Homeಕರ್ನಾಟಕಕೋವಿಡ್ ತಂದಿಟ್ಟ ಮನೆಯೊಳಗಿನ ಹಿಂಸೆಯ ಸವಾಲುಗಳು

ಕೋವಿಡ್ ತಂದಿಟ್ಟ ಮನೆಯೊಳಗಿನ ಹಿಂಸೆಯ ಸವಾಲುಗಳು

- Advertisement -
- Advertisement -

ಕರೋನ ವೈರಸ್ಸಿನಿಂದ ಬಚಾವಾಗಲು ಮನೆಯ ಒಳಗೇ ಇರಿ. ನಿಮ್ಮ ಮನೆಯ ಒಳಗೆ ನೀವಿರುವ ತನಕ ನಿಮ್ಮನ್ನು ವೈರಸ್ ಎಂಬ ಸೂಕ್ಷ್ಮಜೀವಿಯೂ ಮುಟ್ಟಲಾರದು. ಹೊರಗೆ ಬಂದಿರೋ, ನಿಮ್ಮ ಜೀವಕ್ಕೆ ಹಾನಿ ಖಂಡಿತಾ ಎಂದು ಸರ್ಕಾರ ಪದೇ ಪದೇ ಹೇಳುತ್ತಲೇ ಇದೆ. ಇದನ್ನು ಜಗತ್ತಿನಾದ್ಯಂತ ಪಾಲಿಸಲು ದೇಶಗಳು ಪ್ರಯತ್ನ ಪಡುತ್ತಿವೆ. ಸಾವಿರ ಸಾವಿರದ ಸಂಖ್ಯೆಯಲ್ಲಿ ಜೀವಗಳು ವೆಂಟಿಲೇಟರಿನ ತುದಿಯಲ್ಲಿ ಉಸಿರು ಕಳೆದುಕೊಳ್ಳುತ್ತಿರುವಾಗ ದೇಶ, ಖಂಡಗಳಿಗೆಲ್ಲ ನಡುಕ ಹುಟ್ಟಿಸಿರುವ ಈ ಕಣ್ಣಿಗೆ ಕಾಣದ ರೋಗಾಣುವಿನ ಶಕ್ತಿಯಾದರೂ ಎಂಥದ್ದು ಎಂದು ಸೋಜಿಗ ಆಗದೇ ಇರದು.

ಮನೆಯಲ್ಲೇ ಇರಬೇಕು ಎನ್ನುವುದು ಸರ್ಕಾರದ ಆಜ್ಞೆ. ಅದಕ್ಕೆ ಅನುವು ಮಾಡಲೆಂದು ಲಾಕ್‍ಡೌನ್ ಕೂಡ ಆಗಿದೆ. ಯಾರೂ ಕಾರಣ ಇಲ್ಲದೆ, ಸೂಕ್ತ ಪಾಸ್ ಅಥವಾ ಅನುಮತಿ ಇಲ್ಲದೆ ಓಡಾಡುವಂತಿಲ್ಲ. ಇದೆಲ್ಲಾ ಕಣ್ಣಿಗೆ ಕಾಣದ ರೋಗಾಣುವಿನ ಮುಷ್ಠಿಯಿಂದ ದೂರ ಇರುವ ಯತ್ನ. ಇದು ಒಂದು ಹಂತದ ಹೋರಾಟ. ಇನ್ನೊಂದು ಹಂತದ ಹೋರಾಟ ಎಂದರೆ ದಿನಬೆಳಗಾದರೆ ಮನೆಯಿಂದ ಹೊರಗೆ ಬಿದ್ದು ತಂತಮ್ಮ ಕೆಲಸಕ್ಕೆ ಹೋಗಿ ಬಂದು ಮಾಡಿಕೊಂಡು ದುಡಿದು ಉಣ್ಣುತ್ತಿದ್ದ ಜನ ಒಮ್ಮಿಂದೊಮ್ಮೆಲೆ ತಮ್ಮ ಸಾಮಾಜಿಕ ಚೌಕಟ್ಟಿನಿಂದ ಹೊರಗೆ ನಿಂತು ನೀರಿನಿಂದ ಹೊರಕ್ಕೆ ಹಾಕಿದ ಮೀನಿನಂತೆ ಚಡಪಡಿಸುತ್ತಿದ್ದಾರೆ. ಇದರಲ್ಲಿ ಹೆಣ್ಣು, ಗಂಡು, ಮಗು ಎಂಬ ಭೇದವಿಲ್ಲ.

ಆಧುನಿಕ ಸಮಾಜದಲ್ಲಿ ಬದುಕುತ್ತಿರುವ ಮನುಷ್ಯನ ಮೊದಲ ಓಟ ಮನೆಯಿಂದ ಹೊರಗೆ ಹೋಗುವಲ್ಲಿ ಶುರುವಾಗಿ, ಸಮಾಜದ ವಿವಿಧ ಆಯಾಮಗಳನ್ನು ಅನುಭವಿಸಿ ಮನೆಗೆ ವಾಪಾಸ್ ಮರಳುವಲ್ಲಿ ಕೊನೆಯ ಓಟದೊಂದಿಗೆ ಪರ್ಯವಸಾನಗೊಳ್ಳುತ್ತದೆ.

ಮನೆ ಎಂಬುದೊಂದು ತಾಣ. ಸುರಕ್ಷತೆಯ ಭರವಸೆಯನ್ನು ನಿಸ್ಸಂದೇಹವಾಗಿ, ನಿರುದ್ವಿಗ್ನವಾಗಿ, ಯಾವುದೇ ಷರತ್ತುಗಳಿಗೆ ಒಳಪಡಿಸದೆ ಸಮಾಧಾನವನ್ನು ಕೊಡುವ ಮೊಟ್ಟಮೊದಲ ಮತ್ತು ಕಟ್ಟಕಡೆಯ ಜಾಗ ಎನ್ನುವುದು ಸರ್ವವಿದಿತ.

ಆದರೆ ಈ ಮನೆಯೇ ಒಂದು ಹಿಂಸೆಯ ಕಾರ್ಯಸ್ಥಾನವಾಗಿ ಮಾರ್ಪಟ್ಟರೆ?

ಬೇಲಿಯೇ ಎದ್ದು ಹೊಲ ಮೆಯ್ದರೆ? ಪದ ಕುಸಿಯೆ ನೆಲವಿಹುದು, ಮತ್ತೆ ನೆಲವೇ ಕುಸಿದು ಹೋದರೆ?

ಈ ಅಂಕಿಅಂಶಗಳನ್ನು ಗಮನಿಸಿ.

* ಲಾಕ್ಡೌನ್ ಆದ ಕೆಲವೇ ದಿನಗಳಲ್ಲಿ ಮಕ್ಕಳ ಸಹಾಯವಾಣಿಗೆ ಬಂದ ದೂರುಗಳ ಸಂಖ್ಯೆ 92,000!

* ಮಕ್ಕಳನ್ನು ಬಳಸಿ ಸೃಷ್ಟಿಸಲಾಗುವ ಲೈಂಗಿಕ ಚಿತ್ರಗಳಿಗೆ 95% ಹೆಚ್ಚು ಬೇಡಿಕೆ. (ಈ ಸಂಬಂಧ ಭಾರತ ಸರ್ಕಾರ ತಂತ್ರಜ್ಞಾನ ಕಂಪನಿಗಳಾದ ಗೂಗಲ್ ಮತ್ತು ವಾಟ್ಸಾಪಿಗೆ ದೂರು ಸಲ್ಲಿಸಿದೆ)

* ಮಹಿಳೆಯರ ಮೇಲೆ ಆಗುವ ಕೌಟುಂಬಿಕ ಹಿಂಸೆಯಲ್ಲಿ ಜಗತ್ತಿನಾದ್ಯಂತ ಕನಿಷ್ಠ 15 ಮಿಲಿಯನ್ ಹೆಚ್ಚುವರಿ ಕೇಸುಗಳಾಗಿವೆ. ಇವೆಲ್ಲವೂ ಕೋವಿಡ್ ಸಂಬಂಧಿತ ಲಾಕ್‍ಡೌನ್ ಸಮಯದಲ್ಲಿ ರಿಜಿಸ್ಟರ್ ಆದಂಥವು.

* ಲಾಕ್‍ಡೌನ್ ಶುರುವಾದ ಕೆಲವೇ ದಿನಗಳಲ್ಲಿ ಭಾರತದ ಪೋಲಿಸ್ ಸ್ಟೇಷನ್ನುಗಳಲ್ಲಿ ಮತ್ತು ಸಹಾಯವಾಣಿಗಳ ಮೂಲಕ ದಾಖಲಾದ ದೂರುಗಳ ಸಂಖ್ಯೆ ಸಾವಿರ ದಾಟಿದೆ. ಲಾಕ್‍ಡೌನ್ ತೆರವಾಗುವ ಹೊತ್ತಿಗೆ ಈ ಸಂಖ್ಯೆ ಕನಿಷ್ಠ ನಾಲ್ಕು ಪಟ್ಟು ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ.

ಇದಕ್ಕೆ ಕಾರಣಗಳು ಹಲವಾರು. ಮನೆಯಲ್ಲೇ ಬಂಧಿಯಾಗಬೇಕಾದ ಸಂದರ್ಭದಲ್ಲಿ, ಕಾನೂನು ವ್ಯವಸ್ಥೆಯಲ್ಲಿ ಇರುವ ಏಜೆನ್ಸಿಗಳು `ಪೋಲಿಸ್, ಸಹಾಯವಾಣಿ, ವಕೀಲರು, ಕೋರ್ಟು ಇತ್ಯಾದಿ’ ಎಲ್ಲವೂ ದೇಶದ ಜನರನ್ನು ಮನೆಯ ಒಳಗೆ ಇರಿಸಲು ಹರಸಾಹಸ ಪಡುತ್ತಿವೆ. ಇದರ ಪರಿಣಾಮವಾಗಿ ಬೇರೆ ನಮೂನೆಯ ಸಮಸ್ಯೆಗಳಿಗೆ ಗಮನ ಹರಿಸುವುದು ಸದ್ಯದ ಅವಶ್ಯಕತೆ ಅಲ್ಲ.

ಊರಿಂದ ಊರಿಗೆ ಪ್ರಯಾಣ ಸಾಧ್ಯವೇ ಇಲ್ಲದಿರುವುದರಿಂದ ಹಿಂಸೆ ಉಂಟಾದ ಸಮಯದಲ್ಲಿ ಯಾರೊಬ್ಬರ ಸಹಾಯಕ್ಕೆ ಇನ್ನೊಬ್ಬರು ಬರಲಾಗದಂತಹ ವಾತಾವರಣ ಇದೆ.

ಈಗ ನಾವು ಎದುರಿಸುತ್ತಿರುವುದು ಒಂದು ಭಯಾನಕ ಮತ್ತು ಅಪರೂಪದ ಘಟಿತ. ಇದು ನಮಗೆ ಈ ಮಟ್ಟದಲ್ಲಿ ಹಿಂದೆಂದೂ ಬೆದರಿಸಿರಲಿಲ್ಲ. ಎಲ್ಲರೂ ಮನೆಯಲ್ಲಿ ದಿನಗಟ್ಟಲೇ ಇರಬೇಕಾಗಿ ಬಂದಾಗ ಎಂತಹ ಅನ್ಯೋನ್ಯ ಪರಿವಾರ ಎಂದುಕೊಂಡರೂ ಒಬ್ಬರಿಗೊಬ್ಬರು ತಿಕ್ಕಾಟ ಆಗಿಬಿಡುವುದು ಅತ್ಯಂತ ಸಹಜವಾದ ವಿಷಯ. ಇದನ್ನು ತಿಳಿಹೇಳಲು ನಮ್ಮಲ್ಲಿ ಮಾನಸಿಕ ತಜ್ಞರು ಸನ್ನದ್ಧರಿಲ್ಲ.…ಒಂದು ಪಕ್ಷ ಕೆಲವು ಊರುಗಳಲ್ಲಿ ಇದ್ದರೂ ಅವರ ಹತ್ತಿರ ಯಾವ ರೀತಿಯಲ್ಲಿ ತಮ್ಮ ಸಮಸ್ಯೆಯನ್ನು ವೈಯಕ್ತಿಕವಾಗಿಸದಂತೆ ಹೇಳಿಕೊಳ್ಳಬಹುದು ಎನ್ನುವ ತಯಾರಿ ಬಹುತೇಕ ಜನಕ್ಕೆ ಇಲ್ಲ.

ಯಾಕೆಂದರೆ ಎಲ್ಲರೂ ಹೊರಗಿನ ಸೂಕ್ಷ್ಮಾಣುಜೀವಿಯನ್ನು ಸೋಲಿಸುವಲ್ಲಿ ನಿರತರಾಗಿದ್ದೇವೆಯೇ ಹೊರತು ಮನೆಯೊಳಗಿನ ಸೂಕ್ಷ್ಮ ವಾತಾವರಣವನ್ನು ನಿಭಾಯಿಸುವ ತಯಾರಿ ಮಾಡಿಕೊಂಡೇ ಇಲ್ಲ. ಇದು ಮುಖ್ಯ ಎಂದು ಸರ್ಕಾರಕ್ಕೂ ಅನ್ನಿಸದೇ ಹೋಗಿರಬೇಕು.

ಮದ್ಯದಂಗಡಿಗಳು ಲಾಕ್‍ಡೌನ್ ಸಮಯದಲ್ಲಿ ದಿಢೀರನೆ ಮುಚ್ಚಿರುವ ಪ್ರಯುಕ್ತ ಮನೆಗಳಲ್ಲಿ ಮದ್ಯ, ಸಾರಾಯಿಯ ಮೇಲೆ ಅವಲಂಬಿತರಾಗಿರುವವರ ಗತಿ ತೀರಾ ಕಷ್ಟದಲ್ಲಿದೆ.

ಹಾಗಂತ ಸಾರಾಯಿ ಸಿಗುತ್ತಲೇ ಇಲ್ಲ ಎಂತಲೂ ಹೇಳಲಾಗದು. ಲಾಕ್‍ಡೌನ್ ಆದ ಮೊದಲ ದಿನಗಳನ್ನು ಹೊರತುಪಡಿಸಿದರೆ ಸಾರಾಯಿ/ಮದ್ಯ ಮೊದಲಿಗಿಂತ ನಾಲ್ಕೈದು ಪಟ್ಟು ಹೆಚ್ಚು ದುಬಾರಿಯಾಗಿ ಬಡವರ ಕೈಗೆ ಸಿಗುತ್ತಿದೆ. ಸರ್ಕಾರ ಅನ್ನ, ಬೇಳೆಯ ವ್ಯವಸ್ಥೆಯನ್ನೇನೋ ಮಾಡುತ್ತಿದೆ. ಅದಕ್ಕಾಗಿ ಧನ್ಯವಾದಗಳನ್ನು ಹೇಳಿಬಿಡೋಣ. ಆದರೆ ಮದ್ಯಕ್ಕೆ ಐದು-ಹತ್ತು ಪಟ್ಟು ಹೆಚ್ಚು ಬೆಲೆ ತೆತ್ತು ತರುವಾಗ ಮನೆಯಲ್ಲಿ ಒಂದು ಬಗೆಯ ಘರ್ಷಣೆ ಆಗುವುದು ಬಹು ಸಾಮಾನ್ಯ ಸಂಗತಿ.

ದುಡಿಮೆಯೇ ಇಲ್ಲದೆ ಇರುವ ದಿನಗಳಲ್ಲಿ ಇದ್ದ ಬದ್ದ ಪುಡಿಗಾಸನ್ನು ಯಾವ ಎಗ್ಗೂ ಇಲ್ಲದೆ ಹೆಂಡಕ್ಕೆ ಸುರಿಯುವಾಗ ಹೆಂಡತಿ ಮಕ್ಕಳ ಮನಸ್ಸಿನಲ್ಲಿ ಉಂಟಾಗುವ ಆತಂಕ ಕೆಳ ಮಧ್ಯಮವರ್ಗದಲ್ಲಿ, ಶ್ರಮಿಕ ಜನಗಳಲ್ಲಿ ಜಗಳದ ಸ್ವರೂಪ ಪಡೆಯದೇ ಇದ್ದೀತೆ? ಇದರ ನೇರ ಪರಿಣಾಮವಾಗಿ ಕೌಟುಂಬಿಕ ಹಿಂಸೆಯ ಹೆಚ್ಚಳ ನೇರವಾಗಿಯೇ ಆಗುತ್ತದೆ.

ಇನ್ನು ಪೀಡೋಫೈಲ್ಸ್ ಅಥವಾ ಶಿಶುಕಾಮಿಗಳ ಸಂಗತಿಯಂತೂ ಭಯಾನಕವಾದದ್ದು. ಅವರಿಗೆ ಸಿಗುವ ಅವಕಾಶಗಳು ಅಪರಿಮಿತ. ಕೈಯ್ಯಲ್ಲಿ ಅವರ ಮಾನಸಿಕ ವಾಂಛೆಯನ್ನು ತೀರಿಸಲು ಡೇಟಾ ತುಂಬಿದ ಮೊಬೈಲ್ ಇದೆ. ಶಿಶುಕಾಮದ ಚಿತ್ರಗಳೂ ಅಂತರ್ಜಾಲದಲ್ಲಿ ಹೇರಳವಾಗಿವೆ. ಅವುಗಳನ್ನು ಹೆಕ್ಕಿ ಕೊಡಲು ಗೂಗಲ್‍ನಂತಹ ಸರ್ಚ್ ಎಂಜಿನುಗಳಿವೆ. ಮತ್ತೆ ಇದನ್ನೆಲ್ಲಾ ಅನುಭವಕ್ಕೆ ಇಳಿಸಲು ಮನೆಯಲ್ಲಿ ಮಕ್ಕಳಿದ್ದಾರೆ. ಅವರೀಗ ಅಸಹಾಯಕರು. ಯಾರ ಹತ್ತಿರವೂ ಸಹಾಯಕ್ಕೆ ಅಥವಾ ಬೆಂಬಲಕ್ಕೆ ಹೋಗಲಾರರು. ಹೋದರೂ ಅವರಿಗೆ ಸಹಾಯ ಸಿಗುವ ಸಂಭವವೇ ಇಲ್ಲ, ಯಾಕೆಂದರೆ ಎಲ್ಲರ ಮನಸ್ಸಿನಲ್ಲಿ ಈಗ ಕೋವಿಡ್ ತುಂಬಿದೆ. ಯಾವ ರಕ್ಷಣಾ ವ್ಯವಸ್ಥೆಯೂ ಈಗ ಶಿಶುಕಾಮಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ವ್ಯವಧಾನ ಹೊಂದಿಲ್ಲ. ಇದರ ಪರಿಣಾಮವಾಗಿ ಆಗಲೇ ದುರ್ಬಲವಿರುವ ಮುಗ್ಧ “ಬಲಿ”ಗಳು ಇನ್ನಷ್ಟು ದುರ್ಬಲವಾಗಿವೆ. ಮಕ್ಕಳಿಗೀಗ ರಕ್ಷಣೆಯೇ ಇಲ್ಲ. ಯಾಕೆಂದರೆ, ಸಮಾಜದ, ಸರ್ಕಾರದ ಪ್ರಕಾರ ಮನೆ ಇಂದು ‘ಸುರಕ್ಷಿತ’ ತಾಣ.

ಇದು ಬಹುಪಾಲು ಅಥವಾ ಕೆಲವು ಪಾಲು ಜನಸಂಖ್ಯೆಗೆ ಸತ್ಯವೇ ಇರಬಹುದು. ಆದರೆ ಇದೇ ಸಮಾಜಕ್ಕೆ, ದೇಶಕ್ಕೆ ಸೇರಿದ ಜನಸಂಖ್ಯೆಯ ಘಟಕ ಇದು. ಇದರ ಸಂಖ್ಯೆ ಕಡಿಮೆಯೋ ಜಾಸ್ತಿಯೋ ಹೇಳಲಾಗದು. ಆದರೆ ಇಲ್ಲಿ ಇರುವ ಮನಸುಗಳು, ವ್ಯಕ್ತಿಗಳು, ಮುಂದೂ ಇದೇ ಸಮಾಜದ ಭಾಗವಾಗಿ ಮುಂದುವರೆಯುತ್ತಾರೆ. ಚಿಕ್ಕಂದಿನ ಆಘಾತ, ಅನುಭವಿಸಿದ ಹಿಂಸೆ ಮುಂದೆ ಇನ್ಯಾವುದೋ ರೂಪ ತಾಳಿ ಅವರ ಮುಂದಿನ ಪೀಳಿಗೆಗೆ ಮಾರಕವಾಗಲಾರದೇ?

ವಿಷವನ್ನೇ ಬಿತ್ತಿ ವಿಷವನ್ನೇ ಬೆಳೆಯುವ ಈ ವ್ಯವಸ್ಥೆಯೊಳಗೆ ಹೊಸ ಭರವಸೆಯ ಬೆಳಕು ಹಿಂಸೆಯ ಮಧ್ಯದಿಂದಲೇ ಆರಂಭವಾದರೆ ಅದರ ಪರ್ಯವಸಾನ ಹೇಗೆ ಆಗಬಹುದು ಎನ್ನುವುದು ಎಂಥವರೂ ಯೋಚಿಸಬಹುದಾದ ಮತ್ತು ಯೋಚಿಸಲೇಬೇಕಾದ ವಿಚಾರ.

ಕೋವಿಡ್ ಲಾಕ್ಡೌನ್ ಮುಗಿದ ನಂತರ ಈ ವೈರಸ್ಸಿನ ಹಿಡಿತದಿಂದ ಮನುಷ್ಯಕುಲವನ್ನು ರಕ್ಷಿಸುವುದು ಹೇಗೆ ಎಂದು ಸರ್ಕಾರಗಳು ಯೋಚಿಸುವಾಗ ಸರ್ಕಾರಗಳು ಕೌಟುಂಬಿಕ ಹಿಂಸೆಯ ಬಗ್ಗೆ ದಾಖಲಾದ ದೂರುಗಳನ್ನೂ ಅತ್ಯಂತ ಕಾಳಜಿಯಿಂದ ನೋಡಬೇಕಾಗುತ್ತದೆ.

ಆರ್ಥಿಕ ಮತ್ತು ಸಾಮಾಜಿಕ ಸಬಲತೆ ಇಲ್ಲದೆ ಇರುವ ಸಂದರ್ಭದಲ್ಲಿ ಮಧ್ಯಮವರ್ಗದಿಂದ ಹಿಡಿದು ಕೆಳವರ್ಗದವರೆಗೂ ಮಹಿಳೆಯ ಮತ್ತು ಮಕ್ಕಳ ಸುರಕ್ಷೆಯ ಜವಾಬ್ದಾರಿಯನ್ನು ವ್ಯವಸ್ಥೆ ಮತ್ತು ಸರ್ಕಾರ ಹೊರದೇ ಹೋದರೆ, ದೇಹಕ್ಕೆ ಅಂಟುವ ವೈರಸ್ಸೇನೋ ಕೊನೆಯಾದೀತು. ಅದು ಹೋಗುವಾಗ ಸಮಾಜವನ್ನು ಮತ್ತಷ್ಟು ರೋಗಗ್ರಸ್ತ ಮಾಡಿ ಹೋಗುವುದು ಖಾತ್ರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಮ್ಮ ಬೆಂಗಳೂರಿನಂತ ದೊಡ್ಡ ಊರುಗಳಲ್ಲಿ ೨೪ ತಾಸು ಮನೆಯಲ್ಲೇ ಉಳಿಯುವಂತಾ ಅಗಲವಾದ ಮನೆಗಳಿವೆಯೇ ಎಂಬುದನ್ನೂ ನೋಡಬೇಕು.

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...