಳಿದು ಮಲೆನಾಡಿನ ದೂರ ದೂರದ ಹಳ್ಳಿಗಳಿಗೂ ಬಸ್ ಸೌಲಭ್ಯ ನೀಡಿದ್ದಾರೆ. ಅಲ್ಲದೇ ಶಾಲಾಮಕ್ಕಳು, ಮಹಿಳೆಯರು ಮತ್ತು ವೃದ್ಧರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ.

ಸದ್ಯ ಸರ್ಕಾರದ ನಿಷ್ಕ್ರಿಯತೆ ಮತ್ತು ನಿಷ್ಕಾಳಜಿಯಿಂದು ಒಂದು ವೇಳೆ ಈ ಸಹಕಾರಿ ಸಾರಿಗೆ ಮುಚ್ಚಿಹೋದರೆ ಅರ್ಧ ಮಲೆನಾಡು ಸಮರ್ಪಕ ಸಂಪರ್ಕವಿಲ್ಲದೇ ಸ್ತಬ್ದವಾಗುವುದರಲ್ಲಿ ಅನುಮಾನವಿಲ್ಲ. ಸಹಕಾರಿ ಸಂಸ್ಥೆಯ ನಷ್ಟಕ್ಕೆ ಮಿಸ್ ಮ್ಯಾನೇಜ್‍ಮೆಂಟ್, ಹಣದ ದುರ್ಬಳಕೆ ಕಾರಣವಲ್ಲ. ಡೀಸೆಲ್ ಸಬ್ಸಿಡಿ, ರಸ್ತೆ ತೆರಿಗೆ ವಿನಾಯಿತಿಯಂತಹ ಹಲವು ಸರ್ಕಾರದ ಸವಲತ್ತುಗಳು ಸಿಗದಿರುವುದು, ಡಿಸೇಲ್ ಬೆಲೆ ದಿನೇ ದಿನೇ ಏರುತ್ತಿರುವುದು ಕಾರಣವಾಗಿದೆ. ಅವರ ಬೇಡಿಕೆಗಳು ನ್ಯಾಯಯುತವಾಗಿದೆ. ಹಾಗಾಗಿ ಕೂಡಲೇ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಐತಿಹಾಸಿಕ ಸಹಕಾರಿ ಸಾರಿಗೆಯನ್ನು ಉಳಿಸಬೇಕು. ಅವರ ಹೋರಾಟಕ್ಕೆ ನಾನು ಸಂಪೂರ್ಣವಾಗಿ ಬೆಂಬಲ ಕೊಡುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...