Homeಕರ್ನಾಟಕಕರಾವಳಿ ಕಾಂಗ್ರೆಸ್‌ನಲ್ಲಿ ’ಪ್ರಮೋದ್ ಮಧ್ವರಾಜ್ ಮನಸ್ಥಿತಿ’ ದಂಡು!

ಕರಾವಳಿ ಕಾಂಗ್ರೆಸ್‌ನಲ್ಲಿ ’ಪ್ರಮೋದ್ ಮಧ್ವರಾಜ್ ಮನಸ್ಥಿತಿ’ ದಂಡು!

- Advertisement -
- Advertisement -

ಸಂಘ ಪರಿವಾರದ ’ದೂರನಿಯಂತ್ರಿತ ಆಡಳಿತ’ ದೇಶದಲ್ಲಿ ಶುರುವಾದ ಬಳಿಕ ಅಪ್ಪಟ ಸಮಯಸಾಧಕತನವೆ ರಾಜಕೀಯ ಸಿದ್ಧಾಂತ ಎಂಬಂತಾಗಿಬಿಟ್ಟಿದೆ. ಹಿಂದುತ್ವದ ಹೆಸರಲ್ಲಿ ಅವಕಾಶವಾದಿ ರಾಜಕಾರಣ ಪೋಷಿಸುತ್ತಿರುವ ಬಿಜೆಪಿ ಸೈಕಲಾಜಿಕಲ್ ವಾರ್‌ಅನ್ನು ಸದ್ದಿಲ್ಲದೆ ಶುರುಹಚ್ಚಿಕೊಂಡಂತಿದೆ. ದೇಶದಲ್ಲಿ ವಿರೋಧ ಪಕ್ಷಗಳು ಖಾಲಿಯಾಗುತ್ತಿವೆ; ಬಿಜೆಪಿ ಸೇರಿದರೆ ಅಧಿಕಾರದ ಸ್ಥಾನ-ಮಾನಪಡೆಯಬಹುದು; ಐಟಿ ರೇಡು ತಪ್ಪಿಸಿಕೊಂಡು ನಿರಾತಂಕವಾಗಿ ಮುನ್ನಡೆಯಬಹುದು; ಇಲ್ಲದಿದ್ದರೆ ಉದ್ಯೋಗ-ಉದ್ಯಮ ನಷ್ಟವಾಗಿ ಜೈಲು ಸೇರಬೇಕಾಗುತ್ತದೆ ಎಂಬಂಥ ಭಯಾನಕ ರಾಜಕೀಯ ಸಂದೇಶಗಳು ಬಿತ್ತರಗೊಳ್ಳುತ್ತಿವೆ.

ಸಂಘಪರಿವಾರದ ಹಿಂದುತ್ವ ತಂತ್ರಗಾರಿಕೆಗೆ ಪೂರಕವಾದ ಪರಿಸ್ಥಿತಿ ಕಾಂಗ್ರೆಸ್, ಜನತಾದಳ ಮತ್ತಿತರ ಪಕ್ಷದಲ್ಲಿದೆ. ವಿರೋಧ ಪಕ್ಷದಲ್ಲಿದ್ದು ಅಧಿಕಾರ, ಅಂತಸ್ತು ಅನುಭವಿಸಿದ ಮತ್ತು ಅನುಭವಿಸುತ್ತಿರುವ ಹಿಡನ್ ಹಿಂದುತ್ವ ಸಿದ್ಧಾಂತಿಗಳು ಬಿಜೆಪಿ ಬೆಳೆಯಲು ಸಹಕರಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ ಉಡುಪಿಯ ’ದೊಡ್ಡ’ ರಾಜಕಾರಣಿ ಪ್ರಮೋದ್ ಮಧ್ವರಾಜ್ ಅವಶ್ಯಕತೆ ಬಿಜೆಪಿಗಿತ್ತಾ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಸ್ವಜಾತಿ (ಮೊಗವೀರ) ಮತಗಳನ್ನೇ ಪಡೆಯಲಾಗದ ಪ್ರಮೋದ್‌ರಿಂದ ಬಿಜೆಪಿಗೆ ಪ್ರಯೋಜನ ಇಲ್ಲವೆಂಬುದು ಸಂಘ ಸೂತ್ರಧಾರರಿಗೆ ಗೊತ್ತಿಲ್ಲದ ಸಂಗತಿಯೆ? ಪ್ರಮೋದ್ ಅವರು ಸೇರಿರುವ ಮೊಗವೀರ ಸಮುದಾಯದ ಮುಕ್ಕಾಲು ಪಾಲು ಓಟುಗಳು ಬಿಜೆಪಿಗೆ ಬೀಳುತ್ತಿರುವಾಗ ಅವರನ್ನು ನಾಲ್ಕು ವರ್ಷಗಳ ಕಾಲ ಬಿಜೆಪಿಯ ಮಂತ್ರಿ-ಶಾಸಕರ ಮತ್ತು ಕರಾವಳಿಯ ಸರ್ವೋಚ್ಚ ನಾಯಕನ ಮನೆ ಬಾಗಿಲು ಕಾಯುವಂತೆ ಮಾಡಿ ಸತಾಯಿಸಿ ಪಾರ್ಟಿಗೆ ಸೇರಿಸಿಕೊಂಡ ಸಂಘದ ಉದ್ದೇಶವಾದರೂ ಏನಿರಬಹುದು?

ಇದಕ್ಕೆಲ್ಲ ಸರಳ ಉತ್ತರಗಳು ರಾಜಕೀಯ ವಲಯದಲ್ಲಿದೆ. ಕಾಂಗ್ರೆಸ್ ಹೈರಾಣಾಗುತ್ತಿದೆ; ಬಿಜೆಪಿ ಕಡೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಬಿಂಬಿಸಿ ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ತಂತ್ರಗಾರಿಕೆಯ ಭಾಗವಾಗಿ ದೀರ್ಘಕಾಲದವರೆಗೆ ಪ್ರಮೋದ್ ಬಿಜೆಪಿ ಗೇಟಿನ ಮುಂದೆ ನಿಲ್ಲುವಂತೆ ಮಾಡಲಾಗಿತ್ತಂತೆ.
ಉಡುಪಿಯಲ್ಲಿರುವ ಮತ್ತೊಂದು ಸುದ್ದಿಯ ಪ್ರಕಾರ ಪ್ರಮೋದ್ ಮಧ್ವರಾಜ್ ನಡೆಸುತ್ತಿರುವ ಕೋಟ್ಯಂತರ ರುಪಾಯಿ ವಹಿವಾಟಿನ ಫಿಶ್ ಮಿಲ್‌ನಿಂದ ಮಲ್ಪೆಯಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಆ ಫ್ಯಾಕ್ಟರಿ ಬಂದ್ ಮಾಡಿಸುವ ಬೆದರಿಕೆಗೆ ಕಂಗಾಲಾಗಿರುವ ಪ್ರಮೋದ್ ಬಿಜೆಪಿ ಸೇರಬೇಕಾಗಿ ಬಂತೆನ್ನಲಾಗಿದೆ. ಮತ್ತೊಂದು ತರ್ಕದ ಪ್ರಕಾರ, ಬಿಜೆಪಿ ಸೇರಿದರೆ ಕೇಂದ್ರ ರಕ್ಷಣಾ ಮಂತ್ರಿ, ರಾಜ್ಯದ ಮುಖ್ಯಮಂತ್ರಿ ಆಗುವ ಯೋಗ ಖುಲಾಯಿಸಲಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರಿಂದ ಪ್ರಮೋದ್ ಅತ್ತೂ ಕರೆದು ಬಿಜೆಪಿ ಸೇರ್ಪಡೆಯಾಗಿದ್ದಾರಂತೆ!

ಇದು ರಾಜಕೀಯ ಮತ್ತು ಔದ್ಯೋಗಿಕ ವಿಶ್ಲೇಷಣೆಯಾದರೆ, ಮೂಲಭೂತವಾಗಿ ಪ್ರಮೋದ್ ಸಂಘ ತತ್ವಾದರ್ಶದ ರಾಜಕಾರಣಿಯೆಂಬ ವ್ಯಾಖ್ಯಾನಗಳೂ ಬರಲಾರಂಭಿಸಿವೆ. ಸಿದ್ದರಾಮಯ್ಯ ಸರಕಾರದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಪ್ರಮೋದ್ ಬುದ್ಧಿಪೂರ್ವಕವಾಗೆ ಟಿಪ್ಪು ಜಯಂತಿಗೆ ಚಕ್ಕರ್ ಹಾಕಿದ್ದರೆಂದು ಅಂದು ಸುದ್ದಿಯಾಗಿತ್ತು. ಮಾಜಿ ಶಾಸಕನಾಗಿ ಸಂಘ ಶ್ರೇಷ್ಠರ ಮನ ಒಲಿಸುವ ಪ್ರಯತ್ನದಲ್ಲಿದ್ದ ಪ್ರಮೋದ್ ಕಾರ್ಯಕ್ರಮ ಒಂದರಲ್ಲಿ ತಾನು ಟಿಪ್ಪು ಜಯಂತಿಗೆ ಹೋಗದಂಥ ’ಸುಸಂದರ್ಭ’ ಒದಗಿಬಂದುದನ್ನು ವಿವರಿಸಿ ತನ್ನ ಅಸಹಿಷ್ಣು ರೀತಿ-ನೀತಿ ಬಹಿರಂಗ ಮಾಡಿಕೊಂಡಿದ್ದರು. ಅಷ್ಟ ಮಠದ ಕಾರ್ಯಕ್ರಮದಲ್ಲಿ- ’ಉಡುಪಿಯ ಕೃಷ್ಣ ದೇವಾಲಯವನ್ನು ಸಿದ್ದರಾಮಯ್ಯ ಸರಕಾರ ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸಿಎಂಗೆ ಫೋನ್ ಮಾಡಿ ತಡೆಯೊಡ್ಡಿದ್ದೆ’ ಎಂದು ಹೇಳಿದ್ದರು. ಅಲ್ಲಿಗೆ ಪ್ರಮೋದ್ ತಾವಿದ್ದ ಪಕ್ಷದ ಸಿದ್ಧಾಂತಕ್ಕೆ ಯಾವದೇ ನಿಷ್ಠೆ-ನಿಯತ್ತುಗಳಿಲ್ಲದೆ ಕೇವಲ ಅಧಿಕಾರ ಲಾಲಸೆಗಾಗಿ ಮಾತ್ರ ಕಾಂಗ್ರೆಸ್‌ನಲ್ಲಿದ್ದ ಸಂಘ ಪರಿವಾರ ಮನಸ್ಥಿತಿಯವರು ಎಂದು ಸ್ವಯಂ ಸಾಬೀತುಪಡಿಸಿಕೊಂಡಿದ್ದರೆನ್ನಲಾಗಿದೆ.

ಇಂಥ ಕನಿಷ್ಟ ಬದ್ಧತೆಯಿಲ್ಲದ ದೊಡ್ಡ ದಂಡೇ ಕರಾವಳಿ ಕಾಂಗ್ರೆಸ್ ಪಕ್ಷದಲ್ಲಿದೆ. ಕಾರವಾರದ ಮಾಜಿ ಶಾಸಕ-ಗಣಿ ಹಗರಣದಲ್ಲಿ ಜೈಲಿಗೆ ಹೋಗಿಬಂದಿರುವ ಸತೀಶ್ ಸೈಲ್ ಮತ್ತು ಜನತಾ ದಳದ ಮಾಜಿ ಮಂತ್ರಿ ಆನಂದ ಅಸ್ನೋಟಿಕರ್ ಬಿಜೆಪಿ ಪ್ರವೇಶಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್-ಜನತಾದಳದ ಅಭ್ಯರ್ಥಿಯಾಗಿದ್ದ ಆನಂದ ಅಸ್ನೋಟಿಕರ್ ತಮ್ಮ ಬಿಜೆಪಿ-ಸಂಘಪರಿವಾರದ ಎದುರಾಳಿ, ಶೂದ್ರ ವಿರೋಧಿ ಅನಂತಕುಮಾರ್ ಹೆಗಡೆ ಮತಾಂಧ ಮಸಲತ್ತುಗಾರನೆಂದು ನೇರಾನೇರ ಟೀಕಿಸಿದ್ದರು. ಆದರೆ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಪಕ್ಷಾಂತರ ಮಾಡಿದ ಮೊಟ್ಟಮೊದಲ ತಂಡದಲ್ಲಿದ್ದ ಆನಂದ ಅಲ್ಲಿ ಮಂತ್ರಿಯಾಗಿ, ಶಾಸಕ ಸ್ಥಾನದಿಂದಲೆ ಅನರ್ಹನಾಗಿ ಆ ಪಾರ್ಟಿಯಿಂದ ಹೊರಬಂದಿದ್ದರು. ಕಾಂಗ್ರೆಸ್ ಸೇರಲು ಆರ್.ವಿ.ದೇಶಪಾಂಡೆ ಬಿಡದಿದ್ದಾಗ ಜನತಾ ದಳಕ್ಕೆ ಹೋಗಿದ್ದರು. ಈಗ ಮತ್ತೆ ಬಿಜೆಪಿ ಸೇರಲು ಹವಣಿಸುತ್ತಿರುವ ಅಸ್ನೋಟಿಕರ್ ಬದ್ಧತೆಯೆ ಪ್ರಶ್ನಾರ್ಹವೆಂದು ಜನರು ಆಡಿಕೊಳ್ಳುತ್ತಿದ್ದಾರೆ.

ಸತೀಶ್ ಸೈಲ್

ಮಾಜಿ ಶಾಸಕ ಸತೀಶ್ ಸೈಲ್ ದೈಹಿಕವಾಗಿ ಕಾಂಗ್ರೆಸ್‌ನಲ್ಲಿದ್ದರೂ ಮಾನಸಿಕವಾಗಿ ಬಿಜೆಪಿಯಲ್ಲಿದ್ದಾರೆ. ಶಾಸಕಿ ರೂಪಾಲಿ ನಾಯ್ಕ್‌ರಿಗೆ ಟಿಕೆಟ್ ತಪ್ಪಿಸಿ ತಾನೆ ಬಿಜೆಪಿ ಶಾಸಕನಾಗುವ ಆಸೆಯಲ್ಲಿದ್ದಾರೆನ್ನಲಾಗಿದೆ. 2018ರ ಅಸೆಂಬ್ಲಿ ಚುನಾವಣಾ ಸಂದರ್ಭದಿಂದ ಗಣಿ ಲಾಬಿ ಮುಖಾಂತರ ಬಿಜೆಪಿ ಪ್ರವೇಶಿಸುವ ಎಲ್ಲ ತಂತ್ರಗಾರಿಕೆಯನ್ನೂ ಪ್ರಯೋಗಿಸುತ್ತಿದ್ದಾರೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಕೃಪಾಶೀರ್ವಾದದ ರೂಪಾಲಿ ನಾಯ್ಕ್ ಅಡ್ಡಗಾಲು ಹಾಕಿರುವುದು ಕಾರವಾರದಲ್ಲಿ ಬಹಿರಂಗ ರಹಸ್ಯ. ಬ್ರಾಹ್ಮಣರಿಗೂ ಮೀಸಲಾತಿ ಬೇಕೆನ್ನುವ ಮಂತ್ರಿ ಶಿವರಾಮ ಹೆಬ್ಬಾರ್, ಕಾಂಗ್ರೆಸ್‌ನಲ್ಲಿದ್ದಾಗ ಸಂಘ ತತ್ವ ಪರಿಪಾಲಕರಾಗಿದ್ದರು.

ಬಾಂಬೈ ಬಾಯ್ಸ್‌ಗೆ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡುವುದಿಲ್ಲ ಎನ್ನಲಾಗಿರುವ ಹಿನ್ನೆಲೆಯಲ್ಲಿ ಹೆಬ್ಬಾರ್ ಚಿತ್ತ ಕಾಂಗ್ರೆಸ್‌ನತ್ತ ಹರಿದಿದೆ ಎನ್ನಲಾಗುತ್ತಿದೆ. ಹೆಬ್ಬಾರ್ ಕಾಂಗ್ರೆಸ್‌ಗೆ ಬಂದರೆ ಬಿಜೆಪಿಗೇ ಲಾಭವೆಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಹೇಳುತ್ತಾರೆ. ಪಕ್ಷಾಂತರ ಮತ್ತು ಎಂಟಿ ಇನ್‌ಕಂಬೆನ್ಸ್‌ನಿಂದ ಜನರ ತಾತ್ಸಾರಕ್ಕೆ ತುತ್ತಾಗಿರುವ ಹೆಬ್ಬಾರ್‌ಗೆ ಆನಂದ್ ಅಸ್ನೋಟಿಕರ್ ಪರಿಸ್ಥಿತಿ ಬಂದರೆ ಅಚ್ಚರಿ ಇಲ್ಲವೆನ್ನಲಾಗುತ್ತಿದೆ. ಹಳಿಯಾಳದ ಮಾಜಿ ಎಮ್ಮೆಲ್ಸಿ ಶ್ರೀಕಾಂತ ಘೋಟನೇಕರ್ ಬಿಜೆಪಿ ಮೇಲೆ ಕಣ್ಣಿಟ್ಟು ’ಶಿವಾಜಿ ಮಹಾರಾಜ್ ಕಿ ಜೈ’ ಎನ್ನುತ್ತಿದ್ದಾರೆ. ಮರಾಠರು ಹೆಚ್ಚಿರುವ ಹಳಿಯಾಳದಲ್ಲಿ ಕೇಸರಿ ಹವಾ ಬೀಸುತ್ತಿರುವುದನ್ನು ಅರಿತಿರುವ ಘೋಟನೇಕರ್ ಪರೋಕ್ಷವಾಗಿ ಕೇಸರಿ ಅಭಿಯಾನಕ್ಕೆ ಅನುವು ಮಾಡಿ ಕೊಡುತ್ತ ಮುಂದೊಂದು ದಿನ ಅದರ ಲಾಭ ತನಗೆ ಅಥವಾ ತನ್ನ ಮಗನಿಗೆ ದಕ್ಕುವ ದೂ(ದು)ರಾಲೋಚನೆ ನಡೆಸಿದ್ದಾರೆಂಬ ಚರ್ಚೆಗಳು ನಡೆದಿದೆ.

ಒಂದು ಗಮನಾರ್ಹ ಅಂಶವೆಂದರೆ ಬಿಜೆಪಿಗೆ ಹೋಗುವವರು ರಸಭರಿತ ಕಬ್ಬಾಗಿ ಹೋಗುತ್ತಾರೆ; ರಸ ಹಿಂಡಿದ ಜಲ್ಲೆಯಾಗಿ ಹೊರಬರುತ್ತಿದ್ದಾರೆ. ಬಿಜೆಪಿಯಲ್ಲಿ ಇರುವಷ್ಟು ದಿನ ಸಂಘ ಸೂತ್ರಧಾರರ ಆಜ್ಞಾನುಧಾರಿಗಳಾಗಿ ತಮ್ಮದೇ ಅಸ್ತಿತ್ವಕ್ಕೆ ಮುಳುವಾಗುವಷ್ಟು ಹಿಂದುತ್ವ ಮತ್ತು ಮತೋನ್ಮತ್ತ ಮಸಲತ್ತು ಮಾಡುತ್ತ ಭಸ್ಮಾಸುರರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸಮಾಜದ ನೆಮ್ಮದಿಗೂ ಭಂಗ ತರುತ್ತಿರುವುದು ದುರಂತವೆಂದು ಪ್ರಜ್ಞಾವಂತರು ಕಳವಳ ಪಡುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...