Homeಮುಖಪುಟಸಿನಿಮಾ ವಿಮರ್ಶೆ: ಆದಿವಾಸಿ ಭೂ ಹಕ್ಕಿನ ನಿಜ ಕಥನ ‘ಪಡ’

ಸಿನಿಮಾ ವಿಮರ್ಶೆ: ಆದಿವಾಸಿ ಭೂ ಹಕ್ಕಿನ ನಿಜ ಕಥನ ‘ಪಡ’

- Advertisement -
- Advertisement -

ಅಲಕ್ಷಿತ ಸಮುದಾಯಗಳ ಪ್ರತಿರೋಧ ಹಾಗೂ ಭೂಮಿ ಹಕ್ಕಿನ ಕಥನಗಳನ್ನು ಕಟ್ಟುವಲ್ಲಿ ತಮಿಳು ಚಿತ್ರರಂಗ ಈಗಾಗಲೇ ಚಾಪು ಮೂಡಿಸಿದೆ. ಪ.ರಂಜಿತ್‌, ವೆಟ್ರಿಮಾರನ್‌, ಮಾರಿಸೆಲ್ವರಾಜ್‌, ಟಿ.ಜಿ.ಜ್ಞಾನವೇಲ್‌ ಥರದ ನಿರ್ದೇಶಕರು ತಮಿಳು ಚಿತ್ರರಂಗಕ್ಕೆ ಹೊಸ ಉರುಪು ತಂದಿದ್ದಾರೆಂಬುದು ನಿರ್ವೀವಾದ.

ಸೃಜನಶೀಲತೆ ಹಾಗೂ ವಿಶಿಷ್ಟ ಕಥನಗಳ ಮೂಲಕ ಗಮನ ಸೆಳೆದಿರುವ ಮಲಯಾಳಂ ಚಿತ್ರರಂಗ ಅಲಕ್ಷಿತ ಸಮುದಾಯಗಳ ಕಥೆಗಳನ್ನು ಹೇಳುವಲ್ಲಿ ಅಷ್ಟಾಗಿ ಗಮನ ಹರಿಸಿಲ್ಲ ಎಂಬ ಟೀಕೆಗಳೂ ಸಹಜವಾಗಿವೆ. 2016ರಲ್ಲಿ ರಾಜೀವ್‌ ರವಿ ನಿರ್ದೇಶನದ ‘ಕಮ್ಮಟ್ಟಿಪಾಡಂ’ ಸಿನಿಮಾ, ಭೂಮಿ ಹಕ್ಕಿನ ಕುರಿತು ಒಂದಿಷ್ಟು ಮಾತನಾಡಿತ್ತು. ಆದರೆ ಶೋಷಿತ ಸಮುದಾಯಗಳ ಕಥನದ ದೃಷ್ಟಿಯಲ್ಲಿ ತಮಿಳು ಚಿತ್ರರಂಗ ಸಾಧಿಸಿರುವ ಮೇಲುಗೈ ಎದುರು ಮಲಯಾಳಂ ಚಿತ್ರರಂಗದ ಪ್ರಯೋಗಗಳು ವಿರಳಾತೀವಿರಳ ಎನ್ನಲಾಗುತ್ತದೆ. ಹೀಗಾಗಿಯೇ ‘ಪಡ’ದಂತಹ ಮಲಯಾಳಂ ಸಿನಿಮಾ ಹೊಸ ಚರ್ಚೆಗೆ ನಾಂದಿಹಾಡಿದೆ.

“ಆದಿವಾಸಿ ಕಥನಗಳನ್ನು ಮಲಯಾಳಂ ಚಿತ್ರರಂಗ ಮಾತನಾಡಿಯೇ ಇಲ್ಲ ಎಂದು ಹೇಳಲಾಗದು. ಆದರೆ ನಿರ್ದೇಶಕನ ದೃಷ್ಟಿಕೋನವೂ ಮುಖ್ಯವಾಗುತ್ತದೆ. ಆದಿವಾಸಿಗಳನ್ನು ಯಾವ ಆಯಾಮದಲ್ಲಿ ತೋರಿಸುತ್ತಿದ್ದಾರೆ ಎಂಬುದು ಚಿತ್ರ ನಿರ್ದೇಶಕನ ಹಿನ್ನೆಲೆಯಿಂದ ನಿರ್ಧರಿತವಾಗುತ್ತವೆ” ಎಂದೂ ಮಲಯಾಳಂ ಸಿನಿಮಾ ವಿಮರ್ಶಕರು ಹೇಳುತ್ತಾರೆ.

‘ಬಾಂಬೂ ಬಾಯ್ಸ್‌’ (2002) ಎಂಬ ಸಿನಿಮಾದಲ್ಲಿ ಆದಿವಾಸಿಗಳನ್ನು ಹಾಸ್ಯಾಸ್ಪದವಾಗಿ ತೋರಿಸಲಾಗಿದೆ. ಟಾಯ್ಲೆಟ್‌ ಒಳಗೆ ಕೈ ತೊಳೆಯುವುದು, ಮನೆಯಲ್ಲಿರುವ ಪಕ್ಷಿಯನ್ನು ಕೊಂದು ತಿನ್ನುವುದು – ಹೀಗೆ ಚಿತ್ರಿಸಲಾಗಿತ್ತು. ಅಂದರೆ ನಿರ್ದೇಶಕನ ದೃಷ್ಟಿಕೋನ ಇಲ್ಲಿ ಕೆಲಸ ಮಾಡಿದೆ.

ಆದಿವಾಸಿ ಸಮುದಾಯದ ಚಿತ್ರ ನಿರ್ದೇಶಕಿ ಲೀಲಾ ಸಂತೋಷ್ ಅವರು ತಮ್ಮ ಮೊದಲ ಸಿನಿಮಾದಲ್ಲಿ ‘ಕರಿಂತಂದನ್‌’ ಎಂಬ ಟ್ರೈಬಲ್‌ ನಾಯಕನ ಕುರಿತು ಚಿತ್ರಿಸಿದ್ದರು. ಪಶ್ಚಿಮ ಘಟ್ಟಕ್ಕೆ ದಾರಿಯನ್ನು ತೋರಿಸಿದ ಮಹಾನ್ ವ್ಯಕ್ತಿ ಕರಿಂತಂದನ್‌ ಎಂಬುದನ್ನು ಲೀಲಾ ಕಟ್ಟಿಕೊಟ್ಟಿದ್ದರು. ಆದಿವಾಸಿ ಕಥನಗಳನ್ನು ಆದಿವಾಸಿಗಳ ದೃಷ್ಟಿಕೋನದಲ್ಲಿ ಹೇಳಬೇಕೆಂದು ಪ್ರತಿಪಾದಿಸುತ್ತಾರೆ ಲೀಲಾ ಸಂತೋಷ್. ಸಮುದಾಯವೊಂದರ ಕಥೆಯನ್ನು ಹೇಳುವಲ್ಲಿ ನಿರ್ದೇಶಕನ ಸ್ವಅನುಭವಗಳೂ ಪ್ರಭಾವ ಬೀರುತ್ತವೆ.

ಇತ್ತೀಚೆಗೆ ನ್ಯೂಸ್‌ ಮಿನಿಟ್‌ನೊಂದಿಗೆ ಮಾತನಾಡಿದ್ದ ‘ಪಡ’ ಸಿನಿಮಾದ ನಿರ್ದೇಶಕ ಕೆ.ಎಂ.ಕಮಲ್‌, “ಮಲಯಾಳಂ ಚಿತ್ರರಂಗವು ಯಾವಾಗಲೂ ಜಾತಿಯ ಬಗ್ಗೆ ಮಾತನಾಡುವುದರಿಂದ ದೂರವಿರುತ್ತದೆ. ವರ್ಗ ವ್ಯತ್ಯಾಸಗಳು ಸಾಮಾನ್ಯವಾಗಿ ಸಿನಿಮಾ, ರಂಗಭೂಮಿ ಮತ್ತು ಸಂಗೀತದಲ್ಲಿ ಪ್ರತಿಫಲಿಸುತ್ತದೆ. ಆದರೆ ಸಮಾಜದಲ್ಲಿನ ಅಧಿಕಾರ ರಚನೆಗಳನ್ನು ವ್ಯಾಖ್ಯಾನಿಸುವ ಜಾತಿಯ ವಿಷಯಕ್ಕೆ ಬಂದರೆ, ಮಲಯಾಳಂ ಚಿತ್ರರಂಗ ಈ ವಿಷಯದಿಂದ ವಿಮುಖವಾಗಿತ್ತು” ಎಂದಿದ್ದರು.

ಮತ್ತೆ ‘ಪಡ’ ವಿಚಾರಕ್ಕೆ ಬರುವುದಾದರೆ ‘ಪ್ರಭುತ್ವ’ ಹಾಗೂ ‘ಆದಿವಾಸಿ’ ನಡುವಿನ ಸಂಘರ್ಷದ ನಿಜ ಘಟನೆ ಆಧಾರಿತ ಸಿನಿಮಾವಿದು. ದೃಷ್ಟಿಕೋನ- ಭೂಮಿ ಹೋರಾಟ. ದೀರ್ಘಕಾಲ ಅಧಿಕಾರದಲ್ಲಿರುವ ಮೇಲ್ಜಾತಿ ಪ್ರಣೀತ ಎಡ-ಬಲ ಪಕ್ಷಗಳೆರಡೂ ಆದಿವಾಸಿಗಳನ್ನು ನಿರ್ಲಕ್ಷಿಸಿದ್ದನ್ನು, ಒಕ್ಕಲೆಬ್ಬಿಸಿದ್ದನ್ನು, ನಿರ್ಗತಿಕರನ್ನಾಗಿ ಮಾಡಿ ಪುನವರ್ಸತಿಗೆ ದೂಡಿದ್ದನ್ನು ‘ಪಡ’ ಮಾತನಾಡುತ್ತದೆ.

ಮಾರ್ಚ್ 10ರಂದು ತೆರೆಕಂಡ ‘ಪಡ’ ಈಗ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲೂ ಲಭ್ಯವಿದೆ. 1996ರಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿರುವ ಈ ಸಿನಿಮಾ, ಆದಿವಾಸಿ ಭೂಮಿ ಹಕ್ಕಿನ ಕುರಿತು ದಿಟ್ಟವಾಗಿ ಮಾತನಾಡುತ್ತದೆ. ಆದಿವಾಸಿ ಭೂ ಕಾಯಿದೆ 1975ರ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕೆಂಬ ಹೋರಾಟ 1996ರಲ್ಲಿ ಇ.ಕೆ.ನಾಯನಾರ್ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌‌ (ಎಲ್‌ಡಿಎಫ್‌) ಸರ್ಕಾರದ ವಿರುದ್ಧ ನಡೆದಿತ್ತು.

ಅಕ್ಟೋಬರ್ 4, 1996ರಂದು, ಆಗಿನ ಪಾಲಕ್ಕಾಡ್ ಜಿಲ್ಲಾಧಿಕಾರಿಯಾಗಿದ್ದ ಡಬ್ಲ್ಯುಆರ್ ರೆಡ್ಡಿ ಅವರನ್ನು ನಾಲ್ವರು ಆದಿವಾಸಿ ಹಕ್ಕುಗಳ ಕಾರ್ಯಕರ್ತರು ಒತ್ತೆಯಾಳಾಗಿ ಇರಿಸಿಕೊಂಡರು. ಸಾಂವಿಧಾನಿಕ ಹೋರಾಟಕ್ಕೆ ಪ್ರಭುತ್ವ ಯಾವುದೇ ಬೆಲೆ ಕೊಡದಿದ್ದಾಗ, ನೈಜ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು ಹಿಂಸೆಯ ಮಾರ್ಗವನ್ನು ಹೋರಾಟಗಾರರು ಹಿಡಿಯುತ್ತಾರೆ.

‘ಜನರ ಕೂಗು ಕೇಳದ ಸರ್ಕಾರ ನಿಜವಾದ ಭಯೋತ್ಪಾದನೆ ಮಾಡುತ್ತಿದೆ’ ಎನ್ನುವ ಇವರು ‘ಅಯ್ಯಂಕಾಲಿ ಪಡ’ದ ಸದಸ್ಯರೆಂದು ಹೇಳಿಕೊಳ್ಳುತ್ತಾರೆ. “ಆದಿವಾಸಿಗಳ ಭೂಮಿ ಕಾಯ್ದೆ ಬಂದ ನಂತರ ಎಡ- ಬಲ ಪಕ್ಷಗಳೆರಡೂ ಆಡಳಿತ ನಡೆಸಿವೆ. ಆದಿವಾಸಿಗಳನ್ನು ಶೋಷಿಸಿವೆ. ಮಿಲಿಯನ್‌ಗಟ್ಟಲೆ ಹಣವನ್ನು ಆದಿವಾಸಿಗಳಿಗೆ ಮೀಸಲಿಡುತ್ತಿದ್ದರೂ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ” ಎನ್ನುತ್ತಾರೆ.

ಒತ್ತೆಯಾಳಾಗಿರುವ ಅಧಿಕಾರಿಗೆ ಹೇಳುತ್ತಾರೆ: “ಆದಿವಾಸಿಗಳು ನಿಜವಾದ ಒತ್ತೆಯಾಳುಗಳು. ಅವರನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ. ಅವರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಜಾಪ್ರಭುತ್ವ ಕೆಲವರಿಗೆ ಮಾತ್ರ ಮೀಸಲಾಗಿದೆ. ಇದನ್ನು ನಾವು ಹೇಳಲು ಬಯಸುತ್ತಿದ್ದೇವೆ”.

ಹೀಗೆ ಕ್ರಾಂತಿಯ ಮಾರ್ಗ ಹಿಡಿದವರ ಒತ್ತಾಯಗಳನ್ನು ಸರ್ಕಾರ ಒಪ್ಪಿತೆ? ಆದಿವಾಸಿಗಳ ಸ್ಥಿತಿ ಬದಲಾಯಿತೆ? – ಎಂಬ ಗಂಭೀರ ವಿಚಾರಗಳನ್ನು ಈ ಸಿನಿಮಾ ಚರ್ಚಿಸುತ್ತದೆ. ಆದಿವಾಸಿಗಳ ನಿತ್ಯದ ನೋವು ಹಾಗೂ ಪ್ರಭುತ್ವ ನೀಡುವ ಭೀಕರ ಪ್ರಕ್ರಿಯೆಗಳಿಗೆ ಅಂತ್ಯವಿಲ್ಲವೇ ಎಂಬ ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಡುತ್ತದೆ. “ಓ ಭೂಮಿಯೇ, ಈ ಕಾಡಿನ ಅಳಲು ಕೇಳಿದೆಯಾ? ನೀನು ನೋಡಿದೆಯಾ ಅವರು ನಗುತ್ತಿದ್ದಾರೆ” ಎಂಬ ಹಾಡಿನ ಸಾಲುಗಳು ಪ್ರಭುತ್ವವನ್ನು ಹಾಗೂ ಪಾಲಿಸಿಗಳನ್ನು ಉದ್ದೇಶಿಸುತ್ತವೆ.

ಪ್ರಕಾಶ್‌ ರಾಜ್‌, ಕುಂಚಾಕೊ ಬೋಬನ್, ವಿನಾಯಕನ್, ದಿಲೀಶ್ ಪೋತನ್ ಮತ್ತು ಜೋಜು ಜಾರ್ಜ್ ಥರದ ಪ್ರತಿಭಾವಂತ ನಟರು ಮುಖ್ಯಭೂಮಿಯಲ್ಲಿದ್ದಾರೆ. ವಿಷ್ಣು ವಿಜಯ್‌ ಅವರ ಹಿನ್ನಲೆ ಸಂಗೀತ ಇಡೀ ಸಿನಿಮಾದ ತೂಕವನ್ನು ಹೆಚ್ಚಿಸಿವೆ. ಈವರೆಗೆ ಬಂದಿರುವ ಒತ್ತೆಯಾಳು ಕಥೆಯಾಧಾರಿಸಿದ ಸಿನಿಮಾಗಳಿಗಿಂತ ‘ಪಡ’, ಆದಿವಾಸಿ ಕಥನದ ಹಿನ್ನೆಲೆಯಲ್ಲಿ ಭಿನ್ನವಾಗಿ ನಿಲ್ಲುತ್ತದೆ.


ಇದನ್ನೂ ಓದಿರಿ: ದಮನಿತರ ಭೂಮಿ ಹಕ್ಕಿನ ಕಥೆ ‘ಪಡ’: ತಮಿಳು ಚಿತ್ರರಂಗದ ಹಾದಿಯಲ್ಲಿ ‘ಮಲಯಾಳಂ’ ಸಿನಿಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...